19 ಸೆಪ್ಟೆಂಬರ್ 2011

ಭವ್ಯ ದೇಶ ಭ್ಯವ ಜನ ಅಲ್ಪ ನೀಚರು!!!

ಭಾರತದಂತಹ ಒಂದು ಸುಂದರವಾದ ದೇಶ, ಸಮಾಜ ಬೇರೆಲ್ಲೂ ಸಿಗಲು ಸಾಧ್ಯವೇ ಇಲ್ಲ ಎನಿಸುತ್ತದೆ ನನಗೆ. ಇಲ್ಲಿ ಎಲ್ಲಾ ಇದ್ದರೂ, ಏನೂ ಇಲ್ಲದಿದ್ದರೂ ಒಂದೇ ರೀತಿಯಲ್ಲಿರುತ್ತಾರೆ. ಹಾಗೇಯೇ ನೀವು ಗಮನಿಸಿ, ನಮ್ಮ ಸುತ್ತಲಿನ ಶೇ.೯೫ ರಷ್ಟು ಜನರು ನಮ್ಮ ನಿಮ್ಮಂತೆಯೇ ಇದ್ದಾರೆ. ಸಣ್ಣ ಸಣ್ಣ ವಿಷಯಗಳಿ ಚಿಂತಿಸುತ್ತಾರೆ, ದೊಡ್ಡ ವಿಷಯಗಳು ನಮ್ಮದಲ್ಲವೆನ್ನುತ್ತಾರೆ, ಸಮಾಜ, ಶ್ರೀಮಂತರು, ರಾಜಕಾರಿಣಿಗಳು, ಅಧಿಕಾರಿಗಳು ಇವರೆಲ್ಲರೂ ನಮ್ಮಂತೆಯೇ ಮನುಷ್ಯರೆಂದು ನಾವೆಂದೂ ಭಾವಿಸುವುದಿಲ್ಲ. ಒಳ್ಳೆಯವನಿದ್ದರೇ ದೇವರಂಥವನು ಎನ್ನುತ್ತೇವೆ, ಕೆಟ್ಟವರಿದ್ದರೇ ದೆವ್ವ, ರಾಕ್ಷಸ ಎನ್ನುತ್ತೇವೆ. ಇದೆಲ್ಲವೂ ಏಕೆ? ನಮ್ಮ ಮನದಾಳದಲ್ಲಿ ಶತಮಾನದ ಹಿಂದೆಯಿಂದಲೇ ಒಂದು ಛಾಪು ಮೂಡಿದೆ, ನಮ್ಮ ಕರ್ಮಶಾಸ್ತ್ರ ನಮ್ಮನ್ನು ಆವರಿಸಿದೆ. ಇದೆಷ್ಟರ ಮಟ್ಟಿಗೆ ಸರಿ ತಪ್ಪು ಎನ್ನುವ ರೇಜಿಗೆ ನಮಗೀಗ ಬೇಡ. ಚಿಕ್ಕ ಪುಟ್ಟ ಉದಾಹರಣೆಗಳನ್ನು ತೆಗೆದುಕೊಳ್ಳಿ, ಒಂದು ಸ್ಕೂಲಿಗೆ ಸೇರಿಸಲು ಅರ್ಜಿ ತರಲು ಹೋಗುವ ತಂದೆಯನ್ನು ತಾಯಿಯನ್ನು ನೋಡಿ, ಅಲ್ಲಿರುವ ವಾ಼ಚ್ ಮ್ಯಾನ್ ಕಂಡರೂ ಭಯ, ಭಕ್ತಿ, ಅಯ್ಯೋ ನನ್ನ ಮಗುವಿಗೆ ಸೀಟು ಸಿಗುತ್ತದೋ ಇಲ್ಲವೋ ಎಂದು ಅವನಿಗೂ ನಮಸ್ಕಾರ ಹೊಡೆದು ಹೋಗುತ್ತಾರೆ. ಮೆಜೆಸ್ಟಿಕ್ ನಲ್ಲಿ ಬೈಕ್ ಪಾರ್ಕ್ ಮಾಡಿ ಬರುವಾಗ ನೋಡಿ, ಮನೆಯಲ್ಲಿ ಸ್ವಂತ ಮಗನಿಗಿಂತ ಹೆಚ್ಚು ಮುದ್ದು ಮಾಡುವ ಬೈಕ್ ಅನ್ನು ದರ ದರ್ ಎಳೆದರೂ ಮಾತನಾಡುವುದಿಲ್ಲ, ಒಂದು ಬಗೆಯ ಅಂಜಿಕೆ, ಭಯ. ಎಂಥೆಂತವರಿಗೆಲ್ಲಾ ಹೆದರಿ ಬದುಕುತ್ತಾರೆ. ಕೆ.ಎಸ್.ಆರ್.ಟಿಸಿ ಬಸ್ಸಿನಲ್ಲಿ ಬರುವವರನ್ನು ನೋಡಿ, ಡ್ರೈವರ್ ಸಾಹೇಬರೇ ಸ್ವಲ್ಪ ಇಲ್ಲೇ ನಿಲ್ಲಿಸಿ ಅಂತಾ ಗೋಗರೆಯುತ್ತಾರೆ, ಡ್ರೈವರ್ ನಿಲ್ಲಿಸುವುದೇ ಇಲ್ಲಾ. ಒಬ್ಬ ವಾಚ್ ಮ್ಯಾನ್, ಒಬ್ಬ ಡ್ರೈವರ್, ಒಬ್ಬ ಕಂಡಕ್ಟರ್, ಒಬ್ಬ ಹೋಟೆಲ್ ಮಾಲಿ, ಒಬ್ಬ ಬೈಕ್ ಪಾರ್ಕಿಂಗ್ ನವನು, ಅಲಂಕಾರ್ ಪ್ಲಾಜ಼ಾದಲ್ಲಿ ಕೆಲಸ ಮಾಡುವ ಹುಡುಗ, ಹೂವು ಮಾರುವವನು ಕಡಿಮೆ ದುಡ್ಡಿಗೆ ಕೇಳಿದರೇ ಉಗಿಯುತ್ತಾನೆ. ಇವರೆಲ್ಲರೂ ಅಷ್ಟೇ, ಸಾಮಾನ್ಯ ಮನುಷ್ಯನನ್ನು ಕಂಡರೆ ಸಿಡಿದು ಬೀಳುತ್ತಾರೆ. ಎರಡು ರೂಪಾಯಿ ಟಿಪ್ಸ್ ಸಿಗದೇ ಇದ್ದರೇ ಬಾಯಿಗೆ ಬಂದಂತೆ ಬೈಯುತ್ತಾರೆ.
ಪ್ರಶ್ನಿಸುತ್ತಾ ಹೋದರೇ, ಏಕೆ ಒಂದು ವರ್ಗದವರು ಹೆದರಿ, ಅಂಜಿಕೊಂಡು ಬದುಕುತ್ತಾರೆ, ಮತ್ತೊಂದು ಗುಂಪು ದೌರ್ಜನ್ಯ ನಡೆಸುತ್ತದೆ? ಹಾಗೆ ಯೋಚಿಸಿ ನೋಡಿದರೇ, ದೌರ್ಜನ್ಯ ಮಾಡುವ, ದಬ್ಬಾಳಿಕೆ ನಡೆಸುವವರು ಮಧ್ಯಮ ವರ್ಗದವರೇ ಆಗಿರುತ್ತಾರೆ, ಅವರು ಇಂಥಹ ಸಮಸ್ಯೆಗಳೊಳಗೆ ಮುಳುಗಿರುತ್ತಾರೆ. ಆದರೇ ಅವರಿಗೆಲ್ಲಾ ಕೆಟ್ಟ ವ್ಯಕ್ತಿಗಳು ಪರಿಣಾಮ ಬೀರಿರುತ್ತಾರೆ. ಜನಾರ್ಧನ ರೆಡ್ಡಿ, ಶ್ರೀರಾಮುಲು ಇಪ್ಪತ್ತು ವರ್ಷದ ಹಿಂದೆ ಏನು ಇಲ್ಲದೇ ಇಂದು ರಾಜ್ಯವನ್ನೇ ಆಳಲು ಹೊರಟಿದ್ದು ಮಾದರಿಯಾಗಿರುತ್ತದೆ. ಗತ್ತಿನಿಂದ ಯಾರೋ ಒಬ್ಬ ರಾಜಕಾರಣಿ ಮಾತನಾಡುವುದು ಸಾವಿರಾರು ಯುವಕರಿಗೆ ಮಾದರಿಯಾಗಿರುತ್ತದೆ. ಹಿರಿಯವರಿಗೆ ಮರ್ಯಾದೆ ಕೊಡದೆ ಇದ್ದರೇ ನಾವು ಮೇಲೆ ಬೆಳೆಯಬಹುದೆಂಬುದು ಒಂದು ಬಗೆಯ ತಪ್ಪು ಮಾಹಿತಿಯನ್ನು ಯುವಕರಲ್ಲಿ ತುಂಬಿರುತ್ತದೆ. ದುನಿಯಾ ವಿಜಿ, ಲೂಸ್ ಮಾದಾ ನಂತವರು ನಾಯಕರಾದ ಮೇಲೆ ನಾನು ಆಗಬಹುದೆಂಬು ಹುಂಬತನ ಹುಡುಗರನ್ನು ದಾರಿ ತಪ್ಪಿಸಿರುತ್ತದೆ. ಇದು ವಿವಿ ಗಳ ಮಟ್ಟದಲ್ಲಿಯೂ ಅಷ್ಟೇ, ಬೆಂಗಳೂರು ವಿವಿಯಲ್ಲಿ, ನಂದಿನಿ ಹೆಚ್ಚು ಹೆಚ್ಚು ಮೋಸ ವಂಚನೆ ಮಾಡಲು ಕಾರಣ ಸೋಮ ಶೇಖರ್. ಸೋಮಶೇಖರ್ ಮನೆ ಕಟ್ಟುವಾಗ ಮನೆಗೆ ಮರ ಮುಟ್ಟುಗಳನ್ನು ತಂದು ಕೊಟ್ಟಿದ್ದು ಅವರ ವಿದ್ಯಾರ್ಥಿಗಳು ಆದ್ದರಿಂದ ಇಂದು ನಂದಿನಿ ಅದನ್ನೇ ಮುಂದುವರೆಸುತ್ತಾರೆ. ಒಬ್ಬ ಎರಡು ಲಕ್ಷ ಪಡೆದು ಪಿಎಚ್ ಡಿ ಕೊಟ್ಟರೇ ಎಲ್ಲಾ ಗೈಡುಗಳು ಅದನ್ನೇ ಮಾದರಿಯನ್ನಾಗಿಸುತ್ತಾರೆ. ವಿದ್ಯಾರ್ಥಿಗಳಿಂದ ಮನೆ ಕೆಲಸ ಮಾಡಿಸುವುದು, ಮನೆಗೆ ಸಾಮಾನು ತರಿಸುವುದು, ಮಗಳಿಗೆ ಬೈಕ್ ತೆಗೆಸಿಕೊಳ್ಳುವುದು, ಶಾಲೆ ಕಾಲೇಜಿಗೆ ಸೇರಿಸಲು ಅರ್ಜಿ ತರಿಸುವುದು, ಬ್ಯಾಂಕ್, ಪಾಸ್ ಪೋರ್ಟ್ ಒಂದಲ್ಲ ಎರಡಲ್ಲ, ಕೊನೆಗೆ ಅವರು ಗಡ್ಡ ಬೋಳಿಸಲು ಬ್ಲೇಡ್ ಕೂಡ ವಿದ್ಯಾರ್ಥಿಗಳ ದುಡ್ಡಿನಿಂದಲೇ. ಇವೆಲ್ಲವೂ ಏಕೆ ಹೀಗೆ? ನೈತಿಕತೆ, ನ್ಯಾಯ, ಅನ್ಯಾಯ ಇದಾವುದು ಇವರಾರಿಗೂ ಸಂಭಂಧಿಸಿಯೇ ಇಲ್ಲವೆಂಬಂತೆ ವರ್ತಿಸುವುದಾದರೂ ಏಕೆ?
