04 ಸೆಪ್ಟೆಂಬರ್ 2010

ದೂರಾಗುವ ಮುನ್ನಾ.......!!!

ಜೀವನದಲ್ಲಿ ಯಾವುದೂ ಶಾಶ್ವತವಲ್ಲವೆಂದು ಸದಾ ನಾವು ಬೊಬ್ಬೆ ವಾಸ್ತವದಲ್ಲಿ ಅದನ್ನು ಒಪ್ಪಲ್ಲು ಸಿದ್ದವಿರುವುದಿಲ್ಲ. ಸೋಲು ಗೆಲುವೆಂಬುದು ಅಷ್ಟೇ, ಶಾಶ್ವತವಲ್ಲ. ಆದರೇ ಅದನ್ನು ಓಪ್ಪುವುದಿಲ್ಲ. ಒಂದು ವಿಷಯದಲ್ಲಿ ಸೋತ ಕ್ಷಣದಲ್ಲಿ ಜೀವನವೇ ಸೋತಂತೆ ಅಥವಾ ಸತ್ತಂತೆ ಆಡುವುದರಿಂದ ಬರುವುದೇನು? ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಬದುಕುವುದು ಮತ್ತು ಬದುಕನ್ನು ರೂಪಿಸಿಕೊಳ್ಳುವುದು ಬಹುಮುಖ್ಯವಾಗುತ್ತದೆ.ಹಾಗೆಯೇ ನಿನ್ನೆಯ ತನಕ ಇದ್ದ ನೌಕರಿ ಇಂದು ಬೆಳ್ಳಿಗ್ಗೆ ಏಳುವ ವೇಳೆಗೆ ಇಲ್ಲದಾದಾಗ ಅದನ್ನು ಜೀರ್ಣಿಸಿಕೊಳ್ಳಬೇಕಾಗುತ್ತದೆ. ನಿನ್ನೆಯ ತನಕವಿದ್ದ ಜೀವದ ಗೆಳತಿ/ಗೆಳೆಯ ಇಂದು ನಮ್ಮಿಂದ ದಿಡೀರನೆ ದೂರಾದರೆ ಅದನ್ನು ಅರಗಿಸಿಕೊಳ್ಳಬೇಕಾಗುತ್ತದೆ. ದೂರಾಗುವ ವೇಳೆ ಬಹುಮುಖ್ಯ ಕುತೂಹಲ ತಲೆದೋರುತ್ತದೆ. ಅವನು ನನ್ನಿಂದ ದೂರಾಗಲು ಕಾರಣವೇನು? ಅಥವಾ ಅವಳು ನನ್ನನ್ನು ತಿರಸ್ಕರಿಸಲು ಕಾರಣವೇನು? ನಾವು ನಮ್ಮ ದೃಷ್ಟಿಯಲ್ಲಿ ನಾವು ಅವರನ್ನು ನಮಗಿಂತಲೂ ಹೆಚ್ಚು ಪ್ರೀತಿಸಿದ್ದೂ ಕೂಡ ಅವರು ನಮ್ಮನ್ನು ಬಿಟ್ಟು ಹೋಗುವ ಅನಿವಾರ್ಯತೆ ಇದ್ದದ್ದು ಹೇಗೆ. ಇದು ಕೇವಲ ಪ್ರೀತಿಸಿದವರಿಗೆ ಸಲ್ಲುವ ಪ್ರಶ್ನೆಯಲ್ಲ, ಮದುವೆಯಾದವರಿಗೂ, ಮದುವೆಯಾಗಿ ವರ್ಷಾನುಗಟ್ಟಲೇ ಸಂಸಾರ ಮಾಡಿದವರಿಗೂ ಕಾಡುವ ಪ್ರಶ್ನೆ.
ಒಬ್ಬರನ್ನು ಒಬ್ಬರು ಪ್ರೀತಿಸಿದರೇ ಸಾಯುವ ತನಕ ಅಥವ ಈ ಜನ್ಮ ಇರುವ ತನಕ ಜೊತೆಯಲ್ಲಿರಬೇಕೆಂಬುದು ಸಹಜವೆನಿಸಿದರೂ ಕೂಡ, ಅದು ಆಗಲೇ ಬೇಕೆಂಬುದು ಯಾವ ನ್ಯಾಯ. ಪ್ರೀತಿಸಿ ಮದುವೆಯಾದವನು, ಅಥವಾ ಅವಳು ಮದುವೆಯಾದ ಮರುದಿನವೇ, ಅಪಘಾತದಲ್ಲಿ ಕೈ ಕಾಲು ಕಳೆದು ಕೊಂಡರೇ, ಊನವಾದರೇ, ವಾಸಿ ಆಗದ ಖಾಯಿಲೆ ಬಿದ್ದರೇ ಅವರ ಜೊತೆಯಲ್ಲಿ ಇವರ ಜೀವನವೂ ಹಾಳಾಗಬೇಕೆ? ಇಬ್ಬರೂ ನೋವು ಪಡೆಯುವುದಕ್ಕಿಂತ ಒಬ್ಬರು ಸಂತೋಷದಿಂದಿರುವುದು ಮಾನವೀಯತೆಯಲ್ಲವೇ? ಅವರು ಬೇರೆ ಆಗಿ, ಜೀವನ ಸಾಗಿಸುವುದು ಉತ್ತಮವಲ್ಲವೇ? ಪ್ರಿತಿಸಿದ ತಕ್ಷಣ ಆ ವ್ಯಕ್ತಿ ನಮ್ಮವನು, ನನ್ನವನು ಎಂದು ಅಧಿಕಾರ ಸಾಧಿಸುವುದರ ಹಿಂದಿನ ಮರ್ಮವೇನು? ನಾವೆಷ್ಟೇ ಪ್ರೀತಿಸಿದರೂ ಅದು ಇನ್ನೊಬ್ಬರ ಉಸಿರು ಕಟ್ಟಿಸುವ ಪ್ರೀತಿ ಆಗಬಾರದಲ್ಲವೇ? ನಾವು ಹೆಳಿದನ್ನೇ ಕೇಳಬೇಕು, ಕರೆದೆಡೆಗೆ ಬರಬೇಕು? ಮಧ್ಯರಾತ್ರಿ, ಮುಂಜಾನೆ, ಮುಸ್ಸಂಜೆ ಎಷ್ಟೊತ್ತೆಂದರೇ ಅಷ್ಟೊತ್ತಿನ್ನಲ್ಲಿ ಸೆಕ್ಸ್ ಬೇಕು, ಮುದ್ದಾಡಬೇಕು, ಆರೋಗ್ಯ ಕೆಟ್ಟಿ ಬಿದ್ದಿದ್ದರೂ ಅವಳು ನನ್ನೊಡನೆ ತನ್ನನ್ನು ತೊಡಗಿಸಿಕೊಳ್ಳಬೇಕು. ಇದೆಂಥಹ ವಿಕೃತ ಮನಸ್ಸು ನಮ್ಮದು. ಪ್ರೀತಿಸುವ ಹುಡುಗಿಯಾದ ನೀನು ಅಷ್ಟೇ, ಅವನನ್ನು ಅರ್ಥೈಸಿಕೊಳ್ಳುವ ಮನಸ್ಸು ಮಾಡಬಾರದೇ? ಪ್ರೀತಿಸುವ ಎರಡು ಮನಸ್ಸುಗಳಲ್ಲಿ ಒಂದರಲ್ಲಿ ಪ್ರೀತಿ ಕುಗ್ಗುತ್ತಾ ಬರುತ್ತಿದ್ದೆ, ಅಥವಾ ಆಸಕ್ತಿ ಕಡಿಮೆಯಾಗುವುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರೀತಿ ಕ್ಷೀಣಿಸುವುದು ಅಪರಾಧವೇನಲ್ಲ. ಅದು ಸದಾ ಒಂದೇ ಬಗೆಯಾಗಿರುವುದಿಲ್ಲ, ಒಬ್ಬರೂ ಆಸಕ್ತಿ ಕಳೆದುಕೊಂಡಲ್ಲಿ, ಮತ್ತೊಬ್ಬರೂ ಕಳೆದುಕೊಳ್ಳುತ್ತಾರೆ, ತಕ್ಕ ಮಟ್ಟಿಗೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಪ್ರೀತಿ ಬರುವುದು ನಿಮಗೆ ಎಲ್ಲವೂ ಸಮರ್ಪಕವಾಗಿದ್ದಾಗ ಎನ್ನುವುದು ಕಟು ಸತ್ಯ, ಉದ್ಯೋಗ, ಸ್ವಂತ ಸಂಪಾದನೆ, ವಿದ್ಯಾಬ್ಯಾಸ, ಇದೆಲ್ಲವೂ ಇಲ್ಲದೇ ಇದ್ದಿದ್ದರೇ ಪ್ರೀತಿ ಸಿಗುವುದೇ? ಸೌಂದರ್ಯವಿಲ್ಲದ ಹುಡುಗಿಯನ್ನು ಪ್ರೀತಿಸಲು ಮುಂದೆ ಬರುವ ಗಂಡಸರು ಬಹಳ ಕಡಿಮೆ ಅಲ್ಲವೇ? ಆಂತರಿಕ ಪ್ರೀತಿ ಎಂದು ನಾವು ಎಷ್ಟೇ ಬೊಬ್ಬೆ ಹೊಡೆದರು, ವಾಸ್ತವಿಕತೆ ಬಹು ಮುಖ್ಯವೆನಿಸುತ್ತದೆ. ನೈಜತೆಗೆ ಹತ್ತಿರ ನಿಂತು ಚಿಂತನೆ ಮಾಡಬೇಕಾಗುತ್ತದೆ. ನಿಜವಾದ ಪ್ರೀತಿ ಏನು? ನಾವು ಪ್ರೀತಿಸುವವರನ್ನು ಸಂತೋಷದಿಂದಿಡುವುದು. ನಾವು ಇದ್ದರೂ ಇಲ್ಲದಿದ್ದರೂ ಅವರು ಸಂತೋಷದಿಂದಿರುವಂತೆ ನಾವು ಮಾಡಬೇಕು. ಅದಕ್ಕಾಗೆ ಪ್ರಯತ್ನಿಸಬೇಕು, ನನ್ನೊಡನೆ ಇರುವಾಗ ಮಾತ್ರ ಖುಷಿ ಆಗಿರು, ನಾನಿಲ್ಲದ ಮರು ಕ್ಷಣ ನೀನು ಸತ್ತು ಹೋಗು, ಹಾಳಾಗು ಎಂದು ಬಯಸಿದರೇ ಅದು ಪ್ರೀತಿ ಆಗುವುದೇ? ನಾನು ಹೇಳಿದ್ದನ್ನು ಕೇಳಿದರೇ ಮಾತ್ರ ಪ್ರ‍ೀತಿ ನನ್ನೊಡನೆ ಇದ್ದರೇ ಮಾತ್ರ ಪ್ರಿತಿ ಇಲ್ಲದಿದ್ದರೇ ನಿನ್ನನ್ನು ಸಾಯಿಸುತ್ತೇನೆ, ಆಸಿಡ್ ಹಾಕುತ್ತೇನೆ ಎನ್ನುವ ಕ್ರೌರ್ಯವನ್ನು ಪ್ರೀತಿ ಎನ್ನವುದೇಗೆ? ಅದು ಪ್ರೀತಿಯಾ? ಪ್ರೀತಿಯಲ್ಲಿ ದೈವಿಕತೆಯನ್ನು ಕಾಣಬೇಕು, ಪ್ರೀತಿ ಇರುವುದು ದೇವರನ್ನು ಕಾಣಲು, ನಮ್ಮನ್ನು ಪ್ರೀತಿಸಿದವನ/ಳ ಸಂತೋಷವನ್ನು ಬಯಸದ ನಾವು ನಮ್ಮ ಸ್ವಾರ್ಥಕ್ಕೆ ಅವರನ್ನು ಬಲಿ ಪಶು ಮಾಡುವುದು ನ್ಯಾಯವೇ?
ಕೇವಲ ದೇಶದ ಹಿತಕ್ಕಾಗಿ, ಪ್ರಾಣ ಕೊಡುವ ತಮ್ಮ ಸರ್ವ ಸಂತೋಷವನ್ನೇ ಮುಡುಪಾಗುವ ಸೈನಿಕರು ನಮಗೆ ನೆನಪೇ ಆಗುವುದಿಲ್ಲವಲ್ಲವೇ? ಲಾಟಿನ್ ಅಮೇರಿಕಾಕ್ಕೆ ಮೊದಲಿನಲ್ಲಿ ಹೋದ ಕ್ರೈಸ್ತ ಮತ ಪ್ರಚಾರಕರನ್ನು ಅಲ್ಲಿನ ಬುಡಕಟ್ಟು ಜನರು ಹೊತ್ತುಕೊಂಡು ಹೋಗಿ ತಿನ್ನುತ್ತಿದ್ದರೂ, ಆದರೂ ಎದೆಗುಂದದೇ ಹೋಗಿ ಅವರನ್ನು ನಾಗರೀಕರನ್ನಾಗಿಸಿದರು. ಅವರಲ್ಲಿ ಯಾವ ಸ್ವಾರ್ಥವಿತ್ತು, ಇಡೀ ಜನಾಂಗವನ್ನೆ ಅಲ್ಲ ಮನುಕುಲವನ್ನೇ ಪ್ರೀತಿಸಿದವರು, ಅವರೆಂದು ಸ್ವಾರ್ಥ ಈಡೇರಿಸಿಕೊಳ್ಳಲಿಲ್ಲ. ಮತ್ತೆ ನಾವೇಕೆ, ಸ್ವಾರ್ಥದ ಪ್ರೀತಿಯ ಗುಲಾಮರಾಗಬೇಕು?ಒಬ್ಬ ವ್ಯಕ್ತಿಯನ್ನು ಪ್ರೀತಿಸಿದ ಒಂದು ಮನಸ್ಸನ್ನು ವಶ ಪಡಿಸಿಕೊಳ್ಳಲು ಸಾಯುವವರೆಗೂ ಚಿಂತಿಸುವ ನಾವು, ನಮ್ಮನ್ನು ಸಾಕಿ ಸಲಹಿದ ತಂದೆ ತಾಯಿಯರ ಬಗೆಗೆ ಏಕೆ ಅಂಥಹ ನಿಲುವು ಬರುವುದಿಲ್ಲ. ವಿದ್ಯಾವಂತರಾಗಿ ವ್ಯವಸ್ಥೆ, ಈ ದರಿದ್ರ ಸಮಾಜ ನಮಗೆ ಕೊಟ್ಟ ಕಷ್ಟಗಳಿಗಿಂತ ಹೆಚ್ಚು ಕಷ್ಟವನ್ನು ನಾವು ಪ್ರೀತಿಸಿದವರು ಕೊಟ್ಟಿದ್ದಾರೆಯೇ? ನಾನು ನಾಲ್ಕಾರು ವರ್ಷ ಪ್ರೀತಿಸಿದ ಹುಡುಗಯನ್ನು ನಮ್ಮ ತಂದೆ ತಿರಸ್ಕರಿಸಿದರೇ, ಇವಳು ನನ್ನನ್ನು ತಿರಸ್ಕರಿಸಿ ಹೊರಟರೇ, ತಂದೆಗೂ ಇವಳಿಗೂ ವ್ಯತ್ಯಾಸವೇನು? ಇಬ್ಬರೂ ಸ್ವಾರ್ಥಿಗಳೇ ತಾನೆ? ನಾನು ಹುಟ್ಟಿಸಿ ಬೆಳೆಸಿದ ಮಗ ನಾನು ಹೇಳಿದಂತೆ ಕೇಳಬೇಕು, ಅವನು ನನ್ನ ಗುಲಾಮವೆನ್ನುವಂತೆ ತಂದೆ ಹೇಳಿದರೇ, ಜೀವದ ಗೆಳತಿಯಾದವಳು, ನೀನು ನನ್ನ ಜೀತದಾಳು ನಾನು ಹೇಳಿದಂತೆ ನೀನು ಕೇಳಬೇಕೆಂದರೇ, ಇಬ್ಬರೂ ಸ್ವಾರ್ಥದ ಮತ್ತೊಂದು ಮುಖವೆನಿಸುವುದಿಲ್ಲವೇ. ಪ್ರೀತಿಸಿದವನ ಸುಖವನ್ನು ಬಯಸುವುದೆಂದರೇ ಇದೇನಾ? ಪ್ರತಿಯೊಬ್ಬ ಮನುಷ್ಯನಲ್ಲಿಯೂ ಅವನದೇ ಆದ ಅವನು ಇರುತ್ತಾನೆ. ಅದನ್ನು ಯಾರು ಬಲವಂತದಿಂದ ಬದಲಾಯಿಸಬಾರದು. ಯಾವುದು ಶಾಶ್ವತವಲ್ಲದ ಬದುಕಿನ್ನಲ್ಲಿ ನಮ್ಮ ಪ್ರೀತಿ ನಾವು ಪ್ರೀತಿಸಿದವರು ಶಾಶ್ವತವೆಂದರೇ ಮೂರ್ಖತನದ ಪರಮಾವಧಿ ಎನಿಸುವುದಲ್ಲವೇ? ಕೊಡುವುದರಲ್ಲಿ ಇರುವ ಸುಖ ಗುಲಾಮಗಿರಿಯಲ್ಲಿ ಇರುವುದಿಲ್ಲ, ಕೊಟ್ಟಷ್ಟು ಸಿರಿವಂತರಾಗುತ್ತೇವೆ. ಕೊರಗಿದಷ್ಟು ಚಿಕ್ಕವರಾಗುತ್ತೇವೆ.

18 ಆಗಸ್ಟ್ 2010

ಪ್ರವಾಸವೆಂಬ ಅರ್ಥವಿಲ್ಲದ ಮೋಜು!!!!

ಸುತ್ತಾಡುವುದು ಹುಟ್ಟಿನಿಂದಲೇ ನಮಗೆ ಬಂದಿರುವುದೋ ಅಥವಾ ಕಳೆದ ಜನುಮದಿಂದಲೂ ನಮ್ಮೊಂದಿಗಿರುಬಹುದೇ? ಬಹುಷಃ ನಮ್ಮ ಪೂರ್ವಜರ ಅನೇಕ ಗುಣಗಳು ನಮ್ಮಲ್ಲೇ ನಾಟಿರುತ್ತವೆ. ಇಂಥಹುದರಲ್ಲಿ, ಸುತ್ತಾಡುವುದು ಒಂದು. ಜನರು ಪ್ರಪಂಚ ಸುತ್ತುವುದರಿಂದ ಜ್ನಾನ ಬರುತ್ತದೆಂದು ಅದೆಷ್ಟೇ ವಾದಿಸಿದರೂ ಕೇವಲ ಸುತ್ತುವುದರಿಂದ ಅಥವಾ ಒಂದು ಊರಿಗೆ ಹೋದ ತಕ್ಷಣ ಆ ಊರಿನ ಅಲ್ಲಿನ ಜನತೆಯ ಬಗೆಗೆ ತಿಳಿದಿದ್ದೇವೆಂಬುದನ್ನು ಒಪ್ಪಲೂ ಸಾಧ್ಯವಿಲ್ಲ. ಅದೆಷ್ಟೋ ವರ್ಷ ಜೊತೆಗಿದ್ದು, ಜೊತೆಯಲ್ಲಿ ಹುಟ್ಟಿ ಬೆಳೆದ ಅಣ್ಣ ತಮ್ಮಂದಿರನ್ನು, ಅಕ್ಕ ತಂಗಿಯರನ್ನು, ಅಪ್ಪ ಅಮ್ಮಂದಿರನ್ನೇ ಏಕೆ, ಸ್ವತಃ ಹೆಂಡತಿಯನ್ನೇ ಅರಿಯಲಾಗದ ನಾವು ಒಂದೆರಡು ದಿನ ಸುತ್ತಾಡಿದ ಮಟ್ಟಿಗೆ ಬೇರೊಂದು ಊರಿನ ಬಗೆಗೆ ಇಷ್ಟುದ್ದ ಬರೆದು ಅಲ್ಲಿನ ಜನ ಹೀಗೆ, ಅಲ್ಲಿನ ಅದು ಹೀಗೆ ಇದು ಹೀಗೆ ಎನ್ನುವುದು ನನಗೇನೋ ಸಮಂಜಸವೆನಿಸುವುದಿಲ್ಲ. ಅದೇನೆ ಇರಲಿ, ನಾನಿಲ್ಲಿ ನಿಮಗೆ ಹೇಳ ಹೊರಟಿರುವುದು, ಸುತ್ತಾಟವೆಂಬುದು ಕೇವಲ ನಮ್ಮ ಒಂದು ಚಟ, ಮತ್ತು ಕೆಲವರಿಗದು, ಲೋಪ. ಯಾವುದೋ ಸುತ್ತಾಡುವ ಕೆಲಸಕ್ಕೆ ಸೇರಿ ನಾನು ದೇಶ ವಿದೇಶ ಸುತ್ತುತ್ತಿದ್ದೇನೆ, ನನಗೆ ಸುತ್ತಾಡುವುದೆಂದರೆ ಬಲು ಇಷ್ಟದ ಕೆಲಸ ಎನ್ನುವವರು ಬಹಳಷ್ಟು ಮಂದಿ ಸಿಗುತ್ತಾರೆ. ವಾಸ್ತವಕ್ಕೆ ನೋಡಿದರೇ, ಅವರಿಗೆ ಆ ಕೆಲಸ ಸಿಗದೇ ಹೋಗಿದ್ದರೆ? ಸುತ್ತಾಡುತ್ತಿರಲಿಲ್ಲವೇ? ಅದು ಇರಬಹುದು, ಇದು ಸಮಯದ ಕೈ ಗೊಂಬೆ ಎನ್ನುವುದನ್ನು ಬಿಟ್ಟು ಬೇರೇನೂ ಅಲ್ಲ. ಆದರೇ, ನಾನು ಹೇಳ ಹೊರಟಿರುವುದು, ಹುಟ್ಟಿನಿಂದಲೇ, ಅಥವಾ ಬಹಳ ಚಿಕ್ಕಂದಿನಿಂದಲೇ ಸುತ್ತಾಡುವುದನ್ನು ಬೆಳೆಸಿಕೊಂಡು ಬಂದ ನನ್ನಂಥಹ ಹುಟ್ಟು ಸೋಮಾರಿಗಳ ಬಗೆಗೆ. ಸುತ್ತಾಡುವುದು ಸೋಮಾರಿತನವೇ? ನನ್ನ ಪ್ರಕಾರ ಹೌದು ಅದು ಕಟುಸತ್ಯ, ನೀವು ನಂಬಿದರೂ ಸರಿ ಬಿಟ್ಟರೂ ಸರಿ.ನಾನು ನನ್ನ ಪ್ರೈಮರಿ ಸ್ಕೂಲಿನಲ್ಲಿದ್ದಾಗ, ಪ್ರತಿ ಶನಿವಾರ ಸಿಕ್ಕರೇ ಅಜ್ಜಿ ಮನೆಗೆ, ಅಲ್ಲಿಂದ ಸೈಕಲ್ ಹತ್ತಿ, ಹಾರಂಗಿ, ನಿಸರ್ಗ ಧಾಮ, ಕೊಪ್ಪ, ಹೀಗೆ ಎಲ್ಲೆಂದರಲ್ಲಿ ಸುತ್ತಾಡುತ್ತಿದೆ. ನಂತರ ಹೈಸ್ಕೂಲಿಗೆ ಬಂದಾಗ, ಸೈಕಲ್ ಹಿಡಿದು, ದೂರ ದೂರದ ಊರಿಗೆ ಹೋಗಿ ಬಿಡುತ್ತಿದೆ. ವರ್ಷಕ್ಕೊಮ್ಮೆ ದುಡ್ಡು ಜೋಡಿಸಿ ಕೊಂಡು, ಬೆಲೂರು, ಧರ್ಮಸ್ಥಳ, ಸುಬ್ರಹ್ಮಣ್ಯಗಳಿಗೆ ಒಬ್ಬನೇ ಹೋಗಿ ಬರುತ್ತಿದ್ದೆ. ಅದರ ನಡುವೆ ನೆಂಟರ ಮನೆಗಳ ನೆಪದಲ್ಲಿ ಹುಡುಕಿ ಹುಡುಕಿ ಹೋಗುತ್ತಿದೆ.


