15 ಸೆಪ್ಟೆಂಬರ್ 2010

ಬದುಕಿನ ಅರ್ಥಕ್ಕೆ ಬಂದ ಪ್ರೀತಿಯ ರೂಪವಲ್ಲವೇ ನೀ............!!!!

ಇದು ಸಂಪೂರ್ಣ ನನ್ನ ವೈಯಕ್ತಿಕ ವಿಷಯವಾದ್ದರಿಂದ, ಇದನ್ನು ತಾವುಗಳು ಓದಿ ಸುಮ್ಮನೆ ತಲೆಗೆ ಇರುವೆ ಬಿಟ್ಟುಕೊಳ್ಳುವುದು ಬೇಡವೆಂಬ ಬಯಕೆ. ಇಂಥಹ ಒಂದು ಪ್ರಶ್ನೆ ಪ್ರೀತಿಸುವ ಪ್ರತಿಯೊಬ್ಬನನ್ನು ಕಾದಿರುತ್ತದೆ. ನೀನು ನನ್ನನ್ನು ಎಷ್ಟು ಪ್ರ‍ೀತಿಸುತ್ತೀಯಾ? ನಿನ್ನ ಪ್ರೀತಿಯನ್ನು ನಂಬಬಹುದೇ? ನಂಬಿಸಲು ನಾನು ಏನು ಮಾಡಬಹುದು? ಸಾಧರಣವಾಗಿ ಒಂದು ಹುಡುಗಿ ಕಷ್ಟದಲ್ಲಿದ್ದಾಗ ಅವರ ಬಗೆಗೆ ಕರುಣೆ ಬರುವುದು ಸಹಜ ಆದರೇ, ಪ್ರೀತಿ ಬರುವುದಿಲ್ಲ. ಪ್ರೀತಿಯೇ ಬೇರೆ, ಕರುಣೆಯೇ ಬೇರೆ. ನಾನು ನಿನ್ನನ್ನು ಇಷ್ಟಪಟ್ಟದ್ದು, ಕರುಣೆಯಿಂದಲ್ಲ. ಕರುಣೆ ಕ್ಷಣಿಕವಾದದ್ದು ಎಂಬುದು ನನಗೂ ಗೊತ್ತು ನಿನಗೂ ಗೊತ್ತು. ನೀನು ಯಾರಿಂದಲೂ ಕರುಣೆ ಬಯಸುವವಲಲ್ಲ. ನಾನು ಯಾರಿಗೂ ಕರುಣೆ ತೋರಿಸುವವನೂ ಅಲ್ಲ. ನನ್ನ ಪ್ರೀತಿಯ ಮಹತ್ವ ತಿಳಿಸುವುದು ಹೇಗೆ? ನನಗೆ ಸ್ನೇಹಿತರು, ಸ್ನೇಹಿತೆಯರು ಬಹಳ ಜನರಿದ್ದಾರೆ. ಇವರೆಲ್ಲರೂ ಇದ್ದು ಯಾರು ಇಲ್ಲದಂತಿದ್ದೆನಾ ನಾನು? ಇಲ್ಲ ಇಲ್ಲವೇ ಇಲ್ಲ, ನನಗೆ ಎಲ್ಲರೂ ಇದ್ದರೂ, ಎಲ್ಲವೂ ಇತ್ತು, ಮನಸ್ಸಿಗೆ ಹಿಡಿಸುವ ಪ್ರೀತಿಯ ಅವಶ್ಯಕತೆ ಇತ್ತು. ಇದಕ್ಕೆ ಸರಿಯಾದ ಸಮಯದಲ್ಲಿ ನನ್ನ ಬಾಳಿಗೆ ಬಂದವಳು ನೀನು. ನೀನು ನನಗೆ ನೇರ ಭೇಟಿಯಾದವಳಲ್ಲ, ನಿನ್ನ ಬಗೆಗೆ ಹೆಚ್ಚು ತಿಳಿದು ಇರಲಿಲ್ಲ. ಆದರೇ ಮೊದಲನೆಯ ಸೆಳೆತವೂ ಇರಲಿಲ್ಲ, ಮಾತು ಬೆಳೆದಂತೆ ಒಂದು ಬಗೆಯ ಆಕರ್ಷಣೆ ಬೆಳೆಯಿತು. ಮದುವೆಯಾದವಳೆಂದು ತಿಳಿದು ನಿನ್ನಿಂದ ನಾನು ದೂರವಿದ್ದೆ ಎನಿಸಿದರೂ, ನಾನು ನಿನ್ನನ್ನು ಇಷ್ಟಪಟ್ಟಿದ್ದು ಮನಸಾರೆ ಪ್ರೀತಿಸಿದ್ದು ಮಾತ್ರ ಸತ್ಯ. ಇದಕ್ಕೆ ಯಾವುದೇ ಪೂರ್ವಾಪರವಿಲ್ಲ. ಇದು ಕೇವಲ ಪ್ರೀತಿ, ನಿಷ್ಕಲ್ಮಶ ಪ್ರೀತಿ. ಮದುವೆಯಾದವಳನ್ನು ಪ್ರೀತಿಸುವುದು ತಪ್ಪಾ? ನೈತಿಕತೆ ಅನೈತಿಕತೆಯ ವಿವರಣೆ ನೀಡಬೇಕಿಲ್ಲ.
ಮದುವೆಯಾಗಿ ಇರುವ ಸಂಸಾರಿಕ ಗೃಹಿಣಿಯನ್ನು ಪ್ರೀತಿಸುವುದು ನಿಜಕ್ಕೂ ಅಪರಾಧ. ಆದರೇ, ಪ್ರೀತಿವಂಚಿತಳಾದವಳನ್ನು ಪ್ರೀತಿಸುವುದು ಯಾವ ತಪ್ಪು? ನಿನಗೆ ಅನ್ಯಾಯವಾಗಿದೆ ನಿನ್ನ ಪ್ರೀತಿಗೆ ಮೋಸವಾಗಿದೆ ಎಂಬ ಕರುಣೆಯಿಂದ ನಾನು ನಿನ್ನನ್ನು ಪ್ರೀತಿಸಿಲ್ಲ. ನಾನು ಪ್ರೀತಿಸಿದ್ದು, ನೀನಾಗಿರುವ ಕೇವಲ ನಿನ್ನನ್ನು ಮಾತ್ರ. ಅಲ್ಲಿ ಮದುವೆಯಾಗಿ ಬೇರ್ಪಟ್ಟವಳು ಅಲ್ಲಾ ಪ್ರ‍ೀತಿವಂಚಿತಳು ಅಲ್ಲಾ. ಎಲ್ಲರೂ ಸಮಾನರೇ ಜಗದಲ್ಲಿ, ಕರುಣೆಯೆಂಬುದು ಇಲ್ಲಾ, ಅಥವಾ ನೀನಿರುವ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಮನಸ್ಸು ಇಲ್ಲ. ನೀನು ನನಗೆ ಇಷ್ಟವಾಗಲೂ ಸಾವಿರ ಸಾವಿರ ಕಾರಣಗಳಿದ್ದವು. ಅವುಗಳೆಲ್ಲವೂ ನಿನಗೂ ತಿಳಿದಿದೆ, ನನಗೂ ಅರಿವಿದೆ. ಕೇವಲ ಬಾಹ್ಯ ಸೌಂದರ್ಯಕ್ಕೆ ಸೋತಿಲ್ಲ, ನಿನ್ನನ್ನು ಪ್ರೀತಿಯಿಂದ ನೋಡುವ ಮುಂಚೆಯೂ ನೀ ನನಗಿಷ್ಟವಾಗಿದ್ದೆ. ಸೌಂದರ್ಯದ ವಿಷಯ ಬಂದಾಗ ನಾನೇ ಹೇಳುವಂತೆ ನನ್ನ ಕಥೆಯ ಕಾದಂಬರಿಯ ನಾಯಕಿ ನೀನೆ ಆಗಿರುವೆ, ಅದು ಈ ಜನ್ಮಕ್ಕೂ ಮುಂದಿನ ಯಾವ ಜನ್ಮಕ್ಕೂ ಸರಿಯೇ. ನಾನು ನಿನ್ನನ್ನು ಕಂಡು ಎರಡು ವರುಷಗಳು ತುಂಬಿವೆ. ಮೊದಲ ದಿನಗಳಲ್ಲಿನ ಕಾತುರತೆ ಇನ್ನೂ ಹಾಗೆಯೇ ಇದೆ. ಅದಿನ್ನೂ ಮಾಸಿಲ್ಲ, ಮಾಸುವುದೂ ಇಲ್ಲ. ನಿನ್ನ ಒಂದು ಕರೆಗಾಗಿ, ಒಂದು ಕ್ಷಣದ ಚಾಟ್ ಗಾಗಿ ಕಾಯುತ್ತಿದ್ದ ದಿನಗಳಿವೆ. ಇದು ಕೇವಲ ನನ್ನ ಏಕಾತನದ ಕೊರಗನ್ನು ನೀಗಿಸಲು ಬೇಕಿದ್ದ ತಾವಲ್ಲ. ನನ್ನತನವನ್ನೆಲ್ಲಾ ನಿನಗೆ ದಾರೆಯೆರೆಯಲು ಕಾದಿದ್ದ ಇಷ್ಟು ವರ್ಷದ ಪುಣ್ಯ. ನಾನು ಎಲ್ಲಿಯೂ ಎಂದಿಗೂ ಯಾರನ್ನೂ ಯಾವುದಕ್ಕೂ ಬೇಡದೇ ಇದ್ದರೂ ನಿನ್ನ ಕಾಲಿಗೆ ಬಿದ್ದು ಅಂಗಲಾಚುವ ಮಟ್ಟಕ್ಕೆ ಪ್ರೀತಿಸಿದ್ದೀನಿ, ಪೀಡಿಸಿದ್ದೀನಿ. ನಿನ್ನನ್ನು ಮೆಚ್ಚಿಸಲು ಬರೆಯಬೇಕಿಲ್ಲ, ನನ್ನ ಪ್ರೀತಿಯ ತೀವ್ರತೆ ನಿನಗೂ ಅರಿವಿದೆ.
ಅಂದರೇ, ಇಲ್ಲಿಯ ತನಕ ನಾನು ಯಾರನ್ನೂ ಪ್ರೀತಿಸಬೇಕೆನಿಸಿರಲಿಲ್ಲವೇ, ನಿನಗಿಂತ ಸುಂದರಿಯರಿರಲಿಲ್ಲವೇ? ಇಂಥಹ ಕುಹುಕ ಪ್ರಶ್ನೆಗಳು ನನ್ನನ್ನು ಕೇಳಿದ್ದಾವೆ. ಇದಕ್ಕೆಲ್ಲಾ ಉತ್ತರ ಸಮಯ. ನಾನು ಬೆಳೆದು ಬಂದ ರೀತಿ, ಪರಿಸರ, ಪರಿಸ್ಥಿತಿ, ನನ್ನನ್ನು ಪ್ರೀತಿಯಿಂದ ಹೆಣ್ಣಿನ ಪ್ರೀತಿಯಿಂದ ಮೋಹದಿಂದ ಸ್ವಲ್ಪ ದೂರವೇ ಇಟ್ಟಿತ್ತು. ನಾನು ಕೆಲವು ಹುಡುಗಿಯರನ್ನು ಕಂಡರೂ ಪ್ರೀತಿಸುವ ಮಟ್ಟಕ್ಕೆ ಇಷ್ಟಪಡಲಿಲ್ಲ ಅದೆಲ್ಲವೂ ಆ ಕ್ಷಣದ ಆಕರ್ಷಣೆಯಂತಿತ್ತು. ನೀನು ಇದನ್ನೂ ಆಕರ್ಷಣೆ ಎಂದರೇ? ಆಕರ್ಷಣೆಯಲ್ಲಿ ಕೇವಲ ಬೇಕು ಇರುತ್ತದೆ, ಬಯಸಿದ್ದು ಬೇಕು ಎನ್ನುವುದೇ ಮೊದಲ ಗುರಿ. ಪ್ರೀತಿಯಲ್ಲಿ ಅದಕ್ಕಿಂತ ಹೆಚ್ಚಾಗಿ ಕೊಡುವುದಿರುತ್ತದೆ. ಹೆಚ್ಚು ಕೊಟ್ಟಷ್ಟು ಹೆಚ್ಚು ವೃದ್ದಿಸುತ್ತದೆ. ಕೊಡುವುದು ಮಾತ್ರ ಪ್ರೀತಿಯ ಕೆಲಸ, ನಾನು ಮಾಡುತ್ತಿರುವುದು, ಮಾಡಿದ್ದು ಇದನ್ನೇ. ಯಾರನ್ನೇ ಆದರೂ ಅತಿಯಾಗಿ ಪ್ರೀತಿಸಿದಾಗ ಪ್ರೀತಿಯ ತೀವ್ರತೆ ಅವರನ್ನು ಮೂಕರನ್ನಾಗಿಸಬೇಕು. ಕ್ಷಣವಲ್ಲಾ, ಪ್ರತಿ ಸೆಕೆಂಡು ಕೂಡ ಅವರನ್ನೇ ಕುರಿತು, ಜ್ನಾನಿಸಬೇಕು, ಪ್ರೀತಿಸಬೇಕು, ಅವರನ್ನು ಹರಸಬೇಕು, ಹಾರೈಸಬೇಕು. ಅದು ನಿಜವಾದ ಪ್ರೀತಿ. ಕೇವಲ ನನ್ನ ಹೆಂಡತಿಯಗುವುದಾದರೇ ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀನು ಇಲ್ಲವೆಂದರೇ ಮರುಕ್ಷಣದಿಂದ ನಿನ್ನ ಬಗೆಗೆ ತಾತ್ಸಾರ ಮೂಡುತ್ತದೆ, ಇದೆಲ್ಲವೂ ಶುದ್ದ ಸುಳ್ಳು. ನಾನು ನಿನ್ನೊಡನೆ ಕೇವಲ ಗೆಳೆಯನಾಗಿರಲು ಅಸಾಧ್ಯವಾಗಿದ್ದೇ ಇಲ್ಲಿ. ನಾನು ನನ್ನ ಪ್ರಾಣಕಿಂತ ಹೆಚ್ಚು ಪ್ರೀತಿಸುವಾಗ ಕೇವಲ ನೂರರಲ್ಲಿ ಒಬ್ಬನಾದ ಸ್ನೇಹಿತನಾಗಿರುವುದು ಸಾಧ್ಯವಾಗುವುದಿಲ್ಲ.
ನಿನ್ನಲ್ಲಿ ನಾನು ಸೋತುಹೋಗಲು ಕಾರಣಗಳ ಪಟ್ಟಿಗಳನ್ನು ಬರೆಯಲೇ? ಬರೆಯುತ್ತಾ ಹೋದರೇ, ಓದುವ ಗೆಳೆಯರು ಮುಜುಗರ ಪಟ್ಟಾರು.ಆದರೂ ಬರೆಯುವುದು ನನ್ನ ಕರ್ತವ್ಯ, ಸ್ವಲ್ಪ ಮಟ್ಟಿಗೆ ಸೆನ್ಸಾರ್ ಹಾಕಿ ಬರೆಯಲೆತ್ನಿಸುತ್ತೇನೆ. ನಿನ್ನ ಮಾತಿನ ಶೈಲಿಗೆ ನಾನು ಮೊದಲು ಮಾರುಹೋದೆ ಎಂದರೇ ತಪ್ಪಾಗದು. ನಿನ್ನ ನೇರ ನಡೆನುಡಿ ಎಂಥವರನ್ನು ಆಕರ್ಷಿಸುತ್ತದೆ, ಅಂಥಹುದರಲ್ಲಿ ನಾನು ಸೋತಿದ್ದು ಅತಿರೇಕವೇನಲ್ಲ. ಎಂದೂ ಯಾವ ಕ್ಷಣಕ್ಕೂ ನೀನು ಸುಳ್ಳು ಹೇಳುವುದಿಲ್ಲ, ಇದ್ದಿದ್ದನ್ನು ಇದ್ದ ಹಾಗೇಯೇ ಹೇಳುವುದು, ನನ್ನನ್ನು ಬೈಯ್ಯುವುದು, ಬೈಯ್ಯುತ್ತಲೇ ಇರುವುದು ನನ್ನನ್ನು ನಿನ್ನ ಅತಿ ಹತ್ತಿರಕ್ಕೆ ಎಳೆದೊಯ್ದಿತು. ನೀನು ಎಲ್ಲವನ್ನು ನೇರ ದೃಷ್ಟಿಯಿಂದ ನೋಡುವುದು, ಮನರಂಜನೆ, ಅಭಿರುಚಿಗಳು ನನ್ನನ್ನು ನಿನ್ನ ಕಡೆಗೆ ಸೆಳೆದವು. ಸಾಧನೆಯೆಂಬುದರ ಬೆನ್ನ ಹತ್ತಿ ಅದನ್ನು ಸಾಧಿಸಲೇ ಬೇಕೆಂದು ಪಡುವ ಛಲ, ಪರರಿಗೆ ಸಹಾಯ ಮಾಡಲು ಹಾತೊರೆಯುವಿಕೆ. ಇವೆಲ್ಲವೂ ಇಷ್ಟವಾದರೇ, ನಾವು ಮಾಡುವುದೇ ಸರಿ, ಸಂಶೋಧನೆ ನಮ್ಮನ್ನು ಬಿಟ್ಟರೇ ಬೇರಾರು ಮಾಡುವುದೇ ಇಲ್ಲವೆನ್ನುವ ಅಹಂ ಮಾತ್ರ ಇಷ್ಟವಾಗಲಿಲ್ಲ. ಆದರೂ ಒಮ್ಮೊಮ್ಮೆ ಹೇಳುವ ನಾನಿರುವುದೇ ಹೀಗೆ, ಇದ್ದರೇ ಇರು ಇಲ್ಲದಿದ್ದರೇ ಹೋಗು ಎನ್ನುವ ರೀತಿಗಳು ಬಹಳ ಮೆಚ್ಚುಗೆಯಾದವು ಅನ್ನು. ಆದರೂ ನೀನು ನನ್ನನ್ನು ಸತಾಯಿಸಿದ್ದಷ್ಟು ಮತ್ತಾರು ಸತಾಯಿಸಿಲ್ಲವೆನ್ನುವುದು ಸತ್ಯ. ಸ್ವತಃ ನನ್ನ ತಂದೆಯೇ ನನ್ನನ್ನು ಇಷ್ಟು ತುಚ್ಚವಾಗಿ ಕಂಡಿಲ್ಲವೆನಿಸುತ್ತದೆ ಅಷ್ಟರ ಮಟ್ಟಿಗೆ ನೀನು ನನ್ನ ಸದರವಾಗಿ ಮಾತನಾಡುತ್ತೀಯಾ. ರೀತಿ ಮಾತನಾಡಲು ಸಾಧ್ಯ ಹೇಳು. ಕೆಲವೊಮ್ಮೆ ನಿನ್ನ ಸಣ್ಣ ಸಣ್ಣ ಮಾತುಗಳು ಕಣ್ಣೀರಿನ ಕದ ತಟ್ಟಿದರೂ, ನಿನ್ನ ಆಳವಾದ ಪ್ರೀತಿ ಅದನ್ನು ಮರುಕ್ಷನಕ್ಕೆ ಮರೆಸಿಬಿಡುತ್ತದೆ. ನಾನು ನಿನ್ನಿಂದಲೇ ಅದೆಷ್ಟೋ ಬಾರಿ ಕಂಠ ಪೂರ್ತಿ ಕುಡಿದ್ದಿದ್ದೇನೆ, ಆದರೇ ಕುಡಿತದಲ್ಲಿಯೂ ನಿನ್ನಯ ಮೇಲಿನ ಪ್ರೀತಿಯೇ ಕಾಣುತ್ತದೆ ಹೊರತು ಮಿಕ್ಕಾವ ಪ್ರಪಂಚವೂ ಇರುವುದಿಲ್ಲ. ಇದು ಕುರುಡು ಪ್ರೇಮವಾ? ಇಂಥಹ ಪ್ರಶ್ನೆ ನಿನಗೆ ಮೂಡಿದರೂ ನನಗೆ ಬರುವುದಿಲ್ಲ. ಯಾವುದು ಕುರುಡಲ್ಲ, ಮನುಷ್ಯತ್ವದ ಕಣ್ಣು ತೆರೆದು ಪ್ರೀತಿಯ ಅರ್ಥ ಹುಡುಕಿದರೇ, ಪ್ರೀತಿಯನ್ನು ಪ್ರೀತಿಯಂತೆಯೇ ಪ್ರೀತಿಸಿದರೇ ಅದು ಹಸಿರಾಗಿಯೇ ಕಾಣುವುದು. ಅರ್ಥಪೂರ್ಣ ಬದುಕಿಗೆ ಪ್ರೀತಿ ಬಲು ಪ್ರಮುಖವಾದದ್ದು.
ನಾನು ನಿನಗೆ ಹೇಳಿದಂತೆಯೇ ನಿನ್ನ ಬಗೆಗೆ ನನ್ನ ಪ್ರೀತಿಯ ಬಗೆಗೆ ನಿನ್ನಯ ಸೌಂದರ್ಯದ ಬಗೆಗೆ ಎಷ್ಟೇಷ್ಟೇ ಬರೆದರೂ ಅಧಿಕವೆನಿಸುತ್ತದೆ. ನಿನ್ನಯ ಸೌಂದರ್ಯವೂ ಅಷ್ಟೇ, ಹೆಚ್ಚೆಚ್ಚೂ ಬಣ್ಣಿಸಿದಷ್ಟೂ ಅದು ಹೆಚ್ಚಿದೆ ಎನಿಸುತ್ತದೆ. ನಿನ್ನನ್ನು ಪ್ರತಿ ಬಾರಿ ಕಂಡಾಗಲೂ ಅಷ್ಟೇ, ನಿನ್ನನ್ನು ಪ್ರಥಮ ಬಾರಿಗೆ ಕಾಣುತಿದ್ದೇನೆ ಎನ್ನುವಂತೆ, ಹಸಿದವನು, ಅನ್ನ ಕಂಡಾಗ ಮೃಷ್ಟಾನ್ನ ಕಂಡಾಗ ಆಡುವವನಂತೆ, ಭಿಕ್ಷುಕ ವಜ್ರಾಭರಣವನ್ನು ಕಂಡಾಗ ಬೆರಗಾಗುವಂತೆಯೇ ನಿನ್ನನ್ನು ನಾನು ಕಾಣುತ್ತಿದ್ದೇನೆ. ಇದೆಲ್ಲವೂ ನಿನಗೆ ಅತಿರೇಕವೆನಿಸಿದರೂ, ನಾನು ನಿನ್ನಯ ಸೌಂದರ್ಯಕ್ಕೆ ದಾಸನಾಗಿರುವುದಂತೂ ಸತ್ಯ. ದಾಸ್ಯೆತೆ ನನಗೆನೂ ಹೊಸತಲ್ಲ, ನಿನಗೆ ದಾಸ್ಯನಾಗಿರುವುದು ಹೊಸತು, ಆದರೇ ಅದೇನೂ ತಪ್ಪೆನಿಸುತ್ತಿಲ್ಲ. ನಿನ್ನೊಂದಿಗೆ ಕುಳಿತು ಕನಸು ಕಟ್ಟಲು ಮನಸ್ಸು ಹಾತೊರೆಯುತ್ತದೆ. ನಿನ್ನೊಡನೇ ದೂರದೂರಿಗೆ ಮಳೆ ಸುರಿವಾಗ ಬೈಕಿನಲ್ಲಿ ಹೋಗುವಾಸೆ. ದಟ್ಟಕಾಡಿನ ರಸ್ತೆಯಲ್ಲಿ, ನಾವಿಬ್ಬರೇ ಸುರಿವ ಮಳೆಯಲ್ಲಿ ಬೆಟ್ಟಗಳ ನಡುವೆ ಬೈಕಿನ್ನಲ್ಲಿ ಹೋಗುವಾಸೆ. ಮಳೆ ನಿಂತು ಹೋದ ಮೇಲೆ, ನಿನ್ನ ಕೈ ಕೈ ಹಿಡಿದು ನಡೆವಾಸೆ, ನಡು ರಾತ್ರಿಯಲ್ಲಿ ರಸ್ತೆ ಮಧ್ಯೆದಲ್ಲಿ, ಜೂಟಾಟವಾಡುವಾಸೆ. ನಿನ್ನನ್ನು ರೇಗಿಸಿ, ರೇಗಿಸಿ ಮತ್ತೆ ತಬ್ಬಿ ಹಿಡಿದು ಹೆಗಲ ಮೇಲೆ ಕೈಹಾಗಿ, ಸಮಾಧಾನ ಮಾಡಿಸಿಕೊಂಡು ಹೋಗುವಾಸೆ. ನನ್ನ ತುಂಟತನದಿಂದಲೇ ನಿನ್ನನ್ನು ರೇಗಿಸಿ ಮುದ್ದಿಸುವಾಸೆ.
ನೀನು ನನಗೆಂದಿಗೂ ಮಗುವಿನಂತೆ, ನೀನು ರೇಗಿದರು, ಬೈದರೂ ನಾನು ಕೋಪಿಸಿಕೊಂಡರೂ ಅದು ಆ ಕ್ಷಣಕ್ಕೆ, ಮತ್ತೆ ಮರಳಿ ನಿನ್ನಲ್ಲಿಗೆ ಬರುತ್ತೇನೆ. ಆದದ್ದನು ಮರೆತಿರುತ್ತೇನೆ. ನೀನು ಹೇಳುವಂತೆ ನಾನು ಸದಾ ನನ್ನಯ ಬಗೆಗೆ ಹೇಳುತ್ತಿರುತ್ತೇನೆಂದರೇ, ನನಗೆ ನನ್ನ ಬಗ್ಗೆ ಹೆಚ್ಚಾಗಿ ಗೊತ್ತಿರುವುದರಿಂದ ನನ್ನ ಬಗ್ಗೆ ನಿನಗೆ ತಿಳಿಸಿಕೊಡಲೆತ್ನಿಸುತ್ತೇನೆ. ಅದು ಬಿಟ್ಟು ನನ್ನನ್ನು ನಾನು ಬಣ್ಣಿಸಲಲ್ಲ. ನಿನ್ನ ಸರ್ವವನ್ನು ಚಿಕ್ಕ ಮಗುವಿನಂತೆ ಶೃಷ್ರೂಶೆ ಮಾಡಬೇಕೆನ್ನುವುದು ನನ್ನಯ ಆಸೆ. ಇದು ಅತಿ ಎನಿಸಿದರೂ, ನಿನ್ನನ್ನು ನಾನು ನನ್ನ ಸರ್ವಸ್ವವಂತೆ ತಿಳಿದಿದ್ದೇನೆ, ಅದರಂತೆಯೇ ನಡೆದುಕೊಳ್ಳುತ್ತೇನೆ. ನೀನು ನನಗೆ ಹೇಳುವಂತೆ, ನಾನು ನಿನ್ನನ್ನು ದುರುಗುಟ್ಟಿ ಗಂಟೆಗಂಟೇಗಟ್ಟಲೇ ನೋಡುವುದು ನನ್ನ ಮನಸ್ಸಿನ ಸಮಧಾನಕ್ಕೇ ಹೊರತು, ಕಾಮಕೇಳಿಗಲ್ಲ. ಕಾಮುಕ ದೃಷ್ಟಿ ನನ್ನಲ್ಲಿಲ್ಲದೇ ಇದ್ದರೂ, ನಿನ್ನೆಡೆಗೆ ನಿನ್ನ ಸೌಂದರ್ಯದೆಡೆಗೆ ಸೆಳೆತವಿದೆ, ಅದನ್ನು ಅತಿಯಾಗಿ ಪ್ರೀತಿಸುವ, ಅದನ್ನು ಮೆಚ್ಚುವ, ಅದನ್ನೇ ಜಪಿಸುವ ಮನಸ್ಸಿದೆ. ನೀನು ನನಗೆ ಹೇಳಬಹುದು, ಮಾಡುವ ಕೆಲಸ ಬಿಟ್ಟು ಹೀಗೆ ಕುಳಿತು, ಕಥೆ ಬರೆದು, ಕಾದಂಬರಿ ಬರೆಯುತ್ತೇನೆಂದರೇ ನಿನ್ನಯ ಮುಂದಿನ ಬದುಕೇನು? ನಿನ್ನನ್ನು ನಂಬಿ ನಾನು ಬಂದರೇ ನಾಳೆ ನನ್ನ ಹೊಟ್ಟೆಗೆ ತಣ್ಣೀರು ಬಟ್ಟೇಯೇ ಗತಿಯೆಂದು. ನನಗೆ ನನ್ನಯ ಬಗೆಗೆ ಸಾಕಷ್ಟು ಭರವಸೆಯಿದೆ, ಭರವಸೆ ಎನ್ನುವುದಕ್ಕಿಂತ ಆತ್ಮವಿಶ್ವಾಸವಿದೆ, ನೀನು ನಿನ್ನನ್ನು ನಂಬಿದರೇ ಸಾಕು, ನನ್ನನ್ನು ನಂಬಿದಂತೆ. ನಾನು ನನ್ನನ್ನು ನಂಬುವುದಕ್ಕಿಂತ ನಿನ್ನನ್ನು ನಿನ್ನ ಆತ್ಮವಿಶ್ವಾಸವನ್ನು ನಂಬುತ್ತೇನೆ. ನಿನ್ನಲ್ಲಿರುವ ದೃಢವಿಶ್ವಾಸ ನನ್ನ ಆತ್ಮವಿಶ್ವಾಸವನ್ನು ಸಾವಿರ ಪಾಲು ಹಿಗ್ಗಿಸುತ್ತದೆ. ಮಿತಿ ಮೀರಿ ವರ್ತಿಸಬೇಡ, ಎಂದು ಹೇಳುವ ಒಂದು ಸಾಲು ನನ್ನನ್ನು ಅನೇಕಾ ಬಾರಿ ಹಿಡಿದು ಕಟ್ಟಿಸಿದೆ.
ಪ್ರೀತಿಯ ವಿಷಯದಲ್ಲಿ, ಪ್ರೇಮಕ್ಕೂ ಕಾಮಕ್ಕೂ ತೆಳ್ಳನೆಯ ವ್ಯತ್ಯಾಸವಿರುತ್ತದೆ. ಅದನ್ನು ಅರಿಯುವುದು ಅದಕ್ಕೆ ತಕ್ಕನಾಗಿ ವರ್ತಿಸುವುದು, ಬಹಳ ಕಷ್ಟವೆನಿಸುತ್ತವೆ. ಇದು ದೈನಂದಿನ ಚಟುವಟಿಕೆಗಳಲ್ಲಿಯೂ ಅಷ್ಟೇ, ಒಂದಕ್ಕೊಂದು ಇರುವ ಸಂಬಂಧಗಳನ್ನು ಅನೇಕ ಬಾರಿ ತಪ್ಪು ಗ್ರಹಿಸಿ, ಸಂಬಂಧಗಳು ಹಾಳಾಗಿಬಿಡುತ್ತವೆ. ಎಚ್ಚರಿಕೆ ಇದ್ದರೇ ಒಳ್ಳೆಯದು ಅಷ್ಟೇ. ನೀನು ನನಗೆ ಹೇಳುವ ಮಿತಿ ಮೀರಿ ವರ್ತಿಸಬೇಡವೆನ್ನುವುದರಲ್ಲಿ ಅರ್ಥವಿದೆ. ಪ್ರೀತಿಸುವವಳಿಗೆ ಮುತ್ತಿಕ್ಕುವುದು ಅತಿ ಎನಿಸುವುದಿಲ್ಲ, ಆದರೇ, ನಮ್ಮ ಕಣ್ಣುಗಳು ಮುಖವನ್ನು ಬಿಟ್ಟು ಸ್ವಲ್ಪ ಕೆಳಕ್ಕೆ ಬಿದ್ದರೇ ಅದು ಕೆಟ್ಟ ದೃಷ್ಟಿಯಾಗಿ ನಿನ್ನ ವಕ್ರ ದೃಷ್ಟಿಗೆ ಗುರಿಯಾಗಿ ನಾಲ್ಕಾರು ದಿನ ಮಾತುಕತೆ ನಿಂತು ಬಿಡುತ್ತದೆ. ಹರ್ಷದ ಕೂಳಿಗಾಗಿ ವರ್ಷದ ಕೂಳು ಕಳೆದುಕೊಂಡರು ಎನ್ನುವಂತೆ ನಾನು ನಿನ್ನಯ ಕಡೆಗೆ ಅದರಲ್ಲಿಯೂ ನಿನಗಿಷ್ಟವಿಲ್ಲದ ಕಡೆಗೆ ನಾನು ದಿಟ್ಟಿಸಿ ನೋಡಿ ಇನ್ನೂ ಯಾವತ್ತು ನೀನು ನನ್ನೊಡನೆ ಬರುವುದಿಲ್ಲವೆಂದರೇ ಆ ನೋವನ್ನು ತಡೆಯಲಾಗದು. ಮುನಿಸಿಕೊಂಡು ಹೋದ ಕ್ಷಣದಲ್ಲಿಯೇ ತತ್ತರಿಸಿದಂತಾಗುತ್ತದೆ. ಇವೆಲ್ಲವೂ ನನ್ನಯ ಜೀವನದಲ್ಲಿಯೂ ಆಗುತ್ತದೆಂದು ಮೊದಲು ಎನಿಸುತ್ತಿರಲಿಲ್ಲ, ಈಗ ಇದೆಲ್ಲವೂ ಆಗಿ ನಾನು ಒಪ್ಪಲೇಬೇಕಾಗಿದೆ. ಪ್ರೀತಿಯ ತೀವ್ರತೆ, ಪ್ರೀತಿಸುವ ಮನಸ್ಸು ಏನು ಮಾಡಿದರೂ ನಮಗೆ ಇಷ್ಟವಾಗುತ್ತದೆ. ಅದು ಯಾವ ಪರಿ ಇಷ್ಟವಾಗುತ್ತದೆಯೆಂದರೇ, ಪ್ರೀತಿಸುವ ಮನಸ್ಸು ಬಳಸುವ ಒಂದೊಂದು ಪದವೂ ನಮ್ಮ ಕಿವಿಯಲ್ಲಿ ಗುಂಯ್ ಎನ್ನುತ್ತದೆ. ಯಾರದರೂ, ಇಡಿಯಟ್ ಎಂದರೇ, ಲೋಫರ್, ಎಂದರೇ, ಚಪ್ಪರ್ ಎಂದರೇ ಪ್ರೀತಿ ಎನ್ನುವುದೆಲ್ಲ ಬರೀ ಟೈಂ ಪಾಸ್ ಎಂದರೇ ದಿಡೀರನೇ ನೀನೇ ನೆನಪಾಗುತ್ತೀಯ. ಕೆಲವೊಮ್ಮೆ, ತಿನ್ನುವ ಪದಾರ್ಥಗಳು, ಲೇಸ್, ಕುರ್ ಕುರ್ರೆ, ಕುಡಿಯುವ ಮಾಜ಼ಾ, ಕುಡಿಯುವ ನೀರಲ್ಲಿ ಕೂಡ ನಿನ್ನ ನೆನಪು ಕಾಡುತ್ತದೆ. ಒಮ್ಮೊಮ್ಮೆ ನೀ ಒಬ್ಬಳೇ ಕುಡಿಯುವುದು ಕೆಲವೊಮ್ಮೆ ನಾನು ನನ್ನ ಬಾಯಿಯಿಂದ ನಿನಗೆ ಕುಡಿಸುವುದು. ಇದು ಸ್ವಲ್ಪ ಅತಿಯಾಯಿತೆನಿಸಿದರೂ ಸತ್ಯವಲ್ಲವೇ?
ಕೆಲವೊಮ್ಮೆ ಒಂದಕ್ಕೊಂದು ಸಂಬಂಧಗಳು ಅರ್ಥವೇ ಆಗುವುದಿಲ್ಲ, ಇಡ್ಲಿ ಎಂದರೇ, ನನಗೆ ಅಂಗಡಿ ನೆನಪಾಗುವುದಿಲ್ಲ, ನಿನ್ನೊಡನೆ ತಿಂದು ಇಲ್ಲ. ಇಡ್ಲಿ ಎಂದರೇ, ಹೆಬ್ಬಾಳದ ರಸ್ತೆ ಬದಿಯಲ್ಲಿ ಮಾರುವವನ ಬಳಿಯಲ್ಲಿ ನಿಂತು ಇಡ್ಲಿಗಿಂತ ಹೆಚ್ಚು ಚಟ್ನಿ ತಿನ್ನುವಾಸೆ ಬರುತ್ತದೆ. ನಿನ್ನೊಂದಿಗೆ ಆಡಿದ ಪ್ರತಿ ಪದಗಳು ಹೀಗೆ, ನನ್ನೊಡನಿರುವಾಗ ಮರೆಯುವುದು ಕಷ್ಟವೆನಿಸುತ್ತದೆ. ನೀನು ಪ್ರತಿ ಬಾರಿ ಕೇಳುವಂತೆ ನಿನಗೆ ಬೇರೆ ಹುಡುಗಿಯರು ಇಷ್ಟವಿರಲಿಲ್ಲವೇ? ನಾನೇ ಮೊದಲನೆಯವಳೇ? ನನ್ನ ಕಿವಿಗೆ ಹೂವು ಇಡುವುದು ಬೇಡ. ನಾನು ಹೇಳಿದರೂ ಹೇಳದೇ ಇದ್ದರೂ, ಸತ್ಯ ಎಂದಿಗೂ ಸತ್ಯವಾಗಿರುತ್ತದೆ. ಬಹಳ ಚಿಕ್ಕ ವಯಸ್ಸಿನಿಂದಲೂ, ನಾನು ಸ್ವಲ್ಪ ಹುಚ್ಚುತನದ ಹುಡುಗ. ನನ್ನ ಸಮಯವನ್ನೆಲ್ಲಾ ನನಗೇ ಇಷ್ಟವಾಗುವ ವಿಷಯಕ್ಕೆ ಮೀಸಲಿಟ್ಟು ಬೆಳೆದವನು ನಾನು. ಇದರ ಪರಿಣಾಮ ನನ್ನ ತಂದೆಯೇ ನನ್ನ ಮೊದಲ ಶತ್ರು ಆಗಿದ್ದು. ಹುಡುಗಿಯರೆಡೆಗೆ ಆಕರ್ಷಿಸುವ ವಯಸ್ಸು ಹದಿನೇಳು ಇದ್ದಾಗ ಕೆಲವು ದಿನಗಳ ಮಟ್ಟಿಗೆ ನಮ್ಮೂರಿನ ಹುಡುಗಿಯೇ ಆದ, ಸ್ಮಿತಾಳೆಡೆಗೆ ಆಕರ್ಷಣೆ ಮೂಡಿದ್ದು ಸಹಜವೆನಿಸಿದರೂ, ಅದು ಹೆಚ್ಚು ದಿನ ಉಳಿಯಲಿಲ್ಲ. ಮತ್ತೂ ನಾನು ಅವಳಿಗೆ ನನ್ನ ಪ್ರೀತಿಯನ್ನು ವ್ಯಕ್ತಪಡಿಸಲಾಗಲಿಲ್ಲ. ಅದೇ ಸಮಯಕ್ಕೆ ನಾನು ನನ್ನ ಪಿಯುಸಿಯಲ್ಲಿ ಡುಮುಕಿ ಹೊಡೆದಿದ್ದರಿಂದ ಇನ್ನು ಹೆಣ್ಣು ಮಕ್ಕಳೆಡೆಗೆ ಹೋಗಬೇಕಿದ್ದ ಮನಸ್ಸು ಖೋಡೇಸ್ ರಮ್ಮಿನೆಡೆಗೆ ಸೆಳೆಯಿತು. ನಾನೊಬ್ಬ ಅತ್ಯುತ್ತಮ ಕುಡುಕನಾದೆ. ಕುಡಿತದ ದೆಸೆಯಿಂದಲೋ ಅಥವಾ ದೇವರ ಅವಕೃಪೆಯಿಂದಲೋ ಪಿಯುಸಿ ಪಾಸಾಗಿ, ಮೈಸೂರಿಗೆ ಸೇರಿದವನು. ಹಗಲೆಲ್ಲಾ ರೂಮಿನಲ್ಲಿ ಕುಳಿತು ಓದುತ್ತಿದ್ದೆ, ಕಾಲೇಜಿಗೆ ಹೋದ ನೆನಪು ಬಹಳ ಕಡಿಮೆ. ಸಂಜೆಯಾಯಿತೆಂದರೇ ಕುಡಿತದ ಅಮಲಿನಲ್ಲಿ ಕಳೆಯುತ್ತಿದ್ದೆ. ಅದರ ನಡುವೆ ನನಗೆ ಪರಿಚಯವಾಗಿ ಆತ್ಮೀಯರಾದ, ಫಣೀಶ್ ಮತ್ತು ಚಂದನ್ ನಿಂದಾಗಿ ಪುಸ್ತಕದ ಕಡೆಗೆ ಮನಸ್ಸು ಬಾಗಿತು. ಪುಸ್ತಕಗಳ ಕಡೆಗೆ ಮನಸ್ಸು ಅದೆಷ್ಟು ಬದಲಾಯಿತೆಂದರೇ, ಪರಿಕ್ಷಾ ಸಮಯದಲ್ಲಿ ಕೂಡ ನಾನು ಇತರೆ ಪುಸ್ತಕಗಳನ್ನು ಓದುತ್ತಿದ್ದೆ. ಆದರೇ ಎಂದೂ ಸಮಯ ಹರಣಕ್ಕಾಗಿ ನಾನು ಓದಲಿಲ್ಲ, ಯಾವುದೋ ಹಿತಕ್ಕಾಗಿ ಓದತೊಡಗಿದೆ. ಅದರಲ್ಲೊಂದು ಸುಖ ಸಿಗತೊಡಗಿತು, ಈಗಲೂ ಅಷ್ಟೇ ನನಗೆ ಖುಷಿ ಆದರೂ, ದುಃಖವಾದರೂ ನಾನು ಪುಸ್ತಕದ ಮೊರೆಗೆ ಹೋಗುತ್ತೇನೆ.
ನನ್ನ ಬಿಎಸ್ಸಿ ವೇಳೆಯಲ್ಲಿ ನಾನು ಕಾಲೇಜಿಗೆ ಹೋದದ್ದು ಬಹಳ ಕಡಿಮೆ ದಿನವೆಂದರೂ ಸರಿಯೇ, ಕೇವಲ ಪ್ರಾಯೋಗಿಕ ತರಗತಿಗಳಿಗೆ ಮಾತ್ರ ಹೋಗುತ್ತಿದ್ದೆ, ಮಿಕ್ಕ ಸಮಯವೆಲ್ಲಾ, ನಾನು ನನ್ನ ರೂಮಿನಲ್ಲಿ, ಇಲ್ಲದಿದ್ದಲ್ಲಿ, ಸುತ್ತಾಡುವುದರಲ್ಲಿ, ಸಿನೆಮಾ ನೋಡುವುದರಲ್ಲಿ ಕಳೆಯುತ್ತಿದ್ದೆ. ನಾನು ಹಗಲು ಹೊತ್ತಿನಲ್ಲಿ ಕುಡಿದಿರುವುದು ತೀರಾ ಅಪರೂಪ. ಅಂತಹ ಸಮಯದಲ್ಲಿ ನನಗೆ ಒಂದು ಹುಡುಗಿ ಬಹಳ ಇಷ್ಟವಾಗಿದ್ದಳು. ಅವಳು ನನಗಿಂತ ಹಿಂದಿನ ತರಗತಿಯಲ್ಲಿದ್ದು, ನಮ್ಮ ಹಾಸನದ ಲೋಕೇಶ್ ಅವಳಿಗೆ ಸಿನಿಯರ್ ಆಗಿದ್ದ, ಒಂದು ದಿನ ಬರುತ್ತಿರುವಾಗ ಯಾರೋ ಇದು ಹುಡುಗಿ ಚೆನ್ನಾಗಿದ್ದಾಳೆ ಎಂದೆ. ಮುಗಿದೇ ಹೋಯಿತು, ಎರಡೇ ದಿನದಲ್ಲಿ ಅವಳ ಸಂಪೂರ್ಣ ಮಾಹಿತಿ ಅವಳ ಬಗೆಗಿನ ಚರ್ಚೆ ನಮ್ಮ ರೂಮಿನಲ್ಲಿ ನಡೆಯತೊಡಗಿತ್ತು. ಹುಡುಗರು ಅವಳನ್ನು ನೋಡುವುದಕ್ಕಾದರೂ ಬಾ ಕಾಲೇಜಿಗೆ ಎನ್ನುತ್ತಿದ್ದರು. ನಾನು ಕೆಲವು ದಿನ ಅವಳನ್ನು ಕಂಡು ಖುಷಿಪಟ್ಟರೂ ಅದೆಲ್ಲವೂ ಯಾಕೋ ನನಗೆ ಹಿಡಿಸಲಿಲ್ಲ. ಹಿಡಿಸಲಿಲ್ಲವೆನ್ನುವುದಕ್ಕಿಂತ ನಾನು ಕಾಲೇಜಿಗೆ ಹೋಗಿದ್ದ ದಿನಗಳು ಕೇವಲ ಬಂದ್ ಆಗಿದ್ದ ದಿನಗಳು ಅಷ್ಟೇ, ಆ ಹುಡುಗಿ ನನ್ನನ್ನು ನೋಡಿರುವುದು ಬಂದ್ ದಿನಗಳಲ್ಲಿ ಕ್ಲಾಸ್ ನಡೆಯುತ್ತಿರುವ ರೂಮಿಗೆ ಹೋಗಿ ಹುಡುಗರನ್ನು ಹೊರಕ್ಕೆ ಬರಲು ಹೇಳಿ ಕಾಲೇಜಿಗೆ ರಜೆ ಕೊಡಿಸುತಿದ್ದಾಗ ಮಾತ್ರ.ಅಂಥಹ ಅದ್ಬುತಾವಾದ ಪ್ರೋಫೈಲ್ ಇಟ್ಟುಕೊಂಡು ಪ್ರೀತಿ ಬೇಡುವುದಕ್ಕೆ ನನಗೆ ಮನಸ್ಸು ಬರಲಿಲ್ಲ. ಅದಾದ ಮೇಲೆ, ನಂತರ ನನ್ನ ಎಂಎಸ್ಸಿಗೆಂದು ಬೆಂಗಳೂರಿಗೆ ಬಂದ ಮೇಲೆ ನನಗೆ ಸಿಕ್ಕ ಸ್ನೇಹಿತವರ್ಗದಿಂದಾಗಿ ಓದುವ ನನ್ನ ಚಪಲಕ್ಕೆ ಇನ್ನೂ ಪ್ರೋತ್ಸಾಹ ಸಿಕ್ಕಹಾಗಯಿತು. ನಾನು ನನ್ನ ಕಥೆ ಕಾದಂಬರಿ, ಹೀಗೆ ಆಯಿತು ನನ್ನ ಜೀವನ. ಪ್ರೀತಿಸುವಂಥಹ ಹೆಣ್ಣುಮಕ್ಕಳು ನಮ್ಮ ಯುನಿವರ್ಸಿಟಿಯಲ್ಲಿ ಕಣ್ಣಿಗೇ ಕಾಣಲು ಇಲ್ಲ ಎನ್ನುವುದು ಸತ್ಯ. ಅದಾದ ನಂತರ, ಕೆಲಸ, ಬಹಳಷ್ಟು ದಿನದಿಂದ ಕಾದು ಕುಳಿತಿದ್ದ ನನ್ನ ಆಸೆಗಳು ಸಂಪೂರ್ಣ ಗರಿಬಿಚ್ಚಿದವು.
ಐಸೆಕ್ ನಲ್ಲಿ ಕೆಲಸಕ್ಕೆ ಸೇರಿದ ಮೇಲೆ ನನ್ನ ಕಾಲಿಗೆ ಚಕ್ರ ಬಂದವೆಂದರೂ ತಪ್ಪಿಲ್ಲ. ವಾರದ ಕೊನೆ ಸಿಕ್ಕರೇ ಸುತ್ತಾಡಲು ಹೊರಡುವುದು. ರಜೆ ಸಿಕ್ಕರೇ ಸಾಕು ಅಂತರ್ಜಾಲದಲ್ಲಿ ಹುಡುಕಿ ಎಲ್ಲ ಜಾಗವನ್ನು ಸುತ್ತಾಡತೊಡಗಿದೆ. ರಾಜ್ಯದ ಮೂಲೆ ಮೂಲೆಯನ್ನು ಸುತ್ತಾಡುವ, ಸಮಯ ಸಿಕ್ಕರೇ, ಕಥೆ ಕಾದಂಬರಿ, ಬರವಣಿಗೆಯಲ್ಲಿ ಮುಳುಗಿದ್ದ ನನಗೆ ಪ್ರೀತಿ ಆಗಲಿ, ಪ್ರೇಮವಾಗಲೀ ಬೇಕೆನಿಸಲಿಲ್ಲ. ಮದುವೆಯಾಗುವ ಹುಡುಗಿಯೇ ನನ್ನ ಪ್ರೇಯಸಿಯಾಗಿರಲೆಂದು ಬಯಸಿದೆ. ಅದರಂತೆ ಒಂದೆರಡು ಹುಡುಗಿಯರನ್ನು ನೋಡಿದೆ, ಕಾರಣಾಂತರಗಳಿಂದ ಅವು ಮುರಿದುಬಿದ್ದವು. ಅದರಿಂದ ನಾನು ಅಷ್ಟೇನೂ ವಿಚಲಿತನಾಗಲಿಲ್ಲ. ಕಾರಣ ಒಂದು ಹುಡುಗಿ ಅವರ ಮನೆಯವರು ಒಪ್ಪಲಿಲ್ಲ, ಇದು ಪ್ರೀತಿಯ ಪ್ರಸ್ತಾಪವಲ್ಲ, ಮನೆಯವರ ಕಡೆಯಿಂದ ಕೇಳಲು ಹೋದ ಮದುವೆ. ಮತ್ತೊಂದು ಕೂಡ ಹುಡುಗಿಯ ಮನೆಯವರು ಬಂದು ನಮ್ಮನ್ನು ಕೇಳಿದರು, ಹುಡುಗಿಯ ವಯಸ್ಸು ಬಹಳ ಚಿಕ್ಕದ್ದಾದ್ದರಿಂದ ನಾವು ಒಪ್ಪಲಿಲ್ಲ. ಅದು ಬಿಟ್ಟರೇ, ನನ್ನ ಸ್ನೇಹಿತೆಯೊಬ್ಬಳು ಲಿಂಗಾಯತ ಹುಡುಗಿಯೆಡೆಗೆ ನನಗೆ ಆಸೆ ಇತ್ತಾದರೂ, ಅವಳು ಅದನ್ನು ಒಪ್ಪಲಿಲ್ಲ, ಒಪ್ಪಲಿಲ್ಲವೆನ್ನುವುದಕ್ಕಿಂತ ಹೆಚ್ಚಾಗಿ ಆ ವೇಳೆಗೆ ಅವಳಿಗೆ ಮದುವೆ ನಿಶ್ಚಯವಾಗಿತ್ತು. ಆದ್ದರಿಂದ ನಾನು ಇಷ್ಟಪಡುವ ಹುಡುಗಿಯರು ನನಗೆ ಸಿಗುವುದಿಲ್ಲವೆಂದು, ಮದುವೆಯ ಯೋಗವಿದ್ದರೇ ಆಗಲೆಂದು ಸುಮ್ಮನಾಗಿದ್ದೆ. ಆ ಸಮಯದಲ್ಲಿ ನಾನೇನು ದುಃಖದಿಂದಿರಲಿಲ್ಲ. ಕುಡಿಯುವುದು, ಸೇದುವುದು, ವಾರಕ್ಕೊಂದು ಸಿನೆಮಾ, ಸುತ್ತಾಟ, ಓದುವುದು, ಬರೆಯುವುದು, ಸ್ವಲ್ಪ ದಿವಸ ಫೋಟೋಗ್ರಾಫಿ ಎಂದು ಸುತ್ತಾಡಿದೆ ಆದರೇ ಯಾವುದು ಕೈಗೂಡಲಿಲ್ಲ.
ಕೆಲವೇ ದಿನಗಳು ಮಾತ್ರ ನಾನು ದುಃಖಕ್ಕಾಗಿ ಕುಡಿದಿರುವುದು. ನನ್ನ ಇಡೀ ಜೀವನದಲ್ಲಿ ಎರಡು ಬಾರಿ ನಾನು ಅಧಿಕವಾಗಿ ಕುಡಿದು ನನ್ನ ಬಗೆಗೆ ನನಗೆ ಅಸಹ್ಯವಾಗಿದ್ದು. ಒಂದು ನನ್ನ ಪಿಯುಸಿಯಲ್ಲಿ ಶಿವರಾತ್ರಿ ರಾತ್ರಿಯಂದು ಅಂದಿನಿಂದ ಇಂದಿನ ತನಕ, ಹತ್ತು ವರ್ಷದಲ್ಲಿ ಒಂದೇ ಒಂದು ಶಿವರಾತ್ರಿಯಂದು ಕುಡಿಯಲಿಲ್ಲ. ಮೊನ್ನೆ ಮೊನ್ನೆ ನಿನಗಾಗಿ ಕುಡಿದೆ. ಆದರೂ ಕುಡಿದ ಮೇಲೆ ಬಹಳ ದುಃಖ, ಬೇಸರವಾಯಿತು. ಕುಡಿಯುವುದು ನನಗೆ ಮಾಮೂಲಿಯಾದರೂ ಕುಡಿಯುವುದಕ್ಕೆ ಕಾರಣ ನೀನಾಗಿದ್ದೆ, ನನ್ನ ಮೋಜಿಗೆ ಕುಡಿದು ಅದರ ಹೊರೆಯನ್ನು ಹೊಣೆಗಾರಿಕೆಯನ್ನು ನಿನ್ನ ಮೇಲಕ್ಕೆ ಹಾಕಿದ್ದು ನನ್ನಗೆ ಅನಾಗರಿಕತೆಯೆನಿಸಿತು. ನನ್ನಿಂದ ನನ್ನ ನಡುವಳಿಕೆಯಿಂದ ನಿನಗೆ ಯಾವುದೇ ರೀತಿಯ ಮುಜುಗರವೆನಿಸಬಾರದು. ಇಷ್ಟಕ್ಕೂ ನಾವು ಪ್ರೀತಿಸುವ ಜೀವಕ್ಕೆ ಕೊಡುವುದೇನು? ಇರುವಷ್ಟು ದಿನಗಳ ನಗು, ಎಲ್ಲದಕ್ಕೂ ನನ್ನ ಜೀವದ ಗೆಳೆಯನಿದ್ದಾನೆಂಬ ಭರವಸೆ, ವಿಶ್ವಾಸ. ಅದನ್ನು ನೀಡುವುದೇ ನನ್ನ ಪ್ರೀತಿಯ ಧ್ಯೇಯವಾಗಿರುವಾಗ, ನಾನು ಕುಡಿದು ನಿನ್ನನ್ನು ನೋಯಿಸುವುದು, ನನ್ನ ಸಣ್ಣ ಪುಟ್ಟ ಮಾತುಗಳಿಂದ ನಿನಗೆ ಮುಜುಗರವೆನಿಸುವುದು, ನನ್ನ ಸಣ್ಣ ಸಣ್ಣ ಕೋಪ ನಿನಗೆ ಬೇಸರ ತರುವುದು, ಇವೆಲ್ಲವೂ ಸಣ್ಣವೇ ಆದರೂ ಅದು ನಿರಂತರವಾದರೇ, ಎಲ್ಲಿಂದ ಎಲ್ಲಿಗೆ ಬಂದರೂ ನೆಮ್ಮದಿಯಿಲ್ಲದ ಬದುಕು ನನ್ನದೆನಿಸುವುದಿಲ್ಲವೇ ನಿನಗೆ. ನಾವು ನಮಗಾಗಿ ಬದುಕುವುದರಲ್ಲಿರುವ ಸಂತೋಷಕ್ಕಿಂದ ನಮ್ಮನ್ನು ಪ್ರೀತಿಸುವವರ ಅಥವಾ ಪ್ರೀತಿಸುವ ಮನಸ್ಸಿನವರಿಗಾಗಿ ಬದುಕಿ ನಿರಂತರ ಅವರಿಗಾಗಿ ಹಾರೈಸುವಲ್ಲಿರುವ ಖುಷಿಯೇ ಬೇರೆ. ಇಂಥಹುದೆಲ್ಲವೂ ಕಥೆಯಲ್ಲಿ ಕಾದಂಬರಿಯಲ್ಲಿ ಕಾಣುವುದಕ್ಕೇ ಮಾತ್ರ ಸರಿ ಎಂದು ಓದುವ ಪ್ರತಿಯೊಬ್ಬರೂ ಹೇಳಬಹುದು. ಜೀವನ ಪ್ರತಿಯೊಬ್ಬನಿಗೂ ವ್ಯಕ್ತಿಗತ ವಸ್ತು, ಇದು ಕೇವಲ ನನ್ನ ಜೀವನ ಅಲ್ಲಿನ ಪ್ರತಿಯೊಂದು ಕನಸು ಕೂಡ ನಾನು ಕಾಣುವ ಕಣ್ಣು ಮತ್ತು ಮನಸ್ಸಿಗೆ ಸೇರಿದ್ದು. ನನ್ನ ಕನಸೊಳಗೆ ಕೋಟಿ ಕೊಟ್ಟರೂ ನಿನ್ನನ್ನು ಬಿಟ್ಟು ಮತ್ತಾರೂ ಬರಲಾರರು. ಆದರೇ ನೀನೇ ನೀನಾಗೇ ನನ್ನಿಂದ ನನ್ನ ಕನಸಿನಿಂದ ದೂರಾಗಬೇಕೆಂದರೇ, ಬಹಳಷ್ಟು ಸಾರಿ ಎನಿಸುವಂತೇ, ಒಂದು ಮೊಬೈಲ್, ಒಂದು ಇಂಟರ್ನೆಟ್ ಚಾಟಿಂಗ್ ನಮ್ಮ ಪ್ರೀತಿಯ ಮೇಲೆ ಹಿಡಿತ ಸಾಗಿಸುತ್ತಾ? ನಿನ್ನ ನಂಬರ್ ಬದಲಾದರೇ ನೀನು ನನ್ನಿಂದ ದೂರಾದ ಹಾಗೇಯೇ? ಹೌದಾ, ನೀನು
ಭೌತಿಕವಾಗಿ, ದೈಹಿಕವಾಗಿ ದೂರಾಗಬಹುದೇ ಹೊರತು ನಿನ್ನಯ ಮೇಲಿನ ಪ್ರೀತಿ ಮರೆಯಾಗಲು ಸಾಧ್ಯವೇ? ಒಮ್ಮೊಮ್ಮೆ ನಮಗೆ ಎನಿಸಲೂ ಬಹುದು, ಪ್ರೀತಿಯ ಆಳವನ್ನು ಪರೀಕ್ಷಿಸಲೂ, ಆಳವನ್ನು ಅಳೆಯಲು ಸಾಧ್ಯವೇ? ಪ್ರೀತಿ ಆಂತರಿಕವಾಗಿ ಸವಿಯಬೇಕು, ಅನುಭವಿಸಬೇಕು. ಪ್ರೀತಿಯೆಂಬುದರ ಬಗೆಗೆ ಪ್ರತಿಯೊಬ್ಬನೂ ಒಂದೊಂದು ಬಗೆಯಾಗಿ ವ್ಯಕ್ತಪಡಿಸುತ್ತಾನೆ. ಪ್ರೀತಿ ಹೀಗೆ ಇರಬೇಕೆಂಬುದು ಸರಿ ಇಲ್ಲವಾದರೂ ಅದು ಪ್ರೀತಿಸುವ ಮನಸ್ಸಿಗೆ ನೋವುಂಟುಮಾಡಬಾರದು, ಸ್ವಾರ್ಥಕ್ಕೆ ಪ್ರೀತಿ ಬಲಿಯಾಗಬಾರದು.
ನಾನು ನಿನ್ನನ್ನು ಅತಿಯಾಗಿ ಪ್ರೀತಿಸುತ್ತೇನೆಂಬುದಕ್ಕೆ ಅನುಮಾನವಿಲ್ಲ.ಇದಕ್ಕೆ ಕಾರಣಗಳು? ಸದಾ ಕಾರಣವೇ ಇರುವುದಿಲ್ಲ. ಕೆಲವೊಂದು ವ್ಯಕ್ತಿಗಳು ಮಾತ್ರ ಅವರೊಂದಿಗೆ ಇರುವಾಗ ಒಂದು ಬಗೆಯ ನೆಮ್ಮದಿ ಸಿಗುತ್ತದೆ. ಅದು ನಿನ್ನೊಂದಿಗೆ ನನಗಿರುವುದು ಎನ್ನಬಹುದು.ನಾನು ನೀನು ಕಳೆದಿರುವ ಸಮಯವೆಲ್ಲಾ ಫೋನಿನಲ್ಲೇ ಎನ್ನಬೇಕು. ಅಥವಾ ಚಾಟಿನಲ್ಲಿರಬಹುದು. ನೀನೇ ಹೇಳುವ ಹಾಗೆ ನೀನು ಎಲ್ಲರೊಂದಿಗೂ ಹೀಗೆ ಮಾತನಾಡುತ್ತೀಯಾ? ಇಷ್ಟೊತ್ತು ಚಾಟ್ ಮಾಡುತ್ತೀಯಾ? ಇಷ್ಟೊತ್ತು ಫೋನಿನಲ್ಲಿ ಮಾತನಾಡುತ್ತೀಯಾ? ನಾನು ಫೋನಿನಲ್ಲಿ ಅತಿ ಹೆಚ್ಚು ಮಾತನಾಡತೊಡಗಿದ್ದು ನಿನ್ನೊಂದಿಗೆ ಸೇರಿದ ಮೇಲೆ ಎನಿಸುತ್ತದೆ. ನಾನು ಹೆಚ್ಚು ಮಾತನಾಡಿದರೂ, ಫೋನಿನಲ್ಲಿ ಆಗಲೀ, ಚಾಟಿನಲ್ಲಿಯೇ ಆಗಲಿ ಅಷ್ಟೊಂದು ಮಾತನಾಡುವುದಿಲ್ಲ. ನನ್ನ ಇಡೀ ಸಮಯ ಒಂದೋ ಬರವಣಿಗೆಗೆ ಇಲ್ಲವೇ ನಿದ್ದೆಗೆ ಮೀಸಲಿರುತ್ತದೆ. ನಾನು ಬೇರೆಯವರ ಪ್ರತಿಯೊಂದು ವಿಷಯಕ್ಕೆ ಸ್ಪಂದಿಸುವಂತೆಯೇ ನಿನಗೂ ಸ್ಪಂದಿಸಿದೆ. ಅದರಲ್ಲಿ ವಿಶೇಷತೆ ಏನೂ ಇರಲಿಲ್ಲ. ಆದರೇ ಬರಬರುತ್ತಾ ನಾನು ಸ್ವಲ್ಪ ಟ್ರ‍ಾಕ್ ಬದಲಾಯಿಸಿದೆ. ನಿನ್ನ ಪ್ರೀತಿಗೆ ಭಿಕ್ಷುಕನಾದೆ.ನಿನ್ನನ್ನು ನಾನು ಕಣ್ಣಾರೆ ಕಂಡ ದಿನವಂತೂ ನಾನು ನನ್ನನ್ನೇ ಮರೆತು ಹೋದೆ. ಇದು ಕೇವಲ ನಿನ್ನ ಚೆಲುವಿಗಾಗಿ ಅಲ್ಲ, ನಿನ್ನಲ್ಲಿರುವ ಪದಗಳೇ ಸಿಗದ ಸೌಂದರ್ಯ ಸಿರಿಗೆ. ಬಣ್ಣಿಸ ಹೊರಟಾಗ ನಾನು ನಿನ್ನನ್ನು ಅದೆಷ್ಟು ಬಣ್ಣಿಸಲಿ ಎನಿಸುತ್ತದೆ. ನಾನು ಪದೇ ಪದೇ ಅದನ್ನೇ ಹೇಳುತ್ತಾ ಹೋದರೇ ನಿನಗೆ ಮುಜುಗರವೆನಿಸಬಹುದು ಅಥವಾ ಇದು ಇವನ ಮಾಮೂಲಿ ಎನಿಸಲುಬಹುದು.ನಾನು ನಿನಗೆ ನಿನ್ನಯ ಬಗೆಗೆ ಎಷ್ಟೇಷ್ಟೋ ಕಾದಂಬರಿ, ಕಥೆಗಳನ್ನು ಬರೆಯಲಿಚ್ಚಿಸುತ್ತೇನೆ. ಆದರೇ ಎಲ್ಲಿಯೂ ಒಂದು ಮಿತಿಮೀರಿ ಬರೆಯಬಾರದಲ್ಲವೇ? ನಿನ್ನ ಸೌಂದರ್ಯದ ಮೌಲ್ಯ ನನಗೆ ತಿಳಿದಿದೆ. ಅದನ್ನೆಲ್ಲಾ ಇಲ್ಲಿ ಬರೆಯಲೇ? ಬರೆದರೂ ತಪ್ಪಿಲ್ಲ, ಬರೆಯದೇ ಇದ್ದರು ತಪ್ಪಿಲ್ಲ ಏಕೆಂದರೇ ನಾನು ನಿನಗೆ ಹಲವಾರು ಸರಿ ವಿವರಿಸಿದ್ದೇನೆ, ಬಣ್ಣಿಸಿದ್ದೇನೆ, ಹೊಗಳಿದ್ದೇನೆ, ಕೆಲವೊಮ್ಮೆ ಬೈಯ್ದಿದ್ದೇನೆ. ಬೈದಿರುವುದು ನಿನ್ನ ದೇಹದ ತೂಕದ ವಿಷಯ ಬಂದಾಗ ಮಾತ್ರ. ನಿನ್ನನ್ನು ನಾನು ನಿನ್ನ ನೈಸರ್ಗಿಕ ಸೌಂದರ್ಯದಿಂದ ನೋಡಲು ಬಯಸುತ್ತೇನೆ. ನಿನ್ನ ಸೌಂದರ್ಯಕ್ಕೆ ಯಾವುದೇ, ಅಲಂಕಾರತೆ ಅವಶ್ಯಕತೆಯಿಲ್ಲ. ಹಾಗೆಂದೂ ನೀನು ಬ್ಯೂಟಿ ಪಾರ್ಲರ್ ಗೆ ಹೋಗುವುದು ಬೇಡವೆಂದಲ್ಲ. ಮೂಲಭೂತವಾದ ಸೌಂದರ್ಯ ಪ್ರಜ್ನೆ ಇರಲೇಬೇಕು. ಕಣ್ಣಿನ ಉಬ್ಬು ತೆಗೆಸುವುದು ಬೇಡವೆಂದರೇ, ಕಾಡಿನ ರಾಣಿಯರಂತಾಗುವುದಿಲ್ಲವೇ ಹೆಣ್ಣು ಮಕ್ಕಳು. ಹಾಗೆಂದು, ಅತಿಯಾದ ಮೇಕ್ ಓವರ್ ಬೇಕೇ? ಅದು ಅವಶ್ಯಕತೆಯಿಲ್ಲ.
ತಲೆ ಕೂದಲು ಈಗ ಇರುವುದೇ ಚೆನ್ನಾಗಿರುವಾಗ, ಅದನ್ನು ಉದ್ದ ತುಂಡ ಮಾಡಲೆತ್ನಿಸುವುದು ಬೇಡ. ನಿನ್ನ ಬಣ್ಣಕ್ಕೆ ಮೆಚ್ಚುವಂತೆ ಕೂದಲಿನ ಬಣ್ಣವನ್ನು ಹಾಕಿಸಿಕೊಂಡರೂ ತಪ್ಪಿಲ್ಲ ಆದರೇ ಇರುವುದೇ ಚೆನಾಗಿರುವಾಗ ಅದೆಲ್ಲವೂ ಏಕೆ? ಹುಡುಗಿಯರ ಸೌಂದರ್ಯದ ಬಗೆಗೆ ಯಾರದರೂ ತಲೆ ಹಾಕಿದರೇ ಕೋಪ ಬರುತ್ತದೆ. ಆದರೂ ಅಲ್ಲಿರುವ ಆಕರ್ಷಣೆಯನ್ನು ನಾವು ಮೆಚ್ಚಿ ಅದನ್ನು ಹೇಳಬೇಕು ಅದು ನಮ್ಮ ಅಭಿರುಚಿಯಲ್ಲವೇ?ನಿನ್ನ ಕಣ್ಣುಗಳು, ಅಲ್ಲಿರುವ ಸೆಳೆತ, ಕಣ್ಣು ಉಬ್ಬಿನ ಎಳೆಗಳು, ಅದಕ್ಕೆ ತಕ್ಕಂತಿರುವ, ನಿನ್ನಯ ಸುಂದರ ಹಣೆ, ಮುಖಕ್ಕೆ ಮೆರಗು ತರುವ ಕೆನ್ನೆ, ಮುತ್ತಿಕ್ಕಬೇಕೆನ್ನುವ ಗದ್ದ, ಚೆಲುವಿಗೆ ಚೆಲುವೇ ನಾಚುವಂತಹ ನಿನ್ನಯ ತುಟಿಗಳು, ತುಟಿಗಳಲ್ಲಿ ಒಂದಕ್ಕೊಂದು ಪೈಪೋಟಿ. ನನಗೂ ಎನಿಸುವುದು ಹಾಗೇಯೇ, ನಿನ್ನ ಎರಡು ತುಟಿಗಳಲ್ಲಿ ಅತಿ ಹೆಚ್ಚು ಸುಂದರವಾಗಿರುವುದು ಯಾವುದು. ಎರಡು ತುಟಿಗಳು ಒಂದಕ್ಕೊಂದು ಮಧುರವಾಗಿದೆಯಲವೇ? ಬಲು ಅಪರೂಪದ ನಿನ್ನಯ ಕುತ್ತಿಗೆಯಂತೂ ನಾನು ಅದೆಷ್ಟೂ ಭಾರಿ ಬಳಸಿ ಬಳಸಿ ಮುತ್ತಿಕ್ಕುವ ಹಿಂದೆಯಿಂದ ಬರದಪ್ಪಿ ಸೆಳೆಯುವಾಸೆಯೂ ಮೂಡುತ್ತದೆ. ಇದೆಲ್ಲವೂ ಬಹಿರಂಗವಾಗಿ ಹೇಳುವುದಲ್ಲ, ಆದರೂ ಭಾವನೆಗಳನ್ನು ತಡೆಯುವುದು ಸರಿಯಿಲ್ಲ. ನಿನ್ನಯ ಉದ್ದನೆಯ ಕೈಗಳು, ಮಿಂಚಿನಂತಹ ಕೈಬೆರಳುಗಳು ನನ್ನನ್ನು ನನ್ನ ಕಣ್ಣನ್ನು ಆಗ್ಗಾಗ್ಗೆ ಕುಕ್ಕುತ್ತಿರುತ್ತವೆ. ಉದ್ದನೆಯ ಕೈಗಳು ಬುದ್ದಿವಂತಿಕೆಯ ಲಕ್ಷಣವಂತೆ, ನೀನು ಬಹಳ ಬುದ್ದಿವಂತೆ ಅದರಲ್ಲಿ ಅನುಮಾನವಿಲ್ಲ. ಅದರಂತೆಯೇ ಉದ್ದನೆಯ ಬೆರಳುಗಳು ಒಳ್ಳೆಯತನದ ಉದಾರತನದ ಸಂಕೇತ. ನಿನ್ನಲ್ಲಿರುವ ಒಳ್ಳೆಯತನಕ್ಕೆ, ಪರರಿಗೆ ಸ್ಪಂದಿಸುವ ಮನಸ್ಸಿಗೆ ಇದು ಸಾಕ್ಷಿ. ನಿನ್ನಯ ಕಾಲ್ಬೆರಳುಗಳು ಅಷ್ಟೇ, ಅವು ನನ್ನ ಕಂಗಳನ್ನು ಆಗ್ಗಾಗ್ಗೆ ಸೆಳೆಯುತ್ತಲೇ ಇರುತ್ತದೆ. ನಿನ್ನಯ ಸೌಂದರ್ಯದ ಸೆಳೆತ ಹೇಗಿದೆಯೆಂದರೇ, ನಾನು ಅತಿ ಹೆಚ್ಚು ಇಷ್ಟ ಪಡುವ, ಮಳೆಯ ಸಂಜೆಗಳು,ನದಿ ದಂಡೆಯ ಬದಿಯಲ್ಲಿನ ಸಂಜೆ, ಕಡಲ ತೀರದಲ್ಲಿನ ಸಣ್ಣ ನಡೆ, ರಾತ್ರಿಯ ಒಂದು ಲಾಂಗ್ ರೈಡ್, ಅತಿ ಎತ್ತರ ಮೇಲೆ ಕುಳಿತು ಕಳೆಯುವ ಚಳಿಯ ಒಂದು ದಿನ ಇವೆಲ್ಲವೂ ನಿನ್ನಯ ಮೂರು ಪದಗಳಿಗೆ ಸಮನಾಗುವುದಿಲ್ಲ. ನಿನ್ನ ಬಾಯಿಂದ ಬರುವ, ಐ ಲವ್ ಯೂ ಎಂಬ ಪದಗಳು ನನ್ನ ಸಂತೋಷವನ್ನು ನೂರು ಪಟ್ಟು ಹೆಚ್ಚಿಸುತ್ತವೆ. ಇದಕ್ಕಿಂದ ಖುಷಿ ಮತ್ತೊದಿದೆಯೇ? ಸದ್ಯಕ್ಕೆ ಇಷ್ಟು ಸಾಕಲ್ಲವೇ?

ಬದುಕಿನ ಅರ್ಥಕ್ಕೆ ಬಂದ ಪ್ರೀತಿಯ ರೂಪವಲ್ಲವೇ ನೀ............!!!!

ಇದು ಸಂಪೂರ್ಣ ನನ್ನ ವೈಯಕ್ತಿಕ ವಿಷಯವಾದ್ದರಿಂದ, ಇದನ್ನು ತಾವುಗಳು ಓದಿ ಸುಮ್ಮನೆ ತಲೆಗೆ ಇರುವೆ ಬಿಟ್ಟುಕೊಳ್ಳುವುದು ಬೇಡವೆಂಬ ಬಯಕೆ. ಇಂಥಹ ಒಂದು ಪ್ರಶ್ನೆ ಪ್ರೀತಿಸುವ ಪ್ರತಿಯೊಬ್ಬನನ್ನು ಕಾದಿರುತ್ತದೆ. ನೀನು ನನ್ನನ್ನು ಎಷ್ಟು ಪ್ರ‍ೀತಿಸುತ್ತೀಯಾ? ನಿನ್ನ ಪ್ರೀತಿಯನ್ನು ನಂಬಬಹುದೇ? ನಂಬಿಸಲು ನಾನು ಏನು ಮಾಡಬಹುದು? ಸಾಧರಣವಾಗಿ ಒಂದು ಹುಡುಗಿ ಕಷ್ಟದಲ್ಲಿದ್ದಾಗ ಅವರ ಬಗೆಗೆ ಕರುಣೆ ಬರುವುದು ಸಹಜ ಆದರೇ, ಪ್ರೀತಿ ಬರುವುದಿಲ್ಲ. ಪ್ರೀತಿಯೇ ಬೇರೆ, ಕರುಣೆಯೇ ಬೇರೆ. ನಾನು ನಿನ್ನನ್ನು ಇಷ್ಟಪಟ್ಟದ್ದು, ಕರುಣೆಯಿಂದಲ್ಲ. ಕರುಣೆ ಕ್ಷಣಿಕವಾದದ್ದು ಎಂಬುದು ನನಗೂ ಗೊತ್ತು ನಿನಗೂ ಗೊತ್ತು. ನೀನು ಯಾರಿಂದಲೂ ಕರುಣೆ ಬಯಸುವವಲಲ್ಲ. ನಾನು ಯಾರಿಗೂ ಕರುಣೆ ತೋರಿಸುವವನೂ ಅಲ್ಲ. ನನ್ನ ಪ್ರೀತಿಯ ಮಹತ್ವ ತಿಳಿಸುವುದು ಹೇಗೆ? ನನಗೆ ಸ್ನೇಹಿತರು, ಸ್ನೇಹಿತೆಯರು ಬಹಳ ಜನರಿದ್ದಾರೆ. ಇವರೆಲ್ಲರೂ ಇದ್ದು ಯಾರು ಇಲ್ಲದಂತಿದ್ದೆನಾ ನಾನು? ಇಲ್ಲ ಇಲ್ಲವೇ ಇಲ್ಲ, ನನಗೆ ಎಲ್ಲರೂ ಇದ್ದರೂ, ಎಲ್ಲವೂ ಇತ್ತು, ಮನಸ್ಸಿಗೆ ಹಿಡಿಸುವ ಪ್ರೀತಿಯ ಅವಶ್ಯಕತೆ ಇತ್ತು. ಇದಕ್ಕೆ ಸರಿಯಾದ ಸಮಯದಲ್ಲಿ ನನ್ನ ಬಾಳಿಗೆ ಬಂದವಳು ನೀನು. ನೀನು ನನಗೆ ನೇರ ಭೇಟಿಯಾದವಳಲ್ಲ, ನಿನ್ನ ಬಗೆಗೆ ಹೆಚ್ಚು ತಿಳಿದು ಇರಲಿಲ್ಲ. ಆದರೇ ಮೊದಲನೆಯ ಸೆಳೆತವೂ ಇರಲಿಲ್ಲ, ಮಾತು ಬೆಳೆದಂತೆ ಒಂದು ಬಗೆಯ ಆಕರ್ಷಣೆ ಬೆಳೆಯಿತು. ಮದುವೆಯಾದವಳೆಂದು ತಿಳಿದು ನಿನ್ನಿಂದ ನಾನು ದೂರವಿದ್ದೆ ಎನಿಸಿದರೂ, ನಾನು ನಿನ್ನನ್ನು ಇಷ್ಟಪಟ್ಟಿದ್ದು ಮನಸಾರೆ ಪ್ರೀತಿಸಿದ್ದು ಮಾತ್ರ ಸತ್ಯ. ಇದಕ್ಕೆ ಯಾವುದೇ ಪೂರ್ವಾಪರವಿಲ್ಲ. ಇದು ಕೇವಲ ಪ್ರೀತಿ, ನಿಷ್ಕಲ್ಮಶ ಪ್ರೀತಿ. ಮದುವೆಯಾದವಳನ್ನು ಪ್ರೀತಿಸುವುದು ತಪ್ಪಾ? ನೈತಿಕತೆ ಅನೈತಿಕತೆಯ ವಿವರಣೆ ನೀಡಬೇಕಿಲ್ಲ.
ಮದುವೆಯಾಗಿ ಇರುವ ಸಂಸಾರಿಕ ಗೃಹಿಣಿಯನ್ನು ಪ್ರೀತಿಸುವುದು ನಿಜಕ್ಕೂ ಅಪರಾಧ. ಆದರೇ, ಪ್ರೀತಿವಂಚಿತಳಾದವಳನ್ನು ಪ್ರೀತಿಸುವುದು ಯಾವ ತಪ್ಪು? ನಿನಗೆ ಅನ್ಯಾಯವಾಗಿದೆ ನಿನ್ನ ಪ್ರೀತಿಗೆ ಮೋಸವಾಗಿದೆ ಎಂಬ ಕರುಣೆಯಿಂದ ನಾನು ನಿನ್ನನ್ನು ಪ್ರೀತಿಸಿಲ್ಲ. ನಾನು ಪ್ರೀತಿಸಿದ್ದು, ನೀನಾಗಿರುವ ಕೇವಲ ನಿನ್ನನ್ನು ಮಾತ್ರ. ಅಲ್ಲಿ ಮದುವೆಯಾಗಿ ಬೇರ್ಪಟ್ಟವಳು ಅಲ್ಲಾ ಪ್ರ‍ೀತಿವಂಚಿತಳು ಅಲ್ಲಾ. ಎಲ್ಲರೂ ಸಮಾನರೇ ಜಗದಲ್ಲಿ, ಕರುಣೆಯೆಂಬುದು ಇಲ್ಲಾ, ಅಥವಾ ನೀನಿರುವ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಮನಸ್ಸು ಇಲ್ಲ. ನೀನು ನನಗೆ ಇಷ್ಟವಾಗಲೂ ಸಾವಿರ ಸಾವಿರ ಕಾರಣಗಳಿದ್ದವು. ಅವುಗಳೆಲ್ಲವೂ ನಿನಗೂ ತಿಳಿದಿದೆ, ನನಗೂ ಅರಿವಿದೆ. ಕೇವಲ ಬಾಹ್ಯ ಸೌಂದರ್ಯಕ್ಕೆ ಸೋತಿಲ್ಲ, ನಿನ್ನನ್ನು ಪ್ರೀತಿಯಿಂದ ನೋಡುವ ಮುಂಚೆಯೂ ನೀ ನನಗಿಷ್ಟವಾಗಿದ್ದೆ. ಸೌಂದರ್ಯದ ವಿಷಯ ಬಂದಾಗ ನಾನೇ ಹೇಳುವಂತೆ ನನ್ನ ಕಥೆಯ ಕಾದಂಬರಿಯ ನಾಯಕಿ ನೀನೆ ಆಗಿರುವೆ, ಅದು ಈ ಜನ್ಮಕ್ಕೂ ಮುಂದಿನ ಯಾವ ಜನ್ಮಕ್ಕೂ ಸರಿಯೇ. ನಾನು ನಿನ್ನನ್ನು ಕಂಡು ಎರಡು ವರುಷಗಳು ತುಂಬಿವೆ. ಮೊದಲ ದಿನಗಳಲ್ಲಿನ ಕಾತುರತೆ ಇನ್ನೂ ಹಾಗೆಯೇ ಇದೆ. ಅದಿನ್ನೂ ಮಾಸಿಲ್ಲ, ಮಾಸುವುದೂ ಇಲ್ಲ. ನಿನ್ನ ಒಂದು ಕರೆಗಾಗಿ, ಒಂದು ಕ್ಷಣದ ಚಾಟ್ ಗಾಗಿ ಕಾಯುತ್ತಿದ್ದ ದಿನಗಳಿವೆ. ಇದು ಕೇವಲ ನನ್ನ ಏಕಾತನದ ಕೊರಗನ್ನು ನೀಗಿಸಲು ಬೇಕಿದ್ದ ತಾವಲ್ಲ. ನನ್ನತನವನ್ನೆಲ್ಲಾ ನಿನಗೆ ದಾರೆಯೆರೆಯಲು ಕಾದಿದ್ದ ಇಷ್ಟು ವರ್ಷದ ಪುಣ್ಯ. ನಾನು ಎಲ್ಲಿಯೂ ಎಂದಿಗೂ ಯಾರನ್ನೂ ಯಾವುದಕ್ಕೂ ಬೇಡದೇ ಇದ್ದರೂ ನಿನ್ನ ಕಾಲಿಗೆ ಬಿದ್ದು ಅಂಗಲಾಚುವ ಮಟ್ಟಕ್ಕೆ ಪ್ರೀತಿಸಿದ್ದೀನಿ, ಪೀಡಿಸಿದ್ದೀನಿ. ನಿನ್ನನ್ನು ಮೆಚ್ಚಿಸಲು ಬರೆಯಬೇಕಿಲ್ಲ, ನನ್ನ ಪ್ರೀತಿಯ ತೀವ್ರತೆ ನಿನಗೂ ಅರಿವಿದೆ.
ಅಂದರೇ, ಇಲ್ಲಿಯ ತನಕ ನಾನು ಯಾರನ್ನೂ ಪ್ರೀತಿಸಬೇಕೆನಿಸಿರಲಿಲ್ಲವೇ, ನಿನಗಿಂತ ಸುಂದರಿಯರಿರಲಿಲ್ಲವೇ? ಇಂಥಹ ಕುಹುಕ ಪ್ರಶ್ನೆಗಳು ನನ್ನನ್ನು ಕೇಳಿದ್ದಾವೆ. ಇದಕ್ಕೆಲ್ಲಾ ಉತ್ತರ ಸಮಯ. ನಾನು ಬೆಳೆದು ಬಂದ ರೀತಿ, ಪರಿಸರ, ಪರಿಸ್ಥಿತಿ, ನನ್ನನ್ನು ಪ್ರೀತಿಯಿಂದ ಹೆಣ್ಣಿನ ಪ್ರೀತಿಯಿಂದ ಮೋಹದಿಂದ ಸ್ವಲ್ಪ ದೂರವೇ ಇಟ್ಟಿತ್ತು. ನಾನು ಕೆಲವು ಹುಡುಗಿಯರನ್ನು ಕಂಡರೂ ಪ್ರೀತಿಸುವ ಮಟ್ಟಕ್ಕೆ ಇಷ್ಟಪಡಲಿಲ್ಲ ಅದೆಲ್ಲವೂ ಆ ಕ್ಷಣದ ಆಕರ್ಷಣೆಯಂತಿತ್ತು. ನೀನು ಇದನ್ನೂ ಆಕರ್ಷಣೆ ಎಂದರೇ? ಆಕರ್ಷಣೆಯಲ್ಲಿ ಕೇವಲ ಬೇಕು ಇರುತ್ತದೆ, ಬಯಸಿದ್ದು ಬೇಕು ಎನ್ನುವುದೇ ಮೊದಲ ಗುರಿ. ಪ್ರೀತಿಯಲ್ಲಿ ಅದಕ್ಕಿಂತ ಹೆಚ್ಚಾಗಿ ಕೊಡುವುದಿರುತ್ತದೆ. ಹೆಚ್ಚು ಕೊಟ್ಟಷ್ಟು ಹೆಚ್ಚು ವೃದ್ದಿಸುತ್ತದೆ. ಕೊಡುವುದು ಮಾತ್ರ ಪ್ರೀತಿಯ ಕೆಲಸ, ನಾನು ಮಾಡುತ್ತಿರುವುದು, ಮಾಡಿದ್ದು ಇದನ್ನೇ. ಯಾರನ್ನೇ ಆದರೂ ಅತಿಯಾಗಿ ಪ್ರೀತಿಸಿದಾಗ ಪ್ರೀತಿಯ ತೀವ್ರತೆ ಅವರನ್ನು ಮೂಕರನ್ನಾಗಿಸಬೇಕು. ಕ್ಷಣವಲ್ಲಾ, ಪ್ರತಿ ಸೆಕೆಂಡು ಕೂಡ ಅವರನ್ನೇ ಕುರಿತು, ಜ್ನಾನಿಸಬೇಕು, ಪ್ರೀತಿಸಬೇಕು, ಅವರನ್ನು ಹರಸಬೇಕು, ಹಾರೈಸಬೇಕು. ಅದು ನಿಜವಾದ ಪ್ರೀತಿ. ಕೇವಲ ನನ್ನ ಹೆಂಡತಿಯಗುವುದಾದರೇ ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀನು ಇಲ್ಲವೆಂದರೇ ಮರುಕ್ಷಣದಿಂದ ನಿನ್ನ ಬಗೆಗೆ ತಾತ್ಸಾರ ಮೂಡುತ್ತದೆ, ಇದೆಲ್ಲವೂ ಶುದ್ದ ಸುಳ್ಳು. ನಾನು ನಿನ್ನೊಡನೆ ಕೇವಲ ಗೆಳೆಯನಾಗಿರಲು ಅಸಾಧ್ಯವಾಗಿದ್ದೇ ಇಲ್ಲಿ. ನಾನು ನನ್ನ ಪ್ರಾಣಕಿಂತ ಹೆಚ್ಚು ಪ್ರೀತಿಸುವಾಗ ಕೇವಲ ನೂರರಲ್ಲಿ ಒಬ್ಬನಾದ ಸ್ನೇಹಿತನಾಗಿರುವುದು ಸಾಧ್ಯವಾಗುವುದಿಲ್ಲ.
ನಿನ್ನಲ್ಲಿ ನಾನು ಸೋತುಹೋಗಲು ಕಾರಣಗಳ ಪಟ್ಟಿಗಳನ್ನು ಬರೆಯಲೇ? ಬರೆಯುತ್ತಾ ಹೋದರೇ, ಓದುವ ಗೆಳೆಯರು ಮುಜುಗರ ಪಟ್ಟಾರು.ಆದರೂ ಬರೆಯುವುದು ನನ್ನ ಕರ್ತವ್ಯ, ಸ್ವಲ್ಪ ಮಟ್ಟಿಗೆ ಸೆನ್ಸಾರ್ ಹಾಕಿ ಬರೆಯಲೆತ್ನಿಸುತ್ತೇನೆ. ನಿನ್ನ ಮಾತಿನ ಶೈಲಿಗೆ ನಾನು ಮೊದಲು ಮಾರುಹೋದೆ ಎಂದರೇ ತಪ್ಪಾಗದು. ನಿನ್ನ ನೇರ ನಡೆನುಡಿ ಎಂಥವರನ್ನು ಆಕರ್ಷಿಸುತ್ತದೆ, ಅಂಥಹುದರಲ್ಲಿ ನಾನು ಸೋತಿದ್ದು ಅತಿರೇಕವೇನಲ್ಲ. ಎಂದೂ ಯಾವ ಕ್ಷಣಕ್ಕೂ ನೀನು ಸುಳ್ಳು ಹೇಳುವುದಿಲ್ಲ, ಇದ್ದಿದ್ದನ್ನು ಇದ್ದ ಹಾಗೇಯೇ ಹೇಳುವುದು, ನನ್ನನ್ನು ಬೈಯ್ಯುವುದು, ಬೈಯ್ಯುತ್ತಲೇ ಇರುವುದು ನನ್ನನ್ನು ನಿನ್ನ ಅತಿ ಹತ್ತಿರಕ್ಕೆ ಎಳೆದೊಯ್ದಿತು. ನೀನು ಎಲ್ಲವನ್ನು ನೇರ ದೃಷ್ಟಿಯಿಂದ ನೋಡುವುದು, ಮನರಂಜನೆ, ಅಭಿರುಚಿಗಳು ನನ್ನನ್ನು ನಿನ್ನ ಕಡೆಗೆ ಸೆಳೆದವು. ಸಾಧನೆಯೆಂಬುದರ ಬೆನ್ನ ಹತ್ತಿ ಅದನ್ನು ಸಾಧಿಸಲೇ ಬೇಕೆಂದು ಪಡುವ ಛಲ, ಪರರಿಗೆ ಸಹಾಯ ಮಾಡಲು ಹಾತೊರೆಯುವಿಕೆ. ಇವೆಲ್ಲವೂ ಇಷ್ಟವಾದರೇ, ನಾವು ಮಾಡುವುದೇ ಸರಿ, ಸಂಶೋಧನೆ ನಮ್ಮನ್ನು ಬಿಟ್ಟರೇ ಬೇರಾರು ಮಾಡುವುದೇ ಇಲ್ಲವೆನ್ನುವ ಅಹಂ ಮಾತ್ರ ಇಷ್ಟವಾಗಲಿಲ್ಲ. ಆದರೂ ಒಮ್ಮೊಮ್ಮೆ ಹೇಳುವ ನಾನಿರುವುದೇ ಹೀಗೆ, ಇದ್ದರೇ ಇರು ಇಲ್ಲದಿದ್ದರೇ ಹೋಗು ಎನ್ನುವ ರೀತಿಗಳು ಬಹಳ ಮೆಚ್ಚುಗೆಯಾದವು ಅನ್ನು. ಆದರೂ ನೀನು ನನ್ನನ್ನು ಸತಾಯಿಸಿದ್ದಷ್ಟು ಮತ್ತಾರು ಸತಾಯಿಸಿಲ್ಲವೆನ್ನುವುದು ಸತ್ಯ. ಸ್ವತಃ ನನ್ನ ತಂದೆಯೇ ನನ್ನನ್ನು ಇಷ್ಟು ತುಚ್ಚವಾಗಿ ಕಂಡಿಲ್ಲವೆನಿಸುತ್ತದೆ ಅಷ್ಟರ ಮಟ್ಟಿಗೆ ನೀನು ನನ್ನ ಸದರವಾಗಿ ಮಾತನಾಡುತ್ತೀಯಾ. ರೀತಿ ಮಾತನಾಡಲು ಸಾಧ್ಯ ಹೇಳು. ಕೆಲವೊಮ್ಮೆ ನಿನ್ನ ಸಣ್ಣ ಸಣ್ಣ ಮಾತುಗಳು ಕಣ್ಣೀರಿನ ಕದ ತಟ್ಟಿದರೂ, ನಿನ್ನ ಆಳವಾದ ಪ್ರೀತಿ ಅದನ್ನು ಮರುಕ್ಷನಕ್ಕೆ ಮರೆಸಿಬಿಡುತ್ತದೆ. ನಾನು ನಿನ್ನಿಂದಲೇ ಅದೆಷ್ಟೋ ಬಾರಿ ಕಂಠ ಪೂರ್ತಿ ಕುಡಿದ್ದಿದ್ದೇನೆ, ಆದರೇ ಕುಡಿತದಲ್ಲಿಯೂ ನಿನ್ನಯ ಮೇಲಿನ ಪ್ರೀತಿಯೇ ಕಾಣುತ್ತದೆ ಹೊರತು ಮಿಕ್ಕಾವ ಪ್ರಪಂಚವೂ ಇರುವುದಿಲ್ಲ. ಇದು ಕುರುಡು ಪ್ರೇಮವಾ? ಇಂಥಹ ಪ್ರಶ್ನೆ ನಿನಗೆ ಮೂಡಿದರೂ ನನಗೆ ಬರುವುದಿಲ್ಲ. ಯಾವುದು ಕುರುಡಲ್ಲ, ಮನುಷ್ಯತ್ವದ ಕಣ್ಣು ತೆರೆದು ಪ್ರೀತಿಯ ಅರ್ಥ ಹುಡುಕಿದರೇ, ಪ್ರೀತಿಯನ್ನು ಪ್ರೀತಿಯಂತೆಯೇ ಪ್ರೀತಿಸಿದರೇ ಅದು ಹಸಿರಾಗಿಯೇ ಕಾಣುವುದು. ಅರ್ಥಪೂರ್ಣ ಬದುಕಿಗೆ ಪ್ರೀತಿ ಬಲು ಪ್ರಮುಖವಾದದ್ದು.
ನಾನು ನಿನಗೆ ಹೇಳಿದಂತೆಯೇ ನಿನ್ನ ಬಗೆಗೆ ನನ್ನ ಪ್ರೀತಿಯ ಬಗೆಗೆ ನಿನ್ನಯ ಸೌಂದರ್ಯದ ಬಗೆಗೆ ಎಷ್ಟೇಷ್ಟೇ ಬರೆದರೂ ಅಧಿಕವೆನಿಸುತ್ತದೆ. ನಿನ್ನಯ ಸೌಂದರ್ಯವೂ ಅಷ್ಟೇ, ಹೆಚ್ಚೆಚ್ಚೂ ಬಣ್ಣಿಸಿದಷ್ಟೂ ಅದು ಹೆಚ್ಚಿದೆ ಎನಿಸುತ್ತದೆ. ನಿನ್ನನ್ನು ಪ್ರತಿ ಬಾರಿ ಕಂಡಾಗಲೂ ಅಷ್ಟೇ, ನಿನ್ನನ್ನು ಪ್ರಥಮ ಬಾರಿಗೆ ಕಾಣುತಿದ್ದೇನೆ ಎನ್ನುವಂತೆ, ಹಸಿದವನು, ಅನ್ನ ಕಂಡಾಗ ಮೃಷ್ಟಾನ್ನ ಕಂಡಾಗ ಆಡುವವನಂತೆ, ಭಿಕ್ಷುಕ ವಜ್ರಾಭರಣವನ್ನು ಕಂಡಾಗ ಬೆರಗಾಗುವಂತೆಯೇ ನಿನ್ನನ್ನು ನಾನು ಕಾಣುತ್ತಿದ್ದೇನೆ. ಇದೆಲ್ಲವೂ ನಿನಗೆ ಅತಿರೇಕವೆನಿಸಿದರೂ, ನಾನು ನಿನ್ನಯ ಸೌಂದರ್ಯಕ್ಕೆ ದಾಸನಾಗಿರುವುದಂತೂ ಸತ್ಯ. ದಾಸ್ಯೆತೆ ನನಗೆನೂ ಹೊಸತಲ್ಲ, ನಿನಗೆ ದಾಸ್ಯನಾಗಿರುವುದು ಹೊಸತು, ಆದರೇ ಅದೇನೂ ತಪ್ಪೆನಿಸುತ್ತಿಲ್ಲ. ನಿನ್ನೊಂದಿಗೆ ಕುಳಿತು ಕನಸು ಕಟ್ಟಲು ಮನಸ್ಸು ಹಾತೊರೆಯುತ್ತದೆ. ನಿನ್ನೊಡನೇ ದೂರದೂರಿಗೆ ಮಳೆ ಸುರಿವಾಗ ಬೈಕಿನಲ್ಲಿ ಹೋಗುವಾಸೆ. ದಟ್ಟಕಾಡಿನ ರಸ್ತೆಯಲ್ಲಿ, ನಾವಿಬ್ಬರೇ ಸುರಿವ ಮಳೆಯಲ್ಲಿ ಬೆಟ್ಟಗಳ ನಡುವೆ ಬೈಕಿನ್ನಲ್ಲಿ ಹೋಗುವಾಸೆ. ಮಳೆ ನಿಂತು ಹೋದ ಮೇಲೆ, ನಿನ್ನ ಕೈ ಕೈ ಹಿಡಿದು ನಡೆವಾಸೆ, ನಡು ರಾತ್ರಿಯಲ್ಲಿ ರಸ್ತೆ ಮಧ್ಯೆದಲ್ಲಿ, ಜೂಟಾಟವಾಡುವಾಸೆ. ನಿನ್ನನ್ನು ರೇಗಿಸಿ, ರೇಗಿಸಿ ಮತ್ತೆ ತಬ್ಬಿ ಹಿಡಿದು ಹೆಗಲ ಮೇಲೆ ಕೈಹಾಗಿ, ಸಮಾಧಾನ ಮಾಡಿಸಿಕೊಂಡು ಹೋಗುವಾಸೆ. ನನ್ನ ತುಂಟತನದಿಂದಲೇ ನಿನ್ನನ್ನು ರೇಗಿಸಿ ಮುದ್ದಿಸುವಾಸೆ.
ನೀನು ನನಗೆಂದಿಗೂ ಮಗುವಿನಂತೆ, ನೀನು ರೇಗಿದರು, ಬೈದರೂ ನಾನು ಕೋಪಿಸಿಕೊಂಡರೂ ಅದು ಆ ಕ್ಷಣಕ್ಕೆ, ಮತ್ತೆ ಮರಳಿ ನಿನ್ನಲ್ಲಿಗೆ ಬರುತ್ತೇನೆ. ಆದದ್ದನು ಮರೆತಿರುತ್ತೇನೆ. ನೀನು ಹೇಳುವಂತೆ ನಾನು ಸದಾ ನನ್ನಯ ಬಗೆಗೆ ಹೇಳುತ್ತಿರುತ್ತೇನೆಂದರೇ, ನನಗೆ ನನ್ನ ಬಗ್ಗೆ ಹೆಚ್ಚಾಗಿ ಗೊತ್ತಿರುವುದರಿಂದ ನನ್ನ ಬಗ್ಗೆ ನಿನಗೆ ತಿಳಿಸಿಕೊಡಲೆತ್ನಿಸುತ್ತೇನೆ. ಅದು ಬಿಟ್ಟು ನನ್ನನ್ನು ನಾನು ಬಣ್ಣಿಸಲಲ್ಲ. ನಿನ್ನ ಸರ್ವವನ್ನು ಚಿಕ್ಕ ಮಗುವಿನಂತೆ ಶೃಷ್ರೂಶೆ ಮಾಡಬೇಕೆನ್ನುವುದು ನನ್ನಯ ಆಸೆ. ಇದು ಅತಿ ಎನಿಸಿದರೂ, ನಿನ್ನನ್ನು ನಾನು ನನ್ನ ಸರ್ವಸ್ವವಂತೆ ತಿಳಿದಿದ್ದೇನೆ, ಅದರಂತೆಯೇ ನಡೆದುಕೊಳ್ಳುತ್ತೇನೆ. ನೀನು ನನಗೆ ಹೇಳುವಂತೆ, ನಾನು ನಿನ್ನನ್ನು ದುರುಗುಟ್ಟಿ ಗಂಟೆಗಂಟೇಗಟ್ಟಲೇ ನೋಡುವುದು ನನ್ನ ಮನಸ್ಸಿನ ಸಮಧಾನಕ್ಕೇ ಹೊರತು, ಕಾಮಕೇಳಿಗಲ್ಲ. ಕಾಮುಕ ದೃಷ್ಟಿ ನನ್ನಲ್ಲಿಲ್ಲದೇ ಇದ್ದರೂ, ನಿನ್ನೆಡೆಗೆ ನಿನ್ನ ಸೌಂದರ್ಯದೆಡೆಗೆ ಸೆಳೆತವಿದೆ, ಅದನ್ನು ಅತಿಯಾಗಿ ಪ್ರೀತಿಸುವ, ಅದನ್ನು ಮೆಚ್ಚುವ, ಅದನ್ನೇ ಜಪಿಸುವ ಮನಸ್ಸಿದೆ. ನೀನು ನನಗೆ ಹೇಳಬಹುದು, ಮಾಡುವ ಕೆಲಸ ಬಿಟ್ಟು ಹೀಗೆ ಕುಳಿತು, ಕಥೆ ಬರೆದು, ಕಾದಂಬರಿ ಬರೆಯುತ್ತೇನೆಂದರೇ ನಿನ್ನಯ ಮುಂದಿನ ಬದುಕೇನು? ನಿನ್ನನ್ನು ನಂಬಿ ನಾನು ಬಂದರೇ ನಾಳೆ ನನ್ನ ಹೊಟ್ಟೆಗೆ ತಣ್ಣೀರು ಬಟ್ಟೇಯೇ ಗತಿಯೆಂದು. ನನಗೆ ನನ್ನಯ ಬಗೆಗೆ ಸಾಕಷ್ಟು ಭರವಸೆಯಿದೆ, ಭರವಸೆ ಎನ್ನುವುದಕ್ಕಿಂತ ಆತ್ಮವಿಶ್ವಾಸವಿದೆ, ನೀನು ನಿನ್ನನ್ನು ನಂಬಿದರೇ ಸಾಕು, ನನ್ನನ್ನು ನಂಬಿದಂತೆ. ನಾನು ನನ್ನನ್ನು ನಂಬುವುದಕ್ಕಿಂತ ನಿನ್ನನ್ನು ನಿನ್ನ ಆತ್ಮವಿಶ್ವಾಸವನ್ನು ನಂಬುತ್ತೇನೆ. ನಿನ್ನಲ್ಲಿರುವ ದೃಢವಿಶ್ವಾಸ ನನ್ನ ಆತ್ಮವಿಶ್ವಾಸವನ್ನು ಸಾವಿರ ಪಾಲು ಹಿಗ್ಗಿಸುತ್ತದೆ. ಮಿತಿ ಮೀರಿ ವರ್ತಿಸಬೇಡ, ಎಂದು ಹೇಳುವ ಒಂದು ಸಾಲು ನನ್ನನ್ನು ಅನೇಕಾ ಬಾರಿ ಹಿಡಿದು ಕಟ್ಟಿಸಿದೆ.
ಪ್ರೀತಿಯ ವಿಷಯದಲ್ಲಿ, ಪ್ರೇಮಕ್ಕೂ ಕಾಮಕ್ಕೂ ತೆಳ್ಳನೆಯ ವ್ಯತ್ಯಾಸವಿರುತ್ತದೆ. ಅದನ್ನು ಅರಿಯುವುದು ಅದಕ್ಕೆ ತಕ್ಕನಾಗಿ ವರ್ತಿಸುವುದು, ಬಹಳ ಕಷ್ಟವೆನಿಸುತ್ತವೆ. ಇದು ದೈನಂದಿನ ಚಟುವಟಿಕೆಗಳಲ್ಲಿಯೂ ಅಷ್ಟೇ, ಒಂದಕ್ಕೊಂದು ಇರುವ ಸಂಬಂಧಗಳನ್ನು ಅನೇಕ ಬಾರಿ ತಪ್ಪು ಗ್ರಹಿಸಿ, ಸಂಬಂಧಗಳು ಹಾಳಾಗಿಬಿಡುತ್ತವೆ. ಎಚ್ಚರಿಕೆ ಇದ್ದರೇ ಒಳ್ಳೆಯದು ಅಷ್ಟೇ. ನೀನು ನನಗೆ ಹೇಳುವ ಮಿತಿ ಮೀರಿ ವರ್ತಿಸಬೇಡವೆನ್ನುವುದರಲ್ಲಿ ಅರ್ಥವಿದೆ. ಪ್ರೀತಿಸುವವಳಿಗೆ ಮುತ್ತಿಕ್ಕುವುದು ಅತಿ ಎನಿಸುವುದಿಲ್ಲ, ಆದರೇ, ನಮ್ಮ ಕಣ್ಣುಗಳು ಮುಖವನ್ನು ಬಿಟ್ಟು ಸ್ವಲ್ಪ ಕೆಳಕ್ಕೆ ಬಿದ್ದರೇ ಅದು ಕೆಟ್ಟ ದೃಷ್ಟಿಯಾಗಿ ನಿನ್ನ ವಕ್ರ ದೃಷ್ಟಿಗೆ ಗುರಿಯಾಗಿ ನಾಲ್ಕಾರು ದಿನ ಮಾತುಕತೆ ನಿಂತು ಬಿಡುತ್ತದೆ. ಹರ್ಷದ ಕೂಳಿಗಾಗಿ ವರ್ಷದ ಕೂಳು ಕಳೆದುಕೊಂಡರು ಎನ್ನುವಂತೆ ನಾನು ನಿನ್ನಯ ಕಡೆಗೆ ಅದರಲ್ಲಿಯೂ ನಿನಗಿಷ್ಟವಿಲ್ಲದ ಕಡೆಗೆ ನಾನು ದಿಟ್ಟಿಸಿ ನೋಡಿ ಇನ್ನೂ ಯಾವತ್ತು ನೀನು ನನ್ನೊಡನೆ ಬರುವುದಿಲ್ಲವೆಂದರೇ ಆ ನೋವನ್ನು ತಡೆಯಲಾಗದು. ಮುನಿಸಿಕೊಂಡು ಹೋದ ಕ್ಷಣದಲ್ಲಿಯೇ ತತ್ತರಿಸಿದಂತಾಗುತ್ತದೆ. ಇವೆಲ್ಲವೂ ನನ್ನಯ ಜೀವನದಲ್ಲಿಯೂ ಆಗುತ್ತದೆಂದು ಮೊದಲು ಎನಿಸುತ್ತಿರಲಿಲ್ಲ, ಈಗ ಇದೆಲ್ಲವೂ ಆಗಿ ನಾನು ಒಪ್ಪಲೇಬೇಕಾಗಿದೆ. ಪ್ರೀತಿಯ ತೀವ್ರತೆ, ಪ್ರೀತಿಸುವ ಮನಸ್ಸು ಏನು ಮಾಡಿದರೂ ನಮಗೆ ಇಷ್ಟವಾಗುತ್ತದೆ. ಅದು ಯಾವ ಪರಿ ಇಷ್ಟವಾಗುತ್ತದೆಯೆಂದರೇ, ಪ್ರೀತಿಸುವ ಮನಸ್ಸು ಬಳಸುವ ಒಂದೊಂದು ಪದವೂ ನಮ್ಮ ಕಿವಿಯಲ್ಲಿ ಗುಂಯ್ ಎನ್ನುತ್ತದೆ. ಯಾರದರೂ, ಇಡಿಯಟ್ ಎಂದರೇ, ಲೋಫರ್, ಎಂದರೇ, ಚಪ್ಪರ್ ಎಂದರೇ ಪ್ರೀತಿ ಎನ್ನುವುದೆಲ್ಲ ಬರೀ ಟೈಂ ಪಾಸ್ ಎಂದರೇ ದಿಡೀರನೇ ನೀನೇ ನೆನಪಾಗುತ್ತೀಯ. ಕೆಲವೊಮ್ಮೆ, ತಿನ್ನುವ ಪದಾರ್ಥಗಳು, ಲೇಸ್, ಕುರ್ ಕುರ್ರೆ, ಕುಡಿಯುವ ಮಾಜ಼ಾ, ಕುಡಿಯುವ ನೀರಲ್ಲಿ ಕೂಡ ನಿನ್ನ ನೆನಪು ಕಾಡುತ್ತದೆ. ಒಮ್ಮೊಮ್ಮೆ ನೀ ಒಬ್ಬಳೇ ಕುಡಿಯುವುದು ಕೆಲವೊಮ್ಮೆ ನಾನು ನನ್ನ ಬಾಯಿಯಿಂದ ನಿನಗೆ ಕುಡಿಸುವುದು. ಇದು ಸ್ವಲ್ಪ ಅತಿಯಾಯಿತೆನಿಸಿದರೂ ಸತ್ಯವಲ್ಲವೇ?
ಕೆಲವೊಮ್ಮೆ ಒಂದಕ್ಕೊಂದು ಸಂಬಂಧಗಳು ಅರ್ಥವೇ ಆಗುವುದಿಲ್ಲ, ಇಡ್ಲಿ ಎಂದರೇ, ನನಗೆ ಅಂಗಡಿ ನೆನಪಾಗುವುದಿಲ್ಲ, ನಿನ್ನೊಡನೆ ತಿಂದು ಇಲ್ಲ. ಇಡ್ಲಿ ಎಂದರೇ, ಹೆಬ್ಬಾಳದ ರಸ್ತೆ ಬದಿಯಲ್ಲಿ ಮಾರುವವನ ಬಳಿಯಲ್ಲಿ ನಿಂತು ಇಡ್ಲಿಗಿಂತ ಹೆಚ್ಚು ಚಟ್ನಿ ತಿನ್ನುವಾಸೆ ಬರುತ್ತದೆ. ನಿನ್ನೊಂದಿಗೆ ಆಡಿದ ಪ್ರತಿ ಪದಗಳು ಹೀಗೆ, ನನ್ನೊಡನಿರುವಾಗ ಮರೆಯುವುದು ಕಷ್ಟವೆನಿಸುತ್ತದೆ. ನೀನು ಪ್ರತಿ ಬಾರಿ ಕೇಳುವಂತೆ ನಿನಗೆ ಬೇರೆ ಹುಡುಗಿಯರು ಇಷ್ಟವಿರಲಿಲ್ಲವೇ? ನಾನೇ ಮೊದಲನೆಯವಳೇ? ನನ್ನ ಕಿವಿಗೆ ಹೂವು ಇಡುವುದು ಬೇಡ. ನಾನು ಹೇಳಿದರೂ ಹೇಳದೇ ಇದ್ದರೂ, ಸತ್ಯ ಎಂದಿಗೂ ಸತ್ಯವಾಗಿರುತ್ತದೆ. ಬಹಳ ಚಿಕ್ಕ ವಯಸ್ಸಿನಿಂದಲೂ, ನಾನು ಸ್ವಲ್ಪ ಹುಚ್ಚುತನದ ಹುಡುಗ. ನನ್ನ ಸಮಯವನ್ನೆಲ್ಲಾ ನನಗೇ ಇಷ್ಟವಾಗುವ ವಿಷಯಕ್ಕೆ ಮೀಸಲಿಟ್ಟು ಬೆಳೆದವನು ನಾನು. ಇದರ ಪರಿಣಾಮ ನನ್ನ ತಂದೆಯೇ ನನ್ನ ಮೊದಲ ಶತ್ರು ಆಗಿದ್ದು. ಹುಡುಗಿಯರೆಡೆಗೆ ಆಕರ್ಷಿಸುವ ವಯಸ್ಸು ಹದಿನೇಳು ಇದ್ದಾಗ ಕೆಲವು ದಿನಗಳ ಮಟ್ಟಿಗೆ ನಮ್ಮೂರಿನ ಹುಡುಗಿಯೇ ಆದ, ಸ್ಮಿತಾಳೆಡೆಗೆ ಆಕರ್ಷಣೆ ಮೂಡಿದ್ದು ಸಹಜವೆನಿಸಿದರೂ, ಅದು ಹೆಚ್ಚು ದಿನ ಉಳಿಯಲಿಲ್ಲ. ಮತ್ತೂ ನಾನು ಅವಳಿಗೆ ನನ್ನ ಪ್ರೀತಿಯನ್ನು ವ್ಯಕ್ತಪಡಿಸಲಾಗಲಿಲ್ಲ. ಅದೇ ಸಮಯಕ್ಕೆ ನಾನು ನನ್ನ ಪಿಯುಸಿಯಲ್ಲಿ ಡುಮುಕಿ ಹೊಡೆದಿದ್ದರಿಂದ ಇನ್ನು ಹೆಣ್ಣು ಮಕ್ಕಳೆಡೆಗೆ ಹೋಗಬೇಕಿದ್ದ ಮನಸ್ಸು ಖೋಡೇಸ್ ರಮ್ಮಿನೆಡೆಗೆ ಸೆಳೆಯಿತು. ನಾನೊಬ್ಬ ಅತ್ಯುತ್ತಮ ಕುಡುಕನಾದೆ. ಕುಡಿತದ ದೆಸೆಯಿಂದಲೋ ಅಥವಾ ದೇವರ ಅವಕೃಪೆಯಿಂದಲೋ ಪಿಯುಸಿ ಪಾಸಾಗಿ, ಮೈಸೂರಿಗೆ ಸೇರಿದವನು. ಹಗಲೆಲ್ಲಾ ರೂಮಿನಲ್ಲಿ ಕುಳಿತು ಓದುತ್ತಿದ್ದೆ, ಕಾಲೇಜಿಗೆ ಹೋದ ನೆನಪು ಬಹಳ ಕಡಿಮೆ. ಸಂಜೆಯಾಯಿತೆಂದರೇ ಕುಡಿತದ ಅಮಲಿನಲ್ಲಿ ಕಳೆಯುತ್ತಿದ್ದೆ. ಅದರ ನಡುವೆ ನನಗೆ ಪರಿಚಯವಾಗಿ ಆತ್ಮೀಯರಾದ, ಫಣೀಶ್ ಮತ್ತು ಚಂದನ್ ನಿಂದಾಗಿ ಪುಸ್ತಕದ ಕಡೆಗೆ ಮನಸ್ಸು ಬಾಗಿತು. ಪುಸ್ತಕಗಳ ಕಡೆಗೆ ಮನಸ್ಸು ಅದೆಷ್ಟು ಬದಲಾಯಿತೆಂದರೇ, ಪರಿಕ್ಷಾ ಸಮಯದಲ್ಲಿ ಕೂಡ ನಾನು ಇತರೆ ಪುಸ್ತಕಗಳನ್ನು ಓದುತ್ತಿದ್ದೆ. ಆದರೇ ಎಂದೂ ಸಮಯ ಹರಣಕ್ಕಾಗಿ ನಾನು ಓದಲಿಲ್ಲ, ಯಾವುದೋ ಹಿತಕ್ಕಾಗಿ ಓದತೊಡಗಿದೆ. ಅದರಲ್ಲೊಂದು ಸುಖ ಸಿಗತೊಡಗಿತು, ಈಗಲೂ ಅಷ್ಟೇ ನನಗೆ ಖುಷಿ ಆದರೂ, ದುಃಖವಾದರೂ ನಾನು ಪುಸ್ತಕದ ಮೊರೆಗೆ ಹೋಗುತ್ತೇನೆ.
ನನ್ನ ಬಿಎಸ್ಸಿ ವೇಳೆಯಲ್ಲಿ ನಾನು ಕಾಲೇಜಿಗೆ ಹೋದದ್ದು ಬಹಳ ಕಡಿಮೆ ದಿನವೆಂದರೂ ಸರಿಯೇ, ಕೇವಲ ಪ್ರಾಯೋಗಿಕ ತರಗತಿಗಳಿಗೆ ಮಾತ್ರ ಹೋಗುತ್ತಿದ್ದೆ, ಮಿಕ್ಕ ಸಮಯವೆಲ್ಲಾ, ನಾನು ನನ್ನ ರೂಮಿನಲ್ಲಿ, ಇಲ್ಲದಿದ್ದಲ್ಲಿ, ಸುತ್ತಾಡುವುದರಲ್ಲಿ, ಸಿನೆಮಾ ನೋಡುವುದರಲ್ಲಿ ಕಳೆಯುತ್ತಿದ್ದೆ. ನಾನು ಹಗಲು ಹೊತ್ತಿನಲ್ಲಿ ಕುಡಿದಿರುವುದು ತೀರಾ ಅಪರೂಪ. ಅಂತಹ ಸಮಯದಲ್ಲಿ ನನಗೆ ಒಂದು ಹುಡುಗಿ ಬಹಳ ಇಷ್ಟವಾಗಿದ್ದಳು. ಅವಳು ನನಗಿಂತ ಹಿಂದಿನ ತರಗತಿಯಲ್ಲಿದ್ದು, ನಮ್ಮ ಹಾಸನದ ಲೋಕೇಶ್ ಅವಳಿಗೆ ಸಿನಿಯರ್ ಆಗಿದ್ದ, ಒಂದು ದಿನ ಬರುತ್ತಿರುವಾಗ ಯಾರೋ ಇದು ಹುಡುಗಿ ಚೆನ್ನಾಗಿದ್ದಾಳೆ ಎಂದೆ. ಮುಗಿದೇ ಹೋಯಿತು, ಎರಡೇ ದಿನದಲ್ಲಿ ಅವಳ ಸಂಪೂರ್ಣ ಮಾಹಿತಿ ಅವಳ ಬಗೆಗಿನ ಚರ್ಚೆ ನಮ್ಮ ರೂಮಿನಲ್ಲಿ ನಡೆಯತೊಡಗಿತ್ತು. ಹುಡುಗರು ಅವಳನ್ನು ನೋಡುವುದಕ್ಕಾದರೂ ಬಾ ಕಾಲೇಜಿಗೆ ಎನ್ನುತ್ತಿದ್ದರು. ನಾನು ಕೆಲವು ದಿನ ಅವಳನ್ನು ಕಂಡು ಖುಷಿಪಟ್ಟರೂ ಅದೆಲ್ಲವೂ ಯಾಕೋ ನನಗೆ ಹಿಡಿಸಲಿಲ್ಲ. ಹಿಡಿಸಲಿಲ್ಲವೆನ್ನುವುದಕ್ಕಿಂತ ನಾನು ಕಾಲೇಜಿಗೆ ಹೋಗಿದ್ದ ದಿನಗಳು ಕೇವಲ ಬಂದ್ ಆಗಿದ್ದ ದಿನಗಳು ಅಷ್ಟೇ, ಆ ಹುಡುಗಿ ನನ್ನನ್ನು ನೋಡಿರುವುದು ಬಂದ್ ದಿನಗಳಲ್ಲಿ ಕ್ಲಾಸ್ ನಡೆಯುತ್ತಿರುವ ರೂಮಿಗೆ ಹೋಗಿ ಹುಡುಗರನ್ನು ಹೊರಕ್ಕೆ ಬರಲು ಹೇಳಿ ಕಾಲೇಜಿಗೆ ರಜೆ ಕೊಡಿಸುತಿದ್ದಾಗ ಮಾತ್ರ.ಅಂಥಹ ಅದ್ಬುತಾವಾದ ಪ್ರೋಫೈಲ್ ಇಟ್ಟುಕೊಂಡು ಪ್ರೀತಿ ಬೇಡುವುದಕ್ಕೆ ನನಗೆ ಮನಸ್ಸು ಬರಲಿಲ್ಲ. ಅದಾದ ಮೇಲೆ, ನಂತರ ನನ್ನ ಎಂಎಸ್ಸಿಗೆಂದು ಬೆಂಗಳೂರಿಗೆ ಬಂದ ಮೇಲೆ ನನಗೆ ಸಿಕ್ಕ ಸ್ನೇಹಿತವರ್ಗದಿಂದಾಗಿ ಓದುವ ನನ್ನ ಚಪಲಕ್ಕೆ ಇನ್ನೂ ಪ್ರೋತ್ಸಾಹ ಸಿಕ್ಕಹಾಗಯಿತು. ನಾನು ನನ್ನ ಕಥೆ ಕಾದಂಬರಿ, ಹೀಗೆ ಆಯಿತು ನನ್ನ ಜೀವನ. ಪ್ರೀತಿಸುವಂಥಹ ಹೆಣ್ಣುಮಕ್ಕಳು ನಮ್ಮ ಯುನಿವರ್ಸಿಟಿಯಲ್ಲಿ ಕಣ್ಣಿಗೇ ಕಾಣಲು ಇಲ್ಲ ಎನ್ನುವುದು ಸತ್ಯ. ಅದಾದ ನಂತರ, ಕೆಲಸ, ಬಹಳಷ್ಟು ದಿನದಿಂದ ಕಾದು ಕುಳಿತಿದ್ದ ನನ್ನ ಆಸೆಗಳು ಸಂಪೂರ್ಣ ಗರಿಬಿಚ್ಚಿದವು.
ಐಸೆಕ್ ನಲ್ಲಿ ಕೆಲಸಕ್ಕೆ ಸೇರಿದ ಮೇಲೆ ನನ್ನ ಕಾಲಿಗೆ ಚಕ್ರ ಬಂದವೆಂದರೂ ತಪ್ಪಿಲ್ಲ. ವಾರದ ಕೊನೆ ಸಿಕ್ಕರೇ ಸುತ್ತಾಡಲು ಹೊರಡುವುದು. ರಜೆ ಸಿಕ್ಕರೇ ಸಾಕು ಅಂತರ್ಜಾಲದಲ್ಲಿ ಹುಡುಕಿ ಎಲ್ಲ ಜಾಗವನ್ನು ಸುತ್ತಾಡತೊಡಗಿದೆ. ರಾಜ್ಯದ ಮೂಲೆ ಮೂಲೆಯನ್ನು ಸುತ್ತಾಡುವ, ಸಮಯ ಸಿಕ್ಕರೇ, ಕಥೆ ಕಾದಂಬರಿ, ಬರವಣಿಗೆಯಲ್ಲಿ ಮುಳುಗಿದ್ದ ನನಗೆ ಪ್ರೀತಿ ಆಗಲಿ, ಪ್ರೇಮವಾಗಲೀ ಬೇಕೆನಿಸಲಿಲ್ಲ. ಮದುವೆಯಾಗುವ ಹುಡುಗಿಯೇ ನನ್ನ ಪ್ರೇಯಸಿಯಾಗಿರಲೆಂದು ಬಯಸಿದೆ. ಅದರಂತೆ ಒಂದೆರಡು ಹುಡುಗಿಯರನ್ನು ನೋಡಿದೆ, ಕಾರಣಾಂತರಗಳಿಂದ ಅವು ಮುರಿದುಬಿದ್ದವು. ಅದರಿಂದ ನಾನು ಅಷ್ಟೇನೂ ವಿಚಲಿತನಾಗಲಿಲ್ಲ. ಕಾರಣ ಒಂದು ಹುಡುಗಿ ಅವರ ಮನೆಯವರು ಒಪ್ಪಲಿಲ್ಲ, ಇದು ಪ್ರೀತಿಯ ಪ್ರಸ್ತಾಪವಲ್ಲ, ಮನೆಯವರ ಕಡೆಯಿಂದ ಕೇಳಲು ಹೋದ ಮದುವೆ. ಮತ್ತೊಂದು ಕೂಡ ಹುಡುಗಿಯ ಮನೆಯವರು ಬಂದು ನಮ್ಮನ್ನು ಕೇಳಿದರು, ಹುಡುಗಿಯ ವಯಸ್ಸು ಬಹಳ ಚಿಕ್ಕದ್ದಾದ್ದರಿಂದ ನಾವು ಒಪ್ಪಲಿಲ್ಲ. ಅದು ಬಿಟ್ಟರೇ, ನನ್ನ ಸ್ನೇಹಿತೆಯೊಬ್ಬಳು ಲಿಂಗಾಯತ ಹುಡುಗಿಯೆಡೆಗೆ ನನಗೆ ಆಸೆ ಇತ್ತಾದರೂ, ಅವಳು ಅದನ್ನು ಒಪ್ಪಲಿಲ್ಲ, ಒಪ್ಪಲಿಲ್ಲವೆನ್ನುವುದಕ್ಕಿಂತ ಹೆಚ್ಚಾಗಿ ಆ ವೇಳೆಗೆ ಅವಳಿಗೆ ಮದುವೆ ನಿಶ್ಚಯವಾಗಿತ್ತು. ಆದ್ದರಿಂದ ನಾನು ಇಷ್ಟಪಡುವ ಹುಡುಗಿಯರು ನನಗೆ ಸಿಗುವುದಿಲ್ಲವೆಂದು, ಮದುವೆಯ ಯೋಗವಿದ್ದರೇ ಆಗಲೆಂದು ಸುಮ್ಮನಾಗಿದ್ದೆ. ಆ ಸಮಯದಲ್ಲಿ ನಾನೇನು ದುಃಖದಿಂದಿರಲಿಲ್ಲ. ಕುಡಿಯುವುದು, ಸೇದುವುದು, ವಾರಕ್ಕೊಂದು ಸಿನೆಮಾ, ಸುತ್ತಾಟ, ಓದುವುದು, ಬರೆಯುವುದು, ಸ್ವಲ್ಪ ದಿವಸ ಫೋಟೋಗ್ರಾಫಿ ಎಂದು ಸುತ್ತಾಡಿದೆ ಆದರೇ ಯಾವುದು ಕೈಗೂಡಲಿಲ್ಲ.
ಕೆಲವೇ ದಿನಗಳು ಮಾತ್ರ ನಾನು ದುಃಖಕ್ಕಾಗಿ ಕುಡಿದಿರುವುದು. ನನ್ನ ಇಡೀ ಜೀವನದಲ್ಲಿ ಎರಡು ಬಾರಿ ನಾನು ಅಧಿಕವಾಗಿ ಕುಡಿದು ನನ್ನ ಬಗೆಗೆ ನನಗೆ ಅಸಹ್ಯವಾಗಿದ್ದು. ಒಂದು ನನ್ನ ಪಿಯುಸಿಯಲ್ಲಿ ಶಿವರಾತ್ರಿ ರಾತ್ರಿಯಂದು ಅಂದಿನಿಂದ ಇಂದಿನ ತನಕ, ಹತ್ತು ವರ್ಷದಲ್ಲಿ ಒಂದೇ ಒಂದು ಶಿವರಾತ್ರಿಯಂದು ಕುಡಿಯಲಿಲ್ಲ. ಮೊನ್ನೆ ಮೊನ್ನೆ ನಿನಗಾಗಿ ಕುಡಿದೆ. ಆದರೂ ಕುಡಿದ ಮೇಲೆ ಬಹಳ ದುಃಖ, ಬೇಸರವಾಯಿತು. ಕುಡಿಯುವುದು ನನಗೆ ಮಾಮೂಲಿಯಾದರೂ ಕುಡಿಯುವುದಕ್ಕೆ ಕಾರಣ ನೀನಾಗಿದ್ದೆ, ನನ್ನ ಮೋಜಿಗೆ ಕುಡಿದು ಅದರ ಹೊರೆಯನ್ನು ಹೊಣೆಗಾರಿಕೆಯನ್ನು ನಿನ್ನ ಮೇಲಕ್ಕೆ ಹಾಕಿದ್ದು ನನ್ನಗೆ ಅನಾಗರಿಕತೆಯೆನಿಸಿತು. ನನ್ನಿಂದ ನನ್ನ ನಡುವಳಿಕೆಯಿಂದ ನಿನಗೆ ಯಾವುದೇ ರೀತಿಯ ಮುಜುಗರವೆನಿಸಬಾರದು. ಇಷ್ಟಕ್ಕೂ ನಾವು ಪ್ರೀತಿಸುವ ಜೀವಕ್ಕೆ ಕೊಡುವುದೇನು? ಇರುವಷ್ಟು ದಿನಗಳ ನಗು, ಎಲ್ಲದಕ್ಕೂ ನನ್ನ ಜೀವದ ಗೆಳೆಯನಿದ್ದಾನೆಂಬ ಭರವಸೆ, ವಿಶ್ವಾಸ. ಅದನ್ನು ನೀಡುವುದೇ ನನ್ನ ಪ್ರೀತಿಯ ಧ್ಯೇಯವಾಗಿರುವಾಗ, ನಾನು ಕುಡಿದು ನಿನ್ನನ್ನು ನೋಯಿಸುವುದು, ನನ್ನ ಸಣ್ಣ ಪುಟ್ಟ ಮಾತುಗಳಿಂದ ನಿನಗೆ ಮುಜುಗರವೆನಿಸುವುದು, ನನ್ನ ಸಣ್ಣ ಸಣ್ಣ ಕೋಪ ನಿನಗೆ ಬೇಸರ ತರುವುದು, ಇವೆಲ್ಲವೂ ಸಣ್ಣವೇ ಆದರೂ ಅದು ನಿರಂತರವಾದರೇ, ಎಲ್ಲಿಂದ ಎಲ್ಲಿಗೆ ಬಂದರೂ ನೆಮ್ಮದಿಯಿಲ್ಲದ ಬದುಕು ನನ್ನದೆನಿಸುವುದಿಲ್ಲವೇ ನಿನಗೆ. ನಾವು ನಮಗಾಗಿ ಬದುಕುವುದರಲ್ಲಿರುವ ಸಂತೋಷಕ್ಕಿಂದ ನಮ್ಮನ್ನು ಪ್ರೀತಿಸುವವರ ಅಥವಾ ಪ್ರೀತಿಸುವ ಮನಸ್ಸಿನವರಿಗಾಗಿ ಬದುಕಿ ನಿರಂತರ ಅವರಿಗಾಗಿ ಹಾರೈಸುವಲ್ಲಿರುವ ಖುಷಿಯೇ ಬೇರೆ. ಇಂಥಹುದೆಲ್ಲವೂ ಕಥೆಯಲ್ಲಿ ಕಾದಂಬರಿಯಲ್ಲಿ ಕಾಣುವುದಕ್ಕೇ ಮಾತ್ರ ಸರಿ ಎಂದು ಓದುವ ಪ್ರತಿಯೊಬ್ಬರೂ ಹೇಳಬಹುದು. ಜೀವನ ಪ್ರತಿಯೊಬ್ಬನಿಗೂ ವ್ಯಕ್ತಿಗತ ವಸ್ತು, ಇದು ಕೇವಲ ನನ್ನ ಜೀವನ ಅಲ್ಲಿನ ಪ್ರತಿಯೊಂದು ಕನಸು ಕೂಡ ನಾನು ಕಾಣುವ ಕಣ್ಣು ಮತ್ತು ಮನಸ್ಸಿಗೆ ಸೇರಿದ್ದು. ನನ್ನ ಕನಸೊಳಗೆ ಕೋಟಿ ಕೊಟ್ಟರೂ ನಿನ್ನನ್ನು ಬಿಟ್ಟು ಮತ್ತಾರೂ ಬರಲಾರರು. ಆದರೇ ನೀನೇ ನೀನಾಗೇ ನನ್ನಿಂದ ನನ್ನ ಕನಸಿನಿಂದ ದೂರಾಗಬೇಕೆಂದರೇ, ಬಹಳಷ್ಟು ಸಾರಿ ಎನಿಸುವಂತೇ, ಒಂದು ಮೊಬೈಲ್, ಒಂದು ಇಂಟರ್ನೆಟ್ ಚಾಟಿಂಗ್ ನಮ್ಮ ಪ್ರೀತಿಯ ಮೇಲೆ ಹಿಡಿತ ಸಾಗಿಸುತ್ತಾ? ನಿನ್ನ ನಂಬರ್ ಬದಲಾದರೇ ನೀನು ನನ್ನಿಂದ ದೂರಾದ ಹಾಗೇಯೇ? ಹೌದಾ, ನೀನು
ಭೌತಿಕವಾಗಿ, ದೈಹಿಕವಾಗಿ ದೂರಾಗಬಹುದೇ ಹೊರತು ನಿನ್ನಯ ಮೇಲಿನ ಪ್ರೀತಿ ಮರೆಯಾಗಲು ಸಾಧ್ಯವೇ? ಒಮ್ಮೊಮ್ಮೆ ನಮಗೆ ಎನಿಸಲೂ ಬಹುದು, ಪ್ರೀತಿಯ ಆಳವನ್ನು ಪರೀಕ್ಷಿಸಲೂ, ಆಳವನ್ನು ಅಳೆಯಲು ಸಾಧ್ಯವೇ? ಪ್ರೀತಿ ಆಂತರಿಕವಾಗಿ ಸವಿಯಬೇಕು, ಅನುಭವಿಸಬೇಕು. ಪ್ರೀತಿಯೆಂಬುದರ ಬಗೆಗೆ ಪ್ರತಿಯೊಬ್ಬನೂ ಒಂದೊಂದು ಬಗೆಯಾಗಿ ವ್ಯಕ್ತಪಡಿಸುತ್ತಾನೆ. ಪ್ರೀತಿ ಹೀಗೆ ಇರಬೇಕೆಂಬುದು ಸರಿ ಇಲ್ಲವಾದರೂ ಅದು ಪ್ರೀತಿಸುವ ಮನಸ್ಸಿಗೆ ನೋವುಂಟುಮಾಡಬಾರದು, ಸ್ವಾರ್ಥಕ್ಕೆ ಪ್ರೀತಿ ಬಲಿಯಾಗಬಾರದು.
ನಾನು ನಿನ್ನನ್ನು ಅತಿಯಾಗಿ ಪ್ರೀತಿಸುತ್ತೇನೆಂಬುದಕ್ಕೆ ಅನುಮಾನವಿಲ್ಲ.ಇದಕ್ಕೆ ಕಾರಣಗಳು? ಸದಾ ಕಾರಣವೇ ಇರುವುದಿಲ್ಲ. ಕೆಲವೊಂದು ವ್ಯಕ್ತಿಗಳು ಮಾತ್ರ ಅವರೊಂದಿಗೆ ಇರುವಾಗ ಒಂದು ಬಗೆಯ ನೆಮ್ಮದಿ ಸಿಗುತ್ತದೆ. ಅದು ನಿನ್ನೊಂದಿಗೆ ನನಗಿರುವುದು ಎನ್ನಬಹುದು.ನಾನು ನೀನು ಕಳೆದಿರುವ ಸಮಯವೆಲ್ಲಾ ಫೋನಿನಲ್ಲೇ ಎನ್ನಬೇಕು. ಅಥವಾ ಚಾಟಿನಲ್ಲಿರಬಹುದು. ನೀನೇ ಹೇಳುವ ಹಾಗೆ ನೀನು ಎಲ್ಲರೊಂದಿಗೂ ಹೀಗೆ ಮಾತನಾಡುತ್ತೀಯಾ? ಇಷ್ಟೊತ್ತು ಚಾಟ್ ಮಾಡುತ್ತೀಯಾ? ಇಷ್ಟೊತ್ತು ಫೋನಿನಲ್ಲಿ ಮಾತನಾಡುತ್ತೀಯಾ? ನಾನು ಫೋನಿನಲ್ಲಿ ಅತಿ ಹೆಚ್ಚು ಮಾತನಾಡತೊಡಗಿದ್ದು ನಿನ್ನೊಂದಿಗೆ ಸೇರಿದ ಮೇಲೆ ಎನಿಸುತ್ತದೆ. ನಾನು ಹೆಚ್ಚು ಮಾತನಾಡಿದರೂ, ಫೋನಿನಲ್ಲಿ ಆಗಲೀ, ಚಾಟಿನಲ್ಲಿಯೇ ಆಗಲಿ ಅಷ್ಟೊಂದು ಮಾತನಾಡುವುದಿಲ್ಲ. ನನ್ನ ಇಡೀ ಸಮಯ ಒಂದೋ ಬರವಣಿಗೆಗೆ ಇಲ್ಲವೇ ನಿದ್ದೆಗೆ ಮೀಸಲಿರುತ್ತದೆ. ನಾನು ಬೇರೆಯವರ ಪ್ರತಿಯೊಂದು ವಿಷಯಕ್ಕೆ ಸ್ಪಂದಿಸುವಂತೆಯೇ ನಿನಗೂ ಸ್ಪಂದಿಸಿದೆ. ಅದರಲ್ಲಿ ವಿಶೇಷತೆ ಏನೂ ಇರಲಿಲ್ಲ. ಆದರೇ ಬರಬರುತ್ತಾ ನಾನು ಸ್ವಲ್ಪ ಟ್ರ‍ಾಕ್ ಬದಲಾಯಿಸಿದೆ. ನಿನ್ನ ಪ್ರೀತಿಗೆ ಭಿಕ್ಷುಕನಾದೆ.ನಿನ್ನನ್ನು ನಾನು ಕಣ್ಣಾರೆ ಕಂಡ ದಿನವಂತೂ ನಾನು ನನ್ನನ್ನೇ ಮರೆತು ಹೋದೆ. ಇದು ಕೇವಲ ನಿನ್ನ ಚೆಲುವಿಗಾಗಿ ಅಲ್ಲ, ನಿನ್ನಲ್ಲಿರುವ ಪದಗಳೇ ಸಿಗದ ಸೌಂದರ್ಯ ಸಿರಿಗೆ. ಬಣ್ಣಿಸ ಹೊರಟಾಗ ನಾನು ನಿನ್ನನ್ನು ಅದೆಷ್ಟು ಬಣ್ಣಿಸಲಿ ಎನಿಸುತ್ತದೆ. ನಾನು ಪದೇ ಪದೇ ಅದನ್ನೇ ಹೇಳುತ್ತಾ ಹೋದರೇ ನಿನಗೆ ಮುಜುಗರವೆನಿಸಬಹುದು ಅಥವಾ ಇದು ಇವನ ಮಾಮೂಲಿ ಎನಿಸಲುಬಹುದು.ನಾನು ನಿನಗೆ ನಿನ್ನಯ ಬಗೆಗೆ ಎಷ್ಟೇಷ್ಟೋ ಕಾದಂಬರಿ, ಕಥೆಗಳನ್ನು ಬರೆಯಲಿಚ್ಚಿಸುತ್ತೇನೆ. ಆದರೇ ಎಲ್ಲಿಯೂ ಒಂದು ಮಿತಿಮೀರಿ ಬರೆಯಬಾರದಲ್ಲವೇ? ನಿನ್ನ ಸೌಂದರ್ಯದ ಮೌಲ್ಯ ನನಗೆ ತಿಳಿದಿದೆ. ಅದನ್ನೆಲ್ಲಾ ಇಲ್ಲಿ ಬರೆಯಲೇ? ಬರೆದರೂ ತಪ್ಪಿಲ್ಲ, ಬರೆಯದೇ ಇದ್ದರು ತಪ್ಪಿಲ್ಲ ಏಕೆಂದರೇ ನಾನು ನಿನಗೆ ಹಲವಾರು ಸರಿ ವಿವರಿಸಿದ್ದೇನೆ, ಬಣ್ಣಿಸಿದ್ದೇನೆ, ಹೊಗಳಿದ್ದೇನೆ, ಕೆಲವೊಮ್ಮೆ ಬೈಯ್ದಿದ್ದೇನೆ. ಬೈದಿರುವುದು ನಿನ್ನ ದೇಹದ ತೂಕದ ವಿಷಯ ಬಂದಾಗ ಮಾತ್ರ. ನಿನ್ನನ್ನು ನಾನು ನಿನ್ನ ನೈಸರ್ಗಿಕ ಸೌಂದರ್ಯದಿಂದ ನೋಡಲು ಬಯಸುತ್ತೇನೆ. ನಿನ್ನ ಸೌಂದರ್ಯಕ್ಕೆ ಯಾವುದೇ, ಅಲಂಕಾರತೆ ಅವಶ್ಯಕತೆಯಿಲ್ಲ. ಹಾಗೆಂದೂ ನೀನು ಬ್ಯೂಟಿ ಪಾರ್ಲರ್ ಗೆ ಹೋಗುವುದು ಬೇಡವೆಂದಲ್ಲ. ಮೂಲಭೂತವಾದ ಸೌಂದರ್ಯ ಪ್ರಜ್ನೆ ಇರಲೇಬೇಕು. ಕಣ್ಣಿನ ಉಬ್ಬು ತೆಗೆಸುವುದು ಬೇಡವೆಂದರೇ, ಕಾಡಿನ ರಾಣಿಯರಂತಾಗುವುದಿಲ್ಲವೇ ಹೆಣ್ಣು ಮಕ್ಕಳು. ಹಾಗೆಂದು, ಅತಿಯಾದ ಮೇಕ್ ಓವರ್ ಬೇಕೇ? ಅದು ಅವಶ್ಯಕತೆಯಿಲ್ಲ.
ತಲೆ ಕೂದಲು ಈಗ ಇರುವುದೇ ಚೆನ್ನಾಗಿರುವಾಗ, ಅದನ್ನು ಉದ್ದ ತುಂಡ ಮಾಡಲೆತ್ನಿಸುವುದು ಬೇಡ. ನಿನ್ನ ಬಣ್ಣಕ್ಕೆ ಮೆಚ್ಚುವಂತೆ ಕೂದಲಿನ ಬಣ್ಣವನ್ನು ಹಾಕಿಸಿಕೊಂಡರೂ ತಪ್ಪಿಲ್ಲ ಆದರೇ ಇರುವುದೇ ಚೆನಾಗಿರುವಾಗ ಅದೆಲ್ಲವೂ ಏಕೆ? ಹುಡುಗಿಯರ ಸೌಂದರ್ಯದ ಬಗೆಗೆ ಯಾರದರೂ ತಲೆ ಹಾಕಿದರೇ ಕೋಪ ಬರುತ್ತದೆ. ಆದರೂ ಅಲ್ಲಿರುವ ಆಕರ್ಷಣೆಯನ್ನು ನಾವು ಮೆಚ್ಚಿ ಅದನ್ನು ಹೇಳಬೇಕು ಅದು ನಮ್ಮ ಅಭಿರುಚಿಯಲ್ಲವೇ?ನಿನ್ನ ಕಣ್ಣುಗಳು, ಅಲ್ಲಿರುವ ಸೆಳೆತ, ಕಣ್ಣು ಉಬ್ಬಿನ ಎಳೆಗಳು, ಅದಕ್ಕೆ ತಕ್ಕಂತಿರುವ, ನಿನ್ನಯ ಸುಂದರ ಹಣೆ, ಮುಖಕ್ಕೆ ಮೆರಗು ತರುವ ಕೆನ್ನೆ, ಮುತ್ತಿಕ್ಕಬೇಕೆನ್ನುವ ಗದ್ದ, ಚೆಲುವಿಗೆ ಚೆಲುವೇ ನಾಚುವಂತಹ ನಿನ್ನಯ ತುಟಿಗಳು, ತುಟಿಗಳಲ್ಲಿ ಒಂದಕ್ಕೊಂದು ಪೈಪೋಟಿ. ನನಗೂ ಎನಿಸುವುದು ಹಾಗೇಯೇ, ನಿನ್ನ ಎರಡು ತುಟಿಗಳಲ್ಲಿ ಅತಿ ಹೆಚ್ಚು ಸುಂದರವಾಗಿರುವುದು ಯಾವುದು. ಎರಡು ತುಟಿಗಳು ಒಂದಕ್ಕೊಂದು ಮಧುರವಾಗಿದೆಯಲವೇ? ಬಲು ಅಪರೂಪದ ನಿನ್ನಯ ಕುತ್ತಿಗೆಯಂತೂ ನಾನು ಅದೆಷ್ಟೂ ಭಾರಿ ಬಳಸಿ ಬಳಸಿ ಮುತ್ತಿಕ್ಕುವ ಹಿಂದೆಯಿಂದ ಬರದಪ್ಪಿ ಸೆಳೆಯುವಾಸೆಯೂ ಮೂಡುತ್ತದೆ. ಇದೆಲ್ಲವೂ ಬಹಿರಂಗವಾಗಿ ಹೇಳುವುದಲ್ಲ, ಆದರೂ ಭಾವನೆಗಳನ್ನು ತಡೆಯುವುದು ಸರಿಯಿಲ್ಲ. ನಿನ್ನಯ ಉದ್ದನೆಯ ಕೈಗಳು, ಮಿಂಚಿನಂತಹ ಕೈಬೆರಳುಗಳು ನನ್ನನ್ನು ನನ್ನ ಕಣ್ಣನ್ನು ಆಗ್ಗಾಗ್ಗೆ ಕುಕ್ಕುತ್ತಿರುತ್ತವೆ. ಉದ್ದನೆಯ ಕೈಗಳು ಬುದ್ದಿವಂತಿಕೆಯ ಲಕ್ಷಣವಂತೆ, ನೀನು ಬಹಳ ಬುದ್ದಿವಂತೆ ಅದರಲ್ಲಿ ಅನುಮಾನವಿಲ್ಲ. ಅದರಂತೆಯೇ ಉದ್ದನೆಯ ಬೆರಳುಗಳು ಒಳ್ಳೆಯತನದ ಉದಾರತನದ ಸಂಕೇತ. ನಿನ್ನಲ್ಲಿರುವ ಒಳ್ಳೆಯತನಕ್ಕೆ, ಪರರಿಗೆ ಸ್ಪಂದಿಸುವ ಮನಸ್ಸಿಗೆ ಇದು ಸಾಕ್ಷಿ. ನಿನ್ನಯ ಕಾಲ್ಬೆರಳುಗಳು ಅಷ್ಟೇ, ಅವು ನನ್ನ ಕಂಗಳನ್ನು ಆಗ್ಗಾಗ್ಗೆ ಸೆಳೆಯುತ್ತಲೇ ಇರುತ್ತದೆ. ನಿನ್ನಯ ಸೌಂದರ್ಯದ ಸೆಳೆತ ಹೇಗಿದೆಯೆಂದರೇ, ನಾನು ಅತಿ ಹೆಚ್ಚು ಇಷ್ಟ ಪಡುವ, ಮಳೆಯ ಸಂಜೆಗಳು,ನದಿ ದಂಡೆಯ ಬದಿಯಲ್ಲಿನ ಸಂಜೆ, ಕಡಲ ತೀರದಲ್ಲಿನ ಸಣ್ಣ ನಡೆ, ರಾತ್ರಿಯ ಒಂದು ಲಾಂಗ್ ರೈಡ್, ಅತಿ ಎತ್ತರ ಮೇಲೆ ಕುಳಿತು ಕಳೆಯುವ ಚಳಿಯ ಒಂದು ದಿನ ಇವೆಲ್ಲವೂ ನಿನ್ನಯ ಮೂರು ಪದಗಳಿಗೆ ಸಮನಾಗುವುದಿಲ್ಲ. ನಿನ್ನ ಬಾಯಿಂದ ಬರುವ, ಐ ಲವ್ ಯೂ ಎಂಬ ಪದಗಳು ನನ್ನ ಸಂತೋಷವನ್ನು ನೂರು ಪಟ್ಟು ಹೆಚ್ಚಿಸುತ್ತವೆ. ಇದಕ್ಕಿಂದ ಖುಷಿ ಮತ್ತೊದಿದೆಯೇ? ಸದ್ಯಕ್ಕೆ ಇಷ್ಟು ಸಾಕಲ್ಲವೇ?

