ಜೀವನದ ಬಗೆಗೆ ಮಾತನಾಡುತ್ತಿರುವಾಗ, ಒಮ್ಮೊಮ್ಮೆ ದಿಡೀರನೆ ಬಹಳ ಭಾವುಕರಾಗಿ ಮಾತನಾಡಲಾರಂಬಿಸುತ್ತೇವೆ. ಇದು ಕೇವಲ ಭಾವುಕತೆಯಲ್ಲ, ನಮ್ಮೊಳಗಿರುವ ನೋವು ಅಡಗಿರುತ್ತದೆ, ಸಮಾಜದ ವಿರುದ್ದ, ಅಥವಾ ಮತ್ತಾವುದೋ ವ್ಯವಸ್ಥೆಯಿಂದ ಬೇಸತ್ತ ನೋವು ಇಲ್ಲಿ ಸೇರಿರುತ್ತದೆ. ದಿನ ನಿತ್ಯ, ಕೇವಲ ಮೋಸ, ವಂಚನೆ, ದ್ರೋಹ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ ಹೀಗೆ ಇಂಥವುಗಳನ್ನೇ ಕಂಡು ಕರಗಿಹೋಗಿರುವಾಗ ಇದ್ದಕ್ಕಿದ್ದ ಹಾಗೆ ಕೋಪ ಬರುವುದು ಸರಿಯೆ! ಒಂದು ಕಡೆ ವಿದ್ಯಾವಂತ ಸ್ನೇಹಿತರೆಲ್ಲರೂ ಸೇರಿ ಸಮಾಜದ ಬಗೆಗೆ ಚಿಂತಿಸುತ್ತಿರುವಾಗ, ನಡುವಲ್ಲಿಯೇ, ಯಾರೋ ಒಬ್ಬ ಸ್ನೇಹಿತ, ಲಂಚಕೊಟ್ಟೂ ಪೋಲಿಸ್ ಆದ, ಮತ್ತೊಬ್ಬ ಕೆ ಎ ಎಸ್ ಮಾಡಿದ, ಮತ್ತೊಬ್ಬ ಇಪ್ಪತ್ತು ಲಕ್ಷ ವರದಕ್ಷಿಣೆಗೆ ಸೋತ ಎಂದಾಗ, ನಮಗೆ ಎನಿಸುವುದಿಷ್ಟೇ ಊರ ಉಸಾಬರಿ ನಮಗೇಕೆ? ಯಾರಿಗೂ ಇಲ್ಲದ ಉತ್ಸಾಹ ಅಭಿಮಾನ ನಮಗೇಕೆ. ಭೂಮಿ ಹುಟ್ಟಿ ಸಾವಿರಾರು ವರ್ಷವಾಗಿದೆ, ಕೋಟ್ಯಾಂತರ ಜನ ಸತ್ತಿದ್ದಾರೆ, ಸಾಧಿಸಿದ್ದಾರೆ, ಯಾವುದೂ ಶಾಶ್ವತವಲ್ಲ, ನಾವೆಕೆ ಹೊಡೆದಾಡಬೇಕು, ಮನೆ ಮಂದಿಯಿಂದ ಶಾಪ ಹಾಕಿಸಿಕೊಳ್ಳಬೇಕು?
ರೇಡಿಯೋ ದಲ್ಲಿ, ಟಿವಿಗಳಲ್ಲಿ ನಿರೂಪಕರಾಗಿರುವವರು ಕನ್ನಡಿಗರು, ಕರುನಾಡಲ್ಲಿ ಹುಟ್ಟಿದವರು, ಕನ್ನಡದ ಹೆಸರಲ್ಲಿ ಅನ್ನ ತಿನ್ನುತ್ತಿರುವವರು ಆದರೇ ಅವರ ಆ ಪದಗಳ ಉಚ್ಚಾರಣೆ, ಕನ್ನಡದ ಬಗೆಗಿರುವ ಧೋರಣೆ ಮಾತ್ರ ಕಂಡನೀಯ. ಒಬ್ಬೊಬ್ಬ u2 ನಲ್ಲಿ ಮಾತನಾಡುವ ನಿರೂಪಕರನ್ನು ನೋಡಿ, ಅವರ ಭಾಷೆಯನ್ನು ಕೇಳಿ, ಎಫ್ ಎಂ ನಲ್ಲಿ ಮಾತನಾಡುವ ಮಹನೀಯರನ್ನು ಆಲಿಸಿನೋಡಿ, ಅವರು ಹಂಗಿಸಲು ಆಯ್ಕೆ ಮಾಡುವ ವಿಷಯಗಳು ನಾಡಿನ ಗಣ್ಯ ವ್ಯಕ್ತಿಗಳನ್ನ! ರಾಜ್ಯದ, ನಾಡಿನ, ಭಾಷೆಯ ಬಗೆಗೆ ಸ್ವಲ್ಪವೂ ಗಂಭೀರತೆಯಿಲ್ಲದೆ ತಾವು ಆಡಿದ್ದೆ ಆಟ ಅಥವಾ ಭಂಡತನವನ್ನೋ ಮೆರೆದುಕೊಳ್ಳುವುದೇ ಇಂಥವರ ಜಾಯಮಾನವೆಂದರೇ ನಾವೇಕೆ ಹೊಡೆದಾಡಬೇಕು? ಸಮಾಜ ಹಾಳಾದರೇ ಎಲ್ಲರಿಗೂ ಹಾಳೆಂದು ನಮ್ಮ ಮನ್ನಸೇಕೆ ಕೇಳುವುದಿಲ್ಲ. ದೇಶ ಉದ್ದಾರ ಮಾಡಲು ಸಾಧ್ಯವಿಲ್ಲ, ಆದರೇ ಕೊಳೆತು ನಾರುತ್ತಿರುವ ಸಮಾಜದಲ್ಲಿ ಬದುಕಲು ಅರ್ಹರಲ್ಲ, ಹುಟ್ಟಿದ್ದು ತಪ್ಪಾ, ಅಥವಾ ಭಾವುಕರಾಗಿ, ದೇಶದ, ನಾಡಿನ, ಭಾಷೆಯ ಬಗೆಗೆ ಒಲವನ್ನು ಬೆಳೆಸಿಕೊಂಡದ್ದು ತಪ್ಪಾ?
ಗಾಂಧೀಜಿ ದೇಶದ ಸ್ವಾತಂತ್ರ್ಯ ಶ್ರಮ ಪಟ್ಟ ಅರಿವು ನಮಗೆಂದಿಗೂ ಬರುವುದಿಲ್ಲ, ಆದರೇ ಫೇಸ್ ಬುಕ್ ನಲ್ಲಿ ನಮ್ಮ ದೇಶದ ನೋಟಿನಲ್ಲಿರುವ ರಾಷ್ಟ್ರಪಿತನಿಗೆ ಪೆನ್ಸಿಲ್, ಪೆನ್ನಿನಿಂದ ವಿಚಿತ್ರವಾಗಿ ಬರೆದು ಗಡ್ಡ ಮೀಸೆ ಬರೆದರೆ, ಪೂಜಾ ಗಾಂಧಿಯಂತವರು ಇಷ್ಟಪಟ್ಟಿರುತ್ತಾರೆ. ಚೀನಾ ದೇಶ ಒಂದು ಕಡೆ ಅವಕಾಶಕ್ಕೆ ಕಾಯುತ್ತಿದ್ದರೆ, ಪಾಕಿಸ್ತಾನ ದೇಶದೊಳಗೆ ನುಗ್ಗಿ ಹಾವಳಿ ನೀಡುತ್ತಿದ್ದರೂ ನಮ್ಮ ದೇಶದ ಬಗ್ಗೆ ನಮಗೆ ಗೌರವ ಬಂದಿಲ್ಲವೆಂದರೇ ನಮ್ಮ ವಿದ್ಯಾವಂತ ಜನರನ್ನು ಅಭಿನಂದಿಸಲೇಬೇಕು. ನಾವು ನಮ್ಮಗಳ ಕೆಲಸವನ್ನು ಮಾಡಿದರೇ ನಮ್ಮ ದೇಶ ಉನ್ನತಿ ಹೊಂದುತ್ತದೆಂಬುದರಲ್ಲಿ ಅನುಮಾನವಿಲ್ಲ, ಆದರೇ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಹಂ ನೊಂದಿಗೆ ತಮ್ಮದೇ ಸರಿಯೆಂದು ಮುಗಿಬಿದ್ದು, ಬೀದಿಗಿಳಿದು ಜಗಳವಾಡುತ್ತಿರುವಾಗ ಮಾಡುವುದೇನು? ಪತ್ರಿಕಾರಂಗದವರು ಸುದ್ದಿಗೆಂದು ಯಾವ ಮಟ್ಟಕ್ಕೆ ಬೇಕಿದ್ದರೂ ಇಳಿಯಲು ಸಿದ್ದ, ಇನ್ನೂ ರಾಜಕೀಯದ ವಿಷಯ ಬೇಡವೇ ಬೇಡ, ಪರಿಸರ, ನೀರು ನಿರ್ವಹಣೆಯ ವಿಷಯಕ್ಕೆ ಬಂದರೇ, ದೊಡ್ಡ ಯುದ್ದವೇ ನಡೆಯುತ್ತಿದೆ, ಒಬ್ಬರು ಮಳೆ ನೀರು ಕೊಯ್ಲು ಎಂದರೇ ಮತ್ತೊಬ್ಬ ಬೇಡವೇ ಬೇಡವೆನ್ನುತ್ತಾನೆ, ಒಂದು ತಂಡ ಪರಿಸರವೆಂದರೆ ಮತ್ತೊಂದು ತಂಡ ನೀರಾವರಿ ಎನ್ನುತ್ತಾರೆ.
ದೊಡ್ಡ ಅಣೆಕಟ್ಟು ಕಟ್ಟಿ, ಭೂಮಿಗೆ ರಸಗೊಬ್ಬರ ಸುರಿದು, ಭೂಮಿಯನ್ನು ಸಂಪೂರ್ಣ ನಾಶಮಾಡುವ ತನಕ ಸುಮ್ಮನಿರುವುದಿಲ್ಲ ನಮ್ಮ ರೈತಾಪಿ ಜನ. ಮೂರು ದಿನದ ಕೆಲಸ ಭತ್ತ ಬೆಳೆಯುವುದು ಮಿಕ್ಕಿದ ದಿನಗಳಲ್ಲಿ ಹಳ್ಳಿ ರಾಜಕೀಯ ಮಾಡಿಕೊಂಡಿರಬಹುದೆಂಬುದು ನಮ್ಮ ಜನರ ಆಶಯ. ಹೆಚ್ಚು ಹಣ ಸಂಪಾದಿಸಿದರೇ ಬದುಕಲು ಸಾಧ್ಯವೆಂಬುದನ್ನು ಪ್ರತಿಯೊಬ್ಬ ಭಾರತೀಯನೂ ಪಾಲಿಸತೊಡಗಿದ್ದಾನೆ. ದೇಶದ ಅಭಿವೃದ್ದಿಯಿರುವುದು ತನ್ನಲ್ಲಿರುವ ಪರಿಸರ ಮತ್ತು ನೈಸರ್ಗಿಕ ಸಂಪತ್ತಿನಿಂದವೆಂಬುದನ್ನು ನಮ್ಮವರೇಕೋ ತಿಳಿಯುತ್ತಿಲ್ಲ. ನಾನು ಇಷ್ಟೇಲ್ಲಾ ಬೊಗಳೆ ಹಾಕಿದಮೇಲೆ ವಿಷಯಕ್ಕೆ ಬರುತ್ತೇನೆ. ಒಂದು ಊರು ಅಥವಾ ಒಂದು ತಾಲ್ಲೂಕು, ಅಥವಾ ಒಂದು ಜಿಲ್ಲೆಯ ಅಭಿವೃದ್ದಿಯಾಗಬೇಕಾದರೇ ಏನು ಮಾಡಬೇಕು? ಅದಕ್ಕೆ ನನ್ನಲ್ಲಿ ಬಹಳ ದಿನಗಳ ಹಿಂದೆ ಹುಟ್ಟಿ ಈಗ ಒಂದು ರೂಪು ಪಡೆಯುತ್ತಿರುವ ಉತ್ತರೆವಿದೆ. ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ಹೀಗೊಮ್ಮೆ ಮಾಡ ಹೊರಟರೆ ಹೇಗೆ?
