06 ಫೆಬ್ರವರಿ 2013

ಯಾವುದನ್ನು ಬರೆಯುವುದು ಯಾವುದನ್ನು ಓದುವುದು ಯಾವುದನ್ನು ಆಡುವುದು ಯಾವುದನ್ನು ನೋಡುವುದು ಯಾವುದನ್ನು ಕೇಳುವುದು ಯಾವುದನ್ನು ಕಿವಿ ಮುಚ್ಚುವುದು. ಎಲ್ಲವು ತಲೆಯೊಳಗೆ ಹೋಗಲಾರದು, ಎಲ್ಲವನ್ನು ತಲೆಯಿಂದ ತೆಗೆಯಲಾರದು. ದೈವನ ಲೀಲೆಯೆಂಬುದೋ? ದೇವರ ಆಟವೆಂಬುದೋ? ಇಲ್ಲಾ ಕಾಟವೆಂಬುದೋ? ಪುಟ್ಟ ದ್ವೀಪದಲ್ಲಿ ತನ್ನದೇ ಜೀವನ ನಡೆಸುತ್ತಾ ಬದುಕುತ್ತಿದ್ದ ಜನರನ್ನು ಸುನಾಮಿ ಬಂದು ಬಡಿದೆಬ್ಬಿಸಿದರೇ? ಎಲ್ಲ ಜನರನ್ನೂ ಒಮ್ಮೆಗೆ ಯಮಲೋಕದ ರೈಲು ಹತ್ತಿಸಿದರೇ? ದ್ವೀಪವೆಂಬ ಕಗ್ಗಾಡಿನಲ್ಲಿದ್ದ ಜನ ದೇವರು ನಮ್ಮನ್ನು ಕರೆದೊಯ್ಯುತ್ತಿರುವುದು, ಯಮನ ಮನೆಗೆ, ಸ್ವರ್ಗಕ್ಕೆಂದು ನಲಿದಾಡಬೇಕೋ? ಇಲ್ಲಾ ಏನಾದರೂ ಹೇಗಿದ್ದರೂ ನಾವು ಹುಟ್ಟಿದ ನೆಲ ನಮಗೆ ಸ್ವರ್ಗವೆಂದು, ನಾವು ನಿನ್ನೂರಿಗೆ ಬರುವುದಿಲ್ಲವೆಂದು ದೇವರಿಗೆ ಮೊರೆಗೊಡಬೇಕಾ? ಹುಟ್ಟುವಾಗ ಯಾರನ್ನೂ ಕೇಳಿ ಬರಲಿಲ್ಲ, ಸಾಯುವಾಗಲೂ ಕೇಳುವುದಿಲ್ಲ! ಮತ್ತ್ಯಾಕೆ ಬಡತನ ಬೇಗೆಯಲ್ಲಿ ಬೆಂದು, ತಿನ್ನಲು ಅನ್ನವಿಲ್ಲದೇ, ಕೊರಗಬೇಕು. ಹಗಲಿರುಳ್ಳೆನ್ನದೇ ದುಡಿದರೂ ನೂರು ರೂಪಾಯಿ ಕೂಲಿ ಅಷ್ಟೇ? ಅಕ್ಕಿಯ ಬೆಲೆ ಐವತ್ತಾಯಿತು, ನೂರು ರೂಪಾಯಿ ದುಡಿದರೇ, ಆರು ಜನರು ತಿನ್ನಬೇಕು, ಉರುವಳಿಗೆಯಿಲ್ಲ ಬೇಯಿಸಲು, ಕಾಸಿಲ್ಲ, ಗ್ಯಾಸ್ ಕೊಳ್ಳಲು, ಸ್ವಂತ ಮನೆಯಿದ್ದರಲ್ಲವೇ ಗ್ಯಾಸ್ ಬೇಕಿರುವುದು. ಯಾವುದೋ ಪೈಪಿನ ಅಡಿಯಲ್ಲಿ ಮಲಗಿದರೂ ನಿದ್ದೆ ಬರುತ್ತದೆ, ನೆಮ್ಮದಿಯಿಂದಲ್ಲ, ಮುಂಜಾನೆಯಿಂದ ದುಡಿದ ನೋವಿನಿಂದ. ಇದ್ಯಾವ ನ್ಯಾಯ, ಬಡವನ ಜೀವಕ್ಕೆ ಬೆಲೆಯಿಲ್ಲವೇ? ಬಡವನಾಗಬೇಕೆಂದು ಬಯಸಿ ಹುಟ್ಟಲ್ಲಿಲ್ಲ, ಹುಟ್ಟಿದ್ದು ಆಯ್ತು, ಬದುಕಬೇಕೆಂದರೆ, ತಿನ್ನುವ ಅನ್ನವೇ, ಇಲ್ಲ, ಇರುವ ಸೂರಿಲ್ಲ, ರೋಗ ಬಂದರೇ ಗುಣವಾಗುವ ಸೂಚನೆಯಿಲ್ಲ, ದೇಶ ಬೆಳಗುತ್ತಿದೆಯೆಂದರೆ, ಯಾವುದು? ಬೀದಿ ದೀಪಗಳಿವೆ, ತಟ್ಟೆಗೆ ಕೈ ಹಾಕಿದರೇ ಅನ್ನ ಮುಟ್ಟುತ್ತಿರುವ ಭಾವನೆ ಮಾತ್ರ, ಕತ್ತಲಲ್ಲಿ ಕಣ್ಣಗಳಿಸಿದರೂ ಅನ್ನ ಕಾಣುವುದಿಲ್ಲ, ಹಸಿವು ಅದನ್ನೆಲ್ಲಾ ಯೋಚಿಸುವುದಿಲ್ಲ, ಅನ್ನವೋ ಕಲ್ಲೋ ಮಣ್ಣೋ ಮೊದಲು ಬಾಯಿಗೆ ಬೀಳಬೇಕು, ಅಷ್ಟೇ. ರುಚಿ ಎಂದರೇನೆಂಬ ಅರಿವೇ ಇಲ್ಲ. ಅದರ ಅವಶ್ಯಕತೆಯೂ ಇಲ್ಲ. ತಿನ್ನುವುದು ಒಂದು ಔಷಧಿ, ಬದುಕಲು ತಿನ್ನಬೇಕು, ಔಷಧಿ ಎಂದ ಮೇಲೆ ಹೆಚ್ಚು ತಿನ್ನುವ ಹಾಗಿಲ್ಲ, ಮಿತವಾಗಿರಬೇಕಲ್ಲವೇ? ನಾಲ್ಕೆ ತುತ್ತು, ಹೊಟ್ಟೆ ಕೂಗುತ್ತದೆ ಇನ್ನೂ ಬೇಕೆಂದು, ಇದ್ದರಲ್ಲವೇ, ಕೈಯಿಂದ ಬಾಯಿಗೆ ಹೋಗುವುದು, ನಾಳೆಯೂ ಬದುಕಿದ್ದರೇ ತಿನ್ನೋನವೆಂದ ಸಮಧಾನವಾಗುತ್ತದೆ, ಅನಿವಾರ್ಯತೆಯಲ್ಲವೇ, ಬದುಕುತ್ತೇನೆಂಬ ವಿಶ್ವಾಸವಲ್ಲ, ದೇವರು ಸಾಯಿಸುವುದಿಲ್ಲವೆಂಬ ನಂಬಿಕೆ.