14 ಸೆಪ್ಟೆಂಬರ್ 2010

ಮೋಜಿನ ಬಲೆಯಲ್ಲಿ ಉಢಾಫೆತನವೇ ಅಧಿಪತಿ!!!!

ನಾನು ಮೊದಲೇ ಹೇಳಿದ ಹಾಗೆ, ನಾನು ಸ್ವಲ್ಪ ತಲೆಕೆಟ್ಟವನು, ನನ್ನ ಸ್ನೇಹಿತರು ನನಗಿಂತ ಹುಚ್ಚರು. ನಮ್ಮೆಲ್ಲರಲ್ಲಿ ಒಂದೇ ಮನಸ್ಸಿರುವುದು, ಓಲ್ಡ್ ಮಂಕ್ ಕುಡಿಯುವುದರಲ್ಲಿ, ಗಾಡಿ ಓಡಿಸುವುದರಲ್ಲಿ, ಸಿಕ್ಕ ಸಿಕ್ಕ ಹಾಗೆ ಸುತ್ತಾಡುವುದರಲ್ಲಿ. ನಾನೊಬ್ಬನು ಮಾತ್ರ ಸೋಮಾರಿ, ಮೈಗಳ್ಳ. ಮಿಕ್ಕಿದವರು ಕೆಲಸದ ವಿಷಯ ಬಂದಾಗ ನಿಪುಣರು ಮತ್ತು ಶ್ರಮಜೀವಿಗಳು. ಅದಕ್ಕೆ ಅವರೆಲ್ಲರೂ ಉದ್ದಾರವಾಗಿದ್ದಾರೆ. ನಾನು ಉದ್ದಾರವೂ ಇಲ್ಲ ಉದ್ದವೂ ಇಲ್ಲ ಇದ್ದ ಹಾಗೇ ಇದ್ದೇನೆ. ಬಹಳ ದಿನವಾಗಿದೆ, ಟ್ರೆಕಿಂಗ್ ಹೋಗುವುದಕ್ಕೆ ಈಗ ಮಳೆಗಾಲ, ನಾವೊಂದು ಲಾಂಗ್ ರೈಡ್ ಹೋದರೇ ಹೇಗೆಂದು ನಮ್ಮ ತಂಡದ ಏಕ ಮಾತ್ರ ನಾಯಕ ನಂದ ಹೇಳಿದ. ಅದಕ್ಕೆ ನಮ್ಮ ತಂಡದ ಪ್ರಧಾನ ಕಾರ್ಯದರ್ಶಿಯಾದ ವಿಜಿ ಒಡನೇಯೇ ಒಪ್ಪಿಗೆ ನೀಡಿದ. ಮುಂದಿನವಾರ ಹೊರಡುವುದೆಂದು ಎರಡೇ ನಿಮಿಷದಲ್ಲಿ ತೀರ್ಮಾನವಾಯಿತು. ಎಲ್ಲಿಗೆ ಎಂದು ಪ್ರಶ್ನೆ ಬಂದಾಗ ಕರ್ನಾಟಕ ತಮಿಳುನಾಡು ಎಲ್ಲಾ ರಾಜ್ಯದ ಭೂಪಟ ನೋಡಿ, ಕಡೆಗೆ ಸೋಮವಾರಪೇಟೆ ಸುತ್ತಾ ಮುತ್ತಾ ಎಂದರೇ ಪುಷ್ಪಗಿರಿ ಸುತ್ತಲಿನ ಜಲಪಾತಗಳನ್ನು ನೋಡುವುದೆಂದು ಆಯಿತು. ಕಡೆ ಕ್ಷಣದ ಬದಲಾವಣೆಯಲ್ಲಿ ವಿಜಿ ಊರಿಗೆ ಹೋಗಿ, ನಾನು ಮೈಸೂರಿನಿಂದ ಊರಿಗೆ ಬರುವುದಾಗಿ ಹೇಳಿದ್ದರಿಂದ, ನಂದ ಒಬ್ಬನೇ ಊರಿನ ತನಕ ಬರುವಂತೆ ಆಯಿತು. ಒಬ್ಬನೇ ನಂದ ಬರುವುದು ಕನಸಿನಲ್ಲಿಯೂ ಇಲ್ಲ, ಅವನು ಯಾವುದಾದರೂ ಒಂದು ಮಿಕವನ್ನು ಹುಡುಕಿ ಬರುತ್ತಾನೆಂಬುದು ನಮಗೆ ತಿಳಿದಿರುವ ವಿಷಯ. ಈ ಪ್ರವಾಸದ ಮಿಕ ನಮ್ಮ ಕುಮಾರ್. ರಾತ್ರಿ ಹತ್ತು ಗಂಟೆಗೆ ಕುಮಾರನನ್ನು ಕರೆದುಕೊಂಡು ಹೊರಟ ನಂದ ರಾತ್ರಿಯಿಡಿ ಗಾಡಿ ಓಡಿಸಿಕೊಂಡು ಎರಡು ಗಂಟೆಯ ವೇಳೆಗೆ ವಿಜಿ ಊರಿಗೆ ಬಂದ. ಅಲ್ಲಿಂದ ರಾಜು, ವಿಜಿ, ಕುಮಾರ್ ಮತ್ತು ನಂದ ಕೂಡಿಗೆಗೆ ಬಂದರು. ನಾನು ರಾತ್ರಿ ಊರಿಗೆ ಹೋಗಲು ಬಸ್ ಸಿಗದೇ ಮಂಜೇಶನ ಮನೆಯಲ್ಲಿ ಉಳಿದಿದ್ದೆ. ಮುಂಜಾನೆ ನಾಲ್ಕು ಗಂಟೆಗೆ ಫೋನ್ ಮಾಡಿ ಇನ್ನು ಹತ್ತು ನಿಮಿಷದಲ್ಲಿ ಅಲ್ಲಿರುವುದಾಗಿ ಹೇಳಿದರು. ನಾನು ಆ ಸಮಯದಲ್ಲಿ ಎದ್ದು ತಯಾರಾಗಿ, ಮಂಜೇಶನ ಬೈಕ್ ತೆಗೆದುಕೊಂಡು ಮುಖ್ಯರಸ್ತೆಗೆ ಬಂದೆ. ಬಂದು ಹತ್ತು ನಿಮಿಷ ಕಳೆಯುವ ಹೊತ್ತಿಗೆ ಆ ಊರಿನ ನಾಯಿಗಳೆಲ್ಲಾ ನನ್ನ ವಿರುದ್ದ ಯುದ್ದ ಸಾರಿದವು.
ಪ್ರಾಂತೀಯ ಕಲಹ ಬೇಡ, ನಾನು ಹೊರಗಿನವನು ಅವರ ಊರಿನ ವಿಷಯಕ್ಕೆ ತಲೆ ಹಾಕುವುದು ಸರಿಯಿಲ್ಲವೆಂದು ನಾಯಿಗಳಿಗೆ ಶರಣಾಗದೇ ಗಾಡಿ ಮುನ್ನೆಡೆಸಿದೆ. ಗಾಡಿ ತೆಗೆಯುವಾಗಲೇ ಮಳೆ ಉದುರುತ್ತಿತ್ತು. ಅಲ್ಲಿಂದ ಇಪ್ಪತ್ತು ಕೀಮೀ ಸೋಮವಾರಪೇಟೆ ತಲುಪಿ ಕಾಫಿ ಕುಡಿಯುವಷ್ಟರಲ್ಲಿ ಬೆಳಗಾಯಿತು. ಕಾಫಿ ಕುಡಿದ ಮರುಕ್ಷಣವೇ, ಮಳೆ ಸುರಿಯಲಾರಂಬಿಸಿತು. ಜಲಪಾತ ಪ್ರವಾಸ ಅಥವಾ ವಾಟರ್ ಫಾಲ್ಸ್ ಟೂರಿಸಂ ಎಂದು ಹೆಸರಿಟ್ಟಿದ್ದರಿಂದ ಮಳೆಯಲ್ಲಿ ನೆನೆಯುವುದು ಅನಿವಾರ್ಯವಾಯಿತು. ಇದ್ದ ಐವರಲ್ಲಿ ಮೂವರು ಶುದ್ದ ದಂಡಪಿಂಡಗಳು ಎಲ್ಲಿ ಹೇಗೆ ಬೇಕಿದ್ದರೂ ಸರಿ ಎನ್ನುವ ಮನಸ್ಸಿನವರಿದ್ದರೂ, ರಾಜು ಮತ್ತು ಕುಮಾರನಿಗೆ ಇದು ಹೊಸದು. ನಂದನ ತಲೆಹರಟೆಯಿಂದಾಗಿ ಅವರು ಅನುಭವಿಸಲೇ ಬೇಕಾದ ಪರಿಸ್ಥಿತಿ ಬೇರೆ ಇತ್ತು. ನಾವು ಮಳೆಯಲ್ಲಿಯೇ ಹೋಗುವುದಾಗಿ ನಿರ್ಧರಿಸಿ ಹೋಗುವಾಗ ನಿಜಕ್ಕೂ ಆನಂದಮಯ ವಾತವರಣವಿತ್ತು. ಅಲ್ಲಿಂದ ೨೦ಕೀಮೀ ದೂರ ಕ್ರಮಿಸಿ ಭಟ್ಟರ ಮನೆಯಿಂದ ಬಲ ತಿರುಗಿ ಹೊರಟರೆ ಮುಂದಿನ ಆರು ಕೀಮೀ ಒಳಗೆ ಸಿಗುವುದೇ, ಮಳ್ಳಳ್ಳಿ ಜಲಪಾತ. ನಾವು ಬೈಕ್ ಗಳನ್ನು ನಿಲ್ಲಿಸಿ ಸ್ವಲ್ಪ್ ದೂರ ನಡೆದು ಹೋಗುವಾಗ ದೂರದಿಂದಲೇ ಅದ್ಬುತವಾದ ಜಲಪಾತ ನಮ್ಮ ಕಣ್ಮುಂದೆ ಧುಮ್ಮಿಕ್ಕುತ್ತಿತ್ತು. ನಿಜಕ್ಕೂ ನಾವೆಲ್ಲರೂ ಅಂದು ಬೆಳ್ಳಿಗ್ಗೆ ಹಿಂದಿನ ರಾತ್ರಿಯ ನೋವುಗಳನ್ನೆಲ್ಲಾ ಮರೆತೆವು. ಸ್ವಲ್ಪವೂ ಕಲುಷಿತಗೊಳ್ಳದೇ ಪ್ರವಾಸಿಗಳಿಂದ ಮಲೀನಗೊಳ್ಳದೇ ಸರಳ ಸುಂದರವಾಗಿ ನಿಸರ್ಗದ ಮಡಿಲಲ್ಲಿ ಧುಮ್ಮಿಕ್ಕುತ್ತಿದ್ದ ಜಲಪಾತ. ಹಾಲಿನಂತೆಯೇ ಕಾಣುತ್ತಿತ್ತು. ನಾವು ಅಲ್ಲಿನ ನೀರಿನ ಬಗೆಗೆ, ನಿಸರ್ಗದ ಬಗೆಗೆ ನೂರಾರು ಚರ್ಚೆಗಳನ್ನು ಮಾಡಿ ನಾವೇ ಇದೆಲ್ಲವನ್ನು ಉಳಿಸಲು ಬೆಳೆಸಲು ಜನ್ಮವೆತ್ತಿದ ವೀರರಂತೆ ಮಾತನಾಡಿ ಕೊನೆ ಜೇಬಿನಲ್ಲಿದ ಸಿಗರೇಟು ಹಚ್ಚಿಸಿದೆವು.ಜಲಪಾತದ ಅಡಿಯಲ್ಲಿ ಸುಮಾರು ಇನ್ನೂರು ಅಡಿಗಳಷ್ಟು ದೂರ ನಿಂತರೂ ನೀರಿನ ತುಂತುರು ನಮಗೆ ಎರಚಲು ಬೀಳುತ್ತಲೇ ಇತ್ತು. ಇಂಥಹ ಮಧುರ ಕ್ಷಣಗಳು ಕ್ಷಣಿಕವಾದರೂ ಆ ಕ್ಷಣದಲ್ಲಿ ನಮ್ಮನ್ನು ಅವು ಬಲು ದೂರ ಕರೆದೊಯ್ಯುತ್ತವೆ. ಸ್ವರ್ಗವೆಂಬುದರ ಕಲ್ಪನೆಯಿಲ್ಲದಿದ್ದರೂ ಇವೆಲ್ಲವೂ ಸ್ವರ್ಗದ ಪ್ರತಿರೂಪವೆನಿಸುತ್ತದೆ. ನಾವು ಕಳೆಯುವ ಒಂದೊಂದು ಕ್ಷಣವೂ, ಕಳೆದ ನಂತರವೂ ನಮ್ಮೊಳಗೆ ಆ ಕ್ಷಣಗಳು ಸುಮಧುರವೆನಿಸುತ್ತಿರುತ್ತವೆ. ಜಲಪಾತಗಳೆಲ್ಲವೂ ನೀರು ಧುಮುಕುತ್ತಿದ್ದರೂ, ಎಲ್ಲಾ ಜಲಪಾತಗಳು ನಮಗೆ ಒಂದೇ ರೀತಿಯ ಅನುಭವ ನೀಡುವುದಿಲ್ಲ. ಸನ್ನಿವೇಶಗಳು ಮತ್ತು ನಾವು ಹೋಗುವ ಕಾಲ ಬಹಳ ಪ್ರಮುಖವಾಗುತ್ತವೆ. ಮಳೆಗಾಲದಲ್ಲಿ ಯಾವುದೇ ಜಲಪಾತವೂ ಹೆಚ್ಚು ಸುಂದರವಾಗಿರುತ್ತವೆ. ಅದರಲ್ಲಿಯು ಜನಸಂದಣಿ ಇಲ್ಲದ ಸ್ಥಳಗಳಿಗೆ ನೀವು ಭೇಟಿ ನೀಡಿದ್ದೇ ಆದರೇ ಅದು ಕೊಡುವ ಖುಷಿಯೇ ಬೇರೆ ಇರುತ್ತದೆ. ನಾವು ಮಳ್ಳಳ್ಳಿಗೆ ಹೋದಾಗಲೂ ಅಷ್ಟೇ, ಅಲ್ಲಿ ಜನರೇ ಇಲ್ಲದೇ ಇದ್ದುದ್ದರಿಂದ ಇಡೀ ಜಲಪಾತವೇ ನಮ್ಮದೆನ್ನುವ ಭಾವನೆ ಮೂಡುತ್ತಿತ್ತು. ಇದು ನಮ್ಮನ್ನು ಮನಸಾರೆ ಆನಂದಿಸಲು ಉತ್ತೇಜಿಸಿತ್ತು. ಅಲ್ಲಿ ಸಲ್ಪ ಸಮಯ ಕಳೆದು ಮತ್ತೇ ಮೇಲಕ್ಕೆ ಬಂದೆವು. ಬೆಂಗಳೂರಿನಿಂದ ಅಲ್ಲಿಗೆ ಬಂದ ಒಂದು ಗುಂಪು ರಾತ್ರಿ ಇಡೀ ಅಲ್ಲಿಯೇ ಕುಡಿದು ಮಲಗಿದ್ದರು. ಹೊರ ಊರಿಗೆ ಅದು ಅರಿವಿಲ್ಲದ ಊರಿಗೆ ಮೊದಲ ಬಾರಿಗೆ ಹೋದಾಗ ಹೀಗೆ ಕುಡಿದು ಮಲಗುವುದರಿಂದಾಗುವ ಪರಿಣಾಮ ಅವರಿಗೆ ತಿಳಿದಿರಲಿಲ್ಲ. ಆ ಸ್ಥಳಕ್ಕೆ ರಾತ್ರಿ ಒಂದೇ ಒಂದು ಆನೆ ಬಂದಿದ್ದರೂ ಅವರ ಗತಿ ಹೇಗಿರುತ್ತಿತ್ತು?ಅಲ್ಲಿಯ ತನಕ ಪ್ರವಾಸ ಬಂದಿದ್ದ ಅವರುಗಳ ಬಳಿ ಒಂದೇ ಒಂದು ಕ್ಯಾಮೇರಾ ಇರಲಿಲ್ಲ.
ಅಲ್ಲಿಂದ ಬಿಟ್ಟು, ಪುಷ್ಪಗಿರಿಯೆಡೆಗೆ ನಡೆದೆವು, ಭಟ್ಟರ ಮನೆಯಿಂದ ಮುಂದಕ್ಕೆ ಹತ್ತು ಕೀಮೀ ಹೋಗುವಾಗ, ಬೆಟ್ಟದ ಮೇಲೆ, ಇತ್ತೀಚೆಗಷ್ಟೇ ನಿರ್ಮಿಸಿರುವ ಮಲ್ಲಿಕಾರ್ಜುನ ದೇವಸ್ಥಾನ ಕಾಣಸಿಗುತ್ತದೆ. ದೇವಸ್ಥಾನ ಹಿಂದೆ ಇದ್ದು, ಇತ್ತೀಚೆಗೆ ಅದನ್ನು ಜೀರ್ಣೋದ್ದಾರ ಮಾಡಿದ್ದಾರೆ. ಬಹಳ ವಿಸ್ತಾರವಾಗಿ ಕಟ್ಟಿದ್ದಾರೆ. ಭಕ್ತಾದಿಗಳು ತಂಗುವುದಕ್ಕೆ ಸ್ಥಳಾವಕಾಶ ಮಾಡಲಾಗಿದೆ. ದೇಣಿಗೆ ನೀಡಿದವರ ಪಟ್ಟಿ ನೋಡುತ್ತಿರುವಾಗ ನನಗೆ ಮೊದಲು ಅಚ್ಚರಿಯೆನಿಸಿತು. ಅಲ್ಲಿ ಬಹಳಷ್ಟು ಮಂದಿ ಮುಸ್ಲಿಮರು ದೇಣಿಗೆ ನೀಡಿದ್ದರು. ಅದು ಇಪ್ಪತ್ತೈದು ಸಾವಿರ ರೂಗಳಿಗಿಂತ ಹೆಚ್ಚು ನೀಡಿದ್ದರು. ಕಾರಣ ಹುಡುಕುತ್ತಿರುವಾಗ ಅದು ದೇವ ಭಕ್ತಿಯಿಂದಲ್ಲದೇ, ಆ ಹೆಸರಿನವರೆಲ್ಲರೂ ಟಿಂಬರ್ ವ್ಯಾಪಾರಿಗಳು. ಅವರು ಆ ಅರಣ್ಯ ನಾಶಕ್ಕೆ ನೇರ ಹೊಣೆಯಾಗಿದ್ದರಿಂದ ಈ ರೀತಿಯ ಸಹಾಯಾರ್ಥ ಮಾಡಿದ್ದರು. ಆ ದೇವಸ್ಥಾನದಲ್ಲಿ ಒಂದು ಅಜ್ಜಿ ಇದ್ದರು, ಅವರು ಅದನ್ನು ಗುಡಿಸುವುದು ತೊಳೆಯುವುದು ಅವರ ಕೆಲಸ. ಇಂಥಹ ದಟ್ಟ ಕಾಡಿನಲ್ಲಿ ಅವರೊಬ್ಬರೇ ಇರುವುದು ನನಗೆ ಒಂದು ಬಗೆಯ ಕರುಣೆ ತರಿಸಿದರೇ ಮತ್ತೊಂದೆಡೆಗೆ ಅವರ ಬಗ್ಗೆ ಹೆಮ್ಮೆ ಎನಿಸಿತು. ವಯಸ್ಸಾದ ಅದೆಷ್ಟೊ ಜನರು ಕಾಡಿನಲ್ಲಿ, ಕುಗ್ರಾಮಗಳಲ್ಲಿ ತಮ್ಮ ವೃದ್ಯಾಪ್ಯವನ್ನು ಕಳೆಯುತ್ತಿದ್ದಾರೆ. ಎಲ್ಲವೂ ಇದ್ದು ನಾವು ಬದುಕಲು ಹೆಣಗುತ್ತಿರುವಾಗ ಇಂಥವರ ಕಷ್ಟ ಅದನ್ನೆಲ್ಲಾ ಮೀರಿ ನಿಲ್ಲುತ್ತದೆ. ಅಪರಿಚಿತರನ್ನು ಅವರು ಕಂಡು ಮಾತನಾಡಿಸುವ ರೀತಿ ನನಗಂತೂ ಬಹಳ ಮೆಚ್ಚುಗೆಯಾಯಿತು. ಅವರು ನಮಗೆ ಹಲವಾರು ಉತ್ತಮ ಸಲಹೆ ನೀಡಿ, ನಾವು ಹೇಗೆ ಹೋಗಬಹುದು, ಎಲ್ಲಿಗೆ ಹೋಗಬಹುದು ಏನೆಲ್ಲಾ ನೋಡಬಹುದು ಎಂದೆಲ್ಲಾ ತಿಳಿಸಿದರು. ನಾವು ಪುಷ್ಪಗಿರಿ ಬೆಟ್ಟ ಇಳಿದು, ಬಿಸಿಲೆ ಮಾರ್ಗವಾಗಿ ಹೋಗುವುದೆಂದು ತೀರ್ಮಾನಿಸಿದೆವು. ಅರ್ಧ ಗಂಟೆಯ ಬಳಿಕ ಜಡಿ ಮಳೆ ಶುರುವಾಯಿತು, ನಿಲ್ಲುವುದಕ್ಕೆ ಒಂದೇ ಒಂದು ಮನೆಯೂ ಇಲ್ಲ, ಮಳೆಯಲ್ಲಿಯೇ ಗಾಡಿ ಓಡಿಸಿದೆವು. ಮಳೆ ತಡೆಯಲಾರದೇ, ಒಂದು ದನ ಕಟ್ಟುವ ಕೊಟ್ಟಿಗೆ ಬಳಿಗೆ ಬಂದಾಗ ಅದರೊಳಗಿದ್ದ ಸೊಳ್ಳೆಗಳು, ಜಿಗಣೆಗಳು ನಮ್ಮನ್ನು ಅಲ್ಲಿಂದಲೂ ಓಡಿಸಿ, ಮಳೆಯಲ್ಲಿಯೇ ಹೋಗುವಂತಾಯಿತು. ಬಿಸಿಲೆ ಊರನ್ನು ತಲುಪುವ ವೇಳೆಗೆ ನಾವು ಸಂಪೂರ್ಣ ಒದ್ದೆಯಾಗಿದ್ದೆವು. ಮಳೆಯಲ್ಲಿ ನೆನೆದ ನಂತರ ಕೈಕಾಲುಗಳು ಮರಗಟ್ಟಿ ಹೋಗಿದ್ದವು. ಬಿಸಿಲೆಯಲ್ಲಿ, ಊಟ ಮಾಡಿ ಆಳಿಗೊಂದು ನಾಲ್ಕು ಸಿಗರೇಟು ಸೇದಿ, ಕಾಫಿ ಕುಡಿದು ಹೊರಟೆವು. ಊಟಕ್ಕೆಂದು ಬಿಸಿಲೆಯಲ್ಲಿ ನಿಂತಾಗ, ನಾವು ಹೋಗಬೇಕಿದ್ದ ಸುಬ್ರಹ್ಮಣ್ಯ ಕಡೆಯಿಂದ ಆರು ಜನರು ಬೈಕಿನಲ್ಲಿ ನಾವಿದ್ದ ಹೋಟೆಲಿನಲ್ಲಿ ಊಟ ಮಾಡಲು ನಿಲ್ಲಿಸಿದ್ದರು. ಅವರು ನಾವು ಆಕಡೆಗೆ ಹೊರಟಿದ್ದೇವೆ ಎಂದಾಗ, ಆ ರಸ್ತೆಯಲ್ಲಿ ಹೋಗಲು ಸಾಧ್ಯವೇ ಇಲ್ಲ, ದೊಡ್ಡ ಗುಂಡಿಗಳಿವೆ, ಬಂಡೆಗಳೇ ರಸ್ತೆಯಲ್ಲಿ ಬಿದ್ದಿವೆ, ರಸ್ತೆ ತುಂಬಾ ನೀರು ತುಂಬಿದೆ ಎಂದರು. ಮತ್ತೊಬ್ಬರು, ಸುಂದರ ತಾಣಗಳಿವೆ, ಝರಿಗಳಿವೆ, ತುಂಬಾ ಆನಂದಿಸುವಿರಿ ಎಂದರು. ಇಂಥಹ ಮಾತುಗಳು ಸರ್ವೇ ಸಾಮಾನ್ಯ ನಮಗೆ ಕೆಮ್ಮಣ್ಣುಗುಂಡಿಗೆ ಹೋದಾಗಲೂ ಬಂದಿದ್ದ ರಸ್ತೆಗಿಂತ ಎಷ್ಟೋ ಉತ್ತಮವಾಗಿದ್ದ ರಸ್ತೆಯನ್ನು ಘೋರವೆಂದಿದ್ದರು. ಅಪರೂಪಕ್ಕೊಮ್ಮೆ ಹೊರಕ್ಕೆ ಬಂದರೇ ಆಗುವ ಸನ್ನಿವೇಶಗಳು ಹೀಗೆಯೆ.
ನಾವು ಮುಂದಕ್ಕೆ ಬಂದಾಗ ಮಳೆಯಿಂದಾಗಿ ಮೋಡ ಮುಚ್ಚಿದ್ದರಿಂದ, ಏನೂ ಕಾಣಿಸುತ್ತಿರಲಿಲ್ಲ, ರಸ್ತೆ ಕೆಟ್ಟದ್ದಾಗಿದ್ದರೂ ಅವರು ಹೇಳಿದ್ದಷ್ಟು ಮಟ್ಟಕ್ಕೇನೂ ಇರಲಿಲ್ಲ. ಅಂತೂ ಇಂತೂ ಕಷ್ಟಪಟ್ಟು ದೇವರನ್ನು ಬೇಡಿಕೊಂಡು ಸುಬ್ರಹ್ಮಣ್ಯ ತಲುಪಿದೆವು. ನಾನು ಓಡಿಸುತ್ತಿದ್ದ ಬೈಕಿನ ಟೈರ್ ಸಂಪೂರ್ಣ ಫ್ಲಾಟ್ ಆಗಿತ್ತು ಯಾವುದೇ ಕ್ಷಣದಲ್ಲಿಯೂ ಪಂಚರ್ ಆಗಬಹುದಿತ್ತು ಅದು ಅಲ್ಲದೇ, ಗಾಡಿ ಕಂಡಿಷನ್ ಕೂಡ ಇರಲಿಲ್ಲ. ಕಷ್ಟಪಟ್ಟು ಓಡಿಸಬೇಕಾಗಿತ್ತು. ಸುಬ್ರಹ್ಮಣ್ಯಕ್ಕೆ ಬಂದಾಗ ಮಳೆ ಇನ್ನೂ ಜೋರಾಯಿತು. ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಸುಳ್ಯಾ ಕಡೆಗೆ ಹೊರಟೆವು. ಸುಬ್ರಹ್ಮಣ್ಯದಿಂದ ಸುಳ್ಯಾ ಹೋಗುವಾಗ, ಇಳಿಮಲೈ ಎಂಬ ಸ್ಥಳದಲ್ಲಿ ಎಡಕ್ಕೆ ಹೋಗಬೇಕು. ಅಲ್ಲಿಂದ ಮಂಗಳೂರು ಮಡಿಕೇರಿ ರಸ್ತೆಯವರೆಗೆ ನಾನು ಇದುವರೆಗೆ ಹೋಗಿರುವ ರಸ್ತೆಗಳಲ್ಲಿಯೇ ಅದ್ಬುತವೆಂದು ಹೇಳಬೇಕು. ಕಾಡಿನ ನಡುವೆ ಬಹಳ ಸುಂದರವಾದ ರಸ್ತೆ. ನಾವು ಮುಖ್ಯ ರಸ್ತೆಯಿಂದ ಬಲಕ್ಕೆ ಹೊರಟು ಎರಡು ಕೀಮಿ ಹೋದಾಗ ನಮಗೆ ತೋಡಿಕಾನ ಎನ್ನುವ ಊರು ಸಿಗುತ್ತದೆ. ಅಲ್ಲಿಂದ ಎಡಕ್ಕೆ ಎಂಟು ಕೀಮೀ ಹೋದರೇ, ದೇವರಗುಂಡಿ ಜಲಪಾತ. ನಾವು ಹೋಗುವಾಗಲೇ ಕತ್ತಲಾಗುತ್ತಿದ್ದರಿಂದ ದಾರಿ ಕೇಳಿದವರು ಹೋಗುವುದು ಬೇಡವೆಂದರೂ ಕೇಳದೆ ನಾವು ಹೋದೆವು. ಅವರ ಮಾತನ್ನು ಕೇಳಿದರೆ ಎಂಟು ಗಂಟೆ ಹೊತ್ತಿಗೆ ನಾವು ಮನೆಯಲ್ಲಿರುತ್ತಿದ್ದೆವು. ನಾವು ಕೆಲವೊಮ್ಮೆ ತೆಗೆದುಕೊಳ್ಳುವ ಸಣ್ಣಪುಟ್ಟ ನಿರ್ಧಾರಗಳು ಇಡೀ ಯೋಜನೆಯನ್ನೇ ತಲೆಕೆಳಗೆ ಮಾಡಿಬಿಡುತ್ತವೆ. ಈ ಬಾರಿ ಅದಕ್ಕೊಂದು ಉತ್ತಮ ಉದಾಹರಣೆಯಾಯಿತು. ನಾವು ದಾರಿಯಲ್ಲಿ ಹೋಗಹೋಗುತ್ತಲೇ ಕತ್ತಲಾಯಿತು, ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಹತ್ತಿರ ಹೋಗುತ್ತಿದಂತೆ ಮಳೆ ಅಬ್ಬರಿಸಿತು. ಎರಡು ಕೀಮೀ ನಷ್ಟು ದೂರ ನಡೆದುಹೋಗಬೇಕಿತ್ತು, ಹೋಗಲು ಕಾಫಿ ತೋಟದವರು ಅನುಮತಿ ನೀಡಬೇಕಿತ್ತು, ಬಂದ ದಾರಿಗೆ ಶುಂಕವಿಲ್ಲವೆಂದು ತಿಳಿದು ಹಿಂದಿರುಗಲು ನೋಡುತ್ತಿರುವಾಗ ನಮ್ಮ ತಂಡ ಬುದ್ದಿವಂತ ಪ್ರಜೆ ನಂದ ದೇವಸ್ಥಾನ ನೋಡಲು ಹೋಗಿ ಒಂದು ಗಂಟೆಗೂ ಹೆಚ್ಚು ಕಾಲ ಕಳೆದು ಬಂದ. ಅಷ್ಟೊತ್ತಿಗೆ ಗಂಟೆ ಎಂಟಾಗಿತ್ತು. ಮಳೆ ಸುರಿಯುತ್ತಿದ್ದ ರೀತಿ ಎಂತಹವನನ್ನು ಬೆಚ್ಚಿ ಬೀಳಿಸುತ್ತಿತ್ತು. ಜೋರು ಮಳೆ ಸುರಿಯುತ್ತಿತ್ತು, ಅಲ್ಲಿಯೇ ನಿಲ್ಲುವ ಹಾಗಿಲ್ಲ, ಮುಂದೆ ಹೋಗಲು ದಾರಿ ಕಾಣುತ್ತಿಲ್ಲ, ಮಳೆ ಹಣಿಗಳು ಕಲ್ಲಿನಂತೆ ಮುಖಕ್ಕೆ ರಾಚುತಿತ್ತು. ನಾವು ವೇಗದಿಂದ ಹೋಗೋಣವೆಂದರೇ ಅಪ್ಪಿತಪ್ಪಿದರೆ ನಮ್ಮ ಜೀವ ವಿಮೆ ಹಣ ಮನೆಗೆ ತಲುಪುತ್ತಿತ್ತು. ನಿಧಾನ ಹೋಗೋಣವೆಂದರೇ ಇನ್ನೂ ಎಷ್ಟು ಹೊತ್ತು ಹೀಗೆ ಹೋಗುವುದೆನಿಸುತ್ತಿತ್ತು. ದಾರಿಯೇ ಸಾಗುತ್ತಿರಲಿಲ್ಲ. ಮಧ್ಯೆದಲ್ಲಿ ಒಮ್ಮೆ ನಿಲ್ಲಿಸಿದಾಗ ನಮ್ಮ ಕೈಕಾಲುಗಳು ನಡುಗುತ್ತಿದ್ದು, ಮುಂದೆ ಹೋಗುವುದೇ ಅಸಾಧ್ಯವೆನಿಸಿತ್ತು ಆದರೂ ಇನ್ನೂ ೭೦-೮೦ಕೀಮೀ ಹೋಗಲೇಬೇಕಿತ್ತು. ಮಡಿಕೇರಿಗೆ ಬಂದು ನಿಂತಾಗ ಮಳೆ ಸ್ವಲ್ಪ ಕಡಿಮೆಯಾಗಿದ್ದರೂ ನಾವು ಸಂಪೂರ್ಣ ಒದ್ದೆಯಾಗಿದ್ದರಿಂದ ಮೈಯೆಲ್ಲಾ ಒಂದು ಬಗೆಯ ಮುಜುಗರವೆನಿಸುತ್ತಿತ್ತು.
ಇದೆಲ್ಲವೂ ನಮ್ಮಿಂದ ನಾವೇ ಮಾಡಿಕೊಂಡಿದ್ದು, ಯಾರನ್ನೂ ದೂಷಿಸಿ ಉಪಯೋಗವಿರಲಿಲ್ಲ, ಮೊದಲಿಗೆ ಮಳೆಯಲ್ಲಿ ಬೈಕು ಸವಾರಿ ಇದೊಂದು ಉಢಾಫೆತನ. ಕಂಡಿಷನ್ ಇಲ್ಲದ ಬೈಕು, ನಾವು ಹೋಗಬೇಕಿದ್ದ ಸ್ಥಳಗಳ ಬಗೆಗೆ ಸರಿಯಾದ ಮಾಹಿತಿಯಿಲ್ಲದೇ ಹೋದದ್ದು. ಏನೇ ಆದರೂ ಅದೆಲ್ಲವೂ ಒಂದು ಪಾಠ ಅನುಭವವೆನ್ನುವ ಅಥವಾ ಅದನ್ನು ಸಮರ್ಥಿಸಿಕೊಳ್ಳುವ ಕೆಟ್ಟ ಮನಸ್ಸು. ವಾಪಸ್ಸು ಬಾನುಗೊಂದಿಗೆ ಬಂದು ತಲುಪಿದಾಗ ರಾತ್ರಿ ಒಂದು ಗಂಟೆಯಾಗಿತ್ತು. ನಾನು ಎಷ್ಟೊತ್ತಿಗೆ ಮನೆಗೆ ಹೋದರೂ ಮನೆಯವರು ಆ ಬಗೆಗೆ ನಮ್ಮನ್ನು ಕೇಳದೆ ಇರುವುದು ಏಕೆಂಬುದು ನನಗೆ ಅರಿವಾಗಿಲ್ಲ.

12 ಸೆಪ್ಟೆಂಬರ್ 2010

ಮೋಜಿನ ಅಮಲಿಗೆ ಮತ್ತೊಂದು ಹೆಸರು ಲಾಂಗ್ ರೈಡ್!!!!!!!!!!!!!

