ಹುಚ್ಚುಮನಸ್ಸು ಒಮ್ಮೊಮ್ಮೆ ಮನಸಾರೆ ಅತ್ತರೂ ನಾಟಕೀಯವೆನಿಸುತ್ತದೆ ಪ್ರಪಂಚಕ್ಕೆ, ನಾ ಅಳುವುದು ದುಃಖಕ್ಕಲ್ಲ, ಕಣ್ಣೀರಿಟ್ಟು ಕರುಣೆ ಹುಟ್ಟಿಸುವುದಕ್ಕಲ್ಲ, ಅಳುವುದೊಂದು ನೆಮ್ಮದಿ ನನಗೆ. ಒಬ್ಬಳೇ ಕುಳಿತು ಅಳುವ ಮನಸ್ಸು ಅವಳದ್ದು, ಅದೇಕೇ ಅಳುತ್ತಾಳೆಂಬುದರ ಬಗೆ ಅವಳಿಗೆ ಅರಿವಿಲ್ಲ. ನನಗೂ ತಿಳಿಯುತ್ತಿಲ್ಲ. ಒಮ್ಮೊಮ್ಮೆ ಒಂಟಿತನಕ್ಕೆ ಅಳುತ್ತಾಳೆ, ಮತ್ತೊಮ್ಮೆ ನನ್ನೊಂದಿಗೆ ಜಗಳವಾಡಿ ಅಳುತ್ತಾಳೆ, ಮಗದೊಮ್ಮೆ ನಾ ಮಾಡಿದ ಮೋಸ ನೆನೆದೆ ಅಳುತ್ತಾಳೆ. ಅಳುವೊಂದು ಬಳುವಳಿ ಎಂದರೂ ತಪ್ಪಿಲ್ಲ. ನಾನು ಕೆಲವೊಮ್ಮೆ ಅಳುವಂತಾಗುತ್ತದೆ, ನಾನು ಅತ್ತರೆ ನನ್ನ ನೋಡಿ ಮತ್ತೂ ಅಳುತ್ತಾಳೆಂಬ ಅಳುಕು ನನ್ನನ್ನು ಮನಸಾರೆ ಅಳುವುದಕ್ಕೂ ಬಿಡುವುದಿಲ್ಲ. ಅಳುವುದರಲ್ಲಿ ನಾನೇಕೆ ಅಂಜಬೇಕಿನಿಸಿದರೂ ನಾನಿನ್ನ ಕಣ್ಣೀರು ಕಂಡ ದಿನ ನನ್ನ ಬದುಕೇ ಅಂತಿಮವೆನ್ನುತ್ತಾಳೆ. ನಾನು ಹಾಗೇಯೇ ಅವಳಿಗೆ ಭರವಸೆಯ ಮಹಾಪೂರವನ್ನೇ ಹರಿಸಿದ್ದೇ, ಆದರೇ ಅವೆಲ್ಲವೂ ಭರವಸೆಗಳಾಗಿಯೇ ಉಳಿದವು. ಅವಳ ಪ್ರತಿಯೊಂದು ಕಣ್ಣ ಹನಿಗಳಿಗೂ ನಾನೇ ಪಿತೃ. ಅವಳ ಸಣ್ಣ ಕಣ್ಣ ಹನಿಗಳು, ಕೆನ್ನೆಯ ಮೇಲಿರುವ ಹನಿಯ ಗುರುತುಗಳು ನನ್ನನ್ನು ನೋಡಿ ಗೇಲಿ ಮಾಡುತ್ತಿವೆ. ನಾನು ಅವುಗಳನ್ನು ಕಂಡಾಗ ಕಣ್ಣಿಗೆ ಕಾಣದವನಂತೆ ಮರೆಯಾಗುತ್ತೇನೆ. ಇವೆಲ್ಲವೂ ನನ್ನಿಂದಲೇ ಆದದ್ದಲ್ಲವೇ? ಇದು ಪ್ರಶ್ನಾತೀತ, ನಿನ್ನ ಕಣ್ಣ ಹನಿಗಳ ಹುಟ್ಟಿಗೆ ಕಾರಣ ನಾನು, ನಾನೇಕೆ ನೀ ಅಳುವಂತೆ ಮಾಡಿದೆ, ನೀ ಅತ್ತ ಮರು ಕ್ಷಣ ನನ್ನೊಳಗೂ ದುಗುಡ, ದುಮ್ಮಾನ ಹೆಚ್ಚಾಗುತ್ತದೆ. ನಿನಗೆ ಮೋಸ ಮಾಡಿಲ್ಲವೆಂದು ಯಾವ ಬಾಯಿಯಿಂದ ಹೇಳಲಿ, ಒಮ್ಮೆ ಹೇಳಿದ ಸುಳ್ಳು, ಒಮ್ಮೆ ಬಚ್ಚಿಟ್ಟ ಸತ್ಯ ಪದೇ ಪದೇ ಭುಗಿಯೆದ್ದು ನನ್ನನ್ನು ಹೀಗೆ ಕೊಲ್ಲಬೇಕೆ?
