13 ಅಕ್ಟೋಬರ್ 2010

ಸಮಾಜ ಘಾತುಕರನ್ನು ಹತ್ತಿಕ್ಕುವ ಮಾರ್ಗವಿಲ್ಲವೇ!!!!!!!!

ಕಳೆದ ಒಂದು ವಾರದಿಂದ ನಾನು ಹೋಗಿ ಬಂದು ಟಿವಿ ನೋಡುವುದನ್ನೇ ಹೆಚ್ಚು ಮಾಡುತ್ತಿದ್ದೇನೆ. ಇದಕ್ಕೆ ಕಾರಣ ನಾವೆಲ್ಲರೂ ತಿಳಿದಂತೆ ರಾಜ್ಯ ರಾಜಕಾರಣ. ಅಂತೂ ಇಂತೂ ಗರ್ವದಿಂದ ಮೆರೆಯುತಿದ್ದ, ರೆಡ್ಡಿ, ಯಡ್ಯೂರಪ್ಪ ಅವರ ಸರ್ಕಾರ ಅಳಿವಿನ ಅಂಚಿಗೆ ಬಂದಿದೆ. ಅದರ ಜೊತೆಯಲ್ಲಿಯೇ ನಮ್ಮೆಲ್ಲ ಜನಪ್ರತಿನಿಧಿಗಳ ಸಂಪೂರ್ಣ ಬಣ್ಣ ಬಯಲಾಗಿದೆ. ಯಾರೂ ಒಪ್ಪಿದರೂ ಬಿಟ್ಟರೂ ನನ್ನ ಕೆಲವು ಅಭಿಪ್ರಾಯಗಳನ್ನು ಈ ಸಮಯದಲ್ಲಿ ನಿಮ್ಮ ಮುಂದಿಡುತ್ತೇನೆ. ರಾಜಕಾರಣಿಗಳೆಲ್ಲ, ಭ್ರಷ್ಟರಾಗಿದ್ದಾರೆ, ಅಯೋಗ್ಯರಾಗಿದ್ದಾರೆ ಅನುಮಾನವೇ ಬೇಡ. ಆದರೇ ಕಡಿಮೆ ಮೋಸಗಾರರನ್ನು ನಾವು ಒಪ್ಪಿಕೊಳ್ಳುವುದು ಇಂದಿನ ಅನಿವಾರ್ಯತೆ. ಆಗಿದ್ದರೇ, ಕಡಿಮೆ ವಂಚಕರಾರು, ನನಗೆ ಬಿಜೆಪಿ, ಕಾಂಗ್ರೇಸ್ ಗಿಂತ ಕಡಿಮೆ ವಂಚಕರೆನಿಸಿವುದು ಜೆಡಿಎಸ್.
ಇದಕ್ಕೊಂದು ನಿದರ್ಶನ ಇಂದು ನಡೆದ ಬಹುಮತ ಸಾಬೀತು ಮಾಡುವಾಗ ನಡೆದ ಘಟನೆಗಳು. ವಿಧಾನಸೌಧವೆನ್ನುವುದು ರಾಜ್ಯದ ಜನತೆಯ ಪ್ರಭತ್ವದ ದೇಗುಲವೆನ್ನುವುದನ್ನು ಲೆಕ್ಕಿಸಿ, ರೈಲ್ವೇ ಸ್ಟೇಷನ್ ಸಿನೆಮಾ ಥೀಯೆಟರ್ ನಂತೆ ನಡೆಸಿಕೊಂಡರು. ಬಿಜೆಪಿ ಸರ್ಕಾರ ಬಂದ ದಿನದಿಂದ ಇಂದಿನ ತನಕವೂ ಹಲವಾರು ಹಗರಣಗಳು ಲಜ್ಜೆಗೆಟ್ಟು ಅತೀವೇಗದಿಂದ ಪಕ್ಷಾಂತರವನ್ನು ಮಾಡಿಸಿ ಆಪರೇಷನ್ ಕಮಲದ ಹೆಸರಿನಲ್ಲಿ ಬೇರೆ ಪಕ್ಷದವರನ್ನು ತಮ್ಮ ತೆಕ್ಕೆಗೆ ಎಳೆದುಕೊಂಡಿದ್ದು, ಹಣ ಮತ್ತು ಅಧಿಕಾರದ ಆಮೀಷದಿಂದಲೇ ಎನ್ನುವುದನ್ನು ನಾವು ಒಪ್ಪಲೇಬೇಕು. ಹತ್ತಾರು ವರ್ಷದಿಂದ ಸಮಾಜವಾದದಲ್ಲಿ ನಂಬಿಕೆ ಇಟ್ಟು, ಹೆಗ್ಡೆಯವರ ಕಾಲದಲ್ಲಿಯೇ, ಸಭಾಧ್ಯಕ್ಷರಾಗಿದ್ದ ಡಿ.ಬಿ.ಚಂದ್ರೇಗೌಡರೇ ಬಿಜೆಪಿಗೆ ಹೋದರೆಂದರೇ ಇದೆಂಥಹ ವಿಪರ್ಯಾಸ ನೋಡಿ. ಹಾಲಿನ ಮಂಡಳಿಯ ಹಿಂದೂ ಮುಂದು ಗೊತ್ತಿಲ್ಲದ ಸೋಮಶೇಖರ್ ರೆಡ್ಡಿ ಅಧ್ಯಕ್ಷರಾದರೆಂದರೇ ಯಡ್ಯೂರಪ್ಪ ಅವರಿಗೆ ರೈತರ ಬಗೆಗಿನ ಕಾಳಜಿ ತಿಳಿಯುತ್ತದೆ. ಕಾಂಗ್ರೇಸ್ ನಿಂದ ಗೆದ್ದು, ಗದ್ದುಗೆ ಹಿಡಿದಿದ್ದ ಜಗ್ಗೇಶ್ ಪಕ್ಷ ಬಿಟ್ಟು ಬಿಜೆಪಿಗೆ ಹಾರಿದ್ದು, ಜಿಟಿ ದೇವೆಗೌಡರಂಥವರೂ ಬಿಜೆಪಿ ಜೊತೆಗೆ ಹೋಗಿದ್ದು ರಾಜಕಾರಣದ ವ್ಯಭಿಚಾರಕ್ಕೆ ಹಿಡಿದ ಕನ್ನಡಿ.
ಜನರು ಹಿಂದಿನ ಸರ್ಕಾರಕ್ಕೆ ಬೇಸತ್ತು ಬಿಜೆಪಿಗೆ ಬಹುಮತ ನೀಡಿದ್ದರು, ಅದನ್ನು ಉಪಯೋಗಿಸಿಕೊಂಡು ಅಧಿಕಾರ ನಡೆಸಿ ಎಂದರೇ, ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರವನ್ನು ಹೆಚ್ಚಿಸಿದ್ದು ಅದೆಷ್ಟು ಸಮಂಜಸ. ಇಂದು ಬೆಳ್ಳಿಗ್ಗೆ ಬಹುಮತ ಸಾಬೀತುಪಡಿಸುವಾಗ ನಡೆದ ಘಟನೆಯಂತೂ ಎಂಥಹ ನಾಗರೀಕನೂ ನಾಚಲೇಬೇಕಿತ್ತು. ಬಿಜೆಪಿ ತೊಂಬತ್ತೈದರ ಸಮಯದಲ್ಲಿ ನಾನು ಎಂಟನೇಯ ತರಗತಿಯಲ್ಲಿರುವಾಗ ವಿರಾಜಪೇಟೆಗೆ ಹೋಗಿದ್ದೆ. ಅಲ್ಲಿನ ಜನತೆಗೆ ಪಕ್ಷದ ಬಗ್ಗೆ ಇದ್ದ ಶ್ರದ್ದೆ ಆಕಾಕ್ಷೆಗಳನ್ನು ಕಂಡು ನನಗೂ ಇಷ್ಟವಾಗಿತ್ತು. ರಾಷ್ಟಪ್ರೇಮ, ದೇಶ ಭಾಷೆ ನಮ್ಮ ಸಂಸ್ಕೃತಿಗೆ ಅಂದು ಪಕ್ಷವಿಟ್ಟುಕೊಂಡಿದ್ದ ಅಭಿಮಾನ ನನ್ನನ್ನು ಅದರ ಅಭಿಮಾನಿಯಾಗಿ, ಕೆಲವು ದಿನಗಳು ಆರ್ ಎಸ್ ಎಸ್, ಬಿಜೆಪಿ, ಭಜರಂಗದಳದ ಬಗೆಗೆ ಒಲವೊನ್ನು ತುಂಬಿತ್ತು. ಇದು, ನನ್ನ ಬಿಎಸ್ಸಿ ದಿನಗಳವರೆಗೂ ಇತ್ತು, ನಾನು ಮೈಸೂರಿನಲ್ಲಿದ್ದಾಗ ಹಲವಾರು ಭಜರಂಗದಳದ ಸಮಾರಂಭಗಳಲ್ಲಿ, ಭಾಗವಹಿಸುತ್ತಿದ್ದೆ. ಪ್ರಮೋದ್ ಮುತಾಲಿಕ್, ಪ್ರಮೋದ್ ಭಾಯ್ ತೊಗಾಡಿಯರವರ ಭಾಷಣವನ್ನು ಕೇಳಿ ರೋಮಾಂಚನಗೊಂಡಿದ್ದೆ. ವಾಜಪೇಯಿಯರು ಪ್ರಧಾನಿಯಾಗಿ ಕೇವಲ ಹದಿಮೂರು ದಿನಕ್ಕೆ ಅಧಿಕಾರ ಕಳೆದುಕೊಂಡ ದಿನ, ಅವರು ಮಾಡಿದ ಭಾಷಣವನ್ನು ಕೇಳಿ, ಕಾಂಗ್ರೇಸ್ ಮತ್ತು ಇತರ ಪಕ್ಷಗಳ ಬಗ್ಗೆ ರೋಸಿಹೋಗಿದ್ದೆ. ನನ್ನ ನೇರ ಮಾತಿನಲ್ಲಿ ಹೇಳಬೇಕೆಂದರೇ, ನನಗೆ ಬಿಜೆಪಿಯೆಂಬುದು ಭಾರತವನ್ನು ಬಹಳ ಮುಂದಕ್ಕೆ ಕರೆದೊಯ್ಯುವ ಏಕೈಕ ಪಕ್ಷವೆನಿಸಿತ್ತು. ಕಾರ್ಗಿಲ್ ಯುದ್ದದಲ್ಲಿ, ಭಾರತ ಜಯಗಳಿಸಿದ್ದನ್ನು ಕಂಡು, ಅದಕ್ಕೊಸ್ಕರ ಬೀದಿ ಬೀದಿ ಸುತ್ತಿ ಚಂದಾ ಎತ್ತಲು ಸೇರಿದ್ದೆನು. ಇಂಥಹ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದಾಗ ಅದು, ಬಹುಮತವಿಲ್ಲದೇ, ಸಮಾನ ಮನಸ್ಕರನ್ನು ಸೇರಿಸಿಕೊಂಡು (ಎನ್.ಡಿ.ಎ) ಹೆಸರಿನಲ್ಲಿ ಅಧಿಕಾರಕ್ಕೆ ಬಂದಾಗ ಅಯ್ಯೊ ಪಾಪ ಬಹುಮತವಿದ್ದಿದ್ದರೇ ನಿಜಕ್ಕೂ ಭಾರತ ಅಮೇರಿಕಾಕ್ಕೂ ಸವಾಲೆಸೆಯುವ ಮಟ್ಟಕ್ಕೆ ಬೆಳೆಯುತ್ತಿತ್ತು ಎನಿಸಿತ್ತಾದರೂ, ಅದು ಏಕೈಕ ವ್ಯಕ್ತಿಯಾದ ವಾಜಪೇಯಿಯವರ ಶ್ರಮದಿಂದ ನಿಂತಿತ್ತು ಎಂಬುದನ್ನು ಕೆಲವೇ ದಿನಗಳಲ್ಲಿ ಮನವರಿಕೆಯಾಯಿತು.
ಹಿಂದಿನಿಂದಲೂ, ಪಕ್ಷ ಕಟ್ಟಿದವರನ್ನು ತುಳಿದು, ಬರಿ ಮಾತಿನಲ್ಲಿ ಬೆಳಕು ಹರಿಸುವಂತಹ ನಾಯಕರು ಮುಂದೆ ಬರತೊಡಗಿದರು. ಪಕ್ಷದ ಶಿಸ್ತನ್ನು ಅಕ್ಷರಸಃ ಪಾಲಿಸುತ್ತಿದ್ದ, ಕಲ್ಯಾಣ್ ಸಿಂಗ್, ಮುರುಳಿ ಮನೋಹರ್ ಜೋಷಿ, ಅಷ್ಟೇಲ್ಲಾ ಏಕೆ, ಉಮಾಭಾರತಿಯಂತವರನ್ನೇ ಮೂಲೆಗುಂಪಾಗಿಸಿ, ಮೊದಲ ಸಾಲಿನಲ್ಲಿ, ಸುಷ್ಮಾ ಸ್ವರಾಜ್, ಅನಂತಕುಮಾರ್, ವೆಂಕಯ್ಯನಾಯ್ಡು, ರಾಜನಾಥ್ ಸಿಂಗ್ ರು ಬಂದಾಗ ಬಿಜೆಪಿ ಸಂಪೂರ್ಣ ಹಳ್ಳಕ್ಕೆ ಬಿದ್ದು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು. ವಾಜಪೇಯಿಯೊಬ್ಬರನ್ನು ಬಿಟ್ಟರೇ ಮಿಕ್ಕಾವ ಬಿಜೆಪಿಯ ನಾಯಕನೂ ಭಾರತೀಯರಂತೆ ವರ್ತಿಸಿಲ್ಲ. ಅದೇನೆ, ಇದ್ದರೂ, ಬಿಜೆಪಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಇದ್ದಿದ್ದರಲ್ಲಿಯೇ ಹೆಚ್ಚು ಮತಗಳಿಸಿ ಆಯ್ಕೆಯಾದಾಗ ಕಾಂಗ್ರೇಸ್ ಮತ್ತು ಜೆಡಿಎಸ್ ಸರ್ಕಾರ ರಚಿಸಿದರು. ಕರ್ನಾಟಕ ಅದೆಂಥಹ ಪರಿಸ್ತಿತಿಯಲ್ಲಿತ್ತೆಂದರೇ ಯಾರೊ ಒಬ್ಬರೂ ಹೆಸರಿಗೆ ಮುಖ್ಯಮಂತ್ರಿ ಸಹಿ ಮಾಡಿದರೇ ಸಾಕು, ಜನರ ಜೀವನ ಹಾಗೋ ಹೀಗೋ ನಡೆಯುತ್ತದೆನ್ನುತ್ತಿತ್ತು. ಅದರಂತೆಯೇ, ಧರ್ಮಸಿಂಗ್ ಮುಖ್ಯಮಂತ್ರಿಯಾದರು. ಹೇಗೋ ನಡೆಯುತ್ತಿದ್ದ ಸರ್ಕಾರವನ್ನು ಮೊದಲು ಉರುಳಿಸಿ ಪರ್ಯಾಯ ಸರ್ಕಾರ ಜೊಡಿಸಲು ಯತ್ನಿಸಿದ್ದು, ಇಂದಿನ ಈ ಯಡ್ಯೂರಪ್ಪನೇ ಎಂಬುದು ಮರೆಯುವಂತಿಲ್ಲ. ಕುಮಾರಸ್ವಾಮಿಯನ್ನು ಕುರ್ಚಿಯಲ್ಲಿ ಕುಳ್ಳಿರಿಸಿ, ಸಚಿವರಾಗಿ, ಉಪಮುಖ್ಯಮಂತ್ರಿಯೂ ಆಗಿ ಮೆರೆದ ಬಿಜೆಪಿ ಶಾಸಕರಿಗೆ ಅಧಿಕಾರದ ರುಚಿ ಚೆನ್ನಾಗಿಯೇ ಹತ್ತಿತ್ತು. ಆ ಸಮಯದಲ್ಲಿ ಕುಮಾರಸ್ವಾಮಿ ಕಡಿಮೆ ಅವಧಿಯಲ್ಲಿ, ಗ್ರಾಮ ವಾಸ್ತವ್ಯದಂತಹ ಹಲವಾರು ಕಾರ್ಯಕ್ರಗಳೊಂದಿಗೆ ಜನರಿಗೆ ಬಹಳ ಹತ್ತಿರವಾದರು. ಗ್ರಾಮವಾಸ್ತವ್ಯ, ಅಥವಾ ಕುಮಾರಸ್ವಾಮಿಯವರ ಭರವಸೆಗಳು ಈಡೇರಿದ್ದಾವೆಂಬುದಕ್ಕೆ ಪುರಾವೆಯೂ ಇಲ್ಲ. ಇಪ್ಪತ್ತು ತಿಂಗಳು ತಳ್ಳಿದ ಸರ್ಕಾರವೂ, ಬಿಜೆಪಿಗೆ ಅಧಿಕಾರ ವಹಿಸಿಕೊಡುವ ಸಮಯಕ್ಕೆ, ದೇವೇಗೌಡರು ಕ್ಯಾತೆ ತೆಗೆದು, ಯಡ್ಯೂರಪ್ಪನವರ ಕಣ್ಣಲ್ಲಿ ರಕ್ತ ಸುರಿಸಿದರು.
ಮೊದಲೇ ಅಧಿಕಾರದ ರುಚಿ ಹತ್ತಿಸಿಕೊಂಡ ಬಿಜೆಪಿ, ಇನ್ನಿಲ್ಲದ ಗಿಮಿಕ್, ಹಣ, ಎಮೋಷನ್ಸ್ ಎಲ್ಲವನ್ನೂ ಸೇರಿಸಿ, ವಚನ ಭ್ರಷ್ಟರೆಂದು, ಮತ್ತು ಇದೊಂದು ಒಕ್ಕಲಿಗ ಮತ್ತು ಲಿಂಗಾಯತ ವರ್ಗದ ನಡುವೆ ನಡೆದ ಚುನಾವಣೆಯಂತೆಯೇ ನಡೆಯಿತು. ಕನ್ನಡಿಗರ ಮೇಲೆ ದೇವರಿಗೆ ಅಲ್ಪ ಸ್ವಲ್ಪ ಕರುಣೆಯಿದ್ದಿದ್ದರಿಂದ, ಬಿಜೆಪಿಗೆ ಎರಡು ಸಂಖ್ಯೆ ಕಡಿಮೆಯಾಗಿ ಆಯ್ಕೆಯಾಗಿದ್ದರು. ಬಿಜೆಪಿಯ ಅದೃಷ್ಟಕ್ಕೆ ಆರು ಜನ ಸ್ವತಂತ್ರ ಅಭ್ಯರ್ಥಿಗಳು ಬೆಂಬಲ ನೀಡಿದರು. ಬಿಜೆಪಿ ಅದೆಂಥಹ ದುರಾಸೆಯ ಪಕ್ಷವೆಂದರೇ, ಅಮಾಯಕರಂತಿದ್ದ, ಸ್ವತಂತ್ರ ಅಭ್ಯರ್ಥಿಗಳನ್ನು ಉಪಯೋಗಿಸಿಕೊಂಡು ತಳಗಟ್ಟಿಮಾಡಿಸಿಕೊಂಡರೂ ಸಮಾಧಾನದಿಂದರಿಲಿಲ್ಲ. ಆಪರೇಷನ್ ಕಮಲದ ಹೆಸರಿನಲ್ಲಿ, ಬೇರೆ ಪಕ್ಷದಿಂದ ಆಯ್ಕೆಯಾಗಿದ್ದ ಶಾಸಕರನ್ನು ರಾಜಿನಾಮೆ ಕೊಡಿಸಿ ಮರುಚುನಾವಣೆ ನಡೆಸಿತು. ಪ್ರತಿ ಚುನಾವಣೆಗೂ ಬಿಜೆಪಿ ಮನಬಂದಂತೆ ಖರ್ಚುಮಾಡಿತು. ಪ್ರತಿಯೊಂದು ಚುನಾವಣೆಯ ವೆಚ್ಚ ಮತದಾರನ ಬೊಕ್ಕಸದ್ದು ಎನ್ನುವುದನ್ನು ನಾವು ಮರೆಯಬಾರದು. ದೇಶದ ಹಿತದ ಬಗ್ಗೆ ಬೊಬ್ಬೆ ಹೊಡೆಯುವ ಯಡ್ಯೂರಪ್ಪ ಇರುವ ಸರ್ಕಾರವನ್ನು ನಡೆಸಿಕೊಂಡು ಹೋಗುವುದನ್ನು ಬಿಟ್ಟು ಆಪರೇಷನ್ ಕಮಲದ ಹೆಸರಿನಲ್ಲಿ, ಹುಚ್ಚು ಮುಂಡೆ ಮದುವೆಯಲ್ಲಿ ಉಂಡೋಣೆ ಜಾಣವೆನ್ನುವಂತೆ ನಡೆದುಕೊಂಡಿತು. ಇವರ ಸರ್ಕಾರ ಬಂದ ದಿನಂದಿಂದ ನಡೆದ ಹಗರಣಗಳು ಒಂದೆರಡಲ್ಲ. ಅವೆಲ್ಲವೂ ಬಯಲಾಗಿದ್ದರೂ ಏನೂ ಮಾಡದ ಸ್ಥಿತಿಯಲ್ಲಿ ಮತದಾರ ಬಂದು ಮಲಗಿದ್ದಾನೆ.
ಇಂದು ಕುಮಾರಸ್ವಾಮಿ ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆಂದು ದೂರುವ ಬಿಜೆಪಿಯವರು, ಅಂದು ಅವರು ಜಮೀರ್ ಅಹ್ಮದ್ ಜೊತೆಗೆ ಅವರದ್ದೇ ಬಸ್ಸಿನಲ್ಲಿ ರೆಸಾರ್ಟ್ ಗೆ ತೆರಳಿ ನಂತರ ಇದೇ ರೀತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆಂಬುದು ಮರೆತುಹೋಗಿದೆ. ಅವೆಲ್ಲವೂ ಬಹಳ ವರ್ಷದ ಹಿಂದೆ ನಡೆದವುಗಳಲ್ಲ. ಆದರೂ ನಮ್ಮ ಜನರ ನೆನಪಿನ ಶಕ್ತಿ ದುರ್ಬಲ. ಇಂದಿನ ಬಗೆಗೆ ಮಾತನಾಡುವುದೇ ಆದರೂ, ಇವರ ಶಾಸಕರನ್ನು ಕುಮಾರಸ್ವಾಮಿ ಬೆಂಬಲಿಸಿ, ವಿರುದ್ದ ಬಳಸಿದ್ದಾರೆಂಬುದು ಇವರ ಆರೋಪ. ಯಾವ ಮುಟ್ಠಾಳ ಶಾಸಕ ತಾನೇ, ಅಧಿಕಾರವನ್ನು ಬಿಟ್ಟು ವಿರೋಧಪಕ್ಷದವರ ಜೊತೆ ಕೈಜೋಡಿಸಬಯಸುತ್ತಾರೆ. ಎಂಟು