22 ನವೆಂಬರ್ 2008

ನಾನರಿಯ(ದ) ನನ್ನಂತಾರಳ ೧

ಕವನಗಳು
ನೆನಪಾಗದೇ...........?
ಗೆಳತಿ ನಿನಗೆ ನೆನಪಿದೆಯಾ?
ಆ ಸಂಜೆಗಳು, ನಾನು ನಿನ್ನನ್ನು ಬೆನ್ನಟ್ಟಿ ಬರುತಿದ್ದ ದಿನಗಳು,
ಗಂಟೆಗಳು ಕಳೆದಿವೆ ನಿನ್ನ ಬರುವಿಗೆ ಕಾಯಲು,
ನಿನ್ನ ಆ ನಗು, ಆ ಸಣ್ಣ ನೋಟಕ್ಕಾಗಿ
ಮುಗಿದೆವು ನನ್ನೆರಡು ವರುಶ...
ಅದೆನು ನಾಚಿಕೆ ಆಗ ನಿನ್ನ ಕಣ್ಣಲ್ಲಿ,
ಮೊದಲೇ ಕೆಂಗುಲಾಬಿ ಬಣ್ಣ ನಿನ್ನ ಕೆನ್ನೆ,,,,
ನಾ ಬಂದ ಕ್ಷಣ ಅದಿನ್ನು ರಂಗೇರುತ್ತಿತ್ತು,
ನನಗಾಗ ಅದರ ಅರಿವಿರಲಿಲ್ಲ ಆದರೀಗ,
ಎಲ್ಲಾ ಎಳೆ ಎಳೆಯಾಗಿ ನೆನಪಾಗುತಿದೆ,

ರಾತ್ರಿ ಇದ್ದಕ್ಕಿದ್ದ ಹಾಗೆ ನೆನಪಾಯಿತು,
ಹೌದು ಕಳೆದಿವೆ ವರುಶಗಳು,
ಸುಮಾರು ಎಂಟು ವರ್ಷವಾಯಿತು,
ಆದರು ಇಂದು ಕಂಡೆನೆನೋ ಎಂಬಂತಿದೆ,
ಇಂದು ನೀನು ಎರಡು ಮಕ್ಕಳ ತಾಯಿ,
ನಾನಿನ್ನು ಹುಡುಗಾಟದ ಹುಡುಗ,
ನಿನಗೆ ಇದೆಲ್ಲ ನೆನಪಿರಲು ಸಾಧ್ಯ್ವವಾ? ನಾ ಅರಿಯೇ ಅದು
ನಾನಿನ್ನ ನೋಡಬೇಕೇಂಬ ಆಸೆ ಇಲ್ಲವೇ ಇಲ್ಲ,
ಆದರು ಆ ನೆನಪು ಕಾಡುತಿದೆ,
ಆ ಮುಸಂಜೆ, ಕೆರೆ ಏರಿಯ ಮೇಲಿನ ಜೊತೆ ನಡುಗೆ,
ನೀ ಬೇಕೆನ್ನಿಸುತಿದೆ,
ಇದೇನಾ ಪ್ರೀತಿ?
ನಾ ಅರಿಯೆ ಅದನು, ಯಾಕೇ?
ನನಗೆ ತಿಳಿಯದು ಅದರ ಅರ್ಥ,
ನಿನ್ನೋಡನೆ ಬೇಕೇಂಬುದೋಂದೆ ಆ ದಿನದ ಬಯಕೆ............
ಅಲ್ಲಿ ಅರ್ಥ ಹುಡುಕುವ ಸಮಯವೆಲ್ಲಿತ್ತು? ನೀನೇ ಹೇಳು....
ಯಾರದರು ಕಂಡರೆಂಬ ಬಯದೀ,
ನೀ ದೂರ ನಾ ದೂರ
ಎಲ್ಲೋ ನಿಂತು ಮಾತಡುತಿದ್ದೆವು.............

ನಾಚಿಕೆ ನಿನಗೆ ಮೀಸಲಿತ್ತೇನೋ ಅನಿಸಿದೆ,
ಆ ಮಟ್ಟದ ನಾಚಿಕೆ ಇನ್ನು ಮುಂದೆ ಕಾಣಲೇ ಇಲ್ಲ
ಯಾವ ಹೆಣ್ಣಿನ ಮೊಗದಲ್ಲು..........
ನೀನು ಬೆರೋಬ್ಬರ ಮನದಾಕೆ
ಯಾಕೆ ಕಾಡುತೀ ನನ್ನ ಹೀಗೆ?
ಬೇಡ ಈ ಪ್ರೀತಿಯ ನಂಟು ಸಾಕೆನಗೆ..............

ನಿನ್ನವ....೨೬-೧೦-೦೭

ನೀನಿಲ್ಲದೆ. . . . .!

ನೀ ಬಿಟ್ಟ ನೆನಪಲ್ಲ ಅದು ಮರೆತರೆ ತಾನೆ ನೆನಪಾಗುವುದು
ನಿನ್ನದೆ ತಾಣವಿದು ಮತ್ತೆ ನಿನ್ನಯ ಬರುವಿಕೆಗೆ ಕಾಯುತ್ತಿದೆ ನನ್ನಯ ಮನ
ನೀನಿಲ್ಲದ ಬದುಕು ಬೇಡವೆಂದೆನಿಸಿರಬಹುದು,
ನೀನಿಲ್ಲದೆ ಬದುಕಲಾಗುವುದಿಲ್ಲವೆಂದು ನಾನೆಂದು ಹೇಳಿಲ್ಲ,
ಬದುಕುತ್ತೇನೆ, ಬದುಕಲೇ ಬೇಕು, ಸಾವೆಂಬುದು ಬರುವುದಿಲ್ಲ ಎನಗೆ,
ನಾನೊಬ್ಬ ಪಾಪಿ, ಪಾಪಿಯೆಂದಿಗೂ ಚಿರಾಯು,
ಅದೇನು ಮೋಡಿಯೋ, ಈ ಪ್ರೀತಿಯೊಳು,
ಹೃದಯಕ್ಕೆ ನೆತ್ತರಾಗಿದ್ದ ಗೆಳತಿ ದೂರ ಸರಿದಳು ಯಾವ ಮಾತು ಹೇಳದೆ,
ನನ್ನದೇ ತಪ್ಪಿದ್ದರೂ ಸರಿಯೆ, ಅವಳದೇ ತಪ್ಪಿದ್ದರೂ ಸರಿಯೆ,
ನಾನು ನ್ಯಾಯವ ಕೇಳ ಹೊರಟಿಲ್ಲ,
ಅನ್ಯಾಯದ ಮಾತು ನನಗೆ ತಿಳಿದಿಲ್ಲ, ನನ್ನ ಹೃದಯದ ಬಡಿತ ನಿಲ್ಲಿಸಲೂ ಕಾರಣವೇಕಾದೆ ನೀನು,
ಅಂತರಾಳದ ವೇದನೆಯನ್ನು ನಿನ್ನೊಡನೆ ಹಂಚುವ ಮಹದಾಸೆ ಎನಗಿಲ್ಲ,

ಭಾವನೆಗಳ ಸಂಗಮವೇ..?
ಮನದಾಳದ ಭಾವನೆಯೇ ಅದೆನ ಆಳುವೆ ಈ ಮನವ
ಹೇಳಳಾರದ ನೋವಾ ಇದು?
ತಡೆಯಲಾರದೆ ಉಕ್ಕುವ ....ಇದು?
ಅದೆಂತೋ ಅರಿಯೇ ಇದರ ಪರಿಯ
ಆದರು ಹೇಳುವ ಬಯಕೆ ಮೂಡಿದೆ

ಆತುರವೋ ಅವಸರವೋ
ಹೇಳ ಹೋರಟರೆ ಹರಿವೆ ನದಿ ನೀರಿನಂತೆ,
ನಂಬಿಕೆಯೆನಗೆ ಬಾವನೆಗೆ ಕೊನೆಯಿಲ್ಲವೆಂದು
ಸಾಕಾಗಿದೆ ಈ ಬದುಕು ಸಾಕೆನಗೆ ಈ ಯಾತನೆ
ಆದಾವ ಪರಿ ಕಾಡುವೆಯನಗೆ?
ಭಾವ ಜೀವಿಯ ನೋವು ನಿನಗರಿವಿಲ್ಲವೆ?
ಬಾವನೆಯೊಂದಿಗಿನ ಈ ನಾಟಕದ ತೆರೆಯಂದು?
ಕಲರವ, ನೂಕಾಟ, ಗೊಂದಲ ಸಾಕು, ಸಾಕೆನಗೆ...

ಭಾವ ಜೀವಿಯ ಬದುಕು ಬಲು ಬೇಸರವೆಂದು ಹೇಳಲಾರೆ

ನಿನ್ನವ........೦೨-೧೧-೦೭
ಆಸೆ
ಕಳೆದಿವೆ ೫೭೦ ಮಿಲಿಯನ್ ವರ್ಷಗಳು,
ಭೂಮಿ ಆಳಿದವರು,
ಆಳ ಅಳೆದವರು ಯಾರು ಉಳಿಯಲಿಲ್ಲ ಆದರು ನಿಂತೆ ಇಲ್ಲ
ನಮ್ಮ ಆಸೆಯ ಹೂಡೆದಾಟ
ಪ್ರೀತಿಯ ಹುಡುಕಾಟ
ನಮಗು ಗೊತ್ತು ಏನು ಹೊತ್ತು ಹೋಗಲಾರೆವೆಂದು
ಆದರು ಬಿಡಲೊಲ್ಲದೀ ಮನಸು
ಹುರಿದುಂಬಿಸಿ ಹಾಳು ಮಾಡಿದೆಯೆನ್ನ
ಬೇಡವೆಂದರೂ ಮೋಹದ ಸುಳಿಗೆ ಕರೆದ್ಡೊಯ್ಯುತಿದೆ
ಅದು ಸುಳಿ ಅಲ್ಲಿಂದ ಬರಲಾರೆ ಹೊರಗೆ
ಆದರೇನ ಹೇಳಲಿ ನಿನ್ನ ಮೋಡಿಗೆ ಸಿಲುಕದವರಾರು?

ಬಣ್ಣ ವಿಲ್ಲದ ಸರಳ ಚಿಟ್ಟೆ ನೀನು,
ಮೋಸವೋಗುವೆನೆಂಬ ಭಯವೆನಗೆ
ಆದರೆನಂತೆ ನಿನ್ನ ಮೋಹಕ್ಕೆ ಸೋಲದ ಗಂಡಸಾರು?
ಬೆಂಕಿಯ ಮೋಡಿಗೆ ಸೋತ ಪತಂಗ ನಾನು
ನಿನ್ನ ಸೆಳೆತ ಬಿಡದೆನ್ನ
ಅದು ಸುಳಿಯೋ, ಪ್ರಪಾತವೋ ನಾ ಕಾಣೇ.....
ನಿನ್ನವ...೧೫-೧೧-೦೭
ವಾಹಿನಿ
ನಾ ಏನ ಬಲ್ಲ್ಲೆ ಗೆಳತಿ
ನಿನ್ನ ಮನದಾಳದ ಭಾವನೆಯ
ತಿಂದುಂಡು ಅಲೆದಾಡುವ ಉಂಡಾಡಿ ನಾನು
ಸೋಮಾರಿಯ ಸೋದರ
ತಿಳಿಯದು ನಿನ್ನಯ ಆಳ
ದೊರೆಯು ಕಾಯ್ವನು ನಿನಗಾಗಿ
ಚಿಂತೆ ಬೇಡ ನನಗೊಂದೆ ಬಯಕೆ
ದೊರೆಯು ಸೇರಲು ಸಾಲು ಸಾಲು ವಾಹಿನಿಯರು
ಅವರ ಗುಂಗಿನಲ್ಲಿ ನಿನ್ನ ಮರೆವನೇ ?
ಇಲ್ಲವೆಂದಿತು ನನ್ನ ಮನಸಾಕ್ಷಿ
ಒಮ್ಮ್ವೆ ದೂಡಿತೆನ್ನ
ಅಯ್ಯೊ ಅಪಶಕುನವೇ ನಿನೊಬ್ಬ ಮೂಡ
ನಿನಗೆನು ತಿಳಿದುದು ವಾಹಿನಿಯ ಶಕ್ತಿ
ಅದರ ಸೆಳೆತ ನೀನರಿಯೆ ತೊಳಗಾಚೆ...........:)

ನಾ ಯಾಕೆ ಹೆಳಲಿ ಸುಳ್ಳು
ನನಗೇನು ಬಂದಿತು
ಇಲ್ಲದ ಸುಳ್ಹೇಳಿ ನನಗೇನು ಬರುವುದು
ಇನ್ಯಾವ ನರಕಕ್ಕೆ ನಾ ತೆರಳಲಿ,,,,,
ಇದಕ್ಕಿಂತ ಪಾಪಿ ಜನ್ಮದೊರೆಯದಂತೆ ಹೇಳಿದ ನನ್ನ್ನ ಪ್ರೀತಿಯ ಮಾವ
ಅವನಂತೆ ಎಲ್ಲರ ಹಣೆಬರಹ ಗೀಚೋದು
ಅದೇನೋ ಹೆಸರದು ಆ ಬೊಮ್ಮ ಅಲ್ಲಲ್ಲ ಬ್ರಹ್ಮ

ನಾನು ನಿಮ್ಮಷ್ಟು ಬಲ್ಲವನಲ್ಲ
ನಿಮ್ಮಷ್ಟು ತಿಳಿದವನೂ ಅಲ್ಲ
ತಿಳಿಯಬೇಕೆಂಬ ಬಯಕೆ
ಆದರೇನು ಮಾಡಲಿ
ಹಣೆ ಬರಹಕ್ಕೆ ಹೊಣೆಯಾರೆಂಬಂತಿದೆ ನನ್ನ ಬದುಕು
ವಿವೇಚನೆ ನಿಮಗಿರಲಿ
ಸಾಧಾರಣ ಬಾಳು ಸಾಕೆನಗೆ.......
ಎತ್ತ ಹರಿದಿದೆ ವಾಹಿನಿಯ ಮನಸು
ಸಾಗರದೊರೆಯ ಸಂಗಮವೆಂದು?