ಇ ಎಲ್ಲಾ ನನ್ನ ಪ್ರವಾಸಗಳಲ್ಲಿಯೂ ನನಗೆ ಅಕ್ಕರೆ ಇದ್ದದ್ದು ನೆಂಟರ ಮೇಲಲ್ಲ? ಮನೆಯಲ್ಲಿದ್ದರೆ ಬೋರಾಗುತ್ತದೆ, ಅಪ್ಪ ಬೈಯ್ಯುತ್ತಾರೆ, ಇಲ್ಲವೆ ಏನಾದರು ಕೆಲಸ ಹೇಳುತ್ತಾರೆ, ಎಂಬುದರಿಂದ ಹೋಗುತ್ತಿದೆ. ನೆಂಟರ ಮನೆಗೆ ಊಟದ ಸಮಯ ಬಿಟ್ಟರೇ ಮಿಕ್ಕ ಸಮಯ ಮತ್ತೆ ಸುತ್ತಾಡೂವುದರಲ್ಲಿಯೇ ಕಳೆಯುತ್ತಿತ್ತು. ಈಗಲೂ ಅಷ್ಟೇ ನಾನು ಮತ್ತು ನನ್ನ ಸ್ನೇಹಿತರು ತಿಂಗಳಿಗೊಮ್ಮೆಯಾದರೂ ಒಂದು ಚಾರಣ, ಅಥವಾ ಒಂದು ಲಾಂಗ್ ರೈಡ್ ಹೋಗಲೇ ಬೇಕೆಂದು ಹೊರಡುತ್ತೇವೆ. ನಾವು ಅಲ್ಲಿ ನೋಡಿ ಅದರ ಬಗ್ಗೆ ಬರೆದು ಅಥವಾ ಅನುಭವಿಸುವುದು ಅಷ್ಟಕ್ಕಷ್ಟೇ. ಸುಮ್ಮನೆ ಮನೆಯಲ್ಲಿ ಕುಳಿತಿರಲಾಗದೇ ಅಲ್ಲಿಗೆ ಹೋಗಿ ಬರಲು, ಹೋಗುವ ಮುನ್ನ ಸಮಯ ಹರಣ ಮಾಡುವುದು ಹೋಗಿ ಬಂದಮೇಲೆ, ಮತ್ತೆ ಸಮಯ ಹರಣ ಮಾಡುವುದು. ಹೋಗುವು ಮುನ್ನ ತಯಾರಿ ಕುರಿತು ಮಾತುಕತೆ, ಹೋಗಿ ಬಂದ ಮೇಲೆ, ಅದರ ಕುರಿತು ಚರ್ಚೆ, ಒಟ್ಟಾರೆಸಮಯ ಕೊಲ್ಲುವುದನ್ನು ಬಿಟ್ಟರೆ ಮಿಕ್ಕಾವುದು ನನ್ನಲ್ಲಿ ಕಂಡಿಲ್ಲ. ಅಂದರೇ ಪ್ರವಾಸ ಹೋಗುವುದು ತಪ್ಪಾ? ತಪ್ಪಿಲ್ಲವೇ ಇಲ್ಲ ಆದರೇ ಅದಕ್ಕೊಂದು ಉದ್ದೇಶವಿರಬೇಕು. ಸುಮ್ಮನೆ ಸಮಯ ವ್ಯರ್ಥ ಮಾಡುವುದೆ ಉದ್ದೇಶವಾಗಿರಬಾರದು, ಅಥವಾ ಕೇವಲ ಅಲ್ಲಿ ಹೋಗಿ ಮೋಜು ಮಾಡಿ ಬರುವುದೇ ನಮ್ಮಯ ಕೆಲಸವಾದರೇ ಅದು ಪ್ರವಾಸವೂ ಅಲ್ಲ ಅದರಿಂದ ನಾಗರೀಕ ಸಮಾಜಕ್ಕೆ ಒಳಿತು ಇಲ್ಲ. ನಾವು ಹೋಗಿ ನೋಡಿ ಬಂದಿರುವುದನ್ನು, ದಾಖಲಿಸಿಕೊಂಡು ಸಮಾಜಕ್ಕೆ ಕೊಟ್ಟರೆ ಮತ್ತೆ ನಾಲ್ವರಿಗೆ ಅದರ ಬಗೆಗೆ ಮಾಹಿತಿ ಸಿಕ್ಕಿ ಉಪಯೋಗವಾಗ ಬಹುದು, ಆದರೆ ಇತ್ತೀಚಿನ ದಿನಗಳಲ್ಲಿ ಅನಾಹುತವೇ ಹೆಚ್ಚಾಗುತ್ತಿವೆ. ಚಾರಣದ ಹೆಸರಿನಲ್ಲಿ ಹೋದವರು, ಕುಡಿದು ಸೇದಿ, ಅಲ್ಲಿದ್ದ ಪರಿಸರವನ್ನು ಸರ್ವನಾಶದತ್ತ ತಲ್ಲಿದರೇ, ಇನ್ನೂ ಪ್ರವಾಸಿ ತಾಣಗಳು, ಶಯನಗೃಹಗಳಾಗಿವೆ. ಕೆಲವೊಂದು ಸ್ಥಳಗಳಲ್ಲಿ, ದಾರಿಯಲ್ಲಿಯೇ ನಿರೋಧ್ ಗಳು ಬಿದ್ದಿರುತ್ತವೆ, ಕುಡಿದು ಒಡೆದ ಗಾಜಿನ ಚೂರುಗಳು, ಸಿಗರೇಟ್ ಪ್ಯಾಕ್ ಗಳು, ಪ್ರವಾಸಿ ತಾಣ ಎನ್ನಲೂ ಹಿಂಜರಿಕೆಯಾಗುವಷ್ಟು ಹಾಳು ಮಾಡಿರುತ್ತಾರೆ.


ನಾನು ಬಹಳಷ್ಟು ಬಾರಿ, ಇದಕ್ಕೆಲ್ಲಾ ಪರಿಹಾರ ಬೇಡವೇ ಎಂದು ಆಲೋಚಿಸಿದ್ದೇನೆ, ಉತ್ತರ ಸಿಗುವುದೆಲ್ಲಿ? ನಾವು ಬದುಕುತ್ತಿರುವ ಈ ಕೊಳಕು ವ್ಯವಸ್ಥೆಯನ್ನು ಸರಿ ದಾರಿಗೆ ತರುವ ಮಾರ್ಗ ಒಂದು ಇದೆಯಾ?ಇದ್ದರೇ ಅದು ಯಾವುದು?ನಮ್ಮಂಥಹ ಹುಚ್ಚು ಮನಸ್ಸಿನ ಮೂರ್ಖರು ಸುತ್ತಾಡಿ ಅಲ್ಲಿರುವ ಲೋಪ ದೋಷಗಳನ್ನು ನಮ್ಮೊಳಗೆ ನಮ್ಮದೇ ಆದ ಸೀಮಿತ ವರ್ಗದಲ್ಲಿ ಚರ್ಚಿಸಿ ಕೆಲವೊಮ್ಮೆ ಕೊರಗಿ ನಂತರ ಬದಲಾಯಿಸಲಾಗುವುದಿಲ್ಲವೆಂದು ಅಥವ ಅದರ ಬಗೆಗೆ ಚರ್ಚಿಸಿ ನಮ್ಮ ಸಮಯ ಹರಣ ಮಾಡಿಕೊಳ್ಳುವುದು ಬೇಡವೆಂದು ಕುಳಿತುಬಿಡುತ್ತೇವೆ. ಪ್ರತಿಯೊಂದು ಚಳುವಳಿಯ ಹಿಂದೆ ಹೋರಾಟದ ಹಿಂದೆ ಇಂಥಹ ಬೇಸತ್ತ, ಬಳಲಿದ ನೂರಾರು ಮನಸ್ಸುಗಳು ಕೆಲಸ ಮಾಡಿರುತ್ತವೆ. ಅಂದರೆ ನಾಳೆ ನಾವೂ ಕೂಡ ಅದೇ ರೀತಿ ಚಳುವಳಿ ಮಾಡುತ್ತೇವೆ! ನನಗೆ ಇದರಲ್ಲಿ ಅಲ್ಪ ಸ್ವಲ್ಪವೂ ನಂಬಿಕೆ ಇಲ್ಲ. ನಾವೆಂದು ಚಳುವಳಿ ಮಾಡುವುದಿಲ್ಲ, ಮಾಡುವುದಕ್ಕೆ ವಿಷಯಗಳೇ ಇಲ್ಲ, ನಾವು ಯಾರ ವಿರುದ್ದ ಹೋರಾಡಬೇಕೆಂಬುದೇ ದೊಡ್ಡ ಸಮಸ್ಯೆ. ಅದೇನೆ ಇರಲಿ, ಈಗ ಮಾತು ಬದಲಾಯಿಸುವುದು ಬೇಡ, ನಾನು ಪರ್ಯಟಣೆಯ ಬಗೆಗೆ ಮಾತನಾಡುತ್ತಿದ್ದೆನೆ. ಅದರ ಬಗ್ಗೆ ಕೆಲವು ಆಶ್ಚರ್ಯಕರ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು. ನಾನು, ಬಹಳಷ್ಟು ಬಾರಿ ಬಸ್ಸಿನಲ್ಲಿ, ಬೈಕಿನಲ್ಲಿ, ಮತ್ತು ಚಾರಣದ ಹೆಸರಿನಲ್ಲಿ ಕಾಲ್ನಡಿಗೆಯಲ್ಲಿ ಸುತ್ತಾಡಿದ್ದೇನೆ. ಕೆಲಸದ ನಿಮಿತ್ತ ಹಲವಾರು ಊರುಗಳಿಗೆ ಹೋದಾಗ ನಡೆದ ಮತ್ತು ನಡೆಯುತ್ತಿರುವ ವಿಷಯಗಳು ಬಹಳಷ್ಟು ಬಾರಿ ಬೇಸರ ತರಿಸುತ್ತವೆ. ಇದಕ್ಕೆ, ಸೂಕ್ತ ಉದಾಹರಣೆ, ದಕ್ಷಿಣ ಕನ್ನಡ ಜಿಲ್ಲೆಗೆ ಒಮ್ಮೆ ಬೈಕಿನಲ್ಲಿ ನಾವು ಹೋಗಿ ಬಂದದ್ದು. ಸುಬ್ರಹ್ಮಣ್ಯ, ಧರ್ಮಸ್ಥಳ, ಸುತ್ತಾಡಿ ಬರಲೆಂದು ಬೈಕಿನಲ್ಲಿ ಹೋದಾಗ ಅಲ್ಲೇ ಇರುವ ಕೆಲವು ಜಲಪಾತಗಳನ್ನು ನೋಡಿ ಬರುವಂತೆ ನಿರ್ಧರಿಸಿದೆವು. ಅಲ್ಲಿರುವ ಸ್ಥಳಿಯರಿಗೆ ಆ ಸ್ಥಳಗಳ ಬಗ್ಗೆ ಮಾಹಿತಿಯೇ ಇರಲಿಲ್ಲ. ಆದರೇ ನಾವು ಮಾತನಾಡಿಸಿದ ಪ್ರತಿಯೊಬ್ಬನೂ ಬೆಂಗಳೂರಿನ ಬಗ್ಗೆ ಬಹಳಷ್ಟು ತಿಳಿದುಕೊಂಡಿದಾರೆಂಬುದು ನಿಜಕ್ಕೂ ವಿಷಾದ. ಜನಕ್ಕೆ ಪಟ್ಟಣದೆಡೆಗೆ ಹೆಚ್ಚುತ್ತಿರುವ ಮೋಹ ಹೇಳತೀರದು. ಅಲ್ಲಿರುವ ವಿಷಯಗಳ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ವಸ್ತು ಪ್ರಧಾನ ಜೀವನದತ್ತ ಹೆಚ್ಚು ಒಲವು ತೋರುತಿದ್ದಾರೆ. ಅವರು ಒಳ್ಳೆಯ ಮೊಬೈಲ್ ಬಳಸುವುದು, ಡಿವಿಡಿ, ಐಪೋಡ್ ಬೇಡವೆಂದು ನಾನು ಹೇಳುವುದಿಲ್ಲ. ಆದರೆ, ಕನಿಷ್ಟ ಊರಿನಿಂದ ಹತ್ತಾರು ಮೈಲಿಗಳಲ್ಲಿರುವ ವಿಸ್ಮಯ ಸ್ಥಳಗಳ ಬಗೆಗೆ ತಿಳಿದಿರುವುದಿಲ್ಲ ಇದು ನಿಜಕ್ಕೂ ಶೋಚನಿಯ. ಇದಕ್ಕೆ ಕಾರಣ ಕೇವಲ ಉಢಾಫೆತನ ಮಾತ್ರವಲ್ಲ ಅಲ್ಲಿನ ಜನರ ಪೈಕಿ ಹೆಚ್ಚು ಜನರು ಕೇರಳದಿಂದ ಬಂದವರು. ನಮ್ಮಲ್ಲಿ ಅದೆಷ್ಟೇ ವರ್ಷ ಒಂದು ಸ್ಥಳದಲ್ಲಿ ಬೆಳೆದರೂ ಜೀವಿಸಿದರೂ ಕೂಡ ನಮ್ಮ ತಾತನೋ ಮುತ್ತಾತನ ಊರನ್ನು ನೆನೆದು ಹೆಮ್ಮೆ ಪಡುವುದೇ ಹೆಚ್ಚು. ಇರುವ ಭೂಮಿಯನ್ನು ಪ್ರೀತಿಸುವುದನ್ನು ಕಲಿಯಲೇ ಇಲ್ಲ. ಕರ್ನಾಟಕದಲ್ಲಿ ೩೦-೪೦ ವರ್ಷ ಬದುಕಿದ್ದರೂ, ಕನ್ನಡ ಮಾತನಾಡಲು ಹಿಂಜರಿಯುತ್ತಾರೆ. ಎಂಥಹ ವಿಪರ್ಯಾಸವೆನಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆ, ನಾವು ತಿಳಿದಂತೆ ಶಿಕ್ಷಣದಲ್ಲಿ ಮುಂದುವರೆದಿದೆ ಎನ್ನುವುದನ್ನು ಬಿಟ್ಟರೆ, ಅತಿ ಹೆಚ್ಚು ಸಮಸ್ಯೆಗಳು ಕಾಣುವುದು ಇಲ್ಲೆ. ಮೊದಲನೆಯದು ಭಾಷೆಯ ತಾರತಮ್ಯ, ಕನ್ನಡ,, ತುಳು, ಕೊಂಕಣಿ, ಮಲಯಾಳಂ, ಹೀಗೆ ನಾಲ್ಕಾರು ಭಾಷೆಗಳು ಸೇರಿ ಕನ್ನಡದ ಸೊಬಗು ಸಿಗುವುದೇ ಇಲ್ಲ. ಎರಡನೆಯದಾಗಿ, ಧರ್ಮ, ಕ್ರೈಸ್ತ, ಮುಸ್ಲಿಂ, ಹಿಂದು ಧರ್ಮಗಳ ಪೈಪೋಟಿ ಎಷ್ಟಿದೆಯೆಂದರೇ ಪ್ರತಿಯೊಂದು ಊರನಲ್ಲಿಯೂ ಅವರವರ ಧರ್ಮದ ಭಾವುಟಗಳು, ಬ್ಯಾನರ್ ಗಳು, ಪೋಸ್ಟರಗಳು, ರಾರಾಜಿಸುತ್ತಿರುತ್ತವೆ. ಅದು ಅಲ್ಲದೇ ಯಾವ ಕ್ಷಣದಲ್ಲಿ ಬೇಕಾದರು ಧರ್ಮೀಯ ಗಲಭೆಗಳು ಆಗಬಹುದು. ಮೂರನೆಯದಾಗಿ, ಜನರು ನೈಸರ್ಗಿಕ ಸಂಪತ್ತನ್ನು ನುಂಗಿ ನೀರು ಕುಡಿದು ಆಗಿದೆ. ಶುಂಠಿ ಬೆಳೆದು ಭೂಮಿ ನಾಶವಾಗಿದೆ, ರಬ್ಬರ್ ಬೆಳೆಯುತ್ತಾ ಜನರು ಸೋಮಾರಿಗಳಾಗಿದ್ದಾರೆ. ಭತ್ತ ಬೆಳೆಯುವುದನ್ನೇ ಮರೆತು ಕೊಂಡು ತಿನ್ನುತ್ತಿದ್ದಾರೆ. ಇದಕ್ಕೆಲ್ಲಾ ಪರಿಹಾರವೇನು? ಸಮಾಜ ಎತ್ತ ಸಾಗುತ್ತಿದೆ, ನಿಸರ್ಗದ ಗತಿ ಏನು? ಉತ್ತರ ಸಿಗದ ಪ್ರಶ್ನೆಗಳ ಮಹಾಪೂರ ನಮ್ಮೊಂದಿಗಿದೆ.


ಚಾರ್ಮಾಡಿ ಘಾಟಿನಲ್ಲಿ ಬರುವಾಗ ನಿಮಗೆ ಕಣ್ಣಿಗೆ ಬೇಕಾದಷ್ಟು, ಝರಿಗಳು ಸಿಗುತ್ತವೆ, ಕೆಲವೊಂದು ಜಲಪಾತಗಳು ಕಾಣಸಿಗುತ್ತವೆ. ಅವೆಲ್ಲವೂ ರಸ್ತೆಯ ಬದಿಯಲ್ಲಿಯೇ ಇರುವುದರಿಂದ ಅಲ್ಲಿ ಆಟ ಆಡುವುದು ಸರ್ವೇ ಸಾಮಾನ್ಯ ಆದರೇ ಜನರು ತಾವು ಧರಿಸಿರುವ ಉಡುಪುಗಳ ಬಗೆಗೆ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ. ಹುಡುಗಿಯರ ಮನ ಬಂದಂತೆ ಪ್ರಚೋದನಕಾರಿ ಉಡುಪುಗಳೊಂದಿಗೆ ರಸ್ತೆಯಲ್ಲಿ ಕುಣಿದು ಕುಪ್ಪಳಿಸುವುದು ಅಷ್ಟು ಸಮಂಜಸವೆನಿಸುವುದಿಲ್ಲ. ಹಾಗೆಯೇ ಮುಂದುವರೆದರೆ, ದಾರಿ ಉದ್ದಕ್ಕೂ ಕುಡಿಯುವುದು, ಮಾಂಸ ಬೇಯಿಸುತ್ತಾ ಇರುವುದು ಕಾಣುತ್ತದೆ. ಈ ಪ್ರದೇಶವು ಅರಣ್ಯ ಇಲಾಖೆಗೆ ಸೇರಿದ್ದು, ಕಾಯ್ದಿಟ್ಟ ಅರಣ್ಯವಾದರೂ ಒಬ್ಬನೇ ಒಬ್ಬ ಅರಣ್ಯ ಇಲಾಖೆ ಸಿಬ್ಬಂದಿ ನಿಮ್ಮ ಕಣ್ಣಿಗೆ ಕಾಣುವುದಿಲ್ಲ. ನಮ್ಮ ಜನರೂ ಕುಡಿದು, ಕುಣಿದು ಮೋಜು ಮಾಡುವುದು, ಅಲ್ಲಿಯೇ ಬೇಯಿಸುವುದು, ಪರಿಸರದಲ್ಲಿ ಎಲ್ಲ ತ್ಯಾಜ್ಯಗಳು ಹಾಕಿ ಗಲೀಜು ಮಾಡುವುದು ಅಸಹ್ಯಕರವೆನಿಸುತ್ತದೆ. ಅವರು ಕುಡಿದರೂ, ಮೋಜು ಮಾಡಿದರೂ ಅಲ್ಲಿನ ಪರಿಸರಕ್ಕೆ ಧಕ್ಕೆ ತರದೇ, ಗಲೀಜು ಮಾಡದೇ, ಪರಿಸರ ಸಂರಕ್ಷಣೆ ಬಗೆಗೆ ಸ್ವಲ್ಪ ಕಾಳಜಿ ವಹಿಸಿದರೇ ಹೆಮ್ಮೆ ಪಡಬಹುದಿತ್ತು. ಕುಡಿದು ದಾರಿಯಲ್ಲಿ ಬಾಟಲಿ ಒಡೆಯುವುದು, ಕೂಗಾಡುವುದು, ಇವೆಲ್ಲವನ್ನು ನೋಡಿದರೆ ನಾಗರೀಕತೆಯ ಬಗೆಗೆ ಜನರಲ್ಲಿರುವ ವಿಶ್ವಾಸ ಅಧಿಕವೆನಿಸುತ್ತದೆ. ಇದೆಲ್ಲವೂ ನಡೆಯುತ್ತಿದ್ದದ್ದು, ಸ್ವಾತಂತ್ರ್ಯ ದಿನಾಚರಣೆಯ ದಿನ. ಅಲ್ಲಿ ಬಂದಿದ್ದ ಪ್ರತಿಯೊಬ್ಬರೂ, ಕಾರಿನಲ್ಲಿ, ಜೀಪಿನಲ್ಲಿ ಅಥವಾ ಬೈಕುಗಳಲ್ಲಿ, ಇಸ್ಟೆಲ್ಲಾ ಇರುವ ವಿದ್ಯಾವಂತ ಮಂದಿ ಏಕೆ ಹೀಗೆ ನಡೆದುಕೊಳ್ಳುತ್ತಾರೆ? ಕೊನೆಯಿಲ್ಲದ ಪ್ರಶ್ನೆ.


