ಭಾರತದಂತಹ ಒಂದು ಸುಂದರವಾದ ದೇಶ, ಸಮಾಜ ಬೇರೆಲ್ಲೂ ಸಿಗಲು ಸಾಧ್ಯವೇ ಇಲ್ಲ ಎನಿಸುತ್ತದೆ ನನಗೆ. ಇಲ್ಲಿ ಎಲ್ಲಾ ಇದ್ದರೂ, ಏನೂ ಇಲ್ಲದಿದ್ದರೂ ಒಂದೇ ರೀತಿಯಲ್ಲಿರುತ್ತಾರೆ. ಹಾಗೇಯೇ ನೀವು ಗಮನಿಸಿ, ನಮ್ಮ ಸುತ್ತಲಿನ ಶೇ.೯೫ ರಷ್ಟು ಜನರು ನಮ್ಮ ನಿಮ್ಮಂತೆಯೇ ಇದ್ದಾರೆ. ಸಣ್ಣ ಸಣ್ಣ ವಿಷಯಗಳಿ ಚಿಂತಿಸುತ್ತಾರೆ, ದೊಡ್ಡ ವಿಷಯಗಳು ನಮ್ಮದಲ್ಲವೆನ್ನುತ್ತಾರೆ, ಸಮಾಜ, ಶ್ರೀಮಂತರು, ರಾಜಕಾರಿಣಿಗಳು, ಅಧಿಕಾರಿಗಳು ಇವರೆಲ್ಲರೂ ನಮ್ಮಂತೆಯೇ ಮನುಷ್ಯರೆಂದು ನಾವೆಂದೂ ಭಾವಿಸುವುದಿಲ್ಲ. ಒಳ್ಳೆಯವನಿದ್ದರೇ ದೇವರಂಥವನು ಎನ್ನುತ್ತೇವೆ, ಕೆಟ್ಟವರಿದ್ದರೇ ದೆವ್ವ, ರಾಕ್ಷಸ ಎನ್ನುತ್ತೇವೆ. ಇದೆಲ್ಲವೂ ಏಕೆ? ನಮ್ಮ ಮನದಾಳದಲ್ಲಿ ಶತಮಾನದ ಹಿಂದೆಯಿಂದಲೇ ಒಂದು ಛಾಪು ಮೂಡಿದೆ, ನಮ್ಮ ಕರ್ಮಶಾಸ್ತ್ರ ನಮ್ಮನ್ನು ಆವರಿಸಿದೆ. ಇದೆಷ್ಟರ ಮಟ್ಟಿಗೆ ಸರಿ ತಪ್ಪು ಎನ್ನುವ ರೇಜಿಗೆ ನಮಗೀಗ ಬೇಡ. ಚಿಕ್ಕ ಪುಟ್ಟ ಉದಾಹರಣೆಗಳನ್ನು ತೆಗೆದುಕೊಳ್ಳಿ, ಒಂದು ಸ್ಕೂಲಿಗೆ ಸೇರಿಸಲು ಅರ್ಜಿ ತರಲು ಹೋಗುವ ತಂದೆಯನ್ನು ತಾಯಿಯನ್ನು ನೋಡಿ, ಅಲ್ಲಿರುವ ವಾ಼ಚ್ ಮ್ಯಾನ್ ಕಂಡರೂ ಭಯ, ಭಕ್ತಿ, ಅಯ್ಯೋ ನನ್ನ ಮಗುವಿಗೆ ಸೀಟು ಸಿಗುತ್ತದೋ ಇಲ್ಲವೋ ಎಂದು ಅವನಿಗೂ ನಮಸ್ಕಾರ ಹೊಡೆದು ಹೋಗುತ್ತಾರೆ. ಮೆಜೆಸ್ಟಿಕ್ ನಲ್ಲಿ ಬೈಕ್ ಪಾರ್ಕ್ ಮಾಡಿ ಬರುವಾಗ ನೋಡಿ, ಮನೆಯಲ್ಲಿ ಸ್ವಂತ ಮಗನಿಗಿಂತ ಹೆಚ್ಚು ಮುದ್ದು ಮಾಡುವ ಬೈಕ್ ಅನ್ನು ದರ ದರ್ ಎಳೆದರೂ ಮಾತನಾಡುವುದಿಲ್ಲ, ಒಂದು ಬಗೆಯ ಅಂಜಿಕೆ, ಭಯ. ಎಂಥೆಂತವರಿಗೆಲ್ಲಾ ಹೆದರಿ ಬದುಕುತ್ತಾರೆ. ಕೆ.ಎಸ್.ಆರ್.