ಈ ಕುರಿತು ಪ್ರತಿಕ್ರಿಯೆ ನೀಡಬೇಕೆ ಬೇಡವೇ ಎಂದು ಬಹಳ ದಿನಗಳಿಂದ ಯೋಚಿಸಿದ ನಂತರ ನನ್ನ ಅಭಿಪ್ರಾಯವನ್ನು ತಿಳಿಸುತ್ತಿದ್ದೇನೆ. ಇದನ್ನು ಬೇರೆ ಬೇರೆ ಆಯಾಮಗಳಿಂದ ನೋಡಲು ಇಚ್ಛಿಸುತ್ತೇನೆ. ಮೊದಲನೆಯದಾಗಿ, ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದಿದ್ದ, ಅವನ ಅರಿವಿನ ಮಟ್ಟವನ್ನು ವಿಡಿಯೋ ಮೂಲಕ ತಿಳಿಸಿರುವುದು, ಚಿತ್ರಿಸಿ ಪ್ರಸಾರ ಮಾಡಿರುವುದು. ಎರಡನೆಯದಾಗಿ, ಅದೇ ವಿಷಯಕ್ಕೆ ಶಿಕ್ಷಣ ಇಲಾಖೆಯ ಮಂತ್ರಿಗಳು ಸೇರಿದಂತೆ ಅಪರಾಧವಾಗಿ ಪರಿಗಣಿಸಿ ಅಮಾನತ್ತಿನ ಶಿಕ್ಷೆಯನ್ನು ನೀಡಿರುವುದು. ಮೂರನೆಯದು ನೈತಿಕತೆ, ನ್ಯಾಯ ನೀತಿಯ ಕುರಿತು.
ಮೊದ¯ನೆಯದಾಗಿ, ಶಾಲಾ ಸಮಯದಲ್ಲಿ ಮೊಬೈಲ್ ಬಳಸಿರುವುದು ಅಪರಾಧವೆಂಬಂತಹ ಸುದ್ದಿ ಹರಿದಾಡುತ್ತಿರುವುದು. ಸನ್ಮಾನ್ಯ ಮಂತ್ರಿಗಳಲ್ಲಿ ನನ್ನ ಮನವಿ, ತಾವು ಯಾವ ಶತಮಾನದಲ್ಲಿದ್ದೀರಿ? ಮೊಬೈಲ್ ಐದು ನಿಮಿಷ ಕೂಡ ಬಿಟ್ಟಿರದ ಪರಿಸ್ಥಿತಿಯಲ್ಲಿ ನಾವಿರುವುದು ಸತ್ಯ ಮತ್ತು ವಾಸ್ತವ. ನಿಮಗೆ ಒಂದು ಸವಾಲು. ತಾವುಗಳು ಒಂದು ದಿನ ತಮ್ಮ ಮೊಬೈಲ್ ಆಫ್ ಮಾಡಿ ಇರಲು ಸಾಧ್ಯವೇ? ಅದು ಅಸಾಧ್ಯದ ಮಾತು. ಇದರಲ್ಲಿಯೇ, ಮತ್ತೊಂದು ಅಂಶವಿದೆ, ಶಾಲಾಭಿವೃದ್ಧಿ ಬಗ್ಗೆ, ಉತ್ತಮ ಸಂದೇಶಗಳು, ವಿಡೀಯೋಗಳು ಬಂದಾಗ ನೀವು ನಾವೆಲ್ಲರೂ ಆನಂದಿಸಿರುವುದು ಸತ್ಯ. ಒಳ್ಳೆಯ ಅಂಶಗಳು ಬಂದಾಗ ಶಾಲಾ ಆವರಣದಲ್ಲಿ ಮೊಬೈಲ್ ಬಳಸುವುದು ತಪ್ಪೆನಿಸದ ನಾವು, ತಪ್ಪನ್ನು ತೋರಿಸಿದಾಗ ಶಿಕ್ಷೆ ಕೊಡುವುದೇ?