ಒಮ್ಮೆ ಬರೆದ ಮೇಲೆ ನಂತರ ನಾವು ಅದನ್ನು ಓದಲು ಹೋಗಬಾರದು, ಅಲ್ಲಿರುವ ತಪ್ಪುಗಳು, ಅಥವಾ ಅಲ್ಲಿರುವ ವ್ಯಾಕನಗಳು ಆ ಕ್ಷಣಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಅಂದರೇ, ಹೇಳಿದ ಮಾತನ್ನು ಬದಲಾಯಿಸುತ್ತೇನೆಂದಲ್ಲ. ನಾನು ಏನೇ ಬರೆಯ ಹೊರಟರು ನನ್ನ ಮನಸ್ಸಿನಲ್ಲಿ ಮೂಡುವುದು, ನನ್ನಯ ಬಗೆಗಿನ ಉಪೇಕ್ಷೆ ಮಾತ್ರ. ನನ್ನ ಸೋಮಾರಿತನ, ನನ್ನ ಉಢಾಫೆತನ, ಜೀವನದೆಡೆಗಿನ ತಾತ್ಸಾರ, ತಿರಸ್ಕಾರ, ಬೇಜವಬ್ದಾರಿತನ. ಇಂಥಹುದೆಲ್ಲದ್ದನ್ನು ನಾನು ಸರಿತೂಗಿಸಲು ಅಥವಾ ಅದಕ್ಕೊಂದು ಗರಿ ತುಂಬಲು ಬಳಸಿದ್ದು, ಲಾಂಗ್ ರೈಡ್ ಎಂಬ ಬೈಕಿನ ಸವಾರಿ. ಹುಚ್ಚುತನದ ಉದ್ದಟತನದ ಬಗೆಗೆ ಕೆಲವೊಂದು ಅಂಶಗಳನ್ನು ಇಲ್ಲಿ ಬರೆಯಲೇಬೇಕಾಗಿದೆ. ನಾನು ಹೈದರಾಬಾದಿನಿಂದ ಬಂದಾಗಿನಿಂದ ನನ್ನಯ ಉಢಾಫೆತನ ಮಿತಿ ಮೀರಿ ಬೆಳೆಯತೊಡಗಿತು. ನಡು ರಾತ್ರಿಯವರೆಗೆ ಕುಡಿಯುವುದು, ಕುಡಿದ ಮೇಲೆ, ಬೈಕಿನಲ್ಲಿ ಪೆಟ್ರೋಲ್ ಇದೆಯೋ ಇಲ್ಲವೋ? ಗಾಡಿ ಕಂಡಿಷನ್ ಹೇಗಿದೆ? ಟೈರ್ ಸರಿ ಇದೆಯಾ? ಇಲ್ಲಾ ಇವ್ಯಾವುದೂ ನಮ್ಮಗೆ ಪ್ರಶ್ನೆಗಳೇ ಅಲ್ಲಾ. ಮಗಾ ಎಲ್ಲಿ ಆದರೂ ಹೋಗೋಣ, ಸರಿ ನಡಿ ಮುಗಿದೇ ಹೋಯಿತು. ಕುಡಿದ ಅಮಲಿನಲ್ಲಿ ಇಲ್ಲಿಂದ ಹೊರಟು ಮೈಸೂರು ಸೇರುವಾಗ ಮುಂಜಾನೆ ಐದು ಗಂಟೆ, ಎಲ್ಲಿಗೆ ಹೋಗುವುದು, ಅಲ್ಲಿರುವ ಸ್ನೇಹಿತರನ್ನು ಮಾತನಾಡಿಸಿಕೊಂಡು, ಹುಣಸೂರು ತಲುಪಿದೆವು. ಅಲ್ಲಿಂದ, ನಾಗರಹೊಳೆಗೆ ಹೋಗೋಣವೆಂದರೇ, ಇಲ್ಲ ಅಲ್ಲಿಗೆ ಬೈಕ್ ಗಳು ಹೋಗುವಂತಿಲ್ಲ. ಸರಿ ಬೇಡ ನಡಿ ಮಡಿಕೇರಿಗೆ ಹೋಗೋಣ. ಕುಶಾಲನಗರಕ್ಕೆ ಬಂದು ಮತ್ತೆ ಕುಡಿದು, ನಿಸರ್ಗಧಾಮದಲ್ಲಿ ಮಲಗಿದೆವು. ಸಂಜೆ ಆಗುವ ಸಮಯಕ್ಕೆ, ಮಂಜೇಶ್ ಗೆ ಫೋನ್ ಮಾಡಿ ಹೇಳಿದೊಡನೆ ಬನ್ನಿ ಮನೆಗೆ ಎಂದ ಅದಕ್ಕೋಸ್ಕರವೇ ತಾನೇ ನಾವು ಕಾಯ್ದಿದ್ದು. ಅಲ್ಲಿಗೆ ಹೋದರೆ, ಅವರ ಅಪ್ಪ ಸ್ವಲ್ಪ ಕುಡಿಯಿರಿ ಎಂದರು. ಮತ್ತೆ ಕುಡಿತದ ಅಮಲಿಗೆ. ನನಗೆ ನಡು ರಾತ್ರಿಯಲ್ಲಿ ಕುಡಿ ಎಂದರೂ, ಮುಂಜಾವಿನಲ್ಲಿ ಕುಡಿ ಎಂದರೂ ನೀರಿನಷ್ಟೇ ನಿರಾಳವಾಗಿ ಕುಡಿಯುತ್ತೇನೆಂಬುದು ಪಾಪ ಮಂಜೇಶ್ ಅವರ ಅಪ್ಪನಿಗೂ ಅರಿವಾಗಿದೆ.
ಮಂಜೇಶ್ ಅವರ ಅಪ್ಪ ಎಂದರೇ ನನಗಂತು ಬಹಳ ಅಭಿಮಾನ, ಕೇವಲ ಜೊತೆಯಲ್ಲಿ ಕುಡಿಯುತ್ತಾರೆಂಬುದಕ್ಕಲ್ಲ. ಅವರ ಎಂಥಹ ಕಿರಿಯರನ್ನು ಸ್ನೇಹಿತರಂತೆ ಮಾತನಾಡಿಸುತ್ತಾರೆ, ವಿಚಾರಿಸುತ್ತಾರೆ, ಸ್ವಲ್ಪವೂ ಅಹಂಕಾರವಿಲ್ಲದ ಸರಳತೆಯ ಮನುಷ್ಯ.ಅಲ್ಲಿಂದ ಮರುದಿನ ಬೆಳ್ಳಿಗ್ಗೆ ಎದ್ದು ಸುರಿಯುತಿದ್ದ ಮಳೆಯಲ್ಲಿಯೇ, ಎರಡು ಬೈಕ್ ಹತ್ತಿ ಮಡಿಕೇರಿ ಕಡೆಗೆ ಹೊರಟೆವು. ನಾನು ವಿಜಿ ಮಳೆಯಲ್ಲಿ ನೆನೆಯುವುದನ್ನು ಆನಂದಿಸುತಿದ್ದರೇ, ರೋಹಿತ್ ಮತ್ತು ಮಂಜೇಶ್ ಯಾರಿಗೆ ಬೇಕಿತ್ತು ಈ ಸಂಚಾರಿ, ಸವಾರಿ ಎಂದುಕೊಳ್ಳುತಿದ್ದರು. ಮಳೆಯಲ್ಲಿ ನೆನೆಯುವುದರ ಖುಷಿಯನ್ನು ಅನುಭವಿಸಿ ಆನಂದಿಸಿದರೇ ಮಾತ್ರ ತಿಳಿಯುತ್ತದೆ. ನಾನು ನನ್ನ ಕಾಲೇಜು ದಿನಗಳಲ್ಲಿ, ಮಳೆ ಬಂತೆಂದರೇ, ನಾನು, ದ್ವಾರಕೇಶ್, ಕಾಂತ, ಕಿಟ್ಟಿ, ರಘು ರಾತ್ರಿ ನಡು ರಾತ್ರಿ ಎನ್ನದೇ, ಮಳೆಯಲ್ಲಿ ನೆನೆದುಕೊಂಡು ಹಾಸ್ಟೇಲ್ ಇಂದ, ಹೊರಗೆ ನಡೆದು ಕುಣಿದು ಬರುತಿದ್ದೆವು. ಹಾಗೆಲ್ಲಾ ಬೆಂಗಳೂರಿನ ಅಲ್ಪ ಸ್ವಲ್ಪ ಮಳೆಗೆ ಅಷ್ಟೊಂದು ಖುಷಿ ಪಡುತ್ತಿದ್ದ ನಾವು, ಇಂಥಹ ಮಲೆನಾಡಿನ ಮಡಿಲಲ್ಲಿ ಸುರಿಯುವ ಜಡಿ ಮಳೆಯನ್ನು ಆನಂದಿಸದೇ ಇರಲು ಸಾಧ್ಯವೇ? ಕೊಡಗಿನಲ್ಲಿ ಕೇರಳ ಹೋಟೆಲ್ ಗಳಲ್ಲಿ ಕೊಡುವು ಉದ್ದನೆಯ ಗಾಜಿನ ಲೋಟದಲ್ಲಿನ ಟೀಯನ್ನು ಸವಿದವನೇ ಸವಿಯಬೇಕು. ಮಡಿಕೇರಿಗೆ ಹೋಗಿ ಅಲ್ಲಿಂದ ಗಾಳಿಪಟ ಸಿನೆಮಾ ತೆಗೆದಿರುವ ಮಂದಾಲಪಟ್ಟಿಗೆ ಹೊರಟೆವು. ಅದ್ಬುತವಾದ ಸ್ಥಳ, ಅದೆಷ್ಟು ಸೊಗಸಾಗಿದೆಯೆಂದರೇ ಹೇಳತೀರದು. ಅಲ್ಲಿ ಸ್ವಲ್ಪ ಸಮಯ ಕಳೆದ ನಂತರ ಮರಳಿ ಮಡಿಕೇರಿಗೆ ಬಂದೆವು. ಮಳೆ ಇನ್ನೂ ಸುರಿಯುತ್ತಲೇ ಇತ್ತು.
ಮಡಿಕೇರಿಗೆ ಬಂದವರು, ಅಲ್ಲಿದ್ದ ಮಂಗಳೂರು ಲಂಚ್ ಹೋಂನಲ್ಲಿ ಕುಡಿದು, ಹಂದಿಮಾಂಸವನ್ನು ಭರ್ಜರಿಯಾಗಿ ತಿಂದು ತಂಡಿಯಂಡಮೋಲ್ ಕಡೆಗೆ ಹೊರಟೆವು. ಕರ್ನಾಟಕದ ಅತಿ ಎತ್ತರವಾದ ಸ್ಥಳ ತಡಿಯಂಡಮೋಲ್, ಅದು ಮಡಿಕೇರಿಯಿಂದ ಎಂಬತ್ತು ಕಿಮೀ ದೂರವಿದ್ದರೂ ಮಡಿಕೇರಿ ಅಲ್ಲಿಂದ ಕಾಣುತ್ತದೆ. ಎತ್ತರದ ಗುಡ್ಡಕ್ಕೆ ಏರುವ ಸಮಯಕ್ಕೆ ಮತ್ತೆ ಕತ್ತಲಾಗತೊಡಗಿತು. ಇಷ್ಟು ಹತ್ತಿರಕ್ಕೆ ಬಂದು ಇದನ್ನು ನೋಡಲಾಗದೇ ಹೋದದ್ದು ಬಹಳ ಬೇಸರ ತರಿಸಿತ್ತು. ಮನೆಗೆ ತಲುಪುವ ತನಕವೂ ನಮಗೆ ಅದೇ ಕೊರೆಯುತಿತ್ತು. ಮನೆಗೆ ಬರುವ ಮುನ್ನಾ ಸಿದ್ದಾಪುರದಲ್ಲಿ ಮತ್ತೊಮ್ಮೆ ಕುಡಿದು, ಕುಡಿದ ಅಮಲಿನಲ್ಲಿ ನಾನು ವಿಜಿ ರೋಹಿತ್ ಎಂದೋ ನಮ್ಮಿಂದ ದೂರಾಗಿದ್ದ ಅದ್ಯಾವುದೋ ಹುಡುಗಿಯರ ವಿಷ್ಯಕ್ಕೆ ಜಗಳವಾಡಿ ನಾನು ವಾಪಸ್ ಬೆಂಗಳೂರಿಗೆ ನಾನು ಬೆಂಗಳೂರಿಗೆ ಈಗಲೇ ಹೋಗುತ್ತೇವೆಂದು ಹೊರಟೆವು ಕಡೆಗೆ ಯಾರೂ ಬೆಂಗಳೂರಿಗೆ ಹೋಗದೇ, ಮಂಜೇಶನ ಮನೆ ತಲುಪಿ ಅದ್ದೂರಿ ಮಾಂಸ ಭಕ್ಷಣೆ ಮಾಡಿದೆವು. ನಾಳೆ ಬೆಳ್ಳಿಗ್ಗೆ ಮತ್ತೆ ಅದೇ ಸ್ಥಳಕ್ಕೆ ಹೋಗಿ ನೋಡಿಬರಬೇಕೆಂದು ಹೊರಟೆವು. ರಾತ್ರಿ ತಾನೇ ಬಂದ ಸ್ಥಳದಿಂದ ಮತ್ತದೇ ಸ್ಥಳಕ್ಕೆ ಅದೂ ೯೦ಕಿಮೀ ನಷ್ಟೂ ದೂರ ಹೋಗುವುದಕ್ಕೆ ನಿರ್ಧರಿಸಿದೆವು. ಹೋಗುವ ಹಾದಿಯಲ್ಲಿ ನಮ್ಮ ಜೊತೆ ರೋಹಿತ್ ಇದ್ದರೇ ಮುಗಿದೇ ಹೋಯಿತು, ಬೆಳಗಾದೊಡನೆ ಸ್ವಲ್ಪ ಹಾಕಿಕೊಂಡು ಹೋಗೋಣವೆನ್ನುತ್ತಾನೆ. ಹೊರಗಡೆ ಬಂದಾಗ ಕಂಠಪೂರ್ತಿ ಕುಡಿಯಬೇಕೆಂಬುದು ಅವನ ನಿರ್ಣಯ. ಅವನ ಆಸೆಗೆ ಬೆಂಬಲ ಸೂಚಿಸಲು ನಾನಿದ್ದೆ, ನಾವಿಬ್ಬರೂ ವಿರಾಜಪೇಟೆಯ ಮುಂದೆ ಹೋಗುವಾಗ ರಸ್ತೆ ಬದಿಯಲ್ಲಿದ್ದ ಸಣ್ಣ ಬಾರಿನಲ್ಲಿ ಕುಳಿತು ಸ್ವಲ್ಪ ಕುಡಿಯಲು ಹೋದವರು ಕಂಠಪೂರ್ತಿಯಾಗಿ ಕುಡಿದು ಬಂದೆವು. ನಾನು ಕುಡಿದರೇ ಬೈಕ್ ಓಡಿಸುವ ಪರಿ ನನ್ನನ್ನೇ ಅನೇಕಾ ಬಾರಿ ಬೆಚ್ಚಿ ಬೀಳಿಸಿದೆ. ಹುಚ್ಚನಂತೆ, ನಾನು ಹೋಗುತ್ತಿದ್ದದ್ದು ಸ್ಪ್ಲೆಂಡರ್, ಮತ್ತೊಂದು ಅಪ್ಪಾಚೆ, ಕುಡಿದ ನಂತರ ಮುಂದಿನ ಮೂವತ್ತು ಕೀಮೀ ದೂರವನ್ನು ಒಮ್ಮೆಯೂ ಅವನಿಗೆ ಬಿಡದೇ, ನಾನೇ ಮುನ್ನುಗ್ಗಿದೆ. ನಾನು ಕುಡಿದು ಗಾಡಿ ಓಡಿಸುವಾಗ ನನ್ನ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವವರು ನಿಜಕ್ಕೂ ಹುಂಬರೇ, ಆ ಹುಂಬ ನಮ್ಮ ದ್ವಾರಕೇಶ್, ಅವನು ಯಾವುದಕ್ಕೂ ಎಂದಿಗೂ ಹೆದರಿದ ಮನುಷ್ಯನೇ ಅಲ್ಲ. ಹಾಗೂ ಹೀಗು ತಡಿಯಂಡಮೋಲ್ ಬೆಟ್ಟದ ತಪ್ಪಲಿಗೆ ಬಂದು ಅಲ್ಲಿಂದ ಒಂದೈದಾರು ಕೀಮೀ ದೂರ ಬೆಟ್ಟ ಹತ್ತಿದೆವು, ಸುತ್ತಲೂ ಕಾಡು ನಾವು ಏರುತ್ತಿರುವುದು ಮಾತ್ರ ಹುಲ್ಲುಗಾವುಲು, ನಾವಿರುವುದು ಕರ್ನಾಟಕದ ಅತಿ ಎತ್ತರದ ಬೆಟ್ಟದಲ್ಲಿ, ನಿಜಕ್ಕೂ ಅದ್ಬುತ, ಸೂರ್ಯಾಸ್ತವಾಗುತ್ತಿತ್ತು, ಒಂದು ಬಗಿಲಿಗೆ ಕರ್ನಾಟಕದ ಉದ್ದುದ್ದ ಘಟ್ಟಗಳು, ಬ್ರಹ್ಮಗಿರಿಯಿಂದ ದೂರದ ಪುಷ್ಪಗಿರಿ, ನಾಗರಹೊಳೆ ಗಡಿಯೂ ಕಾಣುತ್ತಿದೆ, ಮತ್ತೊಂದೆಡೆಗೆ ದೂರದ ಕೇರಳ ಹತ್ತಿರವಾದಂತೆ ಕಾಣುತ್ತಿದೆ. ವಯ್ನಾಡ್ ಬೆಟ್ಟಗಳ ಸಾಲುಗಳ ನೋಟ ಸವಿಯಲೇ ಬೇಕಾದದ್ದು. ಅಷ್ಟೊತ್ತು ನೋಡಿ ಆನಂದಿಸಿದ ಮೇಲೂ ನಮ್ಮ ದುರಾಸೆ ತೀರಲಿಲ್ಲ, ಇಲ್ಲಿಗೆ ಒಂದು ದಿನ ಬಂದು ಟೆಂಟ್ ಹಾಕಿ ಇರಬೇಕು ಮನಸಾರೆ ಕುಡಿಯಬೇಕು, ಕುಡಿಯುವುದೇ ಬದುಕೇ ನಮಗೆ!
ಅಲ್ಲಿಂದ ಹೊರಟು ಸಿದ್ದಾಪುರದಲ್ಲಿ ಮತ್ತೇ ಕುಡಿದು, ಕುಶಾಲನಗರಕ್ಕೆ ಬಂದೆವು. ಕುಶಾಲನಗರದಲ್ಲಿ ಮತ್ತೊಮ್ಮೆ ಕುಡಿದು, ಮಂಜೇಶನ ಸ್ನೇಹಿತನ ರೂಮಿಗೆ ಬಂದು ಬಿದ್ದೆವು. ಕುಡಿದ ಅಮಲಿನಲ್ಲಿದ್ದ ನಾವು ತಡವಾಗಿ ಹೋಗುವುದೆಂದರಿಂದ, ದ್ವಾರಕೇಶ್ ಮತ್ತು ರೋಹಿತ್ ಹೊರಟು ಹೋಗಿದ್ದರು. ಹತ್ತು ಗಂಟೆಗೆ ಹೊರಟ ನಾನು ವಿಜಿ ಶ್ರಿರಂಗಪಟ್ಟಣಕ್ಕೆ ಬಂದಾಗ ಹನ್ನೊಂದು ಗಂಟೆ, ಕೇವಲ ಒಂದು ಗಂಟೆಯಲ್ಲಿ ಕನಿಷ್ಟವೆಂದರೂ ಎಂಬತ್ತು ಕೀಮಿಗಿಂತ ಹೆಚ್ಚು ದೂರ ಬಂದಿದ್ದೇವು. ಸತ್ತರೂ ಸರಿಯೇ ನಡಿಯೋ ಹೋದಷ್ಟೂ ವೇಗದಲ್ಲಿ ಹೋಗೋಣವೆಂದು ಬಂದೆವು. ಇದು ನಮ್ಮ ಬಗೆಗೆ ನಮಗೆ ಇರುವು ತಾತ್ಸಾರವಲ್ಲದೇ ಮತ್ತೇನು?
ಕೆಲವು ದಿನಗಳ ನಂತರ, ಶೃಂಗೇರಿ, ಕೆಮ್ಮಣ್ಣುಗುಂಡಿಗೆ ಬೈಕಿನಲ್ಲಿ ಹೋಗಿಬರುವುದೆಂದು ಹೊರಟೆವು. ರಾತ್ರಿ ಹತ್ತು ಗಂಟೆಯ ವೇಳೆಗೆ ಬಿಟ್ಟು ತುಮಕೂರು ರಸ್ತೆಯಲ್ಲಿನ ಶೆಲ್ ಪೆಟ್ರೋಲ್ ಬಂಕಿನಲ್ಲಿ ನಂದನ ಬೈಕಿಗೆ ಪೆಟ್ರೋಲ್ ಹಾಕಿಸಿಕೊಂಡು ನಿಂತಿರುವ ಸಮಯಕ್ಕೆ ನೋಡಿದರೇ ಅವನ ಬೈಕಿನ ಪೆಟ್ರೋಲ್ ಟ್ಯಾಂಕ್ ತೂತಾಟ್ರೊಲ್ ಸೋರುತಿತ್ತು, ಇಂಥಹ ಸಂಧರ್ಭದಲ್ಲಿ ಗಾಡಿ ಓಡಿಸುವುದು ಅಸಾಧ್ಯವೆನಿಸಿತ್ತು. ಅದನ್ನು ರಾತ್ರಿ ಸಮಯದಲ್ಲಿ ಸರಿ ಮಾಡಿಸಲು ಸಾಧ್ಯವಿರಲಿಲ್ಲ. ಇದು ಒಳ್ಳೆ ಕಥಯಾಯಿತಲ್ಲವೆಂದು, ಖಾಲಿ ಬಾಟಲಿ ಇಡಿದು, ಟ್ಯಾಂಕಿನಲ್ಲಿದ್ದ ಪೆಟ್ರೋಲ್ ಅನ್ನು ನಮ್ಮ ಬಾಟಲಿಗಳಿಗೆ ತುಂಬಿದೆವು. ನಂತರ ನನ್ನ ಬ್ಯಾಗಿನಲ್ಲಿದ್ದ ಪಂಚರ್ ಸ್ಟಿಕರ್ ಹಾಕಿದರೇ ಹೇಗೆ ಎನಿಸಿತು. ಒಳ್ಳೆಯ ಉಪಾಯವೆನಿಸಿ, ಹಾಗೆಯೇ ಮಾಡಿದೆವು. ಆದರೂ, ನಂದನಿಗೆ ಅದು ಸಂಪೂರ್ಣ ತೃಪ್ತಿಯಾಗಿರಲಿಲ್ಲ. ಆದರೇ ಇಂದಿಗೂ ಅವನು ಹಾಗೆಯೇ ಬೈಕ್ ಓಡಿಸುತಿದ್ದಾನೆ. ಇಷ್ಟೇಲ್ಲಾ ಆದಮೇಲೆ, ಮುಂದೆ ನಿಂತು ಒಂದರ್ಧ ಗಂಟೆ, ನಿಂತು ಸಿಗರೇಟು ಸೇದಿ ಹೊರಟೆವು. ನಂದನಿಗೆ ಇರುವ ಒಂದು ಸಮಸ್ಯೆ ಎಂದರೇ, ಅವನು ಎಲ್ಲಿಗೆ ಹೊರಟಾಗಲೂ ಸುತ್ತಮುತ್ತಲಿನ ಜನರಿಗೆ ಅದು ತಿಳಿಯಲೇ ಬೇಕು, ಅದೊಂದು ಗೀಳಾಗಿ ಹೋಗಿದೆ. ನಿಂತು ಸಿಗರೇಟು ಸೇದುವಾಗ, ಎಲ್ಲರಿಗೂ ಕೇಳುವ ಹಾಗೆಯೇ ಹೇಳಿದ, ಅಲ್ಲಿದ್ದವರೆಲ್ಲ ಬಂದು ಇವನ ಬೈಕಿನ ಸ್ಥಿತಿಯನ್ನು ನೋಡಿ, ಅಲ್ಲಿಗೆ ಬಂದು ಪ್ರತಿಯೊಬ್ಬನು ಒಂದೊಂದು ಉಪದೇಶವನ್ನು ನೀಡಿ ಹೋದರು. ಇಲ್ಲಿಂದ ಹೊರಟು, ಕುಣಿಗಕಲ್ ಬಳಿಯಲ್ಲಿ ನಿಂತು ತಾತನ ಟೀ ಅಂಗಡಿಯಲ್ಲಿ ಟಿ ಸಿಗರೇಟು ಮುಗಿಸಿ, ಸುಧಿ ಅಲಿಯೇ ಅವನ ದೈನಿಕ ಕಾರ್ಯವನ್ನು ಮುಗಿಸಿದನು. ನಮ್ಮ ತಂಡದಲ್ಲಿ, ವಿಜಿ ಮತ್ತು ಸುಧಿ ಇದ್ದರೇ ಬ್ರೇಕ್ ಗಳು ನೀರು ಕಂಡಲೆಲ್ಲ ಇರುತ್ತವೆ. ಸಿಗರೇಟು ಕಂಡಲ್ಲಿ ನಂದನ ಬ್ರೇಕ್ ಇರುತ್ತದೆ, ಹೆಂಡ, ಹಂದಿಮಾಂಸ ಕಂಡಲ್ಲಿ ನನ್ನ ಬ್ರೇಕ್ ಖಂಡಿತವಾಗಿರುತ್ತದೆ.
ಮುಂಜಾನೆ ನಾಲ್ಕು ಗಂಟೆ ಹೊತ್ತಿಗೆ ಹಾಸನದ ಬಳಿಯಲ್ಲಿರುವ ಕಾಮತ್ ಹೋಟೆಲ್ ನಲ್ಲಿ ಭರ್ಜರಿಯಾಗಿ ಹೊಟ್ಟೆ ತುಂಬಾ ತಿಂದು ಮುನ್ನೆಡೆದೆವು. ತಿಂದಿದ್ದು ಭರ್ಜರಿ ಎನಿಸಿದರೂ, ಬೆಳ್ಳಿಗ್ಗೆ ಏಳು ಗಂಟೆಯ ಹೋತ್ತಿಗೆ, ಮತ್ತೆ ತಿನ್ನಲು ಚಿಕ್ಕಮಗಳೂರಿನಿಂದ ಮುಂದಕ್ಕೆ ನಿಲ್ಲಿಸಿದೆವು. ಅಲ್ಲಿ ಒಳ್ಳೆಯ ಕಾಫಿ, ಉಪ್ಪಿಟ್ಟು ತಿಂದು ಮುನ್ನೆಡೆದೆವು. ಪರಿಸರ ಅತ್ತ್ಯುತ್ತಮವಾಗಿ ಆನಂದಿಸುವಂತಿದ್ದರೂ, ವಿಜಿ ಗಾಡಿಯನ್ನು ಬೆಂಗಳೂರಿನಲ್ಲಿ ಓಡಿಸುವ ವೇಗಕ್ಕೆ ಓಡಿಸತೊಡಗಿದನು. ನಾನು ಬಹಳಷ್ಟು ಬಾರಿ ಹೇಳಿದ ಹಾಗೇಯೇ, ಹೊರಗಡೆ ಸುಂದರ ತಾಣಗಳು ಸಿಕ್ಕಾಗಲೂ ಜನರು ಅತಿ ವೇಗದಿಂದ ಅಲ್ಲಿನ ಸೌಂದರ್ಯವನ್ನು ಸವಿಯದೇ ಹೋಗುವುದು ಏಕೆ? ಇಷ್ಟೇ ಅಲ್ಲದೇ, ಬಹಳ ಘಾಟಿನಲ್ಲಿ ಚಲಿಸುವಾಗ ರಾತ್ರಿ ಹೊರಡುವುದು, ಇದೆಲ್ಲವೂ ನನಗೆ ಮೂರ್ಖತನವೆನಿಸಿದರೂ ಅವರಿಗೆ ಸಮಯ ಪ್ರಜ್ನೆ ಎನಿಸುತ್ತದೆ. ರಾತ್ರಿ ಪಯಣ ಮಾಡಿ ಸಮಯ ಉಳಿಸಬಯಸುತ್ತಾರೆ. ವಿಜಿ ಹಾಗೆಯೇ ವೇಗದಿಂದ ಹೋಗಿ ಮುಂದೆ ಒಂದು ತಿರುವಿನಲ್ಲಿ ಬಿದ್ದು ಗಾಯಗೊಂಡು ಕುಳಿತಿದ್ದರು. ಯಾರು ಬಿದ್ದಾಗಲೂ ಅಷ್ಟೇ ಅವರುಗಳ ತಪ್ಪನ್ನು ಅವರು ಒಪ್ಪುವುದೇ ಇಲ್ಲ ವಿನಾಕಾರಣ ಅದನ್ನು ಸಮರ್ಥಿಸಿಕೊಳ್ಳತೊಡಗುತ್ತಾರೆ. ನಾನು ವಿಜಿಗೆ, ನಂದ ತಂದಿದ್ದ ಹಳೆಯದಾದ ಬ್ಯಾಂಡೇಜುಗಳನ್ನು ಸುತ್ತಿ, ಸುಮ್ಮನೆ ಇರಲು ಹೇಳಿ ನಿಧಾನಕ್ಕೆ ಬರುವಂತೆ ಆದೇಶಿಸಿ ಮುನ್ನೆಡೆದೆವು. ಅಲ್ಲಿಂದ ಶೃಂಗೇರಿಗೆ ತಲುಪಿ ರೂಮು ಪಡೆದು, ಸ್ನಾನ ಮಾಡುವ ವೇಳೆಗೆ, ಸುಸ್ತಾಗಿ ಹೈರಾಣವಾಗಿದ್ದೆವು. ಅಂತೂ ಸ್ನಾನ ಮಾಡಿ, ಪೂಜೆ ಮುಗಿಸಿ, ಊಟವನ್ನು ಮಾಡಿದೆವು. ಅಲ್ಲಿಗೆ ಬಂದಿದ್ದ ಅಯ್ಯಪ್ಪ ಭಕ್ತಾದಿಗಳ ಆರ್ಭಟವಂತೂ ತಾರಕ್ಕಕ್ಕೆ ಏರಿತು. ಭಕ್ತರ ಹೆಸರಿನಲ್ಲಿ ಮಾಡುವ ಅನಾಚಾರಗಳು ಮತ್ತಿನ್ನೆಲ್ಲಿಯೂ ಮಾಡಲು ಸಾಧ್ಯವಿಲ್ಲವೆನಿಸುತ್ತದೆ, ಅವರಿಗೆಲ್ಲರಿಗೂ ದೇವರು ನನ್ನೊಡನಿದ್ದಾನೆಂಬ ಭರವಸೆ ಎನಿಸುತ್ತದೆ. ಇದು ಒಂದು ಬಗೆಯ ರಾಜಕೀಯ, ಆಡಳಿತ ಪಕ್ಷದವರೆಂದು ಯಾವುದಕ್ಕೂ ಹೆದರುವುದೇ ಇಲ್ಲ, ನಮಗೆ ನಮ್ಮ ನಾಯಕರ ಬೆಂಬಲವಿದೆ, ಆಗುತ್ತದೆ, ಎಂದು ಬೀಗುತ್ತಾರೆ. ಇಲ್ಲಿಯೂ ಅಷ್ಟೇ, ಭಕ್ತಾದಿಗಳ ಹೆಸರಿನಲ್ಲಿ ಅವರು ಮಾಡುವ ಕೃತ್ಯಗಳನ್ನು ಒಮ್ಮೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬಂದರೇ ತಿಳಿಯುತ್ತದೆ. ಅಲ್ಲಿಯೇ, ಏಕೆ, ಎಲ್ಲೆಡೆಯಲ್ಲಿಯೂ ಅಷ್ಟೇ ತಾನೇ, ಸಾವಿರಾರು ಕೀಮಿ ದೂರ ಬಂದಿರುವ ಜನರು, ದೇವರ ದರ್ಶನಕ್ಕೆ ಕೆಲವೇ ನಿಮಿಷಗಳು ಕಾಯಲು ಕೂಡ ತಾಳ್ಮೆ ಇರುವುದಿಲ್ಲ, ಊಟದ ಮನೆಯಲ್ಲಿಯಂತೂ ಅನ್ನ ಕಂಡು ಎಷ್ಟು ವರ್ಷವಾಯಿತೋ ಎನ್ನುವಂತೆ ಆಡುತ್ತಾರೆ. ಊಟ ಆದಮೇಲೆ ಎರಡು ನಿಮಿಷಗಳು ಕಾಯುವ ಸಂಯಮವಿಲ್ಲದೇ, ಓಡೋಡಿ ಹೋಗುತ್ತಾರೆ. ಇದು ಎಲ್ಲೆಡೆಯಲ್ಲಿಯೂ ಅಷ್ಟೇ, ಟ್ರ‍ಾಫಿಕ್ ನಲ್ಲಿ ಗಾಡಿ ಓಡಿಸುವಾಗ, ಬಸ್ ಹತ್ತುವಾಗ, ಇಳಿಯುವಾಗ, ಅದರಲ್ಲಿಯೂ ವಿಮಾನಗಳಲ್ಲಿ ಇಳಿಯುವಾಗಂತೂ, ಅಬ್ಬಾ ಕೆಲವೇ ನಿಮಿಷಗಳಿಗೆ ಅಲ್ಲಿ ದೊಡ್ಡ ಅನಾಹುತದ ಮಟ್ಟಕ್ಕೆ ಗಲಿಬಿಲಿ ಮಾಡಿಬಿಡುತ್ತಾರೆ. ಇವೆಲ್ಲದರ ಬಗೆಗೆ ಒಂದಿಷ್ಟೂ ಚರ್ಚೆಗಳನ್ನು ನಮ್ಮ ನಮ್ಮಲ್ಲಿಯೇ ಮಾಡಿ, ರೂಮಿಗೆ ಬಂದು, ಖಾಲಿ ಮಾಡಲು ಅಣಿಯಾಗುವಾಗ, ರೂಮು ಮೇಲ್ವಿಚಾರಕ ಬಂದು ನೀವು ಖಾಲಿ ಮಾಡುವುದಾದರೇ ರೂಮಿನ ಕೀ ಅನ್ನು ನಮಗೆ ನೀಡಿ ಅಲ್ಲಿಗೆ ಕೊಡುವುದು ಬೇಡವೆಂದ. ದುರಾಸೆ ಹಣ ಎಲ್ಲಿಂದೆಲ್ಲಿಗೋ ಎಳೆದೊಯ್ಯುತ್ತದೆ. ಅವನ ಆಲೋಚನೆ ಬಹಳ ಸರಳವಾಗಿತ್ತು. ನಾವು ರೂಮ್ ತೆಗೆದುಕೊಂಡದ್ದು ೨೪ಗಂಟೆಗಳಿಗಾಗಿ, ಖಾಲಿ ಮಾಡುತ್ತಿರುವುದು ಕೇವಲ ಮೂರು ಗಂಟೆಗಳಲ್ಲಿ, ಅಂದರೇ ಅದೇ ರೂಮನ್ನು ಬೇರೆಯವರಿಗೆ ಬಾಡಿಗೆ ನೀಡಬಹುದು, ಅದು ಡಿಮಾಂಡಿದ್ದರೆ ಹೆಚ್ಚಿಗೆ ಹಣಪಡೆದುಕೊಡಬಹುದು. ಭ್ರಷ್ಟಾಚಾರವೆಂಬುದು ನಮ್ಮ ಈ ಜನ್ಮ ಹಕ್ಕು.
