14 ನವೆಂಬರ್ 2011

ದೇವಲೋಕದ ಪಾರಿಜಾತ ಭೂಮಿಗೆ ಜಾರಿದೆ
ಅದು ನೀನೆಂದು ನಾ ಹೇಳಿದೆ,
ಹೇಳಲು ಭಯ ನನಗೆ ದೇವರು ಕಿತ್ತುಕೊಂಡಾನೆಂಬ ದುಗುಡ
ನೀನೆಂದರೇ ನೀನು ನಂಬಳು ನನ್ನ ಮಾತನು,
ಆ ದೇವನಿಗೆ ತಿಳಿದಿದೆ ನನ್ನ ಮಾತಿನ ಅರ್ಥ
ಹುಡುಗಾಟ ಸಾಕು ಕೆಲಸ ಮಾಡೆಂಬುದು ನಿನ್ನಯ ತರ್ಕ
ನಿನ್ನ ಬಗ್ಗೆ ಬರೆವುದೇ ನನ್ನ ಕಾರ್ಯವೆಂದರೇ ನಗುವೇ ನೀನು
ಬರೆವುದು ಸುಲಭ ಬರೆಸಿಕೊಳ್ಳುವ ಮನಸ್ಸು ಬೇಕು
ಬರೆವ ಮನಸ್ಸಿದೆ ಬರೆಸಿಕೊಳ್ಳುವ ಹಾಳೆಯಾಗಬಾರದೇ ನೀನು
ಹಾಳೆಯಲ್ಲ, ಪದಗಳಾಗು, ಪದಗಳೆಲ್ಲಾ ಉದುರಳಲಿ ಮುತ್ತಿನಂತೆ
ಮುತ್ತಿನ ಮಳೆ ಸುರಿಯಲಿ ಮುತ್ತಿನ ಹಾರವಾಗಲಿ ಈ ನನ್ನ ಬರವಣಿಗೆ
ನೀ ಕವಿಯಾ?ಎಂದರೇ ಉತ್ತರವಿಲ್ಲ, ನಾನೆಂದು ಕವಿಯಾಗಲು ಬರೆದವನಲ್ಲ
ನನ್ನ ಬರವಣಿಗೆ ಏನಿದ್ದರೂ ನಿನಗೋಸ್ಕರ ಕೇವಲ ನಿನಗೋಸ್ಕರ
ನನ್ನ ಪದಗಳಲ್ಲಿರುವುದು ನೀ ಮಾತ್ರ ನನ್ನ ಪ್ರತಿಯೊಂದು ಅಕ್ಷರವಿರುವುದು ನಿನಗೊಸ್ಕರ
ಬರೆವುದು ನಾನಲ್ಲ ಬರೆಸುತ್ತಿರುವುದು ನೀನು, ಬರೆಸಿಕೊಳ್ಳುತ್ತಿರುವುದು ಆ ನಿನ್ನ ಚೆಲುವು
ಮರುಭೂಮಿಯಲ್ಲಿ ನದಿ ಹರಿದಂತೆ ನಿನ್ನಯ ಚೆಲುವು
ಬರಡಾಗಿರುವ ಈ ಬದುಕಿಗೆ ನೀನೇ ಹರಿವ ತೊರೆ

1 ಕಾಮೆಂಟ್‌:

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...