ಇದು ಕೇವಲ ವಿವಿಗಳಲ್ಲಿ ಮಾತ್ರವಲ್ಲ, ಎಲ್ಲಾ ಇಲಾಖೆಯಲ್ಲಿಯೂ ಅಷ್ಟೇ, ಮಾನ ಬಿಟ್ಟು ಲಂಚ ಕೇಳುತ್ತಾರೆ. ಮೈಸೂರಿನಲ್ಲಿ ನನ್ನ ಸ್ನೇಹಿತ ದ್ವಾರಕೀಶ್ ಜೊತೆಯಲ್ಲಿ ಕೆಲಸ ಮಾಡುವ ಒಬ್ಬ ಅಯೋಗ್ಯ ಸ್ವಂತ ಹಣದಲ್ಲಿಯೂ ಊಟ ಮಾಡುವುದಿಲ್ಲ. ಒಮ್ಮೆ ಬಂದ ರೈತನನ್ನು ಜೇಬಿನಲ್ಲಿದ್ದ ಎಲ್ಲ ಹಣವನ್ನು ಕಿತ್ತು ಖಾಲಿ ಕೈಯಲ್ಲಿ ಕಳುಹಿಸಿದ್ದಾನೆ. ಇಂತಹ ಅನಾಗರೀಕರ ವಿರುದ್ದ ಯಾರು ಏನು ಮಾಡಲಾಗುವುದಿಲ್ಲ. ಜನರು ಇದು ನಮ್ಮ ಹಣೆಬರಹವೆಂದು ಸುಮ್ಮನಾಗುತ್ತಾರೆ. ಮಾಧ್ಯಮದವರು, ಗಂಡ ಹೆಂಡತಿಯ ಜಗಳವನ್ನು, ಬೈಯ್ದಾಟವನ್ನು ತೋರಿಸಲು ತಳೆಯುವ ಆಸಕ್ತಿಯನ್ನು ಇಂಥಹ ನೀಚರ ಮೇಲೆ ತೋರಿಸುವುದಿಲ್ಲ.

ಐಡಿಯಾಲಜಿಗೆ ಕೆಲಸ ಮಾಡು ಕೂಲಿ ಕೆಲಸ ಬೇಡ!!!

ನಾನೆಂದು ಮನಸ್ಸಿನೊಳಗೆ ಬಚ್ಚಿಟ್ಟು ಕೊರಗುವವನಲ್ಲ, ಹೇಳಬೇಕಿರುವುದನ್ನು ಹೇಳಿಯೇ ತೀರುತ್ತೇನೆ, ಇಲ್ಲವೆಂದರೇ ಬರೆದು ತೀರಿಸಿಕೊಳ್ಳುತ್ತೇನೆ. ನನಗೆ ಕಾಡುವ ಪ್ರಶ್ನೆಗಳು ಎಲ್ಲರಿಗೂ ಕಾಡುತ್ತಿದ್ದೆಯಾ? ಇಂಥಹದೊಂದು ಪ್ರಶ್ನೆ ನನ್ನನ್ನು ಬಹಳ ವರ್ಷಗಳಿಂದ ಕೊಲ್ಲುತ್ತಿದೆ. ಮಲಗಿದ್ದವನಿಗೆ ದಿಡೀರನೆ ಎಚ್ಚರವಾಗುತ್ತದೆ, ಒಂದು ರೀತಿಯ ಭಯ, ರಾತ್ರಿ ನೋಡಿದ ವಾರ್ತೆಗಳ ನೆನಪು ನಿನ್ನೆ ಇಡೀ ದಿನ ಕಳೆದ ಕ್ಷಣಗಳು, ಸಂಜೆ ಬರುವಾಗ ಬಸ್ಸಿನಲ್ಲಿ ಕಂಡಕ್ಟರ್ ಚಿಲ್ಲರೆಯನ್ನು ನಂತರ ತೆಗೆದುಕೊಳ್ಳಿ ಎಂದು ಬರೆದುಕೊಟ್ಟಿದ್ದ, ಚಿಲ್ಲರೆಯನ್ನು ಮರೆತು ಬಂದೆ ಒಂದಲ್ಲ ಎರಡಲ್ಲ ಮುನ್ನೂರೈವತ್ತು ರೂಪಾಯಿಗಳು, ಅಯ್ಯೋ ದೇವರೇ ಎರಡು ದಿವಸ ದುಡಿಯಬೇಕಲ್ಲ, ಹದಿನೈದು ದಿನದ ಬಸ್ ಪಾಸಿಗೆ ಆಗುತ್ತಿತ್ತು. ಯಾಕೆ ಜನರು ನಮಗೆ ಹೀಗೆ ಮೋಸ ಮಾಡುತ್ತಾರೆ? ಬಸ್ಸಿನಿಂದ ಇಳಿದ ಮೇಲೆ ಊರಿನಿಂದ ಅಲ್ಪ ಸ್ವಲ್ಪ ದುಡ್ಡು ಉಳಿಸಲು ತಂದಿದ್ದ, ಅಕ್ಕಿ, ತೆಂಗಿನಕಾಯಿ, ಸ್ವಲ್ಪ ಅಡುಗೆ ಸಾಮಾನುಗಳನ್ನು ಹೊತ್ತುಕೊಂಡು ಸಿಟಿ ಬಸ್ ಕಾಯುತ್ತಿದ್ದರೇ ಬಸ್ಸೇ ಬರುತ್ತಿಲ್ಲ. ಆಟೋದವನನ್ನು ಕೇಳಿದ ಇರುವ ಎರಡು ಕೀಮೀರಿಗೆ ನೂರೈವತ್ತು ಕೇಳಿದ, ದೇವರೇ ಇಪ್ಪತು ರೂಪಾಯಿ ಇರುವ ಬೆಲೆಗೆ ನೂರೈವತ್ತು ರೂಪಾಯಿ? ನ್ಯಾಯವೆಂಬ ಮಾತಿಗೂ ನಿಲುಕದ್ದು. ಊರಿನಿಂದ ಇಪ್ಪತ್ತೈದು ಕೆಜಿ ಅಕ್ಕಿ ತಂದರೇ ಐದು ನೂರು ಉಳಿಸಬಹುದೆಂದು ನೋಡಿದರೇ, ಬಸ್ಸಿನಲ್ಲಿ ಮುನ್ನೂರೈವತ್ತು ಈಗ ಇಲ್ಲಿ ನೂರೈವತ್ತು, ಉಳಿಸಿದ್ದೇನು ಬಂತು. ಮನೆಯ ಹತ್ತಿರ ಬಂದೊಡನೆ, ಸಾರ್ ವಾಪಸ್ ಖಾಲಿ ಹೋಗಬೇಕು ಒಂದಿಪ್ಪತು ಸೇರಿಸಿ ಕೊಡಿ ಸಾರ್ ಎಂದ, ದೇವರೇ! ಇದೇನಪ್ಪಾ ಇದು ನನ್ನ ಕಥೆ ಎನಿಸಿತು. ನಾನು ಎರಡು ಚೀಲವನ್ನು ಹೊತ್ತು ಆಟೋಗೆ ಹಾಕುವಾಗ ನೆಪ ಮಾತ್ರಕ್ಕೂ ಸಹಾಯ ಮಾಡಲಿಲ್ಲ, ಅದರ ಬದಲಿಗೆ ಸಾಹುಕಾರನಂತೆ, ಕುಳಿತು, ನೋಡಿ ಹಾಕ್ರಿ ಸೀಟು ಜೋಪಾನ, ಎಂದ. ಮನೆಯ ಬಳಿಯಲ್ಲಿ ಇಳಿಸುವಾಗಲೂ ಅಷ್ಟೇ ಮನೆಯ ಒಳಕ್ಕೆ ಹಾಕಿ ಬರುತ್ತೇನೆಂದರೇ ಅಯ್ಯೋ ಲೇಟ್ ಆಗುತ್ತೇ ಸ್ವಾಮಿ ಮೊದಲು ಬಾಡಿಗೆ ಕೊಡಿ, ಬಿಟ್ಟರೇ ಅಕ್ಕಿ ಹಾಕಿ ಅಡುಗೆ ಮಾಡೋ ತನಕ ಇರು ಅಂತೀರ ಎಂದ. ನನಗಂತೂ ಕಣ್ಣು ಮಂಜಾದಂತಾಯಿತು.

ನಾನು ಎಲ್ಲಿ ಬದುಕುತ್ತಿದ್ದೇನೆ, ಜನರು ಯಾಕೆ ಹೀಗೆ ವರ್ತಿಸುತ್ತಾರೆ, ನನ್ನೂರಲ್ಲಿ ಚಿಕ್ಕವನಾಗಿದ್ದಾಗ ಮನೆಗೆ ಯಾರದ್ದೋ ಎತ್ತಿನ ಗಾಡಿಯನ್ನು ಹಿಡಿದು ಬಂದರೂ ಅವನು ಮನೆಯ ತನಕ ಬಂದು ಮನೆಯ ಒಳಕ್ಕೆ ಸಾಮಗ್ರಿಗಳನ್ನು ಹಾಕಿ ಜೋಡಿಸುವ ತನಕ ನಿಂತು ಹೋಗುತ್ತಿದ್ದ. ಇಂದೇಕೆ ಹೀಗಾಯಿತು? ಮುಂದುವರೆಯುವುದು, ಅಬಿವೃದಿ ಎಂದರೇ ಹೀಗೇನಾ? ಎಂದು ಯೋಚಿಸುವಾಗ ಬಿದ್ದ ಕನಸೇ ಇಷ್ಟೊಂದು ನೋವುಂಟು ಮಾಡುವುದಾದರೇ ದಿನನಿತ್ಯ ಇಂಥಹ ನೋವುಗಳನ್ನು ಅನುಭವಿಸುತ್ತಿರುವವರು? ನೆನೆದಾಗ ಕಣ್ಣುಗಳು ತೇವವಾಗಿದ್ದವು.