ತಮ್ಮ ಭೇಟಿಯ ಸಮಯದಲ್ಲಿ, ಅದೆಷ್ಟು ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿಲ್ಲ ಸಚಿವರೇ? ಅದು ಕರ್ತವ್ಯ ಲೋಪವೆನಿಸಲಿಲ್ಲವೇ? ನಿಮ್ಮ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ಬಂದಾಗಲೂ ಅವರ ಫೋಟೋ, ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಬರುವುದಿಲ್ಲವೇ? ಅದು ಕರ್ತವ್ಯದ ಸಮಯದಲ್ಲಿ ತೆಗೆದಿದ್ದು ಎನಿಸುವುದಿಲ್ಲವೇ?
ತಾವುಗಳು ಮಗುವಿನ ಕುರಿತು, ಬಹಳ ಕಾಳಜಿ ತೋರಿಸಿರುವುದು ಹೆಮ್ಮೆಯ ವಿಷಯ. ನಾನು, ಒಬ್ಬ ಪೋಷಕನಾಗಿ ನನ್ನ ಮಗುವಿನ ಕಲಿಕೆಗೆ ಬೇಕಿರುವ ಶಿಕ್ಷೆಯನ್ನು, ಅವಮಾನವೆಂದು ತಿಳಿಯುವುದಿಲ್ಲ. ನಾವು ವಿದ್ಯಾರ್ಥಿಗಳಾಗಿದ್ದಾಗ ಹೊಡೆತ, ಬಡಿತ, ಬೈಗುಳಗಳು ಅವಮಾನವೆನಿಸುತ್ತಿರಲಿಲ್ಲ. ಈಗೇಕೇ ಸಚಿವರೇ ಅದು ಅವಮಾನವಾಗುತ್ತಿದೆ? ನಾವು, ಕಿವಿ ಹಿಡಿದು ಬೈಸಿಗೆ ಹೊಡೆಯುತ್ತಿದ್ದೆವು, ಮಂಡಿಯೂರಿ ಕಿವಿ ಹಿಡಿಯುತ್ತಿದ್ದೇವು, ಅದ್ಯಾವುದು ನಮಗೆ ಅವಮಾನವೆನಿಸಲಿಲ್ಲ, ಓದಿದೆವು, ಕಲಿತೆವು ಬೆಳೆದೆವು. ತಮ್ಮಂತಹ ರಾಜಕಾರಣಿಗಳು ಇಂತಹ ಕ್ಷುಲಕ ಕಾರಣದಲ್ಲಿಯೂ ರಾಜಕೀಯ ಮಾಡುವುದನ್ನು ಬಿಡಬೇಕು. ಅಲ್ಲಿಯೂ ಮೈಲೇಜ್ ತೆಗೆದುಕೊಳ್ಳುವುದನ್ನು ಬಿಡಬೇಕು.
ಇಷ್ಟೆಲ್ಲಾ ಮಾತನಾಡುವ ತಾವು, ಒಂದು ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಹೋಗುವ ಶಿಕ್ಷಕರಿಗೆ ಒಒಡಿ ತಡೆಹಿಡಿದಿದ್ದು ತಮ್ಮ ಮನಸ್ಥಿತಿಯನ್ನು ತೋರಿಸುತ್ತಿದೆ. ಬಿಟ್ಟಿ ಪ್ರಚಾರಕ್ಕಾಗಿ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಮಾಡವುದನ್ನು ನಿಲ್ಲಿಸಿ.
