12 ಜನವರಿ 2020

ಪಕ್ಕೆಲುಬು: ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ!!!


ಈ ಕುರಿತು ಪ್ರತಿಕ್ರಿಯೆ ನೀಡಬೇಕೆ ಬೇಡವೇ ಎಂದು ಬಹಳ ದಿನಗಳಿಂದ ಯೋಚಿಸಿದ ನಂತರ ನನ್ನ ಅಭಿಪ್ರಾಯವನ್ನು ತಿಳಿಸುತ್ತಿದ್ದೇನೆ. ಇದನ್ನು ಬೇರೆ ಬೇರೆ ಆಯಾಮಗಳಿಂದ ನೋಡಲು ಇಚ್ಛಿಸುತ್ತೇನೆ. ಮೊದಲನೆಯದಾಗಿ, ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದಿದ್ದ, ಅವನ ಅರಿವಿನ ಮಟ್ಟವನ್ನು ವಿಡಿಯೋ ಮೂಲಕ ತಿಳಿಸಿರುವುದು, ಚಿತ್ರಿಸಿ ಪ್ರಸಾರ ಮಾಡಿರುವುದು. ಎರಡನೆಯದಾಗಿ, ಅದೇ ವಿಷಯಕ್ಕೆ ಶಿಕ್ಷಣ ಇಲಾಖೆಯ ಮಂತ್ರಿಗಳು ಸೇರಿದಂತೆ ಅಪರಾಧವಾಗಿ ಪರಿಗಣಿಸಿ ಅಮಾನತ್ತಿನ ಶಿಕ್ಷೆಯನ್ನು ನೀಡಿರುವುದು. ಮೂರನೆಯದು ನೈತಿಕತೆ, ನ್ಯಾಯ ನೀತಿಯ ಕುರಿತು.

ಮೊದ¯ನೆಯದಾಗಿ, ಶಾಲಾ ಸಮಯದಲ್ಲಿ ಮೊಬೈಲ್ ಬಳಸಿರುವುದು ಅಪರಾಧವೆಂಬಂತಹ ಸುದ್ದಿ ಹರಿದಾಡುತ್ತಿರುವುದು. ಸನ್ಮಾನ್ಯ ಮಂತ್ರಿಗಳಲ್ಲಿ ನನ್ನ ಮನವಿ, ತಾವು ಯಾವ ಶತಮಾನದಲ್ಲಿದ್ದೀರಿ? ಮೊಬೈಲ್ ಐದು ನಿಮಿಷ ಕೂಡ ಬಿಟ್ಟಿರದ ಪರಿಸ್ಥಿತಿಯಲ್ಲಿ ನಾವಿರುವುದು ಸತ್ಯ ಮತ್ತು ವಾಸ್ತವ. ನಿಮಗೆ ಒಂದು ಸವಾಲು. ತಾವುಗಳು ಒಂದು ದಿನ ತಮ್ಮ ಮೊಬೈಲ್ ಆಫ್ ಮಾಡಿ ಇರಲು ಸಾಧ್ಯವೇ? ಅದು ಅಸಾಧ್ಯದ ಮಾತು. ಇದರಲ್ಲಿಯೇ, ಮತ್ತೊಂದು ಅಂಶವಿದೆ, ಶಾಲಾಭಿವೃದ್ಧಿ ಬಗ್ಗೆ, ಉತ್ತಮ ಸಂದೇಶಗಳು, ವಿಡೀಯೋಗಳು ಬಂದಾಗ ನೀವು ನಾವೆಲ್ಲರೂ ಆನಂದಿಸಿರುವುದು ಸತ್ಯ. ಒಳ್ಳೆಯ ಅಂಶಗಳು ಬಂದಾಗ ಶಾಲಾ ಆವರಣದಲ್ಲಿ ಮೊಬೈಲ್ ಬಳಸುವುದು ತಪ್ಪೆನಿಸದ ನಾವು, ತಪ್ಪನ್ನು ತೋರಿಸಿದಾಗ ಶಿಕ್ಷೆ ಕೊಡುವುದೇ?
ತಮ್ಮ ಭೇಟಿಯ ಸಮಯದಲ್ಲಿ, ಅದೆಷ್ಟು ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿಲ್ಲ ಸಚಿವರೇ? ಅದು ಕರ್ತವ್ಯ ಲೋಪವೆನಿಸಲಿಲ್ಲವೇ? ನಿಮ್ಮ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ಬಂದಾಗಲೂ ಅವರ ಫೋಟೋ, ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಬರುವುದಿಲ್ಲವೇ? ಅದು ಕರ್ತವ್ಯದ ಸಮಯದಲ್ಲಿ ತೆಗೆದಿದ್ದು ಎನಿಸುವುದಿಲ್ಲವೇ?

ತಾವುಗಳು ಮಗುವಿನ ಕುರಿತು, ಬಹಳ ಕಾಳಜಿ ತೋರಿಸಿರುವುದು ಹೆಮ್ಮೆಯ ವಿಷಯ. ನಾನು, ಒಬ್ಬ ಪೋಷಕನಾಗಿ ನನ್ನ ಮಗುವಿನ ಕಲಿಕೆಗೆ ಬೇಕಿರುವ ಶಿಕ್ಷೆಯನ್ನು, ಅವಮಾನವೆಂದು ತಿಳಿಯುವುದಿಲ್ಲ. ನಾವು ವಿದ್ಯಾರ್ಥಿಗಳಾಗಿದ್ದಾಗ ಹೊಡೆತ, ಬಡಿತ, ಬೈಗುಳಗಳು ಅವಮಾನವೆನಿಸುತ್ತಿರಲಿಲ್ಲ. ಈಗೇಕೇ ಸಚಿವರೇ ಅದು ಅವಮಾನವಾಗುತ್ತಿದೆ? ನಾವು, ಕಿವಿ ಹಿಡಿದು ಬೈಸಿಗೆ ಹೊಡೆಯುತ್ತಿದ್ದೆವು, ಮಂಡಿಯೂರಿ ಕಿವಿ ಹಿಡಿಯುತ್ತಿದ್ದೇವು, ಅದ್ಯಾವುದು ನಮಗೆ ಅವಮಾನವೆನಿಸಲಿಲ್ಲ, ಓದಿದೆವು, ಕಲಿತೆವು ಬೆಳೆದೆವು. ತಮ್ಮಂತಹ ರಾಜಕಾರಣಿಗಳು ಇಂತಹ ಕ್ಷುಲಕ ಕಾರಣದಲ್ಲಿಯೂ ರಾಜಕೀಯ ಮಾಡುವುದನ್ನು ಬಿಡಬೇಕು. ಅಲ್ಲಿಯೂ ಮೈಲೇಜ್ ತೆಗೆದುಕೊಳ್ಳುವುದನ್ನು ಬಿಡಬೇಕು.

ಇಷ್ಟೆಲ್ಲಾ ಮಾತನಾಡುವ ತಾವು, ಒಂದು ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಹೋಗುವ ಶಿಕ್ಷಕರಿಗೆ ಒಒಡಿ ತಡೆಹಿಡಿದಿದ್ದು ತಮ್ಮ ಮನಸ್ಥಿತಿಯನ್ನು ತೋರಿಸುತ್ತಿದೆ. ಬಿಟ್ಟಿ ಪ್ರಚಾರಕ್ಕಾಗಿ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಮಾಡವುದನ್ನು ನಿಲ್ಲಿಸಿ.
ಮೂರನೆಯದಾಗಿ, ಸಮಾಜವೇ ಮೊಬೈಲ್ ದಾಸ್ಯದಲ್ಲಿ ಮುಳುಗಿದೆ. ಒಂದು ಅಪಘಾತ ನಡೆಯುತ್ತಿದ್ದರೂ, ಅತ್ಯಚಾರ ನಡೆಯುತ್ತಿದ್ದರೂ, ಕೊಲೆಯಾಗುತ್ತಿದ್ದರೂ ವಿಡಿಯೋ ಮಾಡುವ ಭರದಲ್ಲಿ ನಮ್ಮ ಸಮಾಜವಿದೆ. ಇದು ಅನೈತಿಕತೆಯ ಪರಮಾವಾಧಿಯಲ್ಲಿ ಮುಳುಗುತ್ತಿರುವುದಕ್ಕೆ ಸಾಕ್ಷ್ಯ.

ಮಿಕ್ಕಿದ್ದು ಓದುಗರ ವಿಮರ್ಶೆಗೆ ಬಿಟ್ಟಿದ್ದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...