ಅಂತೂ ರೂಮಿನ ಕೀಯನ್ನು ಅವನಿಗೆ ನೀಡದೆ, ಕಛೇರಿಗೆ ನೀಡಿ ರಸಿದಿ ಪಡೆದು, ಹತ್ತಿರವಿದ್ದ ಹೋಟೆಲಿನಲ್ಲಿ ಸೋಡಾ ಕುಡಿದು, ಸಿಗರೇಟು ಎಳೆದು ಹೊರಟೆವು. ನಮ್ಮ ಮುಂದಿನ ತಾಣ, ಕೆಮ್ಮಣ್ಣುಗುಂಡಿ, ಶೃಂಗೇರಿಯಿಂದ ಹೊರಟ ನಾವು, ಮುತ್ತೋಡಿ ಮಾರ್ಗದಿಂದ ಹೊರಟೆವು, ಮುತ್ತೋಡಿ ಅರಣ್ಯದೊಳಗಿಂದ ಹೋಗುವಾಗ ನಾವು ಕನಿಷ್ಟ ಒಂದು ಹುಲಿಯನ್ನಾದರೂ ಕಾಣಬಹುದೆಂದು ಬಯಸಿದ್ದೇವು ಆದರೇ ನಮಗೆ ತಕ್ಕಮಟ್ಟಿಗೆ ನಿರಾಸೆಯಾಯಿತು. ಆದರೂ, ನಮಗೆ ಒಂದು ಸಿಂಗಳಿಕ ಕಾಣಸಿಕ್ಕಿತು. ಅಲ್ಲಿ ನಿಧಾನವಾಗಿ ದಾರಿಯುದ್ದಕ್ಕೂ ನೋಡುತ್ತಾ ಹೋಗುವಾಗ, ಕಾಫಿ ತೋಟಗಳಿದ್ದವು, ಅದರ ನಡುವೆ ದೂರ ದೂರಕ್ಕೆ ಕೆಲವೊಂದು ಜಲಪಾತಗಳು ಕಣ್ಣಿಗೆ ಕಂಡವು. ದಟ್ಟನೆಯ ಕಾಡನ್ನು ಬಿಟ್ಟು ಮೇಲಕ್ಕೆರಿದ ತಕ್ಷಣ ಹುಲ್ಲುಗಾವಲು ಸಿಕ್ಕಿತು. ಕತ್ತಲಾಗತೊಡಗಿದ್ದರಿಂದ ಅದ್ಬುತವಾಗಿತ್ತು ಮುಸ್ಸಂಜೆ. ಆದರೂ ನಾವು ಇನ್ನೂ ಅರ್ಧದಷ್ಟು ದಾರಿಯನ್ನು ಅದೇ ಹುಲ್ಲುಗಾವಲು, ನಂತರ, ದಟ್ಟ ಕಾಡು, ಪ್ರಪಾತಗಳನ್ನು ದಾಟಿ ಹೋಗಬೇಕಿತ್ತು. ನಮಗೆ ಸ್ವಲ್ಪ ನಿರಾಸೆಯಾಗತೊಡಗಿತು. ಅದು ಅಂಥಹ ಸುಂದರ ನಿಸರ್ಗದ ಮಡಿಲೆಂಬುದು ತಿಳಿದಿದ್ದರೂ, ಕತ್ತಲಾಗಿದ್ದರಿಂದ ಅದನ್ನು ನಾವು ಅನುಭವಿಸಲಾಗುತ್ತಿರಲಿಲ್ಲ. ಕತ್ತಲಲ್ಲಿ ಬರುವಾಗ, ದೂರದಲ್ಲಿ ಕಾಡ್ಗಿಚ್ಚು ಬಿದ್ದಿದ್ದು, ಕಾಣತೊಡಗಿತು. ಬೇಸಿಗೆಯಲ್ಲಿ ಹುಲ್ಲುಗಾವಲು ಪ್ರದೇಶದಲ್ಲಿ ಬಹಳ ಎಚ್ಚರದಿಂದಿರಬೇಕಾಗುತ್ತದೆ, ಸ್ವಲ್ಪವೇ ಬೆಂಕಿ ಬಿದ್ದರೂ, ಇಡೀ ಹುಲ್ಲುಗಾವಲೇ ನಾಶವಾಗುವುದಲ್ಲದೇ, ಅಲ್ಲಿರುವ ವನ್ಯಜೀವಿಗಳು ಸೇರಿ ಸರ್ವನಾಶವಾಗುತ್ತದೆ. ನಾವು ಹುಲ್ಲುಗಾವಲಿನ ರಸ್ತೆಯಲ್ಲಿರುವಾಗ, ಮುಂದಕ್ಕೆ ರಸ್ತೆ ಯಾವುದೆಂಬುದೇ ಅರಿಯಾದಯಿತು. ರಸ್ತೆ ಎಂದರೇ ಅದು ಬರಿ ಕಲ್ಲುಗಳು ಬಿದ್ದಿರುವು ಗುಂಡಿಯಷ್ಟೇ! ನಮ್ಮ ತಳಹದಿಯಂತೂ, ಬೊಬ್ಬೆ ಬರುವ ಮಟ್ಟಕ್ಕೆ ಆಗಿಹೋಯಿತು. ಅದರ ನಡುವೆ ನಮ್ಮ ಗಾಡಿಗಳು ಕೈ ಕೊಟ್ಟರೇ ನಮ್ಮ ಗತಿ? ಹೀಗೆಲ್ಲಾ ನಕರಾತ್ಮಕವಾಗಿ ಯೋಚಿಸಬಾರದೆಂದರೂ ಸನ್ನಿವೇಶ ನೆನಪು ಮಾಡುತ್ತದೆ. ದೂರ ದೂರದಲ್ಲಿರುವ ದೇವರಿಂದ ಹಿಡಿದು ಹತ್ತಿರದ, ಆತ್ಮೀಯ ದೇವರುಗಳನ್ನು ಸೇರಿಸಿ ಎಲ್ಲರನ್ನೂ ಬೇಡಿಕೊಂಡು, ಪ್ರಾರ್ಥಿಸಿ ಹೊರಟೆವು. ಅಂತೂ ಇಂತೂ ಕಲ್ಲಿನ ರಸ್ತೆಯಲ್ಲಿ ಬಂದು ಕೆಮ್ಮಣ್ಣುಗುಂಡಿ ತಲುಪಿ ನಮ್ಮಲ್ಲಿದ್ದ ಸಿಗರೇಟು ಹಚ್ಚಿಸಿದರೇ, ಇನ್ನೂ ಹತ್ತು ಕೀಮೀ ದೂರ ಹೋಗಬೇಕು, ನನ್ನ ಸ್ನೇಹಿತ ಇರುವುದು, ಕಲ್ಲತ್ತಿಯಲ್ಲಿ ಎಂದ ನಮ್ಮ ನಂದ. ನಾನು ಬಾಯಿಗೆ ಬಂದ ಹಾಗೆ ಬೈಯ್ದುಕೊಂಡು ವಿಧಿಇಲ್ಲದೇ ಹೊರಟೆ. ಕೆಮ್ಮಣ್ಣುಗುಂಡಿಗೆ ಬಂದು ನಿಂತಲ್ಲೇ, ಎರಡು ಮೂರು ಸ್ಥಳದಲ್ಲಿ ಜನರು ಟೆಂಟ್ ಹಾಕಿಕೊಂಡು, ಬೇಯಿಸಿಕೊಂಡು ಅದಾಗಲೇ ನಮ್ಮ ದೇವಿಯನ್ನು ಮೈಮೇಲೆ ಏರಿಸಿಹೊರಟಿದ್ದರು. ನಾವು ಕಲ್ಲತ್ತಿಗೆ ಬಂದೊಡನೆಯೇ, ನಮ್ಮನ್ನು ಯೋಗಿ ಎಂಬ ಸ್ಥಳೀಯ ಮತ್ತು ನಂದನ ಸ್ನೇಹಿತ ಬಂದು ನಮ್ಮನ್ನು ವಿಶ್ರಾಂತಿ ಗೃಹದ ರೂಮಿಗೆ ಬಿಟ್ಟು, ರೆಡಿ ಆಗಲು ಹೇಳಿ ಹೊರಟನು. ಮಧ್ಯಾಹ್ನದಿಂದ ಹೊಟ್ಟೆ ಖಾಲಿ ಇದ್ದು ಬರೀ ನೀರು ಸಿಗರೇಟಿನಿಂದ ಬಳಲಿದ್ದ ಹೊಟ್ಟೆ ನಮ್ಮ ವಿರುದ್ದ ಗೊಣಗುಟ್ಟಿತು.
ನಾನು ವಿಜಿ ಅಲ್ಲೇ ಎದುರಿದ್ದ, ಅಂಗಡಿಗೆ ಹೋಗಿ, ಬಾಳೆ ಹಣ್ಣು, ಲೇಸ್, ಪುರಿ, ಮಾಜ಼ಾ, ಅಂತಾ ಎಲ್ಲಾ ತಿಂದು ಹೊರಗೆ ಬಂದು ನೋಡಿದ ಮೇಲೆ ನಮಗೆ ಬಹಳ ಬೇಸರವಾಯಿತು. ಯೋಗಿ ತನ್ನ ಹೋಟೆಲ್ ನಡೆಸುತ್ತಿದ್ದ, ಅವನಲ್ಲಿಗೆ ಬಂದು ಆಮ್ಲೇಟ್ ಹಾಕಲು ಹೇಳಿದೆವು. ಅವನು ಬೇಯಿಸಿ ತಂದು ಹಾಕಿದ್ದು, ಹಿಂದಿರುಗುವ ಮುನ್ನವೇ ನಾಲ್ಕು ಹೋಳಾಗಿ ಖಾಲಿಯಾಗುತ್ತಿತ್ತು, ಹೀಗೆ ಅದೆಷ್ಟೂ ತಿಂದೆವು ಅದನ್ನು ಯೋಗಿ ಬಿಟ್ಟರೇ ನಾವ್ಯಾರು ಗಣನೆಗೆ ತೆಗೆದುಕೊಳ್ಳಲಿಲ್ಲ. ಅಲ್ಲಿಂದ ಪಕ್ಕದ ಊರಾದ, ಲಿಂಗದಲ್ಲಿಗೆ ಹೋಗಿ, ಹೆಂಡತರಲು ನಾನು ನಂದ ಹೊರಟೆವು. ಅಲ್ಲಿಗೆ ಹೋಗುವಾಗ ನಂದ ಆ ಊರಿನಲ್ಲಿರುವ ದೆವ್ವದ ಬಗೆಗೆ ಕಥೆ ಹೇಳಲು ಶುರುಮಾಡಿದ. ನಂದನ ಒಂದು ವಿಚಿತ್ರ ನಡುವಳಿಕೆಯೇ ಇದು. ಅವನು ಕತ್ತಲಲ್ಲಿ, ಸ್ಮಶಾನದಲ್ಲಿ, ದಟ್ಟ ಕಾಡಿನ ನಡುವೆ, ದೆವ್ವ ಭೂತಗಳ ಬಗ್ಗೆ ಮಾತನಾಡುತ್ತಾನೆ. ಮನುಷ್ಯನ ವರ್ತನೆ ಕೂಡ ಆ ಸಮಯದಲ್ಲಿ ಅದರಿಂದ ಪ್ರಚೋದನೆ ಪಡೆದು ಅದರ ಕಡೆಗೆ ಚಿಂತಿಸಿ ಕಾಣುವುದೆಲ್ಲವೂ ದೆವ್ವದಂತೆಯೋ ಭೂತದಂತೆಯೋ ಅಥವಾ ಆಗುವುದೆಲ್ಲವೂ ದೆವ್ವಗಳಿಂದಲೇ ಎನಿಸುತ್ತದೆ. ಅನೇಕಾ ಬಾರಿ ಬೈಕುಗಳು ರಾತ್ರಿಯಲ್ಲಿ ರಸ್ತೆ ಮಧ್ಯೆ ನಿಂತಾಗ ಮೊದಲು ಯೋಚನೆ ಬರುವುದೇ ಅಂಥಹುದ್ದು, ಮತ್ತೂ ಶುರುವಾಗದೇ ಹೋದರೇ ಮುಗಿದೇ ಹೋಯಿತು. ಇಂಥಹ ಸನ್ನಿವೇಶ ಸ್ವತಃ ನಂದನಿಗೇ ಆಗಿದ್ದರೂ ಕೂಡ ಅವನು ಅದನ್ನು ಬದಲಾಯಿಕೊಂಡಿಲ್ಲ. ನಾವು ವಾಪಸ್ಸು ಬರುವಾಗ ಕತ್ತಲಿನಲ್ಲಿ ಮರಗಳ ನಡುವೆ, ದನಗಳು, ಎಮ್ಮೆಗಳು ಕೂಡ ನಮಗೆ ದೆವ್ವದಂತೆ ಕಾಣತೊಡಗಿದೆವು. ಅವನು ಹೇಳಿದ್ದು ಅದೇ ತೆರೆನಾದ ಕಥೆಯಾದ್ದರಿಂದ, ನಮ್ಮ ಕಥೆಗೆ ಎಮ್ಮೆಯೇ ನಾಯಕಿಯಾಗಿದ್ದಳು. ವಾಪಸ್ಸು ಬಂದು ನೋಡುವಾಗ ಸುಧಿ ಮಲಗಿದ್ದ. ಹೆಂಡವಿದ್ದರೂ, ಕೋಳಿ ಮಾಂಸವಿದ್ದರೂ ತಿನ್ನುವ ಮನಸ್ಥಿತಿ ನಮಗಿರಲಿಲ್ಲ. ಅದಕ್ಕೆ ಕಾರಣ ನಿನ್ನೆಯ ರಾತ್ರಿ ನಿದ್ದೆ ಇಲ್ಲದ ಪಯಣ, ಮತ್ತು ಆಗಷ್ಟೇ ತಿಂದಿದ್ದ ಆಮ್ಲೇಟ್. ಸುಧಿ ಈ ರೂಮಿನಲ್ಲಿ ದೆವ್ವವಿದೆ, ಆದ್ದರಿಂದ ನನಗೆ ಇಲ್ಲಿರಲು ಆಗುತ್ತಿಲ್ಲವೆಂದು ಕ್ಯಾತೆ ತೆಗೆದ. ಇಲ್ಲಿಂದ ಶುರುವಾದ ಅವನ ದೆವ್ವದ ಕಥೆ ಮೊನ್ನೆ ಮೊನ್ನೆಯವರೆಗೂ ನಮ್ಮನ್ನು ಹಿಂಸಿಸಿತ್ತು. ನಾವು ದೆವ್ವವನ್ನು ಹುಡುಕಿಕೊಂಡು ಯುನಿವರ್ಸಿಟಿಯಲ್ಲಿ ಅಮವಾಸ್ಯೆಯಂದು ಹುಣ್ಣಿಮೆಯಂದು ನಡುರಾತ್ರಿಯಲ್ಲಿ ಅಲೆದಾಡಿದೆವು.
ರಾತ್ರಿ ಅವನು ಕುಡಿಯದೇ ಮಲಗಿದ್ದರೂ, ಬೆಳ್ಳಿಗ್ಗೆ ಏಳು ಗಂಟೆಗೆ ನಾವೆಲ್ಲರೂ ಟೀ ಕುಡಿಯುವಾಗ ಅವನು ಹೆಂಡ ಕುಡಿದನೆಂದರೇ ಅವನ ನಿಯತ್ತಿನ ಬಗ್ಗೆ ನಿಮಗೂ ಅರಿವಾಗಿರಬೇಕಲ್ಲವೆ. ಕುಡಿದು ನಂತರ ಯೋಗಿಯ ಹೋಟೆಲ್ ನಲ್ಲಿ ಚಿತ್ರಾನ್ನ ತಿಂದು, ಟೀ ಕುಡಿದು, ದಮ್ ಹೊಡೆದು ಹೊರಟೆವು. ನನಗೆ ಸಣ್ಣ ಹೋಟೆಲಿನಲ್ಲಿ ಸಿಗುವ ಚಿತ್ರಾನ್ನ, ಅನ್ನ ಸಂಬಾರ್ ಎಂದರೇ ಎಲ್ಲಿಲ್ಲದೇ ಆಸೆ, ಸಿಕ್ಕಿದ್ದನ್ನು ದೋಚುವಷ್ಟು ತಿಂದುಬಿಡುತ್ತೇನೆ. ನಂತರ ಹಾಗೇಯೇ ಮೇಲಕ್ಕೆ ಬಂದು ಕೆಮ್ಮಣ್ಣುಗುಂಡಿಯಲ್ಲಿನ ಉದ್ಯಾನವನ್ನು ನೋಡಿ ಆನಂದಿಸಿ, ಅಲ್ಲಿರುವ ಜ಼ೆಡ್ ಪಾಯಿಂಟ್ ಹತ್ತಿರಕ್ಕೆ ಹೋದೆವು. ಕೆಮ್ಮಣ್ಣುಗುಂಡಿ ಅನೇಕಾ ಸಿನೆಮಾಗಳಲ್ಲಿ ಬಂದಿದೆ. ಅದು ಸುಂದರ ಪ್ರವಾಸಿ ತಾಣವೂ ಹೌದು. ನನಗೆ ಚಿಕ್ಕಮಗಳೂರಿನ ಜನರಲ್ಲಿರುವ ಒಂದು ಅಭಿಮಾನವೇ ಇದು. ಅಲ್ಲಿ ಭಾನುವಾರವಾಯಿತೆಂದರೇ, ಮನೆ ಮಕ್ಕಳು ಸಮೇತ ಹೋಗಿ ಹೊರಗಡೆ ಆನಂದಿಸಿ ಬರುತ್ತಾರೆ. ಹೈದರಾಬಾದಿನಲ್ಲಿಯೂ ಇದು ಮಾಮೂಲಿ. ಬೆಂಗಳೂರಿನ ಸೋಮಾರಿ ಜನಕ್ಕೆ ಭಾನುವಾರವೆಂದರೇ ಮನೆಯಲ್ಲಿ ಮಲಗುವುದು, ಸಾಧ್ಯವಾದರೇ ಒಂದಿಷ್ಟು ಮಾಂಸಭಕ್ಷಣೆ. ಆದ್ದರಿಂದಲೇ, ಚಿಕ್ಕಮಗಳೂರು ಜಿಲ್ಲೆಯ ಯಾವುದೇ ಪ್ರವಾಸಿ ಸ್ಥಳಗಳಿಗೆ ಹೋದರೇ, ಸ್ಥಳೀಯರೇ ಹೆಚ್ಚಿರುತ್ತಾರೆ.ಅಂತೂ ಇಂತೂ ಅಲ್ಲಿ ಸಮಯ ಕಳೆದು, ನಂತರ ಬಾಬಾ ಬುಡನ್ ಗಿರಿಯ ಮಾರ್ಗವಾಗಿ ಚಿಕ್ಕಮಗಳೂರು ತಲುಪುವ ಯೋಜನೆ ಹಾಕಿದೆವು. ಅಲ್ಲಿಯೇ ಇದ್ದ ಸಣ್ಣ ಹೋಟೆಲ್ ನಲ್ಲಿ ತಿಂದು, ಅಲ್ಲಿಂದ ಕಲ್ಲಿನ ರಸ್ತೆಯಲ್ಲಿ ಗಿರಿಯ ರಸ್ತೆ ಹಿಡಿದೆವು. ಅತಿ ಸುಂದರವಾದ ನಿಸರ್ಗದ ಮಡಿಲೆಂದರೇ ತಪ್ಪಿಲ್ಲ. ಯಾವುದೇ ಪ್ರವಾಸಿ ಪರಿಸರ ಪ್ರೇಮಿಯನ್ನು ಆಕರ್ಷಿಸುವ ಹೆಚ್ಚೆಚ್ಚು ಆಕರ್ಷಿಸುವುದು, ಹುಲ್ಲುಗಾವಲಿನ ಹಸಿರು, ಕುದುರೆಮುಖ, ಕೆಮ್ಮಣ್ಣುಗುಂಡಿ, ಚಾರ್ಮಾಡಿ, ಪುಷ್ಪಗಿರಿ, ತಡಿಯಂಡಮೋಲ್, ಮಂದಾಲಪಟ್ಟಿ, ಇವೆಲ್ಲವೂ ಅಷ್ಟೇ, ನೀವು ಅಲ್ಲಿ ಕುಳಿತರೆಂದರೇ ಎದ್ದು ಹೊರಡುವ ಮನಸ್ಸೇ ಬರುವುದಿಲ್ಲ ಅಂತಹ ವಾತಾವರಣ ನಿಮಗಿರುತ್ತದೆ. ಅದೆಲ್ಲವನ್ನೂ ಸವಿದು ಹೊರಡುವ ಸಮಯಕ್ಕೆ ಮಳೆ ಬರಲಾರಂಬಿಸಿತು. ಮಳೆ ಬಂತೆಂದರೇ ಈ ರಸ್ತೆಗಳಲ್ಲಿ ಓಡಾಡುವ ಭಾಗ್ಯ ನನ್ನ ಬಿಟ್ಟು ಹೋದ ಜೀವದ ಗೆಳತಿಗೂ ಬೇಡ. ಅಷ್ಟು ಘೋರವೆನಿಸುತ್ತದೆ.
ನಾವು ಮಳೆಯಲ್ಲಿ ಹೆಚ್ಚೆಂದರೇ ನಾಲ್ಕು ಕೀಮೀ ಬಂದಿರಲೂ ಇಲ್ಲ, ಸಂಪೂರ್ಣ ಒದ್ದೆಯಾಗಿದ್ದೆವು. ಮಲೆನಾಡಿನ ಮಳೆಯಂದರೇ ಹಾಗೆ, ಜಡಿ ಹಿಡಿದ ಹಾಗೆ ಸುರಿಯುತ್ತಲೇ ಇರುತ್ತದೆ. ಒಮ್ಮೆ ಬಂತೆಂದರೇ ಮುಗಿಯುತು ಹೊಸದಾಗಿ ಬಂದ ನೆಂಟರ ಹಾಗೆ ಬೇಗಹೋಗುವುದಿಲ್ಲ, ಇರಲು ಸುಮ್ಮನೆ ಬಿಡುವುದೂ ಇಲ್ಲ. ಮಧ್ಯೆದಲ್ಲಿ ಒಮ್ಮೆ ನಿಂತೆವು, ನಮ್ಮ ಅದೃಷ್ಟ ಕೈಕೊಟ್ಟು ಜೇಬಿನಲ್ಲಿದ್ದ ಸಿಗರೇಟು ಪೂರ್ತಿ ಒದ್ದೆಯಾಗಿದ್ದವು. ಮಳೆಯನ್ನು ಶಪಿಸುತ್ತಾ ಬೆಟ್ಟದ ಮೇಲಕ್ಕೆ ಹೋದೆವು. ಬಾಬಾ ಬುಡನ್ ಗಿರಿಯನ್ನು ನಾನು ನನ್ನ ಪಿಯುಸಿ ಸಮಯದಲ್ಲಿ ನೋಡಿದ್ದೆ. ಆಗ, ಈಗಿನಷ್ಟೂ ಪ್ರಚಾರ ಸಿಕ್ಕಿರಲಿಲ್ಲ. ಚಿಕ್ಕಮಗಳೂರು ಬಿಜೆಪಿಗೆ ವರವಾಗಿದ್ದು ಬಾಬಾ ಬುಡನ್ ವಿವಾದ. ನನಗೆ ನಿಜಕ್ಕೂ ಅರ್ಥವಾಗದ ವಿಷಯವೇ, ಈ ಜಾತಿ, ಧರ್ಮದ್ದು. ಎಂದು ಕೇಳಿಲ್ಲದ, ದೇವರುಗಳು, ನಮ್ಮ ಧರ್ಮದ್ದು ಎಂದರೇ ನಮಗೆ ದಿಡೀರನೆ ಅಭಿಮಾನ ಉಕ್ಕಿ ಹರಿಯುತ್ತದೆ. ಅದರಲ್ಲೀ ಮುಸ್ಲಿಮ್ ಭಾಂಧವರೇನೂ ಕಮ್ಮಿ ಇಲ್ಲ ಹಿಂದುಗಳೇನೂ ಕಮ್ಮಿಯಿಲ್ಲ, ಯಾರು ಯಾರಿಗೂ ಕಮ್ಮಿಯಿಲ್ಲವೆಂಬಂತೆ ವರ್ತಿಸುತ್ತಾರೆ. ನೀವು ಬಾಬಾ ಬುಡನ್ ಗಿರಿಗೆ ಹೋದರೂ ಅಷ್ಟೇ, ಎರಡು ಧರ್ಮದ ಜನರು ಈ ಸ್ಥಳ ಬಿಟ್ಟರೇ ಮತ್ತ್ಯಾವ ಸ್ಥಳವೂ ಪೂಜೆಗೆ ಯೋಗ್ಯವಲ್ಲವೆನ್ನುವ ಮಟ್ಟಕ್ಕೆ ಅಲ್ಲಿಗೆ ಬಂದು ಪೂಜಿಸುತ್ತಾರೆ. ಇದರಲ್ಲಿ ನಂಬಿಕೆಗಿಂತ ಪ್ರತಿಷ್ಟೆ ಅಧಿಕವಾಗಿರುತ್ತದೆ. ಜನರು ಎಲ್ಲವನ್ನು ಅಭಿಮಾನದ ಹೆಸರಿನಲ್ಲಿ, ಅಹಂಗೆ ತೆಗೆದುಕೊಳ್ಳುತ್ತಾರೆ. ಇದು ವ್ಯಕ್ತಿಗತ ಎನ್ನಲು ಸಾಧ್ಯವೇ ಇಲ್ಲ. ಎಲ್ಲರಿಗೂ ಅನ್ವಯಿಸುತ್ತದೆ. ಅಣ್ಣ ತಂಗಿ ಅಕ್ಕತಮ್ಮ ಎಂದು ಶುರುವಾಗುವ ಇದು ನನ್ನ ಧರ್ಮ ನನ್ನ ಜಾತಿಯಿಂದ ನನ್ನ ದೇಶ ಎನ್ನುವ ತನಕವೂ ಹೋಗುತ್ತದೆ. ಬೇಲೂರು ಹಳೇಬೀಡಿಗೆ ಕಾಲಿಟ್ಟರೂ ಅಷ್ಟೇ, ಮೊದಲು ಬೈಯ್ಯುವುದು ಮುಸ್ಲೀಮರಿಗೆ, ಸಾಬರು ಬಂದು ಎಲ್ಲವನ್ನು ಹಾಳು ಮಾಡಿದರು ಅದು ಇದು ಎಂದು. ಯುದ್ದದಲ್ಲಿ ಯಾರೂ ಅಣ್ಣ ತಮ್ಮನೆನ್ನುವುದಿಲ್ಲ, ಯುದ್ದ ಎಲ್ಲರಿಗೂ ಒಂದೇ ಅಲ್ಲವಾ?
ಬಾಬಾ ಬುಡನ್ ಗಿರಿಯನ್ನು ನೋಡುವಾಗ ಸಾಕಷ್ಟು ಮಳೆ ಸುರಿಯುತ್ತಿತ್ತು. ಬಜ್ಜಿ ಬೋಂಡಾ ಸಿಗರೇಟು ಟೀ ಮುಗಿಸಿಕೊಂಡು ಗಾಡಿಗೆ ಸ್ವಲ್ಪ ಪೆಟ್ರ‍ೋಲ್ ಹಾಕಿಸಿ ಹೊರಟೆವು. ನಮ್ಮ ಬೈಕಿನಲ್ಲಿ ಪೆಟ್ರ‍ೋಲ್ ಖಾಲಿ ಹಾಗುವ ಸಂಭವ ಹೆಚ್ಚಿತ್ತು, ಆದ್ದರಿಂದ ಜೊತೆಯಲ್ಲಿಯೇ ಹೋಗೋಣ ಖಾಲಿ ಆದರೇ ಅಲ್ಲಿ ಒಂದು ಗಾಡಿಯಿಂದ ಮತ್ತೊಂದಕ್ಕೆ ತೆಗೆಯೋಣ ಎಂದೆಲ್ಲಾ ಯೋಜನೆ ಹಾಕುತ್ತಿರುವಾಗಲೇ ನಮಗೇ ಪೆಟ್ರೋಲ್ ಸಿಕ್ಕಿತು. ನಾನು ಗಮನಿಸಿದ ಹಾಗೆ ಬಹಳಷ್ಟು ಬಾರಿ ನಾವು ವಿನಾಕಾರಣ ಪ್ರತಿಕ್ರಿಯಿಸಿ ಸಂಧರ್ಭಗಳನ್ನು ಬಿಗಡಾಯಿಸುತ್ತೇವೆ. ಪೆಟ್ರೋಲ್ ಕಡಿಮೆ ಇದೆ ಎನ್ನುವಾಗಲೇ, ಅಯ್ಯೋ ನಾನು ಅಲ್ಲಿಯೇ ಹಾಕಿಸು ಎಂದೇ ನೀನು ಕೇಳಲಿಲ್ಲ ಎಂದು ಒಬ್ಬ ಹೇಳಿದರೇ, ಮತ್ತೊಬ್ಬ ಇವನು ಯಾವಗಲೂ ಹೀಗೆ ಎನ್ನುವುದು. ಅದಕ್ಕೆ ಅವನು ನನ್ನ ಗಾಡಿ ಮೈಲೇಜು ಕಮ್ಮಿ ಆಗಿದೆ, ಇದು ಪೆಟ್ರ‍ೋಲ್ ಬಂಕಿನ ಮೋಸ ಎಂದು, ಅಥವಾ ಗಾಡಿ ರಿಪೇರಿ ಮಾಡುವ ಮಂಜನೇ ಕಾರಣನೆಂದು, ಹೀಗೆ ಕನಿಷ್ಟ ಹತ್ತು ಹದಿನೈದು ನಿಮಿಷ ಇರುವ ಇಲ್ಲದವರ ಎಲ್ಲರಿಗೂ ಉಗಿದೆವು. ಅದಲ್ಲದೇ ಇಲ್ಲಸಲ್ಲದೇ ಮನಸ್ಸನ್ನು ಹಾಳು ಮಾಡಿಕೊಂಡೆವು. ಈ ರೀತಿಯ ಸನ್ನಿವೇಶಗಳು ನಮ್ಮ ದಿನನಿತ್ಯ ಜೀವನದಲ್ಲಿ ಸದಾ ನಡೆಯುತ್ತಲೇ ಇರುತ್ತವೆ. ಸರಿಯಾಗಿ ಗಮನಿಸಿದರೇ ಇವೆಲ್ಲವೂ ನಾವು ಪ್ರತಿಕ್ರಿಯಿಸಬೇಕಾದವುಗಳು ಅಲ್ಲವೇ ಅಲ್ಲ. ಸ್ಪಂದನೆ ಮತ್ತು ಪ್ರತ್ರಿಕ್ರಿಯೆ ಎರಡರ ನಡುವೆ ತೆಲುವಾದ ವ್ಯತ್ಯಾಸವಿದೆ ಅರ್ಥೈಸಿಕೊಳ್ಳಬೇಕು. ನಾವು ಬೆಟ್ಟದಿಂದ ಚಿಕ್ಕಮಗಳೂರು ದಾರಿ ಹಿಡಿಯುವಾಗ ಆಗಲೇ ಎಂಟು ಗಂಟೆಯಾಗಿತ್ತು. ಬರುವಾಗ ನಾವು ಸ್ವಲ್ಪ ದಾರಿ ತಪ್ಪಿದಂತೆ ಎನಿಸಿದರೂ ಸರಿಯಾದ ರಸ್ತೆಯಲ್ಲಿಯೇ ಇದ್ದೆವು. ಬರುತ್ತಾ ದಾರಿಯಲ್ಲಿ, ರಸ್ತೆಯ ಬದಿಯಲ್ಲಿ ಹುಡುಗರು ಹುಡುಗಿಯರು ಸೇರಿಕೊಂಡು ಕುಡಿದು ಕುಣಿಯುತ್ತಿದದ್ದು ಸಾಮಾನ್ಯ ದೃಶ್ಯವಾಗಿತ್ತು. ಮೋಜೆಂದರೇ ನಮಗೂ ಖುಷಿ ಎನಿಸುತ್ತದೆ, ಮೋಜಿನಲ್ಲಿ ಕೂಡ ಆರೋಗ್ಯವಂತ ಮೋಜು ಮಾಡಬಹುದೆಂಬುದು ಅನೇಕರಿಗೆ ತಿಳಿಯುವುದಿಲ್ಲ, ಮೋಜೆಂದರೇ, ಕುಡಿಯುವುದು, ಕುಡಿದು ತೇಲುವುದು ಎಂದು ಭಾವಿಸುತ್ತಾರೆ. ಕುಡಿದು ತಮ್ಮದೇ ಹಾದಿಯಲ್ಲಿ, ಕುಣಿದು ಸಂಭ್ರಮಿಸುವುದು ಇದೆಯಲ್ಲಾ, ಅದು ಅದ್ಬುತಾ!
ನಾನು ಸದಾ ನನ್ನ ಬೈಕ್ ಅನ್ನು ಜೀವಂತ ವಸ್ತುವೆಂದೇ ತಿಳಿದಿದ್ದೇನೆ, ಹೆಚ್ಚೆಚ್ಚು ಒತ್ತಡ ಹೇರಿ ಗಾಡಿ ಓಡಿಸುವ ಯಾವುದೇ ಡ್ರೈವರ್ ಅನ್ನು ಕಂಡರೂ ನನಗೆ ಕೋಪ ಬರುತ್ತದೆ. ಈ ವಿಷಯದಲ್ಲಿ ನನಗೂ ವಿಜಿಗೂ ಬಹಳಷ್ಟು ಬಾರಿ ವಾದಗಳು ನಡೆದಿವೆ. ಅವನ ಪ್ರಕಾರ ಗಾಡಿ ಇರುವುದೇ ಓಡಿಸುವುದಕ್ಕೆ, ನನ್ನ ಪ್ರಕಾರ ಅದು ನಮ್ಮ ಸ್ನೇಹಿತ, ಸ್ನೇಹಿತನಂತೆಯೇ ನೋಡಿಕೊಳ್ಳಬೇಕು. ನಂದನೂ ಹಾಗೇಯೇ ನಡೆದುಕೊಳ್ಳುತ್ತಾನೆ. ಅಂದು ಬುಡನ್ ಗಿರಿಯಿಂದ ಕೆಳಗಿಳಿದ ಮೇಲೆ, ರಸ್ತೆ ಕೊರಕಲು ಬಿದ್ದಿದ್ದರಿಂದ ಎಚ್ಚರಿಕೆಯಿಂದ ಓಡಿಸಬೇಕಾದದ್ದು ಅವನ ಜವಬ್ದಾರಿ ಅಂಥಹ ಗುಂಡಿಯಲ್ಲಿಯೂ ತಾತ್ಸಾರದಿಂದ ಓಡಿಸಲು ಹೋಗಿ ಬೈಕಿನ ಬಲ್ಬ್ ಬರ್ನ್ ಆಗುವಂತೆ ಮಾಡಿಕೊಂಡ. ರಾತ್ರಿ ಆಗಲೇ ೯ಗಂಟೆ ಆಗಿತ್ತು. ನಾನು ನಂದ ವಾಪಸ್ಸು ಚಿಕ್ಕಮಗಳುರಿಗೆ ಬಂದು ಬಲ್ಬ ಹುಡುಕಿ ಒಂದು ಗಂಟೆ ವ್ಯರ್ಥಮಾಡಿದೆವು. ಕಡೆಗೆ ಹಾಗೇಯೇ ಒಂದು ಬೈಕಿನ ಬೆಳಕಿನ ನೆರವಿನಿಂದ ಹೋಗುವುದೆಂದು ನಿರ್ಧರಿಸಿದೆವು. ಅಷ್ಟೊತ್ತಿಗೆ ವಿಜಿ ಆರೋಗ್ಯ ಸ್ವಲ್ಪ ಹದಗೆಟ್ಟಿ ಅವನು ಬಸ್ಸಿನಲ್ಲಿ ಹೋಗಲು ನಿರ್ಧರಿಸಿದನು. ಅವನನ್ನು ಬೆಲೂರಿನಿಂದ ಅವರ ಊರಿನ ಬಸ್ ಹತ್ತಿಸಿ, ಅಲ್ಲಿಯೇ ನಾಲ್ಕು ಇಡ್ಲಿ ತಿಂದು, ಹೊರಟೆವು. ನಮ್ಮ ಬೈಕಿನ ಬೆಳಕಿನ ನೆರವಿನಿಂದ ನಾವು ಹೋಗುವುದೇ ಕಷ್ಟ ಅಂಥಹುದರಲ್ಲಿ ರಾತ್ರಿ ಇಡೀ ಬೆಂಗಳೂರಿನ ತನಕ ೨೫೦ ಕೀಮೀನಷ್ಟನ್ನು ತಲುಪುವುದು? ಆಗಿದ್ದಗಾಲಿ ಎಂದು ಹೊರಟೆವು, ದಾರಿಯಲ್ಲಿ ಬರುವಾಗ ಹಾಸನ ಬಿಟ್ಟು ಸ್ವಲ್ಪ ದೂರಕ್ಕೆ ಎರಡು ಅಪಘಾತಗಳು ನಮ್ಮನ್ನು ಸ್ವಲ್ಪ ದೃತಿಗೆಡುವಂತೆ ಮಾಡಿದವು. ನಾವು ಚನ್ನರಾಯಪಟ್ಟಣಕ್ಕೆ ಬಂದು ಅರ್ಧ ತಾಸು ವಿಹಾರಿಸಿ, ನಿಧಾನಕ್ಕೆ ಹೋಗೋಣವೆಂದು ನಿರ್ಧರಿಸಿದೆವು. ಆದರೂ ನಂದ ಒಮ್ಮೊಮ್ಮೆ ಹುಚ್ಚು ಹಿಡಿದವನಂತೆ ಹೋಗಿಬಿಡುತ್ತಿದ್ದ, ನಂದನಲ್ಲಿ ಇರುವ ಕೆಟ್ಟಗುಣವೆಂದರೇ, ಗಾಡಿ ಓಡಿಸುವಾಗ ತುಂಬಾ ಸೈಡಿಗೆ ಹೋಗುವುದು, ವಿಜಿಯದ್ದು ಇದಕ್ಕೆ ವಿರುದ್ದ ರಸ್ತೆ ಮಧ್ಯೆದಲ್ಲಿಯೇ ಹೋಗುವುದು. ಇವರಿಬ್ಬರು ಗಾಡಿ ಓಡಿಸುವಾಗ ಹಿಂದೆ ಕುಳಿತಿರುವವನು ಅವನ ಜೀವವನ್ನು ಒತ್ತೆಯಿಟ್ಟಿರಬೇಕು. ನನ್ನ ಹಿಂದೆ ಕುಳಿತಿದ್ದ ಸುಧಿ ಬೇರೆ ಆಗಾಗ ನಿದ್ದೆ ಮಾಡುವುದು, ಮುಂದೆ ನಂದ ಹುಚ್ಚನಂತೆ ಗಾಡಿ ಓಡಿಸುವುದು ನನಗೋ ಈ ನನ್ಮಕ್ಕಳ ಸಹವಾಸವೇ ಬೇಡವೆನಿಸತೊಡಗಿತ್ತು. ಬೆಳ್ಳೂರು ಇನ್ನು ಎರಡು ಕೀಮಿ ಇರುವಾಗ ನನ್ನ ಬೈಕ್ ಇದ್ದಕ್ಕಿದ್ದ ಹಾಗೆ ಎಳೆದಾಡಿದ ಹಾಗೆ ಆಯಿತು, ನಾನು ಗಾಡಿ ಪಂಚರ್ ಆಯಿತೆಂದು ತಿಳಿದು, ನಿಲ್ಲಿಸಿ ನೋಡುವಾಗ ಏನೂ ಆಗಿರಲಿಲ್ಲ. ಅದು ಸುಧಿ ನಿದ್ದೆ ಮಾಡುತ್ತಿದ್ದರಿಂದ ಅವನು ಆಚೀಚೆ ಎಳೆದಾಡಿರಬಹುದೆನಿಸಿತು. ಅಷ್ಟೊತ್ತಿಗೆ ನಂದ ನಮಗಿಂತ ಬಲು ದೂರ ಯಾವುದೋ ಬಸ್ಸಿನ ಲೈಟ್ ಹಿಡಿದು ಹೋಗಿದ್ದ. ನಾವು ಅಲ್ಲಿ ಗಾಡಿ ಅಲ್ಲಾಡಿದ್ದು, ದೆವ್ವದ ಕೆಲಸವೆಂದು ದೆವ್ವದ ಮೇಲಕ್ಕೆ ಹಾಕಿದೆವು.
ಮುಂದೆ ಬರುವಾಗ ನನಗೆ ನಿದ್ದೆ ಜೊಂಪು ಹತ್ತತೊಡಗಿತು. ನಿದ್ದೆ ತಡೆಯಲಾಗದೇ ಬರುತ್ತಿದ್ದರೇ ನಂದ ನನ್ನನ್ನು ವೇಗದಿಂದ ಬಾ ಎನ್ನುತ್ತಿದ್ದ. ಅತಿ ವೇಗ ತಿಥಿ ಬೇಗ ಎಂದರೂ ಕೇಳದೆ, ಎಂಬತ್ತು ತೊಂಬತ್ತು ವೇಗವೂ ಕಡಿಮೆ ಎನಿಸಿತ್ತು ಅವನಿಗೆ. ಅಂತೂ ಇಂತೂ ನಾವು ಮುಂಜಾನೆ ಐದು ಗಂಟೆಯ ಹೊತ್ತಿಗೆ ಸುಂಕದಕಟ್ಟೆ ತಲುಪಿದೆವು. ಅವರನ್ನು ಬಿಟ್ಟು ನಾನು ಮನೆಗೆ ಹೊರಡುವಾಗ ನನ್ನ ಗಾಡಿಯ ಬಲ್ಬ್ ಹತ್ತುತಿರಲಿಲ್ಲ. ಅಯ್ಯೋ ದೇವರೇ ಸದ್ಯಾ ಇಲ್ಲಿಯ ತನಕವಾದರೂ ತಲುಪಿಸಿದೆಯಲ್ಲ ಧನ್ಯವಾದಗಳು ಎಂದೆ.

08 ಸೆಪ್ಟೆಂಬರ್ 2010

ನಿರಂತರ ನಿರುತ್ತರ!!!

ಸತ್ತು ಹೋಗುವಷ್ಟೂ ನಿನ್ನನ್ನು ಪ್ರೀತಿಸುತ್ತೇನೆ, ನೀನಿಲ್ಲದೇ ನನ್ನ ಬದುಕೇ ಇಲ್ಲವೆಂದು ಎಲ್ಲರಿಗೂ ಹೇಳಲಾಗುವುದಿಲ್ಲ. ಇದು ನಿನಗೆ ನಿನ್ನೊಬ್ಬಳಿಗೆ ಮಾತ್ರ ಹೇಳಲು ಸಾಧ್ಯ. ನಿನಗಿಂತಲೂ ಬಹುದೊಡ್ಡದಾಗಿರುವುದು ಈ ಭೂಮಿಯಲ್ಲಿ ಇರಲು ಸಾಧ್ಯವಿಲ್ಲ. ನನ್ನ ಎಲ್ಲಾ ನಿನ್ನೆಗಳು, ಎಲ್ಲಾ ನಾಳೆಗಳು ನಿನ್ನಿಂದಲೇ ತುಂಬಿವೆ. ಎಲ್ಲಿಯೂ ಎಂದಿಗೂ ಬೇಡಿಲ್ಲ ಬೇಡುವ ಜಾಯಮಾನ ನನ್ನದಲ್ಲ, ಹಾಗೆಂದು ಕಿತ್ತುಕೊಳ್ಳುವ ಮನಸ್ಸು ನನ್ನದಲ್ಲ. ನನ್ನದು ಕೇವಲ ನನ್ನದನ್ನು ಮಾತ್ರವೇ ಇಷ್ಟ ಪಡುವ ಮನಸ್ಸು ನನ್ನದು. ಬೇರೆಯವರ ಏನನ್ನೂ ಬಯಸಿಲ್ಲ ಬಯಸುವುದೂ ಇಲ್ಲ. ಕೊಡುವುದರಲ್ಲಿರುವ ಸುಖವೇ ಬೇರೆ ಎಂದು ಎಂದೋ ಓದಿದ್ದನ್ನೇ, ಆದರೂ ನಾನು ನಿನ್ನ ಹಿಂದೆ ಅಲೆದು, ಅಲೆದು, ನಿನಗಾಗಿ ಪರದಾಡಿ, ನೀನು ಇನ್ನೇನೂ ಸಿಕ್ಕಿದೆ ಎನ್ನುವಾಗ, ನಿನ್ನಿಂದ ದೂರಾಗುವ ವೇಳೆ ಬಂತೆಂದರೇ, ಅದು ಆಘಾತವೇ ಸರಿ. ನಾನು ಇನ್ನೂ ಬದುಕಿ ಬರುವುದೇನು? ನೀನೇ ತಾನೇ ನನ್ನೆಲ್ಲಾ ಕನಸುಗಳಿಗೆಲ್ಲಾ ವಿಷಯವೇ ನೀನಲ್ಲವೇ. ಪ್ರತಿ ಕ್ಷಣ, ಕ್ಷಣದೊಳಗೂ ನಾನು ನಿನ್ನನ್ನೇ ಜಪಿಸುತ್ತಿದ್ದೆ. ಬರಡಾಗಿದ್ದ ಬಾಳಲ್ಲಿ ನೀನು ಬಂದೆ ಬೆಳಕಾಗಿ ಎನ್ನುವುದನ್ನು ನಾನು ಒಪ್ಪುವುದಿಲ್ಲ. ನನ್ನ ಜೀವನ ಇತ್ತು ಅದಕ್ಕೊಂದು ರೂಪು ಬೇಕಿತ್ತು. ಆ ಸಮಯಕ್ಕೆ ನೀನು ಬಂದೆ, ಮೂರು ದಿನವಾ ಮೂರು ವರ್ಷವಾ ಮುವತ್ತು ತಿಂಗಳ? ನನ್ನೆಲ್ಲಾ ನಗುವಿಗೂ ಕಾರಣವಾದವಳು ನೀನಲ್ಲವೇ? ಕೇವಲ ನಗು ತಂದಿದ್ದಕ್ಕೆ ನನಗೆ ನೀನು ಹಿಡಿಸಿದ್ದಲ್ಲಾ, ನಿನ್ನಲ್ಲಿರುವ ಸಾವಿರ ಸಾವಿರ ಗುಣಗಳು ನಿನ್ನೊಂದಿಗೆ ಬೆರೆಯಲು ನನ್ನನ್ನು ಸೆಳೆದಿವೆ. ಕೇವಲ, ಹೊರನೋಟಕ್ಕೆ ನಾನು ನಿನ್ನನ್ನು ಇಷ್ಟಪಡಲಿಲ್ಲ. ಕೆಟ್ಟ ಕಾಲದಲ್ಲಿ, ನಮ್ಮ ನೆರಳು ಕೂಡ ನಮ್ಮ ಹಿಂದೆ ಬರುವುದಿಲ್ಲ.
ಇದು ಬಹಳ ಸತ್ಯವೆನಿಸಿದರೂ, ಕೂಡ ನಾವು ಎಂಥಹ ಸಮಯದಿಲ್ಲಿದ್ದರೂ, ನಮ್ಮೊಂದಿಗಿರುವುದು, ನೆನಪು. ಜೀವನದಲ್ಲಿ ಬರುವ ಎಲ್ಲಾ ಕೆಟ್ಟ ದಿನಗಳನ್ನು ನೆನಪಿಡುವ ನಾವು, ಒಳ್ಳೆಯ ಕ್ಷಣಗಳ್ಳನ್ನು ನಿರ್ಲಕ್ಷಿಸುವುದು ಏಕೆ? ನಾವು ಪ್ರೀತಿಸಿದ ವ್ಯಕ್ತಿ ದೂರಾದೊಡನೆ ಅವರ ನೆನಪುಗಳು ಸತ್ತು ಹೋಗುವುದಾದರೂ ಏಕೆ? ನೆನಪುಗಳನ್ನೆ ಕಟ್ಟಿ ಬದುಕಬೇಕಾ? ಇಲ್ಲ ಅವರೊಂದಿಗಿದ್ದ ಕ್ಷಣಗಳ ಒಳ್ಳೆಯದನ್ನು ಬಯಸಿ ಅದನ್ನು ಮಾತ್ರ ಇಟ್ಟು ಬದುಕುವ ಮಾರ್ಗ ಹುಡುಕಬೇಕಲ್ಲವೆ. ಬದುಕಿದ್ದು ನಮ್ಮನ್ನು ಬಿಟ್ಟು ಹೋದರೆ ನಾವು ವ್ಯಥೆ ಪಡುತ್ತೇವೆ, ಸಾಯಲು ಪ್ರಯತ್ನಿಸುತ್ತೇವೆ, ನನ್ನಂಥಹ ಕುಡುಕರಿಗೊಂದು ಅವಕಾಶ ಸಿಗುತ್ತದೆ, ದುಃಖವೆಂದು ಬಣ್ಣ ಕಟ್ಟಿ ಕುಡಿಯುತ್ತೇವೆ, ಕುಡಿದ ಅಮಲಿನಲ್ಲಿ ಪ್ರೀತಿಯನ್ನು ಸಪ್ಪೆಯಾಗಿಸುತ್ತೇವೆ. ಕುಡಿದಾಗ ಪ್ರೀತಿಯ ಮೇಲೆ ಬರುವ ಅಸಹ್ಯಕರ ಮಾತುಗಳು, ವರ್ಷಗಟ್ಟಲೇ ಪ್ರೀತಿಸಿದ ಜೀವವನ್ನು ಮಾನಭಂಗ ಮಾಡುತ್ತವೆ. ಎಂಥಹ ಕೊಳಕು ಮನಸ್ಸು ನಮ್ಮದಲ್ಲವೇ? ಕುಡಿದ ಅಮಲಿನಲ್ಲಿ ಕೆಲವೊಮ್ಮೆ ಪ್ರೀತಿಯ ಬಗೆಗೆ ಮರುಕಂಪ ಬರುತ್ತದೆ, ಪ್ರೀತಿಸಿದವರ ಮೇಲೆ ಅನುಕಂಪವುಂಟಾಗುತ್ತದೆ. ಅವರ ಸನ್ನಿವೇಶ, ಪರಿಸ್ಥಿತಿ, ನಮ್ಮನ್ನು ಎಬ್ಬಿಸುತ್ತದೆ. ಪರಿಸ್ಥಿತಿಯನ್ನು ಎದುರಿಸದೇ ದೂರಾಗುವದಾ ಪ್ರಿತಿ, ಪ್ರೀತಿಗಾಗಿ ಏನು ಬೇಕಿದ್ದರೂ ಮಾಡಬೇಕು, ಮಾಡಿ ಜಯಿಸಬೇಕೆಂದು ಬೊಬ್ಬೆ ಹೊಡೆಯುವ ಮಂದಿ ಹಲವಾರು ಸಿಗಬಹುದು. ಪ್ರೀತಿ ಪರಿಸ್ಥಿತಿಯಿಂದ ಬದಲಾಗುವುದಿಲ್ಲ, ಬದಲಾಗುವುದು ಮನಸ್ಥಿತಿ, ಕಷ್ಟಕಾರ್ಪನ್ಯಗಳು, ಪ್ರೀತಿಯನ್ನು ಮಂಕಾಗಿಸುತ್ತದೆ. ಹಣದ, ಅಧಿಕಾರದ ಅಥವಾ ಮತ್ತ್ಯಾವುದೋ ವಸ್ತುಗಾಗಿ ಓಡಾಡುವವರ ಬಗೆಗೆ ನನ್ನ ಮಾತಲ್ಲ. ನನ್ನ ಮಾತು, ಇಬ್ಬರೂ ಒಬ್ಬರಾಗಿದ್ದವರ ಪ್ರೀತಿ.
ಇಲ್ಲಿ ನೈತಿಕತೆ ಅನೈತಿಕತೆ ಮಾತು ಬರುವುದೇ ಇಲ್ಲ, ಒಬ್ಬರು ಮತ್ತೊಬ್ಬರಿಗೆ ವಸ್ತುವಲ್ಲ, ಅಧಿಕಾರವೂ ಅಲ್ಲ. ಜೀವನದಲ್ಲಿ ಅತಿ ಹೆಚ್ಚು ಭಯ ಪಡಿಸುವ, ಬೆಚ್ಚಿ ಬೀಳಿಸುವ ಪದವೆಂದರೇ, ರಿಜೆಕ್ಟ್, ತಿರಸ್ಕಾರ. ಯಾವುದೇ ವ್ಯಕ್ತಿಯನ್ನು ಕೇವಲ ಇದೊಂದೇ ಒಂದು ಪದದಿಂದ ಕೊಲ್ಲಬಹುದು. ಒಬ್ಬ ಮನುಷ್ಯ ಮತ್ತೊಬ್ಬನಿಂದ ತಿರಸ್ಕಾರಗೊಂಡಿದ್ದಾನೆಂದರೆ ಅವನ ಮನಸ್ಥಿತಿ ನಿಯಂತ್ರಣದಲ್ಲಿರುವುದಿಲ್ಲ. ಅನೇಕಾ ಪ್ರೀತಿ ಪ್ರೇಮದ ವಿಷಯದಲ್ಲಿ ಆತ್ಮ ಹತ್ಯೆ, ಕೊಲೆ, ಆಸಿಡ್ ಪ್ರಕರಣಗಳು ಬರುವುದು ಇದೊಂದರಿಂದಲೇ, ಅದೇ ತಿರಸ್ಕಾರ. ನನಗೂ ಹೀಗೆಯೇ ಆಗಿತ್ತಾ?ನಾನು ಯಾವುದೋ ಮೂಲೆಯಲ್ಲಿ ನನಗೆ ಎನಿಸಿತ್ತಾ ನಾನು ತಿರಸ್ಕಾರಗೊಂಡವನು ಎಂದು? ಇದಕ್ಕೆ ನನ್ನಲ್ಲಿ ಉತ್ತರವಿಲ್ಲ, ನಾನು ತಿರಸ್ಕಾರಗೊಂಡವನಾ? ಅಥವಾ ನಾನೇ ತಿರಸ್ಕರಿಸಿದೇನಾ? ಇದಕ್ಕೆ ಉತ್ತರವಿಲ್ಲ. ಇದೆಲ್ಲವೂ ಪರಿಸ್ಥಿತಿಯ ಮೇಲೆ ನಿಂತಿದೆ ಎಂದರೇ, ನಾನು ಬೇಜವಬ್ದಾರಿ ಮನುಷ್ಯನಾಗುತ್ತೇನೆ. ನಿನ್ನೊಂದಿಗೆ ಇರುತ್ತೇನೆಂದರೇ ಅದು ಆಗುವ ಮಾತಾ? ಎನಿಸುತ್ತದೆ. ಇದಕ್ಕೆಲ್ಲಾ ಉತ್ತರವೆಲ್ಲಿ? ನಾನು ಕಟ್ಟಿದ ಕನಸಿನ ಗೋಪುರದೊಳಗೆ ಹೋಗುವ ಮುನ್ನವೇ ಕುಸಿದು ಬಿದ್ದರೇ!
ಕನಸು ಕಾಣುವುದು ತಪ್ಪಲ್ಲಾ ಆದರೇ, ನಾವು ಕಂಡ ಕನಸೆಲ್ಲಾ ನನಸಾಗಬೇಕೆಂಬುದು ನಮ್ಮ ದುರ್ಬುದ್ದಿ ಮತ್ತು ದುರಾಸೆ. ಜೀವನದಲ್ಲಿ ಬಂದು ಹೋಗುವುದು ಪ್ರೀತಿ, ಪ್ರೀತಿಯಲ್ಲಿ ಜೀವನ ಬರುವುದಿಲ್ಲ. ಪ್ರೀತಿ ಬರುವ ಮುಂಚೆಯೂ ಜೀವನವಿತ್ತು ಪ್ರೀತಿ ಹೋದ ಮೇಲೆ ಕೂಡ ಜೀವನವಿರುತ್ತದೆ. ಹಾಗಿದ್ದಲ್ಲಿ ಪ್ರೀತಿಗಾಗಿ ಇಷ್ಟೊಂದು ಚಡಪಡಿಕೆ ಏಕೆ? ನಾನು ನಿರುತ್ತರ. ದಾಸ್ಯನಾಗುವುದು ಎಂದಿಗೂ ಎಂದೆಂದಿಗೂ ತಪ್ಪು. ನಾನು ಕುಡಿತಕ್ಕೆ ದಾಸ್ಯನಾದೆ, ಕುಡಿತದಿಂದ ಸಿಗರೇಟಿಗೆ ದಾಸ್ಯನಾದೆ, ನಿದ್ದೆಗೆ ದಾಸ್ಯನಾದೆ, ನಿದ್ದೆಯಿಂದಾಗಿ ಸೋಮಾರಿತನಕ್ಕೆ ದಾಸ್ಯನಾದೆ, ಸೋಮಾರಿತನವನ್ನು ತೊಡಗಿಸಲು ಸುತ್ತಾಟವನ್ನು ಮೈಮೇಲೆ ಏರಿಸಿಕೊಂಡೆ, ಸುತ್ತಾಟ ಯಾವ ಪರಿ ನನ್ನನ್ನು ಆಳತೊಡಗಿತ್ತೆಂದರೇ, ವಾರಕೊಮ್ಮೆಯಾದರೂ ನಾನು ಸುತ್ತಾಡಲೇ ಬೇಕೆನ್ನುವ ಮಟ್ಟಕ್ಕೆ ಏರಿದೆ. ಮಾಡುವ ಕೆಲಸ ಬಿಟ್ಟು, ಪಿ ಎಚ್ ಡಿ ಎಂಬ ಪದಕ್ಕೆ ಮಣ್ಣು ಹಾಕಿ, ಸಂಬಳ ಕೊಡುವ ಕಂಪನಿಗೆ ಸರಿಯಾಗಿ ಕೆಲಸ ಮಾಡಿ ಒಪ್ಪಿಸಲಾರದ ಮಟ್ಟಿಗೆ, ಅಥವಾ ಪ್ರಾಣದ ಹಂಗನ್ನು ತೊರೆದು, ಒಂಬತ್ತು ಗುಡ್ಡದಲ್ಲಿ ಸತ್ತರೂ ಸರಿಯೇ ಎಂದು ಬೀಗುವ ಮಟ್ಟಕ್ಕೆ ಹೋದೆ. ಜೀವನದಲ್ಲಿ ಏನನ್ನು ಗಂಬೀರವಾಗಿ ಪರಿಗಣಿಸಬಾರದು ಆದರೇ ನಾನು ಜೀವನದ ಗಂಭೀರತೆಯನ್ನು ಮರೆತೆ ಮರೆತೆ ಎನ್ನುವುದಕ್ಕಿಂತ ಹೆಚ್ಚಾಗಿ ನನ್ನ ಉಢಾಫೆತನವೇ ಕಾರಣ.
ದೇಶದ ಬಗೆಗೆ, ಸಮಾಜದ ಬಗೆಗೆ, ವಿಜ್ನಾನದ ಬಗೆಗೆ ಸಂಸ್ಕೃತಿಯ ಬಗೆಗೆ ಉದ್ದುದ್ದ ಮಾತನಾಡಿ ಎಲ್ಲರೂ ಸರಿಯಿಲ್ಲವೆಂಬು ಒಂದೇ ಕಾರಣವನ್ನು ಇಟ್ಟುಕೊಂಡು ನಾನು ತಪ್ಪಾದೆ. ದೇಶದ ಬಗೆಗೆ ಮಾತನಾಡುವಾಗ ನನ್ನ ಸಾಧನೆ ಏನು? ನಾನು ಮಾಡಿರುವುದಾದರೂ ಏನು? ಈ ಪ್ರಶ್ನೆಯನ್ನು ನನ್ನ ಮುಂದೆ ಕೇಳಿದರೇ ನಾನು ನಿರುತ್ತರ. ಅಂಗವೈಕಲ್ಯವಿಲ್ಲ, ಕುರುಡು ಇಲ್ಲ, ಕೈ ಕಾಲು ಸರಿ ಇದೆ, ವಿದ್ಯೆ ಎಂಬುದು ಕೂಡ ಇದೆ, ಆದರೂ ಅದನ್ನು ಮೀರಿ ಬೆಳೆದ ಸೋಮಾರಿತನ ನನ್ನನ್ನು ಆಳಿದೆ ಆಳುತ್ತಿದೆ. ಓದುವಾಗ ಹಾತೊರೆಯುತ್ತಿದ್ದ ನಾನು ಕೆಲಸಕ್ಕೆ ಸೇರಿದ ಮರು ಕ್ಷಣ ಸೋಮಾರಿಯಾಗತೊಡಗಿದೆ. ಯಾರಿಗೂ ಇಲ್ಲದ ಕಡೆಗೆ ನನ್ನನ್ನು ನಾನು ಪೋಷಿಸಿಕೊಳ್ಳಲಾಗದ ಮಟ್ಟಕ್ಕೆ ಇಳಿದೆ. ಇವೆಲ್ಲವೂ ಒಂದು ದಿನದಲ್ಲಿ ಆದುದಲ್ಲ. ನಾನು ದಿನೇ ದಿನೇ ಕುಡಿದು, ಯಾವ ಕುಡುಕನಿಗೂ ಕಡಿಮೆಯಿಲ್ಲದ ಹಾಗೆ ಲಿವರ್ ತೂತು ಆಗುವ ತನಕ ಕಿಡ್ನಿಗೆ ತೊಂದರೆಯಿದೆ ಎನ್ನುವ ತನಕ ಕುಡಿದಿದ್ದೇನೆಂದರೆ ನಿಜಕ್ಕೂ ನಾನು ಕುಡಿದಿರುವುದೆಷ್ಟು? ನಾನು ಸೇದಿರುವುದೆಷ್ಟು? ಅರ್ಥವಿಲ್ಲದೇ ಸುತ್ತಿರುವುದೆಷ್ಟು? ಕೆಲಸಕ್ಕೆ ಬಾರದ ಮೂರನೇ ಗ್ರೇಡಿನ ಸಿನೆಮಾ ನೋಡಿರುವುದೆಷ್ಟು? ಇದಕ್ಕೆಲ್ಲಾ ನಾನು ನಿರುತ್ತರ. ಮನ ಬಿಚ್ಚಿ ನನ್ನನ್ನು ನಾನೇ ಪ್ರಶ್ನಿಸಿದರೂ ನನ್ನನ್ನು ನಾನು ಸಮರ್ಥಿಸಿಕೊಳ್ಳಲಾರದ ಮಟ್ಟಕ್ಕೆ ಇಳಿದಿದ್ದೇನೆ. ಇಷ್ಟೆಲ್ಲಾ ಇಟ್ಟುಕೊಂಡು ಪ್ರೀತಿಯ ಹಿಂದೆ ಬಿದ್ದು ಪ್ರೀತಿಸಿದವಳನ್ನು ಪೀಡಿಸಿ, ಕಾಡಿಸಿ ಕಡೆಗೆ ಅವಳೆಡೆಗೂ ಒಮ್ಮೆ ತಾತ್ಸಾರ ಮೂಡಬಹುದಲ್ಲವೇ? ಆಗಲೂ ನಾನು ನಿರುತ್ತರ. ಜವಬ್ದಾರಿಯೆನ್ನುವ ಪದ ಬಂದರೇ ನಾನು ನಿರುತ್ತರವೇ?
ಸೋಮಾರಿತನದ ಪರಮಾವಧಿಯಲ್ಲಿಯೂ ಕಾರಣಗಳ ಅಂತೆ ಕಂತೆಗಳು ಸುರಿಮಳೆಯಿದೆ. ರಾತ್ರಿ ಎರಡು ಗಂಟೆಯ ತನಕ ಕುಡಿದು, ಗಾಡಿಯಲ್ಲಿಯ ಪೆಟ್ರೋಲ್ ಇರುವ ತನಕ ಹೋಗಿ ಅಲ್ಲಿಂದ ತಲ್ಲಿಕೊಂಡು ಬರೋಣ ಎನ್ನುವ ಹುಚ್ಚುತನ ನನಗಲ್ಲದೇ ಬೇರಾರಿಗೆ ಬರಲು ಸಾಧ್ಯ. ರಾತ್ರೋ ರಾತ್ರಿ ಬೈಕ್ ಹಿಡಿದು, ಕುಡಿದ ಅಮಲಿನಲ್ಲಿಯೋ ಅಥವಾ ತಲೆ ಕೆಟ್ಟ ಮಂಕಿನಲ್ಲಿಯೋ, ಅಥವಾ ಉಢಾಫೆತನದಲ್ಲಿಯೋ, ಮಡಿಕೇರಿಗೆ ಹೋದದ್ದು, ಕೆಮ್ಮಣ್ಣು ಗುಂಡಿಯ ತನಕ ಹೋದದ್ದು ಇವೆಲ್ಲವೂ ಪ್ರವಾಸವೇ? ನನ್ನ ತೆವಳಿಗೆ, ನನ್ನ ತಲೆ ಕೆಟ್ತ ಮೋಜಿ ನನ್ನ ಸ್ನೇಹಿತರಿಗೆಲ್ಲರಿಗೂ ತೊಂದರೆ ಸ್ನೇಹಿತರಿಗೆಲ್ಲಾ ಫೋನ್ ಮಾಡಿ ಅಲ್ಲಿಗೆ ಬರುತ್ತೇನೆಂದು ಹೇಳಿ ನಡು ರಾತ್ರಿಯವರೆಗೂ ಅವರು ನನಗಾಗಿ ಕಾದು ಕುಳಿತಿರುವುದು ಅವರ ಪೋಷಕರು ಅಯ್ಯೊ ಎಂಥಹ ಸ್ನೇಹಿತರಪ್ಪ ಇವರೆಲ್ಲಾ ಎಂದುಕೊಂಡಿರುವುದಿಲ್ಲವೇ? ಮುಂಜಾನೆ ನಾಲ್ಕು ಗಂಟೆಗೆ ಬೈಕ್ ಹತ್ತಿ ನಿರಂತರ ಮಧ್ಯರಾತ್ರಿ ಎರಡು ಗಂಟೆಯ ತನಕ ಸಂಪೂರ್ಣ ಸವೆದು ಹೋಗಿದ್ದ ಟೈರ್ ಅನ್ನು ಗಮನಿಸದೇ ಗಮನಕ್ಕೆ ಬಂದಿದ್ದರೂ ಕೂಡ ನಿರ್ಲಕ್ಷಿಸಿ, ಕುಶಾಲನಗರದಿಂದ, ಸೋಮವಾರಪೇಟೆ, ಬಿಸಿಲೆ ಘಾಟ್, ಸುಬ್ರಹ್ಮಣ್ಯ, ಸುಳ್ಯಾ, ಮಡಿಕೇರಿ, ಹೀಗೆ ಸುತ್ತಾಡಿ ಬರುವ ಮಟ್ಟಕ್ಕೆ ಬಂದಿದ್ದೇನೆಂದರೇ ನನ್ನ ಬೇಜವಬ್ದಾರಿತನದ ಹಿರಿಮೆ ಎಂಥಹದ್ದು. ನನ್ನ ಮಾತು ಎಲ್ಲಿಂದ ಎಲ್ಲಿಗೋ ಹೋಗುತ್ತಿದೆ. ಏನೇ ಹೇಳಿದರೂ ಎಲ್ಲವೂ ನನ್ನಯ ಬಗೆಗೆ ನನ್ನ ಸೋಮಾರಿತನದ ಬದುಕಿನ ಬಗೆಗೆಂಬುದು ಸತ್ಯ. ನಾನು ನನ್ನ ತೆವಳಿಗೆ, ಮನದಲ್ಲಿರುವುದನ್ನು ತೆಗೆದು ಅಕ್ಷರಗಳನ್ನಾಗಿಸುತಿದ್ದೇನೆ, ಅದನ್ನೆಲ್ಲಾ ನಿಮ್ಮ ಅಮೂಲ್ಯ ಸಮಯ ಕಳೆಯಲು ಓದಬೇಡಿ.