ತುಂಗಾ ನದಿಯೇ?
ತುಂಗೆ... ಅದಾರೋ ಶಂಕರ,
ಶಾರದೆ ದೇವಿಯ ಕಾಣಲು ಬಂದು ಅಲ್ಲೇ ನೆಲಸಿದ.......
ಮಾರು ಹೋದನವ ನಿನ ಕಂಡು, ನಿನ್ನ ಬಿಂಕ ಬಿನ್ನಾಣ ನೋಡಿ,

ಗಂಗಾಮೂಲ ಹುಟ್ಟೂರು ನಿನ್ನದು, ಎಂಥಹ ಸೊಬಗಿನ ನಾಡು,
ನಿನ್ನಂತ ಚಲುವಿಗೆ ಜನ್ಮವಿಡಲೆ ಜನಿಸಿದ ನಾಡದು,
ಅದಾರು ಕರೆದರೊ ಅದನ್ನು ಕುದುರೆಮುಖವೆಂದು,
ಭದ್ರೆ ಬಂದಳೂರಿಗೆಂದು ಮುನಿಸಿ ಹೊರಟೆಯೇ ನೀನು
ತೀರ್ಥಳ್ಳಿ ಬಳಸಿ ಬರಲು,
ಅದೇನು ಹುಚ್ಚೆ ನಿನ್ನದು ಹೊರಟೆಯಾಕೆ ಕ್ರಿಷ್ಣೆಯ ಸೇರಲು,
ಭದ್ರೆಯ ಮೇಲೆ ಅಸೂಯೆ ನಿನಗೆ
ಅವಳ ಮುಂಚೆ ಸೇರುವ ಬಯಕೆ,
ಅವಳು ನಿನಗಿಂತ ಚೆಲುವೆ
ಅವಳ ಸಖಿಯರು ಗೊತ್ತಾ ನಿನಗೆ,
ಸೋಮವಾಹಿನಿ, ಸಂಸೆ, ಇನಾರಾರೋ ನಾ ಅರಿಯೆ ಅವರೆಸರ,

ನಿನಗೆಂತು ಮರ್ಯಾದೆ ತಾಯಿ,
ಹೇಳಿದರಲ್ಲಿ ಗಂಗಾ ಸ್ನಾನ ತುಂಗಾ ಪಾನ,
ತುಂಗಾ ತೀರಾ ನಿವಾಸಿನಿಯಂತೆ ತಾಯಿ ಶಾರದೆ,
ಗಾಜನೂರು ನಿನ ತಡೆದ ತಾಣವಲ್ಲವೇ,
ಪಾಪ ಭದ್ರೆ ಲಕ್ಕವಳ್ಳಿಯಂತೆ ಕಟ್ಟೆ ಬಿಟ್ಟಿದ್ದಾರೆ,
ಅಲ್ಲಿಂದ ಅದೆಲ್ಲೋ ದೂರದ ಊರಂತೆ ಕೋಲಾರ ಅಲ್ಲಿಗೆ ಕರಿತಾರೆ,
ಅದೇಗೆ ಹೋದಾಳು ಹೇಳು, ಅವಳಿಗು ಆಸೆ ಸಾಗರ ಕಾಣಲು,
ಅಂತು ನಿನ ದಯೆ ಸೇರಿದವಳು ಕೂಡ್ಲಿಯಲ್ಲಿ

ಭದ್ರಾವತಿಯಂತೆ ಹೆಸರು ಅವಳದು,
ಪಾಪಿ ಜನ ಕಪ್ಪು ಬಳಿದವರೆ,
ಒಮ್ಮೆ ನೋಡವಳ ಕಳಸದಲಿ ಆ ತೊರೆಯ ಸಿರಿ
ಸಾಗರ ದೊರೆಯು ನಾಚಬೇಕು,
ಅರಣ್ಯ ದೇವಿ ಅವಳ ನಂಟಸ್ಥೆಯಂತೆ,
ಆದರು ಅವಳೆಲ್ಲಿಯತನಕ, ಒಂಟಿಯಾದಲು ಗೋಂದಿಯ ಬಳಿ,
ಮಲೀನವಾದಳು ಭದ್ರಾವತಿಯಲಿ,
ನೀನ್ಯಾಕೆ ಸೇರಿದೆ ಅವಳ, ಹರಿಹರವೋ ಏನೋ,
ಹರಿದ್ರೆಯಂತೆ ಅವಳಿಗು ಆಸೆ ನಿನ ಸಂಗ ಸೇರಲು,
ಮತ್ತಾರೋ ಬಂದರಿಲ್ಲಿ ನಿಮ ಮುಖ ಕೆಡಿಸಲು
ಹರಿಹರ ಕಂಪನಿಯಾ? ಹೌದಂತೆ........

ನಿನ್ನವ...೨೬-೧೦-೦೭
ಬೆಂದಕಾಳೂರಿನಿಂದ ಬಳು ದೂರ ನನ್ನೂರು
ಕಾವೇರಿ ನದಿದಂಡೆ, ಪಶ್ಚಿಮಘಟ್ಟದ ತಪ್ಪಲು,
ಮಳೆಗಾಲ ಶುರುವಾಗಿದೆ, ಅಮ್ಮ ಕೈ ಅಡುಗೆ,
ಅಪ್ಪನ ಬೈಗುಳ, ಓದಿ ಓದಿ ಮರುಳಾದ ಕೂಚುಬಟ್ಟ
ಓದಲಿಲ್ಲ ಬರೆಯಲಿಲ್ಲ ಅನ್ನಕೊಟ್ಟ ನಮ್ಮ ರೈತ,

ಬೆಂಗಾಡಿನ ಹೊಗೆ,ಟ್ರಾಫಿಕ್ ಜಂಜಾಟ,
ಫ್ಲರ್ಟಿಂಗ್ಸ್ ಮಾಯಾ, ದುಡ್ಡಿನ ಅಬ್ಬರ,
ಮಧ್ಯೆ ಹಣದುಬ್ಬರ,ಸಾಕೆನಗೆ ನನ್ನೂರೇ ಕುಷಿಯೆನಗೆ,
ಆಧುರೀಕರನದ ವೈಭವವಿಲ್ಲ, ಕಂಪ್ಯೂಟರಿಕರಣವಿಲ್ಲ,
ಬರುವುದೊಂದು ಬಸ್ಸು ನನ್ನೂರಿಗೆ, ಅದು ಬಂದು ಹೋಗುವಾಗ ನಾನಿರುವೆ ನಿದ್ದೆಯಲಿ,
ಪಟ್ಟಣಕ್ಕೆ ಹೋಗುವ ಮಾತೇ ಕನಸಾಗಿದೆ,
ಆದರೂ ಅಂದೋ ಇಂದೋ ಒಮ್ಮೋಮ್ಮೆ ಬಂದು ಹೋಗುವೆ,
ಆ ದಿನವೆ ನನಗೆ ಅಂತರ್ಜಾಲದ ಬೆಸುಗೆ,
ಬನ್ನಿ ಒಮ್ಮೆ ಎನ್ನಯ ಮನೆಗೆ, ಅದೋ ಆ ಪಟದಲ್ಲಿರುವುದೆ ನನ್ನ ಮನೆ,
ಮನೆಯೆಂದರೆ ಬರೀ ಮನೆಯಲ್ಲ,
ಶಾಂತಿಯ ನೆಲೆ,
ನನ್ನೊಳಗಿನ ಆಸೆಗಳು ಗರಿ ಬಿಚ್ಚಿ ಹಾರಾಡುವ ಬಾನಂಗಳವದು,
ನಲ್ಲೆ ಬಿಟ್ಟು ಹೋದ ನೆನಪುಗಳ ಗರಿಗರಿಯಾಗಿ,
ಎಳೆ ಎಳೆಯಾಗಿ ಹರಿದಾಡಿಸುವ,
ಆಂತರ್ಯವನ್ನು ಕೆದಕಿ ಸಿಡಿದೆಬ್ಬಿಸುವ ಮನೆಯದು.
ನನ್ನದೇ ಜಗತ್ತು, ನನ್ನದೇ ಬದುಕು ಯಾರ ಹಂಗಿಲ್ಲ,
ಯಾರ ಭಯವಿಲ್ಲ ನನಗೆ ನಾನೇ ಸಾರ್ವಭೌಮ
ನನ್ನ ಕನಸುಗಳೇ ನನ್ನ ಮಿತ್ರರು

ವಿರಹ
ನಿನ ನೋಡುವ ಬಯಕೆ ಅತಿಯಾಗಿದೆ,
ಅದೇಗೆ ತಡೆಯಲಿ ಈ ವೇದನೆ,
ಅಯ್ಯೊ ಕೋಪಬೇಡ ಹ್ರುದಯದೊಡತಿ
ವೇದನೆಯಲ್ಲ ನಿನದೆ ನೆನಪು,
ನೆನಪಲ್ಲ ಅದು ಮರೆತರೆ ತಾನೆ ನೆನಪಾಗುವುದು
ನನ್ನುಸಿರು ನೀನು ನಿನ ಮರೆತರೆ ಉಸಿರು ನಿಂತು ಮಣ್ಣು ಪಾಲಾಗದೀ ದೇಹ
ಕೆಟ್ಟ ಮನುಷ್ಯ ನಾನು ನನ್ನೆದೆ ಸೇರಿದೆ ನೀನು
ಅದೇನು ಮೋಡಿಯೋ ನಾ ಮರೆತೆ ನನ್ನನೆ
ಸದಾ ನಿನ್ನದೇ ಯೋಚನೆ, ತಳಮಳ, ಕಾಣುವ, ಸೇರುವ ಬಯಕೆ ಮುಗಿಲು ಮುಟ್ಟುತ್ತಿದೆ,
ನಿನಗಾಗದೆ ಈ ತಳಮಳ

ದಾರಿದೀಪ
ನನ್ನೊಲವೇ,
ನಿನ ಕಣ್ಣಂಚಿನ ನಗುವಿನ ನೋಟದ ಪರಿ ನಾ ತಡೆಯೆನು
ಸಾಕು ನಿಲ್ಲಿಸು ಆ ನಗುವ, ತುಟಿಯಂಚಲಿ ಮಿನುಗುವ ನಗುವೇ
ನನ ಕೊಲ್ಲುವೆ ನೀನು ಜೇನ್ ತುಟಿಯೋ ಅದೆನಡಗಿದೆಯೋ
ಮಾಡಿದ ಮೋಡಿಯು ಮರೆತ ಮೈ ಮನದ ನಾಡಿಯೋ
ಸೋತೆ ಗೆಳತಿ ನಿನ್ನಂದಕೆ,
ಆ ಸೊಬಗು ಬಿನ್ನಾನ ಸಾಕೆನಗೆ ತಡೆಯೆನು ಅತಿಯಾದರೆ,
ಚುಂಬಿಸಲೇ ನಲ್ಲೆ ಆ ಕೆಂದುಟಿಯಾ?
ನೋಡೊಮ್ಮೆ ನಿನ್ನ ಬಟ್ಟಲು ಕಣ್ಣುಗಳ ಹರಿಸು ನನ್ನೆಡೆಗೆ
ಅದಾಗಲೀ ದಾರಿ ದೀಪ ಎನ ಬಾಳಿಗೆ,

ನಲ್ಲೆಯ ಸವಿರಾತ್ರಿ
ನಲ್ಲೆಯ ಮನವೇಕೋ ಬಾಡಿದೆ
ಚಿಂತೆಯಳು ಮುಳುಗಿದೆ ಅವಳಂತರಾಳ,
ನನ್ನೆಯ ಚಿಂತೆಯಲ್ಲವದೂ ನನ್ನಯ ಚಿಂತನೆಯಲ್ಲ,

ನನ್ನ ನಲ್ಲೆಯು ನೋಟಕೆ ದಿನ ಕಳೆದಿಹೆನು ನಾನು
ಅವಳಿಗಾಗಿ ಕಾಲ ಕಳೆದಿಹೆನು
ಅವಳೆಂದು ನನ್ನ ನೋಡಬೇಕೆನ್ನಲಿಲ್ಲ,
ನಿನ್ನೆಯಾಕೆ ಕರೆದೊಳು ನಾನನರಿಯೆ,
ನಿನ್ನೆ ಅವಳೊಳಗಿದ್ದ ರತಿ ಕುಣಿದಳೇನೋ,

ಅವಳಿದ್ದಳು ನಿನ್ನೆ ಒಳ್ಳೆಯ ಮನದಲ್ಲಿ
ಆಸೆಯ ಚಿಗುರು ಕುಡಿ ಒಡೆದು
ಹೂವಾಗ ಹೊರಟಿತ್ತು
ಮುತ್ತಿನ ಮಳೆ ಸುರಿದಳು ಚಿರ ಯೌವ್ವನ ಅವಳದು
ಮಗುವಿನಂತವಳು ಒಂದು ಮುತ್ತಿಗೆ ನಿಲ್ಲುವವಳಲ್ಲ,
ರತಿಯ ಮತ್ತೊಂದು ರೂಪವೆ ಅವಳಲ್ಲವೇ,