ಇದರಂತೆಯೇ, ಕಳೆದ ತಿಂಗಳು, ಬಿಸಿಲೆ ಘಾಟಿನಲ್ಲಿ ಹೋಗುತ್ತಿರುವಾಗ, ರಸ್ತೆಯ ಬದಿಯಲ್ಲಿ ಸಾಲು ಸಾಲು ನಿರೋಧ್ ಗಳು ಬಿದ್ದಿದ್ದವು. ನಾನು ನನ್ನ ಸ್ನೇಹಿತರು ನೋಡಿ ಅಚ್ಚರಿ ಆಯಿತು. ಅಲ್ಲಿ ಬಿದ್ದದ್ದು ಕನಿಷ್ಟ ಎಂದರೂ ೧೦-೧೨ ನಿರೋಧ್ ಗಳು, ಅಂದರೆ ಗುಂಪು ವ್ಯಕ್ತಿಗಳು ಹೋಗಿ ರಸ್ತೆ ಬದಿಯಲ್ಲಿ ಅನಾಗರಿಕತೆಯ ಪ್ರದರ್ಶನ ಮಾಡಿದ್ದಾರೆ. ಮಾಡಿ ಹೋದ ಮಹನೀಯರು ಕನಿಷ್ಟ ಪಕ್ಷ ಕಾಡಿನೊಳಕ್ಕೆ ಹಾಕಿದರೂ ಅಥವಾ ತೆಗೆದುಕೊಂಡು ಹೋದರೂ ಅಲ್ಪ ಸ್ವಲ್ಪ ಸುಧಾರಿಸಿಕೊಳ್ಳಬಹುದು. ಈ ರೀತಿಯ ವರ್ತನೆಯಿಂದಾಗಿ, ಮುಂದೆ ಹೋಗುವ ಜನರಿಗೆ, ಆ ಕಡೆಗೆ ಹೋಗುವುದೇ ಬೇಡವೆನಿಸುತ್ತದೆ ಇಲ್ಲದಿದ್ದರೆ ನಾವು ಈ ರೀತಿ ಯಾಕೆ ಮಾಡಬಾರೆದೆನಿಸುತ್ತದೆ. ಕಾಡಿನಲ್ಲಿ, ಕುಡಿಯುವವರ ಸೇದುವವರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಇದು ಬಹು ಮುಖ್ಯ ಕಾರಣ. ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಅನೇಕ ಪ್ರವಾಸಿ ತಾಣಗಳ ಪರಿಸ್ತಿತಿ ಇಂಥಹದ್ದೇ ಆಗಿದ್ದೆ. ಅದಕ್ಕು ಸೂಕ್ತ ಉದಾಹರೆಣೆಗಳು, ಕೊಡಗಿನ ಅನೇಕಾ ತಾಣಗಳು. ಬಹುಮುಖ್ಯವಾಗಿ, ಮಂದಾಳ ಪಟ್ಟೆ ಅಥವಾ ಗಾಳಿಪಟ ಚಿತ್ರದ ಮುಗಿಲ್ ಪೇಟೆ, ದುಬಾರೆ, ನಿಸರ್ಗಧಾಮ, ಪುಷ್ಪಗಿರಿ, ಮಲ್ಲಲ್ಲಿ ಜಲಪಾತ, ಬಿಸಿಲೆ, ಚಾರ್ಮಾಡಿ, ಕೆಮ್ಮಣ್ಣುಗುಂಡಿ ಇನ್ನು ಹಲವಾರಿವೆ. ಹಾಗೆಯೇ ನಾವು ಸುಳ್ಯಾ ಬಳಿಯಲ್ಲಿದ್ದ ದೇವರಗುಂಡಿ ಜಲಪಾತಕ್ಕೆ ಹೋಗಲು ನೋಡಿದಾಗಲೂ ಅಷ್ಟೇ, ಕೆಲವು ದಿನಗಳ ಹಿಂದೆ ಅಲ್ಲಿ ಯಾರೋ ಇಬ್ಬರು ಬಂದು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಆ ಊರಿನ ಜನರು ಜಲಪಾತದ ಕಡೆಗೆ ಸುಲಭವಾಗಿ ಬಿಡುತ್ತಿರಲಿಲ್ಲ. ಯಾರೊ ಒಬ್ಬಿಬ್ಬರು ಮಾಡುವ ಇಂಥ ಕೃತ್ಯಗಳಿಂದಾಗಿ ಹಲವಾರು ಜನರಿಗೆ ತೊಂದರೆ ಉಂಟಾಗುತ್ತದೆ. ಕೆಲವು ಸ್ಥಳಗಳಲ್ಲಿ, ಕೊಲೆ ದರೋಡೆ ಇರುವುದು ಬಹಳ ಬೇಸರದ ಸಂಗತಿ. ಹಾಸನದಿಂದ ನಮ್ಮೂರಿಗೆ ಹೋಗುವ ಹಾದಿಯಲ್ಲಿ ಸ್ವಲ್ಪ ಕಾಡು ಇರುವುದರಿಂದ ಸಂಜೆ ಆರರ ನಂತರ ಬೈಕಿನಲ್ಲಿ ಓಡಾಡುವವರನ್ನು ಹಿಡಿದು ಸುಳಿಗೆ ಮಾಡುತ್ತಿದ್ದಾರೆ. ಸಮಾಜ ಎಲ್ಲಿಗೆ ನಮ್ಮನ್ನು ನಡೆಸುತ್ತಿದೆ ಎನಿಸುತ್ತದೆ.


ಇನ್ನೂ ಕೆಲವು ಊರುಗಳಲ್ಲಿ ಹೊರಗಿನವರು ಎಂದರೆ ಒಂದಕ್ಕೆ ಎರಡು ಬೆಲೆ ಕಟ್ಟುತ್ತಾರೆ. ಕಂಪ್ಲಿಗೆ ಹೋದಾಗ, ಮಾಮುಲಿ ಊಟ ಮಾಡಿ ಬರುವಾಗ, ನಾಲ್ಕು ಜನಕ್ಕೆ ೫೦೦ ರೂಪಾಯಿ ಆಗಿತ್ತು. ಜನ ಇಷ್ಟೊಂದು ಮೋಸ ಮಾಡುವುದಾದರೂ ಏಕೆ ಎನಿಸುತ್ತದೆ. ಹೊರಗಿನವರನ್ನು ಸುಳಿದು ಹಣ ಮಾಡುವುದರಿಂದಲೇ ಜನ ಪ್ರವಾಸವೆಂದರೇ ಬೇಡಪ್ಪ ಎಂದು ಬಿಡುತ್ತಾರೆ.ನಾನು ಒಮ್ಮೆ ಸಾವನದುರ್ಗಕ್ಕೆ ಹೋದಾಗ ಅಲ್ಲಿದ್ದ ಒಬ್ಬ ಸಿಬ್ಬಂದಿ ಸಾರ್ ಒಬ್ಬರೇ ಬಂದರೆ ಏನಿರುತ್ತೆ ಇಲ್ಲಿ, ಜೊತೆಯಲ್ಲಿ ಕರೆದುಕೊಂಡು ಬಂದರೇ......! ಎಂದ. ನಾನು ನಿಜಕ್ಕೂ ತಬ್ಬಿಬ್ಬಾದೆ, ಜನರು ಪ್ರವಾಸಿ ತಾಣಕ್ಕೆ ಬರುವ ಉದ್ದೇಶ ಇದೇನಾ? ನೀವು ಸಾವನದುರ್ಗಕ್ಕೆ ಹೋದರೇ, ಅಲ್ಲಿನ ಉದ್ಯಾನವನ ದಾಟಿ ಮುಂದಕ್ಕೆ ಹೋಗವಾಗ ಅಲ್ಲಿನ ಸಿಬ್ಬಂದಿ ಇರುತ್ತಾನೆ, ಅವನು ಯಾವ ತಲೆ ಹಿಡುಕನಿಗೂ ಕಡಿಮೆಯಾಗಿ ವರ್ತಿಸುವುದಿಲ್ಲ. ಇದಕ್ಕೆ ಹೊಂದುವ ಮತ್ತೊಂದು ಸ್ಥಳವೇ ಎಡಕುಮೆರಿ, ಸಕಲೇಶಪುರದಿಂದ ರೈಲು ಹಳಿಗಳಿಂದ ಚಾರಣಕ್ಕೆ ನಡೆದು ಹೋದರೇ, ಸಿಗುವ ಒಂದು ನಿಲ್ದಾಣವೇ ಈ ಎಡುಕುಮೆರಿ, ಅಲ್ಲಿಗೆ ನಾವು ಐದು ಮಂದಿ ಬಹಳ ದಿನದ ಹಿಂದೆ ಹೋಗಿದ್ದೆವು. ಅಲ್ಲೊಬ್ಬ ಕುಮಾರ್ ಎನ್ನುವು ಸಿಬ್ಬಂದಿ ನಮ್ಮ ಜೊತೆಗೆ ನಡೆದುಕೊಂಡದ್ದು, ಮತ್ತೊಂದು ಅಸಹ್ಯಕರದ ಘಟನೆ. ನಗರದಲ್ಲಿರುವ ಬಹಳಷ್ಟು ಮಂದಿಗೆ ಪರಿಸರ ನಿಸರ್ಗವೆಂದರೆ ಅಲ್ಲಿರುವ ಹಸಿರು, ಅಪರೂಪಕ್ಕೊಮ್ಮೆ ಸಿಗುವ ಕೆಲವು ಪ್ರಾಣಿಗಳನ್ನು ಕಂಡು ಉಲ್ಲಾಸಗೊಳ್ಳುತ್ತಾರೆ. ಹೊರಗಡೆ ಹೋದಾಗ ಜೊತೆಗೊಂದು ಸಂಗಾತಿ ಇದ್ದರೇ ಮುಗಿದೇ ಹೋಯಿತು. ನಮ್ಮಲ್ಲಿ ಅನೇಕ ಹೆಂಗಳೆಯರು, ಹೊರಗೆ ಹೋಗುವಾಗ ಜೀನ್ಸ್, ಹಾಕುವುದು ಟಿ-ಶರ್ಟ್ ಧರಿಸುವುದು ಸ್ವಲ್ಪ ಸಾಮಾನ್ಯ. ಸದಾ ಮಾಮೂಲಿ ಉಡುಪಿನವರನ್ನೆ ಕಾಣುವ ಕುಮಾರಣ್ಣನಂತವರು ಅಪರೂಪಕ್ಕೆ ದಿವ್ಯ ಸೌಂದರ್ಯ ಕಂಡಾಗ, ಕಾಮದೇವನನ್ನು ಮೈಮೇಲೆ ತಂದುಕೊಳ್ಳುತ್ತಾರೆ. ನಾವು ತೆಗೆದುಕೊಂಡು ಹೋದ ಕೋಳಿ ಸ್ವಲ್ಪ ವಾಸನೆ ಬಂದು ಇದನ್ನು ಎಸೆಯುವುದು ಉತ್ತಮೆವೆನ್ನುವ ಸಮಯಕ್ಕೆ ನಮ್ಮ ಬಳಿಗೆ ಬಂದ ಕುಮಾರಣ್ಣ, ನಾನು ನಿಮಗೆ ಡೈರೆಕ್ಷನ್ ಮಾಡುತ್ತೇನೆಂದ. ಮೊದಲಿಗೆ ಸ್ವಲ್ಪ ಗೊಂದಲವಾದರೂ, ಅವನು ನಮಗೆ ನೀಡಬಯಸುತ್ತಿರುವುದು ಮಾರ್ಗದರ್ಶನವೆಂದಾಯಿತು. ನಮ್ಮಲ್ಲಿದ್ದ, ಕೋಳಿ, ಸಾಂಬಾರ ಪದಾರ್ಥಗಳು, ಅಕ್ಕಿ ಎಲ್ಲವನ್ನು ಅವನ ಕೈಗೆ ಒಪ್ಪಿಸಿದೆವು, ನಾಳೆ ಬೆಳ್ಳಿಗ್ಗೆ ನಮಗೆ ಅವಾವುದರ ಅವಶ್ಯಕತೆ ಇರಲಿಲ್ಲ. ಹಾಗೆಯೇ, ನಾವು ನಡೆದು ನಡೆದು ಸುಸ್ತಾಗಿದ್ದರಿಂದ, ನಮಗೆ ಕುಡಿಯುವ ಉತ್ಸಾಹವೂ ಇರಲಿಲ್ಲ. ಅವನು ನಮಗೆ ಸಹಾಯ ಮಾಡುತ್ತಿರುವುದರಿಂದ ಅವನಿಗೆ ಸ್ವಲ್ಪ ಕೊಡೋಣವೆಂದುಕೊಂಡೆ. ಮೊದಲಿಗೆ ಸ್ವಲ್ಪ ಕೊಟ್ಟು ಕಳುಹಿಸಿದೆ. ನಂತರ ಬಂದವನು, ಅದನ್ನು ಮತ್ತಾರೋ ಕುಡಿದರು, ಇನ್ನು ಸ್ವಲ್ಪ ಕೊಡಿ ಎಂದ. ನಾನು ಮತ್ತೆ ಕೊಡುವಾಗ, ಇದಕ್ಕೆ ನೀವು ನೀರು ಬೆರೆಸಿದ್ದಿರಿ ಎಂದ ನಾನು ಇಲ್ಲ ಎಂದೆ. ಇದರಲ್ಲಿ ಸ್ವೀಟು ಇದೆ ಎಂದ. ಅಂದರೆ ಪೆಪ್ಸಿ ಬೆರೆಸಿದ್ದೀನಿ ಎಂದಾಯಿತು. ಮೊದಲೆ ಕೋಪದಲ್ಲಿದ್ದ ನಾನು, ರೇಗಲು ಹೋಗದೇ ಅವನನ್ನು ಅಲ್ಲಿಯೇ ನಿಲ್ಲಿಸಿ, ನನ್ನ ಕೈಲಿದ್ದ ಅಷ್ಟೂ ಎಣ್ಣೆಯನ್ನು ಕುಡಿಯುವಂತೆ ಪುಸಲಾಯಿಸಿದೆ. ನನಗೆ ನಂದ ಸಾಥ್ ಕೊಟ್ಟು, ಕುಮಾರಣ್ಣನನ್ನು ಸಂಪೂರ್ಣ ಒಲ್ಡ್ ಮಂಕ್ ಗೆ ಶರಣು ಮಾಡಿಸಿದೆವು.


ನಂತರ ಶುರುವಾದದ್ದು, ಕುಮಾರಣ್ಣನ ಕಥಾ ಮಂಜರಿ, ಅವನ ಬಾಯಿಯಿಂದ ಮಾತುಗಳು, ಎಂಥವರನ್ನು ಬೆಚ್ಚಿ ಬೀಳಿಸಿಬೀಡುತ್ತಿದ್ದವು. ಅವನು ಒಲ್ಡ್ ಮಂಕ್ ಮಹಿಮೆಯಿಂದ ಅವನ ಹಿರಿಯ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಬೈಯ್ದ, ಅದರಿಂದ ಒಂದು ಸುತು ಒದೆ ತಿಂದ, ನಂತರ ಬೇರೆ ತಂಡದ ಕೆಲವು ಹುಡುಗಿಯರು ಮಲಗಿರುವ ಸ್ಥಳಕ್ಕೆ, ಹೋಗಿ ಮಾಡಬಾರದ್ದು ಮಾಡಲೆತ್ನಿಸಿ ಒದೆ ತಿಂದ. ಅವನಿಗೇನು ಕಮ್ಮಿ ಇಲ್ಲವೆನ್ನುವಂತೆ ಮತ್ತೊಬ್ಬ ಸಿಬ್ಬಂದಿ ಬಿಟ್ಟ ಬೊಗಳೆ ಅಷ್ಟಿಷ್ಟಲ್ಲ. ಸ್ಟೇಷನ್ ನಲ್ಲಿ ಮಲಗುವ ಚಾರಣಿಗರನ್ನು, ಮನೆಗೆ ಬಂದು ಮಲಗಿ ಎಂದು ಹೇಳಿ ಕರೆದುಕೊಂಡು ಹೋಗಿ, ನಂತರ ೫೦೦-೧೦೦೦ರೂ ಗಳ ತನಕ ವಸೂಲಿ ಮಾಡುತ್ತಾನೆ. ವಿಚಿತ್ರವೆಂದರೇ ಅವನಿಗೆ ಸಂಬಳ ೨೫ಸಾವಿರ ರೂಗಳು.ಇದೆಂಥಹ ದುರಾಸೆ ಎನಿಸುತ್ತದೆ. ಸರ್ಕಾರಿ ಸಂಬಳ ಪಡೆದು ಭಿಕ್ಷೆ ಬೇಡುವ ಬದುಕು ಬೇಕಾ? ಅದರಂತೆಯೇ ಮತ್ತೊಂದು ಉದಾಹರಣೆ, ನಾವು ಒಂಬತ್ತು ಗುಡ್ಡಕ್ಕೆಂದು ಹೋಗಿ ತಪ್ಪಿಸಿಕೊಂಡಾಗ, ಅಲ್ಲಿಗೆ ಹೋಗಿರೆಂದು ಹಿರಿಯ ಅಧಿಕಾರಿಗಳು ಕಳುಹಿಸಿದ್ದರೆ, ತಂದ ನೀರು, ಹಣ್ಣು, ಬಿಸ್ಕತ್ ಗಳನ್ನು ನಮಗಿಂತ ಮುಂಚಿತವಾಗಿ ಅವರುಗಳೇ ತಿಂದಿದ್ದರು. ಮತ್ತು ನಮ್ಮ ಬಳಿಯಿಂದ ಹಣ ವಸೂಲಿ ಮಾಡಲು ಅವರು ಹಾಕಿದ ತಂತ್ರಗಳು ಒಂದೆರೆಡಲ್ಲ.


ಇದರಂತೆಯೇ, ದೇವಸ್ಥಾನಗಳು ಹೊರತಾಗಿಲ್ಲ, ಮೊನ್ನೆ ಬೆಲೂರಿಗೆ ಹೋದಾಗ ಅಲ್ಲಿನ ಪೂಜಾರಿಗಳು ನಡೆದುಕೊಳ್ಳುವ ರೀತಿ, ಅಬ್ಬಾ ದುಡ್ಡಿಗಾಗಿ ಹಾತೊರೆಯುವ ಅವರ ಮನಸ್ಥಿತಿ ದೇವರ ಬಗೆಗೆ ಇರುವ ಭಕ್ತಿಯನ್ನೇ ದೂರ ಮಾಡಿ ಬಿಡುತ್ತದೆ. ಧರ್ಮಸ್ಥಳದಲ್ಲಿ ಅದರಲ್ಲೂ ದೇವಳದ ಒಳಕ್ಕೆ ಹೋಗಲು ನಿಲ್ಲುವ ಸಾಲಿನಲ್ಲಿ, ಪೆಪ್ಸಿ, ಕೋಲಾ, ಲೇಸ್, ಕುರ್ ಕುರ್ರೆ ಮಾರುತ್ತಿರುವುದು ದುರಂತ. ಶಿಸ್ತಿನ ಸ್ಥಳವಾಗಿದ್ದ ದೇವಳಗಳು, ತಿಂದು ಕುಡಿದು ಮೋಜು ಮಾಡುವಂತ ಮಾರ್ಪಾಡಾಗಿರುವುದು, ಹಿಂದೆ ಸಿಗರೇಟು ಮಾರಾಟ ನಿಲ್ಲಿಸಿದ್ದ ಊರು ಮತ್ತೆ ಸಿಗರೇಟಿಗೆ ಬಲಿ ಆಗಿರುವುದು, ಭವಿಷ್ಯದ ಬಗೆಗೆ ನೋವು, ಆತಂಕ ಉಂಟುಮಾಡಿದೆ.

ಪ್ರವಾಸವೆಂಬ ಅರ್ಥವಿಲ್ಲದ ಮೋಜು!!!!