ಟಿಸಿ ಬಸ್ಸಿನಲ್ಲಿ ಬರುವವರನ್ನು ನೋಡಿ, ಡ್ರೈವರ್ ಸಾಹೇಬರೇ ಸ್ವಲ್ಪ ಇಲ್ಲೇ ನಿಲ್ಲಿಸಿ ಅಂತಾ ಗೋಗರೆಯುತ್ತಾರೆ, ಡ್ರೈವರ್ ನಿಲ್ಲಿಸುವುದೇ ಇಲ್ಲಾ. ಒಬ್ಬ ವಾಚ್ ಮ್ಯಾನ್, ಒಬ್ಬ ಡ್ರೈವರ್, ಒಬ್ಬ ಕಂಡಕ್ಟರ್, ಒಬ್ಬ ಹೋಟೆಲ್ ಮಾಲಿ, ಒಬ್ಬ ಬೈಕ್ ಪಾರ್ಕಿಂಗ್ ನವನು, ಅಲಂಕಾರ್ ಪ್ಲಾಜ಼ಾದಲ್ಲಿ ಕೆಲಸ ಮಾಡುವ ಹುಡುಗ, ಹೂವು ಮಾರುವವನು ಕಡಿಮೆ ದುಡ್ಡಿಗೆ ಕೇಳಿದರೇ ಉಗಿಯುತ್ತಾನೆ. ಇವರೆಲ್ಲರೂ ಅಷ್ಟೇ, ಸಾಮಾನ್ಯ ಮನುಷ್ಯನನ್ನು ಕಂಡರೆ ಸಿಡಿದು ಬೀಳುತ್ತಾರೆ. ಎರಡು ರೂಪಾಯಿ ಟಿಪ್ಸ್ ಸಿಗದೇ ಇದ್ದರೇ ಬಾಯಿಗೆ ಬಂದಂತೆ ಬೈಯುತ್ತಾರೆ.
ಪ್ರಶ್ನಿಸುತ್ತಾ ಹೋದರೇ, ಏಕೆ ಒಂದು ವರ್ಗದವರು ಹೆದರಿ, ಅಂಜಿಕೊಂಡು ಬದುಕುತ್ತಾರೆ, ಮತ್ತೊಂದು ಗುಂಪು ದೌರ್ಜನ್ಯ ನಡೆಸುತ್ತದೆ? ಹಾಗೆ ಯೋಚಿಸಿ ನೋಡಿದರೇ, ದೌರ್ಜನ್ಯ ಮಾಡುವ, ದಬ್ಬಾಳಿಕೆ ನಡೆಸುವವರು ಮಧ್ಯಮ ವರ್ಗದವರೇ ಆಗಿರುತ್ತಾರೆ, ಅವರು ಇಂಥಹ ಸಮಸ್ಯೆಗಳೊಳಗೆ ಮುಳುಗಿರುತ್ತಾರೆ. ಆದರೇ ಅವರಿಗೆಲ್ಲಾ ಕೆಟ್ಟ ವ್ಯಕ್ತಿಗಳು ಪರಿಣಾಮ ಬೀರಿರುತ್ತಾರೆ. ಜನಾರ್ಧನ ರೆಡ್ಡಿ, ಶ್ರೀರಾಮುಲು ಇಪ್ಪತ್ತು ವರ್ಷದ ಹಿಂದೆ ಏನು ಇಲ್ಲದೇ ಇಂದು ರಾಜ್ಯವನ್ನೇ ಆಳಲು ಹೊರಟಿದ್ದು ಮಾದರಿಯಾಗಿರುತ್ತದೆ. ಗತ್ತಿನಿಂದ ಯಾರೋ ಒಬ್ಬ ರಾಜಕಾರಣಿ ಮಾತನಾಡುವುದು ಸಾವಿರಾರು ಯುವಕರಿಗೆ ಮಾದರಿಯಾಗಿರುತ್ತದೆ. ಹಿರಿಯವರಿಗೆ ಮರ್ಯಾದೆ ಕೊಡದೆ ಇದ್ದರೇ ನಾವು ಮೇಲೆ ಬೆಳೆಯಬಹುದೆಂಬುದು ಒಂದು ಬಗೆಯ ತಪ್ಪು ಮಾಹಿತಿಯನ್ನು ಯುವಕರಲ್ಲಿ ತುಂಬಿರುತ್ತದೆ. ದುನಿಯಾ ವಿಜಿ, ಲೂಸ್ ಮಾದಾ ನಂತವರು ನಾಯಕರಾದ ಮೇಲೆ ನಾನು ಆಗಬಹುದೆಂಬು ಹುಂಬತನ ಹುಡುಗರನ್ನು ದಾರಿ ತಪ್ಪಿಸಿರುತ್ತದೆ. ಇದು ವಿವಿ ಗಳ ಮಟ್ಟದಲ್ಲಿಯೂ ಅಷ್ಟೇ, ಬೆಂಗಳೂರು ವಿವಿಯಲ್ಲಿ, ನಂದಿನಿ ಹೆಚ್ಚು ಹೆಚ್ಚು ಮೋಸ ವಂಚನೆ ಮಾಡಲು ಕಾರಣ ಸೋಮ ಶೇಖರ್. ಸೋಮಶೇಖರ್ ಮನೆ ಕಟ್ಟುವಾಗ ಮನೆಗೆ ಮರ ಮುಟ್ಟುಗಳನ್ನು ತಂದು ಕೊಟ್ಟಿದ್ದು ಅವರ ವಿದ್ಯಾರ್ಥಿಗಳು ಆದ್ದರಿಂದ ಇಂದು ನಂದಿನಿ ಅದನ್ನೇ ಮುಂದುವರೆಸುತ್ತಾರೆ. ಒಬ್ಬ ಎರಡು ಲಕ್ಷ ಪಡೆದು ಪಿಎಚ್ ಡಿ ಕೊಟ್ಟರೇ ಎಲ್ಲಾ ಗೈಡುಗಳು ಅದನ್ನೇ ಮಾದರಿಯನ್ನಾಗಿಸುತ್ತಾರೆ. ವಿದ್ಯಾರ್ಥಿಗಳಿಂದ ಮನೆ ಕೆಲಸ ಮಾಡಿಸುವುದು, ಮನೆಗೆ ಸಾಮಾನು ತರಿಸುವುದು, ಮಗಳಿಗೆ ಬೈಕ್ ತೆಗೆಸಿಕೊಳ್ಳುವುದು, ಶಾಲೆ ಕಾಲೇಜಿಗೆ ಸೇರಿಸಲು ಅರ್ಜಿ ತರಿಸುವುದು, ಬ್ಯಾಂಕ್, ಪಾಸ್ ಪೋರ್ಟ್ ಒಂದಲ್ಲ ಎರಡಲ್ಲ, ಕೊನೆಗೆ ಅವರು ಗಡ್ಡ ಬೋಳಿಸಲು ಬ್ಲೇಡ್ ಕೂಡ ವಿದ್ಯಾರ್ಥಿಗಳ ದುಡ್ಡಿನಿಂದಲೇ. ಇವೆಲ್ಲವೂ ಏಕೆ ಹೀಗೆ? ನೈತಿಕತೆ, ನ್ಯಾಯ, ಅನ್ಯಾಯ ಇದಾವುದು ಇವರಾರಿಗೂ ಸಂಭಂಧಿಸಿಯೇ ಇಲ್ಲವೆಂಬಂತೆ ವರ್ತಿಸುವುದಾದರೂ ಏಕೆ?
ಇದು ಕೇವಲ ವಿವಿಗಳಲ್ಲಿ ಮಾತ್ರವಲ್ಲ, ಎಲ್ಲಾ ಇಲಾಖೆಯಲ್ಲಿಯೂ ಅಷ್ಟೇ, ಮಾನ ಬಿಟ್ಟು ಲಂಚ ಕೇಳುತ್ತಾರೆ. ಮೈಸೂರಿನಲ್ಲಿ ನನ್ನ ಸ್ನೇಹಿತ ದ್ವಾರಕೀಶ್ ಜೊತೆಯಲ್ಲಿ ಕೆಲಸ ಮಾಡುವ ಒಬ್ಬ ಅಯೋಗ್ಯ ಸ್ವಂತ ಹಣದಲ್ಲಿಯೂ ಊಟ ಮಾಡುವುದಿಲ್ಲ. ಒಮ್ಮೆ ಬಂದ ರೈತನನ್ನು ಜೇಬಿನಲ್ಲಿದ್ದ ಎಲ್ಲ ಹಣವನ್ನು ಕಿತ್ತು ಖಾಲಿ ಕೈಯಲ್ಲಿ ಕಳುಹಿಸಿದ್ದಾನೆ. ಇಂತಹ ಅನಾಗರೀಕರ ವಿರುದ್ದ ಯಾರು ಏನು ಮಾಡಲಾಗುವುದಿಲ್ಲ. ಜನರು ಇದು ನಮ್ಮ ಹಣೆಬರಹವೆಂದು ಸುಮ್ಮನಾಗುತ್ತಾರೆ. ಮಾಧ್ಯಮದವರು, ಗಂಡ ಹೆಂಡತಿಯ ಜಗಳವನ್ನು, ಬೈಯ್ದಾಟವನ್ನು ತೋರಿಸಲು ತಳೆಯುವ ಆಸಕ್ತಿಯನ್ನು ಇಂಥಹ ನೀಚರ ಮೇಲೆ ತೋರಿಸುವುದಿಲ್ಲ.
Satyake Hatiravada Matugalu,
ಪ್ರತ್ಯುತ್ತರಅಳಿಸಿDuddu Annodu Elde hodre prapancha estu sundaravagi kansute alva?????????
Uncultural Educateds ge Live Example
Mr.Somashekar & Mrs.Nandini Somashekar
Mera bhaarat mahaan annodakke ondu namage baratte
ಪ್ರತ್ಯುತ್ತರಅಳಿಸಿadre nijavaagiyoo naavu mahaan idiva?
gottilla