21 ಜೂನ್ 2010

ಅರ್ಘ್ಯಂ ನಲ್ಲಿ ಕಳೆದ ಸುಮಧುರ ಕ್ಷಣಗಳು!!!

ಯಾರೊಬ್ಬರ ಬಗೆಗೆ ಬರೆಯುವಾಗಲೂ, ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಯಾಕೆಂದರೇ ಬಹಳಷ್ಟು ಬಾರಿ ನಾವು ಅವರನ್ನು ಅತಿಯಾಗಿ ಹೊಗಳುವುದು ಅಥವಾ ಅತಿಯಾಗಿ ತೆಗಳುವುದನ್ನು ಮಾಡುತ್ತಿರುತ್ತೇವೆ. ಆದರೇ ಇದ್ದಕ್ಕಿದ್ದ ಹಾಗೆ ಒಂದು ಸಂಸ್ಥೆಯ ಬಗೆಗೆ ಬರೆಯುವಾಗ, ಬಹಳಷ್ಟೂ ಜಾಗೃತೆವಹಿಸಬೇಕಾಗುತ್ತದೆ. ಏಕೆಂದರೆ ಯಾವುದೇ ಸಂಸ್ಥೆಯೂ ತನ್ನದೇ ಆದ ಹಾದಿಯಲ್ಲಿ ಒಂದು ಜಾಡನ್ನು ನಿರ್ಮಿಸಿರುತ್ತದೆ. ನಾನು ಇಂದು ಬರೆಯುತ್ತಿರುವುದು ಅಂಥಹದೇ ಒಂದು ಸಂಸ್ಥೆಯ ಬಗ್ಗೆ. ಅರ್ಘ್ಯಂ ಎಂಬ ಹೆಸರನ್ನು ಬಹಳಷ್ಟು ಮಂದಿ ಕೇಳಿರುತ್ತಾರೆ. ಕೆಲವರು ಕೇಳದೇ ಇದ್ದರೂ ಇರಬಹುದು. ಅರ್ಘ್ಯಂ ಎಂಬುದು ನೀರು ಮತ್ತು ನೈರ್ಮಲ್ಯದ ಬಗೆಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ. ಐದು ವರ್ಷಗಳಿಂದ ಸತತವಾಗಿ, ಇದೇ ಕ್ಷೇತ್ರದಲ್ಲಿ ಕಣ್ಣುಬ್ಬು ಮೇಲೇರಿಸುವ ಕೆಲಸ ಮಾಡಿದೆ. ನಾನು ಸಂಸ್ಥೆಯ ಒಳಕ್ಕೆ ಬರುವ ಮುನ್ನ ಇದರ ಬಗೆಗೆ ಅಷ್ಟೇನೂ ತಿಳಿದಿರಲಿಲ್ಲ. ನನ್ನ ಕೆಲಸಕ್ಕಾಗಿ ಇಲ್ಲಿಗೆ ಬಂದು ೯ ತಿಂಗಳು ಕಾಲ ಕಳೆಯುವಾಗ ನಿಜಕ್ಕೂ ಬಹಳ ಆನಂದವೆನಿಸಿತು.

ಮೊದಲ ದಿನ ಬಂದಾಗಲೇ, ಇಲ್ಲಿನ ಜನರ ನಡುವಳಿಕೆ ನನ್ನನ್ನು ಬಹಳ ಖುಷಿ ಪಡಿಸಿತು. ಬಂದ ತಕ್ಷಣ ಅವರು ನಡೆದುಕೊಂಡ ರೀತಿ, ಯಾವೊಬ್ಬ ಅಪರಿಚಿತನು ಬಂದ ಕೆಲವೇ ಕ್ಷಣದಲ್ಲಿ, ಅರ್ಘ್ಯಂ ಸಂಸ್ಥೆಯವನಾಗಿ ಬಿಡುತ್ತಾನೆ. ಮಾತನಾಡಿಸುವ ರೀತಿ, ಬೆಣ್ಣೆಯ ಮೇಲೆ ಕೂದಲು ತೆಗೆದಷ್ಟು ಮಧುರತೆಯನ್ನು ಕೊಡುತ್ತದೆ. ಮೊದಲ ದಿನ ಹೋದಾಗ, ಗೋಪಾಲ್ ನನ್ನನ್ನು ಎಲ್ಲರಿಗೂ ಪರಿಚಯಿಸುವುದರಲ್ಲಿ ತೋರಿದ ತನ್ಮಯತೆ ನನ್ನನ್ನು ಬಹಳ ಅಚ್ಚರಿಗೊಳಿಸಿತು. ಅವರು ನನ್ನೊಡನೆ ಮಾತನಾಡಿದ ರೀತಿಯಲ್ಲಿಯೇ, ನಾನು ನಿಜಕ್ಕೂ ನಿಬ್ಬೆರಗಾದೆ. ಯಾವುದೇ ಸಂಸ್ಥೆಯಲ್ಲಿಯೂ ಹಿರಿಯ ವ್ಯಕ್ತಿಗಳು ಕಿರಿಯವರನ್ನು ಸ್ವಲ್ಪ ದೂರವೇ ಇಟ್ಟು ನಡೆಸಿಕೊಳ್ಳುವುದು ಸಾಮಾನ್ಯವಿದ್ದರೂ ಇದು ಇಲ್ಲಿ ಹೊಸತೆನಿಸಿತು. ಅದಾದ ನಂತರ, ಬಹಳ ಮೆಚ್ಚುಗೆಯಾದದ್ದು, ನಿತಿನ್ ಎಂಬವರ ವ್ಯಕ್ತಿತ್ವ.ಮಾತನಾಡಿಸಿದ ಕೆಲವೇ ಕ್ಷಣದಲ್ಲಿ ನಾನು ಬರುವುದು ಹೇಗೆ?ಎಲ್ಲಿಂದ ಎಂದು ವಿಚಾರಿಸಿ, ವಿಜಯನಗರ ಕಡೆಯಿಂದ ಬರುವ ಮನೋಹರ್ ಅವರಿಗೆ ನನ್ನನ್ನು ಪರಿಚಯಿಸಿದ್ದು, ಮತ್ತು ಮನೋಹರ್ ಅದೆಷ್ಟು ವಿನಯದಿಂದ ಮಾತನಾಡಿದರೆಂದರೇ ಒಬ್ಬ ವ್ಯಕ್ತಿ ಇದೇ ಕ್ಷೇತ್ರದಲ್ಲಿ ೧೫-೨೦ ವರ್ಷ ಅನುಭವ ಇರುವವರು, ಒಬ್ಬ ಕಿರಿಯನ ಜೊತೆಗೆ ಅಪರಿಚಿತನೊಂದಿಗೆ ಹೀಗೂ ಮಾತನಾಡುತ್ತಾರೆಂಬುದು ನನಗೆ ತಿಳಿಯಿತು. ಮೊದಲ ಕೆಲವು ದಿನಗಳು ನಾನು ಮನೋಹರ್ ಹಾಗೂ ಪರಮೇಶ್ವರ್ ಜೊತೆಯಲ್ಲಿ ಬರುತ್ತಿದ್ದೆವು. ಅವರು ಹೊರಡುವ ಸಮಯ ಅಲ್ಪ ಸ್ವಲ್ಪ ತಡವಾದರೇ/ಆಗುವುದಿದ್ದರೇ, ಎಸ್.ಎಂ,ಎಸ್ ಮೂಲಕ ಅಥವಾ ಕೆಲವೊಮ್ಮೆ ಅವರೇ ಬಂದು ತಿಳಿಸುತಿದ್ದರು.ಇಂಥಹ ಪರಿಸರ ನಿಜಕ್ಕೂ ಖುಷಿ ಎನಿಸುತ್ತಿತ್ತು.

