18 ಫೆಬ್ರವರಿ 2018

ಆತ್ಮೀಯ ಫೇಸ್‍ಬುಕ್ ಸ್ನೇಹಿತರಿಗೊಂದು ಮನವಿ!!!


ನಾನು ಇದನ್ನು ಬರೆಯುವ ಅನಿವಾರ್ಯತೆ ಬರುತ್ತದೆಯೆಂದು ನಿರೀಕ್ಷಿಸಿದ್ದೆ. ಅದರಂತೆ ಈ ದಿನ ಬಂದಿದೆ. ನಾನು ಹಾಕುವ ಪೋಸ್ಟ್‍ಗಳನ್ನು ನನ್ನ ಅನೇಕ ಸ್ನೇಹಿತರು ವೈಯಕ್ತಿಕವಾಗಿ ತೆಗೆದುಕೊಂಡಿರುವುದು ಗಮನಕ್ಕೆ ಬಂದಿದೆ. ನನ್ನ ಪೋಸ್ಟ್‍ಗಳು ಯಾರನ್ನು ವೈಯಕ್ತಿಕವಾಗಿ ಗುರಿಯಿಟ್ಟು ಹೇಳುವಂತವುಗಳಲ್ಲ. ಅವೆಲ್ಲವೂ ಜನೆರಲ್ ಪೋಸ್ಟ್‍ಗಳು. 
ನನಗೆ ಬಹುಷಃ ಎಲ್ಲಾ ಇಲಾಖೆಯಲ್ಲಿಯೂ, ಎಲ್ಲಾ ವೃತ್ತಿಯಲ್ಲಿರುವ ಆತ್ಮೀಯ ಗೆಳೆಯರಿದ್ದಾರೆ. ನಾನು ಎಲ್ಲರೊಂದಿಗೂ ಮುಕ್ತವಾಗಿ ಚರ್ಚಿಸುತ್ತೇನೆ. ಒಬ್ಬ ಆಟೋ ಡ್ರೈವರಿನಿಂದ ಹಿಡಿದು ರೈಲಿನಲ್ಲಿ ಪ್ರಯಾಣಿಸುವಾಗ ಸಿಗುವ ಟಿಟಿಯ ತನಕ ಅವರ ವೃತ್ತಿಯ ಕುರಿತು, ಅವರ ಜೀವನ ಶೈಲಿಯ ಕುರಿತು ಅರಿಯಲು ಯತ್ನಿಸುತ್ತೇನೆ. ಇದು ನನ್ನ ವೃತ್ತಿಯೋ ಪವೃತ್ತಿಯೋ ನನಗೆ ತಿಳಿಯದು. 


ನಾನು ಸರ್ಕಾರಿ ನೌಕರರ ಕುರಿತು ಪೋಸ್ಟ್ ಹಾಕಿದಾಗ ಕೆಲವರು ನಿಮ್ಮ ಸ್ನೇಹಿತರು ಇದ್ದಾರೆ ಅವರೆಲ್ಲರೂ ಹಾಗೇನಾ? ಎಂದರು. ಆತ್ಮೀಯರೇ, ನನ್ನ ಎಲ್ಲಾ ಸ್ನೇಹಿತರಿಗೂ ಅವರ ವೃತ್ತಿಯಲ್ಲಿಯೋ ಅಥವಾ ಜೀವನದಲ್ಲಿಯೋ ತಪ್ಪು ಮಾಡುತ್ತಿದ್ದಾರೆಂದು ತಿಳಿದರೆ ನಾನೇ ನೇರವಾಗಿ ಅವರಿಗೆ ಹೇಳುತ್ತೇನೆ. ಆ ಸಲುಗೆಯನ್ನು ಅವರೆಲ್ಲರೂ ನನಗೆ ನೀಡಿದ್ದಾರೆ. ಅದನ್ನು ಫೇಸ್‍ಬುಕ್ಕಿನಲ್ಲಿ ಹಾಕುವ ಅವಶ್ಯಕತೆಯಿಲ್ಲ. ಅದೇ ರೀತಿ ನಾನು ತಪ್ಪು ಮಾಡಿದಾಗಲೂ ಅವರು ನನ್ನೊಂದಿಗೆ ನೇರವಾಗಿ ಮಾತನಾಡಿ ಬೈದು ತಿದ್ದುವುದು ಇದೆ. ಫೇಸ್‍ಬುಕ್ಕಿನಲ್ಲಿ ಹಾಕುವ ಪೋಸ್ಟ್‍ಗಳು ಹೆಚ್ಚಿನ ಜನರಿಗೆ ತಲುಪಲಿ ಮತ್ತು ಅವರ ಆಲೋಚನೆಗಳೇನು ಎನ್ನುವುದನ್ನು ತಿಳಿಯುವುದು ನನ್ನ ಮೊದಲ ಉದ್ದೇಶ. ಎರಡನೆಯದಾಗಿ, ನಾನು ಸುತ್ತಾಡುವಾಗ ಜನರೊಂದಿಗೆ ಬೆರೆಯುವಾಗ ನನಗೆ ಬರುವ ವಿಷಯಗಳನ್ನು ನಾನು ಹಾಕುವುದು. ಇದೆಲ್ಲವೂ ನನ್ನ ತಲೆಯೊಳಗಿನಿಂದ ಬರುವುದಿಲ್ಲ, ಯಾರೋ ಎಲ್ಲಿಯೋ ಹೇಳಿದ್ದು, ಚರ್ಚಿಸಿದ್ದು, ತಿಳಿಸಿದ್ದು ಎಲ್ಲವನ್ನು ಒಟುಗೂಡಿಸಿ ಹಾಕುತ್ತೇನೆ.