ನಮ್ಮ ಸಮಾಜದ ಬಹುತೇಕ ಮಂದಿ ಸದಾ ಸರ್ಕಾರವನ್ನು ವ್ಯವಸ್ಥೆಯನ್ನು ದೂರುತ್ತಾ ಅನ್ಯಮನಸ್ಕರಾಗಿ ಜೀವನ ಸಾಗಿಸುತ್ತಿದ್ದೇವೆ. ಆಗುವುದಕ್ಕೆಲ್ಲಾ ಶನೀಶ್ವರನೇ ಕಾರಣವೆಂಬುದು ಸಮಂಜಸವಲ್ಲ. ಆ ನಿಟ್ಟಿನಲ್ಲಿ ಒಮ್ಮೆ ವಿಭಿನ್ನವಾಗಿ ಆಲೋಚಿಸಿ ಅದನ್ನು ಕಾರ್ಯರೂಪಕ್ಕೆ ತಂದರೇ ಆಗುವ ಅನುಕೂಲತೆಗಳೇನು? ಅನುಕೂಲತೆವಿಲ್ಲವೆಂದರೂ ಅನಾನೂಕೂಲತೆಗಳಿಲ್ಲವೆಂಬುದು ನನ್ನ ಅನಿಸಿಕೆ. ನಾವು ಒಂದು ದಿನ ಹೀಗೆ ಆಲೋಚಿಸಬಾರದೇ? ನಾನೊಬ್ಬ ವ್ಯಕ್ತಿಗತವಾಗಿ ಯೋಚಿಸಿದರೇ, ನಾನು ದಿನದಲ್ಲಿ ಕಚೇರಿಯಲ್ಲಿ ಎಂಟುಗಂಟೆಗಳ ಕಾಲ ಕೆಲಸ ಮಾಡುತ್ತೇನೆ, ಮನೆಯಿಂದು ಹೋಗುವುದುಕ್ಕೆ ಬರುವುದಕ್ಕೆ ಹೆಚ್ಚಿನ ನಾಲ್ಕು ಗಂಟೆಗಳು ಬೇಕು, ನಿದ್ದೆಗೆಂದು ಎಂಟು ಗಂಟೆಗಳು ಕಳೆದರೂ, ಇನ್ನೂ ಮೂರರಿಂದ ನಾಲ್ಕು ಗಂಟೆಗಳು ನನ್ನಲ್ಲಿಯೇ ಉಳಿಯುತ್ತದೆ. ಆ ಸಮಯವನ್ನು ಏನು ಮಾಡಬಹುದು? ಅದರಲ್ಲಿ ಕೇವಲ ಒಂದು ಗಂಟೆಯನ್ನು ನಾನು ನನ್ನ ದೇಶ ಸೇವೆಗೆ ಸಲ್ಲಿಸಿದರೇ ಹೇಗೆ? ನಮಗೆ ತಿಳಿದಿರುವಂತೆ ಪ್ರತಿಯೊಬ್ಬನಲ್ಲಿಯೂ ಕಂಪ್ಯೂಟರ್ ಇದೆ, ಇಂಟರ್ನೆಟ್ ಇದೆ, ಮಹಿತಿ ಕಗೆಟಕುತ್ತಿದೆ. ಸಮಾಜದ ಅಭಿವೃದ್ದಿಗೆ ತನ್ನ ದಿನದ ಒಂದು ಗಂಟೆಯನ್ನು ಮನೆಯಿಂದಲೇ ಕೊಡಲು ಸಾಧ್ಯವಿಲ್ಲವೇ? ಮನೆಯಿಂದ ಕಚೇರಿಗೆ ಹೋಗುವಾಗ ಅಥವಾ ಬರುವಾಗ ನೀಡಲಾಗುವುದಿಲ್ಲವೇ? ಸಮಾಜದ ಏಳಿಗೆಗೆ ಮಾಡಬೇಕಿರುವುದೇನು?