01 ಫೆಬ್ರವರಿ 2013

ಯಾವುದು ಸರಿ ಯಾವುದು ತಪ್ಪು, ಒಬ್ಬ ಹಾಲಿನಿಂದ ದೇವರಿಗೆ ಅಭಿಷೇಕ ಮಾಡ್ತಾನೆ, ಆ ದೇವರು ಸಸ್ಯಹಾರಿ ನೈವೇದ್ಯವನ್ನು ಮಾತ್ರ ಬಯಸುತ್ತೆ, ಅಲ್ಲಿ ಮಾಂಸಹಾರಕ್ಕೆ, ಹಿಂಸೆಗೆ ಸ್ಥಳವಿಲ್ಲ. ಅದು ಮುಂಜಾನೆಯ ಸ್ನಾನ ಮಡಿ ಗುಡಿಯಿಂದ ಶುರುವಾಗಬೇಕು. ಮಧ್ಯಾಹ್ನ ಪೂಜೆ ಇಲ್ಲ ಮತ್ತೇ ಸಂಜೆ ಪೂಜೆಯಾಗುತ್ತದೆ, ರಾತ್ರಿ ದೇವರು ಮಲಗುತ್ತಾನೆ, ತನ್ನದೇ ಸಮಸ್ಯೆಗಳನ್ನು ಹೊದ್ದಿಕೊಂಡು ಭಕ್ತರು ಮಲಗುತ್ತಾರೆ. ಮತ್ತೊಂದೆಡೆ, ಪೂಜಾರಿ ನಡುರಾತ್ರಿಯಲ್ಲಿ ಏಳುತ್ತಾನೆ. ಕತ್ತಲೂ, ಸುತ್ತಲೂ ಕತ್ತಲೂ, ಭಯಂಕರ ಜಡೆ, ಜಡೆಯೆಂದರೇ ನಿಜಕ್ಕೂ ಜಡೆಗೆಟ್ಟಿದೆ ಪೂಜಾರಿಯ ಕೂದಲು, ಎಣ್ಣೆ ಕಂಡಿಲ್ಲ, ಗಂಟು ಕಟ್ಟಿದೆ, ಮುಖವೂ ವಿಕಾರವೋ, ವಿರೂಪವೋ? ಭಯವನ್ನುಂಟು ಮಾಡುವ ಶಕ್ತಿಯಿದೆ. ಅಲ್ಲಿಗೆ ಬರುವ ಭಕ್ತರೂ ಅಷ್ಟೇ ಯಾವುದೋ ಪಾಪ ಮಾಡಿರಬಹುದು, ಇನ್ಯಾರಿಗೋ ಅನ್ಯಾಯ ಮಾಡಿರಬಹುದು, ಅಥವಾ ಮತ್ತಾರೋ ಮಾಡುತ್ತಿರುವ ಅನ್ಯಾಯದ ವಿರುದ್ದ ಹೋರಾಡುವ ಶಕ್ತಿ ಬೇಕೆಂದು ಬೇಡುತ್ತಿರಬಹುದು. ಒಂದೆಡೆ ಬೆಳಕು, ಮತ್ತೊಂದೆಡೆ ಕಡುಗಪ್ಪು. ದೇವರೆಲ್ಲರೂ ಒಂದೆ ಎಲ್ಲವೇ? ಅದು ಹೇಗೆ ಸಾಧ್ಯ ಮನುಷ್ಯರೆಲ್ಲರೂ ಒಂದೇ ಆಗಲು ಸಾಧ್ಯವೇ? ಇಷ್ಟ ಶಕ್ತಿ ದುಷ್ಟ ಶಕ್ತಿ ಇಲ್ಲವೇ? ಋಷಿಗಳೆಲ್ಲರೂ ಸಮಾನರೇ? ಅಘೋರಿಗಳು ಅರ್ಧ ಸುಟ್ಟ ಹೆಣಗಳನ್ನು ತಿನ್ನುವುದಿಲ್ಲವೇ? ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಮಾಡುವ ಪೂಜಾರಿ ಇಲ್ಲಿ ಸತ್ತಿರುವುದನ್ನು ಮುಟ್ಟಲು ಹಿಂಜರಿಯುವುದಿಲ್ಲವೇ? ಇಬ್ಬರೂ ಹೇಗೆ ಸಮನಾದರು? ದುರ್ಯೋಧನ ಅಷ್ಟೊಂದು ಕ್ರೂರಿಯಾಗಿ ಸ್ವಾರ್ಥಿಯಾಗಿರಲಿಲ್ಲವೇ? ಧರ್ಮರಾಯ ಹುಲ್ಲು ಕಡ್ಡಿಗೆ ಅನ್ಯಾಯ ಮಾಡದೇ ಬದುಕು ನೀಗಲಿಲ್ಲವೇ? ಎಲ್ಲರೂ ಸಮನಾದರೇ, ವೈವಿಧ್ಯವೆಲ್ಲಿ? ನಿಂಬೆ ಹಣ್ಣಿಗೆ ಕುಂಕುಮ ಹಚ್ಚಿ ದೋಷ ನಿವಾರಣೆ ಮಾಡುವುದೊಂದೆಡೆಯಾದರೇ, ನರಬಲಿಯನ್ನು ಮಾಡಿ ದೋಷ ನೀಗಿಸುವುದು ಮತ್ತೊಂದು ವಿಧಿಯಲ್ಲವೇ? ವಿಧಿಯನ್ನು ನಡೆಸುವವನ ಮೇಲೆ ಅವಲಂಬಿತವಾಗಿರುತ್ತದೆ.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...