22 ನವೆಂಬರ್ 2021

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

 

ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಿಗೆ ಬರ ಎದುರಾಗುವ ಮುನ್ಸೂಚನೆಯಿದೆ. 


ಪರಿಸರ ಸಂಬಂಧಿತ ಕೆಲಸಗಳಲ್ಲಿ ತೊಡಗಿಸಿ ಕೊಂಡಿರುವ ನವದೆಹಲಿಯ ‘ಕೌನ್ಸಿಲ್ ಆನ್ ಎನರ್ಜಿ ಎನ್ವಿರಾನ್ಮೆಂಟ್ ಆಂಡ್ ವಾಟರ್ (ಸಿ.ಇ.ಇ.ಡಬ್ಲ್ಯು)' ಎಂಬ ಸ್ವಯಂ ಸೇವಾ ಸಂಸ್ಥೆ ತಯಾರಿಸಿರುವ ಇತ್ತೀಚಿನ ಸಂಶೋಧನ ವರದಿಯಲ್ಲಿ ಹಾಸನ ಕೊಡಗು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಮುಂಬರುವ ಬೇಸಿಗೆಯಲ್ಲಿ ಬಿಸಿಲಿನ ಧಗೆ ಹೆಚ್ಚಾಗುವ ಬಗ್ಗೆ ಪ್ರಸ್ತಾಪಿಸಲಾಗಿದೆ. 


ವರದಿಯ ಪ್ರಕಾರ ಅತಿ ಹೆಚ್ಚು ರಿಸ್ಕ್ ಇರುವ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೆಯ ಸ್ಥಾನದಲ್ಲಿದೆ. ಮೊದಲನೆಯ ಸ್ಥಾನದಲ್ಲಿ ಅಸ್ಸಾಂ, ಎರಡನೆಯದರಲ್ಲಿ ಆಂಧ್ರಪ್ರದೇಶ ಹಾಗೂ ಮೂರನೆಯ ಸ್ಥಾನದಲ್ಲಿ ಮಹರಾಷ್ಟ್ರ ರಾಜ್ಯಗಳಿವೆ. 


ಈ ವರದಿಯಲ್ಲಿ ಬಿಸಿಲು ಹೆಚ್ಚಿರುವ ಅತಿ ಹೆಚ್ಚು ರಿಸ್ಕ್ ಪ್ರದೇಶಗಳಿಂದ ಕಡಿಮೆ ರಿಸ್ಕ್ ಇರುವ ಪ್ರದೇಶಗಳ ಮಾಹಿತಿಯನ್ನು ಒದಗಿಸಲಾಗಿದೆ. ಹಾಸನ ಜಿಲ್ಲೆ  ರಿಸ್ಕ್ ಇರುವ ಪ್ರದೇಶದಲ್ಲಿ ಸ್ಥಾನ ಪಡೆದಿದೆ. ರಾಜ್ಯದ ಅತೀ ಹೆಚ್ಚು ರಿಸ್ಕ್ ಇರುವ ಜಿಲ್ಲೆಗಳ ಪಟ್ಟಿಯಲ್ಲಿ ಕಲಬುರಗಿ, ಚಾಮರಾಜನಗರ, ಕೋಲಾರ, ದಾವಣಗೆರೆ, ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಿವೆ. 


ಇದು ರಾಜ್ಯದ ಜನತೆಗೆ ಹವಮಾನ ವೈಪರಿತ್ಯದ ಕುರಿತು ಎಚ್ಚರಿಕೆ ಗಂಟೆಯಾಗಿದ್ದು, ಮುಂಬರುವ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಬರಗಾಲ ಬೀರುವ ಮತ್ತು ಉಷ್ಣಾಂಶ ಹೆಚ್ಚಾಗುವ ಮುನ್ನೆಚ್ಚರಿಕೆಯನ್ನು ನೀಡಿದೆ. ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾದರೆ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರ ಜೊತೆಗೆ, ಬರದ ಭೀತಿ ಎದುರಾಗಲಿದೆ ಎಂಬ ಆತಂಕವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಬಡವರ ಊಟಿ ಎಂದು ಹೆಸರನ್ನು ಪಡೆದಿದ್ದ ಹಾಸನ ಜಿಲ್ಲೆಯು ಈಗ ಸನ್‍ಸಿಟಿಯಾಗಿ ಬದಲಾಗುತ್ತಿರುವುದು ಆತಂಕ ಮೂಡಿಸಿದೆ. ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಿಸುವುದು ಸಮೀಪದಲ್ಲಿಯೇ ಇದೆ. ಬಿಸಿಲು ಹೆಚ್ಚಿ ಮಳೆ ಬರದೇ ಇದ್ದರೆ ಬರ ಎದುರಾಗಿ ರೈತರ ಬದುಕು ದುಸ್ತರವಾಗುತ್ತದೆ. ಮಾನವ ಸಂಪನ್ಮೂಲ ಸದ್ಬಳಕೆ ಆಗುವುದಿಲ್ಲ. ದುಡಿಮೆಯ ಅವಧಿ ಕಡಿಮೆಯಾಗಿ ಆರ್ಥಿಕತೆಗೆ ಬಲವಾದ ಪೆಟ್ಟು ಬೀಳುತ್ತದೆ. ಅದಕ್ಕಾಗಿ ಬಿಸಿಲು ತಾಪ ಹೆಚ್ಚಾಗುವುದನ್ನು ತಡೆಯಬೇಕಿದೆ. 


ಬಿಸಿಲು ತಾಪ ನಿಯಂತ್ರಣ ಮಾಡಲು ತಕ್ಷಣವೇ ಜಿಲ್ಲಾಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆ ರೂಪಿಸಬೇಕು. ಹಸಿರು ಹಾಸನ ಯೋಜನೆ ರೂಪಿಸಬೇಕು. ಅಂತರ್ಜಲ ವೃದ್ಧಿಗೆ ಒತ್ತನ್ನು ನೀಡಬೇಕು. ಬಂಜರು ಭೂಮಿಯನ್ನು ಅರಣ್ಯೀಕರಣ ಮಾಡಬೇಕು. ಏಕವಿಧದ ಮರಗಳನ್ನು ನೆಡದೆ ಬಹುವಿಧದ ಗಿಡಗಳನ್ನು ನೆಡಬೇಕು. ನದಿ ದಂಡೆಯಲ್ಲಿನ ಮರಗಿಡಗಳ ವೈವಿದ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ನದಿ ಆರೋಗ್ಯ ತಜ್ಞ ಮತ್ತು ಪರಿಸರ ವಿಜ್ಞಾನಿ ಡಾ. ಬಿ.ಕೆ.ಹರೀಶ್ ಕುಮಾರ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಳು ಹಾಗು ವರದಿಗಳಿಗಾಗಿ ಸಂಸ್ಥೆಯ ವೆಬ್ ಸೈಟ್ https://www.ceew.in/ ಗೆ ಭೇಟಿ ನೀಡಿ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...