ಸುತ್ತಾಡುವುದು ಹುಟ್ಟಿನಿಂದಲೇ ನಮಗೆ ಬಂದಿರುವುದೋ ಅಥವಾ ಕಳೆದ ಜನುಮದಿಂದಲೂ ನಮ್ಮೊಂದಿಗಿರುಬಹುದೇ? ಬಹುಷಃ ನಮ್ಮ ಪೂರ್ವಜರ ಅನೇಕ ಗುಣಗಳು ನಮ್ಮಲ್ಲೇ ನಾಟಿರುತ್ತವೆ. ಇಂಥಹುದರಲ್ಲಿ, ಸುತ್ತಾಡುವುದು ಒಂದು. ಜನರು ಪ್ರಪಂಚ ಸುತ್ತುವುದರಿಂದ ಜ್ನಾನ ಬರುತ್ತದೆಂದು ಅದೆಷ್ಟೇ ವಾದಿಸಿದರೂ ಕೇವಲ ಸುತ್ತುವುದರಿಂದ ಅಥವಾ ಒಂದು ಊರಿಗೆ ಹೋದ ತಕ್ಷಣ ಆ ಊರಿನ ಅಲ್ಲಿನ ಜನತೆಯ ಬಗೆಗೆ ತಿಳಿದಿದ್ದೇವೆಂಬುದನ್ನು ಒಪ್ಪಲೂ ಸಾಧ್ಯವಿಲ್ಲ. ಅದೆಷ್ಟೋ ವರ್ಷ ಜೊತೆಗಿದ್ದು, ಜೊತೆಯಲ್ಲಿ ಹುಟ್ಟಿ ಬೆಳೆದ ಅಣ್ಣ ತಮ್ಮಂದಿರನ್ನು, ಅಕ್ಕ ತಂಗಿಯರನ್ನು, ಅಪ್ಪ ಅಮ್ಮಂದಿರನ್ನೇ ಏಕೆ, ಸ್ವತಃ ಹೆಂಡತಿಯನ್ನೇ ಅರಿಯಲಾಗದ ನಾವು ಒಂದೆರಡು ದಿನ ಸುತ್ತಾಡಿದ ಮಟ್ಟಿಗೆ ಬೇರೊಂದು ಊರಿನ ಬಗೆಗೆ ಇಷ್ಟುದ್ದ ಬರೆದು ಅಲ್ಲಿನ ಜನ ಹೀಗೆ, ಅಲ್ಲಿನ ಅದು ಹೀಗೆ ಇದು ಹೀಗೆ ಎನ್ನುವುದು ನನಗೇನೋ ಸಮಂಜಸವೆನಿಸುವುದಿಲ್ಲ. ಅದೇನೆ ಇರಲಿ, ನಾನಿಲ್ಲಿ ನಿಮಗೆ ಹೇಳ ಹೊರಟಿರುವುದು, ಸುತ್ತಾಟವೆಂಬುದು ಕೇವಲ ನಮ್ಮ ಒಂದು ಚಟ, ಮತ್ತು ಕೆಲವರಿಗದು, ಲೋಪ. ಯಾವುದೋ ಸುತ್ತಾಡುವ ಕೆಲಸಕ್ಕೆ ಸೇರಿ ನಾನು ದೇಶ ವಿದೇಶ ಸುತ್ತುತ್ತಿದ್ದೇನೆ, ನನಗೆ ಸುತ್ತಾಡುವುದೆಂದರೆ ಬಲು ಇಷ್ಟದ ಕೆಲಸ ಎನ್ನುವವರು ಬಹಳಷ್ಟು ಮಂದಿ ಸಿಗುತ್ತಾರೆ. ವಾಸ್ತವಕ್ಕೆ ನೋಡಿದರೇ, ಅವರಿಗೆ ಆ ಕೆಲಸ ಸಿಗದೇ ಹೋಗಿದ್ದರೆ? ಸುತ್ತಾಡುತ್ತಿರಲಿಲ್ಲವೇ? ಅದು ಇರಬಹುದು, ಇದು ಸಮಯದ ಕೈ ಗೊಂಬೆ ಎನ್ನುವುದನ್ನು ಬಿಟ್ಟು ಬೇರೇನೂ ಅಲ್ಲ. ಆದರೇ, ನಾನು ಹೇಳ ಹೊರಟಿರುವುದು, ಹುಟ್ಟಿನಿಂದಲೇ, ಅಥವಾ ಬಹಳ ಚಿಕ್ಕಂದಿನಿಂದಲೇ ಸುತ್ತಾಡುವುದನ್ನು ಬೆಳೆಸಿಕೊಂಡು ಬಂದ ನನ್ನಂಥಹ ಹುಟ್ಟು ಸೋಮಾರಿಗಳ ಬಗೆಗೆ. ಸುತ್ತಾಡುವುದು ಸೋಮಾರಿತನವೇ? ನನ್ನ ಪ್ರಕಾರ ಹೌದು ಅದು ಕಟುಸತ್ಯ, ನೀವು ನಂಬಿದರೂ ಸರಿ ಬಿಟ್ಟರೂ ಸರಿ.ನಾನು ನನ್ನ ಪ್ರೈಮರಿ ಸ್ಕೂಲಿನಲ್ಲಿದ್ದಾಗ, ಪ್ರತಿ ಶನಿವಾರ ಸಿಕ್ಕರೇ ಅಜ್ಜಿ ಮನೆಗೆ, ಅಲ್ಲಿಂದ ಸೈಕಲ್ ಹತ್ತಿ, ಹಾರಂಗಿ, ನಿಸರ್ಗ ಧಾಮ, ಕೊಪ್ಪ, ಹೀಗೆ ಎಲ್ಲೆಂದರಲ್ಲಿ ಸುತ್ತಾಡುತ್ತಿದೆ. ನಂತರ ಹೈಸ್ಕೂಲಿಗೆ ಬಂದಾಗ, ಸೈಕಲ್ ಹಿಡಿದು, ದೂರ ದೂರದ ಊರಿಗೆ ಹೋಗಿ ಬಿಡುತ್ತಿದೆ. ವರ್ಷಕ್ಕೊಮ್ಮೆ ದುಡ್ಡು ಜೋಡಿಸಿ ಕೊಂಡು, ಬೆಲೂರು, ಧರ್ಮಸ್ಥಳ, ಸುಬ್ರಹ್ಮಣ್ಯಗಳಿಗೆ ಒಬ್ಬನೇ ಹೋಗಿ ಬರುತ್ತಿದ್ದೆ. ಅದರ ನಡುವೆ ನೆಂಟರ ಮನೆಗಳ ನೆಪದಲ್ಲಿ ಹುಡುಕಿ ಹುಡುಕಿ ಹೋಗುತ್ತಿದೆ.

ಇ ಎಲ್ಲಾ ನನ್ನ ಪ್ರವಾಸಗಳಲ್ಲಿಯೂ ನನಗೆ ಅಕ್ಕರೆ ಇದ್ದದ್ದು ನೆಂಟರ ಮೇಲಲ್ಲ? ಮನೆಯಲ್ಲಿದ್ದರೆ ಬೋರಾಗುತ್ತದೆ, ಅಪ್ಪ ಬೈಯ್ಯುತ್ತಾರೆ, ಇಲ್ಲವೆ ಏನಾದರು ಕೆಲಸ ಹೇಳುತ್ತಾರೆ, ಎಂಬುದರಿಂದ ಹೋಗುತ್ತಿದೆ. ನೆಂಟರ ಮನೆಗೆ ಊಟದ ಸಮಯ ಬಿಟ್ಟರೇ ಮಿಕ್ಕ ಸಮಯ ಮತ್ತೆ ಸುತ್ತಾಡೂವುದರಲ್ಲಿಯೇ ಕಳೆಯುತ್ತಿತ್ತು. ಈಗಲೂ ಅಷ್ಟೇ ನಾನು ಮತ್ತು ನನ್ನ ಸ್ನೇಹಿತರು ತಿಂಗಳಿಗೊಮ್ಮೆಯಾದರೂ ಒಂದು ಚಾರಣ, ಅಥವಾ ಒಂದು ಲಾಂಗ್ ರೈಡ್ ಹೋಗಲೇ ಬೇಕೆಂದು ಹೊರಡುತ್ತೇವೆ. ನಾವು ಅಲ್ಲಿ ನೋಡಿ ಅದರ ಬಗ್ಗೆ ಬರೆದು ಅಥವಾ ಅನುಭವಿಸುವುದು ಅಷ್ಟಕ್ಕಷ್ಟೇ. ಸುಮ್ಮನೆ ಮನೆಯಲ್ಲಿ ಕುಳಿತಿರಲಾಗದೇ ಅಲ್ಲಿಗೆ ಹೋಗಿ ಬರಲು, ಹೋಗುವ ಮುನ್ನ ಸಮಯ ಹರಣ ಮಾಡುವುದು ಹೋಗಿ ಬಂದಮೇಲೆ, ಮತ್ತೆ ಸಮಯ ಹರಣ ಮಾಡುವುದು. ಹೋಗುವು ಮುನ್ನ ತಯಾರಿ ಕುರಿತು ಮಾತುಕತೆ, ಹೋಗಿ ಬಂದ ಮೇಲೆ, ಅದರ ಕುರಿತು ಚರ್ಚೆ, ಒಟ್ಟಾರೆಸಮಯ ಕೊಲ್ಲುವುದನ್ನು ಬಿಟ್ಟರೆ ಮಿಕ್ಕಾವುದು ನನ್ನಲ್ಲಿ ಕಂಡಿಲ್ಲ. ಅಂದರೇ ಪ್ರವಾಸ ಹೋಗುವುದು ತಪ್ಪಾ? ತಪ್ಪಿಲ್ಲವೇ ಇಲ್ಲ ಆದರೇ ಅದಕ್ಕೊಂದು ಉದ್ದೇಶವಿರಬೇಕು. ಸುಮ್ಮನೆ ಸಮಯ ವ್ಯರ್ಥ ಮಾಡುವುದೆ ಉದ್ದೇಶವಾಗಿರಬಾರದು, ಅಥವಾ ಕೇವಲ ಅಲ್ಲಿ ಹೋಗಿ ಮೋಜು ಮಾಡಿ ಬರುವುದೇ ನಮ್ಮಯ ಕೆಲಸವಾದರೇ ಅದು ಪ್ರವಾಸವೂ ಅಲ್ಲ ಅದರಿಂದ ನಾಗರೀಕ ಸಮಾಜಕ್ಕೆ ಒಳಿತು ಇಲ್ಲ. ನಾವು ಹೋಗಿ ನೋಡಿ ಬಂದಿರುವುದನ್ನು, ದಾಖಲಿಸಿಕೊಂಡು ಸಮಾಜಕ್ಕೆ ಕೊಟ್ಟರೆ ಮತ್ತೆ ನಾಲ್ವರಿಗೆ ಅದರ ಬಗೆಗೆ ಮಾಹಿತಿ ಸಿಕ್ಕಿ ಉಪಯೋಗವಾಗ ಬಹುದು, ಆದರೆ ಇತ್ತೀಚಿನ ದಿನಗಳಲ್ಲಿ ಅನಾಹುತವೇ ಹೆಚ್ಚಾಗುತ್ತಿವೆ. ಚಾರಣದ ಹೆಸರಿನಲ್ಲಿ ಹೋದವರು, ಕುಡಿದು ಸೇದಿ, ಅಲ್ಲಿದ್ದ ಪರಿಸರವನ್ನು ಸರ್ವನಾಶದತ್ತ ತಲ್ಲಿದರೇ, ಇನ್ನೂ ಪ್ರವಾಸಿ ತಾಣಗಳು, ಶಯನಗೃಹಗಳಾಗಿವೆ. ಕೆಲವೊಂದು ಸ್ಥಳಗಳಲ್ಲಿ, ದಾರಿಯಲ್ಲಿಯೇ ನಿರೋಧ್ ಗಳು ಬಿದ್ದಿರುತ್ತವೆ, ಕುಡಿದು ಒಡೆದ ಗಾಜಿನ ಚೂರುಗಳು, ಸಿಗರೇಟ್ ಪ್ಯಾಕ್ ಗಳು, ಪ್ರವಾಸಿ ತಾಣ ಎನ್ನಲೂ ಹಿಂಜರಿಕೆಯಾಗುವಷ್ಟು ಹಾಳು ಮಾಡಿರುತ್ತಾರೆ.

ನಾನು ಬಹಳಷ್ಟು ಬಾರಿ, ಇದಕ್ಕೆಲ್ಲಾ ಪರಿಹಾರ ಬೇಡವೇ ಎಂದು ಆಲೋಚಿಸಿದ್ದೇನೆ, ಉತ್ತರ ಸಿಗುವುದೆಲ್ಲಿ? ನಾವು ಬದುಕುತ್ತಿರುವ ಈ ಕೊಳಕು ವ್ಯವಸ್ಥೆಯನ್ನು ಸರಿ ದಾರಿಗೆ ತರುವ ಮಾರ್ಗ ಒಂದು ಇದೆಯಾ?ಇದ್ದರೇ ಅದು ಯಾವುದು?ನಮ್ಮಂಥಹ ಹುಚ್ಚು ಮನಸ್ಸಿನ ಮೂರ್ಖರು ಸುತ್ತಾಡಿ ಅಲ್ಲಿರುವ ಲೋಪ ದೋಷಗಳನ್ನು ನಮ್ಮೊಳಗೆ ನಮ್ಮದೇ ಆದ ಸೀಮಿತ ವರ್ಗದಲ್ಲಿ ಚರ್ಚಿಸಿ ಕೆಲವೊಮ್ಮೆ ಕೊರಗಿ ನಂತರ ಬದಲಾಯಿಸಲಾಗುವುದಿಲ್ಲವೆಂದು ಅಥವ ಅದರ ಬಗೆಗೆ ಚರ್ಚಿಸಿ ನಮ್ಮ ಸಮಯ ಹರಣ ಮಾಡಿಕೊಳ್ಳುವುದು ಬೇಡವೆಂದು ಕುಳಿತುಬಿಡುತ್ತೇವೆ. ಪ್ರತಿಯೊಂದು ಚಳುವಳಿಯ ಹಿಂದೆ ಹೋರಾಟದ ಹಿಂದೆ ಇಂಥಹ ಬೇಸತ್ತ, ಬಳಲಿದ ನೂರಾರು ಮನಸ್ಸುಗಳು ಕೆಲಸ ಮಾಡಿರುತ್ತವೆ. ಅಂದರೆ ನಾಳೆ ನಾವೂ ಕೂಡ ಅದೇ ರೀತಿ ಚಳುವಳಿ ಮಾಡುತ್ತೇವೆ! ನನಗೆ ಇದರಲ್ಲಿ ಅಲ್ಪ ಸ್ವಲ್ಪವೂ ನಂಬಿಕೆ ಇಲ್ಲ. ನಾವೆಂದು ಚಳುವಳಿ ಮಾಡುವುದಿಲ್ಲ, ಮಾಡುವುದಕ್ಕೆ ವಿಷಯಗಳೇ ಇಲ್ಲ, ನಾವು ಯಾರ ವಿರುದ್ದ ಹೋರಾಡಬೇಕೆಂಬುದೇ ದೊಡ್ಡ ಸಮಸ್ಯೆ. ಅದೇನೆ ಇರಲಿ, ಈಗ ಮಾತು ಬದಲಾಯಿಸುವುದು ಬೇಡ, ನಾನು ಪರ್ಯಟಣೆಯ ಬಗೆಗೆ ಮಾತನಾಡುತ್ತಿದ್ದೆನೆ. ಅದರ ಬಗ್ಗೆ ಕೆಲವು ಆಶ್ಚರ್ಯಕರ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು. ನಾನು, ಬಹಳಷ್ಟು ಬಾರಿ ಬಸ್ಸಿನಲ್ಲಿ, ಬೈಕಿನಲ್ಲಿ, ಮತ್ತು ಚಾರಣದ ಹೆಸರಿನಲ್ಲಿ ಕಾಲ್ನಡಿಗೆಯಲ್ಲಿ ಸುತ್ತಾಡಿದ್ದೇನೆ. ಕೆಲಸದ ನಿಮಿತ್ತ ಹಲವಾರು ಊರುಗಳಿಗೆ ಹೋದಾಗ ನಡೆದ ಮತ್ತು ನಡೆಯುತ್ತಿರುವ ವಿಷಯಗಳು ಬಹಳಷ್ಟು ಬಾರಿ ಬೇಸರ ತರಿಸುತ್ತವೆ. ಇದಕ್ಕೆ, ಸೂಕ್ತ ಉದಾಹರಣೆ, ದಕ್ಷಿಣ ಕನ್ನಡ ಜಿಲ್ಲೆಗೆ ಒಮ್ಮೆ ಬೈಕಿನಲ್ಲಿ ನಾವು ಹೋಗಿ ಬಂದದ್ದು. ಸುಬ್ರಹ್ಮಣ್ಯ, ಧರ್ಮಸ್ಥಳ, ಸುತ್ತಾಡಿ ಬರಲೆಂದು ಬೈಕಿನಲ್ಲಿ ಹೋದಾಗ ಅಲ್ಲೇ ಇರುವ ಕೆಲವು ಜಲಪಾತಗಳನ್ನು ನೋಡಿ ಬರುವಂತೆ ನಿರ್ಧರಿಸಿದೆವು. ಅಲ್ಲಿರುವ ಸ್ಥಳಿಯರಿಗೆ ಆ ಸ್ಥಳಗಳ ಬಗ್ಗೆ ಮಾಹಿತಿಯೇ ಇರಲಿಲ್ಲ. ಆದರೇ ನಾವು ಮಾತನಾಡಿಸಿದ ಪ್ರತಿಯೊಬ್ಬನೂ ಬೆಂಗಳೂರಿನ ಬಗ್ಗೆ ಬಹಳಷ್ಟು ತಿಳಿದುಕೊಂಡಿದಾರೆಂಬುದು ನಿಜಕ್ಕೂ ವಿಷಾದ. ಜನಕ್ಕೆ ಪಟ್ಟಣದೆಡೆಗೆ ಹೆಚ್ಚುತ್ತಿರುವ ಮೋಹ ಹೇಳತೀರದು. ಅಲ್ಲಿರುವ ವಿಷಯಗಳ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ವಸ್ತು ಪ್ರಧಾನ ಜೀವನದತ್ತ ಹೆಚ್ಚು ಒಲವು ತೋರುತಿದ್ದಾರೆ. ಅವರು ಒಳ್ಳೆಯ ಮೊಬೈಲ್ ಬಳಸುವುದು, ಡಿವಿಡಿ, ಐಪೋಡ್ ಬೇಡವೆಂದು ನಾನು ಹೇಳುವುದಿಲ್ಲ. ಆದರೆ, ಕನಿಷ್ಟ ಊರಿನಿಂದ ಹತ್ತಾರು ಮೈಲಿಗಳಲ್ಲಿರುವ ವಿಸ್ಮಯ ಸ್ಥಳಗಳ ಬಗೆಗೆ ತಿಳಿದಿರುವುದಿಲ್ಲ ಇದು ನಿಜಕ್ಕೂ ಶೋಚನಿಯ. ಇದಕ್ಕೆ ಕಾರಣ ಕೇವಲ ಉಢಾಫೆತನ ಮಾತ್ರವಲ್ಲ ಅಲ್ಲಿನ ಜನರ ಪೈಕಿ ಹೆಚ್ಚು ಜನರು ಕೇರಳದಿಂದ ಬಂದವರು. ನಮ್ಮಲ್ಲಿ ಅದೆಷ್ಟೇ ವರ್ಷ ಒಂದು ಸ್ಥಳದಲ್ಲಿ ಬೆಳೆದರೂ ಜೀವಿಸಿದರೂ ಕೂಡ ನಮ್ಮ ತಾತನೋ ಮುತ್ತಾತನ ಊರನ್ನು ನೆನೆದು ಹೆಮ್ಮೆ ಪಡುವುದೇ ಹೆಚ್ಚು. ಇರುವ ಭೂಮಿಯನ್ನು ಪ್ರೀತಿಸುವುದನ್ನು ಕಲಿಯಲೇ ಇಲ್ಲ. ಕರ್ನಾಟಕದಲ್ಲಿ ೩೦-೪೦ ವರ್ಷ ಬದುಕಿದ್ದರೂ, ಕನ್ನಡ ಮಾತನಾಡಲು ಹಿಂಜರಿಯುತ್ತಾರೆ. ಎಂಥಹ ವಿಪರ್ಯಾಸವೆನಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆ, ನಾವು ತಿಳಿದಂತೆ ಶಿಕ್ಷಣದಲ್ಲಿ ಮುಂದುವರೆದಿದೆ ಎನ್ನುವುದನ್ನು ಬಿಟ್ಟರೆ, ಅತಿ ಹೆಚ್ಚು ಸಮಸ್ಯೆಗಳು ಕಾಣುವುದು ಇಲ್ಲೆ. ಮೊದಲನೆಯದು ಭಾಷೆಯ ತಾರತಮ್ಯ, ಕನ್ನಡ,, ತುಳು, ಕೊಂಕಣಿ, ಮಲಯಾಳಂ, ಹೀಗೆ ನಾಲ್ಕಾರು ಭಾಷೆಗಳು ಸೇರಿ ಕನ್ನಡದ ಸೊಬಗು ಸಿಗುವುದೇ ಇಲ್ಲ. ಎರಡನೆಯದಾಗಿ, ಧರ್ಮ, ಕ್ರೈಸ್ತ, ಮುಸ್ಲಿಂ, ಹಿಂದು ಧರ್ಮಗಳ ಪೈಪೋಟಿ ಎಷ್ಟಿದೆಯೆಂದರೇ ಪ್ರತಿಯೊಂದು ಊರನಲ್ಲಿಯೂ ಅವರವರ ಧರ್ಮದ ಭಾವುಟಗಳು, ಬ್ಯಾನರ್ ಗಳು, ಪೋಸ್ಟರಗಳು, ರಾರಾಜಿಸುತ್ತಿರುತ್ತವೆ. ಅದು ಅಲ್ಲದೇ ಯಾವ ಕ್ಷಣದಲ್ಲಿ ಬೇಕಾದರು ಧರ್ಮೀಯ ಗಲಭೆಗಳು ಆಗಬಹುದು. ಮೂರನೆಯದಾಗಿ, ಜನರು ನೈಸರ್ಗಿಕ ಸಂಪತ್ತನ್ನು ನುಂಗಿ ನೀರು ಕುಡಿದು ಆಗಿದೆ. ಶುಂಠಿ ಬೆಳೆದು ಭೂಮಿ ನಾಶವಾಗಿದೆ, ರಬ್ಬರ್ ಬೆಳೆಯುತ್ತಾ ಜನರು ಸೋಮಾರಿಗಳಾಗಿದ್ದಾರೆ. ಭತ್ತ ಬೆಳೆಯುವುದನ್ನೇ ಮರೆತು ಕೊಂಡು ತಿನ್ನುತ್ತಿದ್ದಾರೆ. ಇದಕ್ಕೆಲ್ಲಾ ಪರಿಹಾರವೇನು? ಸಮಾಜ ಎತ್ತ ಸಾಗುತ್ತಿದೆ, ನಿಸರ್ಗದ ಗತಿ ಏನು? ಉತ್ತರ ಸಿಗದ ಪ್ರಶ್ನೆಗಳ ಮಹಾಪೂರ ನಮ್ಮೊಂದಿಗಿದೆ.