ಸಚಿವರನ್ನು ಅನರ್ಹಗೊಳಿಸಿದ್ದರು. ಎಂಟೂ ಜನ ದಲಿತ ಜನಾಂಗಕ್ಕೆ ಸೇರಿದವರು. ಬಚ್ಚೇಗೌಡ ಸಾಮಾನ್ಯ ಪ್ರಜೆಯ ಮೇಲೆ ಹಲ್ಲೆ ನಡೆಸಿದರೂ ಏನೂ ಕ್ರಮ ಕಗೊಳ್ಳಲಿಲ್ಲ. ಕಟ್ಟಾ ಅವರ ಮಗ ಜೈಲಿನ್ನಲ್ಲಿದ್ದರೂ ಏನು ಮಾಡಿಲ್ಲ. ಮಗ ಮಾಡಿದ ತಪ್ಪಿಗೆ ತಂದೆ ಜವಾಬ್ದಾರಿಯಲ್ಲವೆಂಬುದು ಯಡ್ಯೂರಪ್ಪನ ವಾದ. ಜಗದೀಶ್ ಆಯ್ಕೆಯಾಗಿರುವುದು ಅವರಪ್ಪನ ಕೃಪೆಯಿಂದವೆನ್ನುವುದು ಸುಳ್ಳಾ? ಕಟ್ಟಾ ತನ್ನ ಮಗನನ್ನು ಮೇಯರ್ ಮಾಡಬೇಕೆಂದು ಓಡಾಡಿದ್ದು ಸುಳ್ಳಾ? ಅಂದೂ ಹೇಳಬಹುದಿತ್ತು ಅಪ್ಪ ಮಕ್ಕಳೂ ಬೇರೆ ಬೇರೆ ಎಂದು.
ವಿಧಾನಸೌಧದ ಘನತೆ ಏನೆಂಬುದನ್ನು ತಿಳಿಯದ ಮೂರ್ಖ ಮುಟ್ಠಾಳರೆಲ್ಲ ನಮಗೆ ನಾಯಕರಾದರಲ್ಲವೆಂದು ಮನಸ್ಸಿಗೆ ಬಹಳ ನೋವಾಗುತ್ತದೆ. ಖಾಕಿ ಎಂಬುದು ಮೊಗಸಾಲೆಗೂ ಕಾಲಿಡಬಾರದೆಂಬುದು ತಿಳಿದಿದ್ದರೂ ಒಳಕ್ಕೆ ಬಂದ ಶಂಕರ್ ಬಿದರಿಯವರಿಗೇ ಅದ್ಯಾವ ಭಾಷೆಯಲ್ಲಿ ಹೇಳಬೇಕೋ ಗೊತ್ತಿಲ್ಲ. ಇಂದಿಗೂ ನಮಗೆಲ್ಲರಿಗೂ ಮಾಧ್ಯಮದವರು ಆಗ್ಗಾಗ್ಗೆ ಸುದ್ದಿಯನ್ನು ಕೊಡುತ್ತಾ ಹೀನಾ ರಾಜಕಾರಣಿಗಳ ಬಟ್ಟೆ ಬಿಚ್ಚಿ ನಿಲ್ಲಿಸುತ್ತಿದ್ದಾರೆ. ಸುದ್ದಿ ಮಾಧ್ಯಮದವರನ್ನೂ ಒಳಕ್ಕೆ ಬಿಡುತ್ತಿರಲಿಲ್ಲವೆಂದರೇ ಇವರ ದುರಾಡಳಿತ ಯಾವ ಮಟ್ಟಕ್ಕಿರಬಹುದು. ಹುಡುಗಾಟಿಕೆಯೆಂಬಂತೆ, ಹೀಗೆ ಬಂದು ಹಾಗೆ ಹೋಗಿದ್ದಾರೆ ಬಿಜೆಪಿಯ ಶಾಸಕರು. ಅದರ ಜೊತೆಗೆ, ವಿಧಾನಪರಿಷತ್ ನ ಸದಸ್ಯರೆಲ್ಲರೂ ಒಳಕ್ಕೆ ಬಂದು ಕುಳಿತಿದ್ದರು. ಕೇಳಿದರೇ ಸಂಭ್ರಮಿಸಲು ಬಂದಿದ್ದೆ ಎಂದು ವಿಜಯ್ ಶಂಕರ್ ಹೇಳುತ್ತಾರೆ. ಅಧಿಕಾರ ನಡೆಸಿ ಎಂದು ಆಯ್ಕೆ ಮಾಡಿ ಕಳುಹಿಸಿದರೇ, ಆಚರಿಸಲು ಹೋಗಿದ್ದೆ ಎಂದು ಹೋಗಿರುವುದನ್ನು ಸಮರ್ಥಿಸಿಕೊಳ್ಳಬೇಕಾ? ಇದೆಲ್ಲದರ ಜೊತೆಗೆ ಮತ್ತೊಂದು ತಮಾಷೆಯ ವಿಷವೆಂದರೇ, ಸ್ವತಂತ್ರ ಅಭ್ಯರ್ಥಿ ಸುಧಾಕರ್ ಮತ್ತು ಸುರೇಶ್ ಗೌಡ ಜಗಳವಾಡಿದ್ದು, ಅವರು ಬಳಸಿದ ಪದಗಳು ನಮ್ಮುರ ಗೋವಿಂದ ಕೂಡ ಬಳಸುವ ಮುಂದೆ ಯೋಚಿಸಿ ಹೇಳುತ್ತಾನೆ. ಅಮ್ಮನ್, ಅವ್ವನ್, ಇಂದ ಹಿಡಿದು, ತಾಯಿನಡವೆನ್ನುವ ತನಕ ಬೈಯ್ದರೆಂದರೇ ಚೀ ಹೀನ ಬದುಕೇ ಎನಿಸುವುದಿಲ್ಲವೇ? ಸಂವಿಧಾನವನ್ನೂ ಓದಿಲ್ಲದ, ತಿಳಿದಿಲ್ಲದ, ಮೂರ್ಖ ಶಿಕಾಮಣಿಗಳೆಲ್ಲಾ ನಮ್ಮನ್ನು ಆಳಬೇಕೇ?ಇಂಥಹ ಸನ್ನಿವೇಶಗಳನ್ನು ಉಗ್ರಗಾಮಿಗಳು ನೋಡಿ ಬಹುಮತ ಸಾಬೀತು ಪಡಿಸುವ ದಿನದಂದು ವಿಧಾನಸೌಧಕ್ಕೆ ಒಂದೇ ಒಂದು ಬಾಂಬ್ ಹಾಕಿದ್ದರೂ ನಮ್ಮ ರಾಜ್ಯದ ಜನತೆ ಉಗ್ರಗಾಮಿಗಳು ಇಂದಿನ ತನಕ ಮಾಡಿರುವ ಎಲ್ಲಾ ತಪ್ಪುಗಳನ್ನು ಮಣ್ಣಿಸುತ್ತಿದ್ದರೆನಿಸುತ್ತದೆ. ಆ ಪಾಪಿಗಳು ಪಾಪದ ಅಮಾಯಕರ ಜೀವವನ್ನು ತೆಗೆಯುತ್ತಾರೆ, ಇಂಥಹ ಹೀನರನ್ನಾದರೂ ಕೊಲ್ಲಬಾರದೇ? ನಮ್ಮ ನಕ್ಷಲೈಟ್ ಗಳು ಅದೇನೋ ಕಡಿದು ಕಟ್ಟೆ ಹಾಕುತ್ತೇವೆಂದು ಕಾಡಿನಲ್ಲಿ ಸೇರಿಕೊಂಡು ಪೋಲಿಸರ ಹೆಂಡತಿಯರ ಅರಿಶಿನ ಕುಂಕುಮ ಅಳಿಸುವ ಬದಲು ಇವರ ಉತ್ತರ ಕ್ರಿಯಾದಿಗೆ ನೆರವಾಗಬಾರದೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...