ಸಮಾಜದ ಅಭಿವೃದ್ದಿಯಾಗಬೇಕೆಂದರೆ, ಸರ್ವತೋಮುಖ ಅಭಿವೃದ್ದಿ ಮುಖ್ಯವಾಗುತ್ತದೆ. ಎಲ್ಲಾ ಕ್ಷೇತ್ರಗಳು ಮುಖ್ಯವಾಗುತ್ತವೆ. ಉದಾಹರಣೆಗೆ, ಶಿಕ್ಷಣ, ಭಾಷೆ, ಸಂಸ್ಕೃತಿ, ಕಲೆ, ಕೃಷಿ, ಪರಿಸರ, ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ನಿರ್ವಹಣೆ, ನೀರು, ಅಂತರ್ಜಲ, ತಾಂತ್ರಿಕತೆ, ವಿಜ್ನಾನ, ನೈತಿಕತೆ, ಆರ್ಥಿಕತೆ, ಸುರಕ್ಷತೆ, ಆರೋಗ್ಯ, ಮಹಿಳಾ ಸಬಲೀಕರಣ, ನೈರ್ಮಲೀಕರಣ, ಕೈಗಾರಿಕೆಗಳು,
ಹೀಗೊಮ್ಮೆ ಮಾಡ ಹೊರಟರೆ ಹೇಗೆ?
ನಮ್ಮ ಸಮಾಜದ ಬಹುತೇಕ ಮಂದಿ ಸದಾ ಸರ್ಕಾರವನ್ನು ವ್ಯವಸ್ಥೆಯನ್ನು ದೂರುತ್ತಾ ಅನ್ಯಮನಸ್ಕರಾಗಿ ಜೀವನ ಸಾಗಿಸುತ್ತಿದ್ದೇವೆ. ಆಗುವುದಕ್ಕೆಲ್ಲಾ ಶನೀಶ್ವರನೇ ಕಾರಣವೆಂಬುದು ಸಮಂಜಸವಲ್ಲ. ಆ ನಿಟ್ಟಿನಲ್ಲಿ ಒಮ್ಮೆ ವಿಭಿನ್ನವಾಗಿ ಆಲೋಚಿಸಿ ಅದನ್ನು ಕಾರ್ಯರೂಪಕ್ಕೆ ತಂದರೇ ಆಗುವ ಅನುಕೂಲತೆಗಳೇನು? ಅನುಕೂಲತೆವಿಲ್ಲವೆಂದರೂ ಅನಾನೂಕೂಲತೆಗಳಿಲ್ಲವೆಂಬುದು ನನ್ನ ಅನಿಸಿಕೆ. ನಾವು ಒಂದು ದಿನ ಹೀಗೆ ಆಲೋಚಿಸಬಾರದೇ? ನಾನೊಬ್ಬ ವ್ಯಕ್ತಿಗತವಾಗಿ ಯೋಚಿಸಿದರೇ, ನಾನು ದಿನದಲ್ಲಿ ಕಚೇರಿಯಲ್ಲಿ ಎಂಟುಗಂಟೆಗಳ ಕಾಲ ಕೆಲಸ ಮಾಡುತ್ತೇನೆ, ಮನೆಯಿಂದು ಹೋಗುವುದುಕ್ಕೆ ಬರುವುದಕ್ಕೆ ಹೆಚ್ಚಿನ ನಾಲ್ಕು ಗಂಟೆಗಳು ಬೇಕು, ನಿದ್ದೆಗೆಂದು ಎಂಟು ಗಂಟೆಗಳು ಕಳೆದರೂ, ಇನ್ನೂ ಮೂರರಿಂದ ನಾಲ್ಕು ಗಂಟೆಗಳು ನನ್ನಲ್ಲಿಯೇ ಉಳಿಯುತ್ತದೆ. ಆ ಸಮಯವನ್ನು ಏನು ಮಾಡಬಹುದು? ಅದರಲ್ಲಿ ಕೇವಲ ಒಂದು ಗಂಟೆಯನ್ನು ನಾನು ನನ್ನ ದೇಶ ಸೇವೆಗೆ ಸಲ್ಲಿಸಿದರೇ ಹೇಗೆ? ನಮಗೆ ತಿಳಿದಿರುವಂತೆ ಪ್ರತಿಯೊಬ್ಬನಲ್ಲಿಯೂ ಕಂಪ್ಯೂಟರ್ ಇದೆ, ಇಂಟರ್ನೆಟ್ ಇದೆ, ಮಹಿತಿ ಕಗೆಟಕುತ್ತಿದೆ. ಸಮಾಜದ ಅಭಿವೃದ್ದಿಗೆ ತನ್ನ ದಿನದ ಒಂದು ಗಂಟೆಯನ್ನು ಮನೆಯಿಂದಲೇ ಕೊಡಲು ಸಾಧ್ಯವಿಲ್ಲವೇ? ಮನೆಯಿಂದ ಕಚೇರಿಗೆ ಹೋಗುವಾಗ ಅಥವಾ ಬರುವಾಗ ನೀಡಲಾಗುವುದಿಲ್ಲವೇ? ಸಮಾಜದ ಏಳಿಗೆಗೆ ಮಾಡಬೇಕಿರುವುದೇನು?
ಸಮಾಜದ ಅಭಿವೃದ್ದಿಯಾಗಬೇಕೆಂದರೆ, ಸರ್ವತೋಮುಖ ಅಭಿವೃದ್ದಿ ಮುಖ್ಯವಾಗುತ್ತದೆ. ಎಲ್ಲಾ ಕ್ಷೇತ್ರಗಳು ಮುಖ್ಯವಾಗುತ್ತವೆ. ಉದಾಹರಣೆಗೆ, ಶಿಕ್ಷಣ, ಭಾಷೆ, ಸಂಸ್ಕೃತಿ, ಕಲೆ, ಕೃಷಿ, ಪರಿಸರ, ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ನಿರ್ವಹಣೆ, ನೀರು, ಅಂತರ್ಜಲ, ತಾಂತ್ರಿಕತೆ, ವಿಜ್ನಾನ, ನೈತಿಕತೆ, ಆರ್ಥಿಕತೆ, ಸುರಕ್ಷತೆ, ಆರೋಗ್ಯ, ಮಹಿಳಾ ಸಬಲೀಕರಣ, ನೈರ್ಮಲೀಕರಣ, ಕೈಗಾರಿಕೆಗಳು,
ಸರ್ಕಾರ ಈಗಾಗಲೇ ಎಲ್ಲಾ ರಂಗದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದು, ಅದಕ್ಕಾಗಿಯೇ ಒಂದೊಂದು ಇಲಾಖೆಗಳು, ಅಧಿಕಾರಿ ವರ್ಗಗಳು ಇವೆ. ಆದರೇ ಇವರೆಲ್ಲರೂ ಸರ್ಕಾರದಿಂದ ಬರುವ ಹಣವನ್ನು ಅಭಿವೃದ್ದಿಗಾಗಿ ಸದುಪಯೋಗಪಡಿಸುತ್ತಿದ್ದಾರೆಯೇ? ಸರ್ಕಾರ ಮಾಡುವ ಎಲ್ಲಾ ಯೋಜನೆಗಳು ಜನಸಾಮಾನ್ಯರಿಗೆ ಸೇರುತ್ತಿವೆಯೇ?ಒಂದೊಂದು ಇಲಾಖೆಗಳು ಕೋಟ್ಯಾಂತರ ರೂಪಾಯಿಗಳಷ್ಟು ಹಣವನ್ನು ವ್ಯಯಿಸುತ್ತಿವೆ, ಆದರೇ ಅಭಿವೃದ್ದಿಯನ್ನು ಗಮನಿಸಿದರೇ ಮಾತ್ರ ಶೂನ್ಯ. ಬಂದ ಹಣವೆಲ್ಲಾ ಪೋಲಾದದ್ದು ಎಲ್ಲಿ? ಇಲ್ಲಿ ಯಾವುದೇ ತಾರತಮ್ಯ ಮಾಡದೇ ಒಂದೇ ಒಂದು ತಾಲ್ಲೂಕನ್ನು ತೆಗೆದುಕೊಂಡು ಅದನ್ನು ಮಾದರಿಯನ್ನಾಗಿಸಲು ಮಾಡಬೇಕಿರುವ ನಿಟ್ಟಿನಲ್ಲಿ ನಾವೇಕೆ ಚಿಂತಿಸಬಾರದು? ಚಿಂತಿಸಿದರೇ ಬರುವ ಲಾಭವೇನು? ಚಿಂತನೆಯಿಂದ ದೇಶದ ಉದ್ದಾರ ಸಾಧ್ಯವಿದೆ.
ನಮ್ಮಲ್ಲಿ ಪ್ರತಿಭೆಯಿರುವ ದೇಶದ ಅಭಿವೃದ್ದಿಯ ಬಗೆಗೆ ಕನಸುಗಳನ್ನು ಕಾಣುತ್ತಿರುವ ಕಂಡಿರುವ ಅನೇಕರಿದ್ದಾರೆ. ಅವರೆಲ್ಲರ ಕನಸುಗಳನ್ನು ಒಂದೆಡೆಗೆ ತಂದು ಸಾಕಾರಗೊಳಿಸುವ ಪ್ರಯತ್ನವೇ ಹೀಗೊಮ್ಮೆ ಮಾಡಿದರೆ ಹೇಗೆ? ಯಾರು ದೈಹಿಕವಾಗಿ ನಮ್ಮೊಂದಿಗೆ ಇರಬೇಕಾದದ್ದು ಇಲ್ಲ, ಇರುವಲ್ಲಿಯೇ ಕುಳಿತು, ಅವರು ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಂಡರೇ ಸಾಕು. ಒಂದೊಂದು ವಿಷಯಗಳಿಗೂ ಒಂದೊಂದು ಯೋಜನೆಗಳನ್ನು ರೂಪಿಸಿ, ಒಟ್ಟಾರೆ ಯೋಜನೆಗೆ ತೆಗಳುವ ವೆಚ್ಚವನ್ನು ಸಿದ್ದಪಡಿಸುವುದು ನಮ್ಮ ಗುರಿ. ಉದಾ:ಗೆ ವಿಜ್ನಾನ ಶಿಕ್ಷಣವನ್ನು ಮಕ್ಕಳಿಗೆ ತಲುಪಿಸುವ ಬಗೆ ಹೇಗೆ? ಒಬ್ಬೊಬ್ಬ ವಿದ್ಯಾರ್ಥಿ ಒಂದೊಂದು ವಿಷಯದಲ್ಲಿ, ಅಥವಾ ಒಂದೊಂದು ವಸ್ತುವಿನ ಬಗ್ಗೆ ಆಸಕ್ತಿ ಹೊಂದಿರುತ್ತಾನೆ. ಭೌತಶಾಸ್ತ್ರದ ಬಗ್ಗೆ ಆಸಕ್ತಿಯಿರುವ ವಿದ್ಯಾರ್ಥಿಗಳನ್ನು ಒಂದೆಡೆಗೆ ಕೂಡಿಸಿ, ಅದೇ ವಿಷಯದಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅವರಿಗೆ ಹೆಚ್ಚಿನ ಜ್ನಾನ ಒದಗಿಸಿಕೊಡಬಹುದು. ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಕ್ಕಳಿಗೆ ಇಂದಿನಿಂದಲೇ ಜಾಗೃತಿ ಮೂಡಿಸಿದರೇ ಮುಂದಿನ ಭಾರತ ಪ್ರಜ್ವಲಿಸುವುದು.