ಚಾರ್ಮಾಡಿ ಘಾಟಿನಲ್ಲಿ ಬರುವಾಗ ನಿಮಗೆ ಕಣ್ಣಿಗೆ ಬೇಕಾದಷ್ಟು, ಝರಿಗಳು ಸಿಗುತ್ತವೆ, ಕೆಲವೊಂದು ಜಲಪಾತಗಳು ಕಾಣಸಿಗುತ್ತವೆ. ಅವೆಲ್ಲವೂ ರಸ್ತೆಯ ಬದಿಯಲ್ಲಿಯೇ ಇರುವುದರಿಂದ ಅಲ್ಲಿ ಆಟ ಆಡುವುದು ಸರ್ವೇ ಸಾಮಾನ್ಯ ಆದರೇ ಜನರು ತಾವು ಧರಿಸಿರುವ ಉಡುಪುಗಳ ಬಗೆಗೆ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ. ಹುಡುಗಿಯರ ಮನ ಬಂದಂತೆ ಪ್ರಚೋದನಕಾರಿ ಉಡುಪುಗಳೊಂದಿಗೆ ರಸ್ತೆಯಲ್ಲಿ ಕುಣಿದು ಕುಪ್ಪಳಿಸುವುದು ಅಷ್ಟು ಸಮಂಜಸವೆನಿಸುವುದಿಲ್ಲ. ಹಾಗೆಯೇ ಮುಂದುವರೆದರೆ, ದಾರಿ ಉದ್ದಕ್ಕೂ ಕುಡಿಯುವುದು, ಮಾಂಸ ಬೇಯಿಸುತ್ತಾ ಇರುವುದು ಕಾಣುತ್ತದೆ. ಈ ಪ್ರದೇಶವು ಅರಣ್ಯ ಇಲಾಖೆಗೆ ಸೇರಿದ್ದು, ಕಾಯ್ದಿಟ್ಟ ಅರಣ್ಯವಾದರೂ ಒಬ್ಬನೇ ಒಬ್ಬ ಅರಣ್ಯ ಇಲಾಖೆ ಸಿಬ್ಬಂದಿ ನಿಮ್ಮ ಕಣ್ಣಿಗೆ ಕಾಣುವುದಿಲ್ಲ. ನಮ್ಮ ಜನರೂ ಕುಡಿದು, ಕುಣಿದು ಮೋಜು ಮಾಡುವುದು, ಅಲ್ಲಿಯೇ ಬೇಯಿಸುವುದು, ಪರಿಸರದಲ್ಲಿ ಎಲ್ಲ ತ್ಯಾಜ್ಯಗಳು ಹಾಕಿ ಗಲೀಜು ಮಾಡುವುದು ಅಸಹ್ಯಕರವೆನಿಸುತ್ತದೆ. ಅವರು ಕುಡಿದರೂ, ಮೋಜು ಮಾಡಿದರೂ ಅಲ್ಲಿನ ಪರಿಸರಕ್ಕೆ ಧಕ್ಕೆ ತರದೇ, ಗಲೀಜು ಮಾಡದೇ, ಪರಿಸರ ಸಂರಕ್ಷಣೆ ಬಗೆಗೆ ಸ್ವಲ್ಪ ಕಾಳಜಿ ವಹಿಸಿದರೇ ಹೆಮ್ಮೆ ಪಡಬಹುದಿತ್ತು. ಕುಡಿದು ದಾರಿಯಲ್ಲಿ ಬಾಟಲಿ ಒಡೆಯುವುದು, ಕೂಗಾಡುವುದು, ಇವೆಲ್ಲವನ್ನು ನೋಡಿದರೆ ನಾಗರೀಕತೆಯ ಬಗೆಗೆ ಜನರಲ್ಲಿರುವ ವಿಶ್ವಾಸ ಅಧಿಕವೆನಿಸುತ್ತದೆ. ಇದೆಲ್ಲವೂ ನಡೆಯುತ್ತಿದ್ದದ್ದು, ಸ್ವಾತಂತ್ರ್ಯ ದಿನಾಚರಣೆಯ ದಿನ. ಅಲ್ಲಿ ಬಂದಿದ್ದ ಪ್ರತಿಯೊಬ್ಬರೂ, ಕಾರಿನಲ್ಲಿ, ಜೀಪಿನಲ್ಲಿ ಅಥವಾ ಬೈಕುಗಳಲ್ಲಿ, ಇಸ್ಟೆಲ್ಲಾ ಇರುವ ವಿದ್ಯಾವಂತ ಮಂದಿ ಏಕೆ ಹೀಗೆ ನಡೆದುಕೊಳ್ಳುತ್ತಾರೆ? ಕೊನೆಯಿಲ್ಲದ ಪ್ರಶ್ನೆ.

ಇದರಂತೆಯೇ, ಕಳೆದ ತಿಂಗಳು, ಬಿಸಿಲೆ ಘಾಟಿನಲ್ಲಿ ಹೋಗುತ್ತಿರುವಾಗ, ರಸ್ತೆಯ ಬದಿಯಲ್ಲಿ ಸಾಲು ಸಾಲು ನಿರೋಧ್ ಗಳು ಬಿದ್ದಿದ್ದವು. ನಾನು ನನ್ನ ಸ್ನೇಹಿತರು ನೋಡಿ ಅಚ್ಚರಿ ಆಯಿತು. ಅಲ್ಲಿ ಬಿದ್ದದ್ದು ಕನಿಷ್ಟ ಎಂದರೂ ೧೦-೧೨ ನಿರೋಧ್ ಗಳು, ಅಂದರೆ ಗುಂಪು ವ್ಯಕ್ತಿಗಳು ಹೋಗಿ ರಸ್ತೆ ಬದಿಯಲ್ಲಿ ಅನಾಗರಿಕತೆಯ ಪ್ರದರ್ಶನ ಮಾಡಿದ್ದಾರೆ. ಮಾಡಿ ಹೋದ ಮಹನೀಯರು ಕನಿಷ್ಟ ಪಕ್ಷ ಕಾಡಿನೊಳಕ್ಕೆ ಹಾಕಿದರೂ ಅಥವಾ ತೆಗೆದುಕೊಂಡು ಹೋದರೂ ಅಲ್ಪ ಸ್ವಲ್ಪ ಸುಧಾರಿಸಿಕೊಳ್ಳಬಹುದು. ಈ ರೀತಿಯ ವರ್ತನೆಯಿಂದಾಗಿ, ಮುಂದೆ ಹೋಗುವ ಜನರಿಗೆ, ಆ ಕಡೆಗೆ ಹೋಗುವುದೇ ಬೇಡವೆನಿಸುತ್ತದೆ ಇಲ್ಲದಿದ್ದರೆ ನಾವು ಈ ರೀತಿ ಯಾಕೆ ಮಾಡಬಾರೆದೆನಿಸುತ್ತದೆ. ಕಾಡಿನಲ್ಲಿ, ಕುಡಿಯುವವರ ಸೇದುವವರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಇದು ಬಹು ಮುಖ್ಯ ಕಾರಣ. ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಅನೇಕ ಪ್ರವಾಸಿ ತಾಣಗಳ ಪರಿಸ್ತಿತಿ ಇಂಥಹದ್ದೇ ಆಗಿದ್ದೆ. ಅದಕ್ಕು ಸೂಕ್ತ ಉದಾಹರೆಣೆಗಳು, ಕೊಡಗಿನ ಅನೇಕಾ ತಾಣಗಳು. ಬಹುಮುಖ್ಯವಾಗಿ, ಮಂದಾಳ ಪಟ್ಟೆ ಅಥವಾ ಗಾಳಿಪಟ ಚಿತ್ರದ ಮುಗಿಲ್ ಪೇಟೆ, ದುಬಾರೆ, ನಿಸರ್ಗಧಾಮ, ಪುಷ್ಪಗಿರಿ, ಮಲ್ಲಲ್ಲಿ ಜಲಪಾತ, ಬಿಸಿಲೆ, ಚಾರ್ಮಾಡಿ, ಕೆಮ್ಮಣ್ಣುಗುಂಡಿ ಇನ್ನು ಹಲವಾರಿವೆ. ಹಾಗೆಯೇ ನಾವು ಸುಳ್ಯಾ ಬಳಿಯಲ್ಲಿದ್ದ ದೇವರಗುಂಡಿ ಜಲಪಾತಕ್ಕೆ ಹೋಗಲು ನೋಡಿದಾಗಲೂ ಅಷ್ಟೇ, ಕೆಲವು ದಿನಗಳ ಹಿಂದೆ ಅಲ್ಲಿ ಯಾರೋ ಇಬ್ಬರು ಬಂದು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಆ ಊರಿನ ಜನರು ಜಲಪಾತದ ಕಡೆಗೆ ಸುಲಭವಾಗಿ ಬಿಡುತ್ತಿರಲಿಲ್ಲ. ಯಾರೊ ಒಬ್ಬಿಬ್ಬರು ಮಾಡುವ ಇಂಥ ಕೃತ್ಯಗಳಿಂದಾಗಿ ಹಲವಾರು ಜನರಿಗೆ ತೊಂದರೆ ಉಂಟಾಗುತ್ತದೆ. ಕೆಲವು ಸ್ಥಳಗಳಲ್ಲಿ, ಕೊಲೆ ದರೋಡೆ ಇರುವುದು ಬಹಳ ಬೇಸರದ ಸಂಗತಿ. ಹಾಸನದಿಂದ ನಮ್ಮೂರಿಗೆ ಹೋಗುವ ಹಾದಿಯಲ್ಲಿ ಸ್ವಲ್ಪ ಕಾಡು ಇರುವುದರಿಂದ ಸಂಜೆ ಆರರ ನಂತರ ಬೈಕಿನಲ್ಲಿ ಓಡಾಡುವವರನ್ನು ಹಿಡಿದು ಸುಳಿಗೆ ಮಾಡುತ್ತಿದ್ದಾರೆ. ಸಮಾಜ ಎಲ್ಲಿಗೆ ನಮ್ಮನ್ನು ನಡೆಸುತ್ತಿದೆ ಎನಿಸುತ್ತದೆ.

ಇನ್ನೂ ಕೆಲವು ಊರುಗಳಲ್ಲಿ ಹೊರಗಿನವರು ಎಂದರೆ ಒಂದಕ್ಕೆ ಎರಡು ಬೆಲೆ ಕಟ್ಟುತ್ತಾರೆ. ಕಂಪ್ಲಿಗೆ ಹೋದಾಗ, ಮಾಮುಲಿ ಊಟ ಮಾಡಿ ಬರುವಾಗ, ನಾಲ್ಕು ಜನಕ್ಕೆ ೫೦೦ ರೂಪಾಯಿ ಆಗಿತ್ತು. ಜನ ಇಷ್ಟೊಂದು ಮೋಸ ಮಾಡುವುದಾದರೂ ಏಕೆ ಎನಿಸುತ್ತದೆ. ಹೊರಗಿನವರನ್ನು ಸುಳಿದು ಹಣ ಮಾಡುವುದರಿಂದಲೇ ಜನ ಪ್ರವಾಸವೆಂದರೇ ಬೇಡಪ್ಪ ಎಂದು ಬಿಡುತ್ತಾರೆ.ನಾನು ಒಮ್ಮೆ ಸಾವನದುರ್ಗಕ್ಕೆ ಹೋದಾಗ ಅಲ್ಲಿದ್ದ ಒಬ್ಬ ಸಿಬ್ಬಂದಿ ಸಾರ್ ಒಬ್ಬರೇ ಬಂದರೆ ಏನಿರುತ್ತೆ ಇಲ್ಲಿ, ಜೊತೆಯಲ್ಲಿ ಕರೆದುಕೊಂಡು ಬಂದರೇ......! ಎಂದ. ನಾನು ನಿಜಕ್ಕೂ ತಬ್ಬಿಬ್ಬಾದೆ, ಜನರು ಪ್ರವಾಸಿ ತಾಣಕ್ಕೆ ಬರುವ ಉದ್ದೇಶ ಇದೇನಾ? ನೀವು ಸಾವನದುರ್ಗಕ್ಕೆ ಹೋದರೇ, ಅಲ್ಲಿನ ಉದ್ಯಾನವನ ದಾಟಿ ಮುಂದಕ್ಕೆ ಹೋಗವಾಗ ಅಲ್ಲಿನ ಸಿಬ್ಬಂದಿ ಇರುತ್ತಾನೆ, ಅವನು ಯಾವ ತಲೆ ಹಿಡುಕನಿಗೂ ಕಡಿಮೆಯಾಗಿ ವರ್ತಿಸುವುದಿಲ್ಲ. ಇದಕ್ಕೆ ಹೊಂದುವ ಮತ್ತೊಂದು ಸ್ಥಳವೇ ಎಡಕುಮೆರಿ, ಸಕಲೇಶಪುರದಿಂದ ರೈಲು ಹಳಿಗಳಿಂದ ಚಾರಣಕ್ಕೆ ನಡೆದು ಹೋದರೇ, ಸಿಗುವ ಒಂದು ನಿಲ್ದಾಣವೇ ಈ ಎಡುಕುಮೆರಿ, ಅಲ್ಲಿಗೆ ನಾವು ಐದು ಮಂದಿ ಬಹಳ ದಿನದ ಹಿಂದೆ ಹೋಗಿದ್ದೆವು. ಅಲ್ಲೊಬ್ಬ ಕುಮಾರ್ ಎನ್ನುವು ಸಿಬ್ಬಂದಿ ನಮ್ಮ ಜೊತೆಗೆ ನಡೆದುಕೊಂಡದ್ದು, ಮತ್ತೊಂದು ಅಸಹ್ಯಕರದ ಘಟನೆ. ನಗರದಲ್ಲಿರುವ ಬಹಳಷ್ಟು ಮಂದಿಗೆ ಪರಿಸರ ನಿಸರ್ಗವೆಂದರೆ ಅಲ್ಲಿರುವ ಹಸಿರು, ಅಪರೂಪಕ್ಕೊಮ್ಮೆ ಸಿಗುವ ಕೆಲವು ಪ್ರಾಣಿಗಳನ್ನು ಕಂಡು ಉಲ್ಲಾಸಗೊಳ್ಳುತ್ತಾರೆ. ಹೊರಗಡೆ ಹೋದಾಗ ಜೊತೆಗೊಂದು ಸಂಗಾತಿ ಇದ್ದರೇ ಮುಗಿದೇ ಹೋಯಿತು. ನಮ್ಮಲ್ಲಿ ಅನೇಕ ಹೆಂಗಳೆಯರು, ಹೊರಗೆ ಹೋಗುವಾಗ ಜೀನ್ಸ್, ಹಾಕುವುದು ಟಿ-ಶರ್ಟ್ ಧರಿಸುವುದು ಸ್ವಲ್ಪ ಸಾಮಾನ್ಯ. ಸದಾ ಮಾಮೂಲಿ ಉಡುಪಿನವರನ್ನೆ ಕಾಣುವ ಕುಮಾರಣ್ಣನಂತವರು ಅಪರೂಪಕ್ಕೆ ದಿವ್ಯ ಸೌಂದರ್ಯ ಕಂಡಾಗ, ಕಾಮದೇವನನ್ನು ಮೈಮೇಲೆ ತಂದುಕೊಳ್ಳುತ್ತಾರೆ. ನಾವು ತೆಗೆದುಕೊಂಡು ಹೋದ ಕೋಳಿ ಸ್ವಲ್ಪ ವಾಸನೆ ಬಂದು ಇದನ್ನು ಎಸೆಯುವುದು ಉತ್ತಮೆವೆನ್ನುವ ಸಮಯಕ್ಕೆ ನಮ್ಮ ಬಳಿಗೆ ಬಂದ ಕುಮಾರಣ್ಣ, ನಾನು ನಿಮಗೆ ಡೈರೆಕ್ಷನ್ ಮಾಡುತ್ತೇನೆಂದ. ಮೊದಲಿಗೆ ಸ್ವಲ್ಪ ಗೊಂದಲವಾದರೂ, ಅವನು ನಮಗೆ ನೀಡಬಯಸುತ್ತಿರುವುದು ಮಾರ್ಗದರ್ಶನವೆಂದಾಯಿತು. ನಮ್ಮಲ್ಲಿದ್ದ, ಕೋಳಿ, ಸಾಂಬಾರ ಪದಾರ್ಥಗಳು, ಅಕ್ಕಿ ಎಲ್ಲವನ್ನು ಅವನ ಕೈಗೆ ಒಪ್ಪಿಸಿದೆವು, ನಾಳೆ ಬೆಳ್ಳಿಗ್ಗೆ ನಮಗೆ ಅವಾವುದರ ಅವಶ್ಯಕತೆ ಇರಲಿಲ್ಲ. ಹಾಗೆಯೇ, ನಾವು ನಡೆದು ನಡೆದು ಸುಸ್ತಾಗಿದ್ದರಿಂದ, ನಮಗೆ ಕುಡಿಯುವ ಉತ್ಸಾಹವೂ ಇರಲಿಲ್ಲ. ಅವನು ನಮಗೆ ಸಹಾಯ ಮಾಡುತ್ತಿರುವುದರಿಂದ ಅವನಿಗೆ ಸ್ವಲ್ಪ ಕೊಡೋಣವೆಂದುಕೊಂಡೆ. ಮೊದಲಿಗೆ ಸ್ವಲ್ಪ ಕೊಟ್ಟು ಕಳುಹಿಸಿದೆ. ನಂತರ ಬಂದವನು, ಅದನ್ನು ಮತ್ತಾರೋ ಕುಡಿದರು, ಇನ್ನು ಸ್ವಲ್ಪ ಕೊಡಿ ಎಂದ. ನಾನು ಮತ್ತೆ ಕೊಡುವಾಗ, ಇದಕ್ಕೆ ನೀವು ನೀರು ಬೆರೆಸಿದ್ದಿರಿ ಎಂದ ನಾನು ಇಲ್ಲ ಎಂದೆ. ಇದರಲ್ಲಿ ಸ್ವೀಟು ಇದೆ ಎಂದ. ಅಂದರೆ ಪೆಪ್ಸಿ ಬೆರೆಸಿದ್ದೀನಿ ಎಂದಾಯಿತು. ಮೊದಲೆ ಕೋಪದಲ್ಲಿದ್ದ ನಾನು, ರೇಗಲು ಹೋಗದೇ ಅವನನ್ನು ಅಲ್ಲಿಯೇ ನಿಲ್ಲಿಸಿ, ನನ್ನ ಕೈಲಿದ್ದ ಅಷ್ಟೂ ಎಣ್ಣೆಯನ್ನು ಕುಡಿಯುವಂತೆ ಪುಸಲಾಯಿಸಿದೆ. ನನಗೆ ನಂದ ಸಾಥ್ ಕೊಟ್ಟು, ಕುಮಾರಣ್ಣನನ್ನು ಸಂಪೂರ್ಣ ಒಲ್ಡ್ ಮಂಕ್ ಗೆ ಶರಣು ಮಾಡಿಸಿದೆವು.

ನಂತರ ಶುರುವಾದದ್ದು, ಕುಮಾರಣ್ಣನ ಕಥಾ ಮಂಜರಿ, ಅವನ ಬಾಯಿಯಿಂದ ಮಾತುಗಳು, ಎಂಥವರನ್ನು ಬೆಚ್ಚಿ ಬೀಳಿಸಿಬೀಡುತ್ತಿದ್ದವು. ಅವನು ಒಲ್ಡ್ ಮಂಕ್ ಮಹಿಮೆಯಿಂದ ಅವನ ಹಿರಿಯ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಬೈಯ್ದ, ಅದರಿಂದ ಒಂದು ಸುತು ಒದೆ ತಿಂದ, ನಂತರ ಬೇರೆ ತಂಡದ ಕೆಲವು ಹುಡುಗಿಯರು ಮಲಗಿರುವ ಸ್ಥಳಕ್ಕೆ, ಹೋಗಿ ಮಾಡಬಾರದ್ದು ಮಾಡಲೆತ್ನಿಸಿ ಒದೆ ತಿಂದ. ಅವನಿಗೇನು ಕಮ್ಮಿ ಇಲ್ಲವೆನ್ನುವಂತೆ ಮತ್ತೊಬ್ಬ ಸಿಬ್ಬಂದಿ ಬಿಟ್ಟ ಬೊಗಳೆ ಅಷ್ಟಿಷ್ಟಲ್ಲ. ಸ್ಟೇಷನ್ ನಲ್ಲಿ ಮಲಗುವ ಚಾರಣಿಗರನ್ನು, ಮನೆಗೆ ಬಂದು ಮಲಗಿ ಎಂದು ಹೇಳಿ ಕರೆದುಕೊಂಡು ಹೋಗಿ, ನಂತರ ೫೦೦-೧೦೦೦ರೂ ಗಳ ತನಕ ವಸೂಲಿ ಮಾಡುತ್ತಾನೆ. ವಿಚಿತ್ರವೆಂದರೇ ಅವನಿಗೆ ಸಂಬಳ ೨೫ಸಾವಿರ ರೂಗಳು.ಇದೆಂಥಹ ದುರಾಸೆ ಎನಿಸುತ್ತದೆ. ಸರ್ಕಾರಿ ಸಂಬಳ ಪಡೆದು ಭಿಕ್ಷೆ ಬೇಡುವ ಬದುಕು ಬೇಕಾ? ಅದರಂತೆಯೇ ಮತ್ತೊಂದು ಉದಾಹರಣೆ, ನಾವು ಒಂಬತ್ತು ಗುಡ್ಡಕ್ಕೆಂದು ಹೋಗಿ ತಪ್ಪಿಸಿಕೊಂಡಾಗ, ಅಲ್ಲಿಗೆ ಹೋಗಿರೆಂದು ಹಿರಿಯ ಅಧಿಕಾರಿಗಳು ಕಳುಹಿಸಿದ್ದರೆ, ತಂದ ನೀರು, ಹಣ್ಣು, ಬಿಸ್ಕತ್ ಗಳನ್ನು ನಮಗಿಂತ ಮುಂಚಿತವಾಗಿ ಅವರುಗಳೇ ತಿಂದಿದ್ದರು. ಮತ್ತು ನಮ್ಮ ಬಳಿಯಿಂದ ಹಣ ವಸೂಲಿ ಮಾಡಲು ಅವರು ಹಾಕಿದ ತಂತ್ರಗಳು ಒಂದೆರೆಡಲ್ಲ.

