07 ಜೂನ್ 2012

ನಿನಗಾಗಿ ಬರೆದ ನಾಲ್ಕು ಸಾಲುಗಳು....

ನಿನಗೆ ಖುಷಿಯಾದರೂ ಸರಿ, ಬೇಸರವಾದರೂ ಸರಿ,

ನನ್ನೆಲ್ಲಾ ಭಾವನೆಯನ್ನು ಸುರಿಯಬೇಕು ನಿನ್ನೆಡೆಗೆ,

ಬೈಯ್ಯುವ ನೆಪದಲ್ಲಿಯಾದರೂ ನನ್ನ ನೆನಪಿಸಿಕೊ ದಿನವೆಲ್ಲಾ,

ಕೋಪವಾದರೇನೂ ಖುಷಿಯಾದರೇನೂ ಎರಡೂ ನನ್ನಯ ಮೇಲಲ್ಲವೇ,

ಈಶ್ವರಪ್ಪನೇ ಹೇಳಲಿಲ್ಲವೇ, ಗೆಲ್ಲುವುದು ಮುಖ್ಯ ಮೂಲ ಬಿಜೆಪಿಯೋ, ವಲಸಿಗರೋ ಅದು ಎರಡನೆಯದ್ದು...


ನಿನ್ನ ನೋಡಲು ಮನ ತವಕಿಸುತಿದೆ,

ನಿನ ನೋಡುವಾಸೆ ನನ್ನೆದೆಯೊಳಗೆ ಹೆಮ್ಮರವಾಗುತ್ತಿದೆ,

ನಿನ್ನೊಂದಿಗೆ ಎರಡು ತಾಸು ಕೂರುವಾಸೆ ಕೈಗೂಡುವುದೆಂದು,

ನನ್ನೆರಡು ಸಾಲುಗಳಿಗೆ ಗೊಳ್ಳೆಂದು ನೀನಗುವುದೆಂದು


ನಾ ಏನಾದರೂ ಅದು ನಿನಗೋಸ್ಕರ

ಪ್ರೇಮಿ ಆದದ್ದೂ ನಿನಗೋಸ್ಕರ

ಕವಿಯಾದದ್ದು ನಿನಗೋಸ್ಕರ


ನನ್ನೆಲ್ಲವೂ ನೀನೇ,

ನನ್ನ ತನು ಮನವೆಲ್ಲವೂ ನೀನೇ

ನಾ ಬರೆಯುವುದು, ನಾ ಉಸಿರಾಡುವುದು ನಿನಗಾಗಿಯೇ,

ನನ್ನ ಉಸಿರಲ್ಲಿ ಹರಿದಾಡುವ ಹೆಸರು ನೀನೇ,

ನಾ ಮಲಗಿದ್ದ ಕ್ಷಣದಲ್ಲಿ ಕನವರಿಸುವ ಹೆಸರೂ ನೀನೇ...


ನನ್ನ ಮೊಂಡತನವಲ್ಲ ಅದು, ನನ್ನಲಿರುವ ಬಾಲ್ಯ,

ನಿನ್ನ ಬಿಟ್ಟಿರಲಾರದ ಪ್ರೀತಿ, ಸದಾ ನಿನ್ನೊಂದಿಗಿರಬೇಕೆಂಬ ಹಂಬಲ,

ನಿನ್ನ ಕಾಡಿಸಿಯೋ ಪೀಡಿಸಿಯೋ ನನ್ನೆಡೆಗೆ ಸೆಳೆಯುವ ಕಾತುರ

ಬಲಿ ಕೊಟ್ಟಾದರೂ ಸರಿ, ನಾ ಸತ್ತಾದರೂ ದೇವರ ವಶಿಸಿಕೊಳ್ಳಬೇಕೆಂಬುದು ಭಕ್ತನ ಆಸೆ,

ನನ್ನದೂ ಅಷ್ಟೇ ಅತ್ತಾದರೂ ಸರಿ, ಅಳುಕಾದರೂ ಸರಿ ನಿನ್ನ ಪ್ರೀತಿಯ ಪಡೆಯಬೇಕೆಂಬ ಸೆಲೆತ


ನಿಜಕ್ಕೂ ನಾನು ಕವಿಯಲ್ಲ, ಕವಿಯಾದದ್ದು ನಿನ್ನ ಬಣ್ಣಿಸುತ್ತಾ

ಮುಂಚೆ ಬರೆದಿಟ್ಟ ಸಾಲುಗಳಲ್ಲ ಇವುಗಳು ನಿನ್ನೊಡನೆ ಮಾತನಾಡುವಾಗ

ನಿನ್ನ ನೆನಪಿನ ಹೊತ್ತಿಗೆಯ ತೆಗೆದು ಮೆಲುಕುಹಾಕುವಾಗ ಬರೆಯುವ ಸಾಲುಗಳು,


ಕವಿಯಾಗುವೆನು ನಿನ್ನಯ ಚೆಲುವ ಬಣ್ಣಿಸಲು

ಲೇಖಕನಾಗುವೆನು ನಿನ್ನಯ ಒಳ್ಳೆತನವ ಬರೆಯಲು

ಭಕ್ತನಾಗುವೆನು ನಿನ್ನ ಪ್ರೀತಿಯ ಪೂಜಿಸಲು

ಅಭಿಮಾನಿಯಾಗುವೆನು ನಿನ್ನಯ ಆರಾಧಿಸಲು,

ಹುಳು ಮಾನವ ನಾನು ಅದಕ್ಕಲ್ಲವೇ ಇಷ್ಟೆಲ್ಲಾ ಆಸೆ ಕನಸುಗಳು


ನೀ ನನ್ನ ಹೊಗಳಿದರೂ ಬೈದರೂ ಎಲ್ಲದ್ದಕ್ಕೂ ನೀನೇ ಕಾರಣ

ಸರಿ ತಪ್ಪುಗಳಿಗೆ ದೇವರೇ ಕಾರಣ

ನನ್ನ ಪ್ರೀತಿಯ ವಿಷಯಗಳಿಗೆ ನೀನೇ ಕಾರಣ

ಹುಚ್ಚನಂತೇ ಪ್ರೀತಿಸಿದ್ದು ನಾನಲ್ಲ

ಪ್ರೀತಿಸಿಕೊಂಡಿದ್ದು ನೀನು, ನೀನಿಲ್ಲದಿದ್ದರೇ ನನ್ನ ಪ್ರೀತಿಗೆ ಬೆಲೆಯೆಲ್ಲಿತ್ತು ಹೇಳು?

ಬರೆದಿದ್ದು ನಾನಲ್ಲ ಬರೆಸಿಕೊಂಡಿದ್ದು ಆ ನಿನ್ನ ಮೋಹಕ ಚೆಲುವು,

ಆ ಚೆಲುವೆ ಇಲ್ಲದಿದ್ದರೇ ಈ ಪದಗಳೆಲ್ಲಿಂದ ಹುಟ್ಟಾವು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...