23 ಜುಲೈ 2021

ಸೀಕೋ ಸಂಸ್ಥೆಯ ಆನ್ ಲೈನ್ ಕಾರ್ಯಕ್ರಮ ಯಶಸ್ವಿ: ಲಾಕ್‍ಡೌನ್ ಸಮಯ ಸದುಪಯೋಗ!!!

 ಸೀಕೋ ಸಂಸ್ಥೆ, ಹಾಸನ ಜಿಲ್ಲೆ, ಕೋವಿಡ್-19 ಸಾಂಕ್ರಾಮಿಕದ ಹಿನ್ನಲೆಯಲ್ಲಿ ಲಾಕ್‍ಡೌನ್ ಸಮಯದಲ್ಲಿ  ಹತ್ತನೆಯ ತರಗತಿ ಕನ್ನಡ ಮತ್ತು ಇಂಗ್ಲೀಷ್ ವಿದ್ಯಾರ್ಥಿಗಳಿಗೆ 2ನೇ ಮೇ 2021 ರಿಂದ 20ನೇ ಜುಲೈ 2021 ರವರೆಗೆ ಸತತ ಎರಡೂವರೆ ತಿಂಗಳು ಕಾಲ ಆನ್‍ಲೈನ್ ರಸಪ್ರಶ್ನಾವಳಿಯನ್ನು ಏರ್ಪಡಿಸಿತ್ತು. 

ರಾಜ್ಯದ ಬಹುತೇಕ ಜಿಲ್ಲೆಗಳಿಂದ ಸುಮಾರು 23 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಈ ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಯ ಶಿಕ್ಷಕರುಗಳು, ವಿದ್ಯಾರ್ಥಿಗಳು, ಪೋಷಕರು, ಮಾಧ್ಯಮ ಮಿತ್ರರು, ಸೀಕೋ ಸಂಸ್ಥೆಯ ಸ್ವಯಂಸೇವಕರುಗಳು, ಸಂಘ ಸಂಸ್ಥೆಗಳಿಗೆ ಹೃದಯಪೂರ್ವಕ ಧನ್ಯವಾದಗಳು.  

1. ಶ್ರೀ. ರವಿಕುಮಾರ್ ಕೆ.ಎನ್., ಸಮಾಜವಿಜ್ಞಾನ ಶಿಕ್ಷಕರು, ಬಿ.ಎಸ್.ಎಸ್.ಸ.ಪ.ಪೂ.ಕಾಲೇಜು ಕೊಣನೂರು, ಹಾಸನ ಜಿಲ್ಲೆ, 

2. ಶ್ರೀಮತಿ. ಲತಾ ವೆಂಕಟೇಶ್ ಪೈ, ಗಣಿತ ಶಿಕ್ಷಕಿ, ಸ.ಪ್ರೌ.ಶಾಲೆ ಕಾನ್‍ಬೈಲ್, ಕೊಡಗು ಜಿಲ್ಲೆ

3. ಶ್ರೀಮತಿ. ಮಾಲಾದೇವಿ ಎನ್.ಕೆ., ವಿಜ್ಞಾನ ಶಿಕ್ಷಕಿ, ಸ.ಪ್ರೌ.ಶಾಲೆ ಕಾನ್‍ಬೈಲ್, ಕೊಡಗು ಜಿಲ್ಲೆ

4. ಶ್ರೀ. ದಿನೇಶ್ ಕೆ.ಎನ್., ಕನ್ನಡ ಭಾಷಾ ಶಿಕ್ಷಕರು, ಸ.ಪ್ರೌ.ಶಾಲೆ ಕಾನ್‍ಬೈಲ್, ಕೊಡಗು ಜಿಲ್ಲೆ

5. ಶ್ರೀಮತಿ. ಜ್ಯೋತಿ ಬಿ.ಎಸ್., ಇಂಗ್ಲೀಷ್ ಭಾಷಾ ಶಿಕ್ಷಕಿ, ಸ.ಪ್ರೌ.ಶಾಲೆ, ಹಾಸನ ಜಿಲ್ಲೆ, 

6. ಶ್ರೀಮತಿ. ಮೇಘರಾಣಿ ಎಂ.ಜಿ., ವಿಜ್ಞಾನ ಶಿಕ್ಷಕಿ, ಸ.ಪ.ಪೂ. ಕಾಲೇಜು (ಬಾಲಕಿಯರ) ಅರಕಲಗೂಡು

7. ಶ್ರೀ. ತಿಪ್ಪೇಸ್ವಾಮಿ ಕೆ.ಸಿ., ಸಮಾಜವಿಜ್ಞಾನ ಶಿಕ್ಷಕರು, ಶ್ರೀ.ದೊರೆ ವೀರರಾಜೇಂದ್ರ ಪ್ರೌಢ ಶಾಲೆ, ಬೇಳೂರು, ಕೊಡಗು ಜಿಲ್ಲೆ