ಇದರಂತೆಯೇ, ದೇವಸ್ಥಾನಗಳು ಹೊರತಾಗಿಲ್ಲ, ಮೊನ್ನೆ ಬೆಲೂರಿಗೆ ಹೋದಾಗ ಅಲ್ಲಿನ ಪೂಜಾರಿಗಳು ನಡೆದುಕೊಳ್ಳುವ ರೀತಿ, ಅಬ್ಬಾ ದುಡ್ಡಿಗಾಗಿ ಹಾತೊರೆಯುವ ಅವರ ಮನಸ್ಥಿತಿ ದೇವರ ಬಗೆಗೆ ಇರುವ ಭಕ್ತಿಯನ್ನೇ ದೂರ ಮಾಡಿ ಬಿಡುತ್ತದೆ. ಧರ್ಮಸ್ಥಳದಲ್ಲಿ ಅದರಲ್ಲೂ ದೇವಳದ ಒಳಕ್ಕೆ ಹೋಗಲು ನಿಲ್ಲುವ ಸಾಲಿನಲ್ಲಿ, ಪೆಪ್ಸಿ, ಕೋಲಾ, ಲೇಸ್, ಕುರ್ ಕುರ್ರೆ ಮಾರುತ್ತಿರುವುದು ದುರಂತ. ಶಿಸ್ತಿನ ಸ್ಥಳವಾಗಿದ್ದ ದೇವಳಗಳು, ತಿಂದು ಕುಡಿದು ಮೋಜು ಮಾಡುವಂತ ಮಾರ್ಪಾಡಾಗಿರುವುದು, ಹಿಂದೆ ಸಿಗರೇಟು ಮಾರಾಟ ನಿಲ್ಲಿಸಿದ್ದ ಊರು ಮತ್ತೆ ಸಿಗರೇಟಿಗೆ ಬಲಿ ಆಗಿರುವುದು, ಭವಿಷ್ಯದ ಬಗೆಗೆ ನೋವು, ಆತಂಕ ಉಂಟುಮಾಡಿದೆ.

21 ಜೂನ್ 2010

ಅರ್ಘ್ಯಂ ನಲ್ಲಿ ಕಳೆದ ಸುಮಧುರ ಕ್ಷಣಗಳು!!!

ಯಾರೊಬ್ಬರ ಬಗೆಗೆ ಬರೆಯುವಾಗಲೂ, ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಯಾಕೆಂದರೇ ಬಹಳಷ್ಟು ಬಾರಿ ನಾವು ಅವರನ್ನು ಅತಿಯಾಗಿ ಹೊಗಳುವುದು ಅಥವಾ ಅತಿಯಾಗಿ ತೆಗಳುವುದನ್ನು ಮಾಡುತ್ತಿರುತ್ತೇವೆ. ಆದರೇ ಇದ್ದಕ್ಕಿದ್ದ ಹಾಗೆ ಒಂದು ಸಂಸ್ಥೆಯ ಬಗೆಗೆ ಬರೆಯುವಾಗ, ಬಹಳಷ್ಟೂ ಜಾಗೃತೆವಹಿಸಬೇಕಾಗುತ್ತದೆ. ಏಕೆಂದರೆ ಯಾವುದೇ ಸಂಸ್ಥೆಯೂ ತನ್ನದೇ ಆದ ಹಾದಿಯಲ್ಲಿ ಒಂದು ಜಾಡನ್ನು ನಿರ್ಮಿಸಿರುತ್ತದೆ. ನಾನು ಇಂದು ಬರೆಯುತ್ತಿರುವುದು ಅಂಥಹದೇ ಒಂದು ಸಂಸ್ಥೆಯ ಬಗ್ಗೆ. ಅರ್ಘ್ಯಂ ಎಂಬ ಹೆಸರನ್ನು ಬಹಳಷ್ಟು ಮಂದಿ ಕೇಳಿರುತ್ತಾರೆ. ಕೆಲವರು ಕೇಳದೇ ಇದ್ದರೂ ಇರಬಹುದು. ಅರ್ಘ್ಯಂ ಎಂಬುದು ನೀರು ಮತ್ತು ನೈರ್ಮಲ್ಯದ ಬಗೆಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ. ಐದು ವರ್ಷಗಳಿಂದ ಸತತವಾಗಿ, ಇದೇ ಕ್ಷೇತ್ರದಲ್ಲಿ ಕಣ್ಣುಬ್ಬು ಮೇಲೇರಿಸುವ ಕೆಲಸ ಮಾಡಿದೆ. ನಾನು ಸಂಸ್ಥೆಯ ಒಳಕ್ಕೆ ಬರುವ ಮುನ್ನ ಇದರ ಬಗೆಗೆ ಅಷ್ಟೇನೂ ತಿಳಿದಿರಲಿಲ್ಲ. ನನ್ನ ಕೆಲಸಕ್ಕಾಗಿ ಇಲ್ಲಿಗೆ ಬಂದು ೯ ತಿಂಗಳು ಕಾಲ ಕಳೆಯುವಾಗ ನಿಜಕ್ಕೂ ಬಹಳ ಆನಂದವೆನಿಸಿತು.

ಮೊದಲ ದಿನ ಬಂದಾಗಲೇ, ಇಲ್ಲಿನ ಜನರ ನಡುವಳಿಕೆ ನನ್ನನ್ನು ಬಹಳ ಖುಷಿ ಪಡಿಸಿತು. ಬಂದ ತಕ್ಷಣ ಅವರು ನಡೆದುಕೊಂಡ ರೀತಿ, ಯಾವೊಬ್ಬ ಅಪರಿಚಿತನು ಬಂದ ಕೆಲವೇ ಕ್ಷಣದಲ್ಲಿ, ಅರ್ಘ್ಯಂ ಸಂಸ್ಥೆಯವನಾಗಿ ಬಿಡುತ್ತಾನೆ. ಮಾತನಾಡಿಸುವ ರೀತಿ, ಬೆಣ್ಣೆಯ ಮೇಲೆ ಕೂದಲು ತೆಗೆದಷ್ಟು ಮಧುರತೆಯನ್ನು ಕೊಡುತ್ತದೆ. ಮೊದಲ ದಿನ ಹೋದಾಗ, ಗೋಪಾಲ್ ನನ್ನನ್ನು ಎಲ್ಲರಿಗೂ ಪರಿಚಯಿಸುವುದರಲ್ಲಿ ತೋರಿದ ತನ್ಮಯತೆ ನನ್ನನ್ನು ಬಹಳ ಅಚ್ಚರಿಗೊಳಿಸಿತು. ಅವರು ನನ್ನೊಡನೆ ಮಾತನಾಡಿದ ರೀತಿಯಲ್ಲಿಯೇ, ನಾನು ನಿಜಕ್ಕೂ ನಿಬ್ಬೆರಗಾದೆ. ಯಾವುದೇ ಸಂಸ್ಥೆಯಲ್ಲಿಯೂ ಹಿರಿಯ ವ್ಯಕ್ತಿಗಳು ಕಿರಿಯವರನ್ನು ಸ್ವಲ್ಪ ದೂರವೇ ಇಟ್ಟು ನಡೆಸಿಕೊಳ್ಳುವುದು ಸಾಮಾನ್ಯವಿದ್ದರೂ ಇದು ಇಲ್ಲಿ ಹೊಸತೆನಿಸಿತು. ಅದಾದ ನಂತರ, ಬಹಳ ಮೆಚ್ಚುಗೆಯಾದದ್ದು, ನಿತಿನ್ ಎಂಬವರ ವ್ಯಕ್ತಿತ್ವ.ಮಾತನಾಡಿಸಿದ ಕೆಲವೇ ಕ್ಷಣದಲ್ಲಿ ನಾನು ಬರುವುದು ಹೇಗೆ?ಎಲ್ಲಿಂದ ಎಂದು ವಿಚಾರಿಸಿ, ವಿಜಯನಗರ ಕಡೆಯಿಂದ ಬರುವ ಮನೋಹರ್ ಅವರಿಗೆ ನನ್ನನ್ನು ಪರಿಚಯಿಸಿದ್ದು, ಮತ್ತು ಮನೋಹರ್ ಅದೆಷ್ಟು ವಿನಯದಿಂದ ಮಾತನಾಡಿದರೆಂದರೇ ಒಬ್ಬ ವ್ಯಕ್ತಿ ಇದೇ ಕ್ಷೇತ್ರದಲ್ಲಿ ೧೫-೨೦ ವರ್ಷ ಅನುಭವ ಇರುವವರು, ಒಬ್ಬ ಕಿರಿಯನ ಜೊತೆಗೆ ಅಪರಿಚಿತನೊಂದಿಗೆ ಹೀಗೂ ಮಾತನಾಡುತ್ತಾರೆಂಬುದು ನನಗೆ ತಿಳಿಯಿತು. ಮೊದಲ ಕೆಲವು ದಿನಗಳು ನಾನು ಮನೋಹರ್ ಹಾಗೂ ಪರಮೇಶ್ವರ್ ಜೊತೆಯಲ್ಲಿ ಬರುತ್ತಿದ್ದೆವು. ಅವರು ಹೊರಡುವ ಸಮಯ ಅಲ್ಪ ಸ್ವಲ್ಪ ತಡವಾದರೇ/ಆಗುವುದಿದ್ದರೇ, ಎಸ್.ಎಂ,ಎಸ್ ಮೂಲಕ ಅಥವಾ ಕೆಲವೊಮ್ಮೆ ಅವರೇ ಬಂದು ತಿಳಿಸುತಿದ್ದರು.ಇಂಥಹ ಪರಿಸರ ನಿಜಕ್ಕೂ ಖುಷಿ ಎನಿಸುತ್ತಿತ್ತು.

ನಾನು ಅರ್ಘ್ಯಂ ಗೆ ಬರುವ ಮುನ್ನ ಅರ್ಘ್ಯಂ ಬಗ್ಗೆ ಕೆಲವು ನಕರಾತ್ಮಕ ಧೋರಣೆಗಳಿದ್ದವು. ಇಲ್ಲಿಗೆ ಬಂದ ಕೆಲವೇ ದಿನಗಳಲ್ಲಿ ಅವೆಲ್ಲವೂ ಬದಲಾದವು.ಆದರೇ, ನಾನು ಕೆಲಸ ಮಾಡುತ್ತಿದ್ದ, IUWM, ಮಾತ್ರ ಅದೆಕೋ ಅಷ್ಟೊಂದು ಒಳ್ಳೆಯ ಅಬಿವೃದ್ದಿ ಕಾಣಲಿಲ್ಲ. ಇದಕ್ಕೆ ಕಾರಣ ವೈಯಕ್ತಿಕ ಆತ್ಮ ಪ್ರತಿಷ್ಟೆ ಎನ್ನುವುದು ನನ್ನ ಸ್ವಂತ ಅಭಿಪ್ರಾಯ. ಯಾರು ಏನು ಹೇಳಿದರೂ, ಲಕ್ಷಾಂತರ ಹಣ ಸುರಿದು ಒಂದು ಸಂಶೋಧನೆ ಮಾಡಿಸುವಾಗ ಅದನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡು ಹೋಗುವ ಸಾಮರ್ಥ್ಯ ಅರ್ಘ್ಯಂ ಗೆ ಇರಲಿಲ್ಲವೆನ್ನುವುದು ನಿಜಕ್ಕೂ ಶೋಚನಿಯ.ಎಂಬತ್ತು ಲಕ್ಷ ರೂಪಾಯಿಯನ್ನು ನಮಗೆ ನೀಡಿದ ಅರ್ಘ್ಯಂ ಗೆ ಅದರ ಜವಬ್ದಾರಿ ತೆಗೆದುಕೊಳ್ಳಲು, ಕನಿಷ್ಟ ೫-೧೦ ವರ್ಷ ಅನುಭವ ಇರುವವರು, ಅಥವಾ ಯೋಜನೆಯ ಮಹತ್ವ ತಿಳಿದವರು ಇದ್ದಿದ್ದರೇ ನಿಜಕ್ಕೂ ಅರ್ಥಪೂರ್ಣವಾಗುತ್ತಿತ್ತು. ಇವೆಲ್ಲವೂ ತೀರಾ ಖಾಸಗಿ ವಿಷಯವಾಗಿರುವುದರಿಂದ ನಾನು ಇಲ್ಲಿ ಚರ್ಚಿಸುವುದು ಸಮಂಜಸವಲ್ಲ. ಆದರೇ, ಸಂಸ್ತೆಯಲ್ಲಿ, ಕೋಟ್ಯಾಂತರ ರೂಪಾಯಿ ಇದ್ದು, ಸಮಾಜದ ಉನ್ನತಿಗೆ ಏನಾದರೂ ಮಾಡಬೇಕೆನ್ನುವ ಮನಸ್ಸು, ಧ್ಯೇಯವಿರುವುದು ಮೆಚ್ಚಲೇಬೇಕಾದ ವಿಷಯ. ಆದರೇ ನಿಜಕ್ಕೂ ನೀರು, ನೈರ್ಮಲ್ಯ, ಪರಿಸರ, ನಿರ್ವಹಣೆ ಇದಕ್ಕೆ ಅತಿ ಹೆಚ್ಚು ಅನಿವಾರ್ಯವಿರುವ ಮಾರ್ಗಗಳು ಯಾವುವು ಎಂಬುದು ಇನ್ನು ತಿಳಿಯಾಗಿಲ್ಲ.

ನನಗೆ ತಿಳಿದ ಮಟ್ಟಿಗೆ, ರಾಜ್ಯದ ಬಗೆಗೆ, ಭಾಷೆಯ ಬಗೆಗೆ, ಮತ್ತು ಸ್ಥಳೀಯತೆಯ ಜ್ನಾನವೇ ಇಲ್ಲದವರು, ಕರ್ನಾಟಕದ ಬಗೆಗೆ ಅದರಲ್ಲಿಯೂ ಮೂಲಭೂತ ಅವಶ್ಯಕತೆಗಳಾದ ನೀರು ನೈರ್ಮಲೀಕರಣದ ಬಗೆಗೆ ಕೆಲಸ ಮಾಡುತ್ತಿರುವುದು ಸ್ವಲ್ಪ ಮುಜುಗರವೆನಿಸುತ್ತದೆ. ಇಷ್ಟೇಲ್ಲಾ ದುಡ್ಡು ವೆಚ್ಚ ಮಾಡುವ ಸಂಸ್ಥೆ ಅದರಿಂದ ಆಗುತ್ತಿರುವ ಅನುಕೂಲವೆಷ್ಟು ಇನ್ನೂ ಹೆಚ್ಚು ಅನುಕೂಲಕರವಾಗಿ ಮಾಡುವುದು ಹೇಗೆ? ಇದರ ಬಗೆಗೆ ಚಿಂತನೆ ಮಾಡದೆ ಇರುವುದು ನನಗೆ ಅಗೋಚರವಾಗಿದೆ. ಕೇವಲ, ವಿವಿ ಗಳಿಂದ ಬರುವ ವಿದ್ಯಾರ್ಥಿಗಳಿಗೆ, ಒಂದು ವರ್ಷ ಉದ್ಯೋಗ ನೀಡಿ, ಕಡಿಮೆ ಎಂದರೇ, ೧೦ಸಾವಿರದಂತೆ ಸಂಬಳ ಕೊಟ್ಟು ಅವರನ್ನು ಪ್ರೋತ್ಸಾಹಿಸಿದ್ದಿದ್ದರೇ ಅದರ ಫಲಿತಾಂಶ ಎಲ್ಲಿಗೋ ಹೋಗಿ ಮುಟ್ಟುತ್ತಿತ್ತು.

ಊರೆಂಬುದು ವಿನಾಶದ ಹಾದಿಯಲಿ!!!

ನಮಗೆ ಬಹಳಷ್ಟು ಸಾರಿ ಕಾಡುವ ಏಕೈಕ ಪ್ರಶ್ನೆ ನಾವು ಬದುಕುತ್ತಿರುವುದು ಎಲ್ಲಿ?ಎಂಥಹ ದೇಶದಲ್ಲಿ? ಎಂಥಹ ಸಮಾಜದಲ್ಲಿ?ಜನತೆ ಏಕೆ ಈ ಮಟ್ಟಿಗಿನ ಅಧೋಗತಿಗೆ ಇಳಿದಿದ್ದಾರೆ? ಅಲ್ಪ ಸ್ವಲ್ಪವೂ ಕೂಡ ನೈತಿಕತೆ, ಜವಬ್ದಾರಿ, ನೀತಿ ನಿಯತ್ತು ಇಲ್ಲದೇ ಹೀಗೆಕೆ? ಅದರಲ್ಲಿಯೂ ಹಳ್ಳಿಯ ಜನತೆಯಲ್ಲಿ ಇದು ಇಷ್ಟೊಂದು ತೀವ್ರತೆಯಲ್ಲಿ ಆಗುವುದಕ್ಕೆ ಕಾರಣವೇನು? ಇಂಥಹ ಸರಳ ಕೊಳಕು ಪ್ರಶ್ನೆ ನನಗೆ ಬಹಳಷ್ಟು ಬಾರಿ ಕಾಡಿದ್ದರೂ ಇತ್ತೀಚೆಗೆ, ಊರಿಗೆ ಹೋಗಿ ಬಂದಮೇಲೆ ಕಾಡುತ್ತಿರುವುದು ಹೆಚ್ಚು.ನನ್ನೂರಿನ ಬಗ್ಗೆ ಬಹಳ ಹಿಂದೆ ಸುಂದರವಾಗಿ ಬಣ್ಣಿಸಿದ್ದೆ, ಅದರ ಮತ್ತೊಂದು ರೂಪವೇ ಇಂದಿನ ಬಾನುಗೊಂದಿ.ನಮ್ಮೂರಿನ ಸೌಂದರ್ಯಕ್ಕೆ ಅತಿಮುಖ್ಯವಾಗಿದ್ದ, ನನ್ನೂರಿನ ಕಟ್ಟೆ, ಕಾವೇರಿ ನದಿಗೆ ೧೯೦೩ರಲ್ಲಿ ಕಟ್ಟಿದ್ದು, ಅದರ ಹಿನ್ನೀರಿನಲ್ಲಿ ಬಹಳ ರುಚಿಕರವಾದ ಮೀನುಗಳು ಸಿಗುತ್ತಿದ್ದವು, ಹಾಗೆಯೇ ಪಕ್ಕದಲ್ಲಿಯೇ ಇದ್ದ, ಚಿಕ್ಕಹೊಳೆ, ಹಳ್ಳ, ಹಳೆ ಕಾಲುವೆಯಲ್ಲಿ, ಕಣ್ಣಿಗೆ ಬಹಳ ಮುದು ನೀಡುವ ಪಕ್ಷಿಗಳು ಇದ್ದವು. ಇತ್ತೀಚೆಗೆ ನಾನು ಹಿಂದೆಂದೂ ಕಾಣದ ಪಕ್ಷಿಗಳು ಬರುತ್ತಿದ್ದವು.ಇದೆಲ್ಲದರ ಸವಿಯನ್ನು ನನ್ನ ಹಲವಾರು ಮಿತ್ರರು ಆನಂದಿಸಿದ್ದಾರೆ, ಅವರು ನನ್ನೂರಿಗೆ ಬಂದಾಗ ನಮ್ಮ ಮನೆಗಿಂತಲೂ ನದಿ ದಂಡೆಯಲ್ಲಿ, ಕಟ್ಟೆಯ ಮೇಲೆ ಕಾಲ ಕಳೆದು ಅದನ್ನುಉ ಸವಿದಿರುವುದೇ ಹೆಚ್ಚು. ಇಂಥಹ ಸೊಬಗಿದ್ದ ಊರು, ಇದ್ದಕ್ಕಿದ್ದ ಹಾಗೆ ಅಧೋಗತಿಗೆ ಇಳಿದಿದೆ ಎಂದರೇ, ನಂಬಲು ಅಸಾಧ್ಯ. ಮೊದಲನೆಯದಾಗಿ, ನಮ್ಮೂರಿನಲ್ಲಿ ಮರಳು ಎತ್ತುವುದು ಅತಿರೇಕಕ್ಕೆ ಹೋದದ್ದು. ನಾವು ಚಿಕ್ಕವರಿದ್ದಾಗಿನಿಂದಲೂ ಮರಳು ತೆಗೆಯುತ್ತಿದ್ದರೂ, ಅದು ಕೇವಲ ಬೇಸಿಗೆಯ ನಾಲ್ಕು ತಿಂಗಳಿನಲ್ಲಿ ನಡೆಯುತ್ತಿತ್ತು, ಆದರೇ, ಈಗ ೩೬೫ ದಿನಗಳು, ದೋಣಿಗಳಿಂದ ತೆಗೆಯಲಾರಂಬಿಸಿದರು.

