30 ಡಿಸೆಂಬರ್ 2009

ಇದೊಂದು ಸಾರ್ಥಕತೆಯೋ? ಅಥವಾ ಸ್ವಾರ್ಥವೋ?



ಇಂಥಹದೊಂದು ಯೋಚನೆ ನನ್ನ ತಲೆಗೆ ಬಂದದ್ದು ಇಂದು ಬೆಳ್ಳಿಗ್ಗೆ ವಿಷ್ಣುವರ್ಧನ್ ತೀರಿಕೊಂಡ ಸುದ್ದಿ ತಿಳಿದ ಮೇಲೆ. ಅಯ್ಯೊ ಪಾಪ ಹೋಗಬಾರದಿತ್ತು, ಚಿನ್ನದಂತಹ ಮನುಷ್ಯ, ಎಂಥಹ ಅದ್ಬುತ ನಟ, ಇತ್ತೀಚೆಗೆ ಆಧ್ಯಾತ್ಮಿಕತೆ ಕಡೆಗೆ ಬಹಳ ಬದಲಾಗಿದ್ದರು. ಅವರ ವ್ಯಕ್ತಿತ್ವ ಬಗೆಗೆ ಅವರ ಬಗೆಗೆ ನಮಗೆ ನಮ್ಮವರೆ, ನಮ್ಮ ಮನೆಯವರೇ ಕಳೆದುಹೋದರೆಂಬಷ್ಟು ನೋವಾಗುತ್ತದೆ.ಮುಂಜಾನೆದ್ದು ಟಿ.ವಿ.ಮುಂದೆ ಕುಳಿತು ಅಲ್ಲಿರುವ ದೃಶ್ಯ ನೋಡುವಾಗ ನಮಗೆ ತಿಳಿಯದಂತೆ ಕಣ್ಣು ಒದ್ದೆಯಾಗುತ್ತವೆ. ಅಯ್ಯೋ ಇನ್ನಷ್ಟು ವರ್ಷವಿರಬಾರದಾಗಿತ್ತೆ ಎನಿಸುತ್ತದೆ. ನಿನ್ನೆ ಮಧ್ಯಾಹ್ನ ನನ್ನ ಸ್ನೇಹಿತ ಅಶ್ವತ್ ಅವರು ಹೋದರು ಎಂದು ತಿಳಿಸಿದಾಗ, ನಮ್ಮವರೇ ನಮ್ಮ ಮನೆಯವರೇ ಕಳೆದುಹೋದರೆಂಬಂತೆ ಮಂಕಾಗಿಬಿಟ್ಟೆ. ನಾನು ಅವರನೆಂದು ಕಂಡಿಲ್ಲ, ಮಾತನಾಡಿಸಿಲ್ಲ, ಅವರ ಬಗ್ಗೆ ಅತಿ ಹೆಚ್ಚು ಗೊತ್ತಿಲ್ಲ, ನಾನು ಆನಂದಿಸಿರುವುದು ಅವರ ಗಾಯನವನ್ನು ಮಾತ್ರ. ನನಗೆ ತಿಳಿದಿರುವುದು ಅವರ ಗಾಯನ ಮತ್ತು ಕನ್ನಡಕ್ಕೆ ಅವರು ಸಲ್ಲಿಸಿದ ಕೊಡುಗೆ. ವೈಯಕ್ತಿಕವಾಗಿ ನಾವೆಂದು ಆತ್ಮೀಯರಲ್ಲ, ಆದರೂ ಇಂಥಹದ್ದು ಆಗುವುದು ಯಾಕೆ? ಗೆಳೆಯ ಗೆಳತಿಯರನ್ನು ಕಳೆದುಕೊಂಡಷ್ಟೆ ನೋವಾಗುವುದಾದರೂ ಏಕೆ? ದಿನಕ್ಕೊಮೆಯಾದರೂ ಅಶ್ವತ್ ಅವರ ಗಾಯನ ಕೇಳುವಂತೆ ಮಾಡಿದ ಅವರ ಕಂಚಿನ ಕಂಠ ನಮ್ಮನ್ನು ಸಂಪೂರ್ಣ ಆವರಿಸಿತ್ತೆ? ಅಯ್ಯೋ ಈ ಜನರು ಯಾಕಾದರೂ ಸಾಯುತ್ತಾರೆ, ಅಭಿಮಾನಿಗಳು ಎಂದಾಕ್ಷಣ ಸಾಯಬೇಕೆ? ಅವರೇನು ಮಾಡಿದ್ದರು ನಮಗೆ ನಮ್ಮ ಸಮಾಜಕ್ಕೆ ಎನ್ನುವ ಅನೇಕ ಜನಸಮೂಹಕ್ಕೆ ನನ್ನ ಬಳಿ ಉತ್ತರವಿದೆ. ಅವರು ನನಗೆ ನೇರ ಸಂಬಂಧವಿಲ್ಲದಿದ್ದರೂ ನನಗೆ ಸಹಾಯ ಮಾಡಿರುವುದು ಅತಿ ಹೆಚ್ಚು, ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗೆಳತಿ ನನ್ನನಗಳಿ ದೂರಾದಾಗ ನನಗೆ ನೆರವಾಗಿ ಸಾಂತ್ವಾನ ಹೇಳಿದ್ದು ಅವರ ಆ ಗೀತೆಗಳು. ಮೌನ ತಬ್ಬೀತು ಎನ್ನುವಾಗ ನನ್ನೊಳಗೆ ಅಡಗಿರುವ ಅದೆಷ್ಟೋ ನೋವುಗಳು ಹರಿದು ಬರುತ್ತವೆ, ಸಮಧಾನ ಗೊಳಿಸುತ್ತವೆ. ಅದರಂತೆಯೇ, ಹೇಳಿ ಹೋಗು ಕಾರಣ ಎಂದು ಅವರ ಗಾನ ಬಂದೊಡನೆ ನಾನು ಕಳೆದುಹೋದ ದಿನಗಳ ನೆನೆದು ಮರುಗುತ್ತೇನೆ ನಂತರ ಪ್ರೀತಿಯಲ್ಲಿ ಸೋಲೆಂಬುದಾಗಲಿ ನೋವಾಗಲಿ ಇಂದಿನದಲ್ಲವೆಂದು ಸಮಧಾನವಾಗುತ್ತದೆ. ಎಲ್ಲರೂ ಎಲ್ಲಾ ಕಾಲದಲ್ಲಿಯೂ ಅನಿಭವಿಸುತ್ತಿರುವುದನ್ನು ನಾವು ಇಂದು ಅನುಭವಿಸುತ್ತಿದ್ದೇವೆ, ಮೋಸ ವಂಚನೆ, ಸುಖ, ದುಃಖ ಇವೆಲ್ಲವೂ ಎಂದೆಂದಿಗೂ ಇದ್ದವು ಇಂದು ನಾಳೆಯೂ ಇರುತ್ತವೆಂಬುದನ್ನು ನಾವು ಅರಿಯಲು ಸಹಾಯ ಮಾಡುವುದೇ ಅಶ್ವತ್ ರವರ ಗಾನಸುಧೆ.