ನಾನು ಅರ್ಘ್ಯಂ ಗೆ ಬರುವ ಮುನ್ನ ಅರ್ಘ್ಯಂ ಬಗ್ಗೆ ಕೆಲವು ನಕರಾತ್ಮಕ ಧೋರಣೆಗಳಿದ್ದವು. ಇಲ್ಲಿಗೆ ಬಂದ ಕೆಲವೇ ದಿನಗಳಲ್ಲಿ ಅವೆಲ್ಲವೂ ಬದಲಾದವು.ಆದರೇ, ನಾನು ಕೆಲಸ ಮಾಡುತ್ತಿದ್ದ, IUWM, ಮಾತ್ರ ಅದೆಕೋ ಅಷ್ಟೊಂದು ಒಳ್ಳೆಯ ಅಬಿವೃದ್ದಿ ಕಾಣಲಿಲ್ಲ. ಇದಕ್ಕೆ ಕಾರಣ ವೈಯಕ್ತಿಕ ಆತ್ಮ ಪ್ರತಿಷ್ಟೆ ಎನ್ನುವುದು ನನ್ನ ಸ್ವಂತ ಅಭಿಪ್ರಾಯ. ಯಾರು ಏನು ಹೇಳಿದರೂ, ಲಕ್ಷಾಂತರ ಹಣ ಸುರಿದು ಒಂದು ಸಂಶೋಧನೆ ಮಾಡಿಸುವಾಗ ಅದನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡು ಹೋಗುವ ಸಾಮರ್ಥ್ಯ ಅರ್ಘ್ಯಂ ಗೆ ಇರಲಿಲ್ಲವೆನ್ನುವುದು ನಿಜಕ್ಕೂ ಶೋಚನಿಯ.ಎಂಬತ್ತು ಲಕ್ಷ ರೂಪಾಯಿಯನ್ನು ನಮಗೆ ನೀಡಿದ ಅರ್ಘ್ಯಂ ಗೆ ಅದರ ಜವಬ್ದಾರಿ ತೆಗೆದುಕೊಳ್ಳಲು, ಕನಿಷ್ಟ ೫-೧೦ ವರ್ಷ ಅನುಭವ ಇರುವವರು, ಅಥವಾ ಯೋಜನೆಯ ಮಹತ್ವ ತಿಳಿದವರು ಇದ್ದಿದ್ದರೇ ನಿಜಕ್ಕೂ ಅರ್ಥಪೂರ್ಣವಾಗುತ್ತಿತ್ತು. ಇವೆಲ್ಲವೂ ತೀರಾ ಖಾಸಗಿ ವಿಷಯವಾಗಿರುವುದರಿಂದ ನಾನು ಇಲ್ಲಿ ಚರ್ಚಿಸುವುದು ಸಮಂಜಸವಲ್ಲ. ಆದರೇ, ಸಂಸ್ತೆಯಲ್ಲಿ, ಕೋಟ್ಯಾಂತರ ರೂಪಾಯಿ ಇದ್ದು, ಸಮಾಜದ ಉನ್ನತಿಗೆ ಏನಾದರೂ ಮಾಡಬೇಕೆನ್ನುವ ಮನಸ್ಸು, ಧ್ಯೇಯವಿರುವುದು ಮೆಚ್ಚಲೇಬೇಕಾದ ವಿಷಯ. ಆದರೇ ನಿಜಕ್ಕೂ ನೀರು, ನೈರ್ಮಲ್ಯ, ಪರಿಸರ, ನಿರ್ವಹಣೆ ಇದಕ್ಕೆ ಅತಿ ಹೆಚ್ಚು ಅನಿವಾರ್ಯವಿರುವ ಮಾರ್ಗಗಳು ಯಾವುವು ಎಂಬುದು ಇನ್ನು ತಿಳಿಯಾಗಿಲ್ಲ.

ನನಗೆ ತಿಳಿದ ಮಟ್ಟಿಗೆ, ರಾಜ್ಯದ ಬಗೆಗೆ, ಭಾಷೆಯ ಬಗೆಗೆ, ಮತ್ತು ಸ್ಥಳೀಯತೆಯ ಜ್ನಾನವೇ ಇಲ್ಲದವರು, ಕರ್ನಾಟಕದ ಬಗೆಗೆ ಅದರಲ್ಲಿಯೂ ಮೂಲಭೂತ ಅವಶ್ಯಕತೆಗಳಾದ ನೀರು ನೈರ್ಮಲೀಕರಣದ ಬಗೆಗೆ ಕೆಲಸ ಮಾಡುತ್ತಿರುವುದು ಸ್ವಲ್ಪ ಮುಜುಗರವೆನಿಸುತ್ತದೆ. ಇಷ್ಟೇಲ್ಲಾ ದುಡ್ಡು ವೆಚ್ಚ ಮಾಡುವ ಸಂಸ್ಥೆ ಅದರಿಂದ ಆಗುತ್ತಿರುವ ಅನುಕೂಲವೆಷ್ಟು ಇನ್ನೂ ಹೆಚ್ಚು ಅನುಕೂಲಕರವಾಗಿ ಮಾಡುವುದು ಹೇಗೆ? ಇದರ ಬಗೆಗೆ ಚಿಂತನೆ ಮಾಡದೆ ಇರುವುದು ನನಗೆ ಅಗೋಚರವಾಗಿದೆ. ಕೇವಲ, ವಿವಿ ಗಳಿಂದ ಬರುವ ವಿದ್ಯಾರ್ಥಿಗಳಿಗೆ, ಒಂದು ವರ್ಷ ಉದ್ಯೋಗ ನೀಡಿ, ಕಡಿಮೆ ಎಂದರೇ, ೧೦ಸಾವಿರದಂತೆ ಸಂಬಳ ಕೊಟ್ಟು ಅವರನ್ನು ಪ್ರೋತ್ಸಾಹಿಸಿದ್ದಿದ್ದರೇ ಅದರ ಫಲಿತಾಂಶ ಎಲ್ಲಿಗೋ ಹೋಗಿ ಮುಟ್ಟುತ್ತಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...