ಮೊದಲಿನ ದಿನಗಳಲ್ಲಿ ಮರಳಿನ ಬೇಡಿಕೆ ಹೆಚ್ಚಾದ್ದರಿಂದ, ಜನರೇ ಮುಳುಗಿ ಮರಳು ಎತ್ತುತ್ತಿದ್ದರು. ಅದು ಆರೋಗ್ಯಕ್ಕೆ ಅದೆಷ್ಟು ಹಾನಿಕರವೆಂಬುದನ್ನು ಮರೆತು ಕೇವಲ ದುಡ್ಡಿನ ಆಸೆಗೆ ಬಲಿಯಾಗುತ್ತಿದ್ದರು.ಕಳೆದ ಎರಡು ವರ್ಷದಿಂದ ದೋಣಿಯಲ್ಲಿ ಹೋಗಿ ತೆಗೆಯುವುದು ಸಾಮಾನ್ಯವಾಗಿತ್ತು, ಆದರೇ ಈ ಬಾರಿ ನೋಡುವಾಗ, ದೋಣಿಗೆ ಮೋಟಾರು ಇರಿಸಿ ಮರಳು ಎತ್ತುವುದನ್ನು ಕಂಡು ನಿಬ್ಬೆರಗಾದೆ. ಇಂಥಹ ದುಸ್ಸಾಹಸಕ್ಕೆ ಕೈ ಹಾಕುವ ಮನಸ್ಸು ಹೇಗೆ ಬಂತು, ಇಡೀ ಮರಳನ್ನು ಒಂದೇ ಬಾರಿಗೆ ತೆಗೆದು ಬಿಡಬೇಕೆಂಬ ದುರಾಸೆ ಆದರೂ ಏಕೆ?ಚಿನ್ನದ ಮೊಟ್ಟೆಯ ಕಥೆಯಂತೆ, ಇಡೀ ನದಿಯನ್ನು ಸರ್ವನಾಶ ಮಾಡುತ್ತಿರುವುದನ್ನು ಕಂಡು ಬಹಳ ಬೇಸರಗೊಂಡೆ. ಕೇವಲ ಒಂದು ತಿಂಗಳಲ್ಲಿ ನದಿಯಲ್ಲಿದ್ದ ಅಷ್ಟೂ ಮರಳನ್ನು ಖಾಲಿ ಮಾಡಬಹುದೆಂದರೇ ನೀವೆ ಊಹಿಸಿಕೊಳ್ಳಿ ಅದರ ದುಷ್ಪರಿಣಾಮ. ಇದೆಲ್ಲದರ ಜೊತೆಗೆ, ನಮ್ಮೂರಿನ ಕಟ್ಟೆಯಲ್ಲಿ ಒಂದು ಜಲವಿದ್ಯುತ್ ಕಾರ್ಯಗಾರ ಶುರುವಾಗಲಿದೆ. ಜಲವಿದ್ಯುತ್ ಮಾಡುವುದು ಅನುಕೂಲಕರವಾದ ಸಂಗತಿ, ಆದರೇ ಅದರ ಲಾಭ ನಷ್ಟವನ್ನೂ ತಿಳಿಯಬೇಕಲ್ಲವೇ? ಇದರ ಕುರಿತು ಯಾರಲ್ಲಿಯೂ ಸಂಪೂರ್ಣ ಚಿತ್ರಣವಿಲ್ಲ. ಒಬ್ಬರೂ ೩ಮೆಗಾ ವ್ಯಾಟ್ ಎಂದರೇ, ಮತ್ತೊಬ್ಬರೂ, ೪, ಮಗದೊಬ್ಬ ೧೪, ೧೩ ಹೀಗೆ ಒಬ್ಬೊಬ್ಬರ ಬಾಯಿಯಲ್ಲಿಯೂ ಒಂದೊಂದು ಅಂಕಿಗಳು ಉದುರುತ್ತವೆ. ಹೋಗಲಿ, ಸಾಮಾನ್ಯರಿಗೆ ತಿಳಿಸುವ ಕಾಳಜಿಯೂ ಇಲ್ಲದ ಕಂಪನಿಯವರು.

ನಾನು ಅಲ್ಲಿದ್ದವರನ್ನು ಕೇಳಿದರೇ, ಯಾರಿಗೂ ಅದರ ಬಗ್ಗೆ ಅರಿವಿಲ್ಲ. ಊರಿನ ನಾಲ್ಕು ಜನರನ್ನು ಕೇಳೋಣವೆಂದು ಬಂದರೇ, ಇವರ ಮನೆಯಿಂದಲೇ ವಿದ್ಯುತ್ ತಯಾರಿಸುವವರಂತೆ, ದೇಶಕ್ಕೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ವಿದ್ಯುತ್ ಬರಲಿ ಬಿಡಿ ಎನ್ನುತ್ತಾರೆ. ಅಲ್ಲಾ ಮಾರಾಯ ವಿದ್ಯುತ್ ಬರಲಿ ಬೇಡ ಅಂತ ಅಲ್ಲ, ಎಷ್ಟು ವಿದ್ಯುತ್ ಬರುತ್ತೇ? ಅದರಿಂದ ಊರಿಗೆ ಏನು ಲಾಭ? ಆ ವಿದ್ಯುತ್ ಅನ್ನು ಯಾರಿಗೆ ಮಾರುತ್ತಾರೆ?ಏನ್ ಕಥೆ? ಎಂದರೇ ಯಾರಿಗೋ ಒಳ್ಳೆದು ಆಗಲಿ ಬಿಡು, ಎನ್ನುತ್ತಾರೆ. ಇಂಥಹ ಮಹಾನ್ ಪುರುಷರು ಸಿಗುತ್ತಾರಾ? ಅದೇ ಜನ ಒಂದು ದಿನ ತಡವಾಗಿ ಗದ್ದೆಗೆ ನೀರು ಹಾಯಿಸು ಎಂದರೇ ಅಥವಾ ನಾನು ನೀರು ಬಿಟ್ಟ ಮೇಲೆ ನೀನು ನೀರು ಬಿಡು ಎಂದರೇ ಪಕ್ಕದ ಮನೆಯವನ ಜೊತೆಯಲ್ಲಿ ದಿನಗಟ್ಟಲೇ ಜಗಳ ಮಾಡುತ್ತಾನೆ. ಇಂಥಹ ಜನ, ತಾವೆಲ್ಲರೂ ಒಗ್ಗಟ್ಟಾಗಿ ನಿಂತು ಉತ್ಪಾದಿಸುವ ವಿದ್ಯುತ್ ಅನ್ನು ನಮಗೂ ನೀಡಬೇಕೆಂದು ಕೇಳುವುದಿಲ್ಲ, ಆಗುವ ಹಾನಿಗೆ ನಷ್ಟ ತುಂಬಿಕೊಡು ಎಂದು ಕೇಳುವುದಿಲ್ಲ, ಯಾಕೆಂದರೇ, ಅಲ್ಲಿರುವ ಜಮೀನು ಯಾರದ್ದೊ ಆಗಿರುತ್ತದೆ, ಅವನು ಬಡವನಾಗಿರುತ್ತಾನೆ. ಅರ್ಧ ಎಕರೆ ಜಮೀನು ಇರುವ ಹಿಡುವಳಿದಾರ ಇಂಥವರ ವಿರುದ್ದ ದನಿಯೆತ್ತಲಾರ.ಅದೆಲ್ಲಾ ಹೋಗಲಿ ಎಂದರೇ, ಎರಡು ಲಕ್ಷ ರೂಪಾಯಿಗೆ, ನಾಲ್ಕೈದು ಎಕರೆ ಊರಿನ ಜಮೀನು, ಗೋಮಾಳ, ಅಲ್ಲಿದ್ದ ಮರಮುಟ್ಟು ಎಲ್ಲವನ್ನು ಕಳೆದುಕೊಳ್ಳಲು ತಯಾರಿದ್ದಾರೆ. ಇದಕ್ಕೆ ಮುಖ್ಯ ಕಾರಣ ನನ್ನ ಬಳಿಯಲ್ಲಿ ದನವಿಲ್ಲ, ಅಥವಾ ಆ ಸ್ಥಳದಲ್ಲಿ ನಾನು ದನ ಮೇಯಿಸುವುದಿಲ್ಲ, ಯಾರಿಗೋ ಆಗುವುದರ ಬದಲು ಮುಳುಗಡೆಯಾಗಲಿ ಎನ್ನುವ ನೀಚತನವೂ ತುಂಬಿರುತ್ತದೆ.

ಹಳ್ಳಿಯವನು ಎಂದಿಗೂ ವಿಶಾಲ ಹೃದಯದಿಂದ ನೋಡುವುದಿಲ್ಲ. ಅವನದು ಬಹಳ ಸಣ್ಣತನದ ಬುದ್ದಿ, ಅವನಿಗೆ, ಅವನು ಮತ್ತು ಪಕ್ಕದ ಮನೆಯವನು ಅಷ್ಟೇ ಪ್ರಪಂಚ. ಊರು ಮುಳುಗಿದರೂ, ಹಾಳಾದರೂ ಸರಿ ಪಕ್ಕದ ಮನೆಯವನು ನನಗಿಂತ ೫ ನಿಮಿಷ ಮುಂಚಿತವಾಗಿ ಸತ್ತರೆ ಸಾಕೆಂದು ಬಯಸುತ್ತಾನೆ. ಇಂಥಹ ನೀಚ ಬುದ್ದಿ, ಬಂದಿದ್ದಾದರೂ ಹೇಗೆ? ಇಡೀ ಊರು ಒಂದು ಎಂದು ಬೀಗುತ್ತಿದ್ದವ ರಾತ್ರೋ ರಾತ್ರಿ ಈ ಕೆಳಮಟ್ಟಗಿನ ಕೊಳಕುತನಕ್ಕೆ ಇಳಿಯಲು ಕಾರಣ? ಸ್ವಾರ್ಥವೆಂಬುದು ಉತ್ತುಂಗಕ್ಕೆ ಏರಿದ್ದ? ನಾನು ಕಂಡಂತೆ ನಮ್ಮೂರು ಎಂದರೇ ಒಗ್ಗಟ್ಟು ಊರಿಗಾಗಿ ಏನು ಬೇಕಾದರೂ ಮಾಡುವ ಜನ ಎನ್ನುತ್ತಿದ್ದವರು, ಊರನ್ನು ಮಾರಿಕೊಳ್ಳಲು ನಿಂತಿದ್ದು, ವಿನಾಶಕ್ಕೆ ವಿಪರೀತಿ ಬುದ್ದಿ ಎನ್ನುವುದನ್ನು ಸಾಬೀತುಪಡೀಸಲೇ??

09 ಜೂನ್ 2010

ಉಢಾಫೆತನವೆಂಬುದು ನನ್ನೊಳಗಿರುವ ನನ್ನದೇ ಆಸ್ತಿ????


ಬರಗಾಲದಲ್ಲಿ ಅಧಿಕ ಮಾಸವೆಂಬುದೊಂದು ಮಾತು ಅಂತೆಯೇ, ನಂಬಿದವನು ಕೈ ಬಿಡುವುದಿಲ್ಲವೆನ್ನುವುದೊಂದು ನಂಬಿಕೆ. ಇವೆರಡರಲ್ಲಿ ಯಾವುದು ಸರಿ, ಅಥವಾ ಯಾವುದು ಅತಿ ಹೆಚ್ಚು ಸರಿ ಎನ್ನುವ ಪ್ರಶ್ನೆ ನಮ್ಮನ್ನು ಬಹಳಷ್ಟೂ ಕಾಡುತ್ತದೆ. ಇದಕ್ಕೊಂದು ನಿದರ್ಶನ, ನಿನ್ನೆ ನಡೆದ ಘಟನೆ. ನಾನು ನನ್ನೂರಿಗೆ ಹೋಗಿದ್ದೆ, ಅಲ್ಲಿದ್ದ ಒಂದು ಹೋಂಡಾ ಆಕ್ಟಿವಾ ವನ್ನು ಬೆಂಗಳೂರಿಗೆ ತರಬೇಕಿತ್ತು, ಪಟ್ಟಣಕ್ಕೆಂದು ಮಾಡಿಟ್ಟ ಬೈಕು ನಮ್ಮಪ್ಪನ ಕೈಯ್ಯಿಗೆ ಸಿಕ್ಕಿ, ಹಳ್ಳಿಗಾಡಿನ ರಸ್ತೆಯಲ್ಲಿ ಸದ್ದು ಗದ್ದಲವೆಂಬಿಸಿಕೊಂಡು ಸುಸ್ತಾಗಿ ಹೈರಾಣವಾಗಿತ್ತು.ಅದನ್ನು ಇಲ್ಲಿಗೆ ತರುವುದು ದುಸ್ತರವೆಂದು ತಿಳಿದಿದ್ದರೂ ತರಲೇಬೇಕೆಂಬ ಅನಿವಾರ್ಯತೆಗೆ ಗಂಟು ಬಿದ್ದು, ವಿಜಿ ಯೊಂದಿಗೆ ಬರುವುದಾಗಿ ತೀರ್ಮಾನವಾಯಿತು. ಮನೆಯಿಂದ ಹೊರಟವನು ದುರ್ಗೇಶ್ ಮದುವೆ ಮುಗಿಸಿಕೊಂಡು ಹೊರಡುವ ನಿರ್ಧಾರ ಮಾಡಿದೆ.ಅತಿ ಸಂತೋಷದಿಂದ ಬೀಗುತ್ತಿದ್ದ, ದುರ್ಗೇಶ್ ನನ್ನು ಕಂಡು, ಈ ಸಂತೋಷಕ್ಕಾದರೂ ಒಂದು ನೂರು ರೂಪಾಯಿ ಮುಯ್ಯಿ ಹಾಕೋಣವೆಂದು ಹಾಕಿದೆ, ಆದರೇ ಆ ನೂರು ರೂಪಾಯಿ ನನ್ನ ಪಾಲಿಗೆ ಅಷ್ಟೋಂದು ಮಹತ್ವ ವಹಿಸುತ್ತದೆಂಬ ಸಣ್ಣ ಕಲ್ಪನೆಯೂ ಇರಲಿಲ್ಲ.ಮದುವೆ ಮುಗಿಯುವುದು ತಡವಾದ್ದರಿಂದ, ಮಳೆಗೆ ಸಿಕ್ಕಿಕೊಳ್ಳುವ ಎಲ್ಲಾ ಮುನ್ಸೂಚನೆಗಳು ಸಿಕ್ಕಿದವು. ಅರಕಲಗೂಡಿಗೆ ಬಂದವನು ಪೆಟ್ರೋಲ್ ಹಾಕಿಸಲು ನೋಡಿದೆ, ಜೇಬಿನಲ್ಲಿ ೧೪೦ ರೂಪಾಯಿ ಮಾತ್ರವಿದ್ದರಿಂದು ಮುಂದೆ, ಹೊನ ಪುರದಲ್ಲಿ, ಎಟಿಎಂ ನಿಂದ ತೆಗೆದು ಹಾಕಿಸುವ ನಿರ್ಧಾರ ಮಾಡಿ ಮುನ್ನೆಡೆದೆ.ನಮ್ಮ ಜೊತೆಯಲ್ಲಿ ಮದುವೆಗೆ ಬಂದಿದ್ದ ಸ್ನೇಹಿತರಿಗೆ ದಾರಿ ತೋರಿಸುವು ಭರದಲ್ಲಿ, ನಾನು ಎಟಿಎಂ ನಿಂದ ಹಣ ತೆಗೆಯುವುದನ್ನು ಮರೆತು ಬಿಟ್ಟೆ.

ಮುಂದೆ ಚರಾ ಪಟ್ನದಲ್ಲಿ ತೆಗೆದರಾಯಿತೆಂಬ ವಿಜಿಯ ಸಲಹೆಗೆ ಬೆಲೆ ಕೊಟ್ಟು ನೂರು ರೂಗಳಿಗೆ ಪೆಟ್ರೋಲ್ ಹಾಕಿಸಿದೆವು.ಅಲ್ಲಿಂದ ಹೊರಟು, ಕೇವಲ ಹೈದಿನೈದು ನಿಮಿಷಗಳಿಗೆ ನೋಡಿದ ಸನ್ನಿವೇಶಗಳು ನಮ್ಮನ್ನು ಮೈ ರೋಮಾಂಚನಗೊಳಿಸಿದೆವು.ನೇರ ಸುಡುತಿದ್ದ ಸೂರ್ಯ, ದಿಡೀರನೆ ಅವನ ಬಣ್ಣ ಬದಲಾಯಿಸತೊಡಗಿದ. ನಾವು ಕಾಣುತ್ತಿರುವುದು ನಿಜವೂ, ಸುಳ್ಳೋ, ಕನಸೋ, ಯಾರೋ ಬರೆದಿರುವ ಚಿತ್ರವೋ, ಫೋಟೋವೋ? ಹೀಗೆ ಹತ್ತು ಹಲವು ಅನುಮಾನಗಳು ಒಟ್ಟೋಟ್ಟಿಗೆ ಬಂದವು. ಬೆಳ್ಳನೆಯ ಮೋಡ, ನೀಲಿಗೆ ತಿರುಗಿ, ನಂತರ ಕಡುಗಪ್ಪಾಗತೊಡಗಿತು. ಸಣ್ಣ ಮಗುವು ಕೂಡ ಆ ಬದಲಾವಣೆಯನ್ನು ಗಮನಿಸಬಹುದಾಗಿತ್ತು. ಸ್ವಲ್ಪವೂ ಗಾಳಿಯಿಲ್ಲದೇ ಬರಿ ಮೋಡ ಚಲಿಸುವುದು ಬದಲಾಗುವುದು, ಅದರಡಿಯಲ್ಲಿ ದೂರದ ಗುಡ್ಡಗಳು, ನಿಜಕ್ಕೂ ನಮ್ಮನ್ನು ಆನಂದದ ಪರಮಾವಧಿಗೆ ಕರೆದೊಯ್ದವು.ಆದರೇ ಆ ನಗು ಕೆಲವೇ ಕ್ಷಣಗಳಲ್ಲಿ ಮರೆಯಾಗುವುದೆಂಬ ಸುಳಿವು ನಮಗಿರಲಿಲ್ಲ.

ಹಾಗೆಯೇ ಮುಂಬರುವಾಗ ನಿರೀಕ್ಷೆಗೂ ಮೀರಿ ಮಳೆ ಸುರಿಯಲಾರಂಬಿಸಿತು. ಮುಂದಕ್ಕೆ ಚಲಿಸಲಾರದೇ, ಅಲ್ಲಿಯೇ ನಿಂತು ಹೋಗುವುದಾಗಿ ತೀರ್ಮಾನಿಸಿ, ಒಂದು ಮನೆಯ ಕೊಟ್ಟಿಗೆ ಸೇರಿದೆವು.ನಿಂತು ಹಾಡು ಕೇಳಿ ಬೇಸರವಾದಗ ಮಳೆಯಲ್ಲಿಯೇ ನೆನೆದು ಹೋಗೋಣವೆಂದು ಮುನ್ನೆಡೆದೆವು. ಚರಾ ಪಟ್ನ ಸೇರುವಷ್ಟಕ್ಕೆ ನಮ್ಮ ಅಂಗಾಂಗವೆಲ್ಲಾ ಮಳೆಯೊಂದಿಗೆ ಮಿಲನ ಸಾಧಿಸಿದ್ದವು.ಅಲ್ಲಿ ಬಂದ ತಕ್ಷಣ ಎಟಿಎಂ ಕಂಡರೂ ಅದು ರಸ್ತೆ ದಾಟೀ ಹೋಗಬೇಕೆಂಬ ಕಾರಣಕ್ಕೆ ಮುಂದೆ ನೋಡಲು ಬಂದೆವು. ನಾವು ತೀರ್ಮಾನಿಸಿದ್ದರ ವಿರುದ್ದ ತೀರ್ಪು ತಯಾರಾಗಿತ್ತು. ಮುಂದೆ ಎಟಿಎಂ ಸಿಗಲೇ ಇಲ್ಲ, ಮಳೆ ಮತ್ತೂ ಜೋರಾಗಿ ಸುರಿಯಲಾರಂಬಿಸಿತು. ವಿಧಿಯಿಲ್ಲದೇ ಅಲ್ಲೇ ಒಂದು ಮನೆಯ ಬಳಿಯಲ್ಲಿ ಟಿಕಾಣಿ ಹಾಕಿದೆವು. ಸತತ ಒಂದು ಗಂಟೆಗೂ ಹೆಚ್ಚು ಸಮಯ ಸುರಿದು ಜೀವನವನ್ನು ಮಂಕಾಗಿಸಿ ಬಿಟ್ಟಿತು. ಅಲ್ಲಿಂದ ಮುಂದೆ ಬರುವಾಗ, ಹಿರಿಸಾವೆಯಲ್ಲಿಯೂ ಇರಲಿಲ್ಲ, ಬೆಳ್ಳೂರಿನಲ್ಲಿಯು ಎಟಿಎಂ ಸಿಗಲೇ ಇಲ್ಲ, ಪೆಟ್ರೋಲ್ ಹಾಗಲೇ ತಳ ಮುಟ್ಟಿತ್ತು, ಮುಂದಕ್ಕೇ ಹೋಗುವ ಭರವಸೆ ಕಾಣದೆ ಕಂಗಳಾಗಿದ್ದಾಗಲೇ, ನನ್ನ ಸ್ನೇಹಿತ ಪ್ರಿಯ ವಿಜಿ, ಗಾಡಿಯ ಆಕ್ಷಿಲರೇಟರ್ ಅನ್ನು ಹೆಚ್ಚು ನುಳಿದು ನುಳಿದು, ಅದು ಜಾಮ್ ಆಗಿ ಹೋಯಿತು.ಗಾಡಿ ನಿಲ್ಲದೇ ಸುಮನೇ ಓಡುತ್ತಿತ್ತು, ಇದರಿಂದಾಗಿ ಹೆಚ್ಚು ಹೆಚ್ಚು ಪೆಟ್ರೋಲ್ ಕುಡಿದು ನಮ್ಮನ್ನು ಬೀದಿಯಲ್ಲಿ ನಿಲ್ಲುವಂತೆ ಮಾಡುವುದು ನಿಶ್ಚಯವಾಯಿತು.ಅದೂ ಅಲ್ಲದೇ, ನಮ್ಮ ಕಣ್ಣೆದುರು ನಡೆದ ಅಪಘಾತಗಳು ನಮ್ಮನ್ನು ಬೆಚ್ಚಿ ಬೀಳುವಂತೆ ಮಾಡಿದವು. ನಮ್ಮ ಮುಂದೆ ಕೇವಲ ನೂರು ಅಡಿ ಅಂತರದಲ್ಲಿ, ಇಬ್ಬರು ಯುವಕರು ಬೈಕ್ ನಿಂದ ಬಿದ್ದು ಹೋದರು, ನೋಡಿದ ತಕ್ಷಣ ನಾವು ಮುಂದೊಂದು ಜಾಗದಲ್ಲಿ ಹೀಗೆ ಬೀಳುತ್ತೆವೆನ್ನಿಸಿತು. ಜೇಬಿನಲ್ಲಿದ್ದ ಇನ್ನು ಮೂವತ್ತು ರೂಪಾಯಿಗೆ, ಪೆಟ್ರೋಲ್ ಹಾಕಿಸಿ ಎಡಿಯೂರು ತಲುಪಿದರೇ ಅಲ್ಲಿ ಎಟಿಎಂ ಸಿಗುಬಹುದೆಂದು ನಡೆದೆವು.