ನಾವು ಯೋಚಿಸುವುದೆಲ್ಲ ಕನಸಿನ್ನಲ್ಲಿ ಬರುತ್ತವೆ, ನಮ್ಮನ್ನು ಕಾಡುತ್ತವೆ. ದಿನದ ಮುಕ್ಕಾಲು ಭಾಗ ನನ್ನಂಥ ಲಕ್ಷಾಂತರ ಜನ ಸಾಮಾನ್ಯರು ಒಪ್ಪತ್ತಿನ ಊಟದ ಬಗ್ಗೆ, ಅನ್ಯಾಯದ ಬಗ್ಗೆ ಮನಸ್ಸಿನೊಳಗೆ ಕೊರಗುತ್ತೇವೆ. ಅನ್ಯಾಯ ಮಾಡುವವನಿಗೆ ಅದೇನು ಎನಿಸುವುದೇ ಇಲ್ಲ. ನನ್ನ ಪರ್ಸ್ ಕಳೆದು ಹೋಗಿ, ಅಲ್ಲಿರುವ ಎಟಿಎಂ ಕಾರ್ಡುಗಳು, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಸ್ಮಾರ್ಟ್ ಕಾರ್ಡ್ ಹೀಗೆ ಎಲ್ಲವನ್ನು ಕಳೆದುಕೊಂಡು ಪೋಲಿಸರ ಬಳಿಗೆ ಹೋಗಿ ದಯವಿಟ್ಟು ಕಂಪ್ಲೈಂಟ್ ತೆಗೆದುಕೊಳ್ಳಿ, ಡೂಪ್ಲಿಕೇಟ್ ತೆಗೆದುಕೊಳ್ಳಬೇಕು, ನೀವೇನು ಹುಡುಕಿಕೊಡುವುದು ಬೇಡವೆಂದರೂ ಲಂಚಕೊಡಬೇಕು, ವಕೀಲರಿಂದ ಅಫಿಡವಿಟ್ ತರಬೇಕು. ಆರ್ ಟಿ.ಓ.ದಲ್ಲಿ ಕೂಡ ಅಫಿಡವಿಟ್ ಕೊಡಬೇಕು. ನೂರು ರೂಪಾಯಿ ಕೊಟ್ಟರೇ ಬೈಕ್ ಇಲ್ಲದೇ ಇರುವವನಿಗೂ ಅಫ್ಹಿಡವಿಟ್ ರೆಡಿ. ಇದೆಂಥಹ ಬದುಕು ಎನಿಸುತ್ತದೆ. ಜನರು ಇಷ್ಟೊಂದು ಬಟ್ಟ ಬಯಲಾಗಿ ಮಾನ ಮರ್ಯಾದೆಬಿಟ್ಟು ಕಾಸಿಗೆ ಹೇಸಿಗೆ ತಿನ್ನಲು ನಿಂತ್ತಿದಾರಲ್ಲ ಎನಿಸುತ್ತದೆ.

ಇವಲ್ಲವೂ ಒಂದೆಡೆಗಿದ್ದರೆ, ಇನ್ನು ರಾಜಕಾರಿಣಿಗಳು ನಮ್ಮನ್ನು ಅನಾಗರೀಕರೆಂಬಂತೆ ನಡೆಸಿಕೊಳ್ಳುತ್ತಿದ್ದಾರೆ. ಅದಕ್ಕೊಂದು ಸೂಕ್ತ ಉದಾಹರಣೆಯನ್ನು ನೀಡುತ್ತೇನೆ. ನಾನು ವೈಯಕ್ತಿಕವಾಗಿ ಯಾವ ರಾಜಕಾರಿಣಿಯ ಮನೆಗೂ ಹೋಗುವುದಿಲ್ಲ, ಮತ್ತು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ರಾಜಕಾರಣವೆಂಬುದೇ ಹೇಸಿಗೆಯ ವಿಷಯ ನನಗೆ. ಮೊನ್ನೆ ಮೊನ್ನೆ ನಮ್ಮ ಕ್ಷೇತ್ರದ ಶಾಸಕರ ಮನೆಗೆ ಹೋಗುವ ಅನಿವಾರ್ಯತೆ ಬಂತು, ಅಲ್ಲಿ ಹೋದಾಗ, ನನಗೆ ನಮ್ಮ ಶಾಸಕರ ಬಗ್ಗೆ ಒಳ್ಳೆಯ ಅಬಿಪ್ರಾಯಗಳು ಇಲ್ಲ. ಆದರೂ ಮನೆಗೆ ಹೋದಾಗ ಶಾಸಕರ ಪತ್ನಿ, ಮಾತನಾಡಿದ ರೀತ ನೋಡಿ ಬಹಳ ಆಶ್ಚರ‍್ಯವಾಯಿತು. ರಾಜಕಾರಿಣಿಯಾಗಿ ಅವರು ಸಮಾಜದ ಬಗ್ಗೆ, ಪರಿಸರದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿರುವುದು ನನಗೆ ಅತೀವ ಸಂತೋಷವನ್ನುಂಟುಮಾಡಿತು. ಅದರ ಪರಿಣಾಮವಾಗಿ ಅವರು ತಮ್ಮ ಮಗನನ್ನು ಭೇಟಿ ಮಾಡಿ, ಅವನು ಪರಿಸರದ ಬಗ್ಗೆ ಸಮಾಜದ ಬಗ್ಗೆ ಬಹಳ ಕಾಳಜಿ ಹೊಂದಿದ್ದಾನೆಂದು ತಿಳಿಸಿದರು. ಅದರಂತೆಯೇ ಅವನನ್ನು ಭೇಟಿ ಮಾಡುವ ಸಮಯ ಬಂದಿತು.