ಅವಳೆಂದರೆ ಕಾಮದೇವನು ಬೆರಗಾಗಬೇಕು,
ಅದೆಂಥಹ ಹುರುಪು ಅವಳಲ್ಲಿ,
ನಿಸರ್ಗದ ಪ್ರತಿರೂಪ ನಿನ್ನಯ ಅವತಾರ
ನಿನ್ನ ಒಂದೊಂದು ಅಂಗವೂ ಒಂದೊಂದು ನಿಸರ್ಗವೇ ಸರಿ

ಒಂಟಿಯಾಗಿ ಹುಟ್ಟಿ ಜೊತೆಯಾಗಿ ಬೆಳೆದರೂ, ನಾನೊಬ್ಬ ಒಂಟಿಯೆಂದು, ಬದುಕುತಿದ್ದವನ ಬಾಳಿಗೆ ಜೊತೆಯಾಗಿರುವೆನೆಂದು ಬಂದೆ, ನಿನ್ನಯ ಬರುವಿಕೆಯನ್ನು ನಾನೆಂದು ನ್ರಿರೀಕ್ಷಿಸಿರಲಿಲ್ಲ ಆದರೂ ನೀನಾಗೆ ಬಂದೆ, ನನ್ನೊಡನಿದ್ದೆ, ನನ್ನಯ ಹೃದಯದಲ್ಲಿ ನಿನ್ನಯ ಸ್ಥಾನವ ಮಾಡಿಕೊಂಡೆ, ಅಲ್ಲಿಯೆ ನೆಲೆಸಿದ್ದೆ ವರುಷಗಳು, ನಾನು ನಿನ್ನನ್ನು ಒಮ್ಮೆಯು ಯಾಕೆಂದು ಕೇಳಲಿಲ್ಲ. ನಿನ್ನಯ ಬಗೆಗೆ ಒಮ್ಮೆಯು ತಿರುಗಿ ಮಾತಾಡಾಲಿಲ್ಲ, ರಾತ್ರಿ ನನ್ನೊಡನೆ ಕೋಪಿಸಿಮಲಗಿದಾಗಲೂ ಕೇಳಲಿಲ್ಲ, ಮುಂಜಾನೆಯ ಚಳಿಯಲ್ಲಿ ನೀನೆ ಬಂದು ಬಿಗಿದಪ್ಪಿ ನನ್ನ ನರನಾಡಿಯಲ್ಲೆ ಬಿಗಿಯಂತೆ ತಪ್ಪಿದಾಗಲೂ ಉಸಿರಾಡಲಿಲ್ಲ, ನನ್ನೊಳಗಿದ್ದ ಕಾಮದೇವನೊಡನೆ ನೀನು ಕದನಕ್ಕಿಳಿದು ನನ್ನ ಗಂಡಸುತನಕ್ಕೆ ಪರೀಕ್ಶೆ ಒಡ್ಡಿದಾಗಲೂ ಮಾತನಾಡಲಿಲ್ಲ, ನೀ ದೂರಾಗಬೇಕೆಂಬ ಬಯಕೆ ನಿನಗೆ ಬಂದದ್ದು ತಪ್ಪಿಲ್ಲ, ಅದು ಸಹಜವೇ ಸರಿ, ಹರಿಯುವ ನದಿ ಒಂದೆಡೆ ನಿಲ್ಲುಎಂದು ಹೇಳಲಾಗದು ಆದರೂ ನನಗೊಂದು ಕುತುಹಲ ನೀನು ನನ್ನೆಡೆಗೆ ಬಂದದ್ದಾದರೂ ಯಾಕೆ,,, ನನ್ನಿಂದ ದೂರಾಗಿದ್ದಾದರೂ ಯಾಕೆ?

ಪ್ರೀತಿಯ ತೀವ್ರತೆಯಲ್ಲಿ ಮುಳುಗಿ, ಕಾಮದೇವತೆಯಲ್ಲಿ ತೇಳಲು ಹೋಗಿ,
ಅಲ್ಲಿಯೆ ನನ್ನತನವನ್ನು ಕಂಡು
ಕಾಮದೇವಿಯ ಕೋಪಕ್ಕೆ ತುತ್ತಾಗಿ,
ವಿರಹತೆಯಲ್ಲಿ ನಲುಗುತ್ತಿದ್ದೇನೆ......
ಕಲ್ಪನೆಯ ಜಗತ್ತೆ ಉತ್ತಮ
ಒಂಟಿತನವೇ ಸುಖಾತನ.....
ನಿನ್ನವ
4:16 PM 8/12/2008

ಮುಸ್ಸಂಜೆ
ಮುಸ್ಸಂಜೆಯಲ್ಲಿ ಮಳೆ ಸುರಿಯುತಿದೆ
ಜುಳು ಜುಳು ನೀರಿನ ದನಿ ಮೊಳಗಿದೆ
ತಂಗಾಳಿಯಾಗಿದ್ದು ಬಿರುಸಾಗಿ ಬೀಸಿ ಚಳಿ ಮೂಡಿಸಿದೆ
ನನ್ನೊಡನೆ ನಿನ್ನಯ ವಿರಹದ ಬೇಗೆಯೂ ಏರಿದೆ
ಕಾಣುವ ಬಯಕೇಯೋ, ಅನಿವಾರ್ಯತೆಗೆ ತಲುಪಿದೆ,
ಕಾಣಲೇಬೇಕು ನಿನ್ನ, ನೀನೀಲ್ಲದೇ ಹೋದರೇ ಈ ಮಳೆ ಸುರಿದೇನು ಸುಖ,
ಭೂಮಿ ತಣಿಸಲು ಮಳೆ ಬೇಡ ನನ್ನೊಳಗೆ ಅಡಗಿರುವ ಪ್ರೀತಿಯ ದಾಹವಿಂಗಿಸಲು ಬೇಕು,
ಮಳೆಯಲ್ಲಿ ನೆನೆದು ನೀ ಬಂದು ನನ್ನ ಮುಂದೆ ಕುಣಿದು ಕುಪ್ಪಳಿಸಬೇಕು,
ನಿನ್ನ ನಗುವಿನ, ಕುಣಿತದ ಸಪ್ಪಳಕ್ಕೆ ಈ ಭೂಮಿಯೊಮ್ಮೆ ನಾಚಬೇಕು.
ನೀ ಕುಣೀಯುವುದನ್ನು ಕಂಡು ನಾಚಲೀ ಆ ನವಿಲು,
ನನಗೊಬ್ಬಳು ಸ್ಪರ್ಧಿ ಬಂದಳೆಂದು ಕೊರಗಳಿ ಆ ಕೋಗಿಲೆ ನಿನ್ನ ಗಾನಸುಧೆಗೆ ಮರುಳಾಗಿ.

ನೀನಾ ಇದು ಮಾಯೆ?

ಎಲ್ಲಿ ಅಡಗಿತ್ತೋ ನಾನರಿಯೆ,
ಇಂದು ತೀರಿಸಿತು ನನ ಜನ್ಮವ,
ಪ್ರೀತಿಯೆಂಬ ಮಾಯೆಯ ಹೆಸರು ಕೇಳಿದರೆ ಕಣ್ಣೀರು ಸುರಿವುದು ಧಾರಾಕಾರವಾಗಿ,
ನೊಂದಮನದ ಅಳುವಿದು ಎನ್ನಲೇ, ಇದ್ದರೂ ಇರಬಹುದು,
ಜಗತ್ತಿನಲ್ಲಿ ಊಟದ ಹಸಿವಿಗಿಂತ ಪ್ರೀತಿಯ ಹಸಿವಿನಿಂದ ನೊಂದವರೆಚ್ಚು,
ಅದೇನಡಗಿದೆಯೋ ಈ ಪ್ರೀತಿಯ ಮಡಿಲಲ್ಲಿ ಇದು ಪ್ರೀತಿಯ ನನಗೆಂತು ಗೊತ್ತು,
ನೀ ನಗುವಾಗ ನನ್ನೊಳಗೆ ನಾನಕ್ಕೆ, ನೀ ಮಂಕಾಗಿದ್ದಾಗ ನನ್ನೊಳಗೆ ನಾನತ್ತೆ.
ನಿನ ಮೊಗ ಬಾಡುವುದ ಕಾಣಲೇ ಇಲ್ಲ ಸದಾ ಹಸುರಾಗಿರಲಿ ಎಂದು
ನನ್ನ ನೆತ್ತರಲೀ ಪ್ರೇಮಪತ್ರವ ಗೀಚಿದೆ,
ಆ ಪತ್ರವ ನೀಡುವ ಮನಸಾಗದೆ ನನ್ನೊಳಗೆ ಅಡಗಿಸಿದೆ,
ಅದಕ್ಕೆಂದ್ದು ಬೆಂಕಿ ಇಡಲಿ ಎನ್ನುವ ಮುನ್ನವೇ ನನ್ನ ಚಿತೆಗೇರಿಸಲು ಸಿದ್ದಪಟ್ಟೀತೆ ನಿನ್ನಯ ಮದುವೆ,
ದುಃಖ ದುಮ್ಮಾನ ಎನಗಿಲ್ಲ, ನಿನ್ನ ಕೊರಗಲ್ಲವೇ ಅಲ್ಲ, ಆದರೂ ಕೊಲ್ಲುತಿದೆ ಜೀವವ ತೇಯಿದಾದರೂ
ನಿನ್ನೊಡನಿರಲು ಬಯಸಿದ ಕನಸುಗಳು ಮಂಕಾಗದೆ ಕಾಡುತಿವೆ,
ಅವು ನನ್ನನ್ನು ಹಂಗಿಸಲು ಕಾದಿದ್ದ ದಿನ ಬಂದಿರುವ ಹಾಗಿದೆ,

ಪರನಾರಿ

ಮಂಕಾಗಿರೆ ಯಾಕೀ ನನ್ನೀಮನವೇ,
ರಂಗಾದ ಯುಗಾದಿಯೊಳು ಅವಳ ನೆನಪೇಕೆ,
ಬಿಡು ನಿನ್ನೀ ಹುಚ್ಚಾಟವ
ಜಗ ಮುನ್ನೆಡೆದಿರೆ ನಿನ್ನದೇನೀ ಮತಿ ಹೀನಾ ಸಲಹೆ
ಹೋದವಳ ನೆನೆ ನೆನೆದೇಕೆ ಅಳುವೆ,
ಕಣ್ಣೀರು ಬರದ ಪಾಪಿಯ ದೇಹದೊಳೇಕೀ ಕೊರಗು

ಎನಿತು ಬಯಸುವೆ ಅವಳ ಆಸರೆ
ಪರನಾರಿಯಾದವಳ ಕೊರಗೇಕೆ ನಿನಗೆ
ಮಂಕಾಗಿದೆ ನನ್ನೀಮನ, ತೊಳಲಾಡುತಿಹೆ
ಕಾಡುತಿದೆ ನಿನ್ನೊಲವು ನನ ಮನವೇ
ಕಣ್ಮುಚ್ಚಿ ನಡೆದೊಡೆ ನನ್ನೆದೆಯಲಿ

ನಿನ್ನೊಡನೆ ಕಳೆದ ದಿನಗಳು

ನಿನ್ನೊಡನೆ ಕಳೆದ ಈ ಸಂಜೆಗಳು,
ಅವು ಸಂಜೆಗಳಲ್ಲ
ನನ್ನ ಅಮೃತ ಘಳಿಗೆಗಳು,
ಒಟ್ಟಿಗೆ ನಡೆದ ಆ ನಾಲ್ಕು ಹೆಜ್ಜೆಗಳು,
ಜೊತೆಯಲ್ಲಿ ಕುಳಿತು ಪಯಣಿಸಿದ ಆ ಸಂಜೆಯ ಕ್ಷಣಗಳು,
ಮಬ್ಬಿನ ಬೆಳಕಲ್ಲಿ ನಿನ್ನ ಕಣ್ಣಿನ ಕಾಂತಿಯಲ್ಲಿ ನನ್ನ ನಗು ನೋಡಿದ ದಿನಗಳು,
ನಿನ ಪಾದದಲಿ ನನ್ನ ಬಿಂಬವ ನೋಡಲೆತ್ನಿಸಿದ ನಿಮಿಷಗಳು,
ಕೆಂದುಟಿಯ ಮೇಲೆ ನನ್ನ ಬೆರಳಿಡಲು ಯತ್ನಿಸಿದ ಕ್ಷಣ
ಕಣ್ಮುಚ್ಚಿದ ನಿನ್ನಯ ಮೊಗದಲ್ಲಿದ್ದ ಆ ಪರಮಸುಖದ ನಗು
ಆ ನಗುವಿನಲ್ಲಿ ನಾಕಂಡ ಸ್ವರ್ಗ,
ಮಳಯಲ್ಲಿ ಅಪ್ಪಿ ನಡೆದು ದಣಿದು, ಬಿಗಿದಪ್ಪಿದ ಕ್ಷಣಗಳು,
ಬರಲಾರದೇ ಆ ದಿನ ಮತ್ತೊಮ್ಮೆ, ನನಗರಿವಿಲ್ಲ,
ನೀನಿದ್ದ ಈ ಮೂವತ್ತು ದಿನಗಳು
ನನ್ನ ಬಾಳಿನ ಪುಟದಲ್ಲಿ ಬರೆಸುವ ಬಂಗಾರದ ದಿನಗಳು,
ನಿನ್ನ ಬರುವಿಗಾಗಿ ನಾ ಕಾದ ಆ ಸಂಜೆಗಳು,
ನನ್ನ ಸಂತೋಷದ ಸಂಜೆಯನ್ನು ಕಾಣಲು ಅಸೂಯೆ ಪಟ್ಟು ಹೋರಟ ಸೂರ್ಯ,
ನಿನ್ನೊಡನಿರುವುದನ್ನು ಸಹಿಸಲಾರದೆ ಬಾರದ ಚಂದ್ರ, ನಮಗೆ ತೊಡಕು ನೀಡಲು ಬಂದ ಮಳೆರಾಯ,
ನಮ್ಮ ಬಿಸಿಯಪ್ಪುಗೆ ಕಂಡು ದೂರಾದ ರಾತ್ರಿ,
ಮಳೆ ನಿಂತರು ಬಿಗಿದಪ್ಪಿದ ದೇಹಗಳು,
ನಿನ್ನ ಮೈ ಶಾಖ, ನನ್ನೆದುಸಿರು ನಿನ್ನೆದೆ ತಾಕುತ್ತಿದ್ದರು
ನೀನು ಬಂಗಾರದ ಗೊಂಬೆಯಂತಿದ್ದೆ ಅದೇನೂ ಚಿಂತಿಸುತ್ತಿದ್ದೆ,