ನಾವು ನಿರೀಕ್ಷಿಸಿದಂತೆ ಎಟಿಎಂ ಇತ್ತು, ಒಳಕ್ಕೆ ಹೋಗಿ ನನ್ನಲ್ಲಿದ್ದ ಎಲ್ಲಾ ಎಟಿಎಂ ಕಾರ್ಡುಗಳನ್ನು ಹಾಕಿ ನೋಡಿದರೂ ಅದು ಕಾರ್ಯ ನಿರ್ವಹಿಸುತ್ತಿರಲಿಲ್ಲ.ಇಂಥಹ ಚಿಂತಾಜನಕ ಸ್ತಿತಿಯಲ್ಲಿ ಜೇಬಿನಲ್ಲಿ ಒಂದೇ ಒಂದು ರೂಪಾಯಿ ಇಲ್ಲದೇ ಗುರುತಿಲ್ಲದ ಊರಿನಲ್ಲಿ ಅನಾಥ ಪ್ರಜ್ನೆ ಕಾಡುವಂತಾಯಿತು. ಇರುವ ಪೆಟ್ರೋಲ್ ನಲ್ಲಿ, ಕುಣಿಗಲ್ ತಲುಪಿ ಅಲ್ಲಿ ಸಿಕ್ಕೇ ಸಿಗುತ್ತದೆಂಬ ಭರವಸೆಯಿಂದ ಹೊರಟೆವು. ಕುಣಿಗಲ್ ತಲುಪುವ ವೇಳೆಗೆ ಸಂಪೂರ್ಣ ಒದ್ದೆಯಾಗಿದ್ದೇವು.ಬಂದು ನೋಡಿದರೇ, ಅಲ್ಲಿದ್ದ ಮೂರು ಎಟಿಎಂ ಗಳು ಬಾಗಿಲು ಹಾಕಿ ನಮ್ಮನ್ನು ಅಣಕಿಸಿದವು. ಒಂದು ಸಣ್ಣ ತಪ್ಪು ಒಂದು ಸಣ್ಣ ಉಢಾಫೆತನ ನನ್ನನ್ನು ಇಂಥಹ ಸ್ಥಿತಿಗೆ ತಂದಿತಲ್ಲ ಎಂದು ಮುಖ ಬಾಡಿಸಿದೆ.ಇದ್ದ ಪೆಟ್ರೋಲ್ ಬಂಕುಗಳಿಗೆ ಹೋಗಿ, ಕಾರ್ಡು ಉಜ್ಜಬಹುದಾ ಎಂದು ಕೇಳಿದೆ, ಎಲ್ಲಿಂದಲೂ ಸಕರಾತ್ಮಕ ಉತ್ತರ ಸಿಗಲಿಲ್ಲ. ಆ ಊರಿನಲ್ಲಿ ಯಾವೊಬ್ಬನೂ ಪರಿಚಯವಿಲ್ಲ. ಹಿಂದೆ ಅಗಸ್ತ್ಯ ಸಂಸ್ಥೆಯ ಕೆಲಸಕ್ಕೆಂದು ಹೋದಾಗ ಒಬ್ಬರ ಪರಿಚಯವಿತ್ತು, ಅವರ ನಂಬರ್ ಇಲ್ಲದೇ, ಲೆನಿನ್ ಅವರಿಗೆ ಕರೆ ಮಾಡಿ ಕೇಳಿದೆ ಅವರ ಬಳಿ ನಂಬರ್ ಇರಲಿಲ್ಲ.ಮುಂದೇನು? ಆ ದುರ್ಗೇಶ್ ಗೆ ಮುಯ್ಯಿ ಹಾಕದೇ ಇದ್ದಿದ್ದರೇ ಆ ನೂರು ರೂಪಾಯಿ ಇದ್ದಿದ್ದರೇ ಅದು ಈ ಸಮಯಕ್ಕೆ ಉಪಯೋಗಕ್ಕೆ ಬರುತ್ತಿತ್ತು. ಎಂದೂ ಮುಯ್ಯಿ ಹಾಕದ ನಾನು ಮೊದಲ ಬಾರಿಗೆ ಮಾಡಬಾರದು ಮಾಡಿದಂತಾಯಿತೆನ್ನುವಾಗ, ನೆನಪಿಗೆ ಬಂದವನು ಸ್ನೇಹಿತ ಮೋಹನ್, ಅವನಿಗೆ ಕರೆ ಮಾಡಿ ವಿಚಾರಿಸಿದೆ, ಅವನು ಅವನ ಸ್ನೇಹಿತನಿಗೆ ಕರೆ ಮಾಡಿ, ವಿಷಯ ತಿಳಿಸಿ ಎಲ್ಲ ಆಗಲು ಅರ್ಧ ಗಂಟೆ ಹಿಡಿಯಿತು. ಆ ಸಮಯದಲ್ಲಿ ನನ್ನೊಳಗೆ ಆಗುತ್ತಿದ್ದ ಸಂಚಲನವೇ ಬೇರೆ ಇತ್ತು, ದುಡ್ಡೂ ಸಿಗುವುದೋ ಇಲ್ಲವೋ, ಇಲ್ಲದಿದ್ದರೇ ಮಾಡುವುದೇನು?ಆಗಲೇ ಊರೆಲ್ಲಾ ಮಲಗುತಿತ್ತು. ಎಲ್ಲವೂ ಸುಸೂತ್ರವಾಗಿ, ಅವನ ಸ್ನೇಹಿತನ ಸ್ನೇಹಿತ ನೂರು ರೂಪಾಯಿ ಕೊಟ್ಟನು. ಅವನು ಬಂದು ನನ್ನನ್ನು ದಿಟ್ಟಿಸಿದಾಗ ನನಗೆ ನಿಜಕ್ಕೂ ಅವಮಾನವಾಯಿತು. ಪೆಟ್ರೋಲ್ ಗೆ ಕಾಸಿಲ್ಲ ಅಂತ ಅಂದರೇ, ಗಾಡಿ ಯಾಕೋ ಓಡಿಸಬೇಕು ಲೋಫರ್? ಎನ್ನುವಂತಿತ್ತು ಅವನ ನೋಟ. ನೀನು ಏನು ಹೇಳಿಕೊಂಡರೂ ನಾನವನಲ್ಲ ನಾನವನಲ್ಲ ಎಂದು ೭೦ ರೂಪಾಯಿಗಳಿಗೆ ಪೆಟ್ರೋಲ್ ಹಾಕಿಸಿ ಹೊರಟೆವು. ಅಲ್ಲಿಂದ ತಾವರೆಕೆರೆಗೆ ಬಂದು, ಎಟಿಎಂ ನಿಂದ ದುಡ್ಡು ತೆಗೆದು, ಮುಂಬರುವಾಗ ಸರಿಯಾಗಿ ಪೆಟ್ರೋಲ್ ಬಂಕ್ ಮುಂದಕ್ಕೆ ಬಂದು ಗಾಡಿ ನಿಂತಿತು. ಇದೊಂದು ಅದೃಷ್ಟವಾ? ಕಗ್ಗತ್ತಲಿನಿಲ್ಲಿ ಅರ್ಧ ಕಿಮೀ ಕೂಡ ನಡೆಯಲಾಗುತ್ತಿರಲಿಲ್ಲ, ಮೊದಲೇ ಕಳ್ಳ ಕಾಕರ ಭಯವಿರುವ ರಸ್ತೆ.ದರೋಡೆಕೋರರು ಬಹಳಷ್ಟು ಜನ ಇರುವಲ್ಲಿ ನಾವು ನೇರ ಬಂಕಿನ ಹತ್ತಿರ ಬಂದು ನಿಂತಿದ್ದು ಸಮಧಾನವೆನಿಸಿತು.ಅಲ್ಲಿಂದ ಜ್ನಾನ ಭಾರತಿ ಆವರಣದೊಳಕ್ಕೆ ಬರುವ ವೇಳೆಗೆ, ಗಾಡಿ ಸರಿ ಹೋಯಿತು, ಆಕ್ಷಿಲರೇಟರ್ ಸಮಸ್ಯೆ ಪರಿಹಾರವಾಯಿತು.

ಬಂದ ಮೇಲೆ ಎನಿಸಿದ್ದು, ಇದು ಸಮಸ್ಯೆಯ ಮೇಲೆ ಸಮಸ್ಯೆ ಕೊಡುವುದು, ಬರಗಾಲದಲ್ಲಿ ಅಧಿಕ ಮಾಸವೆಂಬಂತೆ ಅಲ್ಲವೇ? ಅಥವಾ ನಾವು ಅಂಥಹ ಸಮಸ್ಯೆಯಲ್ಲಿದ್ದರೂ ಸ್ವಲ್ಪವೂ ಅಡಚನೆಯಾಗದೇ, ತೊಂದರೇ ಆಗದೇ, ತಲುಪಿದೆವಲ್ಲ? ಇದಲ್ಲವೇ ಸಮಸ್ಯೆ ಬಂದಾಗ ಅದಕ್ಕೆ ಪರಿಹಾರವಿರುತ್ತದೆ ಎನ್ನುವುದು.ಇದಕ್ಕೂ ಮೀರಿ ನನಗೆ ಬೇಸರ ತರಿಸಿದ್ದು, ಎಲ್ಲದ್ದಕ್ಕೂ ದುಡ್ಡು ಮುಖ್ಯವಲ್ಲ, ಎಟಿಎಂ ಕಾರ್ಡುಗಳು ಸಾಕು ಎಂದು ಯಾವನೋ ಮುಟ್ಠಾಳ ಕಳುಹಿಸಿದ್ದ ಎಸ್ ಎಂ ಎಸ್. ಕಾರ್ಡುಗಳಿದ್ದರೂ, ಒಂದು ಲೀಟರ್ ಪೆಟ್ರೋಲ್ ಹಾಕಿಸಲಾಗಲಿಲ್ಲ, ಮೂರು ತಾಲೂಕು ಕೇಂದ್ರಗಳನ್ನು ದಾಟಿ ಬಂದರೂ, ಸರಿ ಸುಮಾರು ೧೫೦ ಕಿಮೀ ಪಯಣ ಮಾಡಿದರೂ ಒಂದೇ ಒಂದೂ ಎಟಿಎಂ ಸಿಗಲಿಲ್ಲವೆಂದರೇ? ನಾವು ಬದುಕಿರುವುದು ಎಲ್ಲಿ? ಸಾವಿರಾರು ಜನರು ಈ ಎಟಿಎಂ ಗಳನ್ನು ನಂಬಿ ಬರುತ್ತಾರೆ ಅವರಿಗೆಲ್ಲಾ ನಮ್ಮ ಗತಿಯೇ??

30 ಮೇ 2010

ವಿವಿಯಲ್ಲಿಯ ಬಿಳಿ ಐರಾವತಗಳ ದರ್ಬಾರ್!!!!!!!

ಸದಾ ಇಲ್ಲ ಸಲ್ಲದ ಆರೋಪಗಳು ನನ್ನ ಬರವಣಿಗೆಯಿಂದ ಅಥವಾ ನನ್ನ ಬಾಯಿಯಿಂದ ಬರುತ್ತಲೇ ಇರುತ್ತವೆ, ಇದಕ್ಕೆ ನಮ್ಮಲ್ಲಿರುವ ವ್ಯವಸ್ಥೆ ಕಾರಣವೋ ಅಥವಾ ನನ್ನ ಮನಸ್ಥಿತಿ ಕಾರಣವೋ ತಿಳಿದಿಲ್ಲ.

ಇಂಥಹದೊಂದು ನಡೆಯುವುದು ಮೈಸೂರು ವಿವಿ ಯಲ್ಲಿ ಮಾತ್ರ, ಎಂಟು ವರ್ಷದ ನಂತರ ನಿಮ್ಮ ಅಂಕ ಪಟ್ಟಿಯಲ್ಲಿ ನೀವು ಪಡೆದಿರುವ ಅಂಕಗಳು ತಪ್ಪಾಗಿವೆ, ಯಾರೋ ಎಲ್ಲಿಯೋ ಭ್ರಷ್ಟಾಚಾರ ನಡೆಸಿ ವಿಧ್ಯಾರ್ಥಿಗಳಿಗೆ ಅಧಿಕ ಅಂಕಗಳನ್ನು ನೀಡಿದ್ದಾರೆ, ಅದು ನಮ್ಮ ಗಮನಕ್ಕೆ ಬಂದಿದೆ ನೀವು ನಾವು ತಿಳಿಸಿದ ಸಮಯಕ್ಕೆ ಬರಬೇಕು ನಿಮ್ಮ ಮೂಲ ಪ್ರತಿಯನ್ನು ನಮಗೆ ಕೊಡಬೇಕು, ಇಲ್ಲದ್ದಿದ್ದಲ್ಲಿ ನಿಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಇಂಥಹ ಒಂದು ಪತ್ರ ಮೈಸೂರು ವಿವಿಯಿಂದ ೩ನೆ ತಾರಿಖಿಗೆ ಬರೆದಿದ್ದು, ೭ನೇ ತಾರೀಖಿಗೆ ಬರಬೇಕು. ನಮಗೆ ಪತ್ರ ತಲುಪಿದ್ದು, ಏಳನೇ ತಾರಿಖಿನಂದು, ಅಂದು ಬಾರದೇ ಇದ್ದರೇ ಉದ್ದೇಶಪೂರ್ವಕವೆಂದು ತೀರ್ಮಾನಿಸುತ್ತಾರೆ. ನಾವು ಬದುಕುತ್ತಿರುವುದು ನಿಜಕ್ಕೂ ಪ್ರಜಾಪ್ರಭುತ್ವದಲ್ಲಿಯೇ?

ಮೊದಲಿಗೆ ನಾನು ವಿವಿ ಯ ಮುಂದೆ ಕೆಲವು ಪ್ರಶ್ನೆಗಳನ್ನು ಕೇಳಬಯಸುತ್ತೇನೆ.

1) ಕಳೆದ ಎಂಟು ವರ್ಷಗಳ ತನಕ ತಮ್ಮ ಗಮನಕ್ಕೆ ಬಾರದೇ ದೀಡೀರನೇ ಬಂದಿರಲು ಕಾರಣ? ನಮಗೆ ಕಡಿಮೆ ಅಂಕ ಬಂದಿದ್ದರಿಂದ ತಾವು ಕರೆಯುತ್ತಿರುವಿರಿ,

2) ಯಾವುದಾದರೂ ಅಂಕಪತ್ರಿಕೆಯಲ್ಲಿ ಕಡಿಮೆ ಬಂದಿದ್ದರೇ ತಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು?

3) ನಮ್ಮನ್ನು ೨.೩೦ಕ್ಕೆ ಬರುವುದಕ್ಕೆ ಹೇಳಿ, ತಾವು ಆಗಮಿಸಿದ್ದು, ೪ ಗಂಟೆಗೆ ನಮ್ಮ ಸಮಯದ ಬಗೆಗೆ ತಮ್ಮ ಅನಿಸಿಕೆ ಏನು?

4) ೩ನೇ ತಾರಿಖಿಗೆ ಪತ್ರ ಬರೆದು ಕೇವಲ ಮೂರು ದಿನಗಳ ಸಮಯದಲ್ಲಿ ಬರಬೇಕೆಂದು ಬಯಸುವ ತಾವುಗಳ ನಮ್ಮ ಕೆಲಸದ ಬಗೆಗೆ ನಮ್ಮ ಪರಿಸ್ತಿತಿಯ ಬಗೆಗೆ ಎಂದಾದರೂ ಚಿಂತಿಸಿದ್ದಿರಾ?

5) ಅದಾದ ನಂತರ ತರ್ಕದ ಸಲುವಾಗಿ ಹಗುರವಾದ ಪ್ರಶ್ನೆಗಳಿಂದ ನಮ್ಮನ್ನು ಕೆಣಕಲು ಯತ್ನಿಸುವುದರ ಹಿಂದಿನ ಮರ್ಮವೇನು?

6) ಸಮಿತಿಯವರು ತಾವು ಚರ್ಚಿಸುತ್ತಿರುವುದು, ವಿದ್ಯಾವಂತ ಸಮೂಹದೊಂದಿಗೆ ಎನ್ನುವುದನ್ನು ಮರೆತು, ಸರ್ವಾಧಿಕಾರ ದೋರಣೆ ಮಾಡುವುದು ನಮಗೆ ಹಿಡಿಸುವುದಿಲ್ಲ, ಮೊದಲಿಗೆ ಹೆಚ್ಚಾಗಿ ಏಕವಚನ ಬಳಸುವುದು, ಹೇಳಿದಂತೆ ಸಹಿ ಹಾಕಿ ಇಲ್ಲದಿದ್ದಲ್ಲಿ ನಿರಾಕರಿಸಿದ್ದಾರೆ ಎಂದು ಬರೆಯುತ್ತೇವೆ ಎನ್ನುವುದು.

7) ಒಂದು ಪ್ರತಿಯನ್ನು ಅಚ್ಚು ಹಾಕಿಸಲು, ಕನಿಷ್ಟ ನಾಲ್ಕು ಬಾರಿ ಪ್ರಿಂಟ್ ತೆಗೆದು ಅದನ್ನು ವೆಚ್ಚ ಮಾಡಿಸುವುದು, ಎರಡು ಸಾಲುಗಳನ್ನು ಪ್ರಿಂಟ್ ಮಾಡಿ, ಇಡೀ ಒಂದು ಹಾಳೆಯನ್ನು ವ್ಯರ್ಥಮಾಡುತ್ತಿರುವುದು, ಇವೆಲ್ಲದರ ಮೇಲೆ ಸ್ವಲ್ಪ ನಿಗ ಇಟ್ಟರೇ ಒಲಿತು.

8) ನಾನು ಓದಿದ್ದು, ಪರಿಸರ ವಿಜ್ನಾನ, ಅದರಲ್ಲಿ ನಾವುಗಳು ಇದ್ದದ್ದು, ಕೇವಲ್ ೫ ಜನರು, ಉಪಯೋಗಕ್ಕೆ ಬಾರದ ವಿಷಯವಾಗಿದ್ದ ಪರಿಸರ ವಿಜ್ನಾನ ವಿಷಯಕ್ಕೆ ಹಣ ಕೊಟ್ಟು ಪಾಸ್ ಮಾಡಿಸುವುದರ ಅಗತ್ಯ ಇರುತ್ತದೆಯೆ? ಅವರ ಪ್ರಕಾರದ ಅಂಕಗಳು ಬಂದರೂ ನಾನು ಉತ್ತೀರ್ಣರಾಗಿರುತ್ತಿದ್ದೆ, ಇದರಲ್ಲಿ ವ್ಯತ್ಯಾಸ ಎಲ್ಲಿದೆ? ಅದು ಅಲ್ಲದೇ ಅತಿ ಹೆಚ್ಚು ಅಂಕ ತೆಗೆದಿದ್ದರೂ ನಾವು, ಬಿ.ಎಡ್ ಆಗಲಿ ಮತ್ತೊಂದೆಡೆಗೆ ಹೋಗಲು ಅವಕಾಶವಿಲ್ಲದಿದ್ದರಿಂದ ಅದರ ಅವಶ್ಯಕತೆ ನಮಗೆ ಇದೆಯಾ?

9) ನನ್ನ ಸ್ನೇಹಿತನದು, ಫೇಲ್ ಆಗಿದ್ದರೂ ಕೂಡ, ಅಂಕಗಳು ಹೆಚ್ಚಾಗಿವೆ ಎಂದು ಪತ್ರ ಬರೆದು ಕಳಿಸಿದ್ದಾರೆ, ಅನುತ್ತೀರ್ಣರಾದ ಮೇಲೆ ಅಂಕ ಹೆಚ್ಚಾದರೂ ಕಡಿಮೆಯಾದರೂ ವ್ಯತ್ಯಾಸ ವಿದೆಯೇ?

ಇದರ ಬಗ್ಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೇ ತಮಗೆ ಬರೆಯುತ್ತಿದ್ದೇನೆ.

ಅನ್ಯವಾರ್ತೆ: ಬಿಡುವ ಹಾದಿಯಲಿ!!

ಅನ್ಯವಾರ್ತೆ: ಬಿಡುವ ಹಾದಿಯಲಿ ಹರೀಶ್‌ ಬಾನುಗೊಂದಿ ಈ ಲೇಖನವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಯತ್ನಿಸುತ್ತಿದ್ದೆ. ಬರೆಯುವ ಪ್ರಯತ್ನ ಮಾಡಿರಲಿಲ್ಲ. ಇದಕ್ಕೆ ಎರಡು ...