ಇಲ್ಲಿ ಮೂಡಿರುವ ಅಕ್ಷರಗಳು ಕೇವಲ ಅಕ್ಷರಗಳಲ್ಲ, ನನ್ನಂತರಾಳದಿಂದ ಹೊಮ್ಮುತ್ತಿರುವ ಭಾವನೆಗಳ ಅಲೆಗಳು. ಒಂದೊಂದು ಪದವೂ ನನ್ನೊಳಗಿನಿಂದ ಅರಳುತ್ತಿರುವ ಪ್ರೀತಿಯ ಸುಮಧುರ ಸುಗಂಧದ ಪರಿಮಳವೂ. ಚಟುವಟಿಕೆಗಳ ಮೂಲಕ ಪರಿಸರ ಶಿಕ್ಷಣವನ್ನು ಸೀಕೋ ಸಂಸ್ಥೆಯು ಕಲಿಸುತ್ತಿದೆ. ಅದರ ಜೊತೆಯಲ್ಲಿ ನೀರು ನಿರ್ವಹಣೆ, ಪರಿಸರ ಸಂರಕ್ಷಣೆ, ನೈರ್ಮಲ್ಯ, ಸಮಗ್ರ ಜಲಸಂರಕ್ಷಣೆ, ನದಿ ಆರೋಗ್ಯ, ಪರಿಸರ ಸಾಹಿತ್ಯ, ಸಮಗ್ರ ಗ್ರಾಮೀಣಾಭಿವೃದ್ಧಿಯ ಕುರಿತು ಸಮಾನ ಮನಸ್ಕರುಗಳ ಅಭಿಪ್ರಾಯ ಅನಿಸಿಕೆಗಳನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಈ ಮೂಲಕ ಎಲ್ಲರನ್ನು ಒಳಗೊಂಡು ಸಂರಕ್ಷಣೆಯೊಂದಿಗೆ ಮುಂದಿನ ಪೀಳಿಗೆಗೆ ಉತ್ತಮ ಭೂಮಿಯನ್ನು ಬಿಟ್ಟು ಹೋಗೋಣ.
01 ಆಗಸ್ಟ್ 2011
ನಿನ್ನ ಕಣ್ಣೀರ ಹಿಂದೆ ನನ್ನ ಕೈವಾಡ!!!
ಹುಚ್ಚುಮನಸ್ಸು ಒಮ್ಮೊಮ್ಮೆ ಮನಸಾರೆ ಅತ್ತರೂ ನಾಟಕೀಯವೆನಿಸುತ್ತದೆ ಪ್ರಪಂಚಕ್ಕೆ, ನಾ ಅಳುವುದು ದುಃಖಕ್ಕಲ್ಲ, ಕಣ್ಣೀರಿಟ್ಟು ಕರುಣೆ ಹುಟ್ಟಿಸುವುದಕ್ಕಲ್ಲ, ಅಳುವುದೊಂದು ನೆಮ್ಮದಿ ನನಗೆ. ಒಬ್ಬಳೇ ಕುಳಿತು ಅಳುವ ಮನಸ್ಸು ಅವಳದ್ದು, ಅದೇಕೇ ಅಳುತ್ತಾಳೆಂಬುದರ ಬಗೆ ಅವಳಿಗೆ ಅರಿವಿಲ್ಲ. ನನಗೂ ತಿಳಿಯುತ್ತಿಲ್ಲ. ಒಮ್ಮೊಮ್ಮೆ ಒಂಟಿತನಕ್ಕೆ ಅಳುತ್ತಾಳೆ, ಮತ್ತೊಮ್ಮೆ ನನ್ನೊಂದಿಗೆ ಜಗಳವಾಡಿ ಅಳುತ್ತಾಳೆ, ಮಗದೊಮ್ಮೆ ನಾ ಮಾಡಿದ ಮೋಸ ನೆನೆದೆ ಅಳುತ್ತಾಳೆ. ಅಳುವೊಂದು ಬಳುವಳಿ ಎಂದರೂ ತಪ್ಪಿಲ್ಲ. ನಾನು ಕೆಲವೊಮ್ಮೆ ಅಳುವಂತಾಗುತ್ತದೆ, ನಾನು ಅತ್ತರೆ ನನ್ನ ನೋಡಿ ಮತ್ತೂ ಅಳುತ್ತಾಳೆಂಬ ಅಳುಕು ನನ್ನನ್ನು ಮನಸಾರೆ ಅಳುವುದಕ್ಕೂ ಬಿಡುವುದಿಲ್ಲ. ಅಳುವುದರಲ್ಲಿ ನಾನೇಕೆ ಅಂಜಬೇಕಿನಿಸಿದರೂ ನಾನಿನ್ನ ಕಣ್ಣೀರು ಕಂಡ ದಿನ ನನ್ನ ಬದುಕೇ ಅಂತಿಮವೆನ್ನುತ್ತಾಳೆ. ನಾನು ಹಾಗೇಯೇ ಅವಳಿಗೆ ಭರವಸೆಯ ಮಹಾಪೂರವನ್ನೇ ಹರಿಸಿದ್ದೇ, ಆದರೇ ಅವೆಲ್ಲವೂ ಭರವಸೆಗಳಾಗಿಯೇ ಉಳಿದವು. ಅವಳ ಪ್ರತಿಯೊಂದು ಕಣ್ಣ ಹನಿಗಳಿಗೂ ನಾನೇ ಪಿತೃ. ಅವಳ ಸಣ್ಣ ಕಣ್ಣ ಹನಿಗಳು, ಕೆನ್ನೆಯ ಮೇಲಿರುವ ಹನಿಯ ಗುರುತುಗಳು ನನ್ನನ್ನು ನೋಡಿ ಗೇಲಿ ಮಾಡುತ್ತಿವೆ. ನಾನು ಅವುಗಳನ್ನು ಕಂಡಾಗ ಕಣ್ಣಿಗೆ ಕಾಣದವನಂತೆ ಮರೆಯಾಗುತ್ತೇನೆ. ಇವೆಲ್ಲವೂ ನನ್ನಿಂದಲೇ ಆದದ್ದಲ್ಲವೇ? ಇದು ಪ್ರಶ್ನಾತೀತ, ನಿನ್ನ ಕಣ್ಣ ಹನಿಗಳ ಹುಟ್ಟಿಗೆ ಕಾರಣ ನಾನು, ನಾನೇಕೆ ನೀ ಅಳುವಂತೆ ಮಾಡಿದೆ, ನೀ ಅತ್ತ ಮರು ಕ್ಷಣ ನನ್ನೊಳಗೂ ದುಗುಡ, ದುಮ್ಮಾನ ಹೆಚ್ಚಾಗುತ್ತದೆ. ನಿನಗೆ ಮೋಸ ಮಾಡಿಲ್ಲವೆಂದು ಯಾವ ಬಾಯಿಯಿಂದ ಹೇಳಲಿ, ಒಮ್ಮೆ ಹೇಳಿದ ಸುಳ್ಳು, ಒಮ್ಮೆ ಬಚ್ಚಿಟ್ಟ ಸತ್ಯ ಪದೇ ಪದೇ ಭುಗಿಯೆದ್ದು ನನ್ನನ್ನು ಹೀಗೆ ಕೊಲ್ಲಬೇಕೆ?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ
ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...
-
ಆತ್ಮೀಯರೇ, ನೀವು ನನ್ನ ಹಳೆಯ ಬರಹಗಳನ್ನು ಓದದೇ ಇದ್ದರೂ ಪರವಾಗಿಲ್ಲ, ಆದರೇ, ಈ ಲೇಖನವನ್ನು ಕಡ್ಡಾಯವಾಗಿಯೂ ಓದಬೇಕೆಂದು ವಿನಂತಿಸುತ್ತೇನೆ. ಒಮ್ಮೆ ಓದಿ, ನಂತರ ಪ್ರತಿ...
-
ನಾನು ಈ ಕುರಿತು ಬಹಳ ವರ್ಷಗಳ ಹಿಂದೆಯೇ ಬರೆಯಬೇಕೆಂದಿದ್ದೆ. ಆದರೆ ಸಮಯದ ನೆಪವೋ ಅಥವಾ ನನ್ನ ಸೋಮಾರಿತನವೋ ಬರೆಯುವುದಕ್ಕೆ ಬಿಟ್ಟಿರಲಿಲ್ಲ. ಈ ದಿನ ನಿರ್ಧಾರ ಮಾಡಿ ಬ...
-
ನಾನು ಏನನ್ನೋ ಬರೆಯುತ್ತಿದ್ದವನು ದಿಡೀರನೇ, ಫೇಸ್ ಬುಕ್ ನೋಡಿದೆ, ಅಲ್ಲಿ ಮಂಜೇಸ್ ಹುಟ್ಟಿದ ದಿನವನ್ನು ತೋರಿಸುತ್ತಿತ್ತು. ಹದಿನೈದು ದಿನಗಳ ಹಿಂದೆ ನೆನಪು ಮಾಡಿಕೊಂ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