ಅಂದೊಂದು ದಿನ ೨೫ ವರುಶಗಳ ಕೆಳಗೆ, ನನ್ನಜ್ಜಿ ಹೇಳಿದ ಕಥೆಯಿದು, ಅದು ೧೯೮೩ ನೇ ಇಸವಿ, ಎಪ್ರಿಲ್ ತಿಂಗಳ ೧೮ನೇ ತಾರೀಖು ಸೋಮವಾರ. ಬ್ರಹ್ಮನೆಂಬ ಹಣೆಬರಹ ಬರೆಯುವ ಅಧಿಕಾರಿ ಬಾನುವಾರ ರಾತ್ರಿ ಕುಡಿದು ಟೈಟ್ ಆಗಿ, ಹ್ಯಾಂಗ್ ಓವರ್ ನಿಂದ ಸ್ವಲ್ಪ ತಡವಾಗಿ ಎದ್ದು ಕುಳಿತ. ಸಮಯ ನೋಡುವಾಗ ೧೨. ೪೫ ಮುಂಜಾನೆಯಿಂದ ಒಂದೆ ಒಂದು ಹಣೆಬರಹ ಗೀಚಿರಲಿಲ್ಲ ಆ ವಾರದ ಟಾರ್ಗೆಟ್ ಮುಟ್ಟಲಿಲ್ಲವೆಂದು ಆತುರದಿಂದ ಒಳಗೆ ಹೋಗಿ, ಪೆನ್ನು ಹುಡುಕಿದ ಸಿಗಲೇ ಇಲ್ಲ. ಕೊನೆಗೆ ಅಲ್ಲೆ ಇದ್ದ ಜಾಲಿ ಮುಳ್ಳು ಹಿಡಿದು ಹೊರಗೆ ಬಂದ. ಭೂಲೋಕದಲ್ಲಿ, ಧನಲಕ್ಷ್ಮಿಯೆಂಬ ಮಹಿಳೆ ಹೆರಿಗೆ ನೋವಿನಿಂದ ಬಳಲುತಿದ್ದದ್ದು ಕೇಳಿಸಿತು. ದಿಡೀರನೆ ಆ ಮಗುವಿನ ಹಣೆ ಹಿಡಿದು ಜಾಲಿ ಮುಳ್ಳಿನಲ್ಲಿ ಗೀಚಿದ, ಆ ಒಂದು ಕ್ಷಣದ ತಪ್ಪಿಗೆ ಇಂದಿಗೂ ಪಶ್ಚತ್ತಾಪ ಪಡುತಿದ್ದಾನೆ ಬ್ರಹ್ಮ. ಆ ಮಗುವಿಗೆ ನವೆಂಬರ್ ತಿಂಗಳಲ್ಲಿ ಹರಿಶ್ ಬಾನುಗೊಂದಿಯೆಂದು ನಾಮಕರಣ ಮಾಡಲಾಯಿತು. ಆ ಮಗು ಆನಂದದಿಂದ ಬೆಳೆದು ಅನ್ನಕ್ಕೆ ದಂಡವಾಗಿ ಭೂಮಿಗೆ ಭಾರವಾಗಿ ೨೫ ವರ್ಷ ತುಂಬಿಸಿ ಕಾಲ ಹರಣ ಮಾಡುತಿದೆ. ಕೆಲವೊಮ್ಮೆ ದುಡುಕಿ ಮಾಡುವ ಕ್ಷಣದ ತಪ್ಪಿಗೆ ಜೀವನವನ್ನೆ ದಂಡವಾಗಿ ಪಣವಿಡಬೇಕಾಗುತದೆ. ಈ ಮೇಲಿನ ಕತೆ ಅದಕ್ಕೋಂದು ನಿದರ್ಶನ. ಅವನ ಕುಡಿತದಿಂದ ಮಾಡಿದ ತಪ್ಪು, ಏನು ತಿಳಿಯದ ಎರಡು ದಂಪತಿಗಳು ಕಣ್ಣೀರಿಡುವಂತೆ ಮಾಡಿದೆ. ಇದು ನನ್ನ ಕತೆ! ಬ್ರಹ್ಮನ ತಪ್ಪಿಗೆ ನಾನು ಹೊಣೆಯಲ್ಲ.



ನಲ್ಲೆಯ ಸವಿರಾತ್ರಿ

ನಲ್ಲೆಯ ಮನವೇಕೋ ಬಾಡಿದೆ
ಚಿಂತೆಯಳು ಮುಳುಗಿದೆ ಅವಳಂತರಾಳ,
ನನ್ನೆಯ ಚಿಂತೆಯಲ್ಲವದೂ ನನ್ನಯ ಚಿಂತನೆಯಲ್ಲ,

ನನ್ನ ನಲ್ಲೆಯು ನೋಟಕೆ ದಿನ ಕಳೆದಿಹೆನು ನಾನು
ಅವಳಿಗಾಗಿ ಕಾಲ ಕಳೆದಿಹೆನು
ಅವಳೆಂದು ನನ್ನ ನೋಡಬೇಕೆನ್ನಲಿಲ್ಲ,
ನಿನ್ನೆಯಾಕೆ ಕರೆದೊಳು ನಾನನರಿಯೆ,
ನಿನ್ನೆ ಅವಳೊಳಗಿದ್ದ ರತಿ ಕುಣಿದಳೇನೋ,

ಅವಳಿದ್ದಳು ನಿನ್ನೆ ಒಳ್ಳೆಯ ಮನದಲ್ಲಿ
ಆಸೆಯ ಚಿಗುರು ಕುಡಿ ಒಡೆದು
ಹೂವಾಗ ಹೊರಟಿತ್ತು
ಮುತ್ತಿನ ಮಳೆ ಸುರಿದಳು ಚಿರ ಯೌವ್ವನ ಅವಳದು
ಮಗುವಿನಂತವಳು ಒಂದು ಮುತ್ತಿಗೆ ನಿಲ್ಲುವವಳಲ್ಲ,
ರತಿಯ ಮತ್ತೊಂದು ರೂಪವೆ ಅವಳಲ್ಲವೇ,

ಅವಳೆಂದರೆ ಕಾಮದೇವನು ಬೆರಗಾಗಬೇಕು,
ಅದೆಂಥಹ ಹುರುಪು ಅವಳಲ್ಲಿ,
ನಿಸರ್ಗದ ಪ್ರತಿರೂಪ ನಿನ್ನಯ ಅವತಾರ
ನಿನ್ನ ಒಂದೊಂದು ಅಂಗವೂ ಒಂದೊಂದು ನಿಸರ್ಗವೇ ಸರಿ

ನಿನ್ನಯ ಕಣ್ಣುಗಳು ಜಮ್ಮು ಕಾಶ್ಮೀರಾದ ಸಾಲ್ಟ್ ಸರೋವರಗಳು
ಕಣ್ಣುಬ್ಬುಗಳು ಉತ್ತಾರಾಂಚಲ ಮತ್ತು ಹಿಮಚಾಲ
ನಿನ್ನಯ ತುಟಿಗಳು ದೆಹಲಿಯ ಸೊಬಗು
ನಿನ್ನಯ ಮೊಲೆಗಳು ಹಿಮಲಾಯದ ಮಂಜಿನ ಮುಂಜಾನೆ,
ನಿನ್ನಯ ಹೊಟ್ಟೆಯೋ ರಾಜಸ್ಥಾನದ ಥಾರ್ ಮರುಭೂಮಿ
ನಿನ್ನಯ ಹೊಕ್ಕುಲು ಗುಜರಾತ್ ಸಬರ್ಮತಿ ನದಿಯು
ನಿನ್ನಯ ತೊಡೆಗಳು ಮುನ್ನಾರ್ ಬೆಟ್ಟಗಳು
ನಿನ್ನಯ ಕುಂಡಿಯು ಪಶ್ಚಿಮ ಘಟ್ಟದ ತಪ್ಪಲು,
ನಿನ್ನಯ ತೊಡೆ ಮಧ್ಯದ ಕಣಿವೆಯೊ ಸೈಲೆಂಟ್ ವ್ಯಾಲ್ಲೀಯೂ,
ಅಲ್ಲಿರುವ ಕೂದಲುಗಳು ಸಹ್ಯಾದ್ರಿಯ ಚಿಗುರೆಲೆಗಳು,
ನಿನ್ನಯ ಕಾಲು ಗಳು ಮದುರೈ ರಸ್ತೆಗಳು,
ನಿನ್ನಯ ಕಾಲ್ಬೆರಲು ಪುದುಚೇರಿಯ ತೀರವೂ,
ನಿನೆಂದರೆ ಸೊಬಗಿನ ತಾನ,
ನಿನೆಂದರೆ ನನ್ನಯ ಪ್ರಾಣ

ನಿನ್ನವ
4:16 PM 8/12/2008

ಮನುಷ್ಯನ ಜೀವನವೆಂಬುದು ಸದಾ ಚಿತ್ರ ವಿಚಿತ್ರ ತಿರುವುಗಳಿಂದ ತುಂಬಿರುತ್ತದೆ, ಅದು ತನ್ನನ್ನು ಎಲ್ಲಿಂದ ಎಲ್ಲಿಗೆ ಬೇಕಿದ್ದರೂ ಕರೆದೊಯ್ಯಬಹುದು. ಇದು ನನ್ನ ಜೀವನಕ್ಕೂ ಅನ್ವಯವಾಗಿದೆ. ನಾನು ನನ್ನಲ್ಲಿ ಈ ಮಟ್ಟದ ತಳಮಳವನ್ನು ಇನ್ನೆಂದು ಕಂಡಿರಲಿಲ್ಲವೆಂದರೇ ತಪ್ಪಿಲ್ಲ. ಹೌದು ನನ್ನೊಳಗೆ, ನೂರಾರು ಆಸೆಗಳು ಹರಿದಾಡುತ್ತಿದ್ದದ್ದು ನಿಜವೇ ಸರಿ, ಆದರೇ ಎಂದೂ ಯಾರ ಆಸರೆಯೆನ್ನು ಬಯಸಿರಲಿಲ್ಲ, ಯಾರ ಉಪಸ್ಥಿತಿಯ ಅವಶ್ಯಕತೆಯೂ ಇರಲಿಲ್ಲ. ನಾನು ಕರ್ನಾಟಕದ ಬಹುತೇಕ ಎಲ್ಲಾ ತಾಲ್ಲೂಕುಗಳನ್ನು ಸುತ್ತಾಡಿದ್ದೇನೆ. ಎಂದೂ ನಾನು ಒಂಟಿಯಾಗಿ ಸುತ್ತಾಡುತ್ತಿದ್ದೇನೆ, ಎನಿಸಿರಲಿಲ್ಲ. ಆದರೀಗ, ನೀನು ನನ್ನೊಳಗೆ ಬರುವ ವೇಳೆ, ಕ್ಷಣ ಕ್ಷಣಕ್ಕೂ ನಿನ್ನಯ ಉಪಸ್ಥಿತಿಯ ಅನಿವಾರ್ಯತೆ ನನಗೆ ಕಾಡುತ್ತಿದೆ. ನಿನ್ನ ಮಿಂಚಿನ ಕಂಗಳ ಸೆಳೆತ, ಆ ಸಿಹಿನಗೆ, ಸೂಜಿ ಮಲ್ಲಿಗೆಯ ಮೂಗು, ನಿನ್ನೆದೆಯ ಬಡಿತ, ಆ ಬಿಸಿಯುಸಿರು, ಎಲ್ಲವೂ ನನ್ನೊಳಗೆ ಮನೆ ಮಾಡಿಕೊಂಡಿದ್ದರೂ ನಿನ್ನೊಡನೆ ನನ್ನ ಆತ್ಮ ಬೆರೆತು ಹೋಗಿದ್ದರೂ ನಿನ್ನಯ ಮೇಲಿನ ತಪಸ್ಸು ಕುಗ್ಗುತ್ತಿಲ್ಲ.