ರೈತರಿಗೆ, ಮಾದರಿ ರೈತರನ್ನು ಕರೆಸಿ ತರಬೇತಿ ನೀಡುವುದರಿಂದ ಅವರ ಅನುಭವಕ್ಕೆ ಬರುವುದು. ಅತಿ ಹೆಚ್ಚು ಹಾಳಾದ ಪರಿಸರವನ್ನು ಇಲ್ಲಿನ ರೈತರಿಗೆ ತೋರಿಸಿದರೇ ಅವರೇ ಎಚ್ಚೆತ್ತುಕೊಳ್ಳೂತ್ತಾರೆ. ರೈತ ಭೂಮಿಯನ್ನು ಪ್ರೀತಿಸುವಂತಾಗಬೇಕು. ಭೂಮಿ ಒಂದು ವಸ್ತುವೆಂಬುದನ್ನು ಮರೆತು ಅದು ನಮ್ಮೊಳಗಿರುವ ನಮ್ಮದೇ ಉಸಿರೆಂಬುದನ್ನು ಅರ್ಥೈಸಿಕೊಳ್ಳಬೇಕು.
ಗ್ರಾಮೀಣ ಪ್ರದೇಶದ ಜನರು ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಯಬೇಕು. ನದಿ ಕೊಳ್ಳದ ಬಹುತೇಕ ಜನರು, ಮರಳು ತೆಗೆಯುವುದನ್ನು ನಿತ್ಯ ದುಡಿಮೆಯಾಗಿಸಿಕೊಂಡಿದ್ದಾರೆ, ಅದರಿಂದಾಗುವ ಪ್ರತಿಯೊಂದು ದುಷ್ಪರಿಣಾಮಗಳನ್ನು ಚಿತ್ರಗಳ ಮೂಲಕ ಅಥವಾ ಸಿನೆಮಾಗಳ ಮೂಲಕ ತಿಳಿಸಬೇಕು. ವಿದ್ಯಾವಂತ ಸಮಾಜ ಎಚ್ಚೆತ್ತಿಕೊಳ್ಳಬೇಕು, ನಾವು ದುಡಿಯುವುದು, ಕುಡಿಯುವುದು, ಕುಣಿಯುವುದೇ ಬದುಕೆಂಬ ಭ್ರಮೆಯಿಂದ ಹೊರಗೆ ಬರಬೇಕು. ಕೆಲವೊಂದು ಖಾಸಗಿ ಕಂಪನಿಗಳು ಅದೆಷ್ಟರ ಮಟ್ಟಿಗೆ ತಪ್ಪುಗಳನ್ನು ಮಾಡುತ್ತಿದ್ದಾರೆಂದರೇ, ಅರ್ಹ ಅಭ್ಯರ್ಥಿಗಳಿದ್ದರೂ ಅನರ್ಹರನ್ನೇ ತುಂಬಿಕೊಂಡು ದೊಂಬರಾಟ ನಡೆಸುತ್ತಿದ್ದಾರೆ. ಅನೈತಿಕತೆಯ ಪರಮಾವಧಿ ತಲುಪಿರುವ ಮಂದಿ ಸ್ವಲ್ಪ ಆಲೋಚಿಸಬೇಕಾಗಿದೆ.