ಸಂಗೀತವೆಂಬುದು ಬರಿಯ ಸಂತೋಷಕ್ಕೆ ಮಾತ್ರವಲ್ಲ ಅದರಿಂದ ಗುಣವಾಗದ ರೋಗವಿಲ್ಲ, ಮನುಷ್ಯನ ನೆಮ್ಮದಿಯ ಬದುಕಿಗೆ, ನೋವಿನಿಂದ ಹೊರಬರಲು ಸಂಗೀತ ಬಹಳ ಮುಖ್ಯವಾದದ್ದು, ನನ್ನಂತಹ ಸಾವಿರಾರು ನೊಂದ ಮನಗಳಿಗೆ ಶಕ್ತಿ ತುಂಬವ ಗಾಯನಗಳು ಕಡಿಮೆ ಅಲ್ಲ. ಆದರೇ, ರಾಜಕಾರಣಿಗಳು ತಿವಾರಿ ತನ್ನ ಎಂಬತ್ತನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳದ ಬಗ್ಗೆಗೆ ದೂರಾದಾಗ, ಅಯ್ಯೋ ಇಂಥಹ ನನ್ಮಕ್ಕಳು ಸಾಯಬಾರದೇ ಎನಿಸುತ್ತದೆ.ದೇವೇಗೌಡರು ಪದೇ ಪದೇ ಗಾನ ಹಾಡುವಾಗ ಈ ಮುದುಕನಿಗೆ ಸಾವು ಬರುವುದೆಂದು ಎನಿಸುತ್ತದೆ? ನಮ್ಮ ಅನೇಕ ಪ್ರೋಫೆಸರ್ ಗಳು ವಯಸ್ಸಿನ ಮಿತಿಯಿಲ್ಲದೇ ಕೆಟ್ಟದ್ದಾಗಿ ವರ್ತಿಸಿದ್ದಾಗ ಛೀ ಥೂ ಅನಿಸುತ್ತದೆ. ಅದರಂತೆಯೇ ಮೊನ್ನೆ ಎಂ.ಪಿ.ಪ್ರಕಾಶ್ ಅವರು ಬರೆದ ಒಂದು ಕಥೆ ಓದುತ್ತಿದ್ದಾಗ ಅಯ್ಯೊ ಇವರು ಇರಬೇಕಿತ್ತು ರಾಜಕೀಯದಲ್ಲಿ ಎನಿಸುತ್ತಿತ್ತು, ನನ್ನ ನೆಚ್ಚಿನ ಬರಹಗಾರರಾದ ತೇಜಸ್ವಿ ಅವರು ಹೋದಾಗ ನಿಜಕ್ಕೂ ಅದೆಷ್ಟು ವ್ಯತೆಯಾಯಿತೆಂದರೇ ಹೇಳತೀರದು. ರಾಜಶೇಖರ್ ರೆಡ್ಡಿ ಹೋದಾಗಲೂ ಅಷ್ಟೇ.ಯಾರ ಸಾವು ನಮಗೆ ಸಂತೋಷ ಕೊಡುವುದಿಲ್ಲ, ಅಂಥಹ ವೀರಪ್ಪನ್ ಸತ್ತಾಗಲೂ, ಪ್ರಭಾಕರನ್ ಹೋದಾಗಲೂ, ನಮಗೆ ನೋವಾಗಿತ್ತು. ಸತ್ತಾಗ ನಾವು ಅವರನ್ನು ಕಾಣುವುದು ಕೇವಲ ಮನುಷ್ಯರಾಗಿ, ಅಲ್ಲಿ ಒಳ್ಳೆಯವರು ಕೆಟ್ಟವರೆಂಬ ಭೇಧವಿರುವುದಿಲ್ಲ. ಎಲ್ಲ ಜೀವವೂ ಒಂದೆ ಎಂದು ನೆನೆಯುತ್ತೇವೆ. ಬದುಕಿದ್ದಾಗ ನೋವು ಕೊಡುವವರನ್ನು, ಮೋಸ ಮಾಡುವವರನ್ನು ಅವರಿಗೆ ಕೆಟ್ಟದ್ದಾಗಲೀ ಎಂದು ಬಯಸಿದರೂ, ಅವರಿಗೆ ಕೆಟ್ಟದ್ದಾದಾಗ ಮರುಗುತ್ತೇವೆ, ಕೊರಗುತ್ತೇವೆ. ನನ್ನ ಜೀವದ ಗೆಳತಿ ಹೋದಾಗ ನನ್ನ ಜೀವವೇ ಹೋದಂತಾಗಿ ಅವಳಿಗೆ ಶಾಪವಿತ್ತರೂ ಅವಳ ಕಣ್ಣಲ್ಲಿ ನೀರು ಬಂದರೇ ನಾನು ಕರಗುತ್ತೇನೆ ಕಳೆದೇಹೋಗುತ್ತೇನೆ, ಕಾರಣ ನಾನು ಮನುಷ್ಯನೇ!!! ಇದೆಲ್ಲವೂ ನಮ್ಮ ಸ್ವಾರ್ಥಕ್ಕೆ ಅನಿಸುತ್ತದೆ ನಮ್ಮವರಾಗಿರುವ ತನಕ ಅವರಿಗೆ ಏನು ಆಗದಿರಲಿ ಎನ್ನುವ ಬಯಕೆ ನಮ್ಮವರಲ್ಲದೇ ಹೋದರೇ ಹಾಳಾಗಲೀ ಎನ್ನುವ ತವಕ. ಇದು ಸ್ವಾರ್ಥವೋ? ಅಥವಾ ಸಾರ್ಥಕತೆಯೋ? ಒಳ್ಳೆಯವರು ಮಾತ್ರ ಇರಲಿ ಎಂಬ ಬಯಕೆ ಇರಬಹುದೇ? ಅದಕ್ಕಾಗಿಯೇ ನಾವು ಅಂಥವರನ್ನು ಬಹಳ ಕಾಲ ಇರಲಿ ಎಂದು ಹಾರೈಸುತಿರುವುದೇ? ಉತ್ತರ ನಿಮಗೆ ಬಿಟ್ಟದ್ದು...

1 ಕಾಮೆಂಟ್‌:

  1. Hi..
    Thats a short and sweet post...
    But the bitter thing is death of great people... Nevertheless the post rakes up several questions in an individual..

    The final question posed by you is paradoxcal... no answers!!!!
    Keep writing...
    :-)
    Regina

    ಪ್ರತ್ಯುತ್ತರಅಳಿಸಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...