ನಿನ್ನೊಂದಿಗೆ

ನನಗೀಗ ಬೇಕಿರುವುದು ದೈಹಿಕ ಆಕರ್ಷಣೆಯಾ? ಗೊತ್ತಿಲ್ಲ ನಿನ್ನ ಮೋಹ ಬಿಡುತ್ತಿಲ್ಲ ನಿನ್ನ ಸಾಮಿಪ್ಯ ನನ್ನನ್ನು ಆಕರ್ಷಿಸುತ್ತಿದೆ. ಅದು ಏನನ್ನು ಬಯಸುತ್ತಿದೆ ಎಂದು ಹೇಳುವುದು ನನ್ನಿಂದ ಆಗುತ್ತಿಲ್ಲ, ನಿನ್ನ ಸೌಂದರ್ಯ ನನ್ನನ್ನು ಮತ್ತೆ ಮತ್ತೆ ಕೆಣಕುತಿದೆ, ನಿನ್ನ ಮಿಂಚಿನ ಕಣ್ಣುಗಳು ನನ್ನನ್ನೆ ನಾನು ಮರೆಯುವಂತೆ ಮಾಡಿವೆ, ಆ ನಿನ್ನ ಸೂಜಿಮಲ್ಲಿಗೆಯ ಮೂಗು ನನ್ನ ತಾಳ್ಮೆಯನ್ನು ಕೆಣಕುತಿದೆ, ಕೆಂದುಟಿಗಳು ನನ್ನ ಅಂತರಾಳದಲ್ಲಿ ಅಡಗಿರುವ ಮನ್ಮತನೊಡನೆ ಕದನಕ್ಕಿಳಿದಿವೆ. ನಿನ್ನ ಗದ್ದವ ಮುಟ್ಟಲೇನೋ, ನನ್ನ ಕೈಗಳು ಹವನಿಸುತ್ತಿವೆ. ನನಗೆ ಇದೆಲ್ಲ ಕಾಮಚೇಷ್ಟೆ ಎನಿಸುತ್ತಿದೆ ಯಾದರೂ, ಇದು ಪ್ರೀತಿಯಲ್ಲ ಕಾಮದ ಬಯಕೆ ಎನ್ನುತ್ತಿದ್ದರೂ, ನನ್ನ ಮನ ಅದನ್ನು ಒಪ್ಪಲು ಸಿದ್ದವಿಲ್ಲ. ನಿನ್ನ ಪೌಷ್ಟಿಕ ದೇಹದ ಒಂದೊಂದು ಅಂಗವು ನನ್ನನ್ನು ನೆನಪಿಸಿ ನೆನಪಿಸಿ ಕೊಲ್ಲುತ್ತಿದೆ.ಇದು ನಿನ್ನೊಡನೆ ಚರ್ಚಿಸುವ ವಿಷಯವಲ್ಲ. ಇಲ್ಲಿಯವರೆಗು ನಾನು ನಿನ್ನ ಪ್ರೀತಿಸುತಿದ್ದೇನೆ, ನಾನು ಬಯಸುತ್ತಿರುವುದು ನಿನ್ನ ಹೃದಯದ ಮಿಡಿತವನ್ನಿರಬೇಕು ಎಂದು ತಿಳಿದಿದ್ದೆ, ಇಲ್ಲ ಈ ಪ್ರೀತಿಯೆಂಬ ಮಾಯೆ ಅದನ್ನು ಮೀರಿ ಬೆಳೆದಿದೆ, ನನ್ನ ಕಣ್ಣುಗಳು ನಿನ್ನ ವದನ ಸೌಂದರ್ಯವನ್ನು ಬಿಟ್ಟು ನಿನ್ನ ಅಡಿಯಿಂದ ಮುಡಿವರೆಗಿನ ಅಂಗ ರಾಶಿಯನ್ನು ಹರಸುತ್ತಿದೆ. ಇದೆಲ್ಲ ನನ್ನ ಆಂತರಿಕ ಸಂಘರ್ಷವಿರಬಹುದು ಆದರೂ ನಿನಗೆ ಹೇಳುವ ಅನಿವಾರ್ಯ ನನ್ನ ಮುಂದಿದೆ. ನಾನು ಎಂದೂ ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡಿದವನಲ್ಲ, ಆದರೆ ನಿನ್ನ ಮುಂದೆ ತಡೆಯಲಾಗದ ಹೇಡಿಯಾಗಿದ್ದೇನೆ.

ನಿನ್ನ ಅನುರುಕ್ತಿಯಾಗುವ ಬಯಕೆ ಮೂಡುತಿದೆ. ಇದು ಆಗುವ ಕೆಲಸವಾ? ಆಗದ ಕಾರ್ಯವ ಎಂದು ನನ್ನನ್ನು ನಾನೆ ಪ್ರಶ್ನಿಸುವಂತೆ ಮಾಡಿದೆ. ನಿನ್ನ ನಿತಂಬಗಳೆಡೆಗೆ ನನ್ನ ಕಣ್ಣು ಪದೆ ಪದೆ ಹೊಗಿದ್ದಾದರೂ ಯಾಕೆ? ನಿನ್ನೆದೆಯೆಡೆಗೆ ನನ್ನ ದೃಶ್ಠಿ ಹರಿದುದ್ದೇಕೆ? ನನ್ನನ್ನು ನಾನೆ ಮತ್ತೆ ಮತ್ತೆ ಕೇಳಿದರೂ ಉತ್ತರ ದೊರೆಯುತ್ತಿಲ್ಲ. ನಾನೆಂತ ನೀಚನೆನಿಸುತಿದೆ. ದೈಹಿಕ ಮೋಹಕ್ಕೆ ಒಳಗಾಗುವುದಾ? ಬೇರೆಯವರ ಒಡತಿಯಾಗುವ ಹೆಣ್ಣನ್ನು ವರಿಸುವುದು, ನನ್ನನ್ನು ವರಿಸು ಎಂದು ಕೇಳುವುದು ಅಬ್ಬಾ! ಎಷ್ಟು ಘೋರವೆನಿಸುತ್ತಿಲ್ಲ? ನನ್ನ ಕಾಮುಕ ಮನಸ್ಸು ಉತ್ತೇಜನ ನೀಡುತ್ತಿದೆ. ಪ್ರೀತಿಯ ಕೊನೆ ಹಂತವೇ ಕಾಮವೆಂದು ಪ್ರಚೋದಿಸುತ್ತಿದೆ ಇದು ಸತ್ಯವಾ? ನಾನರಿಯೆ, ತಪ್ಪು ಎಂದು ಮತ್ತೆ ಮತ್ತೆ ನನಗೆ ನಾನೆ ಹೇಳಿದರು, ನಿನ್ನ ಕಂಗಳ ಕಾಂತಿ ನನ್ನನ್ನು ಪ್ರೇರೆಪಿಸುತ್ತಿದೆ. ನಮ್ಮಿಬ್ಬರ ಸಮಾಗಮ ಎಂತಹ ಮೂರ್ಖತನದ ಪ್ರಶ್ನೆ? ನನಗೀಗ ಮುಕ್ತಿ ಬೇಕು. ನೀನು ನನ್ನನ್ನು ವರಿಸುವೆಯಾ ಎಂದು ಕೇಳಲಾ? ಅದು ಸಾಧ್ಯವಾ? ಇಲ್ಲ ನಾನು ದೂರ ಹೋಗಲು ನಿರ್ಧರಿಸಿದ್ದೇನೆ ಗೆಳತಿ, ಎಲ್ಲಿಗೆ ಎಂದು ಕೇಳಬೇಡ, ಮುಂದಿನ ಜನ್ಮವೆಂಬುದಿದ್ದರೆ ಕಂಡಿತವಾಗಿಯು ನಿನ್ನ ಪ್ರೇಮಿಯಾಗಿ ನಿನ್ನ ಬಾಳ ಸಂಗಾತಿಯಾಗಿ ಬಾಳುತ್ತೇನೆ. ಇಂದಿನ ಬಾಕಿ ಪ್ರೀತಿಯನ್ನು ಅಲ್ಲೇ ಹರಿಸು ನನ್ನೆಡೆಗೆ. ನಿನ್ನ ದೇಹದ ಮೋಹ ನಿನ್ನಲ್ಲಿಗೆ ಕರೆದೋಯ್ಯುತ್ತದೆ. ನಿನ್ನ ಒಡನಾಡಿಯಾಗಿ ಚಿರಾಯುವಾಗುತ್ತೇನೆ. ಈ ಜನ್ಮಕ್ಕೆ ಸಾಕು ನನ್ನನ್ನು ಕ್ಷಮಿಸು. ನನ್ನ ಮನಸಲ್ಲಿ ಮುಂದಿನ ಯೋಜನೆಯಿಲ್ಲ. ಆದರೆ ಈ ಊರು ಈ ಜನ ಬಿಡುವ ಯೋಜನೆಯಿದೆ. ಎಲ್ಲಿಗೆ, ಯಾಕೆ ಕೇಳಬೇಡ. ನಿನ್ನ ನಂಬಿಕೆಗೆ ದ್ರೋಹ ಬಗೆದಿದ್ದರೆ, ಬಗೆದಿದ್ದರೆ ಏನು ಬಗೆದಿದ್ದೇನೆ. ಸದಾ ನಿನ್ನವನಾಗಳು ಬಯಸುವ.....ನಿನ್ನವ...

















ಪ್ರಥಮ ಪ್ರೇಮ ಪತ್ರವೇ....?

ಹೇಗೆ ಪ್ರಾಂಭಬಿಸಬೇಕೋ ತಿಳಿಯುತಿಲ್ಲ, ಆದರೂ ಹೇಳಲೇ ಬೇಕಾದ ಮನಸ್ಥಿತಿ ಒದಗಿಬಂದಿದೆ. ಇಲ್ಲಿ ಏನನ್ನೋ ಹೇಳಬಯಸುತ್ತಿದ್ದೇನೆಂದರೆ ತಪ್ಪಾಗುತ್ತದೆ. ನನ್ನ ಮನಸ್ಸನ್ನು ಸಂಪೂರ್ಣವಾಗಿ ಬೆತ್ತಲಾಗಿಸಿ ನಿನಗೆ ತೋರಿಸುವ ಒಂದು ಚಿಕ್ಕ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ನನ್ನಂತರಾಳದಲ್ಲಿ ಅಡಗಿರು ನೋವು, ವ್ಯಥೆ, ಸುಖ, ದುಃಖಗಳನ್ನು ನಿನ್ನ ಮಡಿಲಿಗೆ ಹಾಕುತ್ತಿದೇನೆ. ಬರೀ ನೋವು ನಲೈವು ಅನ್ನುವುದಕ್ಕಿಂತ ನನ್ನ ಬದುಕನ್ನೆ ನಿನಗೆ ನಿನ್ನ ಮಡಿಲಿಗೆ ಹಾಕುತ್ತಿದ್ದೇನೆ. ಇನ್ನೇನು ನನ್ನ ಬದುಕು ಮುಗಿದೇ ಹೋಯಿತು, ನನ್ನ ಕೊನೆಯ ದಿನಗಳನ್ನು ಎಣಿಸುತ್ತಿದ್ದೇನೆಂದು ತಿಳಿದಿದ್ದ ನಾನು ಮತ್ತೆ ನನ್ನ ಬದುಕು ಹಸನಾಗುವ ದಿನ ಬಂದಿದೆ ಎಂಬ ಬರವಸೆ ಮೂಡಿದೆ. ಇದು ನಿನ್ನಿಂದಲೇ ಹೊರತು ಅದಕ್ಕೆ ಮತ್ತ್ಯಾರು ಕಾರಣವಲ್ಲ. ಅಂದು ನಾನು ನಿನಗೆ ನನ್ನ ಪ್ರೀತಿಯ ವಿಷಯ ತಿಳಿದ ಮೇಲೆ, ನನ್ನನ್ನು ಕಾಡುತ್ತಿರುವ ಕೆಲವು ಅಂಶಗಳನ್ನು ಹೇಳಬಯಸುತ್ತೇನೆ. ನೀನು ನನ್ನನ್ನು ''ಪ್ರೀತಿಸಲು ನಿನಗೆ ಏನು ಅರ್ಹತೆಯಿದೆ" ಎಂಬ ಒಂದೇ ಒಂದು ಪ್ರಶ್ನೆ ಸಾಕು. ನನ್ನನ್ನು ಕೊಂದು ಬಿಡುತ್ತದೆ. ಹೌದು ನನಗೆ ಏನು ಅರ್ಹತೆಯಿದೆ, ಎಂದು ಪದೇ ಪದೇ ಚಿಂತಿಸುತ್ತಿದ್ದೇನೆ. ಪ್ರೀತಿಸುವ ಮನಸ್ಸಿದೆ, ಸ್ಪಂದಿಸುವ ಹೃದಯವಿದೆ. ನಿನ್ನನ್ನ್ನು ಅರಿತು ಸದಾ ನಿನ್ನ ನೆರಳಾಗಿರುವ ಶಕ್ತಿಯಿದೆ. ಆದರೇ, ಅದನ್ನು ಬಿಟ್ಟು, ಆರ್ಥಿಕ ವಿಷಯ ಬಂದಾಗ ನಿಷ್ಪ್ರಯೋಜಕನಾಗ್ತೇನೆ. ಇಂದಿಗೂ, ನನ್ನ ಬಳಿಯಿರುವುದು, ನಾಲ್ಕೈದು, ಜೊತೆ ಬಟ್ಟಗಳು, ಒಂದು ಜೊತೆ ಚಪ್ಪಲಿ, ಹಳೇ ಬೂಟ್ಸುಗಳು. ಆದರೆ ನಾನು ಅದನ್ನು ನನ್ನ ಸರಳತೆಯೆಂದು ಹೇಳಬಹುದು, ಆದರೂ ನನಗೆ ಅದನ್ನೆಲಾ ಸಂಪಾದಿಸಲಾಗದೇ ಹೀಗೆ ಇರುವೆನೆಂದರೆ. ಇರಬಹುದೆನಿಸಿ ನನ್ನ ಮನಸ್ಸು ಮಂಕಾಗುತ್ತದೆ.

