21 ಮೇ 2021

ಶತಮಾನ ಕಂಡ ಶ್ರೇಷ್ಠ ಪರಿಸರವಾದಿ: ಬಹುಗುಣ ನೆನಪು ಮಾತ್ರ!!!

 ಸುಂದರಲಾಲ್ ಬಹುಗುಣವೆಂದರೇ, ಪರಿಸರಪ್ರೇಮಿಗಳಲ್ಲಿ ಎಲ್ಲಿಲ್ಲದ ಸಂಚಲನ. ನಾನು ನನ್ನ ಪದವಿ ದಿನಗಳಿಂದಲೂ ಬಹಹುಗುಣರವರ ಲೇಖನಗಳು, ಹೋರಾಟಗಳನ್ನು ನೋಡುತ್ತಾ ಬಂದವನು. ಅನೇಕರಿಗೆ ಅವರ ಪರಿಚಯವಿಲ್ಲದೇ ಇರಬಹುದು, ಆದರೇ, ಅವರ ಪರಿಚಯದ ಕೆಲವು ಕಾರ್ಯಕ್ರಮಗಳನ್ನು ಸೀಕೋ ಸಂಸ್ಥೆ ಹಿಂದೆಯೇ ಮಾಡಿತ್ತು. 


ಗಾಂಧೀ ತತ್ವದ ಆಧಾರದಲ್ಲಿ, ಪರಿಸರ ಸಂರಕ್ಷಣೆಗೆ ಬುನಾದಿಯನ್ನು ಹಾಕಿದ್ದು ಚಿಪ್ಕೋ ಚಳವಳಿ. ಅದು 1973ರ ಸುಮಾರಿಗೆ ಉತ್ತರಖಾಂಡದ ಸಣ್ಣ


ಹಳ್ಳಿಯಲ್ಲಿ ಅರಣ್ಯ ನಾಶದ ವಿರುದ್ಧ ನಡೆದ ಹೋರಾಟವು, ಜಗತ್ತು ತಿರುಗಿ ನೋಡುವಂತೆ ಮಾಡಲು ಯಶಸ್ವಿಯಾಯಿತು. 


ಇದಾದ ನಂತರ ಬಹಹುಗುಣರ ಅನುಯಾಯಿಗಳು ಜಗತ್ತಿನಾದ್ಯಾಂತ ಅರಣ್ಯೀಕರಣವನ್ನು ಪ್ರೋತ್ಸಾಹಿಸುತ್ತ ಮತ್ತು ಪರಿಸರ ನಾಶದ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈ ದಿನ ಕೋವಿಡ್ ಸೋಂಕಿಗೆ ಬಲಿಯಾಗಿರುವದು, ನಮ್ಮೆಲ್ಲರ ದುದೈವ, ಅವರ ಈ ಅಗಲಿಕೆ ಪರಿಸರ ಕ್ಷೇತ್ರಕ್ಕೆ ತುಂಬಲಾರದ ನಷ್ಠವಾಗಿದೆ. ಅವರ ಮಾರ್ಗದರ್ಶನದಂತೆ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಒಂದಾಗಬೇಕು.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...