ಆತ ವೃತ್ತಿಯಲ್ಲಿ ವೈದ್ಯರಾಗಿರುವುದರಿಂದ, ಕೆಂಪೇಗೌಡ ಆಸ್ಪತ್ರೆಯಲ್ಲಿಗೆ ಹೋದೆ. ಹತ್ತು ನಿಮಿಷದಲ್ಲಿ ಬರುತ್ತೇನೆಂದವನು, ಹೆಚ್ಚು ಕಡಿಮೆ ಎರಡು ಗಂಟೆಗಳ ಕಾಲ ನನ್ನನ್ನು ಕಾಯಿಸಿದ. ನನಗೆ ಕೋಪ ಬಂದಿತ್ತಾದರೂ ತಡೆದುಕೊಂಡೆ. ಅವನಿಗೂ ನನಗೂ ಆಗಬೇಕಿರುವ ಕೆಲಸವೇನೂ ಇರಲಿಲ್ಲ, ಕೇವಲ ಒಬ್ಬ ಖಾಸಗಿ ಆಸ್ಪತ್ರೆಯ ವೈದ್ಯ. ಅವರಪ್ಪ ಶಾಸಕನಾಗಿದ್ದರೂ ನಾನು ಶಾಸಕರಿಂದ ಕೆಲಸ ಮಾಡಿಸಿಕೊಳ್ಳುವ ಅಥವಾ ನೆರವು ಪಡೆದಿಲ್ಲ. ಆದರೂ ಇವನನ್ನು ನಾನೇಕೆ ಕಾಯಬೇಕು, ಇವನಿಂದ ನನಗೆ ಆಗಬೇಕಿರುವುದೇನು? ಯಾವುದೇ ರಾಜಕಾರಿಣಿಯಿಂದ ಜನಸಾಮಾನ್ಯರ ಕೆಲಸ ಆಗುತ್ತದೆಂಬುದನ್ನು ನಾನು ಒಪ್ಪುವುದಿಲ್ಲ, ನಮ್ಮ ವ್ಯವಸ್ಥೆಯಲ್ಲಿ ಅಧಿಕಾರಿಗಳು ಯಾವು ಅನಾಗರೀಕ, ರಾಜಕಾರಿಣಿಯನ್ನು ನಂಬಿ ಕೆಲಸ ಮಾಡುವುದಿಲ್ಲ, ಅದರ ಬಗ್ಗೆ ನನಗೆ ಬಹಳ ಸಂತೋಷವಿದೆ. ತಡವಾಗಿ ಬಂದರೂ ಅವನಿಗೆ ನನ್ನನ್ನು ಕಾಯಿಸಿದೆ ಎನ್ನುವುದರ ಬಗ್ಗೆ ಸ್ವಲ್ಪವೂ ಬೇಜಾರಿರಲಿಲ್ಲ. ನನ್ನ ಕೋಪ ನೆತ್ತಿಯಲ್ಲಿತ್ತು. ನಾನು ನಮ್ಮ ನಡುವೆ ನಡೆದ ಸಂಪೂರ್ಣ ಸಂವಾದವನ್ನು ಇಲ್ಲಿ ಹೇಳುವುದಿಲ್ಲ, ಸಂಕ್ಷೀಪ್ತವಾಗಿ ಸಾರಾಂಶವನ್ನುಮಾತ್ರ ಇಡುತ್ತೇನೆ.

ಅವನ ದೃಷ್ಠಿಯಲ್ಲಿ, ಭಾರತವೆಂಬ ದೇಶ ಹುಟ್ಟುವುದಕ್ಕೆ ಕಾರಣ ಬ್ರಿಟೀಷರು, ಅವರು ಬಂದ ನಂತರವೇ ನಾವು ಬೆಳಕಿಗೆ ಬಂದದ್ದು, ನಾಕರೀಕರಾದದ್ದು. ಹತ್ತು ಸಾವಿರ ವರ್ಷಗಳ ಇತಿಹಾಸ ಇರುವ ಭಾರತಕ್ಕೆ ಆಂಗ್ಲರು ಬಂದು ನಾಗರೀಕತೆಯನ್ನು ತೋರಿಸಿದರೆಂಬುದು ಅವನ ಅಬಿಪ್ರಾಯ. ಕೃಷಿ ರಂಗದಲ್ಲಿ, ರಸಾಯನಿಕ, ಟ್ರಾಕ್ಟರು, ಟಿಲ್ಲರು, ಬಂದಮೇಲೆ ಕೃಷಿ ಉದ್ದಾರವಾಯಿತೆಂಬುದು ಅವರ ನಂಬಿಕೆ. ಶತಮಾನಗಳಿಂದ, ದನಕರುಗಳು, ಕುರಿ ಮೇಕೆ, ಎಲ್ಲವನ್ನು ಜೊತೆಯಲ್ಲಿರಿಸಿಕೊಂಡು ಬದುಕಿರುವ ನಮ್ಮ ದೇಶದ ರೈತಾಪಿ ವರ್ಗ, ಇವತ್ತಿಗೆ ಹಾಲು, ಬೆಣ್ಣೆ ತುಪ್ಪ ತಿನ್ನಲು ಆಗದೇ ಬದುಕುತ್ತಿರುವುದು, ನಾವೇ ಕಟ್ಟಿರುವ ಈ ತಂತ್ರಜ್ನಾನದಿಂದ ವೆನ್ನುವುದು ನನ್ನ ಅನಿಸಿಕೆ. ಇಂಗ್ಲೀಷ್ ಮೆಡಿಸಿನ್ ಭಾರತಕ್ಕೆ ಬಂದ ಮೇಲೆ ನಾವೆಲ್ಲ ಆರೋಗ್ಯವಂತರಾಗಿರುವುದೆಂಬುದು ಅವರ ಅನಿಸಿಕೆ, ಶತಮಾನದ ಹಿಂದೆಯೇ ಚರಕ ಶುಷ್ರುತ ಆಯುರ್ವೇದದಲ್ಲಿ ಎಲ್ಲವನ್ನೂ ಸಾಧಿಸಿ ಹೋಗಿದ್ದಾರೆಂಬುದು ನಮ್ಮ ನಿಲುವು. ಜನರಿಗೆ ದುಡ್ಡು ಕೊಟ್ಟಿಲ್ಲ ಎಂದರೇ ವೋಟು ಹಾಕುವುದೇ ಇಲ್ಲ, ಆದ್ದರಿಂದ ಖರ್ಚು ಮಾಡಿರುವ ಹಣವನ್ನು ದೋಚಲೇಬೇಕು, ಜನರು ಸರಿಯಿಲ್ಲವೆಂಬುದು ಅವರ ನಿಲುವು. ಊರಿಗೆ ಯಾರೋ ನಾಲ್ಕು ಜನರಿಗೆ ದುಡ್ಡು ಕೊಟ್ಟಿರುತ್ತಾರೆ ಇಡೀ ಊರಿಗೆ ದುಡ್ಡು ಕೊಟ್ಟೇ, ಪ್ರತಿಯೊಬ್ಬರಿಗೂ ತಲೆ ಎಣಿಸಿ ದುಡ್ಡು ಕೊಟ್ಟಿದ್ದೇವೆಂದರೇ ಅದು ಅವರು ಹುಟ್ಟು ಮೂರ್ಖತನವೆಂಬುದು ನನ್ನ ಅಬಿಪ್ರಾಯ. ನಾನು ಕಳೆದ ಹನ್ನೆರಡು ವರ್ಷಗಳಿಂದ ವೋಟು ಹಾಕುತ್ತಿದ್ದೇನೆ, ಯಾವುದೇ ಚುನಾವಣೆಯಲ್ಲಿಯೂ ತಪ್ಪದೇ, ನಾನು ಮಾತ್ರವಲ್ಲ, ನಮ್ಮನೆಯವರೆಲ್ಲರೂ ಹಾಕಿದ್ದೇವೇ ಯಾವ ಒಬ್ಬ ಬಿ.ಮಗಾ ರಾಜಕಾರಿಣಿಯೂ ದುಡ್ಡು ಕೊಟ್ಟಿಲ್ಲ ಆ ನೀಚರ ದುಡ್ಡು ನಮಗೆ ಬೇಡ. ನನಗೆ ಪರಿಚಯವಿರುವ ಸಾವಿರಾರು ಸ್ನೇಹಿತರಲ್ಲಿ ದುಡ್ಡು ಪಡೆದು ಮತ ಹಾಕಿರುವವರು ಒಬ್ಬರೇ ಒಬ್ಬರೂ ಇಲ್ಲ. ನೀಚ ರಾಜಕಾರಿಣಿಗಳು ಅವರ ನೀಚ ಬುದ್ದಿಯ ನೇರಕ್ಕೆ ಯೋಚಿಸುತ್ತಾರೆಂಬುದಕ್ಕೆ ಇದೇ ಸಾಕ್ಷಿ. ನೂರು ಮತದಾರರ ಪೈಕಿ, ಐದು ಜನಕ್ಕೆ ದುಡ್ಡು ಕೊಟ್ಟರೇ ಎಲ್ಲರಿಗೂ ಕೊಟ್ಟಂತೆಂಬು ಅಂಧಕಾರದಲ್ಲಿ ಮುಳುಗಿದ್ದಾರೆ.

ಅತಿ ಮುಖ್ಯವಾದ ಮತ್ತೊಂದು ವಿಷಯ ನಮಗೆ ಅವನು ತಿಳಿಸಲೆತ್ನಿಸಿದ್ದು, ಅವನು ವೈದ್ಯನಾಗಿರುವುದರಿಂದ ಮತ್ತು ರಾಜಕಾರಿಣಿಯ ಮಗನಾಗಿರುವುದರಿಂದ, ಅವನು ನೋಡೀರುವಷ್ಟು ಜನರನ್ನು ನಾನು ನೋಡಿಲ್ಲ, ನಾವು ಪುಸ್ತಕದ ಮಧ್ಯದಲ್ಲಿ ಕುಳಿತು ನಿದ್ರಿಸುವವರೆಂಬುದು ಅವರ ಅಬಿಪ್ರಾಯ. ವೈದ್ಯರಾಗಿರುವುದರಿಂದ, ತಾವು ಬಹಳಷ್ಟು ಜನ ರೋಗಿಗಳನ್ನೇ ನೋಡುತ್ತೀರಾ, ಆದ್ದರಿಂದ ಇಡೀ ಸಮಾಜ ರೋಗಿಗಳಿಂದ ತುಂಬಿದೆ ಎಂಬುದು ನಿಮ್ಮ ನಂಬಿಕೆಯಾಗಿದೆ, ಅದಲ್ಲದೇ ಅವರೆಲ್ಲರೂ ನಿಮ್ಮನ್ನು ಡಾಕ್ಟರು ಎಂದು ನೋಡುವುದರಿಂದ ತಾವು ಅವರಿಗಿಂತ ಬಹಳ ಎತ್ತರಕ್ಕೆ ಬಿಂಬಿಸಿಕೊಳ್ಳುತ್ತೀರಾ, ನೀವು ಅವರನ್ನು ಅವರಲ್ಲಿರುವ ಮನಸನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. ರಾಜಕಾರಿಣಿಯ ಮಗನಾದ ಮಾತ್ರಕ್ಕೆ ಎಲ್ಲರಿಗೂ ನೀವು ದೊರೆಗಳೆಂಬ ಭಾವನೆ ಬೇಡ. ನಿಮ್ಮ ತಂದೆ ಶಾಸಕರಾಗಿದ್ದರೂ ಅವರು ಊರಿಗೆ ಬರುವುದೇ ಅಪರೂಪ, ಅವರನ್ನು ಕಾಣಬೇಕೆಂದರೇ ದುರ್ಬಿನ್ ಹಾಕಿಕೊಂಡು ಹುಡುಕಬೇಕು, ಇನ್ನೂ ತಾವು ಅದ್ಯಾವ ಜನರ ನಡುವೆ ಬೆರೆತಿದ್ದೀರೆಂಬುದು ಅರ್ಥವಾಗಲಿಲ್ಲ. ತಮ್ಮ ಮನೆಯಿರುವುದು, ಲಾವೆಲ್ಲೆ ರಸ್ತೆಯಲ್ಲಿ, ಆ ರಸ್ತೆಗೆ ಹೋಗಬೇಕೆಂದರೇ ಸಿಟಿ ಬಸ್ ಕೂಡ ಬರುವುದಿಲ್ಲ, ಇನ್ನೂ ಜನ ಸಾಮಾನ್ಯ ನಿಮ್ಮ ಮನೆಗೆ ಬಂದು ತಮ್ಮನ್ನು ಕಂಡು ಅವನ ಸಮಸ್ಯೆಯನ್ನು ತಾವು ಲಾಲಿಸುತ್ತೀರೆಂರೆ ನನಗೆ ತಡೆಯಲಾರದ ನೋವಿನ ನಗು ಬರುತ್ತದೆ. ತಾವುಗಳು ಹೇಳುವ ರೀತಿಯಲ್ಲಿ ನಾವು ಪುಸ್ತಕದ ಮಧ್ಯೆ ಮಲಗಿದ್ದರೂ, ಸದಾ ಎಲ್ಲಾ ವರ್ಗದ ಜನರೊಂದಿಗೆ ಸಂಪರ್ಕದಲ್ಲಿರುತ್ತೇವೆ, ಅಲ್ಲಿ ಪ್ರೊಫೆಸ್ಸರುಗಳಿದ್ದಾರೆ, ವಿದ್ಯಾರ್ಥಿಗಳಿದ್ದಾರೆ, ಜನ ಸಾಮಾನ್ಯರಿದ್ದಾರೆ, ರೈತರಿದ್ದಾರೆ, ಕೈಗಾರಿಕೊದ್ಯಮಿಗಳಿದ್ದಾರೆ, ಮಹಿಳೆಯರು, ಮಕ್ಕಳು, ರಾಜಕಾರಿಣಿಗಳು. ಅಷ್ಟೇ ಅಲ್ಲಾ, ನಾವು ಇಲ್ಲಿಂದ ಊರಿಗೆ ಹೋಗುವ ನಡುವೆ ಆರು ಗಂಟೆಗಳಲ್ಲಿ ಕನಿಷ್ಟ ಆರು ಜನ ಸಹ ಪ್ರಯಾಣಿಕರ ಜೊತೆ ಸ್ನೇಹ ಬೆಳೆಸುತ್ತೇವೆ, ಸಮಾಜದ ಆಗು ಹೋಗುಗಳ ಬಗ್ಗೆ ತಿಳಿಯಲು ಯತ್ನಿಸುತ್ತೇವೆ. ನಿಮ್ಮಂತೆ ಊರಿಗೆ ಕಾರಿನಲ್ಲಿ ಹೋಗಿ, ನಿಮ್ಮ ಪಕ್ಷದ ಕಾರ್ಯಕರ್ತರ ನಡುವೆ ಕುಳಿತು ಹೊಗಳಿಕೆಯ ಮಾತನ್ನು ಮಾತ್ರ ಕೇಳುವುದಿಲ್ಲ. ಎಲ್ಲ ಪಕ್ಷದವರನ್ನು ಸಮಾನ ರೀತಿಯಲ್ಲಿ ಕಾಣುತ್ತೇವೆ. ಅಣ್ಣಾ ಹಜ಼ಾರೆಯವರ ಬಗ್ಗೆಯೂ ತೀರಾ ಉಢಾಫೆತನದ ಮಾತುಗಳನ್ನು ಆಡಿದ, ಅವನ ಮಾತುಗಳನ್ನು ಕೇಳಿದ ಮೇಲೆ, ಇದು ಅರೆಬೆಂದ ಮಡಕೆ, ಮತ್ತು ಎಲ್ಲವನ್ನೂ ತಿಳಿದಿದ್ದೇನೆ, ಇರುವ ದುಡ್ಡಿನಿಂದ ಎಲ್ಲವನ್ನೂ ಸಾಧಿಸಬಹುದೆಂಬು ಅಹಂ ಮತ್ತು ಅಂಧಕಾರ ತುಂಬಿದೆ. ತಾವು ಮುಂದೆ ರಾಜಕೀಯಕ್ಕೆ ಬಂದು ಸಾಧಿಸಬೇಕೆಂದಿದ್ದರೇ ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಿರಿ, ಇಲ್ಲವಾದರೇ ಒಳ್ಳೆಯ ವೈದ್ಯರಾಗುವುದು ಅಸಾಧ್ಯ. ಪ್ರತಿಯೊಬ್ಬನಿಗೂ ತನ್ನದೇ ಆದ, ಆತ್ಮಗೌರವ ಇರುತ್ತದೆ, ಕೋಟಿ ಕೊಟ್ಟರೂ ಜನಸಾಮಾನ್ಯ ತನ್ನತನವನ್ನು ಬಿಟ್ಟು ಕೊಡುವುದಿಲ್ಲ, ರಾಜಕಾರಿಣಿಗಳಂತೆ ಎಲ್ಲರೂ ನೀಚರೆಂಬುದನ್ನು ತಮ್ಮ ನೀಚ ಲೆನ್ಸ್ ಗಳಿಂದ ನೋಡುವುದನ್ನ್ನು ಕೈ ಬಿಡಿ. ಯುವಶಕ್ತಿ ಬರಲಿ.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...