ನಾನು ಎಂ.ಎಸ್ಸಿ. ಮಾಡಿದ ಮೇಲೆ ಹಣ ಸಂಪಾದಿಸೋಣಾವೆಂದು, ಮೂರ್ನಾಲ್ಕು ತಿಂಗಳು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದೆ, ಆದರೇ ಅದು ನನಗೆ ಒಗ್ಗ್ಗದೇ, ನಾನು ಉನ್ನತ ವ್ಯಾಸಾಂಗ ಮಾಡಬೇಕೇಂದು, ತೀರ್ಮಾನಿಸಿದೆ. ಇದು ನನ್ನ ತಂದೆ ತಾಯಿಯರಿಗೆ ಅಷ್ಟು ಇಷ್ಟವಿದ್ದಂತೆ ಕಾಣಲಿಲ್ಲ. ಅದರಿಂದ, ನಾನು ನನ್ನದೇ ಆದ ಸಮಸ್ಯೆಗಳಿಗೆ ಆಹ್ವಾನವಿಟ್ಟುಕೊಂಡೆ. ಇಂದಿಗೂ ನನಗಿರುವ ಸಮಸ್ಯೆಗಳು ನನ್ನನ್ನು ಬಿಟ್ಟು ಮತ್ತ್ಯಾರಿಗು ತಿಳಿದಿಲ್ಲ. ನನ್ನದು ಸ್ವಾಭಿಮಾನವೆಂದರೂ ಸರಿಯೆ ಅಥವಾ ಅತೀವಿನಯತೆಯೆಂದರೂ ಸರಿಯೆ. ಅದರ ಬಗ್ಗೆ ನನಗೆ ಒಲವಿಲ್ಲ. ನಾನು ಬಹಳ ಸೂಕ್ಷ್ಮಜೀವಿ. ನನ್ನಿಂದ ಪ್ರತಿದಿನ ಒಬ್ಬರಿಗಾದರೂ ಸಹಾಯವಾಗಲೇ ಬೇಕೇಂದು ಬಯಸಿ ಹೊರಡುತ್ತೇನೆ.ಕೆಲವೊಮ್ಮೆ ಬೇರೆಯವರಿಗೆ ಸಹಾಯ ಮಾಡಲು ಹೋಗಿ ನಾನು ಸಂಕಟದಲ್ಲಿ ಬಿದ್ದದ್ದು ಇದೆ, ಇದು ಒಂದು ಬಾರಿಯಲ್ಲ ಹಲವಾರು ಸಾರಿ ಆಗಿದೆ. ಆದರೂ ನಾನು ನನ್ನ ಈ ಕೆಲಸ ನಿಲ್ಲಿಸಿಲ್ಲ, ಯಾಕೆಂದರೇ ಒಬ್ಬ ಮನುಷ್ಯನೇ ಪ್ರಪಂಚವಲ್ಲ, ಒಬ್ಬ ಮೋಸಮಾಡಿದನೆಂದು ಎಲ್ಲರನ್ನೂ, ದೂರಿದರೆ ನಮ್ಮದು ಹಳದಿ ಕಣ್ಣಾಗುತ್ತದೆ.

ನಿನ್ನಲ್ಲಿ ನನಗೆ ಆಕರ್ಷಣೆಯಿದೆಯೆಂದರೆ ಒಪ್ಪುವುದಿಲ್ಲ, ಅದು ಸೆಳೆತ, ಯಾವುದೋ ಜನ್ಮದಿಂದ ನಿನ್ನನ್ನು ನಾನು ಬಲ್ಲೆನೆಂಬ ಅರಿವು ನನ್ನಲ್ಲಿ ತಲೆದೋರಿದೆ. ನೀನು ಈ ಜನ್ಮಕ್ಕೆ ಅಷ್ಟೇ ಮಾತ್ರ ಬಂದವಳಲ್ಲವೆನಿಸುತ್ತದೆ. ನೀನು ನನ್ನ ಕೈ ಹಿಡಿದು ನಡೆಸಲು ಬಂದವಳೇನೋ, ಆ ದೇವತೆಯ ಪ್ರತಿರೂಪವೇನೋ ಎನಿಸುತ್ತಿದೆ. ಲೋಕದಲ್ಲಿ ಗಂಡು ಹೆಣ್ಣಿಗಾಸರೆ, ಆದರಿಲ್ಲಿ ನಾನು ನಿನ್ನ ಕೈ ಸೆರೆ ಎಂಬುದು ಸತ್ಯವಾಗಿದೆ. ನಾನು ನಿನ್ನ ಸೇವಕನಾಗಿದ್ದೇನೆಂದರೂ ತಪ್ಪಿಲ್ಲ. ನಿನ್ನ ದೂರವಾಣಿ ಕರೆಗೆ, ನಿನ್ನ ನಗುವಿಗೆ ನನ್ನ ದಿನಗಳನ್ನೆಲ್ಲಾ ಮುಡುಪಾಗಿಸಲು ಅಣಿಯಾಗಿದೆ ನನ್ನ ಮನಸ್ಸು. ನೀನು ನನಗಿಂತ ದೊಡ್ಡವಳೆಂಬುದು ನನಗೆ ಖುಷಿ ತಂದಿದೆ, ಕಾರಣ ನೀನು ನನ್ನನ್ನು ದಾರಿ ತಪ್ಪದ ಹಾಗೆ ನಡೆಸುತ್ತೀಯಾ ಎಂಬ ಬಯಕೆ. ಆದರೇ ನೀನು ನನಗಿಂತ ದಪ್ಪವಿರುವುದು, ನನಗೆ ಮತ್ತೊಂದು ಖುಷಿಯ ವಿಚಾರ ಕಾರಣ, ನಿನ್ನ ಮೇಲೆ ಸದಾ ಮಲಗಿರಬಹುದು. ನಿನ್ನ ಕಂಗಳ ಬೆಳಕಲ್ಲಿ ನಾನು ನಡೆಯಬಯಸುತ್ತೇನೆ. ಆ ಬೆಳಕು ಸದಾ ಪ್ರಜ್ವಲಿಸುತ್ತಿರಬೇಕು,ನೀನು ನನಗೆ ದಾರಿದೀಪವಾಗಬೇಕೆಂಬ ಬಯಕೆ ಮೂಡಿದೆ. ನಿನ್ನನ್ನು ನನ್ನ ಕಂಗಳಲ್ಲಿ ಇಟ್ಟು ಜೋಪಾನ ಮಾಡಬೇಕೆಂಬ ಆಸೆ. ಕಣ್ಣೀರಲ್ಲಿ ಬಿದ್ದರೆನ್ನಬೇಡ, ನೀನು ನನ್ನ ಬಾಳಲ್ಲಿದ್ದ ಮೇಲೆ ಕಣ್ಣೀರು ಬರುವ ಮಾತೇ ಇಲ್ಲವೆಂಬುದು ನನ್ನ ನಂಬಿಕೆ.

ನಾನು ನನ್ನ ನೋವಿನ ಅಥವಾ ದುಃಖದ ಮುಖವನ್ನು ಯಾರೊಂದಿಗೂ ಹಂಚಿಕೊಂಡಿಲ್ಲ. ನನ್ನ ತಂದೆ ತಾಯಿಯರಿಗೂ ಅದನ್ನು ತೋರಿಸಿಲ್ಲ. ಎಲ್ಲರಿಗೂ ಗೊತ್ತಿರುವ ಹರಿಶ್ ಎಂದರೆ, ಸಂತೋಷದ ಒಂದು ಜೀವ. ಆದರೇ ನಿನಗೆ ಇದನ್ನೆಲ್ಲಾ ಹೇಳಲೇಬೇಕು, ಇದು ಅವಶ್ಯಕತೆಯೆನ್ನುವುದಕಿಂತ, ಅನಿವಾರ್ಯತೆ. ನೀನೆ ನನ್ನ ಸರ್ವಸ್ವವೆಂದ ಮೇಲೆ, ನಮ್ಮಿಬ್ಬರ ನಡುವೆ, ತಿಳಿ ಸಂಬಂಧವೆರ್ಪಡಲಿ, ಅಲ್ಲಿ ಚಿಕ್ಕ ಚುಕ್ಕಿಯೂ ಇರಬಾರದು. ನನ್ನ ಬೇಡಿಕೆಗಳು ನಿನಗೆ ಅತಿ ಎನಿಸುತ್ತಿವೆಯಾದರೂ ಇದನ್ನೆಲ್ಲಾ ಹೇಳಲೇಬೇಕು. ಹೇಳಿದ್ದೇನೆ.....ಇದು ಇನ್ನು ಮುಗಿದಿಲ್ಲ, ನನ್ನ ಪ್ರೀತಿ ನಿರಂತರ.,.,.,.ಮುಂದುವರೆಸುತ್ತೇನೆ.,.,





ಇದು ನನ್ನ ಜೀವನ

ಜೀವನದಲ್ಲಿ ಏನಾದರೂ ಸಾಧಿಸಿದವರು ತಮ್ಮ ಜೀವನ ಚರಿತ್ರೆ ಬರೆಯುವುದು ವಾಡಿಕೆ ಮತ್ತು ನ್ಯಾಯಸಮ್ಮತ ಕೂಡ ಆದರೆ ಸಾಮನ್ಯ ಮನುಷ್ಯನಿಗೆ ಆ ಅರ್ಹತೆಯಾಕಿಲ್ಲವೆಂಬುದು ನನ್ನ ಪ್ರಶ್ನೆ? ಅದಕೊಂದು ಚಿಕ್ಕ ಮತ್ತು ನೇರ ಪ್ರಯತ್ನ ಮಾಡುತ್ತಿದ್ದೆನೆ. ಇಲ್ಲಿ ನನ್ನನ್ನು ವಿಭ್ರಂಜಿಸುವ ಆಸೆಯೆಂದು ಬಂದಿಲ್ಲ ನನಗೆ ನನ್ನ ಜೀವನದಲ್ಲಿ ಇದುವರೆಗೆ ನಡೆದ ಆಂತರಿಕ ಸಂಘರ್ಷ, ಅರ್ಥವಿಲ್ಲದ ತಪ್ಪು, ಆತುರಪಟ್ಟ ಕ್ಷಣಗಳು, ಅದಕ್ಕೆಪಟ್ಟ ಪಶ್ಚಾತ್ತಾಪ ಪಡುತ್ತಿರುವ ವ್ಯತೆ ನನ್ನೊಳಗೆ ಅಡಗಿರುವ ಧೂರ್ತನನ್ನು ಹೊರಗೆಡವಲು ಮಾಡುತ್ತಿರುವ ಪ್ರಯತ್ನಗಳು ಮತ್ತು ಈವರೆಗೆ ಮಾಡಿದ ತಪ್ಪಿಗೆ ತೆತ್ತ ದಂಡವನ್ನು ತೆರೆದಿಡುವ ಪ್ರಯತ್ನ ಮಾಡುತಿದ್ದೇನೆ. ನನ್ನ ಈ ಚಿಕ್ಕ ಜೀವನದಲ್ಲಿ ಬಂದು ಹೋದ ಎಲ್ಲ ಪಾತ್ರಗಳನ್ನು ನೆನಪಿಸಿಕೊಳ್ಳುವ ಪ್ರಾಮಾನಿಕ ಪ್ರಯತ್ನ ಇದಾಗಿದೆ. ನನಗೆ ಶತ್ರುವೆಂಬುವುರಾರು ಇಲ್ಲವೆಂಬುದು ನನ್ನ ನಂಬಿಕೆ ಇದ್ದರು ಆ ಕ್ಷಣದ ಮುನಿಸೆಂದು ಭಾವಿಸಿದ್ದೇನೆ ಹೊರತು ಶತ್ರುತ್ವವೆಂದಲ್ಲ.

ಅಂದೊಂದು ದಿನ ೨೫ ವರುಶಗಳ ಕೆಳಗೆ, ನನ್ನಜ್ಜಿ ಹೇಳಿದ ಕಥೆಯಿದು, ಅದು ೧೯೮೩ ನೇ ಇಸವಿ, ಎಪ್ರಿಲ್ ತಿಂಗಳ ೧೮ನೇ ತಾರೀಖು ಸೋಮವಾರ. ಬ್ರಹ್ಮನೆಂಬ ಹಣೆಬರಹ ಬರೆಯುವ ಅಧಿಕಾರಿ ಬಾನುವಾರ ರಾತ್ರಿ ಕುಡಿದು ಟೈಟ್ ಆಗಿ, ಹ್ಯಾಂಗ್ ಓವರ್ ನಿಂದ ಸ್ವಲ್ಪ ತಡವಾಗಿ ಎದ್ದು ಕುಳಿತ. ಸಮಯ ನೋಡುವಾಗ ೧೨. ೪೫ ಮುಂಜಾನೆಯಿಂದ ಒಂದೆ ಒಂದು ಹಣೆಬರಹ ಗೀಚಿರಲಿಲ್ಲ ಆ ವಾರದ ಟಾರ್ಗೆಟ್ ಮುಟ್ಟಲಿಲ್ಲವೆಂದು ಆತುರದಿಂದ ಒಳಗೆ ಹೋಗಿ, ಪೆನ್ನು ಹುಡುಕಿದ ಸಿಗಲೇ ಇಲ್ಲ. ಕೊನೆಗೆ ಅಲ್ಲೆ ಇದ್ದ ಜಾಲಿ ಮುಳ್ಳು ಹಿಡಿದು ಹೊರಗೆ ಬಂದ. ಭೂಲೋಕದಲ್ಲಿ, ಧನಲಕ್ಷ್ಮಿಯೆಂಬ ಮಹಿಳೆ ಹೆರಿಗೆ ನೋವಿನಿಂದ ಬಳಲುತಿದ್ದದ್ದು ಕೇಳಿಸಿತು. ದಿಡೀರನೆ ಆ ಮಗುವಿನ ಹಣೆ ಹಿಡಿದು ಜಾಲಿ ಮುಳ್ಳಿನಲ್ಲಿ ಗೀಚಿದ, ಆ ಒಂದು ಕ್ಷಣದ ತಪ್ಪಿಗೆ ಇಂದಿಗೂ ಪಶ್ಚತ್ತಾಪ ಪಡುತಿದ್ದಾನೆ ಬ್ರಹ್ಮ. ಆ ಮಗುವಿಗೆ ನವೆಂಬರ್ ತಿಂಗಳಲ್ಲಿ ಹರಿಶ್ ಬಾನುಗೊಂದಿಯೆಂದು ನಾಮಕರಣ ಮಾಡಲಾಯಿತು. ಆ ಮಗು ಆನಂದದಿಂದ ಬೆಳೆದು ಅನ್ನಕ್ಕೆ ದಂಡವಾಗಿ ಭೂಮಿಗೆ ಭಾರವಾಗಿ ೨೫ ವರ್ಷ ತುಂಬಿಸಿ ಕಾಲ ಹರಣ ಮಾಡುತಿದೆ. ಕೆಲವೊಮ್ಮೆ ದುಡುಕಿ ಮಾಡುವ ಕ್ಷಣದ ತಪ್ಪಿಗೆ ಜೀವನವನ್ನೆ ದಂಡವಾಗಿ ಪಣವಿಡಬೇಕಾಗುತದೆ. ಈ ಮೇಲಿನ ಕತೆ ಅದಕ್ಕೋಂದು ನಿದರ್ಶನ. ಅವನ ಕುಡಿತದಿಂದ ಮಾಡಿದ ತಪ್ಪು, ಏನು ತಿಳಿಯದ ಎರಡು ದಂಪತಿಗಳು ಕಣ್ಣೀರಿಡುವಂತೆ ಮಾಡಿದೆ. ಇದು ನನ್ನ ಕತೆ! ಬ್ರಹ್ಮನ ತಪ್ಪಿಗೆ ನಾನು ಹೊಣೆಯಲ್ಲ.











































ಬೆಳ್ಳಿ ಮಹೋತ್ಸವದೆಡೆಗೆ ಸೋಮಾರಿ ಜೀವನ

ಕಾಟಚಾರದ ಮಿತ್ರರೇ, ಕಾಲಹರಣಕ್ಕಾಗಿ ಸ್ನೇಹ ಬೆಳೆಸುವ ಗೆಳೆಯರೆ, ದಯವಿಟ್ಟು ದೂರವಿರಿ, ಹೀಗೆ ಬಂದು ಹಾಗೆ ಹೋಗುವ ಪ್ರಯತ್ನ ಮಾಡುವ ಬಂಧುಗಳೆ ನೀವು ಸ್ವಲ್ಪ ದೂರವೆ ಉಳಿಯಿರಿ, ನನಗೆ ನಿಮ್ಮ ಅವಶ್ಯಕತೆಯಿಲ್ಲ. ಇಲ್ಲಿಗೆ ಬಂದರೆ ತಿರುಗಿ ಹೋಗುವ ಆಸೆ ಬಿಟ್ಟು ಬನ್ನಿ, ಬಂಧಿತರಾಗುವ ಧೈರ್ಯವಿದ್ದರೆ ಬನ್ನಿ, ನಮ್ಮ ನಮ್ಮಲ್ಲೆ ಅಸೂಯೆ, ಆಂತಂಕ, ಅನ್ಯಾಯ, ಭೇಧ ಭಾವ, ಮುನಿಸು, ಕೋಪ, ವಂಚನೆ, ಮೋಸ, ಸುಳ್ಳು, ನೋವು, ಇವುಗಳೆಲ್ಲವ ಮರೆಯಲು ಸಾಧ್ಯವಾದರೆ ಮಾತ್ರ ಇಲ್ಲಿಗೆ ಬನ್ನಿ. ಇಲ್ಲದಿದ್ದಲ್ಲಿ ದಯವಿಟ್ಟು ದೂರ ಹೋಗಿ. ಸಮಯ ಅತ್ಯಮೂಲ್ಯ ಅದನ್ನು ನಿಮ್ಮಿಂದಾಗುವ ನೋವಿಗೆ ಔಷಧಿ ಹಚ್ಚಲು ಬಳಸಲಾಗುವುದಿಲ್ಲ. ಈಗಾಗಲೇ ನೋವು ನೀಡಿರುವ ಮಹಾ ಮಣಿಯರೇ ಮತ್ತೆ ನನ್ನತ್ತ ಸುಳಿಯ ಬೇಡಿ, ಪದೆ ಪದೆ ನಾನು ನಿಮ್ಮನ್ನು "ಹೇಳಿ ಹೋಗು ಕಾರಣ" ಎನ್ನಲಾರೆ. ನೊಂದ ಮನಕ್ಕೆ ಸಾಂತ್ವಾನ ನೀಡಲು ಬರುವ ಗೆಳೆಯರೆ, ಹುಚ್ಚು ಮನಸ್ಸಿನ ಹತ್ತು ಮುಖಗಳ ಮೇಲೆ ಚಿಂತಿಸಬೇಡಿ, ಇದು ವಿಸ್ಮಯವೇನಲ್ಲ, ಮಿಸ್ಸಿಂಗ್ ಲಿಂಕ್ ಎಂದು ಕೊಳ್ಳಬೇಡಿ, ಬೆಟ್ಟದ ಜಿವ, ಮೂಕಜ್ಜಿಯ ಕನಸುಗಳು ಸದಾ ಪರಿಸರದ ಕತೆ ಹೇಳುತ್ತಿರುತ್ತವೆ, ಪ್ಯಾಪಿಲೋನ್ ನಂತೆ ಓಡುತ್ತಿರುತದೆ, ಬರ್ಮುಡಾ ಟ್ರೈಯಾಂಗಲ್ ಎನಿಸಿದರೂ, ಧರ್ಮಶ್ರೀ ಆಗುವುದೇ ವಿನಃ ತಬ್ಬಲಿಯೂ ನೀನಾದೆ ಮಗನೆ ಎನ್ನುವುದಿಲ್ಲ, ಟ್ರೈನ್ ಟು ಪಾಕಿಸ್ತಾನ್ ಎಂದರೂ ದಿ ಕಂಪನಿ ಆಫ್ ವುಮೆನ್ ಎನ್ನುವುದು ಕಷ್ಟ, ಅಲ್ಲಿ ಯಾವುದೇ ಮನ್ವಂತರವಿಲ್ಲ, ಕರ್ವಾಲೋ ಆಗಬೇಕೆಂಬ ಆಸೆಯಿಲ್ಲ, ನೆನಪಿನ ದೋಣಿಯ ನಾವಿಕನಾಗುವ ಬಯಕೆ ಮೊದಲೆಯಿಲ್ಲ, ಆವರಣವೆನಿಸಿದರು, ನನ್ನ ಪ್ರೀತಿಯ ಹುಡುಗಿಗೆ ಹೊರತು ದೂರ ಸರಿದರು ಎನ್ನುವುದು ನಿರಾಕರಣ,

ಸರಿಯುತಿವೆ ೨೫ ವಸಂತಗಳು ಬದುಕಿದೆ ಎನ್ನಬಹುದೇ ವಿನಃ ಬಾಳಿದೆ ಎನ್ನಲಾಗುವುದಿಲ್ಲ. ನಾಯಿಯ ಮೊಲೆಯಲ್ಲಿ ಹಾಲಿದ್ದರೆ ದೇವರಿಗು ಇಲ್ಲ ದಿಂಡರಿಗು ಇಲ್ಲ ಎನ್ನುವುದೊಂದು ಆಡು ಮಾತು ಅನ್ವಯಿಸುತದೆ ನನ್ನ ೨೫ ವರುಷದ ಅನ್ನ ವ್ಯಯಕ್ಕೆ, ಅದ್ ಹೇಗೆ ತಡೆದರೋ ನನ್ನ ಈ ಪಾಪಿ ಕಾಟವ ನನ್ನ ತಂದೆ ತಾಯಿಗಳು ಹುಟ್ಟಿಸಿದೆವೆಂಬ ಮಮಕಾರ, ಎಂದೂ ಏನೂ ಅನ್ನಲಿಲ್ಲ, ಅಜ್ಜಿ ತಾತ, ಚಿಕ್ಕಮ್ಮ ಚಿಕ್ಕಪ್ಪ, ಮಾವಂದಿರು, ದೊಡ್ಡಪ್ಪ ದೊಡ್ಡಮ್ಮ, ೧೭ ಜನ ಅಜ್ಜಿಯರು,ನನ್ನ ಪ್ರೀತಿಯ ಅಕ್ಕ, ನನ್ನ ನೆಚ್ಚಿನ ಭಾವ ಮತ್ತು ನನ್ನ ಜಿವವೇ ಅಂದುಕೊಂಡಿರುವ ನನ್ನ ಶ್ರೇಯ, ಯಾರೂ ನನ್ನನ್ನು ದೂರಲಿಲ್ಲ, ಬೈಯಲಿಲ್ಲ ಯಾಕೆಂಬುದು ತಿಳಿಯಲೇ ಇಲ್ಲ, ವಾರಕ್ಕೊಮ್ಮೆ ಅಜ್ಜಿಮನೆ, ತಿಂಗಳಿಗೊಮ್ಮೆ ಚಿಕ್ಕಮ್ಮನ ಮನೆ, ಆಗ್ಗಾಗ್ಗೆ ನೆಂಟರ ಮನೆಗಳು ನನ್ನ ಬಾಲ್ಯ ಅತಿ ವೇಗದಿಂದ ಓಡಿಸಿಬಿಟ್ಟಿರಿ ನೀವುಗಳು, ನನ್ನ ಮುದ್ದಿನ ಮಾತುಗಳನ್ನು ಹೊಗಳಿ ನನ್ನನ್ನು ಹಾಳು ಮಾಡಿದಿರಿ, ನನಗೆ ನಿಮ್ಮ ಮೇಲೆ ಶಾಶ್ವತ ಪ್ರೀತಿ ಉಳಿಯುವ ಹಾಗೆ ಮಾಡಿದ ನನ್ನ ಬಂದುಗಳೇ ನನ್ನ ೨೫ ವರುಶದ ಅರ್ಥಪೂರ್ಣ ಬದುಕಿಗೆ ನಾಂದಿ ಹಾಡಿದ ನಿಮಗೆ ನಾನು ಸದ ಋಣಿಯಾಗಿರುತ್ತೇನೆ.

ಪಾಪಿ ಸ್ನೇಹಿತರು ಯಾರು ನೊಂದು ದೂರ ಹೋಗಳೇ ಇಲ್ಲ, ಅನುಭವಿಸಿದರು, ಆನಂದಿಸಿದರು, ಮಕ್ಕಳಾಟವಾ ಗೆಳೆಯರೆ ಅದು ನೆನಪಿಸಿಕೊಳ್ಳಿ ನಮ್ಮೂರ ನದಿ ದಂಡೆಯಲ್ಲಿ ಅಲೆದಿದ್ದು, ಮರಕೋತಿ ಆಟವೆಂದು ನಿಮ್ಮ ಗೋಳು ಉಯ್ದದ್ದು, ಸೈಕಲ್ ಕಲಿಯುವಾಗ ನಿಮ್ಮನ್ನು ಬೀಳಿಸಿದ್ದು, ಮನೆಗೆ ಚಾಡಿ ಹೇಳಿ ಬೈಸಿದ್ದು, ಮಾಷ್ಟರ್ ಮುಂದೆ ನಾನೇ ಬುದ್ದಿವಂತ ಅಂತ ಮೊದಲು ಬಂದು ಹೊಡೆಸಿದ್ದು, ರೇಗಿಸುವುದು ನಿಮ್ಮ ಸಹವಾಸದಿಂದ ಬಂತೋ ಏನೋ ಗೊತ್ತಿಲ್ಲ ಅಂದು ನೀವು ಹಾಕಿದ ಕಣ್ಣೀರು, ಮುನಿಸು ನನಗೆ ಉತ್ತೇಜನ ನೀಡಿ ಅದನ್ನು ಮುಂದುವರೆಸುವಂತೆ ಮಾಡಿತು. ಇಂದಿಗೂ ನಾನು ಎಲ್ಲರನ್ನು ರೇಗಿಸುವುದು, ಕಾಡುವುದು ನಂತರ ಕ್ಷಮೆ ಬೇಡುವುದು ಮಾಮೂಲಿಯಾಗಿದೆ. ಎಲ್ಲ ಆಟೋಟಗಳಲ್ಲಿ ಬಹುಮಾನ ದೋಚಿ ನಿಮಗೆ ಬೇಸರ ತಂದಿದ್ದು, ನಿಮ್ಮನ್ನು ರೇಗಿಸಿಯೇ ನನ್ನ ೧೫ ವರುಷ ಕಳೆದೆ ಆದರೂ ನಿಮಗೆ ನನ್ನ ಮೇಲೆ ಕೋಪ ಬರಲಿಲ್ಲ
ಶತ್ರುಗಳಾಗಲಿಲ್ಲ ಯಾಕೆ? ನಿಮಗಿದೋ ವಂದನೆಗಳು ನನ್ನ ಬಾಲ್ಯದ ಮಿತ್ರರೇ