ಆದ್ದರಿಂದ ನಾನು ಹಾಕುವ ಯಾವುದೇ ಪೋಸ್ಟ್‍ಗಳು ನಿಮಗ್ಯಾರಿಗೂ ನೇರವಾಗಿ ಸಂಬಂಧಿಸಿದಲ್ಲ. ಮತ್ತು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದೆನ್ನುವುದು ನನ್ನ ಮನವಿ. ಇದನ್ನು ಇನ್ನೂ ಸ್ವಲ್ಪ ವಿವರಿಸುತ್ತೇನೆ. 

ಉದಾಹರಣೆಗೆ: ಇಂದಿನ ಶಿಕ್ಷಕರು ಅದರಲ್ಲಿಯೂ ಸರ್ಕಾರಿ ಶಾಲಾ ಶಿಕ್ಷಕರು ಸರಿಯಿಲ್ಲವೆಂದು ಹಾಕಿದರೆ ಅದು ಸರಿಯಿಲ್ಲದ ಶಿಕ್ಷಕರಿಗೆ ಹೊರತು ನನ್ನ ಸ್ನೇಹಿತರಿಗೆ ಹೇಗೆ ಆಗುತ್ತದೆ? ನನ್ನ ಸ್ನೇಹಿತರಿಗೆ ನಾನೇ ನೇರವಾಗಿ ಹೇಳಬಹುದಲ್ಲವೇ? ಸರ್ಕಾರದ ಸಂಬಳ ಹೆಚ್ಚಳದ ಬದಲು ಉತ್ತಮ ಶಿಕ್ಷಣ, ಆರೋಗ್ಯ ಮತ್ತು ದಿನ ನಿತ್ಯ ಬಳಕೆ ವಸ್ತುಗಳ ಬೆಲೆಯನ್ನು ಅಗ್ಗವಾಗಿಸಿ ಎಂದು ಕೇಳಿ ಎಂದರೆ ಅದು ನನ್ನ ಸ್ನೇಹಿತರಿಗೆ ಎಂದು ಅರ್ಥವೇ?

