28 ಜುಲೈ 2021

ಪ್ರೋ. ಜಿ.ಎಸ್. ಜಯದೇವರವರ "ಸೋಲಿಗ ಚಿತ್ರಗಳು" ಪುಸ್ತಕ ಕುರಿತು ಬುಕ್ ಟಾಕ್ ಕಾರ್ಯಕ್ರಮ!!!

 





ಸೀಕೋ ಸಂಸ್ಥೆ, ಹಾಸನ ಜಿಲ್ಲೆ ವತಿಯಿಂದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪರವ ಪುತ್ರ ಹಾಗೂ  ದೀನಬಂಧು ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಜಿ. ಎಸ್. ಜಯದೇವರವರಸೋಲಿಗ ಚಿತ್ರಗಳುಹೊಸ ಪುಸ್ತಕದ ಕುರಿತು ಆನ್ಲೈನ್ ಬುಕ್ ಟಾಕ್ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮವು ಜುಲೈ 31ನೇ ಶನಿವಾರ ಸಂಜೆ 6.30ಕ್ಕೆ ಝೂಮ್ ವೇದಿಕೆಯಲ್ಲಿ ನಡೆಯುತ್ತದೆ.

ಕಾರ್ಯಕ್ರಮದಲ್ಲಿ ಲೇಖಕರಾದ ಪ್ರೊ. ಜಿ. ಎಸ್. ಜಯದೇವ ರವರ ಘನಉಪಸ್ಥಿತಿಯಿದ್ದು, ಹಿರಿಯ ಸಾಹಿತಿಗಳಾದ ಡಾ. ನಟರಾಜ ಬೂದಾಳು ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಹರಿಪ್ರಸಾದ್ ಜಿ.ವಿ., ಹಿರಿಯ ಉಪನ್ಯಾಸಕರು, ಡಯಟ್ ಶಿವಮೊಗ್ಗ, ಡಾ. ಚಂದ್ರಶೇಖರ್ ಹೆಚ್.ಬಿ., ಹಿರಿಯ ಸಹಾಯಕ ನಿರ್ದೇಶಕರು, ಡಿಎಸ್ಇಆರ್ಟಿ, ಬೆಂಗಳೂರು ಮತ್ತು ಶ್ರೀ. ಭಾನು ಕುಮಾರ್ ಆರ್., ಉಪನ್ಯಾಸಕರು, ಡಯಟ್ ಮಂಡ್ಯ ರವರು ಮಾತನಾಡಲಿದ್ದಾರೆ.

 

ಲೇಖಕರು ನಲವತ್ತು ವರ್ಷಗಳ ಸೋಲಿಗರೊಂದಿಗಿನ ಒಡನಾಟ, ನಂಬಿಕೆ, ಪರಿಸರ ಜ್ಞಾನ, ಕಾಳಜಿ, ಸಂರಕ್ಷಣೆ, ಪಾರಂಪಾರಿಕ ಜ್ಞಾನ, ಸಂಸ್ಕøತಿ, ಸೋಲಿಗರ ಬದುಕಿನಲ್ಲಾದ ಬದಲಾವಣೆಗಳು, ಸಮಸ್ಯೆಗಳು ಎಲ್ಲವನ್ನೂ ಇಂಚಿಂಚಾಗಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಪುಸ್ತಕವನ್ನು ಅನೇಕ ಆಯಮಾಗಳಿಂದ ಓದಬೇಕಾಗಿದೆ. ಹಿನ್ನಲೆಯಲ್ಲಿ  ಬುಕ್ ಟಾಕ್ ಆಯೋಜಿಸಲಾಗಿದ್ದು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರುತ್ತೇನೆ.

ಭಾಗವಹಿಸಲು: ಜೂಮ್ ವೇದಿಕೆಯಲ್ಲಿ ಮೀಟಿಂಗ್ ಐಡಿ: 473 190 7076 ಪಾಸ್ ಕೋಡ್:ceeco

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...