05 ಸೆಪ್ಟೆಂಬರ್ 2010

ದ್ರೊಹದ ಮಡುವಿನಲ್ಲಿ....!!!

ದೋಚುವುದು ಮಾನವ ಸಹಜ ಗುಣವೆನ್ನುವ ಮಟ್ಟಕ್ಕೆ ಬಂದಿದೆ. ವಂಚನೆ, ಮೋಸ, ಲಂಚಕೋರತನ ಇವೆಲ್ಲವೂ ಇಂದಿನ ಸಮಾಜದ ಏಳಿಗೆಯ ಪ್ರತೀಕವೆನಿಸಿದೆ. ಹೆಚ್ಚೆಚ್ಚು ಲಂಚ ಹೊಡೆದಷ್ಟು, ಹೆಚ್ಚು ವರದಕ್ಷಿಣೆ ಕೊಟ್ಟಷ್ಟು, ಹೆಚ್ಚು ಜನರನ್ನು ಮೋಸ ಮಾಡಿದಷ್ಟು ಅತಿ ಬುದ್ದಿವಂತಿಕೆ ಎನಿಸಿದೆ. ಮೊನ್ನೆ ಮೊನ್ನೆ ನನ್ನ ಸ್ನೇಹಿತನ ಮದುವೆಗೆಂದು ಮೈಸೂರಿಗೆ ಹೋಗಿ ಬಂದೆ, ಅವನು ಒಳ್ಳೆಯ ಉದ್ಯೋಗವನ್ನು ಮಾಜಿ ಮಂತ್ರಿಯ ಅನುಕಂಪದಿಂದ ಪಡೆದು, ಸಂಪಾದನೆಗೆ ತೊಡಗಿಸಿಕೊಂಡಿದ್ದಾನೆ. ನನ್ನ ಅನೇಕಾ ಸ್ನೇಹಿತರು ಮದುವೆಗೆ ಬಂದಿದ್ದರು, ಅವರೊಂದಿಗೆ ಮಾತನಾಡುವಾಗ, ಅವರೆಲ್ಲರಿಂದಲೂ ಬಂದ ವಿಷಯ ಲಂಚ, ದುಡ್ಡು, ದುಡ್ಡಿಲ್ಲದೇ ಬದುಕಿಲ್ಲ ಎನ್ನುವುದಕ್ಕಿಂತ, ದುಡ್ಡು ಹೊಡೆಯುವುದು ಚಾಣಾಕ್ಷತನ. ಅದರಂತೆಯೇ ಮನೆಗೆ ಬಂದಮೇಲೆ ನಮ್ಮ ಅಪ್ಪ ಫೋನ್ ಮಾಡಿ ಮೋಹನನ ಮದುವೆಗೆ ಹೋಗಿದ್ದ, ಎಂದರು. ನಾನು ಹೌದು ಎಂದಾಗ ಶುರು ಆಗಿದ್ದು, ವರದಕ್ಷಿಣೆಯ ವಿಷಯ, ಕಾರು ಕೊಟ್ಟಿದ್ದಾರಂತೆ, ಸೈಟು ಅಂತೇ?ನಾನು ಹೌದು ಬಿಡಿ ಅದರಲ್ಲೇನಿದೆ, ಇವನನ್ನು ಅವರು ಕೊಂಡುಕೊಂಡಿದ್ದಾರೆ ಎಂದರೇ, ನಮ್ಮಪ್ಪ ಹೇಳಿದರು, ಹುಡುಗಿಯ ತಂದೆ ನಮ್ಮ ಇಲಾಖೆಯವರು, ಬಹಳ ದುಡ್ಡು ಮಾಡಿದ್ದಾರೆ. ನಾನು ಹೇಳಿದೆ ಸರಿ ಹೋಯಿತಲ್ಲ, ಇವನು ಲಂಚಕೋರ ಅವರು ಲಂಚಕೋರರು ಮುಂದಿನ ಅವರ ಪೀಳಿಗೆಯೂ ಅಲ್ಲಿಗೆ ಬರುತ್ತದೆ ಬಿಡಿ. ನಮ್ಮಪ್ಪ ಅಷ್ಟೇ ಸಂಯಮದಿಂದ ಹೇಳಿದರು, ಲಂಚ ತೆಗೆದುಕೊಳ್ಳದೇ ಇದ್ದಿದ್ದರೇ ಇಷ್ಟೋಂದು ಅದ್ದೂರಿ ಮದುವೆಗೆ ಸಾಧ್ಯವಾಗುತ್ತಿತ್ತೇ?ನಾನು ಹೇಳಿದೆ, ಹೌದು ಲಂಚವಿಲ್ಲದೇ ಇದ್ದಿದ್ದರೇ ಮಾನವೀಯತೆಯ ತಳಹದಿಯಲ್ಲಿಯೇ ಇರಬೇಕಾಗುತ್ತದೆ ಬಿಡಿ. ಅದು ಯಾರಿಗೂ ಬೇಡದ ವಸ್ತು ಎಂದು. ಲಂಚ ಕೊಡುವುದು ನಮ್ಮ ವ್ಯವಸ್ಥೆಯ ಒಂದು ಭಾಗವೇ ಆಗಿದೆ. ಅದು ಅಪರಾಧವೆಂಬುದು ನಮ್ಮಿಂದ ಬಹಳ ದೂರಕ್ಕೆ ಹೋಗಿದೆ.
ನನ್ನ ಅನೇಕಾ ಸ್ನೇಹಿತರು ಸಮಾಜದ ಏಳಿಗೆಯ ಬಗೆಗೆ ಮಾತನಾಡಿದರೂ, ಲಂಚದ ವಿರುದ್ದ ಉದ್ದೂದ್ದ ಭಾಷಣ ಬಿಗಿದರೂ, ಕಡೆಗೆ ಲಂಚಕ್ಕೆ ಶರಣಾಗಿದ್ದಾರೆ. ಇದೆಲ್ಲವೂ ಪರಿಸ್ಥಿತಿಯ ಒತ್ತಡವೇ? ಮಂಜೇಶ್ ಕೆ.ಪಿ.ಎಸ್.ಸಿ ಯಲ್ಲಿ ಎರಡು ಲಕ್ಷ ಕೊಡಬೇಕು ಎಂದಾಗ ನಾನು ಸರಿ ನನ್ನ ಕೈಲಾದಷ್ಟು ನಾನು ಕೊಡುತ್ತೇನೆ ಎಂದೆ. ಇದು ನಾನು ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಸಹಕರಿಸುತ್ತಿದ್ದೇನೆ ಎಂದಾಯಿತ್ತಲ್ಲ. ಲಂಚವೆನ್ನುವುದನ್ನು ನಾವು ಒಪ್ಪಿಕೊಂಡಿದ್ದೇವೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇ ಬೇಕು ಅಲ್ಲವೇ! ನಾನು ಇದುವರೆಗೂ ಒಬ್ಬ ಸ್ನೇಹಿತನಿಗೂ ಲಂಚಕೊಟ್ಟು ಕೆಲಸಕ್ಕೆ ಸೇರಬಾರದು ಎಂದು ಹೇಳಲು ಸಾಧ್ಯವೇ ಆಗಿಲ್ಲ. ಹೇಳಿದರೇ ಅವರು ನಮ್ಮ ಮಾತನ್ನು ಕೇಳುವುದಿಲ್ಲ, ಲಂಚ ಕೊಡದೇ ಕೆಲಸವೇ ಆಗುವುದಿಲ್ಲವೆಂಬ ಸತ್ಯ ನಮಗೆ ಅರಿವಾಗಿದೆ.
ಅಸೂಯೆ ಎಂಬುದು ನಮ್ಮ ಮುಂದಿರುವ ಎರಡನೇ ಸವಾಲು, ನಾವು ನಮ್ಮನ್ನೇ ಪ್ರೀತಿಸದ, ಅಥವ ನಮ್ಮ ಮನೆಯವರನ್ನು, ಜೊತೆಯವರನ್ನು ಪ್ರೀತಿಸದ ಮಟ್ಟಕ್ಕೆ ಅಸೂಯೆಯ ಜೀವನವನ್ನು ಸಾಗಿಸುತಿದ್ದೇವೆ. ತಿಳಿದ ಮಟ್ಟಕ್ಕೆ ಸ್ನೇಹಿತರೆಂದು ಹೊರಗಡೆ ಹೇಳಿದರೂ, ಸ್ನೇಹಿತ ಒಂದು ಹೊಸ ಉಡುಪು, ಕಾರು, ಬೈಕು, ಸೈಟು ಅಥವಾ ಸಂಬಳ ಹೆಚ್ಚಿಗೆ ಪಡೆದಾಗ ಸಹಿಸಲಾರದಷ್ಟೂ ಮಟ್ಟಕ್ಕೆ ಹೋಗಿದ್ದೇವೆ. ಇದು ಯಾರನ್ನು ಹೊರತು ಪಡಿಸಿಲ್ಲ. ನಾನೇ ಮೇಲೆಂಬ ಅಹಂಕಾರ ಮಾತ್ರವಲ್ಲ, ನನಗೆ ಇಲ್ಲದ್ದು ಯಾರಿಗೂ ಬೇಡವೆನ್ನುವ ತುಚ್ಚ ಮನೋಭಾವ ಬಂದಿರುವುದು ಹೇಯವೆನಿಸುತ್ತದೆ. ಗಂಡ ಹೊಸದಾಗಿ ಮೊಬೈಲ್ ತೆಗೆದುಕೊಂಡರೇ ಅದನ್ನೂ ಅಸೂಯೆಯಿಂದ ಕಾಣುವ ಹಲವಾರು ಹೆಂಗಸರನ್ನು ನಾನು ಕಣ್ಣಾರೆ ಕಂಡಿದ್ದೇನೆ. ಮಕ್ಕಳಿಗೆ ಹೊಸದಾಗಿ ಏನಾದರು ಕೊಡಿಸಿದರೇ ಮುನಿಸಿಕೊಳ್ಳುವ ಮಹಿಳಾಮಣಿಯರಿದ್ದಾರೆ. ಇದೆಂಥಹ ಬದುಕು, ನಾವು ಎಲ್ಲಿ ಬದುಕುತ್ತಿದ್ದೇವೆ ಎನಿಸುತ್ತದೆ. ಸ್ವಂತ ಗಂಡನ ಅಥವಾ ಹೆಂಡತಿಯ ಏಳಿಗೆ ಸಹಿಸದವರು ಇಂಥಹ ಸಣ್ಣ ಬುದ್ದಿ ಇರುವವರು ಏನು ಸಾಧಿಸಿಯಾರು?
ಇದೆಲ್ಲವೂ ಒಂದೆಡೆಗೆಗಾದರೇ, ಮತ್ತೊಂದೆಡೆಗೆ ನನ್ನಂಥಹ ಹುಟ್ಟು ಸೋಮಾರಿಗಳು, ಯಾವುದನ್ನು ಮಾಡಲು ನಿರಾಸಕ್ತಿ ಹೊಂದಿದವರು. ಸದಾ ಮಲಗುವುದೋ, ಅಥವಾ ಒಮ್ಮೊಮ್ಮೆ ಹುಚ್ಚು ಬಂದಂತೆ ಸುತ್ತಾಡುವುದನ್ನು ಬಿಟ್ಟರೆ ಮಿಕ್ಕಾವ ಕೆಲಸವನ್ನು ನಾನು ಮಾಡಿಲ್ಲ. ಕೆಲವೊಮ್ಮೆ ನಾನು ಸೋಮಾರಿತನದ ಗುಂಗಿನಿಂದ ಹೊರಬರಲೋ ಅಥವಾ ಒಂದು ಬದಲಾವಣೆಯನ್ನೂ ನಿರೀಕ್ಷಿಸಿ ಸುತ್ತಾಡಲು, ಕಾಡು ಮೇಡು ಎಂದು ಅಲೆಯುವುದನ್ನು ನನ್ನ ಅನೇಕಾ ಸ್ನೇಹಿತರು ತಪ್ಪಾಗಿ ಅರ್ಥೈಸಿಕೊಂಡು ಅಬ್ಬಾ ನೀನು ನಿಜಕ್ಕೂ ಒಳ್ಳೆಯ ಅಭಿರುಚಿ ಇರುವಾತ. ಪ್ರವಾಸವೆಂದರೇ ಅದೆಷ್ಟು ಇಷ್ಟ ಪಡುತ್ತೀಯಾ! ಎಂದಿದ್ದಾರೆ. ಮೊನ್ನೆ ಯಾವತ್ತೋ ಹೆಂಡದ ಅಂಗಡಿಯಲ್ಲಿ ಕುಳಿತು ಹೆಂಡ ಕುಡಿಯುವಾಗ, ಪಕ್ಕದ ಮೇಜಿನಲ್ಲಿದ್ದವ ಹೇಳುತ್ತಿದ್ದ, ಆ ದಿನಗಳು ಬಹಳ ಚೆನ್ನಾಗಿದ್ದವು, ಕೆಲಸವಿರಲಿಲ್ಲ, ಕೇವಲ ಕುಡಿಯುವುದು, ಸೇದುವುದು, ಅಲೆಯುವುದು, ಮಹರಾಜನಂತಿದ್ದೆ ಎಂದು. ನಮ್ಮಲ್ಲಿರುವ ಅನೇಕಾ ಸಮಸ್ಯೆಗಳು ಉದ್ಬವವಾಗಿರುವುದು ಹೀಗೆಯೆ, ಮಹರಾಜ, ಮಹರಾಣಿ, ಹೀಗೆ ಕಲ್ಪನೆಗಳ ಕಾದಂಬರಿಗಳು ನಮ್ಮನ್ನು ದಾರಿ ತಪ್ಪಿಸಿವೆ. ರಾಜ ಮಹರಾಜರು ಜನರ ಜೀವನಕ್ಕೆ ದೇಶದ ಏಳಿಗೆಗೆ ಮಾಡಿದ ಸಾಹಸಗಳನ್ನು ಶ್ರಮಗಳನ್ನು ನಾವೆಂದು ಗುರುತಿಸಿಲ್ಲ, ಗುರುತಿಸಿದರೂ ಅವೆಲ್ಲವೂ ಸಾಮಾನ್ಯ ಜನತೆಗೆ ತಲುಪಿಸುವುದರಲ್ಲಿ ನಮ್ಮ ಪೂರ್ವಿಕರು ಸೋತಿದ್ದಾರೆ. ಇಂದಿಗೂ ಅಷ್ಟೇ, ನಮ್ಮ ಅನೇಕಾ ಸ್ನೇಹಿತರಿಗೆ ಅದರಲ್ಲಿಯೂ ಯುವಕರಿಗೆ, ಮಾದರಿ ನಾಯಕರಾಗಿರುವುದು ಇಂದಿನ ಅನೇಕಾ ರಾಜಕಾರಣಿಗಳು, ಅವರು ದೋಚಿರುವ ಕೋಟ್ಯಾಂತರ ರೂಪಾಯಿಗಳು, ಎಲ್ಲರನ್ನೂ ಆಕರ್ಷಿಸಿವೆ. ಕಾಲ್ ಸೆಂಟರ್ ಗಳು, ಐ.ಟಿ. ಬಿ ಟಿ ಗಳು ಹೀಗೆಯೇ ಅನೇಕ ಯುವಕರನ್ನು ಸೆಳೆದು ಕಡೆಗೆ ಬೀದಿಗೆ ತಂದು ನಿಲ್ಲಿಸಿದವು. ನಮ್ಮೂರಿನ ಅನೇಕಾ ಯುವಕರು ಬೆಂಗಳೂರಿಗೆ ಬರುವುದೊಂದು ಸಂತಸದ ಸುದ್ದಿಯೆಂದು ಇಲ್ಲಿಗೆ ಬಂದು ಪಡಬಾರದ ಕಷ್ಟ ಪಡೆಯುತಿದ್ದಾರೆ. ಆದರೂ ಅವರು ಊರಿಗೆ ಹೋದಾಗ ಅಲ್ಲಿನ ಹುಡುಗರಿಗೆ ಹೇಳುವುದು ಬೆಂಗಳೂರಿನ ವೈಭವದ ಬಗೆಗೆ, ಇಲ್ಲಿನ ಮೋಜಿನ ಬಗೆಗೆ, ಇಡೀ ಜೀವನದಲ್ಲಿ ಒಮ್ಮೆಯೂ ಇಲ್ಲಿನ ಪಬ್ ಗಳಿಗೆ, ಡಿಸ್ಕೋಗಳಿಗೆ, ಪಿ ವಿ ಆರ್ ಗೆ ಹೋಗದಿದ್ದರೂ ಊರಿಗೆ ಹೋದಾಗ ಅವರ ಬಾಯಲ್ಲಿ ನೀರು ಸುರಿಯುವ ಮಟ್ಟಿಗೆ ಅವರನ್ನು ಹುರಿದುಂಬಿಸುತ್ತಾರೆ.
ಹಳ್ಳಿಗಳಿಂದ ಪಟ್ಟಣಗಳಿಗೆ ಕೆಲಸ ಹುಡುಕಿ ಬರುವುದು ಇದೇ ಹೊಸತಲ್ಲ, ಅದು ಸನಾತನವಾಗಿದೆ. ಆದರೇ, ಅನಿವಾರ್ಯತೆ ಇಲ್ಲದೇ ಬರೀ ಮೋಜಿಗೆ ಬಂದು ಹಾಳಾಗಿ ಹೋಗುವ ಯುವಕರು ದಾರಿ ತಪ್ಪಿರುವುದು ವಿಪರ್ಯಾಸ. ಊರಿನಲ್ಲಿರುವ ಅನೇಕಾ ಯುವಕರು ಅಷ್ಟೇ, ನನ್ನಂತೆಯೇ, ಹಾಳಾಗಿ ಹೋಗಿದ್ದಾರೆ. ನಾನು ಬೆಂಗಳೂರಿನಲ್ಲಿದ್ದು, ಪಕ್ಕದಲ್ಲಿರುವ ಬಾರ್ ಗಳಲ್ಲಿ ಕುಡಿದರೇ, ಅವರು ನನ್ನೂರಿನಿಂದ ೬೦ ಕಿಮೀ ದೂರವಿರುವ ಹಾಸನಕ್ಕೋ, ಮೈಸೂರಿಗೋ, ಮಡಿಕೇರಿಗೋ ಹೋಗಿ ಕುಡಿದು, ಮೋಜು ಮಾಡಿ ಬರುತ್ತಿದ್ದಾರೆ. ನಮ್ಮೂರಿನ ನದಿ ದಂಡೆಯಲ್ಲಿ ಕುಳಿತು, ಕ್ಯಾಂಪ್ ಫೈರ್ ಹಾಕಿ ರಾತ್ರಿ ಇಡೀ ಕುಡಿದು, ಮೊಬೈಲ್ ನಲ್ಲಿರುವ ವಿಡೀಯೋ ಹಾಕಿ ಕುಣಿಯುತ್ತಾರೆ. ಮರಳು ತೆಗೆಯುವ ಕೆಲಸಕ್ಕೆ ಹೋಗುವಾಗ ನದಿ ದಂಡೆಯವರೆಗೂ ಬೈಕಿನಲ್ಲಿ ಹೋಗುವ ಇವರು, ಜೀನ್ಸ್ ಟೀ ಶರ್ಟ್ ಇಲ್ಲದೇ ಮನೆ ಬಿಟ್ಟು ಬರುವುದಿಲ್ಲ. ಗದ್ದೆ ಕೆಲಸಕ್ಕೆ ಕರೆದರೇ ಅದು ಯಾವುದೋ ಪಾಪ ಕಾರ್ಯಕ್ಕೆ ಕರೆಯುತ್ತಿದ್ದಾರೆನ್ನುವಂತೆ ನೋಡುತ್ತಾರೆ. ಇದೆಲ್ಲದರ ಹಿಂದಿರುವ ಅಂಶ ಒಂದೇ, ಮೋಜು, ಉಲ್ಲಾಸ.
ನನಗೂ ಕೆಲವರು ಸ್ನೇಹಿತರಿದ್ದಾರೆ ದುಡ್ಡಿಲ್ಲದೇ ಇರುವವರಲ್ಲ, ಎಲ್ಲವೂ ಅಧಿಕಾವಾಗಿರುವವರು, ದುಡ್ಡಿದೆ, ಆಸ್ತಿಯಿದೆ, ಎಲ್ಲವೂ ಇದೆ. ಕುಡಿಯುವ ಮೋಜು ಮಾಡುವ ಸುತ್ತಾಡುವ ಎಲ್ಲಾ ಹಂಬಲಗಳು ಇವೆ. ಆದರೇ ಅದರ ಖರ್ಚಿನ ವಿಷಯ ಬಂದಾಗ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಸ್ನೇಹವೆಂಬುದನ್ನು ಬರಿಯ ಮಾತಿನಲ್ಲಿ ಬಿಟ್ಟರೇ ಮಿಕ್ಕೆಲ್ಲಾ ಸಮಯದಲ್ಲಿಯೂ ಅವರು ದೋಚುವುದನ್ನು ಬಿಟ್ಟರೇ ಇನ್ನೆನೂ ಮಾಡುವುದಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೇ, ನಮ್ಮ ದುಡ್ಡಿನಲ್ಲಿ ಕುಡಿಯುವಾಗ, ಹೆಚ್ಚು ಬೆಲೆಯ ಹೆಂಡ ಕುಡಿಯುವ ಗೆಳೆಯನೊಬ್ಬ ಅವನ ಖರ್ಚಿನಲ್ಲಿ ಕಡಿಮೆ ಬೆಲೆಯ ಹೆಂಡ ಕುಡಿಯುವುದು. ಅದು ಅಲ್ಲದೇ, ನಾನು ತಿಳಿದಿರುವಂತೆ ಮನುಷ್ಯ ಅದೆಷ್ಟು ಕೆಳ ಮಟ್ಟಕ್ಕೆ ಇಳಿಯುತ್ತಾನೆಂದರೇ ಅಯ್ಯೋ ದೇವುಡಾ ಎನಿಸಿದೆ. ದುಡ್ಡಿಗೆ ಕೊಡುವ ಒಂದಂಶ ಸ್ನೇಹಕ್ಕೆ ಸಂಬಂಧಗಳಿಗೆ ಕೊಟ್ಟಿದಿದ್ದರೇ ಸಮಾಜ ಅದೆಲ್ಲಿಯೋ ನಿಂತಿರುತಿತ್ತು. ನನ್ನ ಅನೇಕಾ ಸ್ನೇಹಿತರಂತೂ, ಫೋನ್ ಮಾಡಿದ ತಕ್ಷಣ ಕೇಳುವ ಮೊದಲ ಸಾಲು, ಬಂದರೇ ಏನಾದರೂ ಇದೆಯಾ? ಏನು ಇಲ್ಲವೆಂದರೇ ಅವರು ಈ ಕಡೆಗೆ ಬರುವುದೇ ಇಲ್ಲ. ಎಂಥಹ ವಿಪರ್ಯಾಸವಲ್ಲವೇ, ಸ್ನೇಹಿತರು ನಿಮ್ಮನ್ನು ಕಾಣಲು ಬರಬೇಕೆಂದರೇ, ಅವರಿಗೆ ನೀವು, ಹೆಂಡ, ಸಿಗರೇಟು, ಮೋಜಿಗೊಂದು ಸಿನೆಮಾ ಇರಲೇ ಬೇಕು ಇದು ಸ್ನೇಹವಾ ವ್ಯಭಿಚಾರವಾ?

04 ಸೆಪ್ಟೆಂಬರ್ 2010

ದೂರಾಗುವ ಮುನ್ನಾ.......!!!

ಜೀವನದಲ್ಲಿ ಯಾವುದೂ ಶಾಶ್ವತವಲ್ಲವೆಂದು ಸದಾ ನಾವು ಬೊಬ್ಬೆ ವಾಸ್ತವದಲ್ಲಿ ಅದನ್ನು ಒಪ್ಪಲ್ಲು ಸಿದ್ದವಿರುವುದಿಲ್ಲ. ಸೋಲು ಗೆಲುವೆಂಬುದು ಅಷ್ಟೇ, ಶಾಶ್ವತವಲ್ಲ. ಆದರೇ ಅದನ್ನು ಓಪ್ಪುವುದಿಲ್ಲ. ಒಂದು ವಿಷಯದಲ್ಲಿ ಸೋತ ಕ್ಷಣದಲ್ಲಿ ಜೀವನವೇ ಸೋತಂತೆ ಅಥವಾ ಸತ್ತಂತೆ ಆಡುವುದರಿಂದ ಬರುವುದೇನು? ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಬದುಕುವುದು ಮತ್ತು ಬದುಕನ್ನು ರೂಪಿಸಿಕೊಳ್ಳುವುದು ಬಹುಮುಖ್ಯವಾಗುತ್ತದೆ.ಹಾಗೆಯೇ ನಿನ್ನೆಯ ತನಕ ಇದ್ದ ನೌಕರಿ ಇಂದು ಬೆಳ್ಳಿಗ್ಗೆ ಏಳುವ ವೇಳೆಗೆ ಇಲ್ಲದಾದಾಗ ಅದನ್ನು ಜೀರ್ಣಿಸಿಕೊಳ್ಳಬೇಕಾಗುತ್ತದೆ. ನಿನ್ನೆಯ ತನಕವಿದ್ದ ಜೀವದ ಗೆಳತಿ/ಗೆಳೆಯ ಇಂದು ನಮ್ಮಿಂದ ದಿಡೀರನೆ ದೂರಾದರೆ ಅದನ್ನು ಅರಗಿಸಿಕೊಳ್ಳಬೇಕಾಗುತ್ತದೆ. ದೂರಾಗುವ ವೇಳೆ ಬಹುಮುಖ್ಯ ಕುತೂಹಲ ತಲೆದೋರುತ್ತದೆ. ಅವನು ನನ್ನಿಂದ ದೂರಾಗಲು ಕಾರಣವೇನು? ಅಥವಾ ಅವಳು ನನ್ನನ್ನು ತಿರಸ್ಕರಿಸಲು ಕಾರಣವೇನು? ನಾವು ನಮ್ಮ ದೃಷ್ಟಿಯಲ್ಲಿ ನಾವು ಅವರನ್ನು ನಮಗಿಂತಲೂ ಹೆಚ್ಚು ಪ್ರೀತಿಸಿದ್ದೂ ಕೂಡ ಅವರು ನಮ್ಮನ್ನು ಬಿಟ್ಟು ಹೋಗುವ ಅನಿವಾರ್ಯತೆ ಇದ್ದದ್ದು ಹೇಗೆ. ಇದು ಕೇವಲ ಪ್ರೀತಿಸಿದವರಿಗೆ ಸಲ್ಲುವ ಪ್ರಶ್ನೆಯಲ್ಲ, ಮದುವೆಯಾದವರಿಗೂ, ಮದುವೆಯಾಗಿ ವರ್ಷಾನುಗಟ್ಟಲೇ ಸಂಸಾರ ಮಾಡಿದವರಿಗೂ ಕಾಡುವ ಪ್ರಶ್ನೆ.
ಒಬ್ಬರನ್ನು ಒಬ್ಬರು ಪ್ರೀತಿಸಿದರೇ ಸಾಯುವ ತನಕ ಅಥವ ಈ ಜನ್ಮ ಇರುವ ತನಕ ಜೊತೆಯಲ್ಲಿರಬೇಕೆಂಬುದು ಸಹಜವೆನಿಸಿದರೂ ಕೂಡ, ಅದು ಆಗಲೇ ಬೇಕೆಂಬುದು ಯಾವ ನ್ಯಾಯ. ಪ್ರೀತಿಸಿ ಮದುವೆಯಾದವನು, ಅಥವಾ ಅವಳು ಮದುವೆಯಾದ ಮರುದಿನವೇ, ಅಪಘಾತದಲ್ಲಿ ಕೈ ಕಾಲು ಕಳೆದು ಕೊಂಡರೇ, ಊನವಾದರೇ, ವಾಸಿ ಆಗದ ಖಾಯಿಲೆ ಬಿದ್ದರೇ ಅವರ ಜೊತೆಯಲ್ಲಿ ಇವರ ಜೀವನವೂ ಹಾಳಾಗಬೇಕೆ? ಇಬ್ಬರೂ ನೋವು ಪಡೆಯುವುದಕ್ಕಿಂತ ಒಬ್ಬರು ಸಂತೋಷದಿಂದಿರುವುದು ಮಾನವೀಯತೆಯಲ್ಲವೇ? ಅವರು ಬೇರೆ ಆಗಿ, ಜೀವನ ಸಾಗಿಸುವುದು ಉತ್ತಮವಲ್ಲವೇ? ಪ್ರಿತಿಸಿದ ತಕ್ಷಣ ಆ ವ್ಯಕ್ತಿ ನಮ್ಮವನು, ನನ್ನವನು ಎಂದು ಅಧಿಕಾರ ಸಾಧಿಸುವುದರ ಹಿಂದಿನ ಮರ್ಮವೇನು? ನಾವೆಷ್ಟೇ ಪ್ರೀತಿಸಿದರೂ ಅದು ಇನ್ನೊಬ್ಬರ ಉಸಿರು ಕಟ್ಟಿಸುವ ಪ್ರೀತಿ ಆಗಬಾರದಲ್ಲವೇ? ನಾವು ಹೆಳಿದನ್ನೇ ಕೇಳಬೇಕು, ಕರೆದೆಡೆಗೆ ಬರಬೇಕು? ಮಧ್ಯರಾತ್ರಿ, ಮುಂಜಾನೆ, ಮುಸ್ಸಂಜೆ ಎಷ್ಟೊತ್ತೆಂದರೇ ಅಷ್ಟೊತ್ತಿನ್ನಲ್ಲಿ ಸೆಕ್ಸ್ ಬೇಕು, ಮುದ್ದಾಡಬೇಕು, ಆರೋಗ್ಯ ಕೆಟ್ಟಿ ಬಿದ್ದಿದ್ದರೂ ಅವಳು ನನ್ನೊಡನೆ ತನ್ನನ್ನು ತೊಡಗಿಸಿಕೊಳ್ಳಬೇಕು. ಇದೆಂಥಹ ವಿಕೃತ ಮನಸ್ಸು ನಮ್ಮದು. ಪ್ರೀತಿಸುವ ಹುಡುಗಿಯಾದ ನೀನು ಅಷ್ಟೇ, ಅವನನ್ನು ಅರ್ಥೈಸಿಕೊಳ್ಳುವ ಮನಸ್ಸು ಮಾಡಬಾರದೇ? ಪ್ರೀತಿಸುವ ಎರಡು ಮನಸ್ಸುಗಳಲ್ಲಿ ಒಂದರಲ್ಲಿ ಪ್ರೀತಿ ಕುಗ್ಗುತ್ತಾ ಬರುತ್ತಿದ್ದೆ, ಅಥವಾ ಆಸಕ್ತಿ ಕಡಿಮೆಯಾಗುವುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರೀತಿ ಕ್ಷೀಣಿಸುವುದು ಅಪರಾಧವೇನಲ್ಲ. ಅದು ಸದಾ ಒಂದೇ ಬಗೆಯಾಗಿರುವುದಿಲ್ಲ, ಒಬ್ಬರೂ ಆಸಕ್ತಿ ಕಳೆದುಕೊಂಡಲ್ಲಿ, ಮತ್ತೊಬ್ಬರೂ ಕಳೆದುಕೊಳ್ಳುತ್ತಾರೆ, ತಕ್ಕ ಮಟ್ಟಿಗೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಪ್ರೀತಿ ಬರುವುದು ನಿಮಗೆ ಎಲ್ಲವೂ ಸಮರ್ಪಕವಾಗಿದ್ದಾಗ ಎನ್ನುವುದು ಕಟು ಸತ್ಯ, ಉದ್ಯೋಗ, ಸ್ವಂತ ಸಂಪಾದನೆ, ವಿದ್ಯಾಬ್ಯಾಸ, ಇದೆಲ್ಲವೂ ಇಲ್ಲದೇ ಇದ್ದಿದ್ದರೇ ಪ್ರೀತಿ ಸಿಗುವುದೇ? ಸೌಂದರ್ಯವಿಲ್ಲದ ಹುಡುಗಿಯನ್ನು ಪ್ರೀತಿಸಲು ಮುಂದೆ ಬರುವ ಗಂಡಸರು ಬಹಳ ಕಡಿಮೆ ಅಲ್ಲವೇ? ಆಂತರಿಕ ಪ್ರೀತಿ ಎಂದು ನಾವು ಎಷ್ಟೇ ಬೊಬ್ಬೆ ಹೊಡೆದರು, ವಾಸ್ತವಿಕತೆ ಬಹು ಮುಖ್ಯವೆನಿಸುತ್ತದೆ. ನೈಜತೆಗೆ ಹತ್ತಿರ ನಿಂತು ಚಿಂತನೆ ಮಾಡಬೇಕಾಗುತ್ತದೆ. ನಿಜವಾದ ಪ್ರೀತಿ ಏನು? ನಾವು ಪ್ರೀತಿಸುವವರನ್ನು ಸಂತೋಷದಿಂದಿಡುವುದು. ನಾವು ಇದ್ದರೂ ಇಲ್ಲದಿದ್ದರೂ ಅವರು ಸಂತೋಷದಿಂದಿರುವಂತೆ ನಾವು ಮಾಡಬೇಕು. ಅದಕ್ಕಾಗೆ ಪ್ರಯತ್ನಿಸಬೇಕು, ನನ್ನೊಡನೆ ಇರುವಾಗ ಮಾತ್ರ ಖುಷಿ ಆಗಿರು, ನಾನಿಲ್ಲದ ಮರು ಕ್ಷಣ ನೀನು ಸತ್ತು ಹೋಗು, ಹಾಳಾಗು ಎಂದು ಬಯಸಿದರೇ ಅದು ಪ್ರೀತಿ ಆಗುವುದೇ? ನಾನು ಹೇಳಿದ್ದನ್ನು ಕೇಳಿದರೇ ಮಾತ್ರ ಪ್ರ‍ೀತಿ ನನ್ನೊಡನೆ ಇದ್ದರೇ ಮಾತ್ರ ಪ್ರಿತಿ ಇಲ್ಲದಿದ್ದರೇ ನಿನ್ನನ್ನು ಸಾಯಿಸುತ್ತೇನೆ, ಆಸಿಡ್ ಹಾಕುತ್ತೇನೆ ಎನ್ನುವ ಕ್ರೌರ್ಯವನ್ನು ಪ್ರೀತಿ ಎನ್ನವುದೇಗೆ? ಅದು ಪ್ರೀತಿಯಾ? ಪ್ರೀತಿಯಲ್ಲಿ ದೈವಿಕತೆಯನ್ನು ಕಾಣಬೇಕು, ಪ್ರೀತಿ ಇರುವುದು ದೇವರನ್ನು ಕಾಣಲು, ನಮ್ಮನ್ನು ಪ್ರೀತಿಸಿದವನ/ಳ ಸಂತೋಷವನ್ನು ಬಯಸದ ನಾವು ನಮ್ಮ ಸ್ವಾರ್ಥಕ್ಕೆ ಅವರನ್ನು ಬಲಿ ಪಶು ಮಾಡುವುದು ನ್ಯಾಯವೇ?
ಕೇವಲ ದೇಶದ ಹಿತಕ್ಕಾಗಿ, ಪ್ರಾಣ ಕೊಡುವ ತಮ್ಮ ಸರ್ವ ಸಂತೋಷವನ್ನೇ ಮುಡುಪಾಗುವ ಸೈನಿಕರು ನಮಗೆ ನೆನಪೇ ಆಗುವುದಿಲ್ಲವಲ್ಲವೇ? ಲಾಟಿನ್ ಅಮೇರಿಕಾಕ್ಕೆ ಮೊದಲಿನಲ್ಲಿ ಹೋದ ಕ್ರೈಸ್ತ ಮತ ಪ್ರಚಾರಕರನ್ನು ಅಲ್ಲಿನ ಬುಡಕಟ್ಟು ಜನರು ಹೊತ್ತುಕೊಂಡು ಹೋಗಿ ತಿನ್ನುತ್ತಿದ್ದರೂ, ಆದರೂ ಎದೆಗುಂದದೇ ಹೋಗಿ ಅವರನ್ನು ನಾಗರೀಕರನ್ನಾಗಿಸಿದರು. ಅವರಲ್ಲಿ ಯಾವ ಸ್ವಾರ್ಥವಿತ್ತು, ಇಡೀ ಜನಾಂಗವನ್ನೆ ಅಲ್ಲ ಮನುಕುಲವನ್ನೇ ಪ್ರೀತಿಸಿದವರು, ಅವರೆಂದು ಸ್ವಾರ್ಥ ಈಡೇರಿಸಿಕೊಳ್ಳಲಿಲ್ಲ. ಮತ್ತೆ ನಾವೇಕೆ, ಸ್ವಾರ್ಥದ ಪ್ರೀತಿಯ ಗುಲಾಮರಾಗಬೇಕು?ಒಬ್ಬ ವ್ಯಕ್ತಿಯನ್ನು ಪ್ರೀತಿಸಿದ ಒಂದು ಮನಸ್ಸನ್ನು ವಶ ಪಡಿಸಿಕೊಳ್ಳಲು ಸಾಯುವವರೆಗೂ ಚಿಂತಿಸುವ ನಾವು, ನಮ್ಮನ್ನು ಸಾಕಿ ಸಲಹಿದ ತಂದೆ ತಾಯಿಯರ ಬಗೆಗೆ ಏಕೆ ಅಂಥಹ ನಿಲುವು ಬರುವುದಿಲ್ಲ. ವಿದ್ಯಾವಂತರಾಗಿ ವ್ಯವಸ್ಥೆ, ಈ ದರಿದ್ರ ಸಮಾಜ ನಮಗೆ ಕೊಟ್ಟ ಕಷ್ಟಗಳಿಗಿಂತ ಹೆಚ್ಚು ಕಷ್ಟವನ್ನು ನಾವು ಪ್ರೀತಿಸಿದವರು ಕೊಟ್ಟಿದ್ದಾರೆಯೇ? ನಾನು ನಾಲ್ಕಾರು ವರ್ಷ ಪ್ರೀತಿಸಿದ ಹುಡುಗಯನ್ನು ನಮ್ಮ ತಂದೆ ತಿರಸ್ಕರಿಸಿದರೇ, ಇವಳು ನನ್ನನ್ನು ತಿರಸ್ಕರಿಸಿ ಹೊರಟರೇ, ತಂದೆಗೂ ಇವಳಿಗೂ ವ್ಯತ್ಯಾಸವೇನು? ಇಬ್ಬರೂ ಸ್ವಾರ್ಥಿಗಳೇ ತಾನೆ? ನಾನು ಹುಟ್ಟಿಸಿ ಬೆಳೆಸಿದ ಮಗ ನಾನು ಹೇಳಿದಂತೆ ಕೇಳಬೇಕು, ಅವನು ನನ್ನ ಗುಲಾಮವೆನ್ನುವಂತೆ ತಂದೆ ಹೇಳಿದರೇ, ಜೀವದ ಗೆಳತಿಯಾದವಳು, ನೀನು ನನ್ನ ಜೀತದಾಳು ನಾನು ಹೇಳಿದಂತೆ ನೀನು ಕೇಳಬೇಕೆಂದರೇ, ಇಬ್ಬರೂ ಸ್ವಾರ್ಥದ ಮತ್ತೊಂದು ಮುಖವೆನಿಸುವುದಿಲ್ಲವೇ. ಪ್ರೀತಿಸಿದವನ ಸುಖವನ್ನು ಬಯಸುವುದೆಂದರೇ ಇದೇನಾ? ಪ್ರತಿಯೊಬ್ಬ ಮನುಷ್ಯನಲ್ಲಿಯೂ ಅವನದೇ ಆದ ಅವನು ಇರುತ್ತಾನೆ. ಅದನ್ನು ಯಾರು ಬಲವಂತದಿಂದ ಬದಲಾಯಿಸಬಾರದು. ಯಾವುದು ಶಾಶ್ವತವಲ್ಲದ ಬದುಕಿನ್ನಲ್ಲಿ ನಮ್ಮ ಪ್ರೀತಿ ನಾವು ಪ್ರೀತಿಸಿದವರು ಶಾಶ್ವತವೆಂದರೇ ಮೂರ್ಖತನದ ಪರಮಾವಧಿ ಎನಿಸುವುದಲ್ಲವೇ? ಕೊಡುವುದರಲ್ಲಿ ಇರುವ ಸುಖ ಗುಲಾಮಗಿರಿಯಲ್ಲಿ ಇರುವುದಿಲ್ಲ, ಕೊಟ್ಟಷ್ಟು ಸಿರಿವಂತರಾಗುತ್ತೇವೆ. ಕೊರಗಿದಷ್ಟು ಚಿಕ್ಕವರಾಗುತ್ತೇವೆ.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...