ಪೋಲಿಸ್ ಇಲಾಖೆಯಲ್ಲಿ ಹಣ ನೀಡದೆ ಕೆಲಸವಾಗುವುದಿಲ್ಲವೆಂದು ಪೋಸ್ಟ್ ಹಾಕಿದರೆ ಅದು ನನ್ನ ಸ್ನೇಹಿತನಿಗೆ ಹಾಕಿದ ಪೋಸ್ಟ್ ಹೇಗಾಗುತ್ತದೆ? ನನ್ನ ಸ್ನೇಹಿತನಿಗೆ ನಾನೇ ನೇರವಾಗಿ ಹೇಳಬಹುದು. ನಮ್ಮೆಲ್ಲರ ಪೋಸ್ಟ್‍ಗಳು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮಾತ್ರ. ಎಲ್ಲರೂ ನಿಷ್ಠಾವಂತರಲ್ಲ, ಎಲ್ಲರೂ ಪ್ರಾಮಾಣಿಕರಲ್ಲ, ಆದ್ದರಿಂದ ಒಳ್ಳೆಯವರ ನೆರಳಲ್ಲಿ ಸೋಮಾರಿಗಳು ಹೆಚ್ಚಾಗುತ್ತಿದ್ದಾರೆ. ಪ್ರಾಮಾಣಿಕ ನೌಕರರು ಕಷ್ಟಪಟ್ಟು ಕೆಲಸ ಮಾಡಿದರೆ, ಸೋಮಾರಿಗಳು ಕಛೇರಿ ಬಿಟ್ಟು ಬೇರೆಲ್ಲಾ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಅದು ನಿಮಗೂ ಗೊತ್ತು ನಮಗೂ ಗೊತ್ತು. ಯಾರನ್ನೂ ವಹಿಸಿಕೊಳ್ಳುವುದು ಬೇಡ. ಮಾಧ್ಯಮದವರನ್ನು ಬೈಯ್ಯುತ್ತೇನೆ ನನ್ನ ಅನೇಕ ಕಾಸ್‍ಮೇಟ್‍ಗಳು ಎಲ್ಲಾ ಟಿವಿ ಚಾನೆಲ್‍ಗಳಲ್ಲಿಯೂ ಇದ್ದಾರೆ. ನಮ್ಮ ಜನರು ಸರಿಯಿಲ್ಲ ರೀ, ದುಡ್ಡು ತಗೋಂಡು ಓಟ್ ಹಾಕ್ತಾರೆ ಎಂದರೆ ಎಲ್ಲರೂ ದುಡ್ಡು ತೆಗೆದುಕೊಳ್ಳುತ್ತಾರೆಂದು ಅರ್ಥವೇ? ರಾಜಕೀಯ ಸಮಾವೇಶಕ್ಕೆ ದುಡ್ಡು ತಗೊಂಡು ಬರುತ್ತಾರೆಂದರೆ ಎಲ್ಲರೂ ಹಾಗೆ ಬರುತ್ತಾರೆಂದು ಅರ್ಥವೇ? ಇವೆಲ್ಲವೂ ಜನೆರಲ್ ಸ್ಟೇಟ್‍ಮೆಂಟ್‍ಗಳು ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. 

ಯಾವುದೇ ವರ್ಗದಲ್ಲಿ, ಯಾವುದೇ ವೃತ್ತಿಯಲ್ಲಿ, ಯಾವುದೇ ಊರಿನಲ್ಲಿ ಭ್ರಷ್ಟರಿದ್ದಾರೆನ್ನುವುದಾರೆ ಅವರನ್ನು ನಿಂದಿಸೋಣ. ಯಾರೇ ಜಾತಿ ಧರ್ಮ ಭಾಷೆಯ ಹೆಸರಲ್ಲಿ ದಬ್ಬಾಳಿಕೆ ಮಾಡಲು ಬಂದರೆ ಅವರನ್ನು ಓಡಿಸೋಣ. ಸಂಘ ಮತ್ತು ಸಂಘಟನೆಯ ಹೆಸರಲ್ಲಿ ಕಾರ್ಮಿಕರನ್ನು ನೌಕರರನ್ನು ದಾರಿ ತಪ್ಪಿಸಿದರೆ ಅವರನ್ನು ಓಡಿಸೋಣ. ಎಲ್ಲಾ ವರ್ಗದವರು, ಎಲ್ಲಾ ಕಾರ್ಮಿಕರು, ಎಲ್ಲಾ ವೃತ್ತಿಯವರು ಚೆನ್ನಾಗಿದ್ದರೆ ಮಾತ್ರ ಉತ್ತಮ ಸಮಾಜ. ನಾವು ಮಾತ್ರ, ನಮಗೆ ಮಾತ್ರವೆಂದರೆ ಸಮಾಜ ಬೆಳೆಯುವುದಿಲ್ಲ. ಉಳ್ಳವರು ಇಲ್ಲದವರನ್ನು ಜೊತೆಗೊಯ್ಯುವ ಮನೋಭಾವ ಬರಲಿ. ಎಷ್ಟು ದುಡಿಯುತ್ತೇವೆ ಎನ್ನುವುದಕ್ಕಿಂತ ಎಷ್ಟು ಉಳಿಸುತ್ತೇವೆಂಬುದು ಮುಖ್ಯ. 
To be cont....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...