ಮೂರು ವರುಷ ಹೈಸ್ಕೂಲ್ ಎಂಬ ಸ್ವರ್ಗದ ಅಧಿಪತಿಗಳೇ ನನ್ನ ಪ್ರಿಯ ಮಿತ್ರರೇ, ನಿಮ್ಮ ರೇಗಿಸದ ದಿನವ ನೋಡಲೇ ಇಲ್ಲ ಆ ಮೂರು ವರುಷಗಳಲ್ಲಿ, ಕಾಡಿದೆ, ಗೋಳಾಡಿಸಿದೆ, ನಿಮ್ಮ ಸೈಕಲ್ ಚಕ್ರದ ಗಾಳಿ ಬಿಟ್ಟೆ, ಕನ್ನಡಿ ಒಡೆದೆ, ನಿಮ್ಮ ಶೂ ಒಳಗೆ ಚಿವಿಂಗ್ ಗಮ್ ಇಟ್ಟೆ, ಆಟ ಆಡುವಾಗ ಬ್ಯಾಟ್ ಬಾಲ್ ಬಚ್ಚಿಟ್ಟೆ, ಸರ್ ಎಂಬ ದೂತರಿಗೆ ಚಾಡಿ ಹೇಳಿ ಸಮಯಕ್ಕೆ ತಕ್ಕ ಪ್ರಾಸ್ತಿ ಮಾಡಿಸಿದೆ ಟೂರ್ ಎಂಬ ವಿಲಾಸ ಪಯಣದಲ್ಲಿ ಕುಣಿದ ನೆನಪಿದೆಯಾ ನಿಮಗೆ, ಕೋಲುಮಂಡೆ ಜಂಗಮ ನೆನೆದು ಕುಣಿದು ಕುಪ್ಪಳಿಸಿ ಕೊನೆಗೆ ಕುಡಿದು ಬಿಟ್ಟೆ, ಕುಡಿದು ಬೈದುಬಿಟ್ಟೆ, ಆದರೂ ಕೋಪಿಸದೆ ಇನ್ನೂ ಗೆಳೆಯಾರಾಗೆ ಉಳಿದಿರುವ ನನ್ನ ರಕ್ತನಾಳಾಗಳೇ ನಿಮಗಿದೋ ವಂದನೆ,

ಯೌವನದ ಹೊಳೆಗೆ ಕಾಲಿಟ್ಟ ನನ್ನನ್ನು ಮುಳುಗಿಸಿ ಪಿ.ಯು.ಸಿ ಎಂಬೆರಡು ವರ್ಷದ ಕೋರ್ಸನ್ನು ಮೂರು ವರ್ಷ ಓದಲು ಸಹಾಯ ಮಾಡಿದ ನನ್ನ ಕುಡುಕು ಮಿತ್ರರೇ,ಎರಡು ವರುಷದಲ್ಲಿ ನಿಮ್ಮ ಜೊತೆ ಕಳೆದ ದಿನಗಳು, ಅವು ದಿನಗಳಲ್ಲ ಸ್ವರ್ಗದ ಕ್ಷಣಗಳು, ಸ್ವರ್ಗವೆಂಬುದು ಬರಿ ಕಲ್ಪನೆಯಷ್ಟೆ ಅದು ದೊರೆಯುವುದೆಂದರೆ ನಮ್ಮ ಪಿ ಯು ಸಿ ಜೀವನದಲ್ಲಿ ಮಾತ್ರ. ಅಂತಹ ಸ್ವರ್ಗದಲ್ಲಿ ಸಹಚರರಾಗಿದ್ದ ನಿಮಗೆ ನನ್ನ ಅನಂತ ಧನ್ಯವಾದಗಳು. ಕುಡಿದು ಕುಣಿದಾಡಿದ ಸಂಜೆಗಳು,ಹ್ಯಾಂಗ್ ಓವರ್ ಆಗಿ ಬೀದಿಲಿ ಬಿದ್ದದ್ದು, ಯಾವುದೇ ಕುಡುಕರಿಗು ಒಪನ್ ಚಾಲೆಂಜ್ ಹಾಕುವಷ್ಟು ಮೇಲೆರಿದ್ದು, ಬೀದಿ ಟ್ಯೂಬ್ ಲೈಟ್ ಹೊಡೆದಿದ್ದು, ಸಿನೆಮಾಗೆಂದು ೩೦-೪೦ ಕಿ.ಮೀವರೆಗೂ ಓಡಾಡಿದ ದಿನಗಳು, ವೀರಭೂಮಿ ಬೆಟ್ಟ ಏರಿದ್ದು, ಬೆಟ್ಟದಪುರ ಬೆಟ್ಟಕ್ಕೆ ಹೋಗಿದ್ದು, ನಿಸರ್ಗಧಾಮದಲ್ಲಿ ಓದುವ ನೆಪದಲ್ಲಿ ಸೀನು ನೋಡಿದ್ದು, ಸಿಗರೇಟ್ ಎಂಬ ಮಹಾ ಮಾಯೆಗೆ ಅಲೆದದ್ದು, ಲೇಜರ್ ಲೈಟ್ ಬಿಟ್ಟಿದ್ದು, ಹುಡುಗಿಯರ ರೆಕಾರ್ಡ್ ಬಚ್ಚಿಟ್ಟಿದ್ದು, ಟ್ಯೂಷನ್ ಫೀ ಕೊಡದೆ ಮುಂಡಾಯಿಸಿದ್ದು, ಒಂದಾ ಎರೆಡಾ ? ಒಳ್ಳೆಯದೆಂಬುದರ ಸುಳಿವೆ ಆಗುತ್ತಿರಲಿಲ್ಲ ನಮಗೆ, ವಾಕರಿಕೆ ಬರುತ್ತಿತ್ತು, ಆದರೂ ಬಸ್ ಸ್ಟ್ಯಾಂಡ್ ನಲ್ಲಿ ನನ್ನ ಜೊತೆ ನಿಂತು ಲೈನ್ ಹೊಡೆಯಲು ಕುಮ್ಮಕ್ಕು ನೀಡಿ ಅವಳು ನನಗೆ ಸಿಗದೆ ಹೋದಾಗ ಹೊಟ್ಟೆ ಹುಣ್ಣಾಗುವಷ್ಟು ನಕ್ಕು, ಹಾಲು ಕುಡಿದದ್ದು ಮರೆಯಾಳಗದ ನೆನಪುಗಳು ನನ್ನೊಡನಾಡಿಗಳೇ, ನಿಮಗಿದೋ ಫುಲ್ ಬಾಟಲ್ ವಂದನೆಗಳು,

ನನ್ನನ್ನು ನಾನೇ ಬೆರಗುಗೊಳಿಸುವಂತೆ ಮಾಡಿದ ಯುವರಾಜ ಕಾಲೇಜು ಮತ್ತು ಮಹರಾಜ ಕಾಲೇಜು ಕುಡುಕು ಮಿತ್ರರೇ, ಕುಡಿದು ಕುಣಿದು, ಒಡಾಡಿ, ತೆರೆಕಂಡ ಸಿನೆಮಾಗಳನ್ನೆಲ್ಲಾ ನೋಡಿ, ಜಾತಿಯತೆಯ ಪರಮಾವಧಿ ತಲುಪಿಸಿ, ಮತಿಯತೆಯನ್ನು ಮೆರೆಸಿ, ಕೆಟ್ಟದ್ದನ್ನು ಅತಿರೇಕಕ್ಕೇರಿಸಿ, ದಿಡೀರನೇ ಓದಿಗೆ ಹಚ್ಚಿ, ಜವಬ್ದಾರಿಯ ಅರಿವು ಮೂಡಿಸಿ, ಚಿಂತನೆಗೆ ತಲೆ ಹಚ್ಚಿಸಿ, ಚರ್ಚೆಗೆ ಕೂಡಿಸಿ, ನನ್ನ ಕಥೆ ಕವನಗಳಿಗೆ ಬೆಲೆ ಕೊಟ್ಟು, ಮಾನವೀಯತೆಯ ಮೌಲ್ಯಗಳಿಗೆ ಬೆಲೆ ಕೊಟ್ಟ ನನ್ನ ಪ್ರಿಯ ಮಿತ್ರರೆ, ಕೆಸರಿನಲ್ಲಿದ್ದರೂ ಕಮಲದಂತಾಗಿ ಉಳಿದ ನನ್ನ ಬಂದುಗಳೇ, ನನ್ನ ಜೀವಮಾನದಲ್ಲಿ ಮರೆಯಳಾಗದ ತಿರುವು ಕೊಟ್ಟ ಮಹರಾಜ ಕಾಲೇಜು ಹಾಸ್ಟೆಲ್ ನಿನಗಿದೋ ನನ್ನ ವಂದನೆಗಳು.

ಜೀವಮಾನದ ಮತ್ತೊಂದು ಘಟ್ಟವೇ ನನ್ನ ಬೆಂಗಳೂರು ಜೀವನ, ವಿಧ್ಯಾರ್ಥಿ ಜೀವನದ ಸಂಗಾತಿಗಳೇ ನಿಮ್ಮ ಸಹಾಯಕ್ಕೆ, ಪ್ರೀತಿಗೆ, ನಿಮ್ಮ ಸಹಕಾರಕ್ಕೆ ವಂದನೆ ತಿಳಿಸಲು ಪದಗಳು ಸಿಗುತ್ತಿಲ್ಲ. ರಾತ್ರಿ ಈಡಿ ನಡೆದ ಚರ್ಚೆಗಳು, ಕಾಲೇಜಿನಲ್ಲಿ ನಡೆದ ರಾಜಕೀಯ ದೊಂಬರಾಟ, ಯುನಿವರ್ಸಿಟಿಯ ಕೊಳಕು ವ್ಯವಸ್ಥೆ, ಕಲಿಸಿದ ಪಾಠ ಮರೆಯಲಾರದ್ದು, ಹಾಸ್ಟೆಲ್ ಜೀವನ, ಸವಿ ಸವಿ ನೆನಪಿನ ಸುಳಿಯಲ್ಲಿ ಸದಾ ನಗು ತರಿಸುವುದೇ ಆಗಿದೆ.

ವೃತ್ತಿ ಜೀವನದಲ್ಲಿ ಕಾಲಿಟ್ಟ ಕ್ಷಣದಿಂದ ಕಾಯಕವೇ ಕೈಲಾಸವೆಂದು ಮಾಡಿದ ನನ್ನ ವೃತ್ತಿ ಧರ್ಮವೇ ನಿನಗಿದೋ ವಂದನೆ. ನನಗೆ ಸಾಧನೆಯ ಹುಚ್ಚು ಹಚ್ಚಿಸಿದ ಮಹಾನ್ ಪುರುಷರೇ ನಿಮಗಿದೋ ವಂದನೆ. ನಿಸರ್ಗದ ಮೇಲೆ ಪ್ರೀತಿ ಬೆಳೆಯುವಂತೆ ಮಾಡಿ ತಿಂಗಳಿಗೊಮ್ಮೆಯಾದರು ಬರುವಂತೆ ಮಾಡಿದ ಪ್ರಕೃತಿಯೆ ನಿನಗೆ ನಾ ಚಿರಋಣಿ. ನನ್ನ ಜೊತೆ ಕೆಲಸ ಮಾಡಿ ರೆಗಿಸಿಕೊಂಡ ನನ್ನ ಮಿತ್ರರೇ ನಿಮಗೆ ನನ್ನ ವಂದನೆಗಳು. ಫೋನ್, ಇಂಟರ್ನೆಟ್, ಆರ್ಕುಟ್ ಕಡೆಯಿಂದ ಸ್ನೇಹಿತರಾಗಿ ಹತ್ತಿರವಾಗಿರುವ ಗೆಳೆಯರೇ ನಿಮಗೆ ನನ್ನ ವಂದನೆಗಳು.

ಸೌಂದರ್ಯದ ಬಗ್ಗೆ ನನಗೆ ಹುಚ್ಚು ಹಚ್ಚಿಸಿ ಅವರ ಕೋಮಲತೆಯಿಂದ, ನನ್ನನ್ನು ಕೆರಳಿಸಿದ ಸೌಂದರ್ಯವತಿಯರೇ ನಿಮಗೆ ನನ್ನ ಹಾರೈಕೆಗಳು, ಬೊಗಸೆ ಕಣ್ಣುಗಳ ಚೆಲುವೆ, ನಿನ್ನ ಹಿಂದೆ ಬಂದು ಕಾಡಿದೆನೆಂದು, ನನ್ನ ಪಿ ಯು ಸಿ ಜೀವನವನ್ನು ಸರ್ವನಾಶ ಮಾಡಿದ ಮೋಹಕ ಚೆಲುವೆ ನಿನಗಿದೋ ವಂದನೆ, ದಾರಿಯಲ್ಲಿ ಹೋಗುವಾಗ ಬರುವಾಗ ನಿಮ್ಮ ಸೌಂದರ್ಯದಿಂದ ನನ್ನ ಹೃದಯ ಮೀಟಿದ ನಾರಿಮಣಿಯರೇ, ನಿಮ್ಮ ಸೌಂದರ್ಯಕ್ಕೆ ನಾನು ಸದಾ ಸೇವಕ, ರಾತ್ರಿ ಕನಸಿನಲ್ಲಿ ಕಾಡುವುದ ಬಿಡಿ ನೀವು ಬೇಗ, ನನ್ನ ಹೃದಯ ಗೆಳತಿ ನಾಡಿಗಳ ಮಿಡಿತವನರಿತವಳೆ, ಅವಳಿಗೆ ಸಿಕ್ಕಿಬಿದ್ದರೆ ಅವಳ ಕೋಪಕ್ಕೆ ಬಲಿಯಾದರೆ ಅಂದಿಗೆ ಮುಗಿಯಿತು ನನ್ನ ಬಾಳು.

ನನ್ನ ಕಷ್ಟಕಾಲದಲ್ಲಿ ನನ್ನ ಕೈ ಹಿಡಿದು ಸಾಲ ನೀಡಿ ಬದುಕಿಸಿದ ನನ್ನ ಗೆಳೆಯ ಗೆಳತಿಯರೆ, ಮಿತ್ರರೆ, ನಿಮಗೆ ನನ್ನ ವಂದನೆಗಳು. ನಿಮ್ಮ ಸಹಾಯ ಸಹಕಾರಗಳು ಹೀಗೆ ಮುಂದುವರೆಯಲಿ.

***

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...