ಮೂರನೆಯದಾಗಿ, ಸಮಾಜವೇ ಮೊಬೈಲ್ ದಾಸ್ಯದಲ್ಲಿ ಮುಳುಗಿದೆ. ಒಂದು ಅಪಘಾತ ನಡೆಯುತ್ತಿದ್ದರೂ, ಅತ್ಯಚಾರ ನಡೆಯುತ್ತಿದ್ದರೂ, ಕೊಲೆಯಾಗುತ್ತಿದ್ದರೂ ವಿಡಿಯೋ ಮಾಡುವ ಭರದಲ್ಲಿ ನಮ್ಮ ಸಮಾಜವಿದೆ. ಇದು ಅನೈತಿಕತೆಯ ಪರಮಾವಾಧಿಯಲ್ಲಿ ಮುಳುಗುತ್ತಿರುವುದಕ್ಕೆ ಸಾಕ್ಷ್ಯ.
ಮಿಕ್ಕಿದ್ದು ಓದುಗರ ವಿಮರ್ಶೆಗೆ ಬಿಟ್ಟಿದ್ದು.
ನಾ ಕಂಡ ಸ್ವಾಮಿ ವಿವೇಕಾನಂದ:
ಪ್ರತ್ಯುತ್ತರಅಳಿಸಿಸ್ವಾಮಿ ವಿವೇಕಾನಂದರು ಹುಟ್ಟಿದ ಈ ಸುದಿನದಂದು ನನ್ನ ಅಲ್ಪ ಮತಿಗೆ ತಿಳಿದಿದ್ದನ್ನು ಈ ಮೂಲಕ ತಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.
ಮಾನವತಾ ಮೌಲ್ಯಗಳ ಮೇರು ಪರ್ವತದಂತಿದ್ದ ಶ್ರೀ ವಿಶ್ವನಾಥದತ್ತ(ವ್ರತ್ತಿಯಲ್ಲಿ ವಕೀಲರು) ಹಾಗು ನಮ್ಮ ಭಾರತೀಯ ಶ್ರೀಮಂತ ಸಂಸ್ಕೃತಿಯ ಪ್ರತೀಕದಂತಿದ್ದ ಮಹಾನ್ ದೈವಭಕ್ತೆ ಶ್ರೀಮತಿ ಭುವನೇಶ್ವರಿದೇವಿಯವರ ಮಡಿಲಲ್ಲಿ ೧೨ನೇ ಜನವರಿ ೧೮೬೩ ರಂದು ಆ ಸೂರ್ಯನ ತೇಜಸ್ಸನ್ನು ಹೋಲುವ ಒಂದು ಮಹಾನ್ ಚೇತನದ ಜನನವಾಗಿತ್ತು, ಆ ಚೇತನಕ್ಕೆ ನರೇಂದ್ರನೆಂಬ ನಾಮಕರಣವಾಗಿತ್ತು. ( ಗಮನಿಸಬೇಕಾದ ವಿಷಯ ತಂದೆ ತಾಯಿಗಳ ಸಂಸ್ಕಾರ, ಸಂಸ್ಕೃತಿ, ವಾತಾವರಣ ಮಕ್ಕಳ ಬೆಳವಣಿಗೆಯ ಮೇಲೆ ಅಪಾರವಾದ ಪರಿಣಾಮವನ್ನು ಬೀರುತ್ತದೆ).
ಬೆಳೆಯುವ ಪೈರು ಮೊಳಕೆಯಲ್ಲೇ ನೋಡು ಎಂಬಂತೆ ಈ ನರೇಂದ್ರನ ತುಂಟಾಟ ಒಂದೇ, ಎರಡೇ? ಅಬ್ಬಾ! ಅವರ ತಾಯೀ ಆ ಪೋರನ ತುಂಟಾಟಗಳನ್ನು ನಿಯಮತ್ರಿಸಲು ಅವನ ತಲೆಯ ಮೇಲೆ ತಣ್ಣೀರನ್ನೇ ಸುರಿಯುತ್ತಿದ್ದರು! ಮತ್ತು ಇದಕ್ಕೆ ವ್ಯತಿರಿಕ್ತವೆಂಬಂತೆ ಆ ಬಾಲಕನ ಏಕಾಗ್ರತೆಯನ್ನು ಭಂಗಗೊಳಿಸಲು ಒಂದು ಘಟ ಸರ್ಪದಿಂದಲೂ ಸಾಧ್ಯವಾಗಲಿಲ್ಲ ಎಂಬುದು ಸ್ವಾರಸ್ಯಕರ.
ಇಂತಹ ಚೂಟಿ ಬಾಲಕನ ಜ್ಞಾನಾರ್ಜನೆ ಮತ್ತು ಬೆಳವಣಿಗೆ ಶ್ರಿ ರಾಮಕೃಷ್ಣ ಪರಮಹಂಸ ರಂತಹ ಮಹಾನ್ ಗುರುಗಳ ಸಾರತ್ಯದಲ್ಲಿ ನೂರ್ಮಡಿಗೊಳ್ಳುತ್ತಾ ಸಾಗುತ್ತದೆ. ಸ್ವಾಮಿ ವಿವೇಕಾನಂದರ ಜ್ಞಾನಸಂಪತ್ತು ಆ ಯವ್ವನಾವಸ್ತೆಗೇನೆ ಸಾಟಿಯಿಲ್ಲದ ಜ್ಞಾನಪರ್ವತವಾಗಿ ರೂಪುಗೊಳ್ಳುತ್ತದೆ. ಅವರ ಆ ಜ್ಞಾನದ ಖನಿ ಹೇಗಿರುತ್ತದೆ ಎಂದರೆ " ವಿವಿಧ ಧರ್ಮಗಳಿಗೆಲ್ಲಾ ಮಾತ್ರು ಧರ್ಮದ ನೆಲೆಯಾದ, ವಿಶ್ವದ ನಾಗರೀಕತೆಗಳಲ್ಲೇ ಪ್ರಥಮವಾದ, ಸುಮಾರು ೩೬ ಸಹಸ್ರಮಾನಗಳಿಗೂ ಹೆಚ್ಚು ಹಿನ್ನೆಲೆಯುಳ್ಳ ಸನಾತನ ಸಂಸ್ಕೃತಿಯ ಸೆಲೆಯಂತಿರುವ 'ಭಾರತವನ್ನು' ಅರಿಯಬೇಕಾದರೆ ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ ಎಂದು ನಮ್ಮ ದೇಶದ ಮೊದಲ ನೊಬೆಲ್ ಪ್ರಶಸ್ತಿ ವಿಜೇತರಾದಂತಹ ಮಾನ್ಯ ರವೀಂದ್ರನಾಥಟ್ಯಾಗೋರ್ ರವರು ಹೇಳಿರುವುದನ್ನು ಗಮನಿಸಿದರೆ ಆ ಸಣ್ಣವಯಸ್ಸಿನ್ನಲ್ಲೇ ಸ್ವಾಮಿ ವಿವೇಕಾನಂದರಿಗಿದ್ದ ಜ್ಞಾನದ ಅಘಾದತೆ ಮತ್ತು ಅವರ ಸಾಧನಾ ಶಕ್ತಿಯ ಅರಿವಾಗುತ್ತದೆ!
ಆ ಜ್ಞಾನದ Wisdom ನಿಂದಾಗಿ ಅವರಲ್ಲಿದ್ದ ಆತ್ಮಸ್ತೈರ್ಯ ಹಾಗು ಆತ್ಮವಿಶ್ವಾಸಕ್ಕೆ ಸಾಟಿಯೇ ಇಲ್ಲ . ಅದರ ಆ ತಿಕ್ಷ್ಣತೆಯನ್ನು ಅರಿಯಲು ಈ ವಾಕ್ಯಗಳನ್ನು ಗಮನಿಸಿ-
" ನಾನು ಸಮುದ್ರವನ್ನೇ ಪಾನ ಮಾಡುತ್ತೇನೆ ಎಂದು ಪ್ರಯತ್ನಶೀಲನು ಹೇಳುತ್ತಾನೆ, ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ ಎನ್ನುತ್ತಾವನು" ( ಅಂದರೆ ಎಂತಹ ದೊಡ್ಡ ಗುರಿಯೇ ಆದರೂ ಪರ್ವತದಷ್ಟು ಗಟ್ಟಿ ಸಂಕಲ್ಪದೊಂದಿಗೆ, ನಿತ್ಯ ಪ್ರಯತ್ನದಿಂದ ಎಲ್ಲವೂ ಕಾರ್ಯಸಾದ್ಯ). ಇದಕ್ಕೆ ಉತ್ತಮ ಉದಾಹರಣೆಯೆಂದರೆ ಜಪಾನ್ ದೇಶ. ಈ ಜಪಾನಿಯರು Continues Improvement ಎಂಬುದನ್ನು ಮೂಲಮಂತ್ರವಾಗಿಸಿಕೊಂಡು, ಚಿಕ್ಕ ದೇಶವಾದರೂ ತಮ್ಮ ಅದಮ್ಯ ಇಚ್ಛಾಶಕ್ತಿ ಹಾಗು ಪ್ರಯತ್ನಾಶೀಲತೆಯಿಂದ ಇಂದು ಪ್ರಪಂಚಕ್ಕೇ ಮಾದರಿಯಾಗಿ ನಿಂತಿರುವುದು.
ಇದೇ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದರು ಇನ್ನೊಂದು ಮಾತನ್ನು ಹೇಳುತ್ತಾರೆ " ನನಗೆ ೫೦ ಯುವಕ ಪುರುಷಸಿಂಹರನ್ನು ಕೊಡಿ ನಾನು ಇಡೀ ದೇಶವನ್ನೇ ಬದಲುಸುತ್ತೇನೆ ಎಂದು. ಈ ಹಿನ್ನೆಲಗಳಲ್ಲಿ ಅವರಿಗಿದ್ದ ಆತ್ಮವಿಶ್ವಾಸದ ಅಗಾಧತೆಯನ್ನು ತಿಳಿಯಬಹುದು.
ನೀವು ಗಮನಿಸಿರಬಹುದು, ಎಲ್ಲರೂ 'ಸ್ವಾಮಿ' ವಿವೇಕಾನಂದ ಎಂದೇ ಸಂಭೋಧಿಸುತ್ತಾರೆ, ಯಾರೂ ಸಹ ಬಾಯಿತಪ್ಪಿಯೂ ಬರೀ ವಿವೇಕಾನಂದ ಎಂದು ಸಮಭೋಧಿಸುವುದಿಲ್ಲ, ಅಂದರೆ ಸ್ವಾಮಿ ಎಂಬ ಪದಕ್ಕೆ ಅರ್ಥವನ್ನು ಕೊಟ್ಟ, ತಕ್ಕುದಾದ ತೂಕವನ್ನು ತಂದುಕೊಟ್ಟ ಆ ಮೇರು ವ್ಯಕ್ತಿತ್ವ ಸ್ವಾಮಿ ವಿವೇಕಾನಂದರದ್ದು. ಆ ಜ್ಞಾನಬ್ರಹ್ಮನು ತೊರಿದ ಹಾದಿಯಲ್ಲಿ ನಡೆಯುತ್ತಾ, ನಾವು ಒಳ್ಳೆಯ ಕಾರ್ಯಗಳಲ್ಲಿ ಅಚ್ಚಳಿಯದ ಇಚ್ಛಾಶಕ್ತಿ ಹಾಗು ಪ್ರಯತ್ನಾಶೀಲತೆಯನ್ನು ಕಾಯ್ದುಕೊಳ್ಳುತ್ತಾ, ಪುರುಷಸಿಂಹರಾಗಿ ಈ ನಾಡಿನ ಹಾಗು ದೇಶದ ಪ್ರಗತಿಯಲ್ಲಿ ಪಾಲ್ಗೊಳ್ಳೋಣ..
ಎಲ್ಲರಿಗೂ ಶುಭವಾಗಲಿ🌷.
ಲೇಖಕರು ಸುದರ್ಶನ ರಾ (ಆರಾಸು)