8. ಶ್ರೀ. ಬಾಲಸುಬ್ರಹ್ಮಣ್ಯ ಎಸ್., ಸಮಾಜವಿಜ್ಞಾನ ಶಿಕ್ಷಕರು, ಸ.ಪ.ಪೂ.ಕಾಲೇಜು ಕುಶಾಲನಗರ, ಕೊಡಗು ಜಿಲ್ಲೆ

9. ಶ್ರೀಮತಿ. ಸವಿತ ಹೆಚ್.ಎಲ್. ಇಂಗ್ಲೀಷ್ ಭಾಷಾ ಶಿಕ್ಷಕಿ, ಸ.ಪ್ರೌ.ಶಾಲೆ ಕಾನ್‍ಬೈಲ್, ಕೊಡಗು ಜಿಲ್ಲೆ 


ಧನ್ಯವಾದಗಳೊಂದಿಗೆ,

 

ಡಾ. ಹರೀಶ್ ಕುಮಾರ ಬಿ.ಕೆ.

(ಕಾರ್ಯಕಾರಿ ನಿರ್ದೇಶಕರು)


ಕೊಣನೂರು ಜುಲೈ 23. ಕೋವಿಡ್-19ರ ಎರಡನೆಯ ಅಲೆಯ ಲಾಕ್ ಡೌನ್ ಸಮಯದಲ್ಲಿ ಸೀಕೋ ಸಂಸ್ಥೆ, ಹಾಸನ ಜಿಲ್ಲೆ ವತಿಯಿಂದ ಹತ್ತನೆಯ ತರಗತಿ ವಿದ್ಯಾರ್ಥಿಗಳಿ ಮೇ 2 ರಿಂದ ಜುಲೈ 20 ರವರೆಗೆ ಸತತ ಆನ್ ಲೈನ್ ರಸಪ್ರಶ್ನಾವಳಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕನ್ನಡ ಮತ್ತು ಇಂಗ್ಲೀಷ್ ಎರಡು ಮಾಧ್ಯಮದಲ್ಲಿ ಪ್ರಶ್ನಾವಳಿ ಕಾರ್ಯಕ್ರಮಗಳು ನಡೆದಿದ್ದವು. ಪರೀಕ್ಷೆಗೆ ಅನುಕೂಲವಾಗುವಂತೆ ಎಲ್ಲಾ ವಿಷಯಗಳಲ್ಲಿ ಎಲ್ಲಾ ಘಟಕಗಳನ್ನು ಒಳಗೊಂಡಂತೆ ಪ್ರಶ್ನಾವಳಿಯನ್ನು ಸಿದ್ಧಪಡಿಸಲಾಗಿತ್ತು. ಶೇ. 100 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸೀಕೋ ಸಂಸ್ಥೆಯು ವಾಟ್ಸಪ್ ಮೂಲಕ ಇ-ಪ್ರಮಾಣ ಪತ್ರವನ್ನು ವಿತರಿಸಿತ್ತು. ರಸಪ್ರಶ್ನಾವಳಿಯಲ್ಲಿ 23 ಸಾವಿರಕ್ಕೂ ಹೆಚ್ಚೂ (23766) ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯು ಆಯೋಜಿಸಿದ್ದ ಪ್ರಶ್ನೆಗಳು ವಾರ್ಷಿಕ ಪರೀಕ್ಷೆಯಲ್ಲಿಯೂ ಬಂದಿದ್ದರಿಂದ, ಪರೀಕ್ಷಾ ತಯಾರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ತಲುಪಿ ಯಶಸ್ವಿಯಾಗಲು ಸಹಕರಿಸಿದ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಯ ಶಿಕ್ಷಕರುಗಳು, ಪೋಷಕರು, ಮಾಧ್ಯಮ ಮಿತ್ರರು, ಸೀಕೋ ಸಂಸ್ಥೆಯ ಸ್ವಯಂಸೇವಕರುಗಳು, ಸಂಘಸಂಸ್ಥೆಗಳಿಗೆ ಸೀಕೋ ಸಂಸ್ಥೆಯ ಮುಖ್ಯಸ್ಥ ಡಾ. ಹರೀಶ್ ಕುಮಾರ ಬಿ.ಕೆ. ರವರು ಧನ್ಯವಾದಗಳನ್ನು ಅರ್ಪಿಸಿದರು. ಇದೇ ರೀತಿಯ ಸಹಕಾರ ಮುಂದಿನ ಕಾರ್ಯಕ್ರಮಗಳಲ್ಲಿಯೂ ಮುಂದುವರೆಯಲಿ ಎಂದು ವಿನಂತಿಸಿದರು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅನ್ಯವಾರ್ತೆ: ಬಿಡುವ ಹಾದಿಯಲಿ!!

ಅನ್ಯವಾರ್ತೆ: ಬಿಡುವ ಹಾದಿಯಲಿ ಹರೀಶ್‌ ಬಾನುಗೊಂದಿ ಈ ಲೇಖನವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಯತ್ನಿಸುತ್ತಿದ್ದೆ. ಬರೆಯುವ ಪ್ರಯತ್ನ ಮಾಡಿರಲಿಲ್ಲ. ಇದಕ್